All posts by nagaraj11081993

ಎಲ್ಲರಿಗೂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ: ಮತ್ತೆ ಕೊಟ್ಟ ಮಾತು ನೆನಪಿಸಿದ್ರಾ ಡಿಕೆ ಶಿವಕುಮಾರ್? – Kannada News | Power Sharing Row in Karnataka Congress: DK Shivakumar Reminds Promise, Says Siddaramaiah Will Respond

ಬೆಂಗಳೂರು, ಫೆಬ್ರವರಿ 18: ಶಾಸಕರ ವಿದೇಶ ಪ್ರವಾಸದೊಂದಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವಣ ಮುಸುಕಿನ ರಾಜಕೀಯ ತಿಕ್ಕಾಟ ತೀವ್ರಗೊಂಡಿದೆ. ಡಿಕೆ ಶಿವಕುಮಾರ್ ಅವರು ಪದೇ ಪದೇ ಅಧಿಕಾರ ಹಂಚಿಕೆ ಕುರಿತು ಆದ ಒಪ್ಪಂದವನ್ನು ನೆನಪಿಸುತ್ತಿದ್ದು, ಸೂಕ್ತ ಸಮಯ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಜನರಿಗೆ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.

ಈ ನಡುವೆ, ಸಚಿವ ಹೆಚ್​ಸಿ ಮಹದೇವಪ್ಪ ‘ಬೀದಿ ನಾಯಿ’ ಪದ ಬಳಸಿದ್ದಕ್ಕೆ ಡಿಕೆ ಸುರೇಶ್ ಕೌಂಟರ್ ಕೊಟ್ಟಿದ್ದಾರೆ. ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳು ಎಂದು ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಅಳಿಲು ಮನೆಯೊಳಗೆ ಬಂದರೆ ಏನರ್ಥ? ಇದು ಅಶುಭ ಸೂಚನೆಯೇ? – Kannada News | Squirrels in Your Abode: Exploring the Sacred Significance in Hindu Traditions

ಅಳಿಲು ಮನೆಯೊಳಗೆ ಪ್ರವೇಶಿಸಿದರೆ ಏನಾಗುತ್ತದೆ, ಹಿಂದೂ ನಂಬಿಕೆಗಳಲ್ಲಿ ಇದರ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಳಿಲು ಮನೆ ಒಳಗೆ, ಕಚೇರಿಯ ಒಳಗೆ, ದೇವಸ್ಥಾನದ ಒಳಗೆ, ಅಥವಾ ಯಾವುದೇ ಕಟ್ಟಡದ ಒಳಗೆ ಬಂದರೆ ಅದು ಶುಭವೋ ಅಶುಭವೋ ಎಂಬ ಪ್ರಶ್ನೆಗೆ ಗುರೂಜಿ ಉತ್ತರ ನೀಡಿದ್ದಾರೆ.

ಹಿಂದೂ ನಂಬಿಕೆಗಳು ಮತ್ತು ಸಂಪ್ರದಾಯಗಳ ಪ್ರಕಾರ, ಅಳಿಲು ಎಂದರೆ ನಮ್ಮ ಮನಸ್ಸಿಗೆ ತಕ್ಷಣವೇ ಬರುವುದು ಶ್ರೀರಾಮಚಂದ್ರನ ಒಡನಾಡಿ ಎಂಬ ಭಾವನೆ. ಶ್ರೀರಾಮಚಂದ್ರರಿಗೆ ಸೇವೆ ಸಲ್ಲಿಸಿದ ಒಂದು ವಿಶೇಷವಾದ ಪವಿತ್ರ ಪ್ರಾಣಿ ಅಳಿಲು. ಅದೇ ರೀತಿ, ಅಳಿಲು ಲಕ್ಷ್ಮಿಯ ಸಂಕೇತವೂ ಆಗಿದೆ. ಅಳಿಲನ್ನು ನೋಡುವುದೇ ಶುಭಕರ (“ದರ್ಶನಂ ಪುಣ್ಯಂ”). ಆದರೆ ಅದನ್ನು ಸ್ಪರ್ಶಿಸಲು ಪ್ರಯತ್ನಿಸಬಾರದು. ಅಳಿಲು ಅತ್ಯಂತ ಸಾಧು ಮತ್ತು ಸೌಮ್ಯ ಪ್ರಾಣಿಯಾಗಿದ್ದರೂ, ಅದಕ್ಕೆ ಹಿಂಸೆ ಅಥವಾ ತೊಂದರೆ ನೀಡಲು ಹೋಗಬಾರದು. ಅದು ತನ್ನಷ್ಟಕ್ಕೆ ತಾನೇ ನಿಮ್ಮ ಭುಜದ ಮೇಲೆ ಕುಳಿತರೆ ಅದು ಶುಭಕರ.

ಹಾಗಾಗಿ, ಅಳಿಲು ಮನೆ ಒಳಕ್ಕೆ ಬಂದರೆ ಅದನ್ನು ಮಹಾ ಶುಭ ಎಂದು ಪರಿಗಣಿಸಲಾಗುತ್ತದೆ. ಬಂದ ದಿನ, ಸಮಯ, ತಿಥಿ, ನಕ್ಷತ್ರಗಳನ್ನು ಗಮನಿಸಿದರೆ ಇನ್ನೂ ಹೆಚ್ಚಿನ ಶುಭ ಫಲಗಳು ದೊರೆಯುತ್ತವೆ. ಮನೆಗೆ ಬಾಗಿಲು ಅಥವಾ ಕಿಟಕಿಯ ಮೂಲಕ ಅಳಿಲು ಪ್ರವೇಶಿಸುವುದು ಮಹಾ ಶುಭ ಸೂಚಕವಾಗಿದೆ. ಇಂತಹ ಸಂದರ್ಭದಲ್ಲಿ ದೊರೆಯುವ ಫಲಗಳು ಹೀಗಿವೆ: ಸಂಪತ್ತು ವೃದ್ಧಿಯಾಗುತ್ತದೆ, ದುಷ್ಟ ಜನರ ಸಹವಾಸ ಅಥವಾ ದೃಷ್ಟಿಯಿಂದ ದೂರವಿರಲು ಸಹಾಯವಾಗುತ್ತದೆ, ಆರ್ಥಿಕವಾಗಿ ಸುಧಾರಣೆಯಾಗುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ. ಕೆಲವೇ ದಿನಗಳಲ್ಲಿ ಅಧಿಕಾರ ಯೋಗ ಪ್ರಾಪ್ತಿಯಾಗುವ ಸಾಧ್ಯತೆಗಳೂ ಇರುತ್ತವೆ. ಅಳಿಲಿನ ಸೇವೆಯಿಂದಲೇ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಯೋಗ ಪ್ರಾಪ್ತವಾಯಿತು ಮತ್ತು ಅವರ ಸೇವಾ ಫಲವಾಗಿ ಶ್ರೀರಾಮಚಂದ್ರರಿಗೆ ಜಯವೂ ದೊರೆಯಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಅಳಿಲ ದರ್ಶನವು ಜಯ ಮತ್ತು ಅದೃಷ್ಟವನ್ನು ತರುತ್ತದೆ. ಪ್ರಕೃತಿಯ ಸುಂದರ ಪ್ರಾಣಿಗಳಲ್ಲಿ ಇದೂ ಒಂದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಳಿಲನ್ನು ಇಷ್ಟಪಡುತ್ತಾರೆ. ಇದು ಭಕ್ತಿಪೂರ್ವಕವಾಗಿ ಶ್ರೀರಾಮಚಂದ್ರರಿಗೆ ಸಹಾಯ ಮಾಡಿದ ಪ್ರಾಣಿ. ಆದ್ದರಿಂದ ಅಳಿಲಿಂದ ಕೀರ್ತಿ, ಪ್ರತಿಷ್ಠೆ, ಆರ್ಥಿಕ ಲಾಭ ಮತ್ತು ಮಕ್ಕಳಿಂದ ಶುಭವಾಗುತ್ತದೆ. ಅದರಲ್ಲೂ ಬೆಳಗಿನ ಜಾವ ಅಳಿಲ ದರ್ಶನವಾದರೆ ಸಂಜೆಯವರೆಗಿನ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಅಳಿಲು ಮೈ ಮೇಲೆ ಬಿದ್ದರೂ ಸಹ ಅದನ್ನು ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಅಳಿಲು ಕನಸಿನಲ್ಲಿ ಕಂಡರೆ ಅದು ಇನ್ನೂ ಉತ್ತಮ.

ಆದರೆ, ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ಒಂದು ಪ್ರಶ್ನೆಯೆಂದರೆ, ನಾವು ವಾಹನ ಚಲಾಯಿಸುವಾಗ ಅಚಾತುರ್ಯದಿಂದ ಅಳಿಲಿಗೆ ಹಾನಿಯಾದರೆ ಏನು ಮಾಡಬೇಕು? ಅಂತಹ ಸಂದರ್ಭದಲ್ಲಿ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳಲೇಬೇಕು. ಇದಕ್ಕಾಗಿ ಶ್ರೀರಾಮಚಂದ್ರನ ಮೆರವಣಿಗೆಯಲ್ಲಿ ಭಾಗವಹಿಸುವುದು, ರಾಮಚಂದ್ರ ಅಥವಾ ಹನುಮಾನ್ ಭಜನೆಗಳನ್ನು ಮಾಡುವುದು, ಮತ್ತು ಜನರಿಗೆ ಅನ್ನದಾನ ಮಾಡುವುದು ಬಹಳ ಶುಭಕರವಾದ ಪ್ರಾಯಶ್ಚಿತ್ತಗಳು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ. – Kannada News | Professional Snuggling in India: How Cuddle Therapy Fights Stress and Loneliness in Cities

ಬೆಂಗಳೂರು, ಫೆ.18: ಜೀವನದಲ್ಲಿ ತುಂಬಾ ಸೋತು, ಕೆಲಸದ ಒತ್ತಡ, ಮತ್ತೊಂದು ಕಡೆ ಮಾನಸಿಕ ನೆಮ್ಮದಿ ಇಲ್ಲದಾಗ ಒಂಟಿತನ ಕಾಡುವುದು ಸಹಜ, ಆದರೆ ಅದರಿಂದ ಹೊರಗೆ ಬರುಲು ತುಂಬಾ ಸಮಯ ತೆಗೆದುಕೊಳ್ಳುತ್ತೇವೆ. ಅದರಲ್ಲೂ ಬೆಂಗಳೂರಿಗರೇ ಈ ಎಲ್ಲ ತೊಂದರೆಗಳ ನಡುವೆ ಟ್ರಾಫಿಕ್​​​​​​ ಗೋಳು ಕೂಡ ಮಾಸನಸಿಕ ಒತ್ತಡವಾಗಿದೆ. ಅದಕ್ಕಾಗಿ ಇಂದಿನ ಯಾಂತ್ರಿಕ ಜೀವನದಲ್ಲಿ ಜನರು ಎದುರಿಸುತ್ತಿರುವ ಒಂಟಿತನ ಮತ್ತು ಒತ್ತಡವನ್ನು ನಿವಾರಿಸಲು ‘ಕಡಲ್ ಥೆರಪಿ’ ಅಥವಾ ವೃತ್ತಿಪರ ಆಲಿಂಗನ ಚಿಕಿತ್ಸೆ (Professional Snuggling) ಜನಪ್ರಿಯವಾಗುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ 32-35 ವರ್ಷ ವಯಸ್ಸಿನ ಜನರು ಹೆಚ್ಚಾಗಿ ಈ ಸೇವೆಯನ್ನು ಬಳಸುತ್ತಿದ್ದಾರೆ .

ಕಡಲ್ ಥೆರಪಿ ಎಂದರೇನು?

ಇದು ಸಂಪೂರ್ಣವಾಗಿ ಲೈಂಗಿಕೇತರ (Non-sexual), ಸ್ನೇಹಪೂರ್ವಕ ಸ್ಪರ್ಶ ಚಿಕಿತ್ಸೆಯಾಗಿದೆ. ಇದರಲ್ಲಿ ತರಬೇತಿ ಪಡೆದ ಥೆರಪಿಸ್ಟ್‌ಗಳು ಗ್ರಾಹಕರ ಜೊತೆ ಸಮಯ ಕಳೆಯುತ್ತಾರೆ. ಅವರು ಗ್ರಾಹಕರ ಕೈ ಹಿಡಿಯುವುದು, ಪಕ್ಕದಲ್ಲಿ ಕುಳಿತು ಹರಟೆ ಹೊಡೆಯುವುದು ಅಥವಾ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಅವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತಾರೆ.

ಭಾರತದಲ್ಲಿ ಈ ಟ್ರೆಂಡ್ ಹೇಗಿದೆ?

ವಿದೇಶಗಳಲ್ಲಿ ಮೊದಲೇ ಜನಪ್ರಿಯವಾಗಿದ್ದ ಈ ಚಿಕಿತ್ಸೆ ಈಗ ಭಾರತದ ಬೆಂಗಳೂರು, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಈ ಸೇವೆಯನ್ನು ಪಡೆಯಲು ಗಂಟೆಗೆ ಅಥವಾ 3-4 ಗಂಟೆಗಳ ಅವಧಿಗೆ ಸುಮಾರು 5,000 ರೂಪಾಯಿಗಳವರೆಗೆ ದರ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಿಂದ 60 ದಶಲಕ್ಷ ಗುಲಾಬಿ ರಫ್ತು: ಹೂವಿನ ರಫ್ತಿನಲ್ಲಿ ದಾಖಲೆ

ಹೇಗೆ ಕೆಲಸ ಮಾಡುತ್ತದೆ?

ಚಿಕಿತ್ಸೆಯ ಮೊದಲು ಇದರಲ್ಲಿ ಭಾಗಿಯಾಗುವ ಗ್ರಾಹಕ ನಿಯಮಗಳಿಗೆ ಒಪ್ಪಿಗೆ ನೀಡಬೇಕು. ಚಿಕಿತ್ಸೆಯ ಸಮಯದಲ್ಲಿ ಪೂರ್ಣವಾಗಿ ಬಟ್ಟೆ ಧರಿಸಿರಬೇಕು. ಮುದ್ದು ಮಾಡುವುದು ಅಥವಾ ಲೈಂಗಿಕ ಸ್ಪರ್ಶಕ್ಕೆ ಇಲ್ಲಿ ಅವಕಾಶವಿಲ್ಲ.

ಮಾನವ ಸ್ಪರ್ಶದಿಂದ ದೇಹದಲ್ಲಿ ‘ಆಕ್ಸಿಟೋಸಿನ್’ (Oxytocin) ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದನ್ನು ‘ಫೀಲ್ ಗುಡ್’ ಹಾರ್ಮೋನ್ ಎನ್ನಲಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

ಮುನ್ನೆಚ್ಚರಿಕೆಗಳು:

ಈ ಸೇವೆಯನ್ನು ಒದಗಿಸುವವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು.

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರಿಕೆ ಇರಬೇಕು.

ಇದು ಕೇವಲ ತಾತ್ಕಾಲಿಕ ಪರಿಹಾರವಾಗಿದ್ದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುವುದೇ ಅತ್ಯುತ್ತಮ ಮಾರ್ಗ ಎಂದು ತಜ್ಞರು ಸಲಹೆ ನೀಡುತ್ತಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪಾನಿಪುರಿ ಮಸಾಲೆ ಪಾತ್ರೆಯಲ್ಲಿ ಈಜಾಡಿದ ಇಲಿ – Kannada News | Viral Video From Amritsar Raises Hygiene Concerns Over Popular Street Food

ಅಮೃತಸರ, ಫೆಬ್ರವರಿ 18: ಪಂಜಾಬ್‌ನ ಅಮೃತಸರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಪಾನಿ ಪುರಿ ಮಸಾಲೆ ಪಾತ್ರೆಯಲ್ಲಿ ಇಲಿಯೊಂದು ಈಜಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರು ಪಾನಿಪುರಿ ತಿನ್ನಲೆಂದು ಅಂಗಡಿಯಲ್ಲಿ ನಿಂತಿರುತ್ತಾರೆ ಆಗ ಮಸಾಲೆ ಪಾತ್ರೆಯಲ್ಲಿ ಇಲಿ ಇರುವುದು ಶಾಪ್ ಮಾಲೀಕ ನೋಡುತ್ತಾರೆ. ಬಳಿಕ ಮಸಾಲೆ ಪಾತ್ರೆಯಿಂದ ಅದನ್ನು ತೆಗೆದು ಕೆಳಗೆ ಹಾಕುತ್ತಾರೆ. ಗ್ರಾಹಕರು ಅದನ್ನು ನೋಡಿ ಅಲ್ಲಿಂದ ಕಾಲ್ಕೀಳುತ್ತಾರೆ. ಅಯ್ಯೋ ಇದು ಎಐ ವಿಡಿಯೋ ಆಗಿರಲಿ ಎಂದು ಪಾನಿಪುರಿ ಪ್ರಿಯರು ಬೇಡಿಕೊಳ್ಳುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಪಾಕಿಸ್ತಾನ್ ಪಂದ್ಯ ಮಳೆಯಿಂದಾಗಿ ರದ್ದಾದ್ರೆ ಯಾರಿಗೆ ಚಾನ್ಸ್​? – Kannada News | What Happens If Namibia vs Pakistan T20 World Cup Match Washes Out

T20 World Cup 2026: ಟಿ20 ವಿಶ್ವಕಪ್​ನ 32ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಲ್ಲೆಕೆಲೆ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಝಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಣ ಈ ಪಂದ್ಯವು ಸಂಪೂರ್ಣ ಮಳೆಗೆ ಆಹುತಿಯಾಗಿದ್ದು, ಹೀಗಾಗಿ ಉಭಯ ತಂಡಗಳು ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಈ ಒಂದು ಅಂಕದೊಂದಿಗೆ ಒಟ್ಟು 5 ಪಾಯಿಂಟ್ಸ್ ಗಳಿಸಿ ಝಿಂಬಾಬ್ವೆ ತಂಡ ಸೂಪರ್-8 ಹಂತಕ್ಕೇರಿದೆ. ಇತ್ತ ಪಾಕಿಸ್ತಾನ್ ಕೂಡ ಇಂದು ಕೊಲಂಬೊದಲ್ಲಿ ನಿರ್ಣಾಯಕ ಪಂದ್ಯವಾಡಬೇಕಿದೆ. ಅಂದರೆ ನಮೀಬಿಯ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಮಾತ್ರ ಪಾಕ್ ಪಡೆ ಮುಂದಿನ ಹಂತಕ್ಕೇರಲಿದೆ.

ಈ ಪಂದ್ಯವು ಕೊಲಂಬೊದ ಎಸ್​ಎಸ್​ಎ ಸ್ಟೇಡಿಯಂನಲ್ಲಿ ನಡೆಯಲಿರುವುದರಿಂದ ಈ ಮ್ಯಾಚ್​​ಗೂ ಮಳೆ ಭೀತಿ ಎದುರಾಗಿದೆ. ಒಂದು ವೇಳೆ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ ಯಾರಿಗೆ ಚಾನ್ಸ್? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

  • ಪಾಕಿಸ್ತಾನ್ ಮತ್ತು ನಮೀಬಿಯ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾದರೆ ಪಾಕಿಸ್ತಾನ್ ತಂಡವೇ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಪಾಕ್ ತಂಡವು ಈಗಾಗಲೇ 4 ಅಂಕಗಳನ್ನು ಹೊಂದಿದ್ದು, ಇನ್ನೊಂದು ಅಂಕ ಪಡೆದರೆ 5 ಪಾಯಿಂಟ್ಸ್​​ನೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.
  • ಒಂದು ವೇಳೆ ನಮೀಬಿಯ ವಿರುದ್ಧ ಪಾಕಿಸ್ತಾನ್ ತಂಡ ಸೋತರೆ ಮಾತ್ರ ಯುಎಸ್​​ಎ ತಂಡ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಯುಎಸ್​​ಎ ತಂಡದ ನೆಟ್​ ರನ್​ ರೇಟ್ +0.787 ಇದ್ದು, ಪಾಕಿಸ್ತಾನ್ ತಂಡ -0.403 ನೆಟ್​ ರನ್ ಹೊಂದಿದೆ. ಹೀಗಾಗಿ ನಮೀಬಿಯ ವಿರುದ್ಧ ಪಾಕ್ ತಂಡ ಸೋತರೆ ನೆಟ್ ರನ್ ರೇಟ್ ಆಧಾರದ ಮೇಲೆ ಯುಎಸ್​​​ಎ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಲಿದೆ.

ಅಂದರೆ ಮಳೆ ಬಂದು ಪಂದ್ಯ ರದ್ದಾದರೆ ಪಾಕಿಸ್ತಾನ್ ತಂಡ ನೇರವಾಗಿ ಸೂಪರ್-8 ಹಂತಕ್ಕೇರುವುದು ಖಚಿತ. ಹೀಗಾಗಿ ಯುಎಸ್​ಎ ಪಾಲಿಗೆ ಪಾಕ್ ಮತ್ತು ನಮೀಬಿಯ ನಡುವಣ ಪಂದ್ಯ ನಡೆಯುವುದು ಅನಿವಾರ್ಯ. ಅಲ್ಲದೆ ಈ ಪಂದ್ಯದಲ್ಲಿ ನಮೀಬಿಯ ಗೆದ್ದರೆ ಮಾತ್ರ ಯುಎಸ್​​ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದ ‘ಸೂಪರ್-8’ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಅಥವಾ ಈ ಪಂದ್ಯವು ಕಾರಣಾಂತರದಿಂದ ರದ್ದಾದರೆ, ಪಾಕ್ ಪಡೆಯು ಸೂಪರ್-8 ಹಂತಕ್ಕೇರುವುದು ಖಚಿತ. ಅದರಂತೆ ಪಾಕಿಸ್ತಾನ್ ತಂಡ ಕೊನೆಯ ಲೀಗ್​ ಮ್ಯಾಚ್​ನಲ್ಲಿ ಗೆದ್ದು ಮುಂದಿನ ಹಂತಕ್ಕೇರಲಿದೆಯಾ ಕಾದು ನೋಡಬೇಕಿದೆ.

Source link

ಗಿಚ್ಚಿ ಗಿಲಿಗಿಲಿ ಜೂನಿಯರ್ಸ್​​ನಲ್ಲಿ ಮಕ್ಕಳ ನಟನೆಗೆ ಫುಲ್ ಮಾರ್ಕ್ಸ್ – Kannada News | Cute Love Story In Gichchi Gili Gili Junior event video goes viral

ಸಾಮಾನ್ಯವಾಗಿ ಮಕ್ಕಳು ಹೇಳಿದ ಮಾತನ್ನು ಕೇಳೋದಿಲ್ಲ. ಇನ್ನು ಸಿನಿಮಾದಲ್ಲಿ ಅವರು ನಟಿಸಬೇಕು ಎಂದರೆ, ಅವರಿಗೆ ನಟನೆ ಹೇಳಿಕೊಡಬೇಕು ಎಂದರೆ ಅದು ಸರಳ ವಿಷಯ ಅಲ್ಲವೇ ಅಲ್ಲ ಬಿಡಿ. ‘ಗಿಚ್ಚಿ ಗಿಲಿ ಗಿಲಿ’ ತಂಡದವರು ಆ ರೀತಿಯ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ ಎಂದೇ ಹೇಳಬಹುದು. ಆ ಸಂದರ್ಭದ ಕ್ಯೂಟ್ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ: ಉಡುಪಿಯಲ್ಲಿ ಮತ್ತೊಬ್ಬನ ಬಂಧನ – Kannada News | Indian Navy Secret Leak Case: Another Arrest in Udupi Over Sharing Classified Information with Pakistan

ಉಡುಪಿ, ಫೆಬ್ರವರಿ 18: ಭಾರತೀಯ ನೌಕಾ ಪಡೆಗೆ (Indian Navy) ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ (Pakistan) ರವಾನಿಸಿದ ಪ್ರಕರಣದಲ್ಲಿ ಉಡುಪಿ (Udupi) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆಗಳ ಗೋಪ್ಯ ಮಾಹಿತಿಯನ್ನು ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಜತೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಧಿತನನ್ನು ಪಶ್ಚಿಮ ಬಂಗಾಳ ಮೂಲದ 21 ವರ್ಷದ ಆಲಿಫ್ ಇಸ್ಲಾಂ ಎಂದು ಗುರುತಿಸಲಾಗಿದೆ. ಆತ ಪ್ರಸ್ತುತ ಕೇರಳದ ಇಡುಕ್ಕಿ ಜಿಲ್ಲೆಯ ಮರಾಯು ಗ್ರಾಮದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಬಂಧಿತ ಬಾಂಗ್ಲಾದೇಶದ ಪ್ರಜೆ ಆಗಿರಬಹುದೆಂಬ ಅನುಮಾನವನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ 2025ರ ನವೆಂಬರ್ ಹಾಗೂ ಡಿಸೆಂಬರ್​​ನಲ್ಲಿ ಗುಜರಾತ್ ಮೂಲದ ಹಿರೇಂದ್ರ ಕುಮಾರ್, ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬನ ಬಂಧನದೊಂದಿಗೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಭಾರತೀಯ ನೌಕಾ ಸೇನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ರಹಸ್ಯವಾಗಿ ಪಾಕಿಸ್ತಾನಕ್ಕೆ ರವಾನಿಸಿರುವ ಆರೋಪ ಹಿನ್ನೆಲೆ, ಉಡುಪಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಒಬ್ಬ ಪ್ರಮುಖ ಆರೋಪಿ ಮತ್ತು ಮಾಹಿತಿ ರವಾನಿಸಲು ಬಳಸಿದ ಫೇಸ್‌ಬುಕ್ ಪೇಜ್‌ ಅಡ್ಮಿನ್​ನ ಬಂಧನ ಬಾಕಿಯಿದೆ.

ಆರೋಪಿಗಳು ಕಳೆದ ಒಂದೂವರೆ ವರ್ಷಗಳಿಂದ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿ, ತಾಂತ್ರಿಕ ಮಾಹಿತಿಗಳನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಉಡುಪಿ: ಕೊಚ್ಚಿನ್ ಶಿಪ್ ಯಾರ್ಡ್​ನಿಂದ ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಉತ್ತರ ಪ್ರದೇಶದ ಇಬ್ಬರ ಬಂಧನ

ಭಾರತೀಯ ನೌಕಾಪಡೆಗೆ ಟಗ್‌ಗಳನ್ನು ನಿರ್ಮಿಸಿ ಕೊಡುವ ಸಂಸ್ಥೆ ಕೊಚ್ಚಿನ್ ಶಿಪ್ ಯಾರ್ಡ್. ಇದು ನೌಕಾಪಡೆಗೆ ಮಾತ್ರವಲ್ಲದೆ, ಖಾಸಗಿ ಸಂಸ್ಥೆಗಳಿಗೂ ಹಡಗುಗಳನ್ನು ನಿರ್ಮಿಸಿಕೊಡುತ್ತಿದೆ. ಸಂಸ್ಥೆಯ ಪ್ರಧಾನ ಕಚೇರಿ ಕೇರಳದಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದ ಸವಾರ – Kannada News | Viral Video Shows Biker Opening Moving Bus Doors, Lands in Police Custody

ನವದೆಹಲಿ, ಫೆಬ್ರವರಿ 18: ಯುವಕನೊಬ್ಬ ಬೈಕ್​​ನಲ್ಲಿ ಹೋಗುತ್ತಾ ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆರೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ದೆಹಲಿಯಲ್ಲಿ ನಡೆದಿದೆ. ರೀಲ್ಸ್​ಗಾಗಿ ಅಪಾಯಕಾರಿ ಸಾಹಸ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಬಸ್ ಚಲಿಸುತ್ತಿರುತ್ತದೆ ಆಗ ಬಲಗಡೆಯಿಂದ ಬಂದ ಬೈಕ್ ಸವಾರ ಚಾಲಕ ಕುಳಿತಿರುವಲ್ಲಿ ಇರುವ ಬಾಗಿಲನ್ನು ಅಚಾನಕ್ಕಾಗಿ ತೆರೆಯುತ್ತಾನೆ.

ಕೂಡಲೇ ಚಾಲಕ ಬಾಗಿಲು ಹಾಕಿಕೊಳ್ಳುತ್ತಾರೆ. ಒಂದೊಮ್ಮೆ ಡ್ರೈವರ್ ಪ್ಯಾನಿಕ್ ಆಗಿದ್ದರೆ ಅಪಘಾತವಾಗುವ ಸಂಭವವಿತ್ತು. ಬೈಕ್​​ಗೆ ನಂಬರ್ ಪ್ಲೇಟ್ ಕೂಡಾ ಇರಲಿಲ್ಲ. ಆರೋಪಿಯನ್ನು ಖಜುರಿ ಖಾಸ್ ನಿವಾಸಿ ತುಷಾರ್ ಪುನಿಯಾ ಎಂದು ಗುರುತಿಸಲಾಗಿದೆ. ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಒಂದು ಶತಕದೊಂದಿಗೆ 4 ವಿಶ್ವ ದಾಖಲೆ ಬರೆದ ಯುವರಾಜ್ – Kannada News | Yuvraj Samra’s All Records in T20 World Cup 2026

T20 World Cup 2026: ಟಿ20 ವಿಶ್ವಕಪ್​ನ 31ನೇ ಪಂದ್ಯದಲ್ಲಿ ಯುವರಾಜ್ ಸಮ್ರಾ (Yuvraj Samra) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕದೊಂದಿಗೆ ಯುವ ದಾಂಡಿಗ 4 ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

Source link

Horoscope Today 18 February​: ಇಂದು ಈ ರಾಶಿಯವರಿಗೆ ಮಾನಸಿಕ ಒತ್ತಡ ಜಾಸ್ತಿ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 18, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಪಾಡ್ಯ ತಿಥಿ, ಶತಭಿಷ ನಕ್ಷತ್ರ, ಭವ ಯೋಗ ಮತ್ತು ಶಿವಕರಣ ಇರತಕ್ಕಂತಹ ಈ ದಿನದ ರಾಹುಕಾಲ ಮಧ್ಯಾಹ್ನ 12:23 ರಿಂದ 2:01 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ ಸಂಕಲ್ಪ ಕಾಲವು ಸಂಜೆ 4:09 ರಿಂದ 5:27 ನಿಮಿಷದ ತನಕ ಇರುತ್ತದೆ. ಬುಧವಾರದ ಈ ಪರ್ವದಿನವು ಸಾಕ್ಷಾತ್ ವಿಷ್ಣು, ಕಾಲಭೈರವ ಮತ್ತು ವಿನಾಯಕನ ಲಹರಿಗಳಿಂದ ಕೂಡಿರುತ್ತದೆ.

ಇಂದು ರವಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಹೊನ್ನಗಿರಿ ಚೂರ್ಣೋತ್ಸವ, ಕಾಪು ಜನಾರ್ಧನ್ ರಥ, ಪಾರ್ಸಾರ್ಥಿ ಉತ್ಸವ ಮತ್ತು ಗೋಕರ್ಣದಲ್ಲಿ ರಥೋತ್ಸವಗಳು ನಡೆಯಲಿರುವ ಶುಭ ದಿನವಿದು. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಎಲ್ಲರಿಗೂ ಶುಭವಾಗಲಿ ಎಂದು ಗುರೂಜಿ ಹಾರೈಸಿದ್ದಾರೆ.

 

 

Source link