ಹಿಮಂತ ಬಿಸ್ವಾ ಶರ್ಮಾ ಆಡಳಿತಕ್ಕೆ ಅಸ್ಸಾಂ ಜನತೆಯ ಮೊಹರು, ವಿರೋಧ ಪಕ್ಷಗಳ ಕೋಟೆ ಧ್ವಂಸ, ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು? – Kannada News | Assam BJP’s Historic Win: Himanta’s Magic Secures Third Term, Why Anti Incumbency Failed Here

ಗುವಾಹಟಿ, ಮೇ 04: ದೇಶದ ಇತರ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಸರ್ಕಾರಗಳನ್ನು ಬುಡಮೇಲು ಮಾಡುತ್ತಿದ್ದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಈ ಪ್ರವೃತ್ತಿಯನ್ನು ತಲೆಕೆಳಗಾಗಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರ ನೇತೃತ್ವದ ತಂಡವು ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ. ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಹೊರಬೀಳುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ.

ಮೋದಿಯ ಮಾರ್ಗದರ್ಶನ ಮತ್ತು ಹಿಮಂತ ಮ್ಯಾಜಿಕ್

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅಸ್ಸಾಂ ಬಿಜೆಪಿ ತಂಡವು ಈ ಮೈಲಿಗಲ್ಲನ್ನು ತಲುಪಿದೆ. ಇತರ ರಾಜ್ಯಗಳಲ್ಲಿ ಸರ್ಕಾರಗಳು ಪತನಗೊಳ್ಳುತ್ತಿರುವಾಗ, ಅಸ್ಸಾಂನಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವುದು ರಾಜಕೀಯ ವಿಶ್ಲೇಷಕರನ್ನು ಆಶ್ಚರ್ಯಚಕಿತಗೊಳಿಸಿದೆ.

ಹ್ಯಾಟ್ರಿಕ್ ಗೆಲುವಿನ ಹಿಂದಿನ ಗುಟ್ಟು

ಅಭಿವೃದ್ಧಿ ಕಾರ್ಡ್: ಸಾರಿಗೆ ಮತ್ತು ಮೂಲಸೌಕರ್ಯಗಳಲ್ಲಿ ಹಿಮಂತ ಬಿಸ್ವ ಶರ್ಮಾ ತಂದ ಬದಲಾವಣೆಗಳು ಗ್ರಾಮೀಣ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಸುಸ್ಥಿರ ಆಡಳಿತ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವುದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುವುದಿಲ್ಲ ಎಂಬ ಜನರ ನಂಬಿಕೆ ಬಿಜೆಪಿಗೆ ವರದಾನವಾಗಿದೆ.
ಹೋರಾಟ: ಅಸ್ಸಾಂನ ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಸಂಯೋಜಿಸಿ ಚುನಾವಣೆ ಎದುರಿಸಿದ ಶರ್ಮಾ ಅವರ ಕಾರ್ಯತಂತ್ರ ಜಯ ತಂದಿದೆ.

ಮತ್ತಷ್ಟು ಓದಿ: ಸೂರ್ಯ ಮುಳುಗಿದ ಮೇಲೆ ನಾವೇ ಗೆಲ್ಲುತ್ತೇವೆ! ಬೆಂಬಲಿಗರಿಗೆ ಮಮತಾ ಬ್ಯಾನರ್ಜಿ ‘ಅರ್ಜೆಂಟ್’ ಕರೆ

ರಾಷ್ಟ್ರಮಟ್ಟದಲ್ಲಿ ಅಸ್ಸಾಂ ಗೆಲುವಿನ ಪ್ರಾಮುಖ್ಯತೆ

ಈ ಗೆಲುವನ್ನು ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ತನ್ನ ರಾಜಕೀಯ ಶಕ್ತಿಯ ಅಗ್ನಿಪರೀಕ್ಷೆಯ ಯಶಸ್ಸು ಎಂದು ಪರಿಗಣಿಸಿದೆ. ಐದು ರಾಜ್ಯಗಳ ಚುನಾವಣಾ ಕದನದಲ್ಲಿ ಅಸ್ಸಾಂನ ಈ ಫಲಿತಾಂಶವು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ನಿಕಟ ಕಾರ್ಯತಂತ್ರ: ವಿವಿಧ ಜನಾಂಗೀಯ ಸಮುದಾಯಗಳ ಆತಂಕಗಳನ್ನು ಆಲಿಸಿ, ಅವುಗಳನ್ನು ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ವಿಶ್ಲೇಷಿಸಿದ ರೀತಿ ಬಿಜೆಪಿಗೆ ಎಲ್ಲ ವರ್ಗದ ಜನರ ಬೆಂಬಲ ತಂದುಕೊಟ್ಟಿದೆ.

ಶಕ್ತ ಸಂಘಟನೆ ಮತ್ತು ವಿರೋಧ ಪಕ್ಷಗಳ ದೌರ್ಬಲ್ಯ

ಬಿಜೆಪಿಯ ತಳಮಟ್ಟದ ಸಂಘಟನಾ ಶಕ್ತಿಯ ಮುಂದೆ ವಿರೋಧ ಪಕ್ಷಗಳ ಮೈತ್ರಿಕೂಟವು ಮಂಕಾಗಿದೆ.ಹಿಮಂತ ಬಿಸ್ವಾ ಶರ್ಮಾ ಅವರ ಆಕ್ರಮಣಕಾರಿ ನಾಯಕತ್ವ ಮತ್ತು ಮೋದಿ-ನಿತೀನ್ ನಬಿನ್ ಅವರ ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ನಕಲಿ ಮತದಾರರನ್ನು ತೆಗೆದುಹಾಕಿದ್ದು ಸಹ ಪರೋಕ್ಷವಾಗಿ ಬಿಜೆಪಿಗೆ ಸಹಕಾರಿಯಾಗಿದೆ. ನುಸುಳುಕೋರರ ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದು, ನೈಜ ಮತದಾರರ ಶಕ್ತಿಯನ್ನು ಹೆಚ್ಚಿಸಿತು, ಇದು ಬಿಜೆಪಿಯಂತಹ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸಲು ನೆರವಾಯಿತು.

ಡಬಲ್ ಇಂಜಿನ್ ಸರ್ಕಾರದ ಲಾಭ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿದ್ದರೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ವೇಗ ಸಿಗುತ್ತದೆ ಎಂಬ ನಂಬಿಕೆ ಬಿಜೆಪಿಗೆ ವರದಾನವಾಗಿದೆ.

ಸಂಘಟನಾ ಶಕ್ತಿ ಮತ್ತು ವಿರೋಧ ಪಕ್ಷಗಳ ವೈಫಲ್ಯ

ಬಿಜೆಪಿಯ ಬಲಿಷ್ಠ ಸಂಘಟನೆ ಮತ್ತು ಬೂತ್ ಮಟ್ಟದ ಕಾರ್ಯತಂತ್ರಕ್ಕೆ ಸೂಕ್ತ ಪೈಪೋಟಿ ನೀಡಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವಿಫಲವಾದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *