Headlines

nagaraj11081993

Daily Devotional: ಯಜ್ಞ, ಯಾಗಾದಿ ಹೋಮ ಹವನಗಳಲ್ಲಿ ಯಾವ ಸಮಿತ್ತು ಅರ್ಪಿಸಿದರೆ ಏನು ಫಲ? – Kannada News | Unlocking the Full Benefits of Homa: Why Personal Effort in Collecting Samithu Matters

ಹೋಮ, ಹವನಗಳಲ್ಲಿ ಸಮಿತ್ತುಗಳ ಮಹತ್ವImage Credit source: Pinterest ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಯಜ್ಞ, ಯಾಗಾದಿ ಹೋಮ ಹವನಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ನಮ್ಮ ಪಾಪ ಕರ್ಮಗಳನ್ನು ನಿವಾರಿಸಲು, ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು, ದೇವತಾರಾಧನೆಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು, ಹಾಗೂ ಇಷ್ಟಾರ್ಥ ಸಿದ್ಧಿಗಳಿಗಾಗಿ ಇಂತಹ ಪವಿತ್ರ ಕ್ರಿಯೆಗಳನ್ನು ಆಚರಿಸಲಾಗುತ್ತದೆ. ಈ ಯಜ್ಞಗಳಲ್ಲಿ ಸಮಿತ್ತುಗಳ ಬಳಕೆಯು ಅವಿಭಾಜ್ಯ ಅಂಗವಾಗಿದೆ. ಸಮಿತ್ತುಗಳು ಎಂದರೆ ಅಗ್ನಿಯಲ್ಲಿ ಅರ್ಪಿಸುವ ಪವಿತ್ರ ಮರದ ತುಂಡುಗಳು ಅಥವಾ ಉರವಲುಗಳು. ಈ ಸಮಿತ್ತುಗಳು…

Read More

ಗದಗ‌ದ ನರೇಗಲ್ ಪಟ್ಟಣದಲ್ಲಿ ಇದ್ದೂ ಇಲ್ಲದಂತಾದ ಸರ್ಕಾರಿ ಆಸ್ಪತ್ರೆ: ರೋಗಿಗಳಿಗೆ ತಪ್ಪದ ಪರದಾಟ – Kannada News | Upgraded But Empty: Patients Suffer As Naregal Govt Hospital Runs With Only One Dentist

ಗದಗ, ಜೂನ್​​ 16: ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಲಾಗಿದ್ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಕಾರಣ ರೋಗಿಗಳು ಪರದಾಟ ನಡೆಸುತ್ತಿರುವ ಸ್ಥಿತಿ ಗದಗ‌ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದಿದೆ. ಕೇಂದ್ರ ಸರ್ಕಾರ ಎನ್ಎಚ್ಎಂ ಯೋಜನೆಯಲ್ಲಿ 2 ಕೋಟಿಗೂ ಅಧಿಕ ಮೊತ್ತದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಭಡ್ತಿ ಪಡೆದಿದೆಯಾದರೂ, ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮಾತ್ರ ಮರಿಚೀಕೆಯಾಗಿಯೇ ಉಳಿದಿದೆ….

Read More

Jayamma Death: ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ – Kannada News | Jayamma Passed Away: Vijay Raghavendra, Sriimurali’s Mother Passes Away, Sandalwood Mourns

ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ ಅವರ ತಾಯಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಜಯಮ್ಮ ಅವರು…

Read More

ವೈಭವ್ ಸೂರ್ಯವಂಶಿಗೆ ಬ್ಯಾನ್ ಭೀತಿ..! – Kannada News | Vaibhav Sooryavanshi Faces Match Ban After On Field Clash

ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಣ ಪಂದ್ಯದ ಬಳಿಕ ನಡೆದ ದೈಹಿಕ ಘರ್ಷಣೆ ಹಿನ್ನಲೆ ಟೀಮ್ ಇಂಡಿಯಾದ ಯುವ ದಾಂಡಿಗ ವೈಭವ್ ಸೂರ್ಯವಂಶಿ ವಿರುದ್ಧ ಐಸಿಸಿ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯತೆಯಿದೆ. ದಂಬುಲ್ಲಾದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 49.2 ಓವರ್​ಗಳಲ್ಲಿ 265 ರನ್​ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 50 ಓವರ್​ಗಳಲ್ಲಿ 265 ರನ್​ಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಆ ಬಳಿಕ ನಡೆದ…

Read More

ಶಿಕ್ಷಣ ಸಚಿವರಿಲ್ಲದೆ ಇಲಾಖೆಯ ಚಟುವಟಿಕೆಗಳಿಗೆ ಅಡ್ಡಿ: ಸರ್ಕಾರಿ ಶಾಲೆಯ 30 ಸಾವಿರ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ – Kannada News | Karnataka Academic Year Begins in Chaos: Delayed Cabinet Expansion Leaves Education Department Ministerless for Two Weeks

ಸಾಂದರ್ಭಿಕ ಚಿತ್ರImage Credit source: Karnataka Education Department ಬೆಂಗಳೂರು, ಜೂನ್ 16: ರಾಜ್ಯದಲ್ಲಿ 2026ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ವಾರಗಳು ಕಳೆದಿದ್ದರೂ ಇಲಾಖೆಗೆ ಶಿಕ್ಷಣ ಸಚಿವರೇ (Education Minister) ಇಲ್ಲದಿರುವುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಸಚಿವರ ಅನುಪಸ್ಥಿತಿಯಿಂದಾಗಿ ಹೊಸ ಶಿಕ್ಷಣ ನೀತಿಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮತ್ತು ಶಾಲಾ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರಿಗಳು ತಡಕಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ…

Read More

TV9 Kannada Live: ರಾಜ್ಯದಲ್ಲಿ ಮತ್ತೆ ರೆಸಾರ್ಟ್​​ ರಾಜಕೀಯ, ಕೈ ಶಾಸಕರಿಂದು ಬಿಡದಿಗೆ ಶಿಫ್ಟ್​​ – Kannada News | TV9 Kannada News Live 16 June 2026 Karnataka Politics, Weather, Politics, MLC Polls Latest Updates

ಮತ್ತೆ ಶುರುವಾದ ರೆಸಾರ್ಟ್​​ ರಾಜಕೀಯImage Credit source: Tv9 Kannada ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಲೋಕಾಯುಕ್ತ ಭರ್ಜರಿ ಶಾಕ್​​ ಕೊಟ್ಟಿದ್ದು ಕಲಬುರಗಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ದಾಳಿ ನಡೆದಿದೆ. ಮನೆ ಮತ್ತು ಕಚೇರಿಗಳು ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ತಲಾಶ್​​ ನಡೆಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್​​ ಚುನಾವಣಾ ಕಣ ರಾಜ್ಯದಲ್ಲಿ ರಂಗೇರಿದ್ದು, ರೆಸಾರ್ಟ್​​ ಪಾಲಿಟಿಕ್ಸ್​​ ಶುರುವಾಗಿದೆ. ಇಂದು ‘ಕೈ’ ಶಾಸಕರಿಂದ ರೆಸಾರ್ಟ್​ ವಾಸ್ತವ್ಯ ಶುರುವಾಗಿದ್ದರೆ​, ನಾಳೆ JDSನವರ ಸರದಿ ನಿಗದಿಯಾಗಿದೆ. ಐದಾರು ಜೆಡಿಎಸ್​​ ಶಾಸಕರನ್ನು ಸೆಳೆಯಲು ಕೈ…

Read More

ಕಾಕ್ರೋಚ್ ಬೆಂಬಲಿಸಿದ ಪ್ರಕಾಶ್ ರಾಜ್​​ಗೆ ಪವನ್ ಕಲ್ಯಾಣ್ ಕೌಂಟರ್ – Kannada News | Pawan Kalyan Slams ‘Cockroach Janata Party,’ Calls Supporters Divisive and Narrow Minded

ಇತ್ತೀಚೆಗೆ ಆರಂಭ ಆಗಿರೋ ‘ಕಾಕ್ರೋಚ್ ಜನತಾ ಪಾರ್ಟಿ’ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಿಂದಲೂ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ಸಂಚು ಎಂದು ಕರೆದಿದ್ದಾರೆ. ಈಗ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಈ ಚಳವಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂಘಟನೆ ಮತ್ತು ಇದನ್ನು ಬೆಂಬಲಿಸುವವರು ದೇಶವನ್ನು ಒಡೆಯುವ ಮತ್ತು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು  (Prakash Raj) ‘ಕಾಕ್ರೋಚ್…

Read More

ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..! – Kannada News | Cape Verde Stuns Spain In Fifa World Cup 2026

Fifa World Cup 2026: ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತಿನ ಅತ್ಯಂತ ಬಲಿಷ್ಠ ಪಡೆ. ಮುಂಚೂಣಿಯಲ್ಲಿ ಲಮಿನ್ ಯಮಾಲ್, ಮೈಕೆಲ್ ಒಯರ್ಝಾಬಲ್, ಫೆರಾನ್ ಟೊರೆಸ್ ಮತ್ತು ಡ್ಯಾನಿ ಓಲ್ಮೊ ಅವರಂತಹ ಆಕ್ರಮಣಕಾರಿ ಆಟಗಾರರಿದ್ದರೆ, ಮಿಡ್‌ಫೀಲ್ಡ್​ನಲ್ಲಿ ರೋಡ್ರಿ, ಪೆಡ್ರಿ, ಗಾವಿ ಹಾಗೂ ಫ್ಯಾಬಿಯನ್ ರೂಯಿಝ್ ಅವರಂತಹ ಚಾಣಾಕ್ಷ ತಂತ್ರಜ್ಞರಿದ್ದಾರೆ. ಇಂತಹದೊಂದು ವಿಶ್ವದರ್ಜೆಯ ಬಳಗ ಕಣಕ್ಕಿಳಿದರೆ ಗೆಲುವು ಯಾರದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ! ಆದರೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದಿದ್ದೇ ಬೇರೆ. ಹೌದು, ಫಿಫಾ ವಿಶ್ವಕಪ್…

Read More

ರನ್​ ವೇಯಿಂದ ಹಾರಿದ ಕೆಲವೇ ಕ್ಷಣದಲ್ಲಿ ಯುಎಸ್ ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು – Kannada News | Deadly B 52 Crash at California Air Base Claims Eight Lives, Spotlight Turns to Iconic Bomber

ಕ್ಯಾಲಿಫೋರ್ನಿಯಾ, ಜೂನ್ 16: ಅಮೆರಿಕದ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ಯುಎಸ್ ವಾಯುಪಡೆಗೆ ಸೇರಿದ ಪ್ರಸಿದ್ಧ ‘ಬಿ-52 ಸ್ಟ್ರಾಟೊಫೋರ್ಟ್ರೆಸ್’ (B-52 Stratofortress) ಬಾಂಬರ್ ವಿಮಾನವು ರನ್‌ವೇಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟೂ ಜನ ಸಾವನ್ನಪ್ಪಿದ್ದಾರೆ. ವಿಮಾನವು ಪತನಗೊಂಡ ತಕ್ಷಣ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ವಿಮಾನದಲ್ಲಿದ್ದ ಮಿಲಿಟರಿ ಸಿಬ್ಬಂದಿ ಮತ್ತು ಸರ್ಕಾರಿ ಗುತ್ತಿಗೆದಾರರು ಸೇರಿದಂತೆ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು…

Read More

ಕಿರುತೆರೆ ನಟಿ ಸಂಚಿತಾ ಸಾವಿಗೆ ಕಾರಣವಾಗಿದ್ದು ಆ ಹುಡುಗ? – Kannada News | Sanchita Ugale Death: Ujjwal Sharma Reveals Actress’s Mental Battle, Live In Woes

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ ಅವರು (Sanchita Ugale) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೇವಲ 22ನೇ ವಯಸ್ಸಿಗೆ ನಟಿ ಇಂತಹ ಕಠಿಣ ಹೆಜ್ಜೆ ಇಟ್ಟು ಕೊನೆಯುಸಿರೆಳೆದಿರುವುದು ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಭಾನುವಾರ ಸಂಜೆ ಈ ದುರಂತ ಸಂಭವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ನಟಿಯ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ…

Read More