Headlines

ಶ್ರೇಯಸ್ ಅಯ್ಯರ್ ಅವರ ಒಂದು ನಿರ್ಧಾರ ಪಂಜಾಬ್ ಕಿಂಗ್ಸ್ ಸೋಲಿಗೆ ಕಾರಣವಾಯಿತೇ? – Kannada News | Shreyas Iyer explains why Chahal didn’t bowl a single over vs Delhi Capitals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲದ ಹೆಚ್​ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 210 ರನ್ ಕಲೆಹಾಕಿದ್ದರು.

ಈ ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್​ ಗಳಿಸಿ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಅವರ ಒಂದು ನಿರ್ಧಾರವು ಚರ್ಚೆಗೆ ಕಾರಣವಾಗಿದೆ. ಅದೇನೆಂದರೆ ಯುಜ್ವೇಂದ್ರ ಚಹಲ್​ಗೆ ಓವರ್ ನೀಡದಿರುವುದು.

ಈ ಪಂದ್ಯದ ಮಧ್ಯಂತರ ಹಂತದಲ್ಲಿ ಸ್ಪಿನ್ನರ್‌ಗಳ ನೆರವು ಪಡೆಯುವ ಅವಕಾಶವಿದ್ದರೂ ಶ್ರೇಯಸ್ ಅಯ್ಯರ್ ಕೇವಲ ವೇಗಿಗಳನ್ನೇ ಅವಲಂಬಿಸಿದರು. ಇದಾಗ್ಯೂ ಚಹಲ್ ಅವರಿಗೆ ಒಂದೇ ಒಂದು ಓವರ್ ನೀಡಿರಲಿಲ್ಲ.

ಅಯ್ಯರ್ ನೀಡಿದ ಕಾರಣವೇನು?

ಈ ಪಂದ್ಯದ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, ಚಹಲ್ ಅವರನ್ನು ಬಳಸದಿರುವುದಕ್ಕೆ ಪಿಚ್‌ನ ಸ್ವರೂಪವೇ ಕಾರಣ ಎಂದು ಸಮರ್ಥಿಸಿಕೊಂಡಿದ್ದಾರೆ. “ಧರ್ಮಶಾಲಾದ ಈ ಪಿಚ್‌ನಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ಸಿಗುತ್ತಿತ್ತು. ಚೆಂಡು ಅನಿರೀಕ್ಷಿತವಾಗಿ ಬೌನ್ಸ್ ಆಗುತ್ತಿತ್ತು ಮತ್ತು ಮೂಮೆಂಟ್ ಇತ್ತು. ನಮ್ಮ ವೇಗಿಗಳು ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಿದ್ದರೆ ಫಲಿತಾಂಶ ಬೇರೆಯೇ ಇರುತ್ತಿತ್ತು,” ಎಂದು ಹೇಳಿದ್ದಾರೆ

“ನಾವು 210 ರನ್ ಗಳಿಸಿದ್ದೆವು, ಇದು ಈ ಪಿಚ್‌ನಲ್ಲಿ ಪಾರ್ ಸ್ಕೋರ್‌ಗಿಂತ 30 ರನ್ ಹೆಚ್ಚೇ ಆಗಿತ್ತು. ಆದರೆ ನಮ್ಮ ಬೌಲರ್‌ಗಳು ‘ಹಾರ್ಡ್ ಲೆಂಗ್ತ್’ ಎಸೆಯುವಲ್ಲಿ ಮತ್ತು ಕ್ಷೇತ್ರರಕ್ಷಣೆಯಲ್ಲಿ ವಿಫಲರಾದರು,” ಎಂದು ಶ್ರೇಯಸ್ ಅಯ್ಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂದರೆ ಪಿಚ್​ನ ಸ್ವರೂಪವು ಸ್ಪಿನ್ನರ್​ಗೆ ನೆರವಾಗುವಂತಿರಲಿಲ್ಲ. ಹೀಗಾಗಿಯೇ ನಾನು ಯುಜ್ವೇಂದ್ರ ಚಹಲ್​ಗೆ ಓವರ್ ನೀಡಲಿಲ್ಲ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ ಮತ್ತು ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದಾಗ ಚಹಲ್ ಅವರನ್ನು ಬೌಲಿಂಗ್‌ಗೆ ತರುವುದು ಅಪಾಯಕಾರಿ ಎಂದು ಅಯ್ಯರ್ ಭಾವಿಸಿದ್ದರು. ಎಡಗೈ ಬ್ಯಾಟರ್‌ಗಳು ಲೆಗ್ ಸ್ಪಿನ್ನರ್ ವಿರುದ್ಧ ಸುಲಭವಾಗಿ ರನ್ ಗಳಿಸಬಹುದು ಎಂಬ ಲೆಕ್ಕಾಚಾರ ಅವರದ್ದಾಗಿತ್ತು.

ಇದನ್ನೂ ಓದಿ: ವಿರಾಟ್ ಕೊಹ್ಲಿ ಟೆಸ್ಟ್​ ನಿವೃತ್ತಿಗೆ ಒಂದು ವರ್ಷ; ಕಂಬ್ಯಾಕ್ ಅಸಾಧ್ಯ

ಇದಾಗ್ಯೂ ವೇಗಿಗಳು ದುಬಾರಿಯಾದಾಗಲೂ ಯುಜ್ವೇಂದ್ರ ಚಹಲ್ ಅವರಿಗೆ ಚೆಂಡು ನೀಡದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ತಂಡದಲ್ಲಿದ್ದರೂ ಪಂದ್ಯ ಕೈ ತಪ್ಪುವ ಭೀತಿ ಎದುರಾದಗಲೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಯುಜ್ವೇಂದ್ರ ಚಹಲ್​ನನ್ನು ಕಡೆಗಣಿಸಿದ್ದು ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Source link

Leave a Reply

Your email address will not be published. Required fields are marked *