ಮೇ ತಿಂಗಳಿನಲ್ಲಿ ಈ ರಾಶಿಗೆ ಸಾಡೇ ಸಾಥ್ ಕೊನೆಯ ಕಾಲ: ನಿಮ್ಮೆಲ್ಲ ಕಷ್ಟದ ದಿನಗಳು ಇಲ್ಲಿಗೆ ಅಂತ್ಯ – Kannada News | Kumbha Rashi May 2026 Predictions: Sade Sati’s Last Phase and Major Life Changes

ಮೇ 2026ರ ಗ್ರಹಗತಿಗಳ ಆಧಾರದ ಮೇಲೆ ಕುಂಭ ರಾಶಿಯವರಿಗೆ ಈ ತಿಂಗಳ ಭವಿಷ್ಯ ಹಲವು ತಿರುವುಗಳಿಗೆ ಕಾರಣವಾಗಲಿದೆ. ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ ನಕ್ಷತ್ರದವರಿಗೆ ಗ್ರಹಗಳ ಪ್ರಭಾವ ಇರಲಿದೆ. ಸಾಡೆಸಾಥ್ ನ ಕೊನೆಯ ಭಾಗವಾದ ಕಾರಣ ತೊಂದರೆ ಹೆಚ್ಚು ಕಾಣಿಸಲಿದೆ.

​ಶುಭ ದಶೆ :

​ಗುರು ಬಲ :

ಕುಂಭ ರಾಶಿಯವರಿಗೆ ಗುರುವು ಪಂಚಮ ಸ್ಥಾನದಲ್ಲಿದ್ದಾನೆ. ಇದು ಅತ್ಯಂತ ಶುಭಕರ. ಬುದ್ಧಿಶಕ್ತಿ ಚುರುಕಾಗುತ್ತದೆ, ಗೌರವ ವೃದ್ಧಿಯಾಗುತ್ತದೆ. ಸಂತಾನ ಭಾಗ್ಯ ಅಥವಾ ಮಕ್ಕಳಿಂದ ಸುಖದಾಯಕ ವಾರ್ತೆಗಳು ಸಿಗಲಿವೆ.

​ಶುಕ್ರ ಸ್ವಸ್ಥಾನ :

ಶುಕ್ರನು ತನ್ನ ಸ್ವಕ್ಷೇತ್ರವಾದ ವೃಷಭದಲ್ಲಿದ್ದಾನೆ. ಮನೆ, ವಾಹನ ಖರೀದಿ ಅಥವಾ ಮನೆಯ ನವೀಕರಣಕ್ಕೆ ಇದು ಸಕಾಲ. ಕಲೆ, ಹವ್ಯಾಸ ಮತ್ತು ಐಷಾರಾಮಿ ಜೀವನದ ಮೇಲೆ ಆಸಕ್ತಿ ಹೆಚ್ಚುತ್ತದೆ.

​ರವಿ ಉಚ್ಚ :

ಧೈರ್ಯ ಮತ್ತು ಪರಾಕ್ರಮ ಹೆಚ್ಚುತ್ತದೆ. ಕಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.

​ಅಶುಭ ದಶೆ

​ಶನಿ-ಕುಜ-ಬುಧ ಸಂಯೋಗ :

ಇದು ನಿಮ್ಮ ರಾಶಿಯ ಧನ ಸ್ಥಾನ. ಇಲ್ಲಿ ಶನಿ ಮತ್ತು ಕುಜ ಸೇರಿರುವುದರಿಂದ ಅಂಗಾರಕ ಯೋಗ’ ಉಂಟಾಗುತ್ತದೆ. ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಕಲಹಗಳು ಸಂಭವಿಸಬಹುದು. ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ.

ಕೃಷಿ ಮತ್ತು ಪರಿಶ್ರಮ :

ಮೀನದಲ್ಲಿರುವ ಶನಿ ನಿಮ್ಮನ್ನು ಕಠಿಣ ದುಡಿಮೆಗೆ ಹಚ್ಚುತ್ತಾನೆ. ಫಲಿತಾಂಶ ತಡವಾದರೂ ನಿಶ್ಚಿತವಾಗಿ ಸಿಗಲಿದೆ. ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವಿದೆ. ಆದರೆ, ಕೆಲಸಗಾರರ ಕೊರತೆ ಅಥವಾ ಯಂತ್ರೋಪಕರಣಗಳ ದುರಸ್ತಿಯಿಂದ ಸ್ವಲ್ಪ ಅಡೆತಡೆ ಉಂಟಾಗಬಹುದು.

ಪ್ರೇಮ ಮತ್ತು ವಿವಾಹ :

​ಗುರುವಿನ ದೃಷ್ಟಿ ಇರುವುದರಿಂದ ಪ್ರೇಮ ಸಂಬಂಧಗಳು ಗಟ್ಟಿಯಾಗುತ್ತವೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ವಿವಾಹ ಆಕಾಂಕ್ಷಿಗಳಿಗೆ ಉತ್ತಮ ಸಂಬಂಧಗಳು ಹುಡುಕಿಕೊಂಡು ಬರುತ್ತವೆ. ಮನೆಯಲ್ಲಿ ಮಂಗಲ ಕಾರ್ಯದ ಮಾತುಕತೆ ನಡೆಯಲಿದೆ.

​ಸ್ವ-ಉದ್ಯೋಗ, ವ್ಯಾಪಾರ ಮತ್ತು ಅಧಿಕಾರ :

​ಹೊಸ ಐಡಿಯಾಗಳನ್ನು ಜಾರಿಗೆ ತರಲು ಇದು ಸಕಾಲ. ಲಾಭದ ಪ್ರಮಾಣ ಸಾಧಾರಣವಾಗಿರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಉದ್ಯೋಗದಲ್ಲಿರುವವರಿಗೆ ಬಡ್ತಿ ಅಥವಾ ಹೆಚ್ಚಿನ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ.

ಹವ್ಯಾಸ ಮತ್ತು ಕಲೆ

​ಶುಕ್ರನು ನಾಲ್ಕನೇ ಮನೆಯಲ್ಲಿರುವುದರಿಂದ ಸಂಗೀತ, ಸಾಹಿತ್ಯ, ನೃತ್ಯ ಅಥವಾ ಯಾವುದೇ ಸೃಜನಶೀಲ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡ್ತೀರಿ. ನಿಮ್ಮ ಪ್ರತಿಭೆಗೆ ವೇದಿಕೆ ದೊರೆಯುವ ಸಾಧ್ಯತೆ ಇದೆ.

ಹೂಡಿಕೆ :

​ದೀರ್ಘಕಾಲದ ಹೂಡಿಕೆಗೆ ಶುಕ್ರನ ಬೆಂಬಲವಿದೆ. ​ಆದರೆ, ಶೇರು ಮಾರುಕಟ್ಟೆ ಅಥವಾ ಅನಿಶ್ಚಿತ ಹೂಡಿಕೆಗಳಲ್ಲಿ ಬುಧ-ಕುಜ ಸಂಯೋಗ ಇರುವುದರಿಂದ ತುರ್ತು ನಿರ್ಧಾರ ಬೇಡ. ಹಣ ಸಿಕ್ಕಿಬೀಳುವ ಸಂಭವವಿರುತ್ತದೆ.

– ಲೋಹಿತ ಹೆಬ್ಬಾರ್

Source link

Leave a Reply

Your email address will not be published. Required fields are marked *