ಮತ್ತೊಂದು ತಿರುವು ಪಡೆದ ಪಂಚಮಸಾಲಿ ಗುರುಪೀಠ ಸಂಘರ್ಷ: ಶ್ರೀಗಳಿಗೆ ಭಕ್ತರ ಆನೆಬಲ – Kannada News | Panchamasali Gurupeeth conflict takes another turn: devotees support Vachananda Swamiji

ದಾವಣಗೆರೆ, ಏಪ್ರಿಲ್​ 25: ವಚನಾಂದ ಸ್ವಾಮೀಜಿಯ (Vachananda Swamiji) ಸಂಘರ್ಷ ತೀವ್ರ ಸ್ವರೂಪ ಪಡೆದಿದೆ. ಮಠದಿಂದ ಉಚ್ಚಾಟನೆ ಆದರೂ ಹಠದಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಸ್ವಾಮೀಜಿ ಶಕ್ತಿ ಪ್ರದರ್ಶನಕ್ಕೆ ನಿನ್ನೆ ಹರಿಹರ ಪಂಚಮಸಾಲಿ ಮಠ ವೇದಿಕೆ ಆಗಿತ್ತು. ಸ್ವಾಮೀಜಿಗೆ ಭಕ್ತರ ಬೆಂಬಲ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಟ್ರಸ್ಟಿನವರು, ಇದೀಗ ಲೆಕ್ಕ ನೀಡಲು ಮುಂದಾಗಿದ್ದಾರೆ. ಆದರೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವಿನ ಸಂಘರ್ಷ ಮುಂದುವರೆದಿದೆ.

ಈ ಸಂಘರ್ಷಕ್ಕೆ ಅಸಲಿ ಕಾರಣವೇನು?

ಈ ಸಂಘರ್ಷಕ್ಕೆ ಮೂಲ ಕಾರಣ ಏಪ್ರಿಲ್ 13ರಂದು ನಡೆದ ಆ ಘಟನೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಮಠ. ಒಂದು ಕಡೆ ಲೆಕ್ಕ ಕೊಡಿ ಎಂದು ಭಕ್ತರು ಸಂಘರ್ಷಕ್ಕಿಳಿದಿದ್ದರು. ಇನ್ನೊಂದು ಕಡೆ ಟ್ರಸ್ಟನವರು ಪೊಲೀಸ್ ಭದ್ರತೆಯಲ್ಲಿ ಬಂದು ಸಭೆ ನಡೆಸಿ ಮಠದ ವಚನಾನಂದ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟನೆ ಮಾಡಿದ್ದರು. ಇದೇ ವೇಳೆ ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಸಂಘರ್ಷ ಉಂಟಾಗಿತ್ತು. ಸುಮಾರು 15 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಲೆಕ್ಕ ಕೊಡಿ ಎಂದು ಸ್ವಾಮೀಜಿ ಕಡೆ ಭಕ್ತರು ಆರೋಪಿಸಿದ್ದರು. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠ ಬಿಟ್ಟು ಸ್ವಾಮೀಜಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಭಕ್ತರು ಸ್ವಾಮೀಜಿಯನ್ನ ಬಿಟ್ಟು ಕೊಡಲಿಲ್ಲ. ಹೀಗಾಗಿ ಸ್ವಾಮೀಜಿ ಮಠದಲ್ಲಿಯೇ ಪೂಜೆ ಮಾಡುತ್ತಾ, ಬಂದ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.

ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟಿಗಳು

ಇದೆಲ್ಲದರ ಮಧ್ಯೆ ನಿನ್ನೆ ಸುದ್ದಿಗೋಷ್ಠಿ ಮಾಡಿರುವ ಟ್ರಸ್ಟಿಗಳು, 2008ರಲ್ಲಿ ಮಠ ಆರಂಭವಾಗಿದೆ. ಅಲ್ಲಿಂದ 2026 ವರೆಗಿನ ಲೆಕ್ಕ ಕೊಡುತ್ತೇವೆ ಎಂದು ಹೇಳಿದ್ದಾರೆ. ಟ್ರಸ್ಟಿಗಳ ಈ ಹೇಳಿಕೆ ಸದ್ಯ ಅಚ್ಚರಿಗೆ ಕಾರಣವಾಗಿದೆ. ಆದರೆ ತರಾತುರಿಯಲ್ಲಿ ಲೆಕ್ಕ ಪಡೆಯಲ್ಲ. ಬದಲಿಗೆ ರಾಜ್ಯಾದ್ಯಂತ ಭಕ್ತರನ್ನ ಕರೆಯಿಸಿ ಲೆಕ್ಕಾ ಕೊಡಿ ಎಂಬ ಮಾತುಗಳು ಸ್ವಾಮೀಜಿ ಪರ ಭಕ್ತರಿಂದ ಕೇಳಿ ಬರುತ್ತಿವೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ, ಮಠದ ಟ್ರಸ್ಟ್​​ ನಡುವೆ ಹೊಸ ಸಂಘರ್ಷ: ಡಿಸಿ, ಎಸ್ಪಿಗೆ ದೂರು

ಒಟ್ಟಾರೆ ಸ್ವಾಮೀಜಿ ಹಾಗೂ ಧರ್ಮದರ್ಶಿ ಸಮಿತಿ ನಡುವೆ ಸಂಘರ್ಷ ಮುಂದುವರೆದಿದ್ದು, ಇಬ್ಬರು ಸಮಬಲದ ಹೋರಾಟ ನಡೆಸಿದ್ದಾರೆ. ಲೆಕ್ಕಾ ಕೊಡಿ ಅಂದರೆ ಸ್ವಾಮೀಜಿಯನ್ನೇ ಪೀಠದಿಂದ ಉಚ್ಛಾಟನೆ ಮಾಡಿದ್ದ ಧರ್ಮದರ್ಶಿ ಸಮಿತಿ ಇದೀಗ ರಾಗ ಬದಲಾಯಿಸಿದ್ದು, ಏಪ್ರಿಲ್​ 27ಕ್ಕೆ ಲೆಕ್ಕಾ ಕೊಡಲು ಮುಂದಾಗಿದೆ. ಆದರೆ ಇದನ್ನ ಒಪ್ಪಲು ಸ್ವಾಮೀಜಿ ಪರ ಭಕ್ತರು ಸಿದ್ಧಲಿಲ್ಲ. ರಾಜ್ಯಾದ್ಯಂತ ಎಷ್ಟು ಜನ ಭಕ್ತರು ಹಣ ಕೊಟ್ಟಿದ್ದು, ಅವರ ಪಟ್ಟಿ ಕೊಡಿ. ಮೇಲಾಗಿ ಲೆಕ್ಕ ಕೊಡುವ ಮೊದಲು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಪ್ರಕರಣ ನೀಡಿ ಎಂದು ಪಟ್ಟುಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *