ಸಿ.ಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಮೆಗಾ ಟ್ವಿಸ್ಟ್: ಕಾನ್ಫಿಡೆಂಟ್ ಒಡೆಯನಿಗೆ ಮುಳುವಾಯ್ತಾ 500 ಕೋಟಿ ರೂ.? – Kannada News | Confident Group Chairman CJ Roy suicide for IT probe into Rs 500 crore transactions, suspected to be Hawala dealings

ಬೆಂಗಳೂರು, ಫೆಬ್ರವರಿ 25): ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ (CJ Roy )ಆತ್ಮಹತ್ಯೆಗೆ ಹವಾಲಾ ಹಣ(Hawala dealings) ಕಾರಣ ಎನ್ನುವುದು ಈ ಹಿಂದೆ ಬಟಾಬಯಾಲಾಗಿತ್ತು. ಆದರೆ ಆ ಹವಲಾ ಹಣ ಎಷ್ಟು ಎನ್ನುವುದು ಮಾತ್ರ ಗೊತ್ತಿರಲಿಲ್ಲ. ಸದ್ಯ Tv9ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸಿಜೆ ರಾಯ್ ಆತ್ಮಹತ್ಯೆಗೆ ಬರೋಬ್ಬರಿ 500 ಕೋಟಿ ರೂಪಾಯಿ ‌ಹವಲಾ ಹಣ ಕಾರಣ ಎಂದು ತಿಳಿದುಬಂದಿದೆ. 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಗೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದು. ಇದರಿಂದ ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗಿದೆ.

500 ಕೋಟಿ ಮತ್ತು ಸಿ.ಜೆ.ರಾಯ್

ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿದ್ದು, ಕೇರಳ, ಕೊಚ್ಚಿ ಪ್ರಾಜೆಕ್ಟ್ ಬೆನ್ನಲ್ಲೇ ಡಿಸೆಂಬರ್​ನಲ್ಲೇ ತನಿಖೆ ನಡೆಸ್ತಿದ್ದ ಐಟಿ ಇಲಾಖೆ 500 ಕೋಟಿ ಲೆಕ್ಕ ಕೇಳಿತ್ತು. ಇದರಿಂದ ರಾಯ್ ದುಬೈನಿಂದ ಭಾರತಕ್ಕೆ ವಾಪಸ್ ಬಾರದೆ ಮೀನಾಮೇಶ ಎಣಿಸುತ್ತಿದ್ದರು. ಅಲ್ಲದ ಐಟಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ಐಟಿ ರೇಡ್ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೆಗೂ ಭಾರತಕ್ಕೆ ಬಂದ ಸಿಜೆ ರಾಯ್ ಗೆ ಅನೇಕ ಪ್ರಶ್ನೆಗಳನ್ನ ಮುಂದಿಟ್ಟಿದ್ದರು. ಹೀಗಾಗಿಯೇ ತಮ್ಮ ಪಾರ್ಟ್​ನರ್, ಸಿಎ ಸಲಹೆಯಂತೆ ರಾಯ್ ಕೋರ್ಟ್ ಹಾಕಿದ್ದ ಅರ್ಜಿ ವಾಪಸ್ ಪಡೆದುಕೊಂಡಿದ್ದರು. ಕೊನೆಗೆ 500 ಕೋಟಿ ರೂಪಾಯಿ ಮೂಲ ನೀಡಲಾಗದೆ, ತಮಗೆ ಬಂದಿದ್ದ ಹವಾಲಾ ಹಣದ ಲೆಕ್ಕ ಕೊಡದೆ ಸಿ.ಜೆ.ರಾಯ್ ಪರದಾಡಿದ್ದರು.

ಇದನ್ನೂ ಓದಿ: ಸಿಜೆ ರಾಯ್‌ ಸಾವಿನ ಹಿಂದೆ ಹತ್ತಾರು ಅನುಮಾನ, ಹಲವಾರು ಪ್ರಶ್ನೆ: ಇಲ್ಲಿದೆ ದೊಡ್ಡ ಪಟ್ಟಿ!

ಹೀಗೆ 500 ಕೋಟಿ ರೂ. ಹವಾಲಾ ವ್ಯವಹಾರದ ಬಗ್ಹೆ ಲೆಕ್ಕ ಕೊಡಲಾಗದ ಸಿಜೆ ರಾಯ್ ಗೆ ಅತ್ತ ದರಿ ಇತ್ತ ಪುಲಿ ಅನ್ನೋ ಪರಿಸ್ಥಿತಿ ಆಗಿತ್ತು. ಇದರಿಂದ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದರೂ ಆತ್ಮಹತ್ಯೆ ದಿನ ಐಟಿಗೆ ಉತ್ತರಿಸುವುದಾಗಿ ಹೇಳಿದ್ದ ರಾಯ್, ಅಂದು ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡಾ ಸೇವಿಸರಿಲಿಲ್ಲ. ಮಾತ್ರೆ ಸೇವಿಸದೆ ಇದ್ದಿದ್ದು ಖಿನ್ನತೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಇದೆ. ಸದ್ಯ ಇಂತ ವ್ಯವಹಾರದ ಬಗ್ಗೆ ಸಿಜೆ ರಾಯ್, ಕೇರಳ ಮೂಲದ ಬ್ಯುಸಿನೆಸ್ ಪಾರ್ಟನರ್, ಐಟಿ ಅಧಿಕಾರಿಗಳು & ಸಿಜೆ ರಾಯ್ ಸಿಎಗೆ ಮಾತ್ರ ಗೊತ್ತಿರೋದು 500 ಕೋಟಿ ರೂ. ಕುತೂಹಲ ಜೀವಂತವಾಗಿಸಿದೆ.

ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ರಾಯ್?

ಸಿಜೆ ರಾಯ್ ತಮ್ಮ ಕಚೇರಿಗೂ ಮುನ್ನ ಇದ್ದಂತ ಖಾಸಗಿ ಹೋಟೆಲ್ ನಲ್ಲಿ ಸಜೀವ ಗುಂಡು ಸಿಕ್ಕಿದ್ದವು. ಹೀಗಾಗಿ ಖಾಸಗಿ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಮುಂದಾಗಿ ಕೊನೆಗೆ ಪ್ರೈವಸಿ ಸ್ಥಳದಲ್ಲಿ ಆತ್ಮಹತ್ಯೆಗೆ ಸೂಕ್ತ ಸ್ಥಳ ಅಲ್ಲವೆಂದು ನಿರ್ಧರಿಸ ಹೋಟೆಲ್ ಬದಲು ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಚೇರಿಯ ಚೇಂಬರ್​ನಲ್ಲಿ ಪಾಯಿಂಟ್ ಬ್ಲ್ಯಾಂಕ್​ನಲ್ಲಿ ಎದೆಗೆ ಗುರಿ ಇಟ್ಟು ಫೈರ್ ಮಾಡಿಕೊಂಡಿದ್ದ ರಾಯ್ ಕ್ಯಾಬಿನ್​ನಲ್ಲೇ ಕ್ಷಣಾರ್ಧದಲ್ಲಿ ಕುಸಿದು ಬಿದ್ದಿದ್ದರು. ಆದರೆ ಆತ್ಮಹತ್ಯೆ ಸ್ಥಳದಲ್ಲಿ ಕೆಲವೇ ಹನಿ ರಕ್ತ ಮಾತ್ರ ಚೆಲ್ಲಿತ್ತು . ಯಾಕೆಂದ್ರೆ ಸಿಡಿದ ಗುಂಡು ದೇಹದಿಂದ ಹೊರ ಬಾರದ ಹಿನ್ನೆಲೆ, ರಾಯ್ ದೇಹದಿಂದ ಹೆಚ್ಚು ರಕ್ತ ಸೋರಿಕೆಯಾಗಿರಲಿಲ್ಲ. ಬುಲೇಟ್ ರಾಯ್ ಹೃದಯ ಸೀಳಿ, ಕಿಡ್ನಿಗೆ ತಾಗಿದೆ. ಬಳಿಕ ರಿಬ್ಸ್​ನಲ್ಲಿ ಗುಂಡು ಸಿಲುಕಿದ್ದ ಹಿನ್ನೆಲೆ ರಕ್ತ ಬಂದಿಲ್ಲ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸಿಜೆ ರಾಯ್ ಆತ್ಮಹತ್ಯೆ ಕೇಸ್ ಗೆ ಹವಾಲ ಹಣ ಮ್ಯಾಟರ್ ತಗ್ಲಾಕೊಂಡಿರುವುದು ಗೊತ್ತಾಗಿದೆ. ಆದರೆ ಈ ಹಣ ಯಾರದ್ದು, ಯಾಕಾಗಿ ನೀಡಿದ್ರು ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *