Headlines

nagaraj11081993

IPL 2026: ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್; ಆದರೆ..?

2026 ರ ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ಬೆಂಗಳೂರಿನಲ್ಲಿ ಮುಖಾಮುಖಿಯಾಗುತ್ತಿವೆ. ಆದಾಗ್ಯೂ ಈ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟೂರ್ನಿ ಆರಂಭಕ್ಕೂ ಮುನ್ನ ತಂಡವನ್ನು ಕೂಡಿಕೊಂಡಿದ್ದಾರೆ. ವಾಸ್ತವವಾಗಿ ಇಂಜುರಿಯಿಂದ ಬಳಲುತ್ತಿದ್ದ ಪ್ಯಾಟ್ ಕಮ್ಮಿನ್ಸ್, ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿತ್ತು. ಅದರಂತೆ ಫ್ರಾಂಚೈಸಿ ಕೂಡ ಇಶಾನ್ ಕಿಶನ್​​ಗೆ ತಂಡದ…

Read More

ಸನ್ ಫಾರ್ಮಾ ‘ಹಾರ್ಟ್ ಕೆ ಲಿಯೇ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನ; ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಯತ್ನ

ಮುಂಬೈ ಮಾರ್ಚ್ 26: ಸನ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (ಸನ್ ಫಾರ್ಮಾ) 2026ರ ಫೆಬ್ರವರಿ 26ರಂದು ತನ್ನ ‘ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಉತ್ತಮ ಹೃದಯ ಆರೋಗ್ಯಕ್ಕಾಗಿ ಸರಳವಾದ ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಾರತೀಯರನ್ನು ಉತ್ತೇಜಿಸಲೆಂದು ಈ ಕೆಂಪೇನ್ ನಡೆಸಲಾಗುತ್ತಿದೆ. ಕಾರ್ಡಿಯೊ-ಮೆಟಬಾಲಿಕ್ ಥೆರಪಿಯಲ್ಲಿ ಭಾರತದ ನಂ.1 ಫಾರ್ಮಸ್ಯುಟಿಕಲ್ ಕಂಪನಿಯಾಗಿ ಸನ್ ಫಾರ್ಮಾ ಸಂಸ್ಥೆಯು ಹೆಚ್ಚುತ್ತಿರುವ ಹೃದಯರೋಗಗಳ ಸಮಸ್ಯೆಯನ್ನು ಎದುರಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಲಿಪಿಡ್ ತಗ್ಗಿಸುವ ಥೆರಪಿಗಳಲ್ಲಿ ಮುಂಚೂಣಿಯಲ್ಲಿದೆ….

Read More

TV9-Sensodyne Campaign | ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ? ಡೆಂಟಲ್ ಏಜಿಂಗ್‌ನ್ನು ಅರ್ಥಮಾಡಿಕೊಳ್ಳಿ

ದೇಹದ ಫಿಟ್‌ನೆಸ್ ಕಾಪಾಡಲು ನಾವು ಪ್ರತಿದಿನ ಸಾವಿರಾರು ಹೆಜ್ಜೆ ನಡೆಯುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತೇವೆ. ಆದರೆ, ನಮ್ಮ ಹಲ್ಲುಗಳ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ನಾವು ಎಷ್ಟು ಗಮನ ಹರಿಸುತ್ತೇವೆ? ಅನೇಕ ಬಾರಿ, ನಮ್ಮ ಹಲ್ಲುಗಳ ವಯಸ್ಸು ನಮ್ಮ ದೇಹದ ವಯಸ್ಸಿಗಿಂತ ಹೆಚ್ಚಾಗಿರುತ್ತದೆ. ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ.ಡೆಂಟಲ್ ಏಜಿಂಗ್ ಎನ್ನುವುದು ಹಲ್ಲುಗಳು ತಮ್ಮ ಜೀವಿತಾವಧಿಗಿಂತ ವೇಗವಾಗಿ ಸವೆಯುವ ಅಥವಾ ದುರ್ಬಲಗೊಳ್ಳುವ ಪ್ರಕ್ರಿಯೆಯಾಗಿದೆ. ಹಲ್ಲಿನ ಸೂಕ್ಷ್ಮತೆ, ಹಲ್ಲಿನ ಸವೆತ, ದಂತಕವಚದ…

Read More

ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್​ 26: ಭಾರತದಲ್ಲಿ ಪೆಟ್ರೋಲ್(Petrol), ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಪೆಟ್ರೋಲ್ ಪಂಪ್‌ಗಳು ಮತ್ತು ಗ್ಯಾಸ್ ಏಜೆನ್ಸಿಗಳು ಸಾಕಷ್ಟು ದಾಸ್ತಾನು ಹೊಂದಿವೆ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಅಗತ್ಯ ವಸ್ತುಗಳ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಜನರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಒತ್ತಾಯಿಸಿದೆ….

Read More

ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್

ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್​ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ. ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ…

Read More

ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಮತ್ತು ಗೋಚಾರ ಫಲಗಳ ಆಧಾರದ ಮೇಲೆ ವೃಷಭ ರಾಶಿಯವರಿಗೆ ತಿಂಗಳಲ್ಲಿ ಯೋಜನೆಗೆ ಅನುಕೂಲಕರವಾಗಲಿದೆ. ಈ ರಾಶಿಗೆ ಕೃತ್ತಿಕಾದ ಮೂರು ಪಾದ, ರೋಹಿಣಿಯ ನಾಲ್ಕು ಪಾದ ಹಾಗೂ ಮೃಗಶಿರಾದ ಎರಡು ಪಾದಗಳು ಬರಲಿವೆ. ರೋಹಿಣೀ ನಕ್ಷತ್ರಕ್ಕೆ ವೃಷಭ ರಾಶಿಗೆ ಹೇಳಿದ ಪೂರ್ಣ ಫಲ ಸಿಗಲಿದೆ. ​ಉದ್ಯೋಗ ಮತ್ತು ವೃತ್ತಿ ಜೀವನ ​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರ ಬೆಳವಣಿಗೆಗಳಿರುತ್ತವೆ. ಹತ್ತನೇ ಮನೆಯ ಮೇಲೆ ಗ್ರಹಗಳ ದೃಷ್ಟಿ ಇರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಅದನ್ನು…

Read More

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಏಕೆ ಗೊತ್ತಾ?

ಬೆಂಗಳೂರು, ಮಾರ್ಚ್​ 26: ಕರ್ನಾಟಕದಾದ್ಯಂತ ಮಾರ್ಚ್​ 18ರಿಂದ ಎಸ್​​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿದೆ. ಈಗಾಗಲೇ ಕೆಲ ಪರೀಕ್ಷೆಗಳು ನಡೆದಿವೆ. ಆದರೆ ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಇದೀಗ ಮುಂದೂಡಲಾಗಿದೆ. ಮಾ.30ರಂದು ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದ್ದು, ಮಾ. 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ.   ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ. Source link

Read More

Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ

ಥಾಣೆ, ಮಾರ್ಚ್​ 26: ಥಾಣೆಯ ಅಂಬರ್ನಾಥ್ ಪ್ರದೇಶದಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಡೆದಿದೆ. ಬಾಲಕಿ ತನ್ನ ಆರು ವರ್ಷದ ಸಹೋದರನೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ನಾಯಿ ಇದ್ದಕ್ಕಿದ್ದಂತೆ ಅವಳ ಮೇಲೆ ಹಾರಿ ಅವಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಭಯಗೊಂಡ ಆಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ನಾಯಿ ಆಕೆಯನ್ನು ಗಟ್ಟಿಯಾಗಿ ಕಚ್ಚಿದ್ದು, ಆಕೆ ಕೂಗಿಕೊಂಡಾಗ ನಿವಾಸಿಗಳು ಆಕೆಯನ್ನು ರಕ್ಷಿಸಲು ಓಡಿ ಬಂದಿದ್ದಾರೆ.   ವಿಡಿಯೋ…

Read More

ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಕಲಬುರಗಿ, (ಮಾರ್ಚ್ 26): ವ್ಯಕ್ತಿಯೋರ್ವ, ಪತ್ನಿಯ ಕತ್ತು ಕೊಯ್ದು ಬಳಿಕ ಆಕೆ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. ಶೈಲಾ (28), ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಮಹಿಳೆ. ಅಕ್ಷಯ್‌ ಕೊಲೆ ಮಾಡಿದ ಆರೋಪಿ. 28 ವರ್ಷದ ಮಹಿಳೆಯನ್ನ ಕಾರಿನಲ್ಲಿ ಕರೆತಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ನಿಲ್ಲಿಸಿ ಕುಡುಗೋಲಿನಿಂದ ಆಕೆಯ ಕತ್ತನ್ನು ಕೂಯ್ದಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ತಪ್ಪಿಸಿಕೊಳ್ಳಲು ಜಮೀನನಲ್ಲಿ ಓಡಿ…

Read More

ಏಳು ಗಂಟೆಗಳ ಬಳಿಕ ದೆಹಲಿಗೆ ವಾಪಸಾದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ

ನವದೆಹಲಿ, ಮಾರ್ಚ್​ 26: ದೆಹಲಿಯಿಂದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ತಾಂತ್ರಿಕ ದೋಷದ ಹಿನ್ನೆಲೆ ಏಳು ಗಂಟೆಗಳ ಬಳಿಕ ದೆಹಲಿಗೆ ಹಿಂದಿರುಗಿದೆ. A350-900 ವಿಮಾನ VT-JRF ಮಾರ್ಚ್ 15 ರಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು.ನ್ಯೂಯಾರ್ಕ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಐರಿಶ್ ಪಟ್ಟಣವಾದ ಶಾನನ್‌ಗೆ ತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿದ್ದವು. ಗುರುವಾರ ದೆಹಲಿಯಿಂದ ಲಂಡನ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ AI111, ತಾಂತ್ರಿಕ ದೋಷದ ನಂತರ ಮುನ್ನೆಚ್ಚರಿಕೆಯಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ ಎಂದು…

Read More