All posts by nagaraj11081993

ಕರಾವಳಿ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 8 ರಿಂದ ಕುವೈತ್-ಮಂಗಳೂರು ನಡುವೆ ವಿಮಾನಯಾನ ಆರಂಭ, ಇಲ್ಲಿದೆ ವೇಳಾಪಟ್ಟಿ

ಕರಾವಳಿ ಜನತೆಗೆ ಸಿಹಿ ಸುದ್ದಿ: ಏಪ್ರಿಲ್ 8 ರಿಂದ ಕುವೈತ್-ಮಂಗಳೂರು ನಡುವೆ ವಿಮಾನಯಾನ ಆರಂಭ, ಇಲ್ಲಿದೆ ವೇಳಾಪಟ್ಟಿ

ಮಂಗಳೂರು, ಏಪ್ರಿಲ್ 2: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ಜಜೀರಾ ಏರ್‌ವೇಸ್ (Jazeera Airways) ಭರ್ಜರಿ ಸಿಹಿ ಸುದ್ದಿ ನೀಡಿದೆ. ಏಪ್ರಿಲ್ 8ರಿಂದ ಸೌದಿ ಅರೇಬಿಯಾದ ದಮ್ಮಮ್ ಮೂಲಕ ಕುವೈತ್ ಮತ್ತು ಮಂಗಳೂರು (Mangalore) ನಡುವೆ ವಾರಕ್ಕೆ ಎರಡು ಬಾರಿ ವಿಶೇಷ ವಿಮಾನಯಾನ ಸೇವೆ ಆರಂಭವಾಗಲಿದೆ.

ಭಾರತದ ನಾಲ್ಕು ನಗರಗಳಿಗೂ ಹೊಸ ವಿಮಾನಯಾನ ಸಂಪರ್ಕ

ಜಜೀರಾ ಏರ್‌ವೇಸ್ ಭಾರತದ ನಾಲ್ಕು ಪ್ರಮುಖ ನಗರಗಳಾದ ಮಂಗಳೂರು, ಕೋಝಿಕ್ಕೋಡ್ (ಕ್ಯಾಲಿಕಟ್), ತಿರುಚಿರಾಪಳ್ಳಿ ಮತ್ತು ಕಣ್ಣೂರಿಗೆ ದಮ್ಮಮ್ ವಿಮಾನ ನಿಲ್ದಾಣದ ಮೂಲಕ ಹೊಸ ವಿಮಾನ ಸೇವೆಗಳನ್ನು ಘೋಷಿಸಿದೆ. ಮಂಗಳೂರಿಗೆ ಏಪ್ರಿಲ್ 9ರಿಂದ ಪ್ರತಿ ಸೋಮವಾರ ಮತ್ತು ಗುರುವಾರ ವಿಮಾನಗಳು ಸಂಚರಿಸಲಿವೆ.

ಮಂಗಳೂರು ಕುವೈತ್ ವಿಮಾನ ಸಂಚಾರ ವೇಳಾಪಟ್ಟಿ

ವಿಮಾನ ಜೆ9 3417 ಕುವೈತ್‌ನಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 8:40ಕ್ಕೆ ಹೊರಟು, ದಮ್ಮಮ್ ಮೂಲಕ ಸಂಜೆ 4:10ಕ್ಕೆ ಮಂಗಳೂರು ತಲುಪಲಿದೆ. ಹಿಂದಿರುಗುವ ವಿಮಾನ ಜೆ9 3418 ಮಂಗಳೂರಿನಿಂದ ಸಂಜೆ 4:55ಕ್ಕೆ ಹೊರಟು, ಸ್ಥಳೀಯ ಕಾಲಮಾನ ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. ಇಡೀ ಪ್ರಯಾಣದ ಅವಧಿ ಸುಮಾರು 6 ಗಂಟೆಗಳು ಇಲಿದೆ.

12 ನಗರಗಳಿಗೆ ವಿಮಾನಯಾನ ವಿಸ್ತರಣೆ

ಕೋವಿಡ್ ಸಮಯದಲ್ಲಿ ಮಂಗಳೂರಿಗೆ ವಿಶೇಷ ವಿಮಾನಗಳ ಸೇವೆ ಒದಗಿಸಿದ್ದ ಜಜೀರಾ ಏರ್‌ವೇಸ್, ಈಗ ಮಧ್ಯಪ್ರಾಚ್ಯದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆ ಪುನರಾರಂಭಿಸಲು ನಿರ್ಧರಿಸಿದೆ. ಈ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್‌ವೇಸ್‌ನ ಜಾಲವು ಒಟ್ಟು 12 ನಗರಗಳಿಗೆ ವಿಸ್ತರಿಸಿದಂತಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂಗೆ ಈಗಾಗಲೇ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುತ್ತಿದೆ.

ಇದನ್ನೂ ಓದಿ: ಬಂಟ್ವಾಳ: ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ, ಮೈಜುಂ ಎನ್ನಿಸೋ ವಿಡಿಯೋ ವೈರಲ್

ದಕ್ಷಿಣ ಭಾರತದ ಪ್ರಯಾಣಿಕರಿಗೆ ತಮ್ಮ ತವರು ನಗರಗಳಿಗೆ ಹತ್ತಿರವಾಗಲು ಈ ವಿಮಾನಯಾನ ಸೇವೆ ವಿಸ್ತರಣೆ ಸಹಕಾರಿಯಾಗಲಿದೆ ಎಂದು ಜಜೀರಾ ಏರ್‌ವೇಸ್ ಸಿಇಒ ಭರತನ್ ಪಶುಪತಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನದ ಚೈನ್​ಗಾಗಿ ನಟಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ

ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ನಟಿ ಹರ್ಷಿ ರಸಂಗ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದು ರಾಜಪಕ್ಸೆ ನಟಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಒಂದು ಚಿನ್ನದ ಸರ ಎಂಬುದು ವಿಶೇಷ.

ಏನಿದು ಪ್ರಕರಣ?

ಭಾನುಕ ರಾಜಪಕ್ಸೆ ಹಾಗೂ ನಟಿ ಹರ್ಷಿ ರಸಂಗ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು. ಆ ಸಮಯದಲ್ಲಿ ರಾಜಪಕ್ಸೆ ಅವರು ಚಿನ್ನದ ಸರ ಮತ್ತು ಪೆಂಡೆಂಟ್ ಅನ್ನು ಹರ್ಷಿಗೆ ನೀಡಿದ್ದರು ಎನ್ನಲಾಗಿದೆ.

ಆದರೆ ಇವರಿಬ್ಬರ ಬ್ರೇಕ್-ಅಪ್ ಆದ ನಂತರ, ರಾಜಪಕ್ಸೆ ಅವರು ತಮ್ಮ ಆಭರಣವನ್ನು ಮರಳಿ ಕೇಳಿದ್ದಾರೆ. ಈ ವೇಳೆ ನಟಿ ಚೈನ್ ಹಿಂತಿರುಗಿಸಿರಲಿಲ್ಲ. ಆ ಬಳಿಕ ಆಭರಣವನ್ನು ಹರ್ಷಿ ರಸಂಗ ಅಡವಿಟ್ಟಿರುವುದು ಗೊತ್ತಾಗಿದೆ.

ಭಾನುಕ ರಾಜಪಕ್ಸೆ ಅವರ ಪ್ರಕಾರ, ನಟಿ ಹರ್ಷಿ ರಸಂಗ ಅವರು ತಮ್ಮ ಅನುಮತಿಯಿಲ್ಲದೆ ಈ ಆಭರಣವನ್ನು ಅಡವಿಟ್ಟಿದ್ದಾರೆ. ಆದರೆ ನಟಿ ಹರ್ಷಿ, ಆ ಸರವನ್ನು ರಾಜಪಕ್ಸೆ ತಮಗೆ ಉಡುಗೊರೆಯಾಗಿ ನೀಡಿದ್ದರು ಎಂದು ವಾದಿಸುತ್ತಿದ್ದಾರೆ.

ನಟಿಯ ಬಂಧನ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ನಂತರ, ಹರ್ಷಿ ರಸಂಗ ಅವರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ ಮಾರ್ಚ್ 29, 2026 ರಂದು ಕಡುವೇಲ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

ಬಂಧನದ ಬಳಿಕ ನ್ಯಾಯಾಲಯದಲ್ಲಿ “ಆಭರಣವನ್ನು ಮರಳಿ ಬಿಡಿಸಿಕೊಳ್ಳಬಹುದು” ಎಂದು ವಾದಿಸಿದ್ದ ಹರ್ಷಿ, ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ವ್ಯತಿರಿಕ್ತವಾದ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಅಲ್ಲದೆ ಭಾನುಕಾ ರಾಜಪಕ್ಸೆಯನ್ನು ಗುರಿಯಾಗಿಸಿ ಸೋಷಿಯಲ್ ಮೀಡಿಯಾದಲ್ಲಿ ಹಲವು ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಆಕ್ರೋಶಗೊಂಡ ರಾಜಪಕ್ಸೆ ಏಪ್ರಿಲ್ 1, 2026 ರಂದು ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಸರಿಗಟ್ಟಿದ ಸಾಹಿಬ್​ಝಾದ ಫರ್ಹಾನ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಅಥವಾ ಅಡವಿಡಲಾದ ಆಭರಣವನ್ನು ಪತ್ತೆಹಚ್ಚಲು ತಲಂಗಮ ಪೊಲೀಸರಿಗೆ ಸೂಚನೆ ನೀಡಲಾಗಿದೆ.  ಅಲ್ಲದೆ ಹರ್ಷಿ ರಸಂಗ ವಿರುದ್ಧದ ‘ನಂಬಿಕೆ ದ್ರೋಹ’ದ ಪ್ರಕರಣದ ಮುಂದಿನ ವಿಚಾರಣೆಯು ಏಪ್ರಿಲ್ 22, 2026 ರಂದು ನಡೆಯಲಿದೆ.

ಐಪಿಎಲ್​ನಲ್ಲಿಲ್ಲ ಭಾನುಕ:

ಶ್ರೀಲಂಕಾದ ಸ್ಫೋಟಕ ದಾಂಡಿಗ ಭಾನುಕ ರಾಜಪಕ್ಸೆ ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಂಡ ಆಟಗಾರ. ಪಂಜಾಬ್ ಕಿಂಗ್ಸ್ ಪರ 13 ಪಂದ್ಯಗಳನ್ನಾಡಿದ್ದ ಎಡಗೈ ದಾಂಡಿಗ ಈ ಬಾರಿಯ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಲಂಕಾ ದಾಂಡಿಗನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

 

Source link

ತೆಲುಗು ನಟರಿಗೆ ಡ್ರಗ್ಸ್ ಪರೀಕ್ಷೆ ಕಡ್ಡಾಯ ಮಾಡಿ: ವಿವಾದ ಎಬ್ಬಿಸಿದ ಶಾಸಕನ ಹೇಳಿಕೆ

ಚಿತ್ರರಂಗದವರು (Movie Industry) ಎಂದೊಡನೆ ಪಾರ್ಟಿ ಮಾಡುವವರು, ಐಶಾರಾಮಿ, ಸ್ವೇಚ್ಛೆಯ ಜೀವನ ನಡೆಸುವವರ ಎಂಬ ಕಲ್ಪನೆ ಹಲವರಿಗಿದೆ. ಅದರಲ್ಲೂ ಡ್ರಗ್ಸ್ ಜೊತೆಗೆ ಚಿತ್ರರಂಗವನ್ನು ಸದಾ ಲಿಂಕ್ ಮಾಡಲಾಗುತ್ತದೆ. ಇದು ಒಂದು ಹಂತಕ್ಕೆ ನಿಜವಾದರೂ ಎಲ್ಲರೂ ಹೀಗೆಯೇ ಇರುತ್ತಾರೆ ಎಂದೇನೂ ಇಲ್ಲ. ಇದೀಗ ತೆಲಂಗಾಣದ ಶಾಸಕನೋರ್ವ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದ ಎಬ್ಬಿಸಿದೆ. ಶಾಸಕನ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ತೆಲಂಗಾಣದ ಕಾಂಗ್ರೆಸ್ ಶಾಸಕ ಅನಿರುದ್ಧ್ ರೆಡ್ಡಿ ಇತ್ತೀಚೆಗೆ ಮಾತನಾಡಿ, ‘ತೆಲುಗು ಚಿತ್ರರಂಗದ ಎಲ್ಲ ಪ್ರಮುಖ ಸ್ಟಾರ್ ನಟರುಗಳು ಅವರ ಸಿನಿಮಾ ಬಿಡುಗಡೆ ಮಾಡುವ ಮುಂಚೆ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕು’ ಎಂದಿದ್ದರು. ಆ ಮೂಲಕ ಸ್ಟಾರ್ ನಟರನ್ನು ಡ್ರಗ್ಸ್ ವ್ಯಸನಿಗಳು ಎಂಬರ್ಥದ ಮಾತುಗಳನ್ನು ಆಡಿದ್ದರು. ಅನಿರುದ್ಧ್ ರೆಡ್ಡಿ ಅವರ ಈ ಹೇಳಿಕೆಗೆ ತೀವ್ರ ಆಕ್ರೋಶವನ್ನು ನಟರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದನ್ನು ಅನಿರುದ್ಧ್ ರೆಡ್ಡಿಗೆ ನೆನಪಿಸುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾ ಅಧ್ಯಕ್ಷ ಮಂಚು ವಿಷ್ಣು, ‘ನಟರಿಗೆ ಇಂತಹ ನಿಯಮಗಳನ್ನು ಜಾರಿಗೆ ತರುವುದಾದರೆ, ರಾಜಕಾರಣಿಗಳಿಗೂ ಕೂಡ ಚುನಾವಣೆಗೂ ಮುನ್ನ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬೇಕು’ ಎಂದಿದ್ದಾರೆ. ಇದೇ ವಿಷಯವಾಗಿ ನಟ ರಾಹುಲ್ ರಾಮಕೃಷ್ಣ ಕೂಡ ಪ್ರತಿಕ್ರಿಯಿಸಿದ್ದು, ‘ನಾನು ಡ್ರಗ್ ಟೆಸ್ಟ್‌ಗೆ ಸಿದ್ಧನಿದ್ದೇನೆ, ಆದರೆ ರಾಜಕಾರಣಿಗಳು ನಿಯಮಿತವಾಗಿ ಲೈ ಡಿಟೆಕ್ಟರ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಇತ್ತೀಚೆಗಷ್ಟೆ ರೋಹಿತ್ ರೆಡ್ಡಿಯ ಫಾರ್ಮ್​​ ಹೌಸ್​​ ಮೇಲೆ ನಡೆದ ದಾಳಿಯಲ್ಲಿ ಕೆಲ ರಾಜಕಾರಣಿಗಳು ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು. ಅದರಲ್ಲಿ ಶಾಸಕರು ಮತ್ತು ಸಂಸದರು ಸಹ ಇದ್ದರು. ಆದರೆ ಈಗ ಶಾಸಕರೊಬ್ಬರು ಸಿನಿಮಾ ರಂಗದವರು ಡ್ರಗ್ಸ್ ವ್ಯಸನಿಗಳು ಎಂದಿರುವುದು ಸಿನಿಮಾ ರಂಗದವರಿಗೆ ಸಿಟ್ಟು ತರಿಸಿದೆ. ಅವರ ಅಭಿಮಾನಿಗಳಿಗೂ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಬಂಗಾಳದಲ್ಲಿ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಸುಪ್ರೀಂ ಸೂಚನೆ

ಕೋಲ್ಕತ್ತಾ, ಏಪ್ರಿಲ್ 02: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗಾಗಿ ನಿಯೋಜಿಸಲಾಗಿರುವ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಒಡ್ಡಿದ ಬೆದರಿಕೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಅವರ ಸುರಕ್ಷತೆಗಾಗಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾಗಿಯಾಗಿರುವ ನ್ಯಾಯಾಂಗ ಅಧಿಕಾರಿಗಳನ್ನು ಪ್ರಶ್ನಿಸಿ ಏಪ್ರಿಲ್1ರ ಸಂಜೆ ಮಾಲ್ಡಾ ಜಿಲ್ಲೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದರು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ತೊಡಗಿರುವ ಮೂವರು ಮಹಿಳಾ ಅಧಿಕಾರಿಗಳು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಕಚೇರಿಯೊಳಗೆ ಬಂಧಿಸಲಾಯಿತು, ಏಕೆಂದರೆ ಪ್ರತಿಭಟನಾಕಾರರು ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲು ನ್ಯಾಯಾಲಯ ಆದೇಶಿಸಿತು. ಮಧ್ಯರಾತ್ರಿಯ ನಂತರವೇ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಹೊರಡುವಾಗ ಕಲ್ಲುಗಳು ಮತ್ತು ಕೋಲುಗಳಿಂದ ಹಲ್ಲೆ ನಡೆಸಲಾಯಿತು ಎಂದು ಆರೋಪಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ , ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪಿನ್ ಪಂಚೋಲಿ ಅವರಿದ್ದ ಪೀಠವು , ಪಶ್ಚಿಮ ಬಂಗಾಳ ಸರ್ಕಾರ ಮತ್ತು ಅದರ ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಎಲ್ಲರೂ ರಾಜಕೀಯ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ ಎಂದು ನ್ಯಾಯಾಲಯವು ಟೀಕಿಸಿದೆ.

ಮತ್ತಷ್ಟು ಓದಿ: SIR in Karnataka: ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಏಪ್ರಿಲ್​ನಿಂದ ಎಸ್​ಐಆರ್​ ಆರಂಭ ಸಾಧ್ಯತೆ

ಇದು ಅತ್ಯಂತ ಧ್ರುವೀಕೃತ ರಾಜ್ಯ ಎಂದು ಸಿಜೆಐ ಕಾಂತ್ ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರಿಗೆ ತಿಳಿಸಿದರು .ಈ ಘಟನೆಯು ನ್ಯಾಯಾಂಗ ಅಧಿಕಾರಿಗಳನ್ನು ದೂಷಿಸಲು ಮಾತ್ರವಲ್ಲದೆ ಈ ನ್ಯಾಯಾಲಯದ ಅಧಿಕಾರವನ್ನು ಪ್ರಶ್ನಿಸಲು ಮಾಡಿದ ಲಜ್ಜೆಗೆಟ್ಟ ಪ್ರಯತ್ನವಾಗಿದೆ.

ನ್ಯಾಯಾಂಗ ಅಧಿಕಾರಿಗಳ ಮನಸ್ಸಿನ ಮೇಲೆ ಮಾನಸಿಕ ದಾಳಿಯನ್ನು ಉಂಟುಮಾಡಲು ನಾವು ಯಾರೂ ಮಧ್ಯಪ್ರವೇಶಿಸಿ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಇದು ಪಶ್ಚಿಮ ಬಂಗಾಳ ಸರ್ಕಾರದ ಕರ್ತವ್ಯ ನಿರ್ಲಕ್ಷ್ಯವೂ ಆಗಿದೆ ಮತ್ತು ಮಾಹಿತಿ ನೀಡಿದ ನಂತರವೂ ಅಧಿಕಾರಿಗಳು ಅಧಿಕಾರಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಧ್ಯವಾಗದಿರಲು ಅಧಿಕಾರಿಗಳು ಕಾರಣಗಳನ್ನು ಒದಗಿಸಬೇಕಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪ್ರಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ತಲುಪಲಿಲ್ಲ ಮತ್ತು ನ್ಯಾಯಮೂರ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿಗೆ ಕರೆ ಮಾಡಬೇಕಾಯಿತು ಎಂದು ಅದು ಹೇಳಿದೆ.

ಕೊನೆಗೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನಿವಾಸವನ್ನು ತಲುಪಿದ್ದರು. ತಮ್ಮ ಕುಟುಂಬಕ್ಕೆ ಬೆದರಿಕೆಯ ಬಗ್ಗೆ ಯಾವುದೇ ಅನುಮಾನವಿರುವ ನ್ಯಾಯಾಂಗ ಅಧಿಕಾರಿಯ ನಿವಾಸದ ಮೇಲೆ ಚುನಾವಣಾ ಆಯೋಗವು ಪಡೆಗಳನ್ನು ನಿಯೋಜಿಸಬೇಕು.ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಲಾಗಿರುವ ಕಾರ್ಯದ ಸುರಕ್ಷಿತ ಕಾರ್ಯನಿರ್ವಹಣೆಗಾಗಿ ಇಸಿಐ ಮತ್ತು ರಾಜ್ಯ ಸರ್ಕಾರವು ಎಲ್ಲಾ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆ, ಆನ್​​ಲೈನ್​​ ಟ್ರೇಡಿಂಗ್​​ ಹೆಸರಲ್ಲಿ 18 ಲಕ್ಷ ಪಂಗನಾಮ ಹಾಕಿದ ಮಹಿಳೆ: ಹಣ ಕೊಟ್ಟು ಕೆಟ್ಟ ಎಂಜಿನಿಯರ್​​ನಿಂದ ದೂರು ದಾಖಲು

ಬೆಂಗಳೂರು, ಏಪ್ರಿಲ್​​ 02: ಆನ್​​ ಲೈನ್​​ ಹೂಡಿಕೆ ಹೆಸರಲ್ಲಿ ನಡೆಯುವ ವಂಚನೆ ಪ್ರಕರಣಗಳು ಇನ್ನೊಂದು ಹಂತ ತಲುಪಿದ್ದು, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೋರ್ವಳು ಸ್ವಾಫ್ಟ್‌ವೇರ್ ಎಂಜಿನಿಯರ್​​ ಓರ್ವನಿಗೆ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ (Bengaluru) ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ. ಪ್ರೀತಿಯ ಹೆಸರಲ್ಲಿ ಮಹಿಳೆ ಹೆಣೆದ ಮೋಸದ ಬಲೆಗೆ ಸಿಲುಕಿ ಹಣ ಕಳೆದುಕೊಂಡ ಎಂಜಿನಿಯರ್​​ ಈಗ ನ್ಯಾಯಕ್ಕೆ ಆಗ್ರಹಿಸಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾನೆ.

2025ರ ನವೆಂಬರ್‌ನಲ್ಲಿ Flutrr ಡೇಟಿಂಗ್ ಆಪ್‌ ಮೂಲಕ 29 ವರ್ಷದ ಸ್ವಾಫ್ಟ್‌ವೇರ್ ಎಂಜಿನಿಯರ್​​ಗೆ ಮಹಿಳೆಯೊಬ್ಬಳ ಪರಿಚಯವಾಗಿತ್ತು. ಆಕೆ ತನ್ನನ್ನು ಮುಂಬೈ ಮೂಲದ ಅಂಜಲಿ ಕುಶ್ಲಾನಿ ಎಂದು ಪರಿಚಯಿಸಿಕೊಂಡು, ನಂತರ ವಾಟ್ಸಾಪ್ ಮೂಲಕ ನಿಯಮಿತವಾಗಿ ಈತನ ಸಂಪರ್ಕದಲ್ಲಿದ್ದಳು. ಇದಾದ ಕೆಲ ಸಮಯದ ಬಳಿಕ ಪ್ರೀತಿಯ ಹೆಸರಲ್ಲಿ ಸಂತ್ರಸ್ತನ ನಂಬಿಸಿದ್ದ ಮಹಿಳೆ, ಆತನ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದಳು. ಹೀಗಾಗಿ ಸಾಫ್ಟ್‌ವೇರ್ ಎಂಜಿನಿಯರ್​​ ಆಕೆಯ ಜೊತೆಗೆ ಭವಿಷ್ಯದ ಕನಸು ಕೂಡ ಕಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಆಕೆ ಕೆಲ ವಾರಗಳ ಬಳಿಕ ಆಕೆ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ಪರಿಚಯಿಸಿ, ತನ್ನ ಮಾರ್ಗದರ್ಶನದಲ್ಲಿ ಹೂಡಿಕೆ ಮಾಡಲು ಈತನನ್ನು ಪ್ರೇರೇಪಿಸಿದ್ದಳು. ಆರಂಭದಲ್ಲಿ ಸಂದೇಹಗೊಂಡಿದ್ದ ಸಂತ್ರಸ್ತ ಎಂಜಿನಿಯರ್​ 40,000 ಹೂಡಿಕೆ ಮಾಡಿದ್ದು, ಇದಕ್ಕೆ ಚಿಕ್ಕ ಮಟ್ಟಿನ ಲಾಭವೂ ಆತನಿಗೆ ಸಿಕ್ಕಿತ್ತು. ಹೀಗಾಗಿ ಆಕೆಯ ಮೇಲೆ ಎಂಜಿನಿಯರ್​​ ಹೆಚ್ಚು ವಿಶ್ವಾಸ ಹೊಂದಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮಗನ ರೋಗ ಗುಣಪಡಿಸಲು ಮಾಟಗಾತಿಯ ಮಾತು ನಂಬಿ ಮಗಳನ್ನೇ ಬಲಿಕೊಟ್ಟ ತಾಯಿ

ಇದರ ನಂತರ ದೊಡ್ಡ ಮೊತ್ತಗಳನ್ನು ಹೂಡಿಕೆ ಮಾಡಲು ಪ್ರೇರೇಪಿತನಾದ ಈತ, ಸ್ನೇಹಿತರಿಂದ ಮತ್ತು ಇತರ ಮಾದರಿಯ ಸಾಲಗಳನ್ನು ತೆಗೆದುಕೊಂಡು ಹಣ ಹೂಡಿಕೆ ಮಾಡಿದ್ದ. ಡಿಸೆಂಬರ್ ವೇಳೆಗೆ ಒಟ್ಟು 5.6 ಲಕ್ಷ ರೂ. ಹೂಡಿಕೆ ಮಾಡಿದಿದ್ದು, ನಂತರ ಈ ಮೊತ್ತ ಇನ್ನಷ್ಟು ಹೆಚ್ಚಾಗಿತ್ತು. ಮದುವೆ ಭರವಸೆ ಮತ್ತು ಭಾವನಾತ್ಮಕ ಒತ್ತಡದ ಮೂಲಕ ಹೆಚ್ಚಿನ ಹಣ ಹೂಡಿಕೆಗೆ ಮಹಿಳೆ ಒತ್ತಾಯಿಸಿದ ಕಾರಣ ಸಂತ್ರಸ್ತ ಹಂತ ಹಂತವಾಗಿ ಒಟ್ಟು 18.7 ಲಕ್ಷ ರೂ. ಹೂಡಿಕೆ ಮಾಡಿದ್ದ. ಈ ಪೈಕಿ 10 ಲಕ್ಷ ರೂ. ಸಾಲ ಮಾಡಿ ನೀಡಿರುವ ಹಣ ಎಂಬುದೂ ಈಗ ಬಹಿರಂಗವಾಗಿದೆ.

ಹೂಡಿಕೆ ಹೆಸರಲ್ಲಿ ನೀಡಿದ್ದ ಹಣವನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗದಾಗ ಎಂಜಿನಿಯರ್​​  ಅನುಮಾನಗೊಂಡು ಈ ಬಗ್ಗೆ ವಿಚಾರಿಸಿದ ಬಳಿಕ ಆರೋಪಿ ಮಹಿಳೆ ಈತನ ಜೊತೆಗಿನ ಸಂಪರ್ಕ ಕಡಿತಗೊಳಿಸಿದ್ದಳು. ಹೀಗಾಗಿ ತಾನು ಮೋಸ ಹೋಗಿರುವ ಬಗ್ಗೆ ಅರಿತ ಸ್ವಾಫ್ಟ್‌ವೇರ್ ಎಂಜಿನಿಯರ್​​, ಈ ಕುರಿತು ಪೂರ್ವ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಲಂ 318 ಅಡಿಯಲ್ಲಿ ಆರೋಪಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸಾಕು; ಹಣಕ್ಕೆಂದೂ ಕೊರತೆಯಾಗದು!

ಪ್ರತಿಯೊಬ್ಬರೂ ತಮ್ಮ ಮನೆ ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಬಯಸುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲ ಅಥವಾ ಸಾಲದ ಬಾಧೆ ತಪ್ಪುತ್ತಿಲ್ಲ ಎಂದಾದರೆ, ಅದಕ್ಕೆ ಮನೆಯಲ್ಲಿರುವ ವಾಸ್ತು ದೋಷ ಅಥವಾ ನಕಾರಾತ್ಮಕ ಶಕ್ತಿ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪವಿತ್ರ ವಸ್ತುಗಳನ್ನು ಮನೆಯಲ್ಲಿ ಇರಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬಹುದು. ನಿಮ್ಮ ಅದೃಷ್ಟವನ್ನು ಬದಲಿಸಬಲ್ಲ ಅಂತಹ ಐದು ವಸ್ತುಗಳ ವಿವರ ಇಲ್ಲಿದೆ:

ಸಂಪತ್ತಿನ ಅಧಿಪತಿ ‘ಕುಬೇರ ಯಂತ್ರ’:

ನೀವು ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಅಥವಾ ಸಾಲದ ಸುಳಿಗೆ ಸಿಲುಕಿದ್ದರೆ, ಮನೆಯಲ್ಲಿ ಕುಬೇರ ಯಂತ್ರವನ್ನು ಸ್ಥಾಪಿಸುವುದು ಉತ್ತಮ ಪರಿಹಾರ. ಕುಬೇರನನ್ನು ಸಂಪತ್ತಿನ ದೇವರು ಎಂದು ಕರೆಯಲಾಗುತ್ತದೆ. ಮನೆಯ ಉತ್ತರ ದಿಕ್ಕನ್ನು ಕುಬೇರನ ಸ್ಥಾನ ಎಂದು ಪರಿಗಣಿಸಲಾಗಿರುವುದರಿಂದ, ಈ ದಿಕ್ಕಿನಲ್ಲಿ ಅಥವಾ ಪೂಜಾ ಕೋಣೆಯಲ್ಲಿ ಕುಬೇರ ಯಂತ್ರವನ್ನು ಇರಿಸುವುದರಿಂದ ಆದಾಯದ ಹೊಸ ಮೂಲಗಳು ತೆರೆದುಕೊಳ್ಳುತ್ತವೆ.

ಇಷ್ಟಾರ್ಥ ಸಿದ್ಧಿಗೆ ‘ಕಾಮಧೇನು ಹಸು’:

ಹಿಂದೂ ಧರ್ಮದಲ್ಲಿ ಕಾಮಧೇನು ಹಸುವನ್ನು ಎಲ್ಲಾ ಆಸೆಗಳನ್ನು ಈಡೇರಿಸುವ ದೈವಿಕ ಶಕ್ತಿ ಎಂದು ನಂಬಲಾಗಿದೆ. ಮನೆಯ ಈಶಾನ್ಯ ಮೂಲೆಯಲ್ಲಿ ಕರುವಿನೊಂದಿಗೆ ಇರುವ ಕಾಮಧೇನು ಹಸುವಿನ ಪ್ರತಿಮೆಯನ್ನು ಇಡುವುದು ಅತ್ಯಂತ ಶುಭ. ಇದು ಕುಟುಂಬ ಸದಸ್ಯರ ನಡುವೆ ಪ್ರೀತಿ ಮತ್ತು ಸಾಮರಸ್ಯವನ್ನು ಹೆಚ್ಚಿಸುವುದಲ್ಲದೆ, ಬಡತನವನ್ನು ದೂರ ಮಾಡಿ ಮನೆಗೆ ನೆಮ್ಮದಿಯನ್ನು ತರುತ್ತದೆ.

ಆರ್ಥಿಕ ಲಾಭಕ್ಕಾಗಿ ‘ಲೋಹದ ಆಮೆ’:

ವಾಸ್ತು ಶಾಸ್ತ್ರದಲ್ಲಿ ಆಮೆಯನ್ನು ದೀರ್ಘಾಯುಷ್ಯ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಿತ್ತಾಳೆ, ಬೆಳ್ಳಿ ಅಥವಾ ತಾಮ್ರದಂತಹ ಲೋಹದ ಆಮೆಯನ್ನು ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸುವುದು ಆರ್ಥಿಕ ಲಾಭಕ್ಕೆ ಸಹಕಾರಿ. ಗಮನಿಸಬೇಕಾದ ಅಂಶವೆಂದರೆ, ಆಮೆಯ ಮುಖವು ಯಾವಾಗಲೂ ಮನೆಯ ಒಳಭಾಗದ ಕಡೆಗೆ ಇರಬೇಕು; ಇದು ಸಂಪತ್ತು ಮನೆಯೊಳಗೆ ಹರಿದು ಬರುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಸಮೃದ್ಧಿಯ ಸಂಕೇತ ‘ಮನಿ ಪ್ಲಾಂಟ್’:

ಹೆಸರೇ ಹೇಳುವಂತೆ ಮನಿ ಪ್ಲಾಂಟ್ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ವ್ಯತಿರಿಕ್ತ ಪರಿಣಾಮ ಬೀರಬಹುದು. ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ಯಾವಾಗಲೂ ಆಗ್ನೇಯ (ಆಗ್ನೇಯ) ದಿಕ್ಕಿನಲ್ಲಿ ಇಡಬೇಕು. ಈ ದಿಕ್ಕಿಗೆ ಅಧಿಪತಿ ಗಣೇಶ ಮತ್ತು ಶುಕ್ರ ಗ್ರಹವಾಗಿರುವುದರಿಂದ, ಇದು ಜೀವನದಲ್ಲಿ ಸುಖ-ಸೌಕರ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

ಮಂಗಳಕರ ‘ಶಂಖ’:

ಮನೆಯಲ್ಲಿ ಶಂಖವನ್ನು ಇಡುವುದು ಮತ್ತು ಅದನ್ನು ಪ್ರತಿದಿನ ಪೂಜಾ ಸಮಯದಲ್ಲಿ ಊದುವುದು ಅತ್ಯಂತ ಮಂಗಳಕರ. ಶಂಖದ ಶಬ್ದವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಧನಾತ್ಮಕ ಕಂಪನಗಳನ್ನು ಸೃಷ್ಟಿಸುತ್ತದೆ. ಪೂಜಾ ಕೋಣೆಯಲ್ಲಿ ಶಂಖವನ್ನು ಇರಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ಕಾಲ ಮನೆಮಂದಿಯ ಮೇಲಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹನುಮ ಜಯಂತಿಗೆ ವಿಶೇಷ ಹಾಡು ಹಾಡಿದ ಶರಣ್; ಎಂತಹ ಅದ್ಭುತ ಕಂಠ

ಶರಣ್ ಅವರು ಕೇವಲ ಒಳ್ಳೆಯ ನಟ ಮಾತ್ರ ಅಲ್ಲ ಅವರು ಅದ್ಭುತ ಹಾಡುಗಾರ ಕೂಡ ಹೌದು. ಈಗಾಗಲೇ ಕನ್ನಡದಲ್ಲಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಇಂದು (ಏಪ್ರಿಲ್ 2) ಹನುಮಜಯಂತಿ. ಹೀಗಾಗಿ, ಅವರು ವಿಶೇಷ ಹಾಡನ್ನು ಹಾಡಿದ್ದಾರೆ. ಹನುಮಂತಗೆ ಗೌರವ ಸೂಚಿಸುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅವರ ಧ್ವನಿ ಹಲವು ಜನರಿಗೆ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RCB ಇಲ್ಲ, ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಇರ್ಫಾನ್ ಪಠಾಣ್

Source link

ಅಂಜನಾದ್ರಿಯಲ್ಲಿ ಸಂಭ್ರಮದ ಹನುಮ ಜಯಂತಿ: ಹರಿದುಬಂದ ಭಕ್ತಸಾಗರ

ಕೊಪ್ಪಳ, ಏಪ್ರಿಲ್ 2: ಹನುಮ ಜಯಂತಿ ಹಬ್ಬದ ಪ್ರಯುಕ್ತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದೆ. ಆಂಜನೇಯನ ಜನ್ಮಸ್ಥಳವಾದ ಈ ಪುಣ್ಯಕ್ಷೇತ್ರದಲ್ಲಿ ಹನುಮ ಜಯಂತಿಯ ಪ್ರಯುಕ್ತ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕೇಸರಿ ವರ್ಣಮಯವಾಗಿ ಶೃಂಗಾರಗೊಂಡಿದ್ದ ಆಂಜನೇಯನ ಮೂರ್ತಿಯು ಭಕ್ತರ ಗಮನ ಸೆಳೆಯಿತು. ಹನುಮ ಜಯಂತಿ ಹಿನ್ನಲೆಯಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಹೊರ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Tech Tips: ಈಗ ಬಿಎಸ್ಎನ್ಎಲ್ ಬಳಕೆದಾರರು ನೆಟ್‌ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು: ಹೇಗೆ ನೋಡಿ

ಬೆಂಗಳೂರು (ಏ. 02): ಬಿಎಸ್ಎನ್ಎಲ್ (BSNL) ಬಳಕೆದಾರರು ಈಗ ನೆಟ್‌ವರ್ಕ್ ಸಂಪರ್ಕವಿಲ್ಲದೆಯೂ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಹೊಸ ಫೀಚರ್ ಹೊಸ ಸಿಮ್ ಕಾರ್ಡ್ ಖರೀದಿಸದೆ ಅಥವಾ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸದೆಯೇ ಕರೆಗಳನ್ನು ಮಾಡಲು ಅವರಿಗೆ ಅನುವು ಮಾಡಿಕೊಡುತ್ತದೆ. ಬಿಎಸ್ಎನ್ಎಲ್ ಬಳಕೆದಾರರು ಕಚೇರಿಗಳು, ಮನೆಗಳು ಅಥವಾ ಜನದಟ್ಟಣೆಯ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದ್ದರೆ ಈ ಆಯ್ಕೆ ಮೂಲಕ ಸುಲಭವಾಗಿ ಕರೆಯಲ್ಲಿ ಮಾತನಾಡಬಹುದು. ಇದಕ್ಕಾಗಿ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಬೇಕಾಗುತ್ತದೆ.

ಬಿಎಸ್ಎನ್ಎಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್ ಮೂಲಕ, ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಸಿಮ್ ಕಾರ್ಡ್ ಬದಲಿ ಇಲ್ಲದೆ ಬಳಕೆದಾರರು ಯಾವುದೇ ನೆಟ್‌ವರ್ಕ್ ಸಮಸ್ಯೆಗಳನ್ನು ಅನುಭವಿಸುವುದಿಲ್ಲ ಎಂದು ಹೇಳಿದೆ. ಸಿಗ್ನಲ್ ಲಭ್ಯತೆ ಕಡಿಮೆ ಇರುವ ಪ್ರದೇಶಗಳಲ್ಲಿಯೂ ಅವರು ಕರೆಗಳನ್ನು ಮಾಡಬಹುದು. ಇದನ್ನು ಮಾಡಲು, ಅವರು ತಮ್ಮ ಫೋನ್‌ಗಳಲ್ಲಿ VoWiFi ಸೇವೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಈ ವರ್ಷದ ಆರಂಭದಲ್ಲಿ VoWiFi ಸೇವೆಯನ್ನು ಪ್ರಾರಂಭಿಸಿತು. ಬಿಎಸ್​ಎನ್​ಎಲ್ ಬಳಕೆದಾರರು ಜನವರಿ 1, 2026 ರಿಂದ ಈ ವಿಶೇಷ ಸೇವೆಯನ್ನು ಪಡೆದಿದ್ದಾರೆ. ದೇಶಾದ್ಯಂತ ಎಲ್ಲಾ ಟೆಲಿಕಾಂ ವಲಯಗಳಲ್ಲಿ VoWiFi ಅನ್ನು ಬಿಡುಗಡೆ ಮಾಡಲಾಗಿದೆ. ಖಾಸಗಿ ಟೆಲಿಕಾಂ ಕಂಪನಿಗಳಂತೆ, ಬಿಎಸ್​ಎನ್​ಎಲ್ ಬಳಕೆದಾರರು ಇನ್ನು ಮುಂದೆ ಲಭ್ಯವಿಲ್ಲದ ವಲಯಗಳಲ್ಲಿ ಸಂಪರ್ಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.

VoWiFi ಎಂದರೇನು?

VoWiFi, ಅಥವಾ ವಾಯ್ಸ್ ಓವರ್ ವೈಫೈ, ಬಳಕೆದಾರರು ತಮ್ಮ ಮನೆ ಅಥವಾ ಕಚೇರಿಯ ವೈಫೈ ಬಳಸಿ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಹ ಕರೆ ಸೇವೆಗಳನ್ನು ಆನಂದಿಸಲು ಅನುವು ಮಾಡಿಕೊಡುವ ಸೇವೆಯಾಗಿದೆ. ಈ ಸೇವೆಗೆ ಸಿಮ್ ಕಾರ್ಡ್ ಬದಲಿ ಅಗತ್ಯವಿಲ್ಲ, ಅಥವಾ ಯಾವುದೇ ಹೆಚ್ಚುವರಿ ಶುಲ್ಕಗಳು ಅಗತ್ಯವಿರುವುದಿಲ್ಲ. ಬಿಎಸ್​ಎನ್​ಎಲ್ ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಬಳಕೆದಾರರು ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿನ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ VoWiFi ಅನ್ನು ಸಕ್ರಿಯಗೊಳಿಸಬಹುದು.

Phone Hijack Scam: ಫೋನ್ ಹೈಜಾಕ್ ಹಗರಣ ಎಂದರೇನು?: ಲಕ್ಷಾಂತರ ಹಣ ಕಳೆದುಕೊಳ್ಳುವ ಮುನ್ನ ಎಚ್ಚರ

VoWiFi ಸಕ್ರಿಯಗೊಳಿಸುವುದು ಹೇಗೆ?

ಈ ಸೇವೆಯನ್ನು ಸಕ್ರಿಯಗೊಳಿಸಲು, ನಿಮ್ಮ ಹ್ಯಾಂಡ್‌ಸೆಟ್ VoWiFi ಆಯ್ಕೆ ಹೊಂದಿರಬೇಕು. ಇತ್ತೀಚೆಗೆ ಬಿಡುಗಡೆ ಆಗುವ ಬಹುತೇಕ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ VoWiFi ಆಯ್ಕೆ ನೀಡಲಾಗಿರುತ್ತದೆ. ಅಂದರೆ ಅವು ವಾಯ್ಸ್ ಓವರ್ ವೈಫೈ ಆಯ್ಕೆ ನೀಡುತ್ತವೆ. ಆದಾಗ್ಯೂ, ಕೆಲವು ಹಳೆಯ ಸ್ಮಾರ್ಟ್‌ಫೋನ್‌ಗಳು VoWiFi ಅನ್ನು ಸಪೋರ್ಟ್ ಮಾಡುವುದಿಲ್ಲ.

ಈ ಸೇವೆಯನ್ನು ಸಕ್ರಿಯಗೊಳಿಸಲು, ಬಳಕೆದಾರರು ಮೊದಲು ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ.

  • ಇದಾದ ನಂತರ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಆಯ್ಕೆಗೆ ಹೋಗಿ.
  • ಇಲ್ಲಿ ನೀವು ಸಿಮ್ ಮುಂದೆ ಆಪರೇಟರ್ ಹೆಸರನ್ನು ನೋಡುತ್ತೀರಿ.
  • ಅದರ ಮೇಲೆ ಟ್ಯಾಪ್ ಮಾಡಿ ಮತ್ತು ಮುಂದಿನ ವಿಂಡೋಗೆ ಹೋಗಿ.
  • ಇಲ್ಲಿ ನೀವು ವೈಫೈ ಕಾಲಿಂಗ್ ಅಥವಾ VoWiFi ಆಯ್ಕೆಯನ್ನು ನೋಡುತ್ತೀರಿ.
  • ಟಾಗಲ್ ಆನ್ ಮಾಡಲು ಅದರ ಮೇಲೆ ಟ್ಯಾಪ್ ಮಾಡಿ.

ಈ ರೀತಿಯಾಗಿ, ನೀವು ನಿಮ್ಮ ಫೋನ್‌ನಲ್ಲಿ VoWiFi ಸೇವೆಯನ್ನು ಸಕ್ರಿಯಗೊಳಿಸಬಹುದು ಮತ್ತು ನೆಟ್‌ವರ್ಕ್ ಇಲ್ಲದ ಅಥವಾ ಕಡಿಮೆ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿಯೂ ಸಹ ನಿರಂತರ ಕರೆಯನ್ನು ಆನಂದಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link