ಸಂಜು ಸ್ಯಾಮ್ಸನ್ ಅಲ್ಲ, ಗೆಲುವಿಗೆ ಈತ ಕಾರಣ: ಗಂಭೀರ್ ಅಚ್ಚರಿಯ ಹೇಳಿಕೆ – Kannada News | Gautam Gambhir acknowledges Shivam Dube’s contribution

T20 World Cup 2026: ಟಿ20 ವಿಶ್ವಕಪ್ 2026ರ ಸೆಮಿಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆಯಿಟ್ಟಿದೆ. ಅದು ಸಹ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗು ಬಡಿಯುವ ಮೂಲಕ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 195 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿದರು. ಈ ಮೂಲಕ 19.2 ಓವರ್​ಗಳಲ್ಲಿ ಭಾರತ ತಂಡವನ್ನು ಗುರಿ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಇನ್ನು ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತದ ಗೆಲುವಿಗೆ ಸಂಜು ಸ್ಯಾಮ್ಸನ್ ಮಾತ್ರ ಕಾರಣರಲ್ಲ. ಇತರೆ ಆಟಗಾರರ ಕೊಡುಗೆ ಕೂಡ ಅತ್ಯಮೂಲ್ಯವಾಗಿತ್ತು ಎಂದಿದ್ದಾರೆ.

ಅದರಲ್ಲೂ 19 ನೇ ಓವರ್‌ನಲ್ಲಿ ಶಿವಂ ದುಬೆ ಬಾರಿಸಿದ ಎರಡು ಫೋರ್​ಗಳು ಸಂಜು ಸ್ಯಾಮ್ಸನ್ ಮೇಲಿನ ಅಗಾಧ ಒತ್ತಡವನ್ನು ನಿವಾರಿಸುವಲ್ಲಿ ನಿರ್ಣಾಯಕವಾಗಿದ್ದವು.  ಹಾರ್ದಿಕ್ ಪಾಂಡ್ಯ ಡಾಟ್ ಬಾಲ್‌ಗೆ ಔಟಾದ ನಂತರ 10 ಎಸೆತಗಳಲ್ಲಿ 17 ರನ್‌ಗಳು ಬೇಕಾಗಿದ್ದಾಗ, ದುಬೆ ಅವರ ತಕ್ಷಣದ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.

ಶಿವಂ ದುಬೆ ಅವರ ಈ ನಿರ್ಣಾಯಕ ಪಾತ್ರವು ಪಂದ್ಯವು ಸಂಪೂರ್ಣವಾಗಿ ಭಾರತದ ಪರ ವಾಲುವಂತೆ ಮಾಡಿತು. ಹೀಗಾಗಿ ಟೀಮ್ ಇಂಡಿಯಾದ ಗೆಲುವಿನ ಶ್ರೇಯಸ್ಸು ದುಬೆ ಅವರಿಗೂ ಸಲ್ಲಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ಸಾಮಾನ್ಯವಾಗಿ ಪಂದ್ಯ ಮುಗಿದಾಗ ನಾವು ಕೆಲವು ಕೊಡುಗೆಗಳ ಬಗ್ಗೆ ಮಾತ್ರ ಮಾಡುತ್ತೇವೆ. ನನ್ನ ಪ್ರಕಾರ, ಶಿವಂ ಅವರ ಆ ಎರಡು ಫೋರ್​ಗಳು ಸಂಜು ಅವರ 97 ರನ್​​ ಗಳಷ್ಟೇ ಮುಖ್ಯ. ಇದು ತಂಡದ ಆಟ.  ಅಲ್ಲದೆ ಯಾವಾಗಲೂ ತಂಡದ ಆಟವಾಗಿಯೇ ಉಳಿಯುತ್ತದೆ.

ಹೀಗಾಗಿಯೇ ಶಿವಂ ದುಬೆ ಬಾರಿಸಿದ 2 ಫೋರ್​ಗಳು ಸಂಜು ಅವರ ಇನ್ನಿಂಗ್ಸ್‌ನಷ್ಟೇ ಮುಖ್ಯ ದುಬೆ ನಿರ್ಣಾಯಕ ಹಂತದಲ್ಲಿ ಎರಡು ಬೌಂಡರಿಗಳನ್ನು ಬಾರಿಸದೇ ಇದ್ದಿದ್ದರೆ. ನಾವು ಇಂದು ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ವಿಶೇಷ ಇನಿಂಗ್ಸ್ ಆಡಿದ್ದಾರೆ, ಆ ಸಣ್ಣ ಕೊಡುಗೆಗಳು ಪಂದ್ಯಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ಅಂದು ಲೇವಡಿ ಮಾಡಿ, ಇಂದು ತಲೆಬಾಗಿ ನಿಂತ ಸೂರ್ಯ..!

ಇದಾಗ್ಯೂ ದೊಡ್ಡ ಕೊಡುಗೆಗಳು ಸುದ್ದಿಯಾಗುತ್ತವೆ. ಆದರೆ ಸಣ್ಣ ಕೊಡುಗೆಗಳು ತಂಡವನ್ನು ಪಂದ್ಯ ಗೆಲ್ಲಿಸಿಕೊಡುವಲ್ಲಿ ಸಹಾಯ ಮಾಡುತ್ತವೆ. ಹೀಗಾಗಿ ಇಂತಹ ಕೊಡುಗೆಗಳು ಬಹಳ ಮುಖ್ಯ. ಹೀಗಾಗಿಯೇ ಟೀಮ್ ಇಂಡಿಯಾ ಗೆಲುವಿಗೆ ಶಿವಂ ದುಬೆ ಕೂಡ ಕಾರಣಕರ್ತರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *