All posts by nagaraj11081993

ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ

ನಟ ಶ್ರೀಮುರುಳಿ ಹಾಗೂ ವಿಜಯ್ ರಾಘವೇಂದ್ರ ಅವರ ತಾಯಿ ಜಯಮ್ಮ ಇಂದು (ಜೂನ್ 16) ನಿಧನ ಹೊಂದಿದ್ದಾರೆ. ಸದಾ ಧೈರ್ಯದಿಂದ ಇರುತ್ತಿದ್ದ ‘ರೋರಿಂಗ್ ಸ್ಟಾರ್’ ಶ್ರೀಮುರುಳಿ ಅವರು ಅಮ್ಮನ ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆ ತಡೆಯಲಾರದೆ ಕಣ್ಣೀರಿಟ್ಟ ಘಟನೆ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಯಾವಾಗಲೂ ಬೆಳ್ಳಿತೆರೆಯ ಮೇಲೆ ರಗಡ್ ಆಕ್ಷನ್ ಪಾತ್ರಗಳ ಮೂಲಕ ಅಬ್ಬರಿಸುವ ಶ್ರೀಮುರುಳಿ, ವೈಯಕ್ತಿಕ ಜೀವನದಲ್ಲಿ ತಾಯಿಗೆ ಅತಿಯಾಗಿ ಹತ್ತಿರವಾಗಿದ್ದರು. ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಮ್ಮ ಇನ್ನು ನೆನಪು ಮಾತ್ರ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜಯಮ್ಮ ಅವರ ಪಾರ್ಥಿವ ಶರೀರದ ಮುಂದೆ ಮೌನವಾಗಿ ಕಣ್ಣೀರು ಸುರಿಸುತ್ತಿದ್ದ ಶ್ರೀಮುರುಳಿ ಅವರನ್ನು ನೋಡಿ ಅಲ್ಲಿ ನೆರೆದಿದ್ದ ಬಂಧುಗಳು ಮತ್ತು ಚಿತ್ರರಂಗದ ಸ್ನೇಹಿತರು ಸಾಂತ್ವನ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಹೇಗಿದೆ ನೋಡಿ ನಟ ಅಜಿತ್ ಕುಟುಂಬ; ಇಲ್ಲಿವೆ ಸುಂದರ ಫೋಟೋಸ್

Source link

ಸಲ್ಮಾನ್ ಖಾನ್ ಜೊತೆಗೆ ಸಮಂತಾ ಹಾಲಿ ಪತಿ ಸಿನಿಮಾ – Kannada News | Raj Nidimoru confirms him and DK doing a big budget movie with Bollywood star

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಇದೇ 19ನೇ ತಾರೀಖು ಬಿಡುಗಡೆ ಆಗಲಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಸಮಂತಾ, ಗೃಹಿಣಿಯಾಗಿ ಜೊತೆಗೆ ಸಖತ್ ಆಕ್ಷನ್ ಮಾಡುವ ಫೈಟರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಅನ್ನು ಸಿನಿಮಾ ಅನ್ನು ನಂದಿನಿ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸಮಂತಾರ ಹಾಲಿ ಪತಿ ರಾಜ್ ನಿಧಿಮೋರು. ಅಸಲಿಗೆ ರಾಜ್ ನಿಧಿಮೋರು ಸಹ ಜನಪ್ರಿಯ ಚಿತ್ರಕತೆ ಬರಹಗಾರ ಮತ್ತು ನಿರ್ದೇಶಕ ಆಗಿದ್ದು, ಖುದ್ದು ಪತ್ನಿಯ ಸಿನಿಮಾ ಮೇಲೆ ಬಂಡವಾಳ ಹೂಡಿದ್ದಾರೆ. ರಾಜ್ ಅವರು ತಮ್ಮ ಗೆಳೆಯ ಡಿಕೆ ಜೊತೆ ಸೇರಿಕೊಂಡು (ರಾಜ್-ಡಿಕೆ) ಬಾಲಿವುಡ್​​ನಲ್ಲಿ ಈಗಾಗಲೇ ಕೆಲ ಸಿನಿಮಾ ಮತ್ತು ವೆಬ್ ಸರಣಿ ನಿರ್ದೇಶಿಸಿದ್ದಾರೆ. ಇದೀಗ ಬಾಲಿವುಡ್​ನ ದೊಡ್ಡ ಸ್ಟಾರ್ ನಟನ ಜೊತೆಗೆ ಕೆಲಸ ಮಾಡಲು ಮುಂದಾಗಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ರಾಜ್ ನಿಧಿಮೋರು ಅವರು ಈ ವಿಷಯ ಮಾತನಾಡಿದ್ದು, ಸಲ್ಮಾನ್ ಖಾನ್ ಹೆಸರು ನೇರವಾಗಿ ಹೇಳದೇ ಇದ್ದರೂ, ಪರೋಕ್ಷವಾಗಿ ತಾವು ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ರಾಜ್ ಮತ್ತು ಡಿಕೆ ಒಟ್ಟಾಗಿ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

ರಾಜ್ ಮತ್ತು ಡಿ.ಕೆ ಕಳೆದ ಕೆಲವು ವರ್ಷಗಳಿಂದ ‘ದಿ ಫ್ಯಾಮಿಲಿ ಮ್ಯಾನ್’, ‘ಫರ್ಜಿ’, ‘ಗನ್ಸ್ ಅಂಡ್ ಗುಲಾಬ್ಸ್’ ಮತ್ತು ‘ಸಿಟಾಡೆಲ್: ಹನಿ ಬನ್ನಿ’ ಅಂತಹ ಬ್ಲಾಕ್‌ಬಸ್ಟರ್ ಸರಣಿಗಳೊಂದಿಗೆ ಡಿಜಿಟಲ್ ಲೋಕದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಆದರೆ ಈಗ ಮತ್ತೆ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಅದೂ ಈ ಬಾರಿ ಅವರು ಭಾರಿ ಬಜೆಟ್​ನ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ಸಹಜವಾಗಿಯೇ ಸಿನಿಮಾ ಪ್ರೇಮಿಗಳಲ್ಲಿ ಇದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?

ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜ್ ನಿದಿಮೋರು, ‘ಒಬ್ಬ ದೊಡ್ಡ ನಟನೊಂದಿಗೆ ತಾವು ಕೈಜೋಡಿಸುತ್ತಿರುವುದಾಗಿ ಹೇಳಿದ್ದಾರೆ. ಒಂದು ಹಾಲಿವುಡ್ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪ್ರಾರಂಭವಾಗಿವೆ, ಮತ್ತು ಅದು ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ. ಮತ್ತೊಂದು ಸರಣಿಯು ಅಭಿವೃದ್ಧಿ ಹಂತದಲ್ಲಿದೆ. ನಮ್ಮ ಹಿಂದಿ ಚಲನಚಿತ್ರದ ನಿರ್ಮಾಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ’ ಎಂದು ತಿಳಿಸಿದರು.

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರೊಂದಿಗೆ ರಾಜ್ ಮತ್ತು ಡಿಕೆ ಸಿನಿಮಾ ಮಾಡುವುದಾಗಿ ಈ ಹಿಂದೆಯೇ ಸುದ್ದಿಗಳು ಹರಿದಾಡಿದ್ದವು. ಪ್ರಸ್ತುತ ಪ್ರಿ-ವಿಶುವಲೈಸೇಶನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡ ನಂತರ, ಅಕ್ಟೋಬರ್ 2026 ರ ವೇಳೆಗೆ ಚಿತ್ರೀಕರಣವನ್ನು ಪ್ರಾರಂಭಿಸಲಾಗುವುದಂತೆ. ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ರಾಜ್ ಅವರ ಪತ್ನಿ ಹಾಗೂ ನಟಿ ಸಮಂತಾ ರುತ್ ಪ್ರಭು ಅವರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ಇತಿಹಾಸ… ಒಂದೇ ದಿನ 4 ಪಂದ್ಯಗಳು ಡ್ರಾ..!

Source link

ಭ್ರಷ್ಟಾಚಾರ ನಿರ್ಮೂಲನೆ, ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ – Kannada News | Mohandas Pai Urges CM D.K. Shivakumar to Tackle Corruption, Accelerate Bengaluru’s Development

ಬೆಂಗಳೂರು, ಜೂನ್​​ 16:  ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವಂತೆ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಗಮನ ಹರಿಸುವಂತೆ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಸಲಹೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರು ತಮ್ಮ ಮಾರ್ಗದರ್ಶಕರಾದ ಎಸ್.ಎಂ. ಕೃಷ್ಣ ಅವರಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಿ ಬೆಂಗಳೂರಿನ ಹೆಸರನ್ನು ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಎತ್ತಿ ಹಿಡಿಯಬೇಕು ಎಂದವರು ಆಶಿಸಿದ್ದಾರೆ. ಭ್ರಷ್ಟಾಚಾರದಿಂದಾಗಿ ನಗರದ ರಸ್ತೆಗಳು ಹಾಳಾಗಿವೆ, ಫುಟ್‌ಪಾತ್‌ಗಳಿಲ್ಲ, ದುಡ್ಡು ತಿನ್ನುವ ಕೆಲಸ ನಡೆಯುತ್ತಿದೆ ಎಂದು ಪೈ ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಷೇರುಪೇಟೆಯಲ್ಲಿ ಧೂಳೆಬ್ಬಿಸುತ್ತಿರುವ ಸ್ಪೇಸ್​ಎಕ್ಸ್; ಇಲಾನ್ ಮಸ್ಕ್ ಒಂದು ದಿನದಲ್ಲಿ ಗಳಿಸಿದ ಸಂಪತ್ತು ವಾರನ್ ಬಫೆಟ್​ನ ಒಟ್ಟೂ ಸಂಪತ್ತಿಗೆ ಸಮ – Kannada News | SpaceX Soars: Elon Musk Becomes First Trillionaire as Market Value Hits $3T

ವಾಷಿಂಗ್ಟನ್, ಜೂನ್ 16: ಇಲಾನ್ ಮಸ್ಕ್ ಅವರ ಸ್ಪೇಸ್-ಎಕ್ಸ್ (SpaceX) ಕಂಪನಿ ಷೇರು ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ ಅದು ಟಾಪ್-5 ಲಿಸ್ಟೆಡ್ ಕಂಪನಿಗಳ ಪಟ್ಟಿಗೆ ಜಂಪ್ ಮಾಡಿದೆ. ಐಪಿಒದಲ್ಲಿ ದಾಖಲೆಯ 137 ಡಾಲರ್ ಬೆಲೆಯಲ್ಲಿ ಮಾರುಕಟ್ಟೆಗೆ ಪದಾರ್ಪಣೆ ಮಾಡಿದ ಸ್ಪೇಸ್ ಎಕ್ಸ್ ಇದೀಗ 192 ಡಾಲರ್ ಬೆಲೆ ಪಡೆದಿದೆ. ಅದರ ಮಾರುಕಟ್ಟೆ ಸಂಪತ್ತು (Market Capital) 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಮಾರುಕಟ್ಟೆಯ ಬ್ಲಾಕ್​ಬಸ್ಟರ್ ಕಂಪನಿಗಳಾದ ಎನ್​ವಿಡಿಯಾ (Nvidia), ಗೂಗಲ್, ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ನಂತರದ ಸ್ಥಾನಕ್ಕೆ ಸ್ಪೇಸ್ ಎಕ್ಸ್ ಏರಿದೆ.

ಮಾರುಕಟ್ಟೆ ಮೌಲ್ಯವು ಭಾರೀ ಏರಿಕೆ ಕಂಡಿದ್ದು, ಈಗ ಅದು ಮೈಕ್ರೋಸಾಫ್ಟ್ ಕಂಪನಿಯ ಮೌಲ್ಯಕ್ಕೆ ಸನಿಹಕ್ಕೆ ಬಂದಿದೆ. ಈ ಬೆಳವಣಿಗೆಯಿಂದಾಗಿ ಮಸ್ಕ್ ಅವರ ಸಂಪತ್ತಿನಲ್ಲಿ ಒಂದೇ ದಿನದಲ್ಲಿ ಆದ ಹೆಚ್ಚಳವು ಬಿಲ್ ಗೇಟ್ಸ್ ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ ಎಂದು ವರದಿಯಾಗಿದೆ. ಸ್ಪೇಸ್ ಎಕ್ಸ್ ಭರ್ಜರಿ ಪದಾರ್ಪಣೆ ಬೆನ್ನಲ್ಲೇ ಇಲಾನ್ ಮಸ್ಕ್ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎನಿಸಿದ್ದಾರೆ.

ಇದನ್ನೂ ಓದಿ: ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ರಫ್ತು ಸುಂಕ ಹೆಚ್ಚಳ; ಪೆಟ್ರೋಲ್ ರೀಟೇಲ್ ಬೆಲೆ ಮೇಲೆ ಪರಿಣಾಮ ಬೀರುತ್ತಾ?

ಸ್ಪೇಸ್‌ಎಕ್ಸ್‌ನ ಮೌಲ್ಯವು ಗಣನೀಯವಾಗಿ ಹೆಚ್ಚಾಗಿದ್ದು, ಇದು ಜಾಗತಿಕ ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ ಮಾರುಕಟ್ಟೆ ಮೌಲ್ಯವನ್ನು ಮೀರಿಸುವ ಹಂತದಲ್ಲಿದೆ. ಇದು ಬಾಹ್ಯಾಕಾಶ ಉದ್ಯಮದಲ್ಲಿ ಸ್ಪೇಸ್‌ಎಕ್ಸ್‌ನ ಬಲವನ್ನು ತೋರಿಸುತ್ತದೆ. ಈ ಕಂಪನಿಯ ಮೌಲ್ಯ ಹೆಚ್ಚಾದ ಪರಿಣಾಮ, ಇಲಾನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು ಒಂದೇ ದಿನದಲ್ಲಿ ಅಸಾಧಾರಣ ಮಟ್ಟದಲ್ಲಿ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಮಸ್ಕ್ ಅವರ ಸಂಪತ್ತಿಗೆ ಸೇರ್ಪಡೆಯಾದ ಮೊತ್ತವು ಎಷ್ಟಿದೆಯೆಂದರೆ, ಅದು ಮೈಕ್ರೋಸಾಫ್ಟ್‌ನ ಸಹ-ಸ್ಥಾಪಕರಾದ ಬಿಲ್ ಗೇಟ್ಸ್ ಅವರ ಒಟ್ಟು ಸಂಪತ್ತಿಗಿಂತಲೂ ಹೆಚ್ಚಾಗಿದೆ. ವರದಿಗಳ ಪ್ರಕಾರ, ಇಲಾನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು ಒಂದು ದಿನದಲ್ಲಿ 165 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ ಆಗಿದೆ. ವಾರನ್ ಬಫೆಟ್, ಬಿಲ್ ಗೇಟ್ಸ್ ಅವರಂತಹ ಗಣ್ಯರ ಒಟ್ಟಾರೆ ಸಂಪತ್ತಿಗಿಂತ ಇದು ಹೆಚ್ಚು. ಭಾರತದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ಒಟ್ಟಾರೆ ಆಸ್ತಿಯನ್ನು ಸೇರಿಸಿದರೂ ಇಲಾನ್ ಮಸ್ಕ್ ಅವರ ಒಂದು ದಿನದ ಸಂಪತ್ತು ಹೆಚ್ಚಳಕ್ಕೆ ಸಮವಾಗಿಲ್ಲ ಎನ್ನುವುದು ಗಮನಾರ್ಹ.

ಇದನ್ನೂ ಓದಿ: ಇರಾನ್-ಅಮೆರಿಕ ಶಾಂತಿ ಒಪ್ಪಂದವು ಭಾರತಕ್ಕೆ ಖುಷಿ ವಿಚಾರವಲ್ಲ: ಮಾಜಿ ಇಸ್ರೇಲ್ ವಕ್ತಾರರ ಎಚ್ಚರಿಕೆ

ಫೋರ್ಬ್ಸ್ ಬಿಲಿಯನೇರ್ ಇಂಡೆಕ್ಸ್ ಪಟ್ಟಿ ಪ್ರಕಾರ, ಇಲಾನ್ ಮಸ್ಕ್ ಅವರ ವೈಯಕ್ತಿಕ ನಿವ್ವಳ ಆಸ್ತಿ ಮೌಲ್ಯ 1.3 ಟ್ರಿಲಿಯನ್ ಡಾಲರ್ ಇದೆ. ಇದರಲ್ಲಿ ಹೆಚ್ಚಿನ ಭಾಗವು ಸ್ಪೇಸ್​ಎಕ್ಸ್ ಷೇರು ಒಡೆತನದಿಂದ ಬಂದಿರುವಂಥದ್ದು. ಬಾಹ್ಯಾಕಾಶ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನ ಮತ್ತು ಸ್ಪೇಸ್‌ಎಕ್ಸ್‌ನ ಯಶಸ್ಸು ಹೂಡಿಕೆದಾರರಲ್ಲಿ ಭರವಸೆ ಮೂಡಿಸಿರುವುದರಿಂದ ಕಂಪನಿಯ ಮೌಲ್ಯದಲ್ಲಿ ಈ ಮಟ್ಟದ ಏರಿಕೆ ಕಂಡುಬಂದಿದೆ. ಇದರೊಟ್ಟಿಗೆ ಮಸ್ಕ್ ಅವರ ಸಿರಿತನವೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ಜೀವ ತುಂಬಲು ಯತ್ನಿಸುತ್ತಿರುವ ತಾಯಿ ಮಂಗ – Kannada News | Emotional Scene Captured as Mother Monkey Refuses to Leave Her Lifeless Infant

ಔರೈಯಾ, ಜೂನ್ 16: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ತಾಯಿ ಮಂಗ ಜೀವ ತುಂಬಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ. ಮರಿಯನ್ನು ಬಿಗಿಯಾಗಿ ಅಪ್ಪಿಕೊಂಡಿರುವ ಕೋತಿ(Monkey) ಸತ್ತ ಪರಿಯನ್ನು ಬಿಟ್ಟು ಹೋಗುಲು ಸಿದ್ಧಳಿಲ್ಲ. ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಹೆಣ್ಣು ಕೋತಿಯು ತನ್ನ ಸತ್ತ ಮರಿಯ ದೇಹವನ್ನು ಎದೆಯ ಮೇಲೆ ಮಲಗಿಸಿಕೊಂಡಿರುವುದು ಕಂಡುಬಂದಿದೆ.

ಆ ಮರಿಗೆ ಮತ್ತೆ ಜೀವ ಬರಬಹುದು ಎಂಬ ಆಶಯದಿಂದ ತಾಯಿ ಮಂಗವು ಪದೇ ಪದೇ ಮರಿಯ ಮುಖಕ್ಕೆ ಮುತ್ತಿಡುತ್ತಾ, ಅದನ್ನು ನೆಕ್ಕುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದೆ. ಮರಿ ಕೋತಿಯು ಹೇಗೆ ಸಾವನ್ನಪ್ಪಿದೆ ಎಂಬುದು ತಿಳಿದುಬಂದಿಲ್ಲವಾದರೂ, ತಾಯಿಯ ಈ ತವಕ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

ವಿಡಿಯೋ

ಉಮೇಶ್ ಅವಸ್ಥಿ ಎಂಬ ಬಳಕೆದಾರರು ಈ ವಿಡಿಯೋವನ್ನು ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಾಯಿಯ ವಾತ್ಸಲ್ಯ ಮತ್ತು ಅಗಲಿಕೆಯ ನೋವು ಕೇವಲ ಮನುಷ್ಯರಿಗಷ್ಟೇ ಅಲ್ಲ, ಜಗತ್ತಿನ ಎಲ್ಲಾ ಜೀವಿಗಳಿಗೂ ಒಂದೇ ಆಗಿರುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಈ ವೀಡಿಯೋ ಪ್ರಾಣಿ ಪ್ರಪಂಚದಲ್ಲಿರುವ ತಾಯ್ತನದ ನೈಜ ಪ್ರವೃತ್ತಿಯನ್ನು ಜಗತ್ತಿಗೆ ಪರಿಚಯಿಸಿದೆ. ಯಾವುದೇ ಪ್ರಾಣಿಯಾದರೂ ಹೆತ್ತ ಕರುಳಿನ ಬಾಂಧವ್ಯ ಎಷ್ಟು ಪವಿತ್ರ ಮತ್ತು ಸಾರ್ವತ್ರಿಕ ಎಂಬುದನ್ನು ಈ ವಿಡಿಯೋ ಎಲ್ಲರಿಗೂ ನೆನಪಿಸುವಂತಿದೆ.

ಇತ್ತೀಚೆಗಷ್ಟೇ ಕೋತಿಯೊಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗಿ 15 ನಿಮಿಷಗಳ ಕಾಲ ಮರದ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಮೆಟ್ರೋ ನಿಲ್ದಾಣವೊಂದರಲ್ಲಿ ಕೋತಿಯೊಂದು ತನ್ನ ಮರಿಯ ಅವಶೇಷಗಳನ್ನು ಹಿಡಿದುಕೊಂಡು ಅದಿನ್ನು ಬದುಕಿದೆ ಎಂಬ ಭ್ರಮೆಯಲ್ಲಿದ್ದ ವಿಡಿಯೋ ಕೂಡ ಕಾಣಿಸಿಕೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸುರ್ಜೇವಾಲ ಸಂಧಾನ ಸಕ್ಸಸ್​​: 13 ದಿನಗಳ ನಂತರ ಖಾತೆ ವಹಿಸಿಕೊಂಡ ಕೃಷ್ಣ ಭೈರೇಗೌಡ – Kannada News | Minister Krishna Byre Gowda Takes Charge of Bengaluru Urban Development, Chairs GBA Meeting.

ಬೆಂಗಳೂರು, ಜೂನ್​​ 16: 13 ದಿನಗಳ ಅಸಮಾಧಾನದ ನಂತರ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅವರು ಬೇಸರಗೊಂಡಿದ್ದರು. ಆದರೆ ಸಚಿವರ ಮುನಿಸನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿಯಾಗಿರುವ ಸುರ್ಜೇವಾಲ ತಣಿಸಿದ್ದಾರೆ. ಈ ಬೆನ್ನಲ್ಲೇ ಜಿಬಿಎ ಕೇಂದ್ರ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿಯೇ ಮೊದಲ ಸಭೆಯನ್ನು ಸಚಿವ ಕೃಷ್ಣ ಭೈರೇಗೌಡ ನಡೆಸಿದ್ದಾರೆ. ಈ ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರಿನ ಐದು ಪಾಲಿಕೆಗಳ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ – Kannada News | Bengaluru Drug Bust: Rs 5.67 Crore Hydro Ganja and Cocaine Seized in Three Separate Raids; Ugandan Woman Arrested

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.77 ಕೋಟಿ ರೂ. ಮೌಲ್ಯದ ಗಾಂಜಾ ಸೀಜ್Image Credit source: tv9

ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ (Bengaluru) ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5.67 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಕೊಕೇನ್ ಜಪ್ತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮತ್ತು ಅಂತರರಾಜ್ಯ ಡ್ರಗ್ಸ್ ಡೀಲಿಂಗ್‌ನಲ್ಲಿ ತೊಡಗಿದ್ದ ಉಗಾಂಡಾ ಮೂಲದ ಮಹಿಳಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಮಾದಕ ದ್ರವ್ಯ ಜಪ್ತಿ.
  • ಉಗಾಂಡಾ ಮಹಿಳೆ ಸೇರಿ ಮೂವರು ಪೆಡ್ಲರ್‌ಗಳ ಸೆರೆ.
  • ಬ್ಯಾಂಕಾಕ್ ಮತ್ತು ನಾಸಿಕ್‌ನಿಂದ ಸರಬರಾಜಾಗುತ್ತಿದ್ದ ಡ್ರಗ್ಸ್.

ಹೆಬ್ಬಾಳದಲ್ಲಿ 2.20 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಸೀಜ್

ನಗರದ ಹೆಬ್ಬಾಳ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಹೈಡ್ರೋ ಗಾಂಜಾ ಡೀಲಿಂಗ್‌ನಲ್ಲಿ ನಿರತನಾಗಿದ್ದ ಹಳೆ ಆರೋಪಿ ಇಮ್ರಾನ್ ಪಾಷಾ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 2.20 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 180 ಗ್ರಾಂ ತೂಕದ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇಮ್ರಾನ್ ಈ ಮಾದಕ ವಸ್ತುವನ್ನು ಮಹಾರಾಷ್ಟ್ರದ ನಾಸಿಕ್‌ನಿಂದ ಬೆಂಗಳೂರಿಗೆ ತರುತ್ತಿದ್ದ ಎನ್ನಲಾಗಿದ್ದು, ಈತನ ಮೇಲೆ ಈಗಾಗಲೇ ನಗರದ ಬೇರೆ ಬೇರೆ ಪೊಲೀಸ್ ಸ್ಟೇಷನ್‌ಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.77 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕನೊಬ್ಬನ ಲಗೇಜ್ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದಾಗ 2.77 ಕೋಟಿ ರೂಪಾಯಿ ಮೌಲ್ಯದ 7.92 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಅಧಿಕಾರಿಗಳು ಗಾಂಜಾವನ್ನು ಜಪ್ತಿ ಮಾಡಿ, ಪ್ರಯಾಣಿಕನನ್ನು ವಶಕ್ಕೆ ಪಡೆದು ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಸಿಸಿಬಿ ಬಲೆಯಲ್ಲಿ ಉಗಾಂಡಾ ಮೂಲದ ಮಹಿಳಾ ಪೆಡ್ಲರ್

ಮತ್ತೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಚಿಕ್ಕಬಾಣಾವರದಲ್ಲಿ ದಾಳಿ ನಡೆಸಿ 70.50 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ. ಉಗಾಂಡಾ ಮೂಲದ ಮಹಿಳಾ ಡ್ರಗ್ ಪೆಡ್ಲರ್ ಜನತ್ ಮತ್ತು ಡ್ರಗ್ಸ್ ರಿಸೀವರ್ ವಾಹಬ್ ಎಲ್ವಿಸ್ ಯುನಿಸ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ

ಆರೋಪಿ ವಾಹಬ್ ಯಶವಂತಪುರ ಮತ್ತು ಗೊರಗುಂಟೆಪಾಳ್ಯ ಸುತ್ತಮುತ್ತ ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದ. ಬಂಧಿತ ಮಹಿಳೆ ಜನತ್ ಬಿಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ಪೆಡ್ಲಿಂಗ್ ದಂಧೆ ಆರಂಭಿಸಿದ್ದಳು. ಈಕೆ ಈ ಹಿಂದೆ ದೆಹಲಿಯಲ್ಲೂ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದು 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಳು ಎಂಬುದು ಬೆಳಕಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಮಂತಾ ಹೂಡಿಕೆ ಮಾಡಿರುವ ಉದ್ಯಮಗಳ ಸಂಪೂರ್ಣ ಮಾಹಿತಿ – Kannada News | Samantha Ruth Prabhu’s investments detail and their current situation

ಸಮಂತಾ (Samantha), ಸ್ಟಾರ್ ನಟಿ ಮಾತ್ರವಲ್ಲ ಒಳ್ಳೆಯ ಉದ್ಯಮಿಯೂ ಸಹ. ಕಳೆದ ಐದಾರು ವರ್ಷಗಳಲ್ಲಿ ಅವರು ಒಂದರ ಹಿಂದೆ ಒಂದರಂತೆ ಹಲವು ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆ ಆಗುತ್ತಿದೆ. ಕೆಲ ತಿಂಗಳ ಹಿಂದೆ ಸಮಂತಾ ಪಾಲ್ಗೊಂಡಿದ್ದ ಸಂದರ್ಶನವೊಂದರಲ್ಲಿ ತಮ್ಮ ಉದ್ಯಮಗಳ ಬಗ್ಗೆ ವಿವರವಾಗಿ ಮಾತನಾಡಿದ್ದರು. ಉದ್ಯಮಗಳನ್ನು ಆರಂಭಿಸಿದ್ದು ಯಾವಾಗ ಮತ್ತು ಅವು ಹೇಗೆ ನಡೆಯುತ್ತಿವೆ ಎಂಬಿತ್ಯಾದಿ ವಿವರಗಳನ್ನು ಸಮಂತಾ ಋತ್ ಪ್ರಭು ಹಂಚಿಕೊಂಡಿದ್ದರು.

ಸಮಂತಾ ಅವರು ‘ಸಾಖಿ’ ಹೆಸರಿನ ಉಡುಪು ಬ್ರ್ಯಾಂಡ್​​ನಲ್ಲಿ ಕೋವಿಡ್ ಪ್ರಾರಂಭಕ್ಕೆ ಕೆಲ ತಿಂಗಳುಗಳ ಹಿಂದೆಯೇ ಹೂಡಿಕೆ ಮಾಡಿದರು. ಅವರೇ ಹೇಳಿಕೊಂಡಿರುವಂತೆ ಅದು ಅವರ ಮೊದಲ ಗಂಭೀರ ಹೂಡಿಕೆ. ಸ್ವಂತ ಹಣವನ್ನು ಆ ಉದ್ಯಮದಲ್ಲಿ ಅವರು ತೊಡಗಿಸಿದರಂತೆ. ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದರೂ ಬಳಿಕ ಅದು ಲಾಭದ ಕಡೆಗೆ ಸಾಗಿತಂತೆ. ಈಗಲೂ ಅದು ಚೆನ್ನಾಗಿ ನಡೆಯುತ್ತಿದೆ ಎಂದಿದ್ದಾರೆ ಸಮಂತಾ.

ಸಮಂತಾ ಸೆಲೆಬ್ರಿಟಿ ಆಗಿದ್ದರೂ ಅವರು ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ ಮಾಡಿದ್ದಾರೆ. ಏಕಂ ಲರ್ನಿಂಗ್ ಸೆಂಟರ್ ಹೆಸರಿನ ಟ್ರೈನಿಂಗ್ ಉದ್ಯಮದಲ್ಲಿ ಅವರು ಪಾಲುದಾರರು. ಸಮಂತಾ ಹೇಳಿರುವಂತೆ ಅವರ ತಾಯಿ ಶಿಕ್ಷಕಿ ಆಗಿದ್ದರಂತೆ ಹಾಗಾಗಿ ಶಿಕ್ಷಣದ ಮೇಲೆ ಅವರಿಗೆ ಮೊದಲಿನಿಂದಲೂ ಆಸಕ್ತಿ ಹಾಗಾಗಿ ಅವರು ಏಕಂನಲ್ಲಿ ಹೂಡಿಕೆ ಮಾಡಿದರಂತೆ.

ಇದನ್ನೂ ಓದಿ:‘ಮಾ ಇಂಟಿ ಬಂಗಾರಂ’: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಮಂತಾ

ಅರ್ಬನ್ ಕಿಸಾನ್ ಹೆಸರಿನ ಸಂಸ್ಥೆಯಲ್ಲಿ ಸಮಂತಾ ಹೂಡಿಕೆ ಮಾಡಿದ್ದಾರೆ. ಇದು ಅಪಾರ್ಟ್​​ಮೆಂಟ್​​ಗಳಲ್ಲಿ ಅಥವಾ ನಗರ ಪ್ರದೇಶದ ಕಡಿಮೆ ಸ್ಥಳದಲ್ಲಿ ತರಕಾರಿ ಇನ್ನಿತರೆ ಪದಾರ್ಥಗಳನ್ನು ಬೆಳೆಸುವ ಹಾಗೂ ಬೆಳೆಯುವುದನ್ನು ಹೇಳಿಕೊಡುವ ಸಂಸ್ಥೆಯಾಗಿದೆ. ಕೋವಿಡ್ ಸಮಯದಲ್ಲಿ ಈ ಸಂಸ್ಥೆಯಲ್ಲಿ ಸಮಂತಾ ಹೂಡಿಕೆ ಮಾಡಿದ್ದು, ಈ ಸಂಸ್ಥೆ ಇದೇ ವರ್ಷ ತನ್ನ ಐಪಿಓ ಸಹ ಬಿಡುಗಡೆ ಮಾಡಲಿದೆಯಂತೆ.

ಸೀಕ್ರೆಟ್ ಅಲ್ಕೆಮಿಸ್ಟ್ ಎಂಬ ಸಂಸ್ಥೆಯಲ್ಲಿಯೂ ಸಮಂತಾ ಹೂಡಿಕೆ ಮಾಡಿದ್ದಾರೆ. ಸಮಂತಾ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದಾಗ ಅವರು ವಿದೇಶಗಳಿಗೆ ಚಿಕಿತ್ಸೆಗೆ ಹೋದಾಗ ಅಲ್ಲೆಲ್ಲ ಅರೋಮಾ ಥೆರಪಿ ಬಳಸುತ್ತಿದ್ದಿದ್ದನ್ನು ಗಮನಿಸಿದರಂತೆ. ಭಾರತದಲ್ಲಿ ಇದರ ಬಗ್ಗೆ ಹೆಚ್ಚು ಮಾಹಿತಿ, ಜಾಗೃತಿ ಇಲ್ಲವೆಂದು ತಿಳಿದು ಆ ಸಂಸ್ಥೆಯ ಮೇಲೆ ನಟಿ ಸಮಂತಾ ಹೂಡಿಕೆ ಮಾಡಿದ್ದಾರೆ.

ಚೆನ್ನೈ ಸೂಪರ್ ಚಾಂಪ್ಸ್ ಹೆಸರಿನ ಪಿಕಲ್ ಬಾಲ್ ತಂಡವನ್ನು ಸಮಂತಾ ಖರೀದಿಸಿದ್ದಾರೆ. ಪಿಕಲ್ ಬಾಲ್​​ ಕ್ರೀಡೆಯ ಮೇಲೆ ಸಾಕಷ್ಟು ಹೂಡಿಕೆ ಮಾಡಿರುವ ಸಮಂತಾ. ಆಟವನ್ನು ಹೆಚ್ಚು ಪ್ರಮೋಟ್ ಮಾಡುತ್ತಿದ್ದಾರೆ. ಸ್ವಂತ ತಂಡವನ್ನೂ ಹೊಂದಿದ್ದಾರೆ. ಇದರ ಜೊತೆಗೆ ‘ಟೇಕ್ 20’ ಹೆಸರಿನ ಯೂಟ್ಯೂಬ್ ಚಾನೆಲ್ ಹೋಂದಿರುವ ಸಮಂತಾ, ಅಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ 20 ನಿಮಿಷಗಳ ಕಂಟೆಂಟ್ ಅಪ್​​ಲೋಡ್ ಮಾಡುತ್ತಿರುತ್ತಾರೆ.

ಟ್ರಾಲಾಲಾ ಪ್ರೊಡಕ್ಷನ್ ಹೌಸ್ ಅನ್ನು ಸಹ ಸಮಂತಾ ಪ್ರಾರಂಭಿಸಿದ್ದು, ಆ ಪ್ರೊಡಕ್ಷನ್ ಹೌಸ್ ಮೂಲಕ ‘ಶುಭಂ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಅದು ಅವರ ಮೊದಲ ನಿರ್ಮಾಣದ ಸಿನಿಮಾ ಆಗಿತ್ತು. ಈಗ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನೂ ಸಹ ಅದೇ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಪ್ರತ್ಯುಷಾ ಫೌಂಡೇಶನ್ ಅನ್ನು ಸಮಂತಾ ಅವರು 2012-13 ರಲ್ಲಿ ಪ್ರಾರಂಭಿಸಿದರಂತೆ. ಅನಾಥ ಮಕ್ಕಳು ಮತ್ತು ಮಹಿಳೆಯರ ಪೋಷಣೆಗಾಗಿ ಈ ಫೌಂಡೇಶನ್ ಅನ್ನು ಸಮಂತಾ ಪ್ರಾರಂಭಿಸಿದರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link