ಹನೂರಿನಲ್ಲಿ ಗುಂಡೇಟಿಗೆ ಮೂವರು ಬಲಿ ಪ್ರಕರಣ: ನ್ಯಾಯಾಂಗ ತನಿಖೆಗೆ ಆರ್​​. ಅಶೋಕ್​​ ಆಗ್ರಹ – Kannada News | Hanur Forest Firing: Leader of Opposition R. Ashok Demands Judicial Inquiry

ಆರ್​​. ಅಶೋಕ್​​ ( ಫೈಲ್​​ ಚಿತ್ರ)Image Credit source: R Ashoka Facebook Page

ಬೆಂಗಳೂರು, ಆಗಸ್ಟ್​​ 16: ಚಾಮರಾಜನಗರ ಜಿಲ್ಲೆಯ ಹನೂರು ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ವಿಧಾನಸಭೆ ವಿಪಕ್ಷ ನಾಯಕ ಆರ್​​.ಅಶೋಕ್​​ ಆಗ್ರಹಿಸಿದ್ದಾರೆ. ಹನೂರಿನಲ್ಲಿ ಮೂವರು ರೈತರ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡುತ್ತದೆ. ಸ್ಥಳೀಯ ಜನಪ್ರತಿನಿಧಿಗಳ ಹೇಳಿಕೆ ಮತ್ತೊಂದು ಕಥೆ ಹೇಳುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ ಅನುಮಾನಗಳಿಗೆ ಉತ್ತರ ಸಿಗುತ್ತಿಲ್ಲ. ಹಾಗಾದರೆ ನಿಜವಾದದ್ದು ಯಾವುದು? ಯಾರ ಮಾತನ್ನು ನಂಬಬೇಕು? ಎಂದವರು ಪ್ರಶ್ನಿಸಿದ್ದಾರೆ.

‘ಸ್ಥಳ ಮಹಜರು ಕಾರ್ಯವೇ ನಡೆದಿಲ್ಲ’

ಪ್ರಾಣಿ ಕೊಂದು ಮಾಂಸ ಮಾರಾಟಕ್ಕೆ ಹೋಗುತ್ತಿದ್ದರು , ಹೀಗಾಗಿ ಮೂವರನ್ನು ಎನ್​ಕೌಂಟರ್ ಮಾಡಿದ್ದೇವೆ ಅಂತಾರೆ. ಆದರೆ ಹತ್ಯೆಯಾದವರ ಸಂಬಂಧಿಕರು ನಕಲಿ ಎನ್​ಕೌಂಟರ್ ಅಂತಾರೆ. ಕಳೆದ 10 ವರ್ಷದಲ್ಲಿ ಮೊದಲ ಬಾರಿಗೆ ಅರಣ್ಯದಲ್ಲಿ ಹೀಗಾಗಿದೆ. ದಾಳಿ ನಡೆಸಿದರೆ ಮೊದಲು ಅವರ ಕಾಲಿಗೆ ಗುಂಡು ಹಾರಿಸಬೇಕು. ಆದರೆ ಎದೆಗೆ ಗುಂಡು ಹಾರಿಸಿರುವುದಾಗಿ ಕುಟುಂಬದವರು ಹೇಳ್ತಾರೆ. ಘಟನೆ ಸಂಬಂಧ ತಾನು ಎಸ್​ಪಿ ಜೊತೆ ಮಾತನಾಡಿದ್ದು, ಮಹಜರು ಮಾಡಿಲ್ಲ ಅಂದಿದ್ದಾರೆ. ಪೊಲೀಸರು ಮಹಜರು ಮಾಡುವುದಕ್ಕಿಂತ ಮುನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶವಗಳನ್ನು ಸ್ಥಳಾಂತರ ಮಾಡಿದ್ಯಾಕೆ? ಹತ್ಯೆಯಾದವರ ಹಿನ್ನೆಲೆ ಬಗ್ಗೆ ಯಾವುದೇ ಮಾಹಿತಿ ಪ್ರಕಟಿಸಿಲ್ಲ. ಮೂವರನ್ನು ಶೂಟೌಟ್ ಮಾಡಿದವರು ಕೂಡ ಈಗ ಕಾಣೆಯಾಗಿದ್ದಾರೆ. ಅವರೇ ಹೋಗಿ ಶರಣಾಗಬೇಕಿತ್ತು, ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಅರಣ್ಯ ಸಿಬ್ಬಂದಿ ಹೇಳಿಕೆಗೂ, ನಾಗರಿಕರ ಹೇಳಿಕೆಗೂ ವ್ಯತ್ಯಾಸವಿದೆ ಎಂದು ಅಶೋಕ್​​ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿ ಕೇಸ್: ಮ್ಯಾಜಿಸ್ಟ್ರೇಟ್ ತನಿಖೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ

ಮೂವರ ಹತ್ಯೆ ಬಗ್ಗೆ ಸಿಎಂ ಮ್ಯಾಜಿಸ್ಟ್ರೆಟ್ ತನಿಖೆಗೆ ಆದೇಶಿಸಿದ್ದಾರೆ. ಆದರೆ ಎಲ್ಲರೂ ಅವರ ಪರವಾಗಿಯೇ ಇರುತ್ತಾರೆ. ನ್ಯಾಯ ಸಿಗಬೇಕಾದರೆ ನ್ಯಾಯಾಂಗ ತನಿಖೆ ಆಗಬೇಕು. ತನಿಖೆ ಸಂದರ್ಭದಲ್ಲಿ ತಪ್ಪಿತಸ್ಥರನ್ನು ಕರ್ತವ್ಯದಿಂದ ಮುಕ್ತಿಗೊಳಿಸಬೇಕು. ಗುಂಡಿನ ದಾಳಿ ನಡೆಸುವ ಅನಿವಾರ್ಯತೆ ಇತ್ತಾ ಅನ್ನೋದು ಪ್ರಶ್ನೆಯಾಗಿದ್ದು, ಒಬ್ಬರಿಗೆ ಹೊಡೆದ್ರೆ ಜೊತೆಗಿದ್ದವರು ಪರಾರಿಯಾಗುತ್ತಿದ್ದರು. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ಹೊಡೆದುರುಳಿಸಿದ್ದಾರೆ. ಎಲ್ಲರ ಕೈಯಲ್ಲೂ ವೆಪನ್ ಇದ್ವಾ? ಎಂಬುದು ನಾವು ಕೇಳುತ್ತಿರುವ ಪ್ರಶ್ನೆ. ಘಟನೆ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿತ್ತು. ಧರಣಿ ಸ್ಥಳಕ್ಕೆ ಭೇಟಿ ನೀಡಿ ನ್ಯಾಯಕೊಡಿಸುತ್ತೇನೆಂದು ಹೇಳಬೇಕಿತ್ತು ಎಂದು ಅಶೋಕ್​​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *