ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಪ್ರಿಯಾಂಕ್ ಖರ್ಗೆಗೆ ಪ್ರಲ್ಹಾದ್​ ಜೋಶಿ ತಿರುಗೇಟು – Kannada News | Pralhad Joshi Sparks Priyank Kharge Over RSS Riot Claims

ಬಾಗಲಕೋಟೆ, ಜುಲೈ 12: ‘‘RSS ಬೈದಿದ್ದಕ್ಕೆ ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಮಾಧ್ಯಮಗಳಲ್ಲಿ ಜಾಗ ಸಿಗುತ್ತಿದೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದ್ದೇನೆ. ಬಾಲಿಶತನದ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ’’ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ. ಆ ಮೂಲಕ RSS​ ಸಭೆ ನಂತರ ಗಲಭೆಗಳಾಗುತ್ತವೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್​ ಜೋಶಿ, ‘‘ಅದರ ಬಗ್ಗೆ ಕ್ರಮಕೈಗೊಳ್ಳಲು ಹೇಳಿ ಯಾರು ಬೇಡ ಅಂದಿದ್ದಾರೆ. ಪೆಡ್ಲರ್​ಗಳನ್ನು ಯಾಕೆ ಬಂಧಿಸಿಲ್ಲ ಅಂತಾ ನೀವು ಪ್ರಶ್ನಿಸಬಾರದು, ಅದಕ್ಕಾಗಿಯೇ ಅವರು ಈ ರೀತಿ ಹೇಳುತ್ತಿದ್ದಾರೆ. ಪ್ರಿಯಾಂಕ್ ಹೇಳಿಕೆಗೆ ಉತ್ತರ ನೀಡಬೇಡಿ ಅಂತಾ ನಮ್ಮವರಿಗೆ ಹೇಳಿದ್ದೀನಿ. ಸರಸಂಘಚಾಲಕ ಮೋಹನ್ ಭಾಗವತ್ ಒಮ್ಮೆ ಉತ್ತರ ಕೊಟ್ಟಿದ್ದಾರೆ. ಅದಾದ ನಂತರ ಏನೂ ಹೇಳಿಲ್ಲ, ಅವರ ಕೆಲಸ ಮಾಡಿಕೊಂಡು ಇದ್ದಾರೆ. ಈ ನೂರು ವರ್ಷಗಳಲ್ಲಿ ಇಂತಹವನ್ನೆಲ್ಲಾ ಬಹಳ ನೋಡಿ ಆಗಿದೆ. BJP ಮತ್ತು ಸಂಘದ ಅನೇಕ ಸಂಘಟನೆಗಳು ಅನೇಕ ವರ್ಷಗಳಿಂದ ಇವೆ. ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ. ರಿಜಿಸ್ಟ್ರೇಷನ್ ರಿಜಿಸ್ಟ್ರೇಷನ್ ಅಂತಾರಾ, ಏನು ಮಾಡುತ್ತಾರೆ ನೋಡೋಣ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *