All posts by nagaraj11081993

IPL 2026: ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡ ಸೇರಿಕೊಂಡ ಪ್ಯಾಟ್ ಕಮ್ಮಿನ್ಸ್; ಆದರೆ..?

Source link

ಸನ್ ಫಾರ್ಮಾ ‘ಹಾರ್ಟ್ ಕೆ ಲಿಯೇ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನ; ಹೃದಯದ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಯತ್ನ

ಮುಂಬೈ ಮಾರ್ಚ್ 26: ಸನ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ (ಸನ್ ಫಾರ್ಮಾ) 2026ರ ಫೆಬ್ರವರಿ 26ರಂದು ತನ್ನ ‘ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಉತ್ತಮ ಹೃದಯ ಆರೋಗ್ಯಕ್ಕಾಗಿ ಸರಳವಾದ ದೈನಂದಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಭಾರತೀಯರನ್ನು ಉತ್ತೇಜಿಸಲೆಂದು ಈ ಕೆಂಪೇನ್ ನಡೆಸಲಾಗುತ್ತಿದೆ. ಕಾರ್ಡಿಯೊ-ಮೆಟಬಾಲಿಕ್ ಥೆರಪಿಯಲ್ಲಿ ಭಾರತದ ನಂ.1 ಫಾರ್ಮಸ್ಯುಟಿಕಲ್ ಕಂಪನಿಯಾಗಿ ಸನ್ ಫಾರ್ಮಾ ಸಂಸ್ಥೆಯು ಹೆಚ್ಚುತ್ತಿರುವ ಹೃದಯರೋಗಗಳ ಸಮಸ್ಯೆಯನ್ನು ಎದುರಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಲಿಪಿಡ್ ತಗ್ಗಿಸುವ ಥೆರಪಿಗಳಲ್ಲಿ ಮುಂಚೂಣಿಯಲ್ಲಿದೆ. ರಕ್ತದೊತ್ತಡ, ಮಧುಮೇಹ ಚಿಕಿತ್ಸೆಗಳಲ್ಲಿ ಬಲವಾದ ಉಪಸ್ಥಿತಿ ಹೊಂದಿದೆ.

ಭಾರತದಲ್ಲಿ ಹೃದಯರೋಗಗಳಿಂದ (CVD- Cardio Vascular Disease) ಆಗುವ ಮರಣಗಳು ಒಟ್ಟು ಜಾಗತಿಕ ಹೃದಯರೋಗಗಳ ಮರಣದಲ್ಲಿ ಐದನೇ ಒಂದು ಭಾಗದಷ್ಟಿದೆ ಮತ್ತು ಅವು ಹಲವು ಪಾಶ್ಚಿಮಾತ್ಯ ಜನಸಂಖ್ಯೆಗಳಿಗಿಂತ ಭಾರತೀಯರನ್ನು ಒಂದು ದಶಕ ಮುಂಚೆಯೇ ಬಾಧಿಸುತ್ತವೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಅಭಿಯಾನವು ಹೃದಯದ ಆರೋಗ್ಯವನ್ನು ಆಗಾಗ್ಗೆ ನೆಸುವ ಪ್ರಯತ್ನಗಳಿಂದಲ್ಲ, ಬದಲಿಗೆ ಪ್ರತಿನಿತ್ಯದ ಜೀವನದ ಭಾಗವಾಗುವ ಸಣ್ಣ, ಸ್ಥಿರವಾದ ಪ್ರಯತ್ನಗಳು ಅಗತ್ಯ ಎನ್ನುತ್ತದೆ.

“ಚಿಕಿತ್ಸೆಯಷ್ಟೇ ಮುಖ್ಯವಾದದು ರೋಗ ನಿಯಂತ್ರಣ ಎಂಬ ನಂಬಕೆ ಸನ್ ಫಾರ್ಮಾದಲ್ಲಿ ಇದೆ. `ಹಾರ್ಟ್ ಕೆ ಲಿಯೆ 8- ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ಮೂಲಕ ನಾವು ಹೃದಯದ ಆರೋಗ್ಯದ ಸುತ್ತಲಿನ ಪ್ರತಿನಿತ್ಯದ ಸಂವಹನಗಳನ್ನು ಉತ್ತೇಜಿಸುವ ಮತ್ತು ಭಾರತೀಯರಿಗೆ ಪ್ರತಿನಿತ್ಯ ಆಚರಿಸುವ ಸಣ್ಣ, ಸ್ಥಿರವಾದ ಕ್ರಮಗಳು ಮಹತ್ತರ ವ್ಯತ್ಯಾಸ ತರಬಲ್ಲವು ಎಂದು ತಿಳಿಯಲು ನೆರವಾಗಲು ಬಯಸುತ್ತೇವೆ. ಸದೃಢ ಹೃದಯ ಎನ್ನುವುದು ಅದಾಗಿ ಬರುವುದಲ್ಲ, ಬದಲಿಗೆ ನಾವು ಪ್ರತಿನಿತ್ಯ ಮಾಡುವ ಆಯ್ಕೆಗಳಿಂದ ನಿರ್ಮಿಸುವುದಾಗಿದೆ” ಎಂದು ಸನ್ ಫಾರ್ಮಾದ ಸೀನಿಯರ್ ವೈಸ್ ಪ್ರೆಸಿಡೆಂಟ್ ಶೈಲೇಶ್ ಜೋಶಿ ಹೇಳಿದರು.

ಹಾರ್ಟ್​ಕೇಲಿಯೇ8, ಒಂದು ಕಿರುಚಿತ್ರ ವೀಕ್ಷಿಸಿ

ಹೃದಯದ ಆರೋಗ್ಯ ಉತ್ತಮವಾಗಿರುವ ವ್ಯಕ್ತಿ ಈ ಅಭಿಯಾನದ ಕೇಂದ್ರಬಿಂದುವಾಗಿದ್ದಾರೆ. ಸಮತೋಲನ, ಅರವು, ನಿತ್ಯ ಆರೈಕೆ ಮೂಲಕ ಹೃದಯದ ಆರೋಗ್ಯವನ್ನು ಕಾಳಜಿ ಮಾಡುವ ವ್ಯಕ್ತಿಯ ಪ್ರತಿರೂಪ ಈತ. ಈ ಫಿಲಂನಲ್ಲಿ ಸಕಾರಾತ್ಮಕವಾದ ಮತ್ತು ವಾಸ್ತವಿಕ ಮಾತುಗಳಿದ್ದು, ಯಾವುದೇ ವ್ಯಕ್ತಿಗಳು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪ್ರೇರೇಪಿಸಲ್ಲಂತಿದೆ. ಹಲವು ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಇದೆ. ಈ ಅಭಿಯಾನವು ಹೃದಯ ಆರೋಗ್ಯದ ಎಂಟು ಅಗತ್ಯ ಸ್ತಂಭಗಳ ಮೇಲೆ ನಿಂತಿದೆ:

  1. ಉತ್ತಮ ಆಹಾರ ಸೇವನೆ
  2. ದೈಹಿಕವಾಗಿ ಕ್ರಿಯಾಶೀಲವಾಗಿರುವುದು
  3. ತೂಕ ನಿರ್ವಹಿಸುವುದು
  4. ರಕ್ತದೊತ್ತಡ, ಬ್ಲಡ್ ಶುಗರ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಿಸುವುದು
  5. ತಂಬಾಕು ತ್ಯಜಿಸುವುದು
  6. ನಿಯಮಿತ ಹೃದಯ ಆರೋಗ್ಯ ಪರೀಕ್ಷೆಗೆ ಒಳಪಡುವುದು
  7. ಒತ್ತಡ ನಿಭಾಯಿಸುವುದು
  8. ಗುಣಮಟ್ಟದ ನಿದ್ರೆ ಮಾಡುವುದು

ಸನ್ ಫಾರ್ಮಾದ `ಮೇಕಿಂಗ್ ಇಂಡಿಯಾ ಹಾರ್ಟ್ ಸ್ಟ್ರಾಂಗ್’ ಉಪಕ್ರಮವು ರೋಗನಿಯಂತ್ರಣ, ತುರ್ತು ಸ್ಪಂದನೆ ಮತ್ತು ರೋಗಿ ಶಿಕ್ಷಣದ ಮೂಲಕ ಹೃದಯ ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಅನುಸರಿಸುತ್ತದೆ. ಈ ಕೆಳಗಿನ ಕ್ರಮಗಳು ಈ ವಿಧಾನದಲ್ಲಿ ಇರುತ್ತವೆ:

  • ದೊಡ್ಡ ಪ್ರಮಾಣದ ಹೃದಯಪರೀಕ್ಷಾ ಶಿಬಿರಗಳ ಮೂಲಕ ಪ್ರಾರಂಭಿಕ ರೋಗಪತ್ತೆ- ವಾರ್ಷಿಕ 1.2 ಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಂಡ 10,000 ಶಿಬಿರಗಳು.
  • ವಾರ್ಷಿಕ 1.5 ಲಕ್ಷ ಜನರಿಗೆ ಸಿ.ಪಿ.ಆರ್. ತರಬೇತಿ ಮೂಲಕ ತುರ್ತು ಸನ್ನದ್ಧತೆ
  • ರಿಸ್ಕ್ ನಿರ್ವಹಣೆ ಮತ್ತು ರೋಗಿ ಫಲಿತಾಂಶಗಳನ್ನು ಸುಧಾರಿಸಲು ಪುರಾವೆಗಳ ಒಗ್ಗೂಡಿಕೆ
  • ಪ್ರತಿ ವರ್ಷ ಇನ್-ಕ್ಲಿನಿಕ್ ಮುದ್ರಣ ಮತ್ತು ಅರಿವಿನ ಕಾರ್ಯಕ್ರಮಗಳ ಮೂಲಕ 15 ಮಿಲಿಯನ್​ಗೂ ಹೆಚ್ಚು ರೋಗಿಗಳಿಗೆ ಅರಿವು

ಒಟ್ಟಿಗೆ ಈ ಪ್ರಯತ್ನಗಳು ರೋಗತಡೆ, ಪ್ರತಿಕ್ರಿಯೆ ಮತ್ತು ಅರಿವನ್ನು ಸದೃಢಗೊಳಿಸುವ ಗುರಿ ಹೊಂದಿದ್ದು ಭಾರತದಲ್ಲಿ ಹೃದಯರೋಗಗಳನ್ನು ಕಡಿಮೆ ಮಾಡಲು ದೀರ್ಘಾವಧಿ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿದೆ.

About Sun Pharmaceutical Industries Limited (CIN – L24230GJ1993PLC019050)

Sun Pharma is the world’s leading specialty generics company with a presence in innovative medicines, generics and consumer healthcare products. It is the largest pharmaceutical company in India and is a leading generic company in the U.S. as well as global Emerging Markets. Sun Pharma’s high-growth global Innovative Medicines portfolio spans innovative products in dermatology, ophthalmology, and onco-dermatology and accounts for about 20% of company sales. The company’s vertically integrated operations deliver high-quality medicines, trusted by physicians and consumers in over 100 countries. Its manufacturing facilities are spread across five continents. Sun Pharma is proud of its multicultural workforce drawn from over 50 nations. For further information, please visit www.sunpharma.comand follow us on LinkedInand X(Formerly Twitter).

(ಗಮನಿಸಿ: ಇದು ಪ್ರಾಯೋಜಿತ ಬರಹವಾಗಿದೆ)

Source link

TV9-Sensodyne Campaign | ನಿಮ್ಮ ಹಲ್ಲುಗಳ ವಯಸ್ಸು ನಿಮ್ಮ ವಯಸ್ಸಿಗಿಂತ ಹೆಚ್ಚಾಗಿದೆಯೇ? ಡೆಂಟಲ್ ಏಜಿಂಗ್‌ನ್ನು ಅರ್ಥಮಾಡಿಕೊಳ್ಳಿ

ದೇಹದ ಫಿಟ್‌ನೆಸ್ ಕಾಪಾಡಲು ನಾವು ಪ್ರತಿದಿನ ಸಾವಿರಾರು ಹೆಜ್ಜೆ ನಡೆಯುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ ಮತ್ತು ನಿದ್ದೆಯನ್ನು ಟ್ರ್ಯಾಕ್ ಮಾಡುತ್ತೇವೆ. ಆದರೆ, ನಮ್ಮ ಹಲ್ಲುಗಳ ಆರೋಗ್ಯ ಮತ್ತು ವಯಸ್ಸಿನ ಬಗ್ಗೆ ನಾವು ಎಷ್ಟು ಗಮನ ಹರಿಸುತ್ತೇವೆ? ಅನೇಕ ಬಾರಿ, ನಮ್ಮ ಹಲ್ಲುಗಳ ವಯಸ್ಸು ನಮ್ಮ ದೇಹದ ವಯಸ್ಸಿಗಿಂತ ಹೆಚ್ಚಾಗಿರುತ್ತದೆ. ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ.ಡೆಂಟಲ್ ಏಜಿಂಗ್ ಎನ್ನುವುದು ಹಲ್ಲುಗಳು ತಮ್ಮ ಜೀವಿತಾವಧಿಗಿಂತ ವೇಗವಾಗಿ ಸವೆಯುವ ಅಥವಾ ದುರ್ಬಲಗೊಳ್ಳುವ ಪ್ರಕ್ರಿಯೆಯಾಗಿದೆ. ಹಲ್ಲಿನ ಸೂಕ್ಷ್ಮತೆ, ಹಲ್ಲಿನ ಸವೆತ, ದಂತಕವಚದ ಸಮಸ್ಯೆಗಳು, ವಸಡುಗಳ ಸಮಸ್ಯೆಗಳು ಮತ್ತು ಹಲ್ಲು ಹಳದಿಯಾಗುವುದು ಡೆಂಟಲ್ ಏಜಿಂಗ್‌ನ ಕೆಲವು ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ, ನಿಮ್ಮ ಹಲ್ಲುಗಳಿಗೆ ವಿಶೇಷ ಕಾಳಜಿ ಅಗತ್ಯವಿದೆ ಎಂದು ಅರ್ಥ. ನಿಮ್ಮ ಹಲ್ಲುಗಳ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಮುಖ್ಯ. ಡೆಂಟಲ್ ಏಜಿಂಗ್ ಲಕ್ಷಣಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ನಿಮ್ಮ ಹಲ್ಲುಗಳನ್ನು ನಿಮಗಿಂತ ಹೆಚ್ಚು ವಯಸ್ಸಾಗಲು ಬಿಡಬಾರದು. ಡೆಂಟಲ್ ಏಜಿಂಗ್ ಅನ್ನು ತಡೆಗಟ್ಟಲು ಮತ್ತು ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲ ಹೆಜ್ಜೆಯನ್ನು ಇರಿಸಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೈಲ ಪೂರೈಕೆ ಕುರಿತು ಅಭಯ ನೀಡಿ, ವದಂತಿ ಹರಡುವವರಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ನವದೆಹಲಿ, ಮಾರ್ಚ್​ 26: ಭಾರತದಲ್ಲಿ ಪೆಟ್ರೋಲ್(Petrol), ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ. ಎಲ್ಲಾ ಪೆಟ್ರೋಲ್ ಪಂಪ್‌ಗಳು ಮತ್ತು ಗ್ಯಾಸ್ ಏಜೆನ್ಸಿಗಳು ಸಾಕಷ್ಟು ದಾಸ್ತಾನು ಹೊಂದಿವೆ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ. ಅಗತ್ಯ ವಸ್ತುಗಳ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಮತ್ತು ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಜನರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಒತ್ತಾಯಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ದಾರಿತಪ್ಪಿಸುವ ಸುದ್ದಿಗಳನ್ನು ನಂಬಬೇಡಿ , ಇದು ಅನಗತ್ಯ ಭೀತಿಯನ್ನು ಹರಡುವ ಗುರಿಯನ್ನು ಹೊಂದಿರುವ ಪ್ಲ್ಯಾನ್ ಆಗಿದೆ ಎಂದು ಸಚಿವಾಲಯ ಹೇಳಿದೆ.
ದೇಶಾದ್ಯಂತ 100,000 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳು ತೆರೆದಿದ್ದು, ನಿರಂತರವಾಗಿ ಇಂಧನವನ್ನು ಪೂರೈಸುತ್ತಿವೆ. ಯಾವುದೇ ಪಡಿತರ ವ್ಯವಸ್ಥೆ ಇಲ್ಲ, ಮತ್ತು ಯಾವುದೇ ಪಂಪ್‌ಗಳಿಗೆ ಸರಬರಾಜುಗಳನ್ನು ಮಿತಿಗೊಳಿಸುವಂತೆ ಸೂಚಿಸಲಾಗಿಲ್ಲ.

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಸಂಸ್ಕರಣಾಗಾರ ಮತ್ತು ಐದನೇ ಅತಿದೊಡ್ಡ ಪೆಟ್ರೋಲಿಯಂ ರಫ್ತುದಾರ. 150 ಕ್ಕೂ ಹೆಚ್ಚು ದೇಶಗಳಿಗೆ ಇಂಧನವನ್ನು ಪೂರೈಸುವ ಮೂಲಕ, ಭಾರತವು ದೇಶೀಯ ಅಗತ್ಯಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ: ಪೆಟ್ರೋಲ್, ಡೀಸಲ್ ಕೊರತೆ ಇಲ್ಲ, ಗಾಬರಿ ಬೇಡ: ಪೆಟ್ರೋಲಿಯಂ ಕಂಪನಿಗಳಿಂದ ಸ್ಪಷ್ಟನೆ

ಅನೇಕ ದೇಶಗಳು ಹಣದುಬ್ಬರ, ಪಡಿತರ ಮತ್ತು ಇಂಧನ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಭಾರತವು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲ. ದೇಶವು ಇಂಧನ ತುರ್ತುಸ್ಥಿತಿಯಂತಹ ಕ್ರಮಗಳನ್ನು ಜಾರಿಗೆ ತರುವ ಅಗತ್ಯವಿರಲಿಲ್ಲ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆಯ ಹೊರತಾಗಿಯೂ, ಭಾರತವು 41 ಕ್ಕೂ ಹೆಚ್ಚು ದೇಶಗಳಿಂದ ಕಚ್ಚಾ ತೈಲವನ್ನು ಪಡೆಯುತ್ತಿದೆ. ಸಂಸ್ಕರಣಾಗಾರಗಳು ಶೇ.100 ಕ್ಕಿಂತ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮುಂದಿನ 60 ದಿನಗಳವರೆಗೆ ಸರಬರಾಜುಗಳನ್ನು ಈಗಾಗಲೇ ಖಚಿತಪಡಿಸಲಾಗಿದೆ.

ದೇಶವು ಕೇವಲ ಆರು ದಿನಗಳ ಸ್ಟಾಕ್ ಹೊಂದಿದೆ ಎಂಬ ಹೇಳಿಕೆ ಕೇವಲ ವದಂತಿಯಾಗಿದೆ. ಭಾರತವು ಸರಿಸುಮಾರು 60 ದಿನಗಳ ಸ್ಟಾಕ್ ಮತ್ತು ಒಟ್ಟು 74 ದಿನಗಳ ಸಾಮರ್ಥ್ಯವನ್ನು ಹೊಂದಿದೆ.
ಎಲ್‌ಪಿಜಿ ಉತ್ಪಾದನೆಯನ್ನು ಶೇ. 40 ರಷ್ಟು ಹೆಚ್ಚಿಸಲಾಗಿದ್ದು, ಆಮದು ಅಗತ್ಯ ಕಡಿಮೆಯಾಗಿದೆ. ಪ್ರತಿದಿನ 5 ದಶಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಹೆಚ್ಚುವರಿ ಸರಬರಾಜಾಗುತ್ತಿವೆ.

ಸುಳ್ಳು ಮಾಹಿತಿ ಹರಡುವುದು ಕ್ರಿಮಿನಲ್ ಅಪರಾಧ ಎಂದು ಸರ್ಕಾರ ಎಚ್ಚರಿಸಿದೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆರ್​ಸಿಬಿಗೆ ನವಿ ಯುಪಿಐ ಮತ್ತೊಮ್ಮೆ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್; ಈ ಬಾರಿ ಫಾಸ್ಟೆಸ್ಟ್ ಮೊಮೆಂಟ್ ಗೇಮ್

ಬೆಂಗಳೂರು, ಮಾರ್ಚ್ 26: ಹೊಸ ಮಾಲೀಕರನ್ನು ಪಡೆದಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಫ್ರಾಂಚೈಸಿಯು ತನ್ನ ಅಧಿಕೃತ ಪೇಮೆಂಟ್ಸ್ ಪಾರ್ಟ್ನರ್ ಆಗಿ ನವಿ ಯುಪಿಐ (Navi UPI App) ಅನ್ನು ಉಳಿಸಿಕೊಂಡಿದೆ. 2026ರ ಐಪಿಎಲ್ ಸೀಸನ್​ನಲ್ಲಿ ನವಿ ಯುಪಿಐ ‘ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್’ (Fastest Moment of the Match powered by Navi UPI) ಪ್ರಶಸ್ತಿಯನ್ನು ಪರಿಚಯಿಸಲಿದೆ.

ಪಂದ್ಯಕ್ಕೆ ತಿರುವು ಕೊಟ್ಟಂತಹ ಅತ್ಯಂತ ನಿರ್ಣಾಯಕವಾದ, ಬಹಳ ಪರಿಣಾಮಕಾರಿ ಕ್ಷಣಕ್ಕೆ ಕಾರಣವಾದ ಆಟಗಾರನನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆಟಗಾರನ ಅಕೌಂಟ್​ಗೆ ನವಿ ಯುಪಿಐ ಮೂಲಕ ತತ್​ಕ್ಷಣವೇ 50,000 ರೂ ಹಣ ಹಾಕಲಾಗುತ್ತದೆ.

‘ಈ ಸೀಸನ್​ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (RCB) ಜೊತೆ ನಮ್ಮ ಪಾರ್ಟ್ನರ್​ಶಿಪ್ ಮುಂದುವರಿಸಲು ಸಂತೋಷವಾಗಿದೆ. ಕ್ರಿಕೆಟ್ ಎಂಬುದು ಕ್ಷಣಗಳ ಒಂದು ಆಟ. ಪಂದ್ಯದ ಫಲಿತಾಂಶವನ್ನೇ ಬದಲಿಸುವ ಅತ್ಯಂತ ವೇಗದ ಮತ್ತು ಅತ್ಯಂತ ನಿರ್ಣಾಯಕ ಕ್ಷಣ ಆಗಿರುತ್ತದೆ. ನವಿ ಯುಪಿಐ ಎಷ್ಟು ತ್ವರಿತವಾಗಿ ಕೆಲಸ ಮಾಡುತ್ತದೆ ಎಂದರೆ, ಅದನ್ನು ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಹೋಲಿಸಬಹುದು’ ಎಂದು ನವಿ ಲಿಮಿಟೆಡ್​ನ ಎಂಡಿ ಮತ್ತು ಸಿಇಒ ಆದ ರಾಜೀವ್ ನರೇಶ್ ಹೇಳಿದ್ದಾರೆ.

ಇದನ್ನೂ ಓದಿ: Petrol Diesel Prices: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಆರ್​ಸಿಬಿ ಸಿಇಒ ರಾಜೇಶ್ ವಿ ಮೆನನ್ ಕೂಡ ಹೇಳಿಕೆ ನೀಡಿದ್ದು, ‘ಆರ್​ಸಿಬಿಯ ವೇಗ ಮತ್ತು ಪರಿಣಾಮದ ಗುಣವು ಫಾಸ್ಟೆಸ್ಟ್ ಮೊಮೆಂಟ್ ಆಫ್ ಮ್ಯಾಚ್​ಗೆ ಸರಿ ಹೊಂದುತ್ತದೆ’ ಎಂದಿದ್ದಾರೆ.

ಇನ್ನು, ನವಿ ಯುಪಿಐನ ಫಾಸ್ಟೆಸ್ಟ್ ಮೊಮೆಂಟ್ ಆಫ್ ದಿ ಮ್ಯಾಚ್ ಪ್ರಶಸ್ತಿಯು ಆರ್​ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲೂ ಇರುತ್ತದೆ. ಇದರಲ್ಲಿ ನವಿ ಯುಪಿಐ ಬಳಕೆದಾರರ ಪಾಲ್ಗೊಳ್ಳುವಿಕೆಗೆ ಅವಕಾಶ ಇದೆಯಾ ಇಲ್ಲವಾ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ, ನವಿ ಯುಪಿಐ ಬಳಕೆದಾರರಿಗೆ ಐಪಿಎಲ್ ಪಂದ್ಯಗಳಲ್ಲಿ ಇತರ ಕೆಲ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ.

ನವಿ ಆ್ಯಪ್​ನಲ್ಲಿ ಪವರ್​ಪ್ಲೇ ಸ್ಪರ್ಧೆ ಇದ್ದು, ಅದರಲ್ಲಿ ಭಾಗವಹಿಸುವವರು ಯುಪಿಐ ಟ್ರಾನ್ಸಾಕ್ಷನ್ ಮಾಡಿದರೆ ಆರ್​ಸಿಬಿ ಆಟಗಾರರ ಡಿಜಿಟಲ್ ಕಾರ್ಡ್​ಗಳನ್ನು ಸಂಗ್ರಹಿಸಬಹುದು. ಆರ್​ಸಿಬಿ ಜೆರ್ಸಿಗಳು ಮತ್ತು ಆಟಗಾರರಿಂದ ಸಹಿಹಾಕಲಾದ ಕ್ರಿಕೆಟ್ ಬ್ಯಾಟುಗಳನ್ನು ಗೆಲ್ಲಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಬೆಂಗಳೂರಿನಲ್ಲಿ ನಡೆಯುವ ಆರ್​ಸಿಬಿ ಮ್ಯಾಚುಗಳಲ್ಲಿ ಟಿಕೆಟ್ ಮಾರಾಟವು ಸಾರ್ವಜನಿಕರಿಗೆ ಲಭ್ಯವಾಗುವ 24 ಗಂಟೆ ಮುಂಚೆ ನವಿ ಯುಪಿಐ ಬಳಕೆದಾರರಿಗೆ ಖರೀದಿಗೆ ಲಭ್ಯ ಇರುತ್ತದೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರಿಗೆ ಎಪ್ರಿಲ್​​ ತಿಂಗಳು ಲಕ್ಕೋ ಲಕ್ಕು: ಉದ್ಯೋಗ, ವಿದ್ಯಾಭ್ಯಾಸ, ಹಣಕಾಸಿನಲ್ಲಿ ಭರ್ಜರಿ ಅವಕಾಶ

2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಮತ್ತು ಗೋಚಾರ ಫಲಗಳ ಆಧಾರದ ಮೇಲೆ ವೃಷಭ ರಾಶಿಯವರಿಗೆ ತಿಂಗಳಲ್ಲಿ ಯೋಜನೆಗೆ ಅನುಕೂಲಕರವಾಗಲಿದೆ. ಈ ರಾಶಿಗೆ ಕೃತ್ತಿಕಾದ ಮೂರು ಪಾದ, ರೋಹಿಣಿಯ ನಾಲ್ಕು ಪಾದ ಹಾಗೂ ಮೃಗಶಿರಾದ ಎರಡು ಪಾದಗಳು ಬರಲಿವೆ. ರೋಹಿಣೀ ನಕ್ಷತ್ರಕ್ಕೆ ವೃಷಭ ರಾಶಿಗೆ ಹೇಳಿದ ಪೂರ್ಣ ಫಲ ಸಿಗಲಿದೆ.

​ಉದ್ಯೋಗ ಮತ್ತು ವೃತ್ತಿ ಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರ ಬೆಳವಣಿಗೆಗಳಿರುತ್ತವೆ. ಹತ್ತನೇ ಮನೆಯ ಮೇಲೆ ಗ್ರಹಗಳ ದೃಷ್ಟಿ ಇರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಅದನ್ನು ನಿಭಾಯಿಸುವ ಶಕ್ತಿ ನಿಮಗಿರುತ್ತದೆ. ಸಹೋದ್ಯೋಗಿಗಳೊಂದಿಗೆ ವಿನಾಕಾರಣ ವಾದ ಮಾಡಬೇಡಿ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ಸಿಗಬಹುದು.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸಮಯ. ಪಂಚಮ ಸ್ಥಾನದ ಮೇಲೆ ಗುರುವಿನ ಶುಭ ದೃಷ್ಟಿ ಇರುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಈ ತಿಂಗಳು ವಿಷಯಗಳನ್ನು ಆಳವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ. ಸಂಸ್ಕೃತ ಅಥವಾ ಸಾಂಪ್ರದಾಯಿಕ ವಿಷಯಗಳನ್ನು ಕಲಿಯುವವರಿಗೆ ವಿಶೇಷ ಯಶಸ್ಸು ಸಿಗಲಿದೆ.

​ಹಣಕಾಸು ಸ್ಥಿತಿ

​ಹಣಕಾಸಿನ ವಿಚಾರದಲ್ಲಿ ಏರಿಳಿತಗಳಿರುತ್ತವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅಡಿಕೆ ಅಥವಾ ಇತರ ತೋಟಗಾರಿಕಾ ಬೆಳೆಗಳಿಂದ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ನುರಿತವರ ಸಲಹೆ ಪಡೆಯುವುದು ಉತ್ತಮ.

​ವಿವಾಹ ಮತ್ತು ಕೌಟುಂಬಿಕ ಜೀವನ

​ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಮನಸ್ತಾಪಗಳಿದ್ದರೂ ಅವು ಬೇಗನೆ ಬಗೆಹರಿಯುತ್ತವೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವಿದೇಶ ಪ್ರವಾಸ

​ಈ ತಿಂಗಳು ವಿದೇಶ ಪ್ರವಾಸದ ಯೋಗವು ಸ್ವಲ್ಪ ದುರ್ಬಲವಾಗಿದೆ. ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವೀಸಾ ಅಥವಾ ಪಾಸ್‌ಪೋರ್ಟ್ ತಾಂತ್ರಿಕ ತೊಂದರೆಗಳು ಎದುರಾಗಬಹುದು. ಅನಿವಾರ್ಯವಲ್ಲದಿದ್ದರೆ ವಿದೇಶ ಪ್ರವಾಸವನ್ನು ಮುಂದೂಡುವುದು ಸೂಕ್ತ.

​ಸಾಲ ಮತ್ತು ಆರೋಗ್ಯ

​ಹೊಸದಾಗಿ ಸಾಲ ಮಾಡುವ ಸಾಹಸಕ್ಕೆ ಕೈ ಹಾಕಬೇಡಿ. ಹಳೆಯ ಸಾಲಗಳನ್ನು ತೀರಿಸಲು ಈ ಸಮಯ ಪೂರಕವಾಗಿದೆ. ಕೆಲಸದ ಒತ್ತಡದಿಂದಾಗಿ ಮಾನಸಿಕ ಆಯಾಸವಾಗಬಹುದು. ಪಾದ ಅಥವಾ ಬೆನ್ನಿನ ನೋವಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳಲ್ಲಿ ಶುಭ ದಿನಾಂಕಗಳಿವು – ೪, ೧೩, ೨೨ ಮತ್ತು ೩೦. ​ಅಶುಭ ದಿನಗಳಿವು ೮, ೯ ಮತ್ತು ೧೮.
​ದೋಷಕ್ಕೆ ಪರಿಹಾರವಾಗಿ ಪ್ರತಿದಿನ ಮಹಾಲಕ್ಷ್ಮಿ ಅಷ್ಟಕವನ್ನು ಅಥವಾ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.

– ಲೋಹಿತ ಹೆಬ್ಬಾರ್

Source link

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಏಕೆ ಗೊತ್ತಾ?

ಬೆಂಗಳೂರು, ಮಾರ್ಚ್​ 26: ಕರ್ನಾಟಕದಾದ್ಯಂತ ಮಾರ್ಚ್​ 18ರಿಂದ ಎಸ್​​ಎಸ್​ಎಲ್​ಸಿ ಪರೀಕ್ಷೆ ಆರಂಭವಾಗಿದೆ. ಈಗಾಗಲೇ ಕೆಲ ಪರೀಕ್ಷೆಗಳು ನಡೆದಿವೆ. ಆದರೆ ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಇದೀಗ ಮುಂದೂಡಲಾಗಿದೆ. ಮಾ.30ರಂದು ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದ್ದು, ಮಾ. 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ.

 

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

Video: ಬಾಲಕಿಯ ಮೇಲೆ ಬೀದಿ ನಾಯಿಯಿಂದ ಮಾರಣಾಂತಿಕ ದಾಳಿ

ಥಾಣೆ, ಮಾರ್ಚ್​ 26: ಥಾಣೆಯ ಅಂಬರ್ನಾಥ್ ಪ್ರದೇಶದಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಡೆದಿದೆ. ಬಾಲಕಿ ತನ್ನ ಆರು ವರ್ಷದ ಸಹೋದರನೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ನಾಯಿ ಇದ್ದಕ್ಕಿದ್ದಂತೆ ಅವಳ ಮೇಲೆ ಹಾರಿ ಅವಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ. ಭಯಗೊಂಡ ಆಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ. ಆದರೆ ನಾಯಿ ಆಕೆಯನ್ನು ಗಟ್ಟಿಯಾಗಿ ಕಚ್ಚಿದ್ದು, ಆಕೆ ಕೂಗಿಕೊಂಡಾಗ ನಿವಾಸಿಗಳು ಆಕೆಯನ್ನು ರಕ್ಷಿಸಲು ಓಡಿ ಬಂದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಹತ್ಯೆಗೈದ ಪತಿ: ಬಳಿಕ ಕಾರು ಹಾಯಿಸಿ ವಿಕೃತಿ

ಕಲಬುರಗಿ, (ಮಾರ್ಚ್ 26): ವ್ಯಕ್ತಿಯೋರ್ವ, ಪತ್ನಿಯ ಕತ್ತು ಕೊಯ್ದು ಬಳಿಕ ಆಕೆ ಮೇಲೆ ಕಾರು ಹಾಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಬಳೂರಗಿ ಗ್ರಾಮದ ಬಳಿ ನಡೆದಿದೆ. ಶೈಲಾ (28), ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಮಹಿಳೆ. ಅಕ್ಷಯ್‌ ಕೊಲೆ ಮಾಡಿದ ಆರೋಪಿ. 28 ವರ್ಷದ ಮಹಿಳೆಯನ್ನ ಕಾರಿನಲ್ಲಿ ಕರೆತಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ನಿಲ್ಲಿಸಿ ಕುಡುಗೋಲಿನಿಂದ ಆಕೆಯ ಕತ್ತನ್ನು ಕೂಯ್ದಿದ್ದಾನೆ. ಬಳಿಕ ರಕ್ತದ ಮಡುವಿನಲ್ಲಿ ತಪ್ಪಿಸಿಕೊಳ್ಳಲು ಜಮೀನನಲ್ಲಿ ಓಡಿ ಹೋಗಿದ್ದಾಳೆ. ಆದರೂ ಬಿಡಿದ ಪಾಪಿ ಪತಿ ಆಕೆ ಮೇಲೆ ಕಾರು ಹಾಯಿಸಿ ಭೀಕರವಾಗಿ ಕೊಂದಿದ್ದಾನೆ. ಪತಿಯ ಪೈಶಾಚಿಕ ಕೃತ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎದೆ ಝಲ್ ಎನ್ನಿಸುವಂತಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣನಾ?

ಅಕ್ಷಯ್​, ಶೈಲಾ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಪತ್ನಿಯ ಅನೈತಿಕ ಸಂಬಂಧಕ್ಕೆ ರೊಚ್ಚಿಗೆದ್ದು ಅಕ್ಷಯ್, ಶೈಲಾಳನ್ನ ಕೊಲೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಿದ್ದ. ಅದರಂತೆ ಗಾಣಗಾಪುರಕ್ಕೆ ಹೋಗೊಣ ಬಾ ಅಂತ ತಂದೆ ತಾಯಿ ಸಮೇತ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಪತ್ನಿಯನ್ನು ಹೊರಗೆ ಎಳೆದು ತನ್ನ ತಂದೆ ತಾಯಿ ಸಮ್ಮುಖದಲ್ಲೇ ಆಕೆಯ ಕುತ್ತಿಗೆಯನ್ನು ಕೊಯ್ದಿದ್ದಾನೆ. ಬಳಿಕ ಶೈಲಾ ಪ್ರಾಣ ಉಳಿಸಿಕೊಳ್ಳಲು ರಕ್ತಸಿಕ್ತದಲ್ಲೇ ಜಮೀನಿನಲ್ಲಿ ಓಡಿ ಹೋಗಿದ್ದಾಲೆ. ಆದರೂ ಬಿಡಿದ ಹಂತಕ ಪತಿ ಕಾರಿನಿಂದ ಗುದ್ದಿ ಬಳಿಕ ಆಕೆಯ ಮೇಲೆ ಹಾಯಿಸಿ ಕೊಂದಿದ್ದಾನೆ.

ಇದನ್ನೂ ಓದಿ: ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ, ತಮ್ಮನ ಕೊಲೆ: 16 ವರ್ಷದ ಬಾಲಕನಿಂದ ಕೃತ್ಯ

ಕೊಲೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆ

ಮಹಿಳೆಯನ್ನ ಕೊಲೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹತ್ಯೆಗೈಯ್ಯುತ್ತಿರುವ ಘೋರ ದೃಶ್ಯವನ್ನು ಜನ ನೋಡುತ್ತಲೇ ನಿಂತಿದ್ದರು. ಆದರೆ ಆಕೆಯನ್ನು ಕಾಪಾಡದ ಸ್ಥಿತಿಯಲ್ಲಿ ಎಲ್ಲರೂ ಗಾಬರಿಯಾಗಿದ್ದರು. ಇನ್ನು ಕೆಲವರು ಹಂತಕನ ಮೇಲೆ ಕಲ್ಲುಗಳನ್ನ ಎಸೆದು ಆಕೆಯ ಪ್ರಾಣವನ್ನು ಉಳಿಸುವ ಪ್ರಯತ್ನಿಸಿದ್ದಾರೆ. ಆದ್ರೆ, ಪ್ರಯೋಜನವಾಗಿಲ್ಲ. ಕೊಲೆಯ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನಿಸುವಂತಿದೆ.

ಸ್ಥಳಕ್ಕೆ ಕಲಬುರಗಿ ಎಸ್​ಪಿ ಅಡ್ಡೂರು ಶ್ರೀನಿವಾಸುಲು ಭೇಟಿ, ಪರಿಶೀಲನೆ ನಡೆಸಿದ್ದು, ಸದ್ಯ ಶೈಲಾ ಪತಿ ಹಂತಕ ಅಕ್ಷಯ್ ಹಾಗೂ ಆತನ ತಂದೆ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ಎಸ್ಪಿ ಹೇಳಿದ್ದೇನು?

ಈ ಬಗ್ಗೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಪ್ರತಿಕ್ರಿಯಿಸಿದ್ದು, ಇಂದು (ಮಾರ್ಚ್ 26) ಬೆಳಿಗ್ಗೆ 11 ಗಂಟೆ ಸುಮಾರಿಗೆ ಕೊಲೆ ನಡೆದಿದೆ. ಕೊಲೆ ಮಾಡೋದನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಗಾಣಗಾಪುರಕ್ಕೆ ಹೋಗೊಣ ಅಂತ ಒತ್ನಿಯನ್ನ ಕರೆತಂದಿದ್ದಾರೆ. ಅಲ್ಲಿಗೆ ಹೋಗುವ ಮಾರ್ಗ ಮಧ್ಯ ಕೊಲೆ ಮಾಡಿದ್ದಾರೆ. ಸದ್ಯ ಮೂವರನ್ನ ವಶಕ್ಕೆ ಪಡೆದಿದ್ದೆವೆ. ಮೂವರು ಮಹಾರಷ್ಟ್ರದ ಬಾರಮತಿ ಜಿಲ್ಲೆಯವರು. ಮದುವೆಯಾಗಿ ನಾಲ್ಕು ವರ್ಷ ಆಗಿತ್ತು. ಪತ್ನಿಯ ಅನೈತಿಕ ಸಂಬಂಧದ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೆವೆ‌ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಳು ಗಂಟೆಗಳ ಬಳಿಕ ದೆಹಲಿಗೆ ವಾಪಸಾದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ

ನವದೆಹಲಿ, ಮಾರ್ಚ್​ 26: ದೆಹಲಿಯಿಂದ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ(Air India) ವಿಮಾನ ತಾಂತ್ರಿಕ ದೋಷದ ಹಿನ್ನೆಲೆ ಏಳು ಗಂಟೆಗಳ ಬಳಿಕ ದೆಹಲಿಗೆ ಹಿಂದಿರುಗಿದೆ. A350-900 ವಿಮಾನ VT-JRF ಮಾರ್ಚ್ 15 ರಂದು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತ್ತು.ನ್ಯೂಯಾರ್ಕ್‌ನಿಂದ ದೆಹಲಿಗೆ ಹಾರಾಟ ನಡೆಸುತ್ತಿದ್ದ ವಿಮಾನವನ್ನು ಐರಿಶ್ ಪಟ್ಟಣವಾದ ಶಾನನ್‌ಗೆ ತಿರುಗಿಸಲಾಯಿತು ಎಂದು ಮೂಲಗಳು ತಿಳಿಸಿದ್ದವು.

ಗುರುವಾರ ದೆಹಲಿಯಿಂದ ಲಂಡನ್‌ಗೆ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನ AI111, ತಾಂತ್ರಿಕ ದೋಷದ ನಂತರ ಮುನ್ನೆಚ್ಚರಿಕೆಯಾಗಿ ರಾಷ್ಟ್ರ ರಾಜಧಾನಿಗೆ ಮರಳಿದೆ ಎಂದು ವಕ್ತಾರರು ತಿಳಿಸಿದ್ದಾರೆ. ವಿಮಾನವು ಸುರಕ್ಷಿತವಾಗಿ ಮತ್ತು ಏರ್ ಇಂಡಿಯಾದ ಉನ್ನತ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಇಳಿಯಿತು. ವಿಮಾನದಳಗೆ ಶಬ್ದಗಳು ಕೇಳಿಬಂದ ನಂತರ ಅದನ್ನು ಬೇರೆಡೆಗೆ ತಿರುಗಿಸಲಾಯಿತು.

ಪ್ರಯಾಣಿಕರು ಲಂಡನ್‌ಗೆ ತಮ್ಮ ಪ್ರಯಾಣವನ್ನು ಆದಷ್ಟು ಬೇಗ ಮುಂದುವರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಲು ವಿಮಾನಯಾನ ಸಂಸ್ಥೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದರು. ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂಬ ವಿವರಗಳು ಸಿಕ್ಕಿಲ್ಲ.

ಮತ್ತಷ್ಟು ಓದಿ: ಏರ್​ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸ್ಥಿತಿ ಏನಾಗಿದೆ ಗೊತ್ತೇ?

AI111 ವಿಮಾನವು ಸೌದಿ ಅರೇಬಿಯಾ ವಾಯುಪ್ರದೇಶದಲ್ಲಿದ್ದಾಗ ವಿಮಾನವನ್ನು ಬೇರೆಡೆಗೆ ತಿರುಗಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸುಮಾರು ನಾಲ್ಕು ಗಂಟೆಗಳ ಕಾಲ ಹಾರಾಟ ನಡೆಸಿತ್ತು.ವಿಮಾನ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.com ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ವಿಮಾನವು ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಇಳಿಯುವ ಮೊದಲು ಸುಮಾರು ಏಳು ಗಂಟೆಗಳ ಕಾಲ ಹಾರಾಟ ನಡೆಸಿತ್ತು.

ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದೆಹಲಿಯಿಂದ ವಿಮಾನ ಹೊರಟು ಮಧ್ಯಾಹ್ನ 12.30 ರ ಸುಮಾರಿಗೆ ವಾಪಸ್ ಬಂದಿಳಿದಿತ್ತು. ಏರ್ ಇಂಡಿಯಾ ಜನವರಿ 2024 ರಿಂದ A350-900 ವಿಮಾನಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link