All posts by nagaraj11081993

Weekly Job Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Job Prospects Weekly Horoscope January 11 17, 2026: Challenges and Opportunities

11-01-2026ರಿಂದ 17-01-2026ರವರಗೆ ಉದ್ಯೋಗದಲ್ಲಿ ನಾನಾ ಬಗೆಯ ವಿಷಮತೆಗಳು ಕಂಡುಬಂದರೂ ಅಂತ್ಯದಲ್ಲಿ ಸಮತ್ವ ಉಂಟಾಗಲಿದೆ.‌ ನಿರುದ್ಯೋಗಿಗಳಿಗೆ ಅವರಿಗೆ ಬೇಕಾದ ಕೆಲಸವಿಲ್ಲ ಎಂಬ ಬೇಸರವೇ ಅಧಿಕ. ನಿಮ್ಮ ಮನಸ್ಸಿನ ಮೇಲೆ ಈ ವಾರ ಹೆಚ್ಚು ಪರಿಣಾಮಕಾರಿಯಾದ ಪ್ರಭಾವ ಬೀರಲಿದೆ.

ಮೇಷ ರಾಶಿ:

ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಹೊಣೆಗಾರಿಕೆಗಳಿಂದ ಮೆಚ್ಚುಗೆ ಸಿಗುತ್ತದೆ, ನಿರುದ್ಯೋಗಿಗಳಿಗೆ ಅವಕಾಶ ಸೂಚನೆ ಇದ್ದರೂ ಆತುರದ ನಿರ್ಧಾರ ಮತ್ತು ಅಸಮಾಧಾನ ಪ್ರಗತಿಯನ್ನು ಸ್ವಲ್ಪ ತಡೆಯಬಹುದು.

ವೃಷಭ ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸ್ಥಿರತೆ ಹಾಗೂ ಆದಾಯ ವೃದ್ಧಿಯ ಸೂಚನೆ, ನಿರುದ್ಯೋಗಿಗಳಿಗೆ ಸಹಾಯ ಸಿಗಬಹುದು, ಆದರೆ ನಿಧಾನಗತಿ ಮತ್ತು ಬದಲಾವಣೆ ಭಯ ಅವಕಾಶಗಳನ್ನು ಕೈ ತಪ್ಪಿಸಬಹುದು.

ಮಿಥುನ ರಾಶಿ:

ಮೂರನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿರುವವರಿಗೆ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಸಂದರ್ಶನ ಯೋಗ ಇದ್ದರೂ ಏಕಾಗ್ರತೆಯ ಕೊರತೆ ಮತ್ತು ಗೊಂದಲ ಸಂಪೂರ್ಣ ಯಶಸ್ಸಿಗೆ ಅಡ್ಡಿಯಾಗಬಹುದು.

ಕರ್ಕಾಟಕ ರಾಶಿ:

ಚಂದ್ರನ ಆಧಿಪತ್ಯದ ಈ ರಾಶಿಯ ಉದ್ಯೋಗಸ್ಥರಿಗೆ ಅಧಿಕೃತ ಕೆಲಸಗಳಲ್ಲಿ ಅನುಕೂಲ, ನಿರುದ್ಯೋಗಿಗಳಿಗೆ ಪ್ರಯತ್ನ ಫಲ ನೀಡಬಹುದು, ಆದರೆ ಮಾತಿನ ಅಸಾವಧಾನತೆ ಮತ್ತು ಮನಸ್ತಾಪ ಮಾನಸಿಕ ಒತ್ತಡ ತರುತ್ತದೆ.

ಸಿಂಹ ರಾಶಿ:

ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ನಾಯಕತ್ವ ಮತ್ತು ಗೌರವ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇದ್ದರೂ ಅಹಂಕಾರ ಮತ್ತು ಇತರರ ಅಸೂಯೆ ವಿಳಂಬಕ್ಕೆ ಕಾರಣವಾಗಬಹುದು.

ಕನ್ಯಾ ರಾಶಿ:

ಈ ರಾಶಿಯರಿಗೆ ಎರಡನೇ ವಾರ ಉದ್ಯೋಗಸ್ಥರಿಗೆ ಶಿಸ್ತಿನ ಕೆಲಸದಿಂದ ಮೆಚ್ಚುಗೆ, ನಿರುದ್ಯೋಗಿಗಳಿಗೆ ಅವಕಾಶದ ಸೂಚನೆ ಇದ್ದರೂ ಅಧಿಕ ಒತ್ತಡ ಮತ್ತು ದಣಿವು ಉತ್ಸಾಹ ಕಡಿಮೆ ಮಾಡಬಹುದು.

ತುಲಾ ರಾಶಿ:

ಏಳನೇ ರಾಶಿಯವರಿಗೆ ಉದ್ಯೋಗದಲ್ಲಿರುವವರಿಗೆ ಹೊಸ ಒಪ್ಪಂದ ಲಾಭ, ನಿರುದ್ಯೋಗಿಗಳಿಗೆ ಪರಿಚಯದಿಂದ ಅವಕಾಶ ಸಿಗಬಹುದು, ಆದರೆ ನಿರ್ಧಾರದಲ್ಲಿ ಗೊಂದಲ ಮತ್ತು ವಿಳಂಬವು ಪ್ರಗತಿಯನ್ನು ಕುಗ್ಗಿಸುತ್ತದೆ.

ವೃಶ್ಚಿಕ ರಾಶಿ:

ಕುಜನ ಆಧಿಪತ್ಯದ ಈ ರಾಶಿಯವರಿಗೆ ಉದ್ಯೋಗಸ್ಥರಿಗೆ ಸ್ಪರ್ಧೆಯಲ್ಲಿ ಗೆಲುವು, ನಿರುದ್ಯೋಗಿಗಳಿಗೆ ಅವಕಾಶ ಕಾಣಿಸಿಕೊಳ್ಳಬಹುದು, ಆದರೆ ಶತ್ರುಕಾಟ ಮತ್ತು ರಹಸ್ಯ ವಿಚಾರಗಳು ಒತ್ತಡ ಹೆಚ್ಚಿಸಬಹುದು.

ಧನು ರಾಶಿ:

ಎರಡನೇ ವಾರ ಉದ್ಯೋಗದಲ್ಲಿರುವವರಿಗೆ ಬದಲಾವಣೆ ಅಥವಾ ವಿದೇಶ ಸಂಪರ್ಕ ಲಾಭ, ನಿರುದ್ಯೋಗಿಗಳಿಗೆ ಅವಕಾಶ ಇದ್ದರೂ ಅತಿಯಾದ ನಿರೀಕ್ಷೆ ಅಸ್ಥಿರತೆ ಉಂಟುಮಾಡಬಹುದು.

ಮಕರ ರಾಶಿ:

ಈ ವಾರ ಉದ್ಯೋಗಸ್ಥರಿಗೆ ಶ್ರಮದಿಂದ ಸ್ಥಾನಮಾನ ಹೆಚ್ಚಳ, ನಿರುದ್ಯೋಗಿಗಳಿಗೆ ನಿಧಾನವಾಗಿ ಅವಕಾಶ ಸಿಗುತ್ತದೆ, ಆದರೆ ಫಲ ತಡ ಮತ್ತು ಮಾನಸಿಕ ಒತ್ತಡ ಸಹನೆ ಪರೀಕ್ಷಿಸುತ್ತದೆ.

ಕುಂಭ ರಾಶಿ:

ಜನವರಿಯ ಈ ವಾರ ಉದ್ಯೋಗದಲ್ಲಿರುವವರಿಗೆ ತಾಂತ್ರಿಕ ಪ್ರಗತಿ, ನಿರುದ್ಯೋಗಿಗಳಿಗೆ ಹೊಸ ಆಲೋಚನೆಗಳಿಂದ ಅವಕಾಶ, ಆದರೆ ತಂಡದ ಅಸಮಂಜಸತೆ ಮತ್ತು ವಿಳಂಬ ಅಡ್ಡಿಯಾಗಬಹುದು.

ಮೀನು ರಾಶಿ:

ಈ ವಾರದಲ್ಲಿ ಉದ್ಯೋಗಸ್ಥರಿಗೆ ಸಮಸ್ಯೆ ಪರಿಹಾರ, ನಿರುದ್ಯೋಗಿಗಳಿಗೆ ಕೆಲಸದ ಸೂಚನೆ ಕಂಡರೂ ಆತ್ಮವಿಶ್ವಾಸ ಕೊರತೆ ಮತ್ತು ನಿರ್ಧಾರ ವಿಳಂಬ ಪ್ರಗತಿಯನ್ನು ನಿಧಾನಗೊಳಿಸಬಹುದು.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ – Kannada News | Bengaluru–Hosur National Highway Traffic Jam for Kilometres, Ambulance Stuck and Patient Suffers

ಆನೇಕಲ್, ಜನವರಿ 9: ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಚಂದಾಪುರದಿಂದ ಅತ್ತಿಬೆಲೆವರೆಗೆ ಸುಮಾರು ನಾಲ್ಕೈದು ಕಿಲೋಮೀಟರ್‌ಗಳಷ್ಟು ದೂರ ವಾಹನಗಳು ಸರಿಯದೇ ನಿಂತಿದ್ದು, ಹೆದ್ದಾರಿ ಸಂಪೂರ್ಣವಾಗಿ ಸ್ಥಬ್ಧಗೊಂಡಿತ್ತು. ಟ್ರಾಫಿಕ್ ಜಾಮ್ ಮಧ್ಯೆ ಆ್ಯಂಬುಲೆನ್ಸ್ ಸಿಲುಕಿ, ರೋಗಿಯೊಬ್ಬರು ನರಳಾಡುವಂತಾಯಿತು. ರೋಗಿಯನ್ನು ಬೇಗ ಆಸ್ಪತ್ರೆಗೆ ತಲುಪಿಸಲು ಆ್ಯಂಬುಲೆನ್ಸ್ ಚಾಲಕ ಸಾಕಷ್ಟು ಪ್ರಯತ್ನಪಟ್ಟರೂ, ವಾಹನಗಳ ದಟ್ಟಣೆಯಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ.

ಟ್ರಾಫಿಕ್ ಜಾಮ್‌ನ ಪರಿಣಾಮವಾಗಿ ಶಾಲೆ ಹಾಗೂ ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸಹ ತೀವ್ರ ತೊಂದರೆಗೆ ಒಳಗಾದರು. ಸಮಯಕ್ಕೆ ಶಾಲೆ–ಕಾಲೇಜು ತಲುಪಲು ಸಾಧ್ಯವಾಗದೆ, ಮಕ್ಕಳು ಮತ್ತು ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಕಳೆದ ಒಂದೂವರೆ ವರ್ಷದಿಂದ ಬೆಂಗಳೂರು–ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದೇ ನಿತ್ಯದ ಟ್ರಾಫಿಕ್ ಜಾಮ್‌ಗೆ ಪ್ರಮುಖ ಕಾರಣ ಎನ್ನಲಾಗಿದೆ. ಚಂದಾಪುರದಿಂದ ಅತ್ತಿಬೆಲೆವರೆಗೆ ಪ್ರತಿದಿನವೂ ಸಂಚಾರ ದುಸ್ಥರವಾಗುತ್ತಿದ್ದು, ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ರಾಜಾ ಸಾಬ್’ ಪ್ರೀಮಿಯರ್ ಶೋ: ಚಿತ್ರಮಂದಿರದಲ್ಲಿ ಪ್ರಭಾಸ್ ಫ್ಯಾನ್ಸ್ ಗಲಾಟೆ – Kannada News | Prabhas fans creates rucks in theaters on The Raja Saab premier show

ಪ್ರಭಾಸ್ (Prabhas) ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾದ ಪ್ರೀಮಿಯರ್ ಶೋಗಳು ನಿನ್ನಿ (ಜನವರಿ 08) ರಾತ್ರಿ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಪ್ರದರ್ಶನವಾಗಿವೆ. ಆದರೆ ತೆಲಂಗಾಣ ನ್ಯಾಯಾಲಯದಿಂದ ವಿಶೇಷ ಶೋ ಮತ್ತು ಟಿಕೆಟ್ ಹೆಚ್ಚಳಕ್ಕೆ ಅನುಮತಿ ಪಡೆಯಬೇಕಿದ್ದ ಕಾರಣದಿಂದಾಗಿ ಸಿನಿಮಾದ ಪ್ರೀಮಿಯರ್ ಶೋಗ ಟಿಕೆಟ್​​ಗಳನ್ನು ಕೊನೆಯ ಹಂತದಲ್ಲಿ ಬಿಡುಗಡೆ ಮಾಡಲಾಯ್ತು. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಯ್ತು. ಇದೇ ಕಾರಣಕ್ಕೆ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶನವಾದ ಕೆಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಗಲಾಟೆ ಮಾಡಿದ್ದು, ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀಮಿಯರ್ ಶೋ ಮತ್ತು ಟಿಕೆಟ್ ಹೆಚ್ಚಳಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ತೆಲಂಗಾಣದಲ್ಲಿ ಅದರಲ್ಲೂ ವಿಶೇಷವಾಗಿ ಹೈದರಾಬಾದ್​​ನಲ್ಲಿ ಕೆಲವು ಚಿತ್ರಮಂದಿರಗಳಲ್ಲಿ ಬಹಳ ತಡವಾಗಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಯ್ತು. ಇದರಿಂದಾಗಿ ಸಾಕಷ್ಟು ಗೊಂದಲ ಉಂಟಾಗಿದೆ.

ಹೈದರಾಬಾದ್​​ನ ವಿಮಲ್ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅಭಿಮಾನಿಗಳು ಗುರುವಾರ ರಾತ್ರಿ ದಾಂಧಲೆ ನಡೆಸಿದ್ದು, ಚಿತ್ರಮಂದಿರದ ಗಾಜುಗಳನ್ನು ಒಡೆದಿದ್ದಾರೆ. ವಿಮಲ್ ಚಿತ್ರಮಂದಿರದಲ್ಲಿ ಶೋ ತಡವಾಗಿದ್ದಕ್ಕೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಹೈದರಾಬಾದ್​​ನ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿಯೂ ಸಹ ಪ್ರಭಾಸ್ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ವಿಮಲ್ ಚಿತ್ರಮಂದಿರದಲ್ಲಿ ಪೊಲೀಸರು ಲಾಠಿಚಾರ್ಜ್ ಸಹ ಮಾಡಿದ್ದಾರೆ. ಕೆಲವು ಅಭಿಮಾನಿಗಳು, ಪೊಲೀಸರಿಂದ ಲಾಠಿ ಕಿತ್ತುಕೊಂಡು ಅವರ ಮೇಲೆಯೇ ದಾಳಿ ಮಾಡಿರುವ ವಿಡಿಯೋಗಳು ಹರಿದಾಡುತ್ತಿವೆ.

ಪ್ರಭಾಸ್ ನಟಿಸಿರುವ ‘ದಿ ರಾಜಾ ಸಾಬ್’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ರಿಧ್ಧಿ ಕುಮಾರ್, ಮಾಳವಿಕಾ ಮೋಹನನ್ ನಟಿಸಿದ್ದಾರೆ. ಬೊಮನ್ ಇರಾನಿ ಮತ್ತು ಸಂಜಯ್ ದತ್ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಾರುತಿ. ಬಹಳ ವರ್ಷಗಳ ಬಳಿಕ ಪ್ರಭಾಸ್ ಹಾಸ್ಯಕ್ಕೆ ಪ್ರಾಮುಖ್ಯತೆ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಜಯ; ಯುಎ ಪ್ರಮಾಣಪತ್ರ ನೀಡಲು ಕೋರ್ಟ್ ಆದೇಶ – Kannada News | Madras High court Order Censor Board to Grant UA Certificate To Jana Nayagan

ಸಂಕಷ್ಟದಲ್ಲಿದ್ದ ‘ಜನ ನಾಯಗನ್’ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾಗೆ ತಕ್ಷಣವೇ ಸೆನ್ಸಾರ್ ಪತ್ರ ನೀಡುವಂತೆ ಆದೇಶ ಹೊರಡಿಸಿದೆ. ಇದರಿಂದ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಸಿನಿಮಾನ ಯಾವಾಗ ರಿಲೀಸ್ ಮಾಡಬೇಕು ಎಂಬುದರ ಬಗ್ಗೆ ತಂಡ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಿನಿಮಾಗೆ ಸೆನ್ಸಾರ್ ಪತ್ರ ನೀಡದ ಬಗ್ಗೆ ಕೆವಿಎನ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆ ಮಾಡಿದರೂ ನಮಗೆ ಪ್ರಮಾಣಪತ್ರ ನೀಡಿಲ್ಲ ಎಂದು ನಿರ್ಮಾಣ ಸಂಸ್ಥೆ ಅಳಲು ತೋಡಿಕೊಂಡಿತ್ತು. ಸಿನಿಮಾಗೆ ದೊಡ್ಡ ಮೊತ್ತದ ಬಂಡವಾಳ ಹೂಡಿದ್ದಾಗಿಯೂ ಹೇಳಿಕೊಂಡಿತ್ತು. ಈಗ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕೋರ್ಟ್ ಆದೇಶ ನೀಡಿದ್ದು, ‘ಯುಎ’ ಸೆನ್ಸಾರ್ ಪತ್ರ ನೀಡುವಂತೆ ಸೂಚಿಸಿದೆ.

Published On – 11:04 am, Fri, 9 January 26

Source link

ಅಕ್ರಮ ವಾಸಿಗಳಿಗೆ ತೋರಿದ ಕರುಣೆ, ಈ ಸಾಧಕರಿಗೆ ಯಾಕಿಲ್ಲ? ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ ವಸತಿ ಭಾಗ್ಯ ನೀಡದ ಸರ್ಕಾರ – Kannada News | TV9 Exposes Karnataka Governments Housing Disparity: Para Athlete Prasads Five Year Wait

ಬೆಂಗಳೂರು, ಜ.9: ಕೋಗಿಲು ಅಕ್ರಮ ವಾಸಿಗಳು ರಾಜ್ಯ ಸರ್ಕಾರ ವಸತಿ ಭಾಗ್ಯವನ್ನು ನೀಡಲು ಮುಂದಾಗಿದೆ. ಆದರೆ ನಿಜವಾಗಿಯು ಸರ್ಕಾರದಿಂದ ಈ ವಸತಿ ಭಾಗ್ಯ ಸಿಗಬೇಕಾಗಿರುವುದು ಇವರಿಗೆ. ಇದು ಟಿವಿ9 ಕನ್ನಡ ಮಾಡಿದ ವಿಶೇಷ ವರದಿ. ಸಾಧಕರಿಗೆ ಸಿಗಬೇಕಾದ ಸೌಲಭ್ಯ ಅಕ್ರಮವಾಗಿ ಬಂದವರಿಗೆ ಸಿಗುತ್ತಿದೆ ಎಂಬುದನ್ನು ಜನರ ಅಕ್ರೋಶವಾಗಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ಎದ್ದು ಕಾಣುತ್ತಿದೆ. ದೇಶವನ್ನು ಪ್ರತಿನಿಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರು, ವಿಕಲಚೇತನ ಕುಟುಂಬದೊಂದಿಗೆ ಐದು ವರ್ಷಗಳಿಂದ ಮನೆಗಾಗಿ ಪರದಾಡುತ್ತಿದ್ದಾರೆ. ಆದರೆ, ಕೋಗಿಲು ಅಕ್ರಮ ವಾಸಿಗಳಿಗೆ 30 ದಿನಗಳಲ್ಲಿ ಮನೆ ಮಂಜೂರಾಗಿದ್ದು, ಅರ್ಹರಿಗೆ ಅನ್ಯಾಯವಾಗುತ್ತಿದೆ. ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ. ಕೋಗಿಲು ಪ್ರದೇಶದ 26 ಅತಿಕ್ರಮಣದಾರರಿಗೆ 30 ದಿನಗಳೊಳಗೆ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ವಸತಿ ಮತ್ತು ಕಂದಾಯ ಸಚಿವರು ದೃಢಪಡಿಸಿದ್ದಾರೆ. ಸರ್ಕಾರವು ಮಾನವೀಯತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಆದರೆ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಪ್ಯಾರಾ-ಅಥ್ಲೀಟ್ ಪ್ರಸಾದ್ ಅವರಿಗೆ ಕಳೆದ ಐದು ವರ್ಷಗಳಿಂದ ಮನೆ ಮಂಜೂರಾಗಿಲ್ಲ. ಪ್ರಸಾದ್ ಅವರ ಕುಟುಂಬದಲ್ಲಿ ತಂದೆ ರಾಮು (70) ಮತ್ತು ತಾಯಿ (65) ಸೇರಿದಂತೆ ಎಲ್ಲರೂ ವಿಕಲಚೇತನರಾಗಿದ್ದಾರೆ. 2001ರಲ್ಲಿ ಮನೆಗಾಗಿ 1 ಲಕ್ಷ ರೂಪಾಯಿ ಪಾವತಿಸಿದ್ದರೂ, ಪ್ರಸಾದ್ ಮತ್ತು ಅವರ ಕುಟುಂಬ ಕಾದು ಕುಳಿತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಾದ್ ಅವರ ಸಾಧನೆಯನ್ನು ಮೆಚ್ಚಿದ್ದರೂ, ವಸತಿ ಸೌಲಭ್ಯ ಒದಗಿಸುವಲ್ಲಿ ವಿಳಂಬವಾಗಿದೆ. ಅರ್ಹರಿಗೆ ಸೂರು ನೀಡುವಲ್ಲಿ ಸರ್ಕಾರವು ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇದೀಗ ಪ್ಯಾರಾಒಲಂಪಿಕ್ ಕ್ರೀಡಾಪಟು ಪ್ರಸಾದ್​​ಗೆ ಮನೆ ನೀಡುವ ಭರವಸೆಯನ್ನು ರಾಜೀವ್ ಗಾಂಧಿ ವಸತಿ ನಿಗಮ ಅಧ್ಯಕ್ಷ ಪರಶುರಾಮ್ ಅವರು ಟಿವಿ9ಗೆ ಹೇಳಿದೆ. ನಮ್ಮ ಇಲಾಖೆಯಿಂದ ಮನೆ ಕೊಡಿಸುವ ಪ್ರಯತ್ನ ಮಾಡುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಕೂಡಲೇ ನಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇವೆ. ಇಂದೇ ಕ್ರೀಡಾಪಟು ಪ್ರಸಾದ್​ ನಮ್ಮ ಕಚೇರಿ ಬಂದು ಭೇಟಿ ನೀಡಲಿ ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ – Kannada News | SSLC Exam Paper Leak Scam: Students Warned Against Fake Papers on Social Media

SSLC ವಿದ್ಯಾರ್ಥಿಗಳೇ ಎಚ್ಚರ! ಹಣ ಕೊಟ್ರೆ ಪ್ರಶ್ನೆ ಪತ್ರಿಕೆ ಸಿಗತ್ತೆ ಅಂತಾ ಯಾಮಾರಬೇಡಿ

ಬೆಂಗಳೂರು, ಜನವರಿ 09: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಗೇಡಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತೇವೆ ಎಂದು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಪೋಸ್ಟ್‌ಗಳು, ವೀಡಿಯೊಗಳು ಹಾಗೂ ಬಯೋಗಳಲ್ಲಿ ಪ್ರಕಟಿಸಿ, ಹಣ ಕೇಳಿ ವಿದ್ಯಾರ್ಥಿಗಳನ್ನು ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ನೂರು ರೂ. ಕೊಟ್ಟರೆ ಸಿಗುತ್ತೆ ಪ್ರಶ್ನೆ ಪತ್ರಿಕೆ

ಈಗಾಗಲೇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೇ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗಿದ್ದು, ಮಾರ್ಚ್​ನಿಂದ ಮುಖ್ಯ ಪರೀಕ್ಷೆ ಆರಂಭವಾಗಲಿದೆ. ಇದರ ನಡುವೆ ಕೆಲ ಕಿಡಗೇಡಿಗಳು ಎಸ್‌ಎಸ್‌ಎಲ್‌ಸಿ, ಪೂರ್ವಭಾವಿ ಪ್ರಶ್ನೆ ಪತ್ರಿಕೆ ಲೀಕ್ ಮಾಡತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 100 ರೂಪಾಯಿ ಫೋನ್‌ಪೇ ಅಥವಾ ಆನ್‌ಲೈನ್ ಪಾವತಿ ಮಾಡಿದರೆ ಪ್ರಶ್ನೆ ಪತ್ರಿಕೆ ಕಳುಹಿಸುತ್ತೇವೆ ಎಂದು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ರೀತಿ ಲೀಕ್​ ಆಗುತ್ತಿರುವ ಪ್ರಶ್ಬೆ ಪತ್ರಿಕೆಗಳು ಸಂಪೂರ್ಣ ನಕಲಿಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯದೊಂದಿಗೆ ಹಣವನ್ನೂ ಕಳೆದುಕೊಳ್ಳುತ್ತಿದ್ದಾರೆ.

ಈ ರೀತಿಯ ವದಂತಿಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಶಿಕ್ಷಣ ಇಲಾಖೆಯ ಮೇಲೂ ಕಿಡಗೇಡಿಗಳು ಚಾಲೆಂಜ್ ಹಾಕಿದಂತೆ ವರ್ತಿಸುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾತು ಕೇಳಿ ವಿದ್ಯಾರ್ಥಿಗಳು ಆತುರಕ್ಕೆ ಒಳಗಾಗಿ ಮೋಸ ಹೋಗಬಾರದು ಎಂದು ಶಿಕ್ಷಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ ಇಂದಿನಿಂದ ಶುರು SSLC ಪೂರ್ವ ಸಿದ್ಧತಾ ಪರೀಕ್ಷೆ; ಮೂರು ಹಂತದಲ್ಲಿ ಎಕ್ಸಾಮ್

ಕಿಡಗೇಡಿಗಳ ವಿರುದ್ಧ ದೂರು

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಖಾಸಗಿ ಶಿಕ್ಷಣ ಇಲಾಖೆ ಹಾಗೂ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ ಸಂಘಟನೆಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ. ವಿದ್ಯಾರ್ಥಿಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಬಲಿಯಾಗದೆ ಅಧಿಕೃತ ಮಾಹಿತಿ ಮೇಲೆ ಮಾತ್ರ ನಂಬಿಕೆ ಇಡಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿ ನಟನ ಕ್ರೇಜ್ ನೋಡಿ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ – Kannada News | Gilli Nata fan Tattooed Gilli Photo on his hand

ಗಿಲ್ಲಿ ನಟ ಅವರು ಸಖತ್ ಕ್ರೇಜ್ ಹೊಂದಿದ್ದಾರೆ. ಅವರು ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಕ್ರೇಜ್ ದಿನ ಕಳೆದಂತೆ ಹೆಚ್ಚುತ್ತಿದೆ. ಈಗ ಅಭಿಮಾನಿಯೋರ್ವ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಇದು ಗಿಲ್ಲಿ ಕ್ರೇಜ್​​ಗೆ ಹಿಡಿದ ಕೈಗನ್ನಡಿ ಆಗಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಈ ಮೂರು ಸಂಖ್ಯೆಯಲ್ಲಿ ಹುಟ್ಟಿದವರು ಜನವರಿಯಲ್ಲಿ ಅತ್ಯಂತ ಜಾಗರೂಕರಾಗಿರಿ!

2026ರ ವರ್ಷ ಆರಂಭವಾಗಿದ್ದು ಹಲವರಿಗೆ ಇದು ಹೊಸ ಯೋಜನೆಗಳು ಮತ್ತು ಹೊಸ ಆರಂಭಗಳೊಂದಿಗೆ ಶುರುವಾಗಿದೆ. ಆದರೆ ಸಂಖ್ಯಾಶಾಸ್ತ್ರದ ದೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಈ ವರ್ಷ ಒಂದೇ ರೀತಿಯಲ್ಲಿ ಅನುಕೂಲಕರವಾಗುವುದಿಲ್ಲ. ವಿಶೇಷವಾಗಿ ಕೆಲವು ಜನ್ಮ ಸಂಖ್ಯೆಗಳೊಂದಿಗೆ ರಾಹು, ಕೇತು ಮತ್ತು ಶನಿ ಗ್ರಹಗಳ ಸಂಬಂಧ ಇರುವುದರಿಂದ, ಇಂತಹ ಸಂಖ್ಯೆಯಲ್ಲಿ ಹುಟ್ಟಿದವರು 2026ರ ಜನವರಿ ತಿಂಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವೆಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ, 2026ರ ಜನವರಿ ತಿಂಗಳು ಕೆಲವರಿಗೆ ಕರ್ಮದ ಪಾಠ ಕಲಿಸುವ ಕಾಲವಾಗಿದೆ. ಇದು ಆಕ್ರಮಣಕಾರಿ ವಿಸ್ತರಣೆ ಅಥವಾ ದೊಡ್ಡ ಅಪಾಯಗಳನ್ನು ತೆಗೆದುಕೊಳ್ಳುವ ಸಮಯವಲ್ಲ. ಆರ್ಥಿಕ, ವ್ಯವಹಾರಿಕ ಅಥವಾ ವೈಯಕ್ತಿಕ ಜೀವನದಲ್ಲಿ ಅತಿಯಾದ ಆತುರ ಅಥವಾ ಧೈರ್ಯ ತೊಂದರೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ 4, 7 ಮತ್ತು 8 ಸಂಖ್ಯೆಯಲ್ಲಿ ಜನಿಸಿದವರು ಈ ತಿಂಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ಈ ಸಂಖ್ಯೆಗಳೊಂದಿಗೆ ಸಂಬಂಧ ಹೊಂದಿರುವವರು ಜನವರಿಯಲ್ಲಿ ಶಾಂತ, ಪ್ರಾಯೋಗಿಕ ಮತ್ತು ವ್ಯವಸ್ಥಿತವಾಗಿ ಕೆಲಸ ಮಾಡುವುದೇ ಉತ್ತಮ. ಆತುರದ ನಿರ್ಧಾರಗಳು ಅಥವಾ ತಕ್ಷಣ ಫಲ ಬೇಕೆಂಬ ಮನಸ್ಥಿತಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಈ ಸಮಯವನ್ನು ಹೊಸದನ್ನು ಆರಂಭಿಸುವುದಕ್ಕಿಂತಲೂ, ಈಗಾಗಲೇ ಮಾಡಿರುವ ಕೆಲಸಗಳನ್ನು ಸುಧಾರಿಸುವುದು, ಅಪೂರ್ಣ ಗುರಿಗಳನ್ನು ಪೂರ್ಣಗೊಳಿಸುವುದು ಮತ್ತು ಹಳೆಯ ತಪ್ಪುಗಳಿಂದ ಪಾಠ ಕಲಿಯಲು ಬಳಸಿಕೊಳ್ಳುವುದು ಹೆಚ್ಚು ಫಲಪ್ರದವಾಗುತ್ತದೆ.

ಸಂಖ್ಯೆ 4ಕ್ಕೆ ಸಂಬಂಧಿಸಿದಂತೆ, 4, 13, 22 ಅಥವಾ 31ರಂದು ಜನಿಸಿದವರು ರಾಹು ಗ್ರಹದ ಪ್ರಭಾವಕ್ಕೆ ಒಳಪಟ್ಟಿರುತ್ತಾರೆ. ಸೂರ್ಯನ ಪ್ರಭಾವ ಇರುವ ಈ ವರ್ಷದಲ್ಲಿ ಇವರಲ್ಲಿ ಬದಲಾವಣೆಗಳನ್ನು ತಕ್ಷಣ ತರಬೇಕೆಂಬ ಬಲವಾದ ಆಸೆ ಕಾಣಿಸಬಹುದು. ಜನವರಿ ತಿಂಗಳಲ್ಲಿ ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಇದ್ದಕ್ಕಿದ್ದಂತೆ ಸುರಕ್ಷಿತ ಉದ್ಯೋಗವನ್ನು ಬಿಟ್ಟುಬಿಡುವುದು, ಅಪಾಯಕಾರಿ ಹಣಕಾಸಿನ ಹೂಡಿಕೆ ಮಾಡುವುದು ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಂಘರ್ಷಕ್ಕೆ ಇಳಿಯುವಂತಹ ನಿರ್ಧಾರಗಳು ತೊಂದರೆ ತಂದಿಡಬಹುದು. ಈ ತಿಂಗಳಲ್ಲಿ ತಾಳ್ಮೆಯಿಂದ ನಡೆದು, ಯಾವುದೇ ದೊಡ್ಡ ಹಣಕಾಸಿನ ನಿರ್ಧಾರಗಳನ್ನು ಮುಂದೂಡುವುದು ಉತ್ತಮ, ಏಕೆಂದರೆ ಅದರ ಪರಿಣಾಮಗಳು ಮುಂದಿನ ತಿಂಗಳಲ್ಲಿ ಸ್ಪಷ್ಟವಾಗಿ ಕಾಣಿಸಬಹುದು.

ಸಂಖ್ಯೆ 7ಕ್ಕೆ ಸೇರಿದವರು, ಅಂದರೆ 7, 16 ಅಥವಾ 25ರಂದು ಜನಿಸಿದವರು ಕೇತು ಗ್ರಹದ ಪ್ರಭಾವವನ್ನು ಹೆಚ್ಚು ಅನುಭವಿಸುತ್ತಾರೆ. ಜನವರಿ ತಿಂಗಳು ಇವರಿಗೆ ಒಳನೋಟ ಮತ್ತು ಆತ್ಮಪರಿಶೀಲನೆಯ ಕಾಲವಾಗಬಹುದು. ಈ ಸಮಯದಲ್ಲಿ ಸಂಗಾತಿ, ವಾಸಸ್ಥಳ ಅಥವಾ ಕೆಲಸದ ಬಗ್ಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ. ಭಾವನಾತ್ಮಕ ಪ್ರಚೋದನೆಗಳು ತೀರ್ಮಾನಗಳನ್ನು ಪ್ರಭಾವಿಸಬಹುದಾದ್ದರಿಂದ, ತಕ್ಷಣದ ನಿರ್ಧಾರಗಳಿಗಿಂತ ಆಲೋಚನೆಯೊಂದಿಗೆ ಮುಂದೆ ಸಾಗುವುದು ಸೂಕ್ತ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಸಂಖ್ಯೆ 8ಕ್ಕೆ ಸೇರಿದವರು, ಅಂದರೆ 8, 17 ಅಥವಾ 26ರಂದು ಜನಿಸಿದವರು ಶನಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಇವರು ಸದಾ ಪರಿಶ್ರಮಶೀಲರಾಗಿದ್ದರೂ, ಜನವರಿಯಲ್ಲಿ ತಮ್ಮ ಜೀವನ ನಿಧಾನವಾಗಿ ಸಾಗುತ್ತಿದೆ ಎಂಬ ಅನುಭವವಾಗಬಹುದು. ಇತರರು ವೇಗವಾಗಿ ಮುಂದೆ ಸಾಗುತ್ತಿರುವಂತೆ ಕಂಡಾಗ, ಶಾರ್ಟ್‌ಕಟ್ ಮಾರ್ಗಗಳನ್ನು ಹುಡುಕಬೇಕೆಂಬ ಆಲೋಚನೆ ಮೂಡಬಹುದು. ಆದರೆ ಶನಿ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಪರೀಕ್ಷಿಸುವ ಗ್ರಹವಾಗಿರುವುದರಿಂದ, ನಿಯಮಗಳನ್ನು ಉಲ್ಲಂಘಿಸುವ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ. ಹಳೆಯ ಬಾಕಿ ಕೆಲಸಗಳನ್ನು ಮುಗಿಸಿ, ಬದ್ಧತೆಗಳನ್ನು ಪೂರೈಸಿ ಮತ್ತು ತಾಳ್ಮೆಯಿಂದ ಕಾಯುವುದೇ ಈ ತಿಂಗಳ ಅತ್ಯುತ್ತಮ ಮಾರ್ಗವಾಗಿರುತ್ತದೆ.

ಒಟ್ಟಾರೆ, 2026ರ ಜನವರಿ ತಿಂಗಳು ಕೆಲವರಿಗೆ ಎಚ್ಚರಿಕೆಯ ಸಂಕೇತವಾಗಿದೆ. ಆತುರವಿಲ್ಲದೆ, ಶಾಂತ ಮನಸ್ಸಿನಿಂದ, ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಂಡರೆ ಈ ಸಮಯವೂ ಮುಂದಿನ ಯಶಸ್ಸಿಗೆ ದೃಢವಾದ ನೆಲೆಯಾಗಿ ಮಾರ್ಪಡಬಹುದು ಎಂಬುದನ್ನು ಸಂಖ್ಯಾಶಾಸ್ತ್ರ ಸೂಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ಟ್ರಂಪ್​ಗೆ ಕರೆ ಮಾಡ್ಲಿಲ್ಲ, ಭಾರತ-ಅಮೆರಿಕದ ವ್ಯಾಪಾರ ಒಪ್ಪಂದ ಮುಂದುವರೀಲಿಲ್ಲ: ವಾಣಿಜ್ಯ ಕಾರ್ಯದರ್ಶಿ – Kannada News | Commerce Secretary’s Remark Adds New Angle to India US Trade Negotiations

ವಾಷಿಂಗ್ಟನ್, ಜನವರಿ 09: ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್​ ಲುಟ್ನಿಕ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡೊನಾಲ್ಡ್​ ಟ್ರಂಪ್​ಗೆ ಕರೆ ಮಾಡದ ಕಾರಣ ಅಮೆರಿಕ-ಭಾರತದ ನಡುವಿನ ವ್ಯಾಪಾರ ಒಪ್ಪಂದ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ.

ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು, ಹೊವಾರ್ಡ್ ಲುಟ್ನಿಕ್ ಮಾತನಾಡಿ, ತಾವು ಸ್ವತಃ ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿರುವ ಅವರು, ಒಂದು ತೀರ್ಮಾನಕ್ಕೆ ಬರಲು, ಮೋದಿ ಟ್ರಂಪ್‌ಗೆ ಕರೆ ಮಾಡುವುದು ಅಗತ್ಯವಾಗಿತ್ತು , ಭಾರತ ಈ ಒಪ್ಪಂದದಿಂದ ತೃಪ್ತರಾಗಿರಲಿಲ್ಲ ಮತ್ತು ಮೋದಿ ಕರೆ ಮಾಡಲಿಲ್ಲ.

ಈ ಕಾರಣದಿಂದಾಗಿ, ಈ ಒಪ್ಪಂದವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದೆ ಎಂದಿದ್ದಾರೆ. ಭಾರತದೊಂದಿಗೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಅವರು ಹೇಳಿದ್ದಾರೆ.ನಾವು ಇನ್ನು ಮುಂದೆ ಅದನ್ನು ಪರಿಗಣಿಸುವುದಿಲ್ಲ ಎಂದು ಹೇಳಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಿರುತೆರೆಯಲ್ಲಿ ಪ್ರಸಾರ ಕಾಣಲು ರೆಡಿ ಆಯ್ತು ‘ಕಾಂತಾರ: ಚಾಪ್ಟರ್ 1’ – Kannada News | Kantara Chapter 1 Movie To premier on Zee Kannada

‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್​ನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರ ಬಳಿಕ ಒಟಿಟಿಗೆ ಕಾಲಿಟ್ಟಿತು. ಈಗ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣಲು ರೆಡಿ ಆಗಿದೆ. ಜೀ ಕನ್ನಡ ವಾಹಿನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಆದರೆ, ಅವರು ದಿನಾಂಕ ರಿವೀಲ್ ಮಾಡಿಲ್ಲ. ಸಾಮಾನ್ಯವಾಗಿ ವಿಶೇಷ ಸಂದರ್ಭದಗಳಲ್ಲಿ ಈ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸಂಕ್ರಾಂತಿಗೆ ಪ್ರಸಾರ ಕಾಣಬಹುದು ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link