ಬಿಡದಿ ಟೌನ್‌ಶಿಪ್‌ ವಿವಾದ: ಕಾನೂನಾತ್ಮಕ ಹೋರಾಟ ಮಾಡ್ತೇವೆ; ಹೆಚ್‌ಡಿ ಕುಮಾರಸ್ವಾಮಿ

ನೆಲಮಂಗಲ, ಮೇ 16: ಬಿಡದಿ ಟೌನ್‌ಶಿಪ್ ವಿವಾದದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ನಾವು ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ನನ್ನ ಕಾಲದಲ್ಲೇ ಟೌನ್‌ಶಿಪ್ ಮಾಡಬೇಕೆಂದು ಇದ್ದಿದ್ದು. ಬೆಂಗಳೂರನ್ನು 5 ಭಾಗವಾಗಿ ಟೌನ್‌ಶಿಪ್ ಮಾಡಲು ಪ್ಲ್ಯಾನ್ ಇತ್ತು. ಆಗ ನಾನು ರೈತರ ಬಳಿಯೂ ಚರ್ಚಿಸಿ ಅವರ ಒಪ್ಪಿಗೆ ಪಡೆದಿದ್ದೆ. ಆದರೆ ಇವರೇ ವಿರೋಧಿಸಿ ಸತ್ಯ ಶೋಧನಾ ಸಮಿತಿ ರಚಿಸಿದ್ದರು. ಈ ಹಿಂದೆ ಏನೇನೋ ಡ್ರಾಮಾ ಮಾಡಿದ್ದರು. ಆ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಭಾರಿ ವ್ಯತ್ಯಾಸವಿದೆ. ಈ ಟೌನ್‌ಶಿಪ್‌ಗೆ ಅಲ್ಲಿನ ರೈತರ ಸಹಮತ ಇಲ್ಲ. ಕೃಷಿಭೂಮಿ ವಶಕ್ಕೆ ಪಡೆದು ಟೌನ್‌ಶಿಪ್ ಮಾಡಲು ಯತ್ನ ನಡೆಯುತ್ತಿದೆ. ಆ ಭಾಗದ ರೈತರು ತೀವ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರಿಗೆ ಗೌರವ ಕೊಡದೇ ಟೌನ್‌ಶಿಪ್‌ ಮಾಡಲು ಯತ್ನ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು, ಕೃಷಿಕರನ್ನ ಭೇಟಿ ಮಾಡದೇ ಕಾನೂನು ಬಾಹಿರ ಚಟುವಟಿಕೆ ಮಾಡಲು ಹೊರಟಿದ್ದಾರೆ. ನಮ್ಮನ್ನ ಬೆಳೆಸಿದ ಜನರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *