All posts by nagaraj11081993

Ratanpur’s Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

Ratanpur’s Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ವಿಶಿಷ್ಟ ದೇವಾಲಯಗಳ ತವರೂರು. ಸಾಮಾನ್ಯವಾಗಿ ನಾವು ಆಂಜನೇಯನನ್ನು ಬ್ರಹ್ಮಚಾರಿ, ಶಕ್ತಿಶಾಲಿ ಪುರುಷ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಆದರೆ, ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ರತನ್‌ಪುರ ಎಂಬಲ್ಲಿ ಹನುಮಂತನನ್ನು ‘ಸ್ತ್ರೀ’ ಅವತಾರದಲ್ಲಿ ಆರಾಧಿಸಲಾಗುತ್ತದೆ. ‘ಗಿರ್ಜಬಂದ್ ಹನುಮಾನ್ ದೇವಾಲಯ’ ಎಂದು ಕರೆಯಲ್ಪಡುವ ಈ ಪುಣ್ಯಕ್ಷೇತ್ರವು ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿರುವ ವಿಗ್ರಹವು ಅತ್ಯಂತ ವಿಶಿಷ್ಟವಾಗಿದ್ದು, ಸ್ತ್ರೀ ಮುಖ ಮತ್ತು ದೇಹವನ್ನು ಹೊಂದಿದೆ. ಪೂರ್ವಕ್ಕೆ ಮುಖ ಮಾಡಿರುವ ಈ ವಿಗ್ರಹವು ಶ್ರೀರಾಮ ಮತ್ತು ಲಕ್ಷ್ಮಣರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವಂತೆ ಕೆತ್ತಲಾಗಿದೆ. ಅಷ್ಟೇ ಅಲ್ಲದೆ, ಹನುಮಂತನ ಪಾದಗಳ ಕೆಳಗೆ ಇಬ್ಬರು ರಾಕ್ಷಸರನ್ನು ನಿಗ್ರಹಿಸಿರುವ ದೃಶ್ಯವೂ ಇಲ್ಲಿದೆ. ಈ ಅಪರೂಪದ ವಿಗ್ರಹದ ಹಿಂದೆ ನೂರಾರು ವರ್ಷಗಳ ಇತಿಹಾಸವಿದ್ದು, ರತನ್‌ಪುರದ ರಾಜ ಪೃಥ್ವಿ ದೇವ್ಜು ಈ ದೇವಾಲಯವನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.

ದೇವಾಲಯದ ಉಗಮದ ಹಿಂದಿದೆ ಒಂದು ರೋಚಕ ದಂತಕಥೆ:

ಸ್ಥಳೀಯ ನಂಬಿಕೆಗಳ ಪ್ರಕಾರ, ರಾಜ ಪೃಥ್ವಿ ದೇವ್ಜು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾಗ, ಹನುಮಂತನು ಅವನ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಈ ವಿಶಿಷ್ಟ ರೂಪವನ್ನು ದರ್ಶನ ನೀಡಿದನಂತೆ. ಅಲ್ಲದೆ, ಹತ್ತಿರದ ಕೊಳದ ಕೆಳಭಾಗದಲ್ಲಿ ತನ್ನ ವಿಗ್ರಹವು ಲಭ್ಯವಿದ್ದು, ಅದನ್ನು ತಂದು ದೇವಾಲಯ ನಿರ್ಮಿಸುವಂತೆ ಸೂಚಿಸಿದನಂತೆ. ರಾಜನು ಕೊಳವನ್ನು ಅಗೆಸಿದಾಗ ಅದರಲ್ಲಿ ಸ್ತ್ರೀ ರೂಪದ ಈ ಅದ್ಭುತ ವಿಗ್ರಹವು ದೊರೆಯಿತು. ಈ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಿದ ನಂತರ ರಾಜನು ಪೂರ್ಣವಾಗಿ ಗುಣಮುಖನಾದನು ಎಂಬುದು ಭಕ್ತರ ಅಚಲ ನಂಬಿಕೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಇಂದಿಗೂ ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ಹನುಮಂತನ ದರ್ಶನ ಪಡೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಆಧ್ಯಾತ್ಮಿಕ ಶಕ್ತಿಯ ಜೊತೆಗೆ, ಈ ವಿಗ್ರಹದ ಕಲಾತ್ಮಕತೆ ಮತ್ತು ಐತಿಹಾಸಿಕ ಹಿನ್ನೆಲೆಯು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಭಕ್ತಿ ಮತ್ತು ಕುತೂಹಲದ ಸಂಗಮವಾಗಿರುವ ಈ ಗಿರ್ಜಬಂದ್ ಹನುಮಾನ್ ದೇವಾಲಯವು ಭಾರತದ ಅಪರೂಪದ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’: ಸಂತೆಯಲ್ಲೇ ಮತಾಂತರಕ್ಕೆ ಇಳಿದವರಿಗೆ ಸಾರ್ವಜನಿಕರಿಂದ ಧರ್ಮದೇಟು

ಚಿಕ್ಕಮಗಳೂರು, ಮಾ.31: ಜಿಲ್ಲೆಯ ಹೊಸಪೇಟೆ ಗ್ರಾಮದ ಸಂತೆ ಮೈದಾನದಲ್ಲಿ ಪುಸ್ತಕಗಳನ್ನು ಹಂಚುವ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಸಾರ್ವಜನಿಕರು ಹಿಡಿದು ಥಳಿಸಿರುವ ಘಟನೆ ಮಂಗಳವಾರ (ಮಾ.31) ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಮೂಲದ ಓರ್ವ ವೃದ್ಧ ಮತ್ತು ಮಧ್ಯವಯಸ್ಕ ವ್ಯಕ್ತಿ ಹೊಸಪೇಟೆ ಗ್ರಾಮದ ಸಂತೆಯಲ್ಲಿ ‘ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ’ ಎಂಬ ಪುಸ್ತಕಗಳನ್ನು ಹಂಚುತ್ತಿದ್ದರು. ಮನೆ-ಮನೆಗೆ ತೆರಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಇಬ್ಬರಿಗೂ ‘ಧರ್ಮದೇಟು’ ನೀಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಜನರು ಪ್ರಶ್ನೆ ಮಾಡುತ್ತಿದ್ದಂತೆಯೇ ಇಬ್ಬರೂ ಆರೋಪಿಗಳು ತಮ್ಮ ಓಮ್ನಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಬೈಕ್‌ನಲ್ಲಿ ಚೇಸ್ ಮಾಡಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾದರು. ಈ ವೇಳೆ “ನೀವು ಕನ್ವರ್ಟ್ ಆಗಿದ್ದೀರಲ್ಲವೇ? ವಾಪಸ್ ಹಿಂದೂ ಧರ್ಮಕ್ಕೆ ಬನ್ನಿ” ಎಂದು ಕಾರ್ಯಕರ್ತರು ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಏಪ್ರಿಲ್ 1 ರಿಂದ ವಿದ್ಯುತ್ ದರ ಏರಿಕೆ ಶಾಕ್​​: ಎಸ್ಕಾಂಗಳಿಂದ ಹಳೆ ಬಾಕಿ ವಸೂಲಿ; ಯಾವ ವರ್ಗಕ್ಕೆ ಎಷ್ಟು ದರ ಏರಿಕೆ?

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದ ಸುಮಾರು 2000ಕ್ಕೂ ಹೆಚ್ಚು ಮತಾಂತರ ಪ್ರಚೋದಿತ ಪುಸ್ತಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್​​ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ

ಒಂದು ಚಿತ್ರರಂಗದ (Movie Industry) ದೊಡ್ಡ ಸ್ಟಾರ್​​ಗಳು ಮತ್ತೊಂದು ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವುದು ತೀರಾ ಸಾಮಾನ್ಯ. ಹಲವು ದಶಕಗಳಿಂದಲೂ ಇದು ನಡೆಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಹವಾ ಹೆಚ್ಚಾದ ಬಳಿಕ ಈ ಸಂಪ್ರದಾಯ ಇನ್ನೂ ಹೆಚ್ಚಾಗಿದೆ. ಅದರಲ್ಲೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರನ್ನು ಬೇರೆ ಬೇರೆ ಭಾಷೆಯ ಚಿತ್ರರಂಗದವರು ತುಸು ಹೆಚ್ಚಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ದುಲ್ಕರ್ ಸಲ್ಮಾನ್, ಫಹಾದ್ ಫಾಸಿಲ್, ಮೋಹನ್​​ಲಾಲ್ ಇನ್ನೂ ಹಲವು ನಟರು ಪರ ಭಾಷೆಯ ಸ್ಟಾರ್ ನಟರುಗಳೊಡನೆ ನಟಿಸಿದ್ದಾರೆ. ಆದರೆ ಇದೀಗ ಮಲಯಾಳಂ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೊ ಥಾಮಸ್, ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಆಯ್ಕೆ ಆಗಿದ್ದರು, ಆದರೆ ಸಿನಿಮಾದಿಂದ ಹೊರಬಂದಿದ್ದು, ಟಾಲಿವುಡ್​ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಶಾಂತ್ ನಿರ್ದೇಶಿಸಿ, ಜೂ ಎನ್​​ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಕನ್ನಡದ ರುಕ್ಮಿಣಿ ವಸಂತ್ ಈ ಸಿನಿಮಾದ ನಾಯಕಿ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಭಿನ್ನ ರೀತಿಯ ಕತೆಯನ್ನು ಸಿನಿಮಾಕ್ಕಾಗಿ ಹೆಣೆದಿರುವುದಾಗಿ ಪ್ರಶಾಂತ್ ನೀಲ್ ಹೇಳಿಕೊಂಡಿದ್ದರು. ಅವರ ಈ ಹಿಂದಿನ ಸಿನಿಮಾ ‘ಸಲಾರ್’ನಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರನ್ನು ಸಹ ನೀಲ್ ಹಾಕಿಕೊಂಡಿದ್ದರು. ಈ ಬಾರಿ ಜೂ ಎನ್​​ಟಿಆರ್ ಸಿನಿಮಾಕ್ಕೆ ಮಲಯಾಳಂನ ಟೊವಿನೊ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಕಾಸ್ಟ್ ಮಾಡಿದ್ದರು. ಆದರೆ ಅವರು ಸಿನಿಮಾನಿಂದ ಹೊರಬಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಟೊವಿನೊ ಥಾಮಸ್, ‘ನಾನು ಜೂ ಎನ್​​ಟಿಆರ್ ಸಿನಿಮಾನಲ್ಲಿ ನಟಿಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನಗೆ ತೆಲುಗು ಸಿನಿಮಾನಲ್ಲಿ ನಟಿಸುವ ಆಸೆ ಇತ್ತು. ಆದರೆ ಈ ಚಿತ್ರರಂಗದ ಪದ್ಧತಿಗಳು ನಮ್ಮ ಮಲಯಾಳಂ ಚಿತ್ರರಂಗಕ್ಕಿಂತಲೂ ಬಹಳ ಭಿನ್ನ. ನಾವು ಒಂದು ಶೆಡ್ಯೂಲ್​​ನಲ್ಲಿ ಸಿನಿಮಾ ಮುಗಿಸಿಬಿಡುತ್ತೇವೆ. ಆದರೆ ತೆಲುಗು ಚಿತ್ರರಂಗದವರು ಹಲವು ಶೆಡ್ಯೂಲ್​​ಗಳಲ್ಲಿ ಚಿತ್ರೀಕರಣ ಮಾಡುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:‘ಪ್ರಶಾಂತ್ ನೀಲ್ ಅವಕಾಶ ಕೊಡಲಿಲ್ಲ, ಆದರೆ ಅದೃಷ್ಟ ಕೈ ಹಿಡಿಯಿತು’

ಮಾತು ಮುಂದುವರೆಸಿ, ‘ನಾನು ಒಂದು ಅವಧಿಯಲ್ಲಿ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಒಂದು ಸಿನಿಮಾನಲ್ಲಿ ನಟಿಸುವಾಗ ಬೇರೆ ಸಿನಿಮಾನಲ್ಲಿ ನಟಿಸುವುದಿಲ್ಲ. ಆದರೆ ನಾನು ತೆಲುಗು ಸಿನಿಮಾ ಒಪ್ಪಿಕೊಂಡರೆ ಅದನ್ನು ಮುಗಿಸಲು ಸುಮಾರು ಒಂದು ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ ನಾನು ನಾಲ್ಕೈದು ಮಲಯಾಳಂ ಸಿನಿಮಾ ಮುಗಿಸುತ್ತೀನಿ. ನಾನು ತೆಲುಗು ಸಿನಿಮಾನಲ್ಲಿ ನಟಿಸಿದರೆ ನಾನು ಒಪ್ಪಿಕೊಂಡಿರುವ ಮಲಯಾಳಂ ಸಿನಿಮಾಗಳಿಗೆ ಕಷ್ಟವಾಗುತ್ತದೆ. ಹಾಗಾಗಿ ತೆಲುಗು ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಟೊವಿನೊ ಥಾಮಸ್.

ಇದೀಗ ಟೊವಿನೊ ಥಾಮಸ್ ಸಿನಿಮಾದಿಂದ ಹೊರನಡೆದಿರುವ ಕಾರಣ ಪ್ರಶಾಂತ್ ನೀಲ್ ಹೊಸ ನಟರೊಬ್ಬರನ್ನು ಹುಡುಕಬೇಕಿದೆ. ಆ ಪಾತ್ರ ಕನ್ನಡದ ಯುವ ನಟನಿಗೆ ಸಿಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

ರಾಮನಗರ, ಮಾರ್ಚ್​​ 31: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕಾ ಏಕಿ ಗ್ರಾಮದತ್ತ ಬಂದ ಗಜಪಡೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಕಂಡು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಿದ್ದು, ಕೂಗಾಟ ಕೇಳಿ ಗಜಪಡೆ ಸ್ಥಳದಿಂದ ಕಾಲ್ಕಿತ್ತಿವೆ. ಇವು ಸಂಗಮ‌ ವನ್ಯಜೀವಿಧಾಮದಿಂದ ಬಂದಿರೋ ಆನೆಗಳು ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Chanakya Niti: ತಂದೆಯ ಈ ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರ ಪ್ರಕಾರ, ಮಗಳು (daughter) ಕುಟುಂಬದ ಹೆಮ್ಮೆಯಷ್ಟೇ ಅಲ್ಲ, ಸಮಾಜದ ಶಕ್ತಿಯೂ ಹೌದು. ಆದ್ದರಿಂದ, ಅವಳನ್ನು ಸರಿಯಾಗಿ ಬೆಳೆಸುವುದು ಬಹಳ ಮುಖ್ಯ. ಸರಿಯಾದ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಅವಳಲ್ಲಿ ತುಂಬುವುದು ಪೋಷಕರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಬೇಕಾದರೇ ಈ ಒಂದಷ್ಟು ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಅದೇ ತಂದೆ ತನ್ನ ಮುದ್ದು ಮಗಳ ವಿಚಾರದಲ್ಲಿ ಮಾಡುವಂತಹ ಈ ಕೆಲವೊಂದಿಷ್ಟು ತಪ್ಪುಗಳ ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ.  ಹಾಗಿದ್ರೆ ತಂದೆಯ ಯಾವ ತಪ್ಪುಗಳು ಮಗಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ತಂದೆಯಾದವನು ಮಗಳ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡಲೇಬಾರದು:

ಮಗಳ ಕನಸುಗಳನ್ನು ನಿರ್ಬಂಧಿಸುವ ತಪ್ಪನ್ನು ಮಾಡಬಾರದು:  ಚಾಣಕ್ಯ ನೀತಿಯ ಪ್ರಕಾರ, ತಂದೆಯಾದವನು ಮಗಳ ಕನಸುಗಳನ್ನು ಕಡಿಮೆ ಅಂದಾಜು ಮಾಡಬಾರದು.  ಅವಳು ಹುಡುಗಿ ಎಂಬ ಕಾರಣಕ್ಕೆ ಅವಳ ಶಿಕ್ಷಣ ಅಥವಾ ವೃತ್ತಿಜೀವನವನ್ನು ನಿರ್ಲಕ್ಷಿಸುವುದು ತಪ್ಪು. ಅವಳು ಅಭಿವೃದ್ಧಿ ಹೊಂದಲು ಪ್ರತಿಯೊಂದು ಅವಕಾಶವನ್ನೂ ನೀಡಬೇಕು, ಆಗ ಆಕೆ ಖಂಡಿಯವಾಗಿಯೂ ಗಂಡು ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಿ ತಂದೆ ಹೆಮ್ಮೆ ಪಡುವಂತೆ ಮಾಡುತ್ತಾಳೆ ಎಂದಿದ್ದಾರೆ ಚಾಣಕ್ಯ. ಹಾಗಾಗಿ ಮಗಳ ಭವಿಷ್ಯದ ದೃಷ್ಟಿಯಿಂದ ಆಕೆಯ ಕನಸುಗಳನ್ನು ಈಡೇರಿಸಿ.

ಅತಿಯಾಗಿ ನಿರ್ಭಂದಿಸಬೇಡಿ: ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ನೀಡುವುದರಿಂದ ಅವರು ನಿಯಂತ್ರಣ ತಪ್ಪಬಹುದು ಎಂಬುದು ಹೆಚ್ಚಿನವರ ಭಾವನೆ. ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ತುಸು ಹೆಚ್ಚೇ ನಿಯಮ, ನಿಬಂಧನೆಗಳಿರುತ್ತವೆ. ಆದರೆ ಪ್ರತಿಯೊಂದು ವಿಚಾರದಲ್ಲೂ ಮಕ್ಕಳನ್ನು ಕಂಟ್ರೋಲ್‌ ಮಾಡಬಾರದು. ಮಗನಾಗಿರಲಿ ಅಥವಾ ಮಗಳಾಗಿರಲಿ, ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡದಿದ್ದರೆ, ಭವಿಷ್ಯದಲ್ಲಿ ಅವರ ಆತ್ಮವಿಶ್ವಾಸವ ದುರ್ಬಲಗೊಳ್ಳುತ್ತದೆ, ಅವರು ಸ್ವತಂತ್ರವಾಗಿ ಯಾವುದೇ ಕಷ್ಟಗಳನ್ನು ಎದುರಿಸಲು ಸಹ ಸಾಧ್ಯವಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ತಮ್ಮದೇ ಆದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಕಲಿಸಿ.

ಮಗಳ ಮುಂದೆ ಕೆಟ್ಟ ಗುಣದ ಪ್ರದರ್ಶನ ಬೇಡ: ಹೆಣ್ಣುಮಕ್ಕಳು ತಮ್ಮ ತಂದೆಯಿಂದ ಬಹಳಷ್ಟು ಕಲಿಯುತ್ತಾರೆ. ತಂದೆ ಪ್ರಾಮಾಣಿಕ, ಜವಾಬ್ದಾರಿಯುತ ಮತ್ತು ತಿಳುವಳಿಕೆಯುಳ್ಳವರಾಗಿದ್ದರೆ, ಮಗಳು ಅದೇ ಗುಣಗಳನ್ನು ಅಳವಡಿಸಿಕೊಳ್ಳುತ್ತಾಳೆ. ಹಾಗಾಗಿ ತಂದೆಯಾದವನ ನಡವಳಿಕೆ ಒಳ್ಳೆಯದಿರಬೇಕು. ತಂದೆಯ ಕೆಟ್ಟ ನಡವಳಿಕೆಗಳು ಮಗಳ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ಹೆಣ್ಣು ಮಕ್ಕಳ ಮದುವೆ ವಿಚಾರದಲ್ಲಿ ತಪ್ಪು ಮಾಡಬಾರದು: ಹೆಚ್ಚಿನ ತಂದೆಯಂದಿರು, ಮನೆಯವರು ಮಗಳ ಮದುವೆಯನ್ನು ನಿರ್ಧರಿಸುವಾಗ ಆಕೆಯನ್ನು  ತಮ್ಮ ಸಮಾಲೋಚಿಸುವುದಿಲ್ಲ. ತಮ್ಮ ಇಷ್ಟಕ್ಕನುಸಾರವಾಗಿ ಮಗಳ ಮದುವೆ ಮಾಡಿ ಬಿಡುತ್ತಾರೆ. ಈ ರೀತಿ ಮಾಡುವುದರಿಂದ ಭವಿಷ್ಯದಲ್ಲಿ ಆಕೆ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಸಾಮಾಜಿಕ ಒತ್ತಡದಲ್ಲಿ ಮಗಳ ಮದುವೆಯನ್ನು ಬೇಗನೆ ಮಾಡುವುದು ಸರಿಯಲ್ಲ. ಬದಲಿಗೆ ಆಕೆಗೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಲು, ಕೆಲಸಕ್ಕೆ ಹೋಗಿ ಸ್ವಂತ ಕಾಲಿನ ಮೇಲೆ ನಿಲ್ಲಲು ಅನುವು ಮಾಡಿಕೊಡಬೇಕು.

ಇದನ್ನೂ ಓದಿ: ಸಣ್ಣ ಅಭ್ಯಾಸಗಳು ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತವೆ

ಮಗಳನ್ನು ಭಯದಲ್ಲಿ ಇರಿಸುವ ತಪ್ಪನ್ನು ಮಾಡಬಾರದು: ಅನೇಕ ಮನೆಗಳಲ್ಲಿ, ಹೆಣ್ಣು ಮಕ್ಕಳನ್ನು ಭಯದ ವಾತಾವರಣದಲ್ಲಿ ಇರಿಸಲಾಗುತ್ತದೆ. ಇದರಲ್ಲಿ ತಂದೆ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಇದು ತಪ್ಪು ಎನ್ನುತ್ತಾರೆ ಚಾಣಕ್ಯ. ಮನೆಯ ವಾತಾವರಣವು ಮಗಳು ಭಯವಿಲ್ಲದೆ ಮಾತನಾಡುವಂತೆ ಇರಬೇಕು. ಅವಳು ತನ್ನ ಸಮಸ್ಯೆಗಳನ್ನು ಮರೆಮಾಡಲು ಪ್ರಾರಂಭಿಸಿದರೆ, ಅದು ಅವಳಿಗೆ ಹಾನಿಕಾರಕವಾಗಬಹುದು. ಆದ್ದರಿಂದ ಆಕೆಗೆ ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಒದಗಿಸಬೇಕು.  ತಂದೆ ಮಗಳ ಸ್ನೇಹಿತನಂತಿರಬೇಕು ಎನ್ನುತ್ತಾರೆ ಚಾಣಕ್ಯ.

ಮಗಳ ಸ್ವಾವಲಂಬಿ ಬದುಕಿಗೆ ಅಡ್ಡಲಾಗಿ ನಿಲ್ಲಬೇಡಿ: ಸುರಕ್ಷತೆಯನ್ನು ಮಾತ್ರವಲ್ಲ, ಸ್ವಾವಲಂಬನೆಯನ್ನೂ ಮಗಳಿಗೆ ತಂದೆಯಾದವನು ಕಲಿಸಬೇಕು.  ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸಲು ಅವಳನ್ನು ಸಿದ್ಧಪಡಿಸಿ. ಇದು ಆಕೆಯನ್ನು ಸದೃಢಳನ್ನಾಗಿ ಮಾಡುತ್ತದೆ. ಯಶಸ್ವಿಯಾಗಿ ಬದುಕಲು ಅವಕಾಶ ಮಾಡಿಕೊಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್-ರೌಂಡರ್​ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, 2026ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದಿದ್ದಾರೆ. ಒಂದೂವರೆ ದಶಕಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಅವಿಭಾಜ್ಯ ಅಂಗವಾಗಿದ್ದ ಜಡೇಜಾ, ಈಗ ತಮ್ಮ ವೃತ್ತಿಜೀವನ ಆರಂಭಿಸಿದ ತಂಡಕ್ಕೇ ಮರಳಿರುವುದು ವಿಶೇಷ.

ಸಿಎಸ್‌ಕೆ ಜೊತೆಗಿನ ಸುದೀರ್ಘ ಸಂಬಂಧ:

ಜಡೇಜಾ ಅವರು ಸಿಎಸ್‌ಕೆ ತಂಡದೊಂದಿಗೆ 13-14 ಸೀಸನ್‌ಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಎಂ.ಎಸ್. ಧೋನಿ ಅವರ ನೆರಳಿನಲ್ಲಿ ಬೆಳೆದ ಅವರು, ತಂಡಕ್ಕೆ ಹಲವು ಬಾರಿ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟು ಸುದೀರ್ಘ ಕಾಲದ ಬಾಂಧವ್ಯವನ್ನು ಕಡಿದುಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಸ್ವತಃ ಜಡೇಜಾ ಅವರೇ ಒಪ್ಪಿಕೊಂಡಿದ್ದಾರೆ.

ಜಡೇಜಾ ಭಾವುಕ ಮಾತುಗಳು:

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕವೇ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದ ರವೀಂದ್ರ ಜಡೇಜಾ ಪಂದ್ಯದ ಬಳಿಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ಮಾತನಾಡಿದ ಜಡೇಜಾ, “13-14 ಸೀಸನ್‌ಗಳ ಕಾಲ ಸಿಎಸ್‌ಕೆ ಪರ ಆಡಿದ ನಂತರ ಆ ತಂಡವನ್ನು ಬಿಡುವುದು ಆರಂಭದಲ್ಲಿ ಸ್ವಲ್ಪ ಕಷ್ಟ ಮತ್ತು ಬೇಸರವಾಗಿತ್ತು. ಆದರೆ ಏನು ಮಾಡೋದು, ಜೀವನದಲ್ಲಿ ಬದಲಾವಣೆಗಳು ಸಹಜ. ಇದು ಪಯಣದ ಒಂದು ಭಾಗ ಎಂದು ನಾನು ಭಾವಿಸಿದೆ.

ವಿಶೇಷವೆಂದರೆ, ನಾನು ಯಾವ ತಂಡದೊಂದಿಗೆ ನನ್ನ ಮೊದಲ ಐಪಿಎಲ್ ಟ್ರೋಫಿ ಗೆದ್ದಿದ್ದೆನೋ (2008ರಲ್ಲಿ), ಈಗ ಮತ್ತೆ ಅದೇ ತಂಡಕ್ಕೆ ಮರಳಿದ್ದೇನೆ ಎನ್ನುವುದು ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ,” ಎಂದು ರವೀಂದ್ರ ಜಡೇಜಾ ಭಾವುಕರಾಗಿ ಹೇಳಿದ್ದಾರೆ.

ಹಳೆಯ ನೆನಪುಗಳ ಮೆಲುಕು:

2008ರ ಉದ್ಘಾಟನಾ ಐಪಿಎಲ್ ಆವೃತ್ತಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗಿತ್ತು. ಅಂದು ಯುವ ಆಟಗಾರನಾಗಿದ್ದ ಜಡೇಜಾ ಅವರನ್ನು ವಾರ್ನ್ ‘ರಾಕ್‌ಸ್ಟಾರ್’ ಎಂದು ಕರೆಯುತ್ತಿದ್ದರು. ಈಗ 18 ವರ್ಷಗಳ ನಂತರ ಅದೇ ತಂಡಕ್ಕೆ ಮರಳಿರುವುದು ವಿಶೇಷ.

ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇತ್ತ ರವೀಂದ್ರ ಜಡೇಜಾ ಅವರ ನಿರ್ಗಮನವು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ಅತ್ತ ರಾಜಸ್ಥಾನ್ ರಾಯಲ್ಸ್ ಅಭಿಮಾನಿಗಳು ತಮ್ಮ ‘ರಾಕ್‌ಸ್ಟಾರ್’ ಪುನರಾಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅನುಭವ ಮತ್ತು ಕೌಶಲ್ಯದೊಂದಿಗೆ ಮರಳಿರುವ ಜಡೇಜಾ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಟ್ರೋಫಿ ಗೆದ್ದು ಕೊಡಲಿದ್ದಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

 

 

Source link

Viral: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?

ಮದ್ಯ ಪ್ರಿಯರಿಗಂತೂ ವಿಸ್ಕಿ, ವೈನ್‌, ಬಿಯರ್‌ ಬ್ರಾಂಡ್‌ಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಕೆಲವು ವೈನ್‌ಗಳ ಬೆಲೆ (wine price) ಕೇಳಿದ್ರೆ ತಲೆ ಗಿರ್ರ್ ಅನ್ನುತ್ತೆ. ಇದೀಗ 2026ರ ಮಾರ್ಚ್ ಅಂತ್ಯದಲ್ಲಿ ನಡೆದ ಅಕರ್ ಹರಾಜಿನಲ್ಲಿ, ಅಪರೂಪದ 1945ರ ಡೊಮೈನ್ ಡೆ ಲಾ ರೊಮಾನಿ ಕಾಂಟಿ (Domaine de la Romanee Conti) ವೈನ್ ಬಾಟಲಿ 7.63 ಕೋಟಿ ರೂಗೆ ಮಾರಾಟವಾಗಿದೆ.

ಅಮೆರಿಕದ ಅತ್ಯಂತ ಹಳೆಯ ವೈನ್ ವ್ಯಾಪಾರಿ ಮತ್ತು ವಿಶ್ವದ ಅತಿದೊಡ್ಡ ಉತ್ತಮ ವೈನ್ ಹರಾಜು ಮನೆ ಅಕರ್ ಆಯೋಜಿಸಿದ್ದ ವಾರ್ಷಿಕ ಲಾ ಪೌಲೀ ಹರಾಜಿನ ಸಂದರ್ಭದಲ್ಲಿ ಮಾರಾಟ ಮಾಡಲಾಗಿದೆ. ಈ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಬಾಟಲಿಯ ಹಿಂದಿನ ವಿಶ್ವ ದಾಖಲೆಯನ್ನು ಸುಮಾರು 50% ರಷ್ಟು ಮುರಿದಿದೆ. ದಾಖಲೆಯ ಈ ವೈನ್ ಬಾಟಲಿಯನ್ನು ಯಾರು ಖರೀದಿಸಿದರು ಎಂಬುದನ್ನು ಅಕರ್ ಬಹಿರಂಗಪಡಿಸಲಿಲ್ಲ. ಈ ವೈನ್ ಆರಂಭದಲ್ಲಿ ರಾಬರ್ಟ್ ಡ್ರೌಹಿನ್ ಅವರ ವೈಯಕ್ತಿಕ ನೆಲಮಾಳಿಗೆಯಿಂದ ಪಡೆಯಲಾಗಿದೆ ಎಂಬ ಮಾಹಿತಿ ಅಕರ್‌ ಹಂಚಿಕೊಂಡಿದೆ ಎಂದು ದಿ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ: AI ಆಧಾರಿತ ಬಫೆ ಆ್ಯಪ್ ನಿರ್ಮಿಸಿದ ಬೆಂಗಳೂರಿನ ಟೆಕ್ಕಿಗೆ ಜೀವ ಬೆದರಿಕೆ

ಈ ವೈನ್ ದುಬಾರಿಯಾಗಲು ಕಾರಣ ಇದು

1945ರ ದ್ವಿತೀಯ ಮಹಾಯುದ್ಧದ ಅಂತ್ಯದ ಸೀಮಿತ ಉತ್ಪಾದನೆಯಾಗಿದ್ದು, ಕೇವಲ 600 ಬಾಟಲಿಗಳಲ್ಲಿ ತಯಾರಿಸಲಾಗಿತ್ತು. ಈ ವೈನ್ ದುಬಾರಿಯಾಗಲು ಕಾರಣ ಈ ವೈನ್ ತಯಾರಾದ ನಂತರ ದ್ರಾಕ್ಷಿಯ ಹಳೆಯ ಬಳ್ಳಿಗಳನ್ನು ಕಿತ್ತುಹಾಕಲಾಯಿತು. ಅಂದರೆ, ಈ ವೈನ್ ತಯಾರಾದ ನಂತರ, ದ್ರಾಕ್ಷಿತೋಟವನ್ನು ಮರು ನೆಡಲಾಯಿತು. ಹೀಗಾಗಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವೈನ್ ಎಂಬ ಖ್ಯಾತಿ ಪಡೆದಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ

ನವದೆಹಲಿ, ಮಾರ್ಚ್ 31: ಭಾರತದ ನಂಬರ್ ಒನ್ ಏರ್​ಲೈನ್ಸ್ ಎನಿಸಿರುವ ಇಂಡಿಗೋದ ಮಾಲಕ ಸಂಸ್ಥೆ ಇಂಟರ್​​ಗ್ಲೋಬ್ ಏವಿಯೇಶನ್ ಲಿಮಿಟೆಡ್​ಗೆ ನೂತನ ಸಿಇಒ ಆಗಿ ವಿಲಿಯಮ್ ವಾಲ್ಷ್ (William Walsh) ಅವರನ್ನು ನೇಮಕ ಮಾಡಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಈ ನೇಮಕಾತಿಯನ್ನು ಘೋಷಿಸಿದೆ. ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿ ಕಂಪನಿಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್​ನ ಮಾಜಿ ಮುಖ್ಯಸ್ಥ ವಿಲಿಯಮ್ ವಾಲ್ಷ್ ಅವರನ್ನು ತರಲಾಗಿದೆ.

ವಿಲಿಯಮ್ ವಾಲ್ಷ್ ಅವರು ಸದ್ಯ ಇಂಟರ್​ನ್ಯಾಷನಲ್ ಏರ್ ಟ್ರಾನ್ಸ್​ಪೋರ್ಟ್ ಅಸೋಸಿಯೇಶನ್​ನಲ್ಲಿ ಮಹಾನಿರ್ದೇಶಕರಾಗಿ (ಡೈರೆಕ್ಟರ್ ಜನರಲ್) ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಈ ಅವಧಿ ಜುಲೈ 31ಕ್ಕೆ ಅಂತ್ಯಗೊಳ್ಳುತ್ತದೆ. ಇಂಡಿಗೋ ಸಿಇಒ ಆಗಿ ವಾಲ್ಷ್ ಅವರು ಆಗಸ್ಟ್ 3ರೊಳಗೆ ಹೊಸ ಜವಾಬ್ದಾರಿ ಪಡೆಯಲಿದ್ದಾರೆ. ಅವರ ನೇಮಕಾತಿಗೆ ಭಾರತೀಯ ನಿಯಂತ್ರಕ ಪ್ರಾಧಿಕಾರಿಗಳ ಅನುಮೋದನೆ ಸಿಕ್ಕ ಬಳಿಕವಷ್ಟೇ ಅವರು ಆ ಸ್ಥಾನ ಪಡೆಯಲು ಸಾಧ್ಯ.

ಇದನ್ನೂ ಓದಿ: ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಏವಿಯೇಷನ್ ಸೆಕ್ಟರ್​ನಲ್ಲಿ ದೊಡ್ಡ ಹೆಸರು ವಿಲಿಯಮ್ ವಾಲ್ಷ್

ಇಂಡಿಗೋ ಸಂಸ್ಥೆ ಭಾರತದ ನಂಬರ್ ಒನ್ ಏರ್ಲೈನ್ ಎನಿಸಿದರೂ ಸಾಕಷ್ಟು ಸಮಸ್ಯೆಗಳು ಹಾಗು ವಿವಾದಗಳಿಂದ ಬಳಲುತ್ತಿದೆ. ಇಂಥ ಹೊತ್ತಲ್ಲಿ ವಿಲಿಯಮ್ ವಾಲ್ಷ್ ಅವರಿಗೆ ಇಂಡಿಗೋ ಚುಕ್ಕಾಣಿ ವಹಿಸಲಾಗಿದೆ. ವಾಲ್ಷ್ ಅವರು ಜಾಗತಿಕ ಏವಿಯೇಷನ್ ಉದ್ಯಮದಲ್ಲಿ ಬಹಳ ಅನುಭವ ಇರುವ ಮತ್ತು ಪ್ರಭಾವಶಾಲಿ ಎನಿಸಿರುವ ಮುಖಂಡ. ಹೀಗಾಗಿ, ಅವರು ಇಂಡಿಗೋ ಸಿಇಒ ಆಗುತ್ತಿರುವುದು ಉದ್ಯಮದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ.

ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದ ವಾಲ್ಷ್

ವಿಲಿಯಂ ವಾಲ್ಷ್ ಅವರು 1979ರಲ್ಲಿ ಇಂಟರ್ನ್ಯಾಷನಲ್ ಏರ್​ಲೈನ್ಸ್ ಗ್ರೂಪ್​ನ ಏರ್ ಲಿಂಗಸ್​ನಲ್ಲಿ ಪೈಲಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ, ಐರ್​ಲ್ಯಾಂಡ್ ಮೂಲದ ಆ ಏರ್​ಲೈನ್ಸ್ ಗ್ರೂಪ್​ಗೆ ಸಿಇಒ ಸ್ಥಾನಕ್ಕೆ ಏರಿದರು. ಅದಾದ ಬಳಿಕ ಬ್ರಿಟಿಷ್ ಏರ್​ವೇಸ್​ಗೂ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. 2021ರ ಏಪ್ರಿಲ್​ನಿಂದ ಜಾಗತಿಕ ಏರ್ಲೈನ್ ಉದ್ಯಮದ ಸಂಘಟನೆಯಾದ ಐಎಟಿಎಯಲ್ಲಿ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ. ಹೀಗಾಗಿ, ಜಾಗತಿಕ ಏವಿಯೇಷನ್ ಉದ್ಯಮದಲ್ಲಿ ಇವರು ಪ್ರಭಾವಶಾಲಿ ಹೆಸರು ಹೊಂದಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೂ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ಇಂಡಿಗೋದಲ್ಲಿ ವಾಲ್ಷ್​ಗೆ ಸಾಕಷ್ಟು ಸವಾಲುಗಳು

ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿರುವ ಏವಿಯೇಷನ್ ಮಾರುಕಟ್ಟೆ ಭಾರತವಾಗಿದೆ. ಇಂಡಿಗೋ ಭಾರತದ ನಂಬರ್ ಒನ್ ಏರ್​ಲೈನ್ಸ್ ಸಂಸ್ಥೆಯಾಗಿದೆ. ಇದರ ಆಪರೇಷನಲ್ ಪರ್ಫಾರ್ಮೆನ್ಸ್ ಹೆಚ್ಚಿಸುವುದು ವಾಲ್ಷ್​ಗೆ ಇರುವ ಸವಾಲು. ಹಾಗೆಯೇ, ಬೆಳೆಯುತ್ತಿರುವ ಏವಿಯೇಶನ್ ಮಾರುಕಟ್ಟೆಯಲ್ಲಿ ಇಂಡಿಗೋವನ್ನು ಮುಂಚೂಣಿ ಸ್ಥಾನದಲ್ಲಿ ಮುಂದುವರಿಸುವ ಸವಾಲೂ ಅವರ ಮುಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ತಂದೆ ಮೇಲಿನ ದ್ವೇಷಕ್ಕೆ ಪುಟ್ಟ ಮಗನನ್ನು ದರದರನೆ ಎಳೆದು ತಲೆಕೆಳಗಾಗಿಸಿ ನೆಲಕ್ಕೆ ಬಡಿದ ವ್ಯಕ್ತಿ

ವಸಾಯಿ, ಮಾರ್ಚ್​ 31: ವ್ಯಕ್ತಿಯೊಬ್ಬ ತನ್ನ ಆಟೋದ ಮೇಲೆ ಕುಳಿತಿದ್ದ ಬೇರೆ ಮಕ್ಕಳನ್ನು ಓಡಿಸಿ ಓರ್ವ ಬಾಲಕನನ್ನು ದರ ದರನೆ ಎಳೆದು ತಲೆಕೆಳಗಾಗಿಸಿ ಬಟ್ಟೆ ಒಗೆದಂತೆ ನೆಲಕ್ಕೆ ಬಡಿದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನಾಲ್ಕು ವರ್ಷದ ವಿಘ್ನೇಶ್ ಎಂಬ ಬಾಲಕನನ್ನು ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸಿದ್ದು, ವಸಾಯಿ-ವಿರಾರ್ ಪ್ರದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಮತ್ತು ಮಗುವಿನ ತಂದೆಯ ನಡುವಿನ ಸಣ್ಣ ಜಗಳ ನಡೆದಿತ್ತು. ಕೋಪದ ಭರದಲ್ಲಿ, ಸಂದೀಪ್ ಪವಾರ್ ಎಂದು ಗುರುತಿಸಲಾದ ಆರೋಪಿ ಅಮಾಯಕ ಮಗುವಿನ ಮೇಲೆ ತನ್ನ ಕೋಪವನ್ನು ಹೊರಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಧಾನ ಸಭೆಯಲ್ಲಿ ದೋಸ್ತಿ, ಹೊರಗಡೆ ಕುಸ್ತಿ: ಸಿದ್ದರಾಮಯ್ಯ ಮತ್ತು ಅಶೋಕ್​​ ನಡುವೆ ಕಳ್ಳೆತ್ತು, ಕುಂಟೆತ್ತು ಕಾಳಗ

ಬೆಂಗಳೂರು, ಮಾರ್ಚ್​​ 31: ವಿಧಾನಸಭೆ ಬಜೆಟ್​​ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​​. ಅಶೋಕ್​​ ನಡುವೆ ಹೇಳಿಕೊಳ್ಳುವಂತಹ ವಾಗ್ಯುದ್ಧವೇನೂ ನಡೆದಿರಲಿಲ್ಲ. ಇಬ್ಬರ ಮಾತುಗಳೂ ಕೊಂಚ ಮಟ್ಟಿಗೆ ಮೃದು ಎಂಬಂತೆಯೇ ಭಾಸವಾಗಿತ್ತು. ಆದರೆ ಇದೀಗ ಉಪ ಚುನಾವಣೆ ಅಖಾಡದಲ್ಲಿ ಇವರಿಬ್ಬರ ನಡುವಿನ ಮಾತಿನ ಸಮರ ಬಹಳ ಜೋರಾಗಿಯೇ ನಡೆಯುತ್ತಿದೆ. ನಿನ್ನೆ ಬಾಗಲಕೋಟೆಗೆ ಚುನಾವಣಾ ಪ್ರಚಾರಕ್ಕೆಂದು ತೆರಳಿದ್ದ ಸಿಎಂ ಸಿದ್ದರಾಮಯ್ಯ 2028ಕ್ಕೂ ನಾವೇ ಗೆಲ್ತೇವೆ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉಳುಮೆ ಮಾಡುವ ಎತ್ತುಗಳು ಬೇಕು. ಬಿಜೆಪಿಯವರು ಕಳ್ಳೆತ್ತುಗಳು, ಅವರಿಗೆ ವೋಟ್​​ ಹಾಕಬಾರದು ಎಂದಿದ್ದರು. ಮುಖ್ಯಮಂತ್ರಿಗಳ ಈ ಹೇಳಿಕೆಗೀಗ ಅಶೋಕ್​​ ಕೌಂಟರ್​​ ಕೊಟ್ಟಿದ್ದಾರೆ.

‘ಜೋಡೆತ್ತುಗಳಲ್ಲ, ಕುಂಟೆತ್ತುಗಳು’

ಕಾಂಗ್ರೆಸ್​​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್​​. ಅಶೋಕ್​​, ಸಿದ್ದರಾಮಯ್ಯ ಮತ್ತು ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ತಿವಿದಿದ್ದಾರೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಹೀಗಾಗಿ ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕೇಂದ್ರ ಸರ್ಕಾರ ಪೆಟ್ರೋಲ್​, ಡೀಸೆಲ್​ ಬೆಲೆ ಕಡಿಮೆ‌ ಮಾಡಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಜಾಸ್ತಿ ಮಾಡಿದೆ. ಉಪ‌ ಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕಲಿದ್ದು, ಜನ ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ದಾವಣಗರೆ ದಕ್ಷಿಣ ಬೈ ಎಲೆಕ್ಷನ್​​ನಿಂದ ಜಮೀರ್ ದೂರವಾಗಿದ್ಯಾಕೆ? ಅಸಲಿಗೆ ಆಗಿದ್ದೇನು?

ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್​​, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ. ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್​​ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link