Headlines

nagaraj11081993

LSG vs DC: ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಲಕ್ನೋ ‘ಸೂಪರ್ ಸ್ಟಾರ್ಸ್’

ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಲಕ್ನೋ ಈ ಪಂದ್ಯದಲ್ಲಿ ರನ್ ಮಳೆ ಹರಿಸುವ ನಿರೀಕ್ಷೆಯಿತ್ತು. ಆದರೆ ಮೊದಲ ಪಂದ್ಯದಲ್ಲಿ ಆ ನಿರೀಕ್ಷೆ ಸುಳ್ಳಾಗಿದೆ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಪಂದ್ಯದ ಮೂರನೇ ಓವರ್​ನಲ್ಲಿ…

Read More

ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಬೆಂಗಳೂರು, ಏಪ್ರಿಲ್​ 01: ಕಾಫಿ ಶಾಪ್‌ ಬಳಿ ಡ್ರಗ್ಸ್ ಸೇವನೆ ಆರೋಪ ಹಿನ್ನೆಲೆ ಹೋಟೆಲ್ ಸಿಬ್ಬಂದಿ ಮತ್ತು ಯುವಕರ ಗುಂಪ್ಪಿನ ನಡುವೆ ಭಾರಿ ಗಲಾಟೆ (fight) ನಡೆದಿರುವಂತಹ ಘಟನೆ ಕೊತ್ತನೂರಿನ ಭಾರತಿ ಸಿಟಿಯ ಕಾಫಿ ಶಾಪ್​​ ಬಳಿ ನಿನ್ನೆ ರಾತ್ರಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ. ನಡೆದಿದ್ದೇನು? ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯ ಯುವಕರ ಗುಂಪಿನ ನಡುವೆ ನಡೆದ ಈ ಗಲಾಟೆಗೆ ಡ್ರಗ್ಸ್ ಸೇವನೆ…

Read More

Chanakya Niti: ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ

ವೃತ್ತಿ ಜೀವನದಲ್ಲಿ (career) ಯಶಸ್ಸನ್ನು ಸಾಧಿಸಬೇಕೆಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ಹಗಲಿರುಳು ಶ್ರಮಿಸುತ್ತಾರೆ. ಹೀಗೆ ಕಠಿಣ ಪರಿಶ್ರಮ ಪಟ್ಟರೂ ಹಲವರಿಗೆ ಯಶಸ್ಸು ಅನ್ನೋದು ಲಭಿಸೋದೇ ಇಲ್ಲ. ವೃತ್ತಿ ಜೀವನದ ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಸಾಲುವುದಿಲ್ಲ, ಇದಕ್ಕಾಗಿ ಕೆಲವೊಂದು ಮೌಲ್ಯ, ತತ್ವಗಳನ್ನೂ ಅಳವಡಿಸಿಕೊಳ್ಳಬೇಕು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಚಾಣಕ್ಯರು ಹೇಳಿರುವಂತೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಏನು ಮಾಡಬೇಕು, ಯಾವ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ. ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಲು ಏನು…

Read More

ಉಪೇಂದ್ರ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ರಿಯಲ್ ಸ್ಟಾರ್

ನಟ, ನಿರ್ದೇಶಕ ಉಪೇಂದ್ರ ಅವರು ಮತ್ತೆ ಪ್ರಜಾಕೀಯ (Prajaakeeya) ಕೆಲಸಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದು (ಏಪ್ರಿಲ್ 1) ಅವರು ‘ದಿ ರಿಯಲ್ ಪ್ರಜಾಕೀಯ’ ಆ್ಯಪ್ ಬಿಡುಗಡೆ ಮಾಡಿದರು. ಈ ವೇಳೆ ಅವರು ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಉಪೇಂದ್ರ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾಯಿತು. ‘ಭಯ ಇದ್ದಿದ್ದರೆ ನಾನು ಇಷ್ಟೆಲ್ಲ ಮಾಡುತ್ತ ಇರಲಿಲ್ಲ. ನನಗೆ ಆದಾಗ ನಾನು ಸ್ಪರ್ಧೆ ಮಾಡುತ್ತೇನೆ. ಇಲ್ಲ ಅಂತ ನಾನು ಹೇಳಿಲ್ಲ. ನೋಡೋಣ, ನನಗೂ ಟೈಮ್ ಸಿಗಬೇಕು….

Read More

LSG vs DC: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರಿಷಭ್ ಪಂತ್; ವಿಡಿಯೋ

ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಅದರಂತೆ ಆರಂಭಿಕರಾಗಿ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ ಕಣಕ್ಕಿಳಿದಿದ್ದರು. ಇಬ್ಬರು ಮೊದಲ ಮೂರು ಓವರ್​ಗಳಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 19 ರನ್ ಕೂಡ ಕಲೆಹಾಕಿದರು. ಆದರೆ ಮುಖೇಶ್ ಕುಮಾರ್ ಬೌಲ್ ಮಾಡಿದ ಮೂರನೇ ಓವರ್​ನ ಕೊನೆಯ ಎಸೆತದಲ್ಲಿ ರಿಷಭ್ ಪಂತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾಗಬೇಕಾಯಿತು….

Read More

ಮಾರ್ಚ್​ನಲ್ಲಿ ನಿವ್ವಳ ಜಿಎಸ್​ಟಿ 1.78 ಲಕ್ಷ ಕೋಟಿ ರೂ; ಇಡೀ ವರ್ಷ 19.34 ಲಕ್ಷ ಕೋಟಿ ರೂ ಸಂಗ್ರಹ

ನವದೆಹಲಿ, ಏಪ್ರಿಲ್ 1: ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ನಿವ್ವಳ ಜಿಎಸ್​ಟಿ ಸಂಗ್ರಹ (GST collections) 1.78 ಲಕ್ಷ ಕೋಟಿ ರೂ ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್​ಟಿ ಸಂಗ್ರಹ ಶೇ. 8.2ರಷ್ಟು ಹೆಚ್ಚಿದೆ. ರೀಫಂಡ್ ಮಾಡಿರುವುದನ್ನೂ ಒಳಗೊಂಡರೆ ಒಟ್ಟೂ ಜಿಎಸ್​ಟಿ ಸಂಗ್ರಹ ಮಾರ್ಚ್​ನಲ್ಲಿ 2 ಲಕ್ಷ ಕೋಟಿ ರೂ ದಾಟಿದೆ. ಇದರಲ್ಲೂ ಕೂಡ ಹಿಂದಿನ ವರ್ಷದಕ್ಕಿಂತ ಶೇ. 8.8ರಷ್ಟು ಹೆಚ್ಚಿದೆ. ರೀಫಂಡ್ ಪ್ರಮಾಣ ಮಾರ್ಚ್​ನಲ್ಲಿ ಶೇ. 13.8ರಷ್ಟು ಹೆಚ್ಚಿದೆ. ಸರ್ಕಾರ ಬಿಡುಗಡೆ…

Read More

ದಾವಣಗೆರೆ ಬೈ ಎಲೆಕ್ಷನ್: ಮುಸ್ಲಿಂ ಮತಗಳ ಆತಂಕ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಸಿಎಂ ಮಹತ್ವದ ಸಂದೇಶ

ದಾವಣಗೆರೆ, ಏಪ್ರಿಲ್​ 01: ದಾವಣಗೆರೆ ದಕ್ಷಿಣ ಚುನಾವಣೆಗೆ (Davanagere South By Election) ಸಿಎಂ, ಡಿಸಿಎಂ, ಮಾಜಿ ಸಿಎಂಗಳು ಎಂಟ್ರಿಯಿಂದಾಗಿ ಭಾರೀ ರಂಗು ಪಡೆಯುತ್ತಿದೆ. ಬಿರುಬಿಸಿಲಿನಲ್ಲೂ ಮತಬೇಟೆಗೆ ಇಳಿದಿದ್ದು ಗೆಲುವಿಗಾಗಿ ಭರ್ಜರಿ ಭಾಷಣ ಮಾಡುತ್ತಿದ್ದಾರೆ. ನಮ್ಮದು ಹಿಂದುಳಿದವರ, ಬಡವರ ಹಾಗೂ ಮುಸ್ಲಿಂ ಪರವಾದ ಪಕ್ಷ. ಪಕ್ಷೇತರರಿಗೆ ಮತ ನೀಡಬೇಡಿ ಬಿಜೆಪಿ ಗೆಲ್ಲುತ್ತದೆ ಎಂಬ ಸಿಎಂ ಸಂದೇಶ ನೀಡಿದ್ದು, ಅಲ್ಪ ಸಂಖ್ಯಾತರ ಬಗ್ಗೆ ಕಾಂಗ್ರೆಸ್​ಗೆ ಆತಂಕ ಶುರುವಾಗಿದೆ. ಸಮರ್ಥ್ ಗೆಲ್ಲಿಸುವಂತೆ ಕರೆ ನೀಡಿದ ಸಿಎಂ ಸಿದ್ದರಾಮಯ್ಯ  ದಾವಣಗೆರೆ ಬೈ…

Read More

ಮಾಧವನ್ ಹೊರತು ಇನ್ಯಾರೂ ‘ಧುರಂಧರ್’ನಲ್ಲಿ ನಟಿಸಲು ಒಪ್ಪಿರಲಿಲ್ಲ

ಆದಿತ್ಯ ಧರ್ ನಿರ್ದೇಶಿಸಿ, ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರುಗಳು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರುಗಳು ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಈ…

Read More

ಸೌರವ್ ಗಂಗೂಲಿ ಬಯೋಪಿಕ್: ‘ದಾದಾ’ ಸಿನಿಮಾ ಶೂಟಿಂಗ್ ಆರಂಭಿಸಿದ ರಾಜ್‌ಕುಮಾರ್ ರಾವ್

ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಜೀವನದ ಕಥೆ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಸೌರವ್ ಗಂಗೂಲಿ ಬಯೋಪಿಕ್ (Sourav Ganguly Biopic) ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಈಗ ಆ ಸಿನಿಮಾಗೆ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿದೆ. ಈ ಚಿತ್ರಕ್ಕೆ ‘ದಾದಾ’ (Dada) ಎಂದು ಶೀರ್ಷಿಕೆ ಇಡಲಾಗಿದೆ. ಇದು ಬಹುನಿರೀಕ್ಷಿತ ಬಯೋಪಿಕ್. ಬುಧವಾರ (ಏಪ್ರಿಲ್ 1) ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ನಟ ರಾಜ್​ಕುಮಾರ್ ರಾವ್ (Rajkummar Rao)…

Read More

ಇರಾನ್ ಕದನವಿರಾಮಕ್ಕೆ ಮನವಿ ಮಾಡಿದೆ; ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ

ವಾಷಿಂಗ್ಟನ್, ಏಪ್ರಿಲ್, 1: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ತಮ್ಮ ಟ್ರೂತ್ ಸೋಷಿಯಲ್​ನ ಪೋಸ್ಟ್‌ನಲ್ಲಿ ಇರಾನ್ ಅಮೆರಿಕದ ಬಳಿ ಕದನ ವಿರಾಮಕ್ಕೆ ಮನವಿ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲ ದೇಶಗಳಿಗೆ ಮುಕ್ತಗೊಳಿಸಿದ ನಂತರ ಅಮೆರಿಕ ಕದನವಿರಾಮದ ಪ್ರಸ್ತಾಪವನ್ನು ಪರಿಗಣಿಸುತ್ತದೆ ಎಂದು ಅವರು ಹೇಳಿರುವುದಾಗಿ ತಿಳಿಸಿದ್ದಾರೆ. “ಇರಾನ್‌ನ ಹೊಸ ಆಡಳಿತದ ಅಧ್ಯಕ್ಷರು ಈ ಹಿಂದಿನ ಅಧ್ಯಕ್ಷರಿಗಿಂತ ಹೆಚ್ಚು ಬುದ್ಧಿವಂತರು. ಅಮೆರಿಕದ ಬಳಿ ಅವರು ಕದನವಿರಾಮಕ್ಕೆ ಮನವಿ ಮಾಡಿದ್ದಾರೆ! ಹಾರ್ಮುಜ್ ಜಲಸಂಧಿ ಯಾವಾಗ…

Read More