nagaraj11081993

ಕರ್ನಾಟಕ ಹವಾಮಾನ ವರದಿ: ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಇಂದು ವರುಣಾರ್ಭಟ ಸಾಧ್ಯತೆ! 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 24: ನಿನ್ನೆ ಒಣಹವೆಯಿಂದ ಕೂಡಿದ್ದ ರಾಜ್ಯದ ಹವಾಮಾನ (Weather Forecast)ಇಂದು ಹಠಾತ್ತನೆ ಬದಲಾಗಿದೆ. ಕರಾವಳಿಯೂ ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಗದಗ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಎಲ್ಲೆಲ್ಲಿ ಮಳೆಯಾಗುವ…

Read More

Colombia Plane Crash: ಕೊಲಂಬಿಯಾದಲ್ಲಿ ಸೇನಾ ವಿಮಾನ ಪತನ, 30ಕ್ಕೂ ಅಧಿಕ ಮಂದಿ ಸಾವು

ಕೊಲಂಬಿಯಾ, ಮಾರ್ಚ್​ 24: ಕೊಲಂಬಿಯಾದಲ್ಲಿ 124 ಜನರಿದ್ದ ವಾಯುಪಡೆಯ ವಿಮಾನ ಪತ್ನಗೊಂಡಿದ್ದು, 30ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಮಾನ ಸೋಮವಾರ ಟೇಕ್ ಆಫ್ ಆದ ನಂತರ ಪತನಗೊಂಡಿದ್ದು, 34 ಜನರು ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕೊಲಂಬಿಯಾದ ವಾಯುಪಡೆಯ ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಮಾರಕವಾದ ಅಪಘಾತ ಇದಾಗಿದೆ. ಈ ದುರಂತವು ಲಾಕ್‌ಹೀಡ್ ಮಾರ್ಟಿನ್ ನಿರ್ಮಿತ ಹರ್ಕ್ಯುಲಸ್ ಸಿ -130 ಸಾರಿಗೆ ವಿಮಾನವು…

Read More

ಆಮಿರ್ ಖಾನ್ ಪುತ್ರನ ಬಳಿ ಇಲ್ಲ ಕಾರು, ಬಸ್​ ಅಲ್ಲೇ ಓಡಾಡ್ತಾನೆ ಈ ನಟ

ಆಮಿರ್ ಖಾನ್ ಅವರು ಬಾಲಿವುಡ್​​ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್​​ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಸಿನಿಮಾ ಮಾಡುವುದರಲ್ಲಿ ಚ್ಯೂಸಿ ಆಗಿದ್ದಾರೆ. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಈಗ ತಮ್ಮ ಮಗ ಜುನೈದ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಮಗ ಯಾವ ರೀತಿ ಎಂದು ಹೇಳಿದ್ದಾರೆ. ಕಾರಿನಲ್ಲಿ ಓಡಾಡುವುದೇ ಇಲ್ಲ ಎಂದು ಹೇಳಿದ್ದಾರೆ. ಅವರು ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರಂತೆ. ‘ನನ್ನ ಮೂವರು ಮಕ್ಕಳೂ ತುಂಬಾ ಸೂಕ್ಷ್ಮ. ಕೊವಿಡ್ ಸಮಯದಲ್ಲಿ ರೀನಾಳ ಹೆತ್ತವರಿಬ್ಬರಿಗೂ ವೈರಸ್ ತಗುಲಿತು….

Read More

Horoscope Today 24th​​ March​: ಇಂದು ಈ ರಾಶಿಯವರಿಗೆ ದೂರದ ಪ್ರಯಾಣ ಯೋಗ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 24, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷ, ಷಷ್ಠಿ ತಿಥಿಯಿದ್ದು, ರಾಹುಕಾಲ 3 ಗಂಟೆ 27 ನಿಮಿಷದಿಂದ 4 ಗಂಟೆ 58 ನಿಮಿಷದ ತನಕ ರಾಹುಕಾಲವಿರುತ್ತದೆ ಎಂದು ಗುರೂಜಿ ಹೇಳಿದ್ದಾರೆ. ಇಂದು ಸ್ಕಂದ ದವನಾರ್ಪಣೆಯ ದಿನ. ಇಂದು ರವಿ ಮೀನ ರಾಶಿಯಲ್ಲಿ,…

Read More

‘ಅಮೃತಧಾರೆ’ ಧಾರಾವಾಹಿ: ಮಲ್ಲಿ ವಿವಾಹ ನಡೆಯೋದೆ ಅನುಮಾನ?

‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಈಗ ಒಂದು ಪ್ರಮುಖ ಬೆಳವಣಿಗೆ ನಡೆದಿದೆ ಎಂದೇ ಹೇಳಬಹುದು. ಏಕೆಂದರೆ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಈ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಮಯ ಕೂಡ ಬಂದಿದೆ. ಹೌದು, ಅಮೃತಧಾರೆ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಇದೆ. ಜಯದೇವ್ ಕಳ್ಳಾಟವು ಬಯಲಾಗುವ ಸಮಯವು ಸಮೀಪಿಸಿದೆ . ‘ಅಮೃತಧಾರೆ’ ಧಾರಾವಾಹಿಯ ಜಯದೇವ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆತ ತುಂಬಾನೇ ಖಿಲಾಡಿ. ಆತ ನಿಜವಾಗಿಯೂ ಕೆಟ್ಟವನು ಮತ್ತು ಈ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ,…

Read More

Video: ಪ್ರಪೋಸ್ ಮಾಡಿದ ಯುವಕನ ಮೇಲೆ ಟೀ ಟ್ರೇ ಎಸೆದ ಯುವತಿ, ಆಮೇಲೇನಾಯ್ತು ನೋಡಿ

ಹರಿಯಾಣ, ಮಾರ್ಚ್​ 24: ಪ್ರಪೋಸ್ ಮಾಡಲು ದಿನ, ಗಳಿಗೆಗಳೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರೇ ಸಂಗಾತಿಯಾಗಬೇಕೆಂದು ಬಯಸಿದರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ ಪ್ರಪೋಸ್ ಮಾಡಿಬಿಡೋದೆ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್​ ಆಗುತ್ತೆ. ಹಾಗೆಯೇ ಹರಿಯಾಣದಲ್ಲಿ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೇ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟಿದ ಮಾಪ್​ನ ಕೋಲಿನಿಂದ ಆಕೆಗೆ ಥಳಿಸಿರುವ ವಿಡಿಯೋ…

Read More

Daily Devotional: ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಜಾತಕದ ಪ್ರಕಾರ ಸಿಹಿ ಹಾಗೂ ಖಾರ ಹೇಗೆ ಸೇವಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೇಹಕ್ಕೆ ಆಹಾರ ಅತ್ಯಗತ್ಯ. ಆದರೆ ಕೆಲವರು ಸಿಹಿ ಇಷ್ಟಪಟ್ಟರೆ, ಮತ್ತೆ ಕೆಲವರು ಖಾರವನ್ನು ಹೆಚ್ಚು ಸೇವಿಸಲು ಬಯಸುತ್ತಾರೆ. ಈ ಆಹಾರದ ಆಯ್ಕೆಯು ಕೇವಲ ರುಚಿಯಲ್ಲ, ಬದಲಿಗೆ ಜಾತಕದಲ್ಲಿರುವ ಗ್ರಹಗಳ ಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಆಧ್ಯಾತ್ಮಿಕವಾಗಿ ಹೇಳಲಾಗುತ್ತದೆ. ಸಿಹಿ ಪ್ರಿಯರಾಗಲು ಗುರು ಮತ್ತು ಶುಕ್ರ ಗ್ರಹಗಳ ಪ್ರಭಾವ ಮುಖ್ಯವಾಗಿರುತ್ತದೆ. ಇಂತಹ ವ್ಯಕ್ತಿಗಳು ಸಾಮಾನ್ಯವಾಗಿ ಸಾತ್ವಿಕ…

Read More

ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು

2026ರ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಮೊದಲ ಪಂದ್ಯ ನಡೆಯುತ್ತಿರುವುದು ವಿಶೇಷ. ಹಾಲಿ ಚಾಂಪಿಯನ್ಸ್ ಆರ್​​ಸಿಬಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಬಾರಿ ಎಲ್ಲಾ ತಂಡಗಳಲ್ಲಿ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ಪ್ರಮುಖ ಆಟಗಾರರು ಬೇರೆ ಬೇರೆ ತಂಡ ಸೇರಿದ್ದಾರೆ. ಈ ಮಧ್ಯೆ ಈ ಬಾರಿಯ ಐಪಿಎಲ್ ಬಳಿಕ ಐದು ಆಟಗಾರರು ಐಪಿಎಲ್​​ನಿಂದ ಹೊರ ಹೋಗಲಿದ್ದಾರೆ ಎನ್ನುವ ಮಾತಿದೆ. ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲಿ ಹಲವು ದಾಖಲೆ ಬರೆದ ಎಂಎಸ್​ ಧೋನಿ ಈಗ…

Read More

ಆ ಮೂಕ ಪ್ರಾಣಿ ನಿಮಗೇನು ಮಾಡಿತ್ತು? ಕೋತಿಯ ಕುತ್ತಿಗೆಗೆ ಬಾಣ ಬಿಟ್ಟ ದುಷ್ಟರು

ಥಾಣೆ, ಮಾರ್ಚ್​ 24: ಕೋತಿ(Monkey)ಯ ಕುತ್ತಿಗೆಗೆ ಯಾರೋ ದುಷ್ಟರು ಬಾಣಗಳಿಂದ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಆ ಮೂಕ ಪ್ರಾಣಿ ಅವರಿಗೇನು ಮಾಡಿತ್ತು ಎನ್ನುವ ಪ್ರಶ್ನೆ ಉದ್ಭವವಾಗಿದೆ. ನಾಲ್ಕು ದಿನಗಳಲ್ಲಿ ಇದು ಎರಡನೇ ಘಟನೆಯಾಗಿದೆ.ಮಂಗನ ಕುತ್ತಿಗೆ ಮತ್ತು ದವಡೆಯಲ್ಲಿ ಬಾಣ ಪತ್ತೆಯಾಗಿದೆ. ಈ ಪ್ರಕರಣಗಳು ಪ್ರಾಣಿ ಕಲ್ಯಾಣ ಗುಂಪುಗಳು ಮತ್ತು ವನ್ಯಜೀವಿ ಅಧಿಕಾರಿಗಳಲ್ಲಿ ಕಳವಳವನ್ನು ಹುಟ್ಟುಹಾಕಿವೆ. ಮೂಕ ಪ್ರಾಣಿಗಳ ಬಗ್ಗೆ ನಮಗೆ ಕರುಣೆ ಇರಬೇಕು ಎಂದು ಹೇಳಿದ್ದಾರೆ. ಬೇಟೆಗಾರನ ಕಾರಣದಿಂದಾಗಿ, ಕಾಡಿನಲ್ಲಿ ಗಸ್ತು ಹೆಚ್ಚಿಸಲು…

Read More

ಪ್ರಜ್ಞೆ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ಎದ್ದು ದಾಳಿ ಮಾಡಿದ ಹುಲಿ! ಆಮೇಲಾಗಿದ್ದೇ ಬೇರೆ

ಚಾಮರಾಜನಗರ, ಮಾರ್ಚ್ 24: ಹುಲಿ ಸೆರೆಗೆ ಹಮ್ಮಿಕೊಳ್ಳಲಾಗಿದ್ದ ‘ಆಪರೇಷನ್ ಬೀಸ್ಟ್ (Operation Beast)’ ಕಾರ್ಯಾಚರಣೆಯ ಎರಡನೇ ಹಂತ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅವಘಡವೊಂದು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನ ಬೀಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆಯ ವೇಳೆ, ಬಂಡೀಪುರ (Bandipur) ಅರಣ್ಯ ಸಿಬ್ಬಂದಿ ಕೂಂಬಿಂಗ್ ವೇಳೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸದೇ ಇರುವುದು ಗೊತ್ತಾಗಿದೆ. ಇದರಿಂದ ಸಿಬ್ಬಂದಿಯೊಬ್ಬರ ಪ್ರಾಣಕ್ಕೆ ಸಂಚಕಾರ ಎದುರಾಗಿದ್ದು, ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ. ಹುಲಿ ಸೆರೆ…

Read More