Headlines

nagaraj11081993

ಬಹ್ರೇನ್​ನಲ್ಲಿರುವ ಅಮೆರಿಕದ ವಾಯುನೆಲೆ ಮೇಲೆ ಇರಾನ್ ದಾಳಿ – Kannada News | Iran’s Fresh Attack on US Air Base infra in Bahrain

ಬಹ್ರೇನ್, ಮಾರ್ಚ್ 4: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಕೂಡ ತನ್ನ ದಾಳಿಯನ್ನು ಮುಂದುವರೆಸಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳನ್ನು ಇರಾನ್ (Iran Attack) ಗುರಿಯಾಗಿಸಿಕೊಂಡಿದೆ. ಈಗಾಗಲೇ ಬಹ್ರೇನ್, ಕುವೈತ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮಿಲಿಟರಿ ಸೌಲಭ್ಯಗಳ ಮೇಲೆ ದಾಳಿ ನಡೆದಿವೆ. ಇಂದು ಮತ್ತೆ ಇರಾನ್ ಬಹ್ರೇನ್​ನ ಯುಎಸ್ ವಾಯುನೆಲೆ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ದೃಶ್ಯವನ್ನು ಬಹ್ರೇನ್ ನಿವಾಸಿಗಳು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು…

Read More

‘ಟಾಕ್ಸಿಕ್’ ರಿಲೀಸ್ ದಿನಾಂಕದಿಂದ ‘ಧುರಂಧರ್ 2’ ಹಾದಿ ಮತ್ತಷ್ಟು ಸುಲಭ – Kannada News | Toxic Postponement Boosts Dhurandhar 2: War Fears Clear Box Office Path

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸಾಕಷ್ಟು ನಡೆಯಿತು. ಆದರೆ, ಸದ್ಯಕ್ಕೆ ‘ಟಾಕ್ಸಿಕ್’ ತಂಡ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿಕೊಂಡಿದೆ. ಇದು ಯಶ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ವಿಶ್ವ ಮಟ್ಟದಲ್ಲಿ ಮೂಡಿರುವ ಯುದ್ಧ ಭೀತಿಯ ಕಾರಣದಿಂದ ‘ಟಾಕ್ಸಿಕ್’ ರಿಲೀಸ್ ವಿಳಂಬ ಆಗುತ್ತಿದೆ ಎಂದು ತಂಡ ಹೇಳಿದೆ. ಈ ಬೆಳವಣಿಗೆಯಿಂದ ‘ಧುರಂಧರ್ 2’ ಹಾದಿ ಸುಗಮನ ಆಗಿದೆ. ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುವ ಅವಕಾಶ ಇದೆ. ‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ಎರಡೂ ಸಿನಿಮಾಗಳು…

Read More

ಕರ್ನಾಟಕದಲ್ಲೂ ಬರಬೇಕು ಈ ಕಾಂಬೊ ಸಿನಿಮಾ ಟಿಕೆಟ್ ಆಫರ್ – Kannada News | Combo movie ticket offer with popcorn trending in Tollywood

ಜನರು ಚಿತ್ರಮಂದಿರಗಳಿಗೆ (Theater) ಬರುತ್ತಿಲ್ಲ ಎಂಬ ದೂರು ಹಲವು ವರ್ಷಗಳದ್ದು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಚಿತ್ರತಂಡಗಳು ನಾನಾ ಕಸರತ್ತು ಮಾಡುತ್ತಿವೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಭೇಟಿ ಕಡಿಮೆ ಆಗಲು ಮುಖ್ಯವಾಗಿ ದುಬಾರಿ ಬೆಲೆಯೇ ಕಾರಣ ಎನ್ನಲಾಗುತ್ತಿದೆ. ಈಗಿನ ದುಬಾರಿ ಜಮಾನಾನಲ್ಲಿ ಕುಟುಂಬವೊಂದು ಸಿನಿಮಾ ನೋಡಬೇಕೆಂದರೆ ಕನಿಷ್ಟ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳು ಖರ್ಚಾಗಿಬಿಡುತ್ತದೆ. ಟಿಕೆಟ್ ಬೆಲೆಯಷ್ಟೆ ಅಲ್ಲ ಪಾಪ್​​ಕಾರ್ನ್ ದರ, ಪಾರ್ಕಿಂಗ್ ದರ ಎಲ್ಲವೂ ದುಬಾರಿ ಆಗಿಬಿಟ್ಟಿವೆ. ಆದರೆ ಇದೀಗ ತೆಲುಗಿನಲ್ಲಿ ನಿರ್ಮಾಣ ಸಂಸ್ಥೆಯೊಂದು ಕುಟುಂಬ ಪ್ರೇಕ್ಷಕರನ್ನು ಸೆಳೆಯಲು…

Read More

ಪತ್ರಕರ್ತೆಯರಿಗೆ ಶುಭಸುದ್ದಿ; ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ತರಬೇತಿಗೆ ಅರ್ಜಿ ಆಹ್ವಾನ – Kannada News | Karnataka Media Academy: Women Journalists AI and Digital Training with Infosys CSR

ರ್ನಾಟಕ ಮಾಧ್ಯಮ ಅಕಾಡೆಮಿಯಿಂದ ತರಬೇತಿಗೆ ಅರ್ಜಿ ಆಹ್ವಾನ ಬೆಂಗಳೂರು, ಮಾರ್ಚ್ 04: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತೆಯರಿಗಾಗಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ಫೋಸಿಸ್ (Infosys) ಸಿ.ಎಸ್.ಆರ್ ಕಾರ್ಯಕ್ರಮದಡಿ ಈ ತರಬೇತಿ ನಡೆಯಲಿದ್ದು, ಅರ್ಹ ಪತ್ರಕರ್ತೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾರ್ಚ್ 25ರಿಂದ 27ರವರೆಗೆ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮೂರು ದಿನಗಳ ವಸತಿಯುತ ತರಬೇತಿ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತೆಯರು…

Read More

ಅಪಾರ್ಟ್​ಮೆಂಟ್ ನಿವಾಸಿಗಳಿಗೆ ಬೀದಿ ನಾಯಿಗಳ ಕಾಟ: ಮಕ್ಕಳು, ವೃದ್ಧರ ಮೇಲೆ ಮನಸೋ ಇಚ್ಛೆ ದಾಳಿ – Kannada News | Stray Dog Menace Grips Bengalurus Ahad Serenity Apartment Residents

ಬೆಂಗಳೂರು, ಮಾರ್ಚ್​​ 04: ಅಹದ್ ಸೆರೆನಿಟಿ ಅಪಾರ್ಟ್​ಮೆಂಟ್ ನಿವಾಸಿಗಳು ಬೀದಿ ನಾಯಿಗಳ ಹಾವಳಿಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ನಿವಾಸಿಗಳು ನಾಯಿಗಳ ಕಾಟದಿಂದ ಮುಕ್ತಿ ಕೋರಿ ಪ್ರತಿಭಟನೆ ನಡೆಸಿದ್ದಾರೆ. ಮಕ್ಕಳು ಮತ್ತು ವಯಸ್ಕರ ಮೇಲೆ ಬೀದಿ ನಾಯಿಗಳು ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತಿರುವುದು ದೈನಂದಿನ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ತಮ್ಮ ಮಗಳ ಮೇಲೆ 24 ದಿನಗಳ ಹಿಂದೆ ನಾಯಿಗಳು ದಾಳಿ ಮಾಡಿ ಕೈ ಮುರಿದ ಘಟನೆಯನ್ನು ಇದೇ ವೇಳೆ ನಿವಾಸಿ ಒಬ್ಬರು ಹಂಚಿಕೊಂಡಿದ್ದಾರೆ….

Read More

ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ – Kannada News | Iran Israel war: Modi Government sets up control room for Indians issues helpline numbers

ನವದೆಹಲಿ, ಮಾರ್ಚ್ 4: ಇಸ್ರೇಲ್-ಯುಎಸ್-ಇರಾನ್ ಸಂಘರ್ಷ (Iran Conflict) ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಸಹಾಯ ಒದಗಿಸಲು ವಿದೇಶಾಂಗ ಸಚಿವಾಲಯ (MEA) ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಕೂಡ ನೀಡಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್​ನಲ್ಲಿ ಕೆಲವು ವಿವರಗಳನ್ನು ಹಂಚಿಕೊಂಡಿದ್ದು, “ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು…

Read More

ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು 21 ಲಕ್ಷ ರೂ.ಗಳಿಸಿದ ವ್ಯಕ್ತಿ – Kannada News | Holiday Cat Care King: Chinese Man Makes Rs 21 Lakhs in Pet Feeding Business

ಚೀನಾ, ಮಾರ್ಚ್​ 04: ಸಾಮಾನ್ಯವಾಗಿ ಬೆಕ್ಕು(Cat) ಅಥವಾ ನಾಯಿಯನ್ನು ಬಹುತೇಕ ಎಲ್ಲರ ಮನೆಯಲ್ಲಿ ಸಾಕುತ್ತಾರೆ. ತಾವೇ ಆಹಾರ ಕೊಟ್ಟು ಮನೆಯ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಶ್ರೀಮಂತರು ಅವುಗಳಿಗಾಗಿ ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಚೀನಾ ವ್ಯಕ್ತಿಯೊಬ್ಬರು ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು ಬರೋಬ್ಬರಿ 21 ಲಕ್ಷ ರೂ. ಗಳಿಸಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಬೆಕ್ಕುಗಳನ್ನು ನೋಡಿಕೊಳ್ಳುವ ಮತ್ತು ಆಹಾರ ನೀಡುವ ಕೆಲಸವು ಉದ್ಯಮವಾಗಿ ಬೆಳೆದಿದೆ. ಅದರಲ್ಲಿ…

Read More

ಟಿ20 ವಿಶ್ವಕಪ್​ ನಡುವೆ ಊರಿಗೆ ತೆರಳಿ ಸಿಕ್ಕಾಕೊಂಡ ನ್ಯೂಝಿಲೆಂಡ್ ಆಟಗಾರ – Kannada News | NZ vs SA: Has Matt Henry rejoined New Zealand squad?

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು (ಮಾ.4) ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ನಿರ್ಣಾಯಕ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಕಣಕ್ಕಿಳಿಯಲಿದ್ದಾರಾ? ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಮಂಗಳವಾರ ಸಂಜೆ ತನಕ ಹೆನ್ರಿ ನ್ಯೂಝಿಲೆಂಡ್ ತಂಡವನ್ನು ಕೂಡಿಕೊಂಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಸೂಪರ್-8 ಪಂದ್ಯದ ಮುಕ್ತಾಯದ ಬೆನ್ನಲ್ಲೇ ಮ್ಯಾಟ್ ಹೆನ್ರಿ ನ್ಯೂಝಿಲೆಂಡ್​ಗೆ ತೆರಳಿದ್ದರು. ತಮ್ಮ ಎರಡನೇ ಮಗುವಿನ…

Read More

ಅರ್ಜುನ್ ಕಪೂರ್ ಟ್ರೋಲ್ ಮಾಡಿದವರಿಗೆ ತಂಗಿ ಜಾನ್ವಿಯ ಎಚ್ಚರಿಕೆ – Kannada News | Janhvi kapoor Supports His Step Brother Arjun Kapoor Over Troll

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಯಾರನ್ನು ಯಾವ ಕಾರಣಕ್ಕಾಗಿ ಟ್ರೋಲ್ ಮಾಡಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಸೆಲೆಬ್ರಿಟಿಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗುತ್ತದೆ. ಕಲಾ ಜಗತ್ತಿನಲ್ಲಿ ಕೆಲವು ಸೆಲೆಬ್ರಿಟಿಗಳು ಇದ್ದಾರೆ, ಅವರು ಏನು ಮಾಡಿದರೂ ಅಥವಾ ಹೇಳಿದರೂ, ಯಾವಾಗಲೂ ಟ್ರೋಲ್​​ಗೆ ಗುರಿಯಾಗಿರುತ್ತಾರೆ. ಅಂತಹ ಒಂದು ಹೆಸರು ಅರ್ಜುನ್ ಕಪೂರ್ (Arjun Kapoor). ಅರ್ಜುನ್ ಕಪೂರ್ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ವೈಫಲ್ಯದಿಂದಾಗಿ ಆಗಾಗ್ಗೆ ಟ್ರೋಲ್ ಆಗುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಹೆಸರಿನಲ್ಲಿ ಹಲವಾರು ಮೀಮ್ಸ್ ಮತ್ತು ಮೀಮ್ಸ್ ಪುಟಗಳು…

Read More

Video: ಹೆತ್ತವರನ್ನು ತಾನು ಕೆಲಸ ಮಾಡುವ ಮೈಕ್ರೋಸಾಫ್ಟ್‌ ಆಫೀಸ್‌ ತೋರಿಸಲು ಕರೆತಂದ ಮಗಳು – Kannada News | Hyderabad: Daughter takes parents to show them around Microsoft Office in Hyderabad

ತಂದೆ ತಾಯಿಗೆ ತಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ (job) ಪಡೆದು ಜೀವನದಲ್ಲಿ ಸೆಟಲ್ ಆಗಬೇಕೆನ್ನುವ ಆಸೆಯಿರುತ್ತದೆ. ಅದರಂತೆ ಮಕ್ಕಳು ಬದುಕು ಕಟ್ಟಿಕೊಂಡರೆ ಹೆತ್ತವರಿಗೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಭಾವನಾತ್ಮಕ ಕ್ಷಣಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಮೈಕ್ರೋಸಾಫ್ಟ್ ಉದ್ಯೋಗಿಯೊಬ್ಬರು ಪೋಷಕರನ್ನು ಹೈದರಾಬಾದ್‌ನ (Hyderabad) ತಮ್ಮ ಆಫೀಸಿಗೆ ಕರೆದುಕೊಂಡು ಹೋಗಿದ್ದಾರೆ. ಹೆತ್ತವರು ಹೆಮ್ಮೆ ಪಡುವಂತೆ ಮಾಡಿದ ಮಗಳ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನೇಯಾ ಸೋನಿ (taneyasoni_vlogs) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಕನಸು…

Read More