All posts by nagaraj11081993

ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆಯೇ ಕ್ಯಾನ್ಸರ್ ಅಪಾಯ ಹೆಚ್ಚಳಕ್ಕೆ ಕಾರಣ; ತಜ್ಞರಿಂದ ಎಚ್ಚರಿಕೆ – Kannada News | Signs of Cancer: Body Symptoms That Need Medical Attention

Signs of Cancer: Body Symptoms That Need Medical AttentionImage Credit source: Getty Images

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ (Cancer) ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ವೈದ್ಯರ ಪ್ರಕಾರ, ಜನರ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದೇ ಈ ರೀತಿಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ಧೂಮಪಾನ ಮತ್ತು ನಿದ್ರೆ ಕೊರತೆ ಪ್ರಮುಖ ಕಾರಣಗಳಾಗಿವೆ. ಅದಲ್ಲದೆ ತಂಬಾಕು ಮತ್ತು ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಇದರಿಂದ ಬಾಯಿ, ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಇದಲ್ಲದೆ, ಪ್ಯಾಸಿವ್ ಸ್ಮೋಕಿಂಗ್‌ ಮಾಡುವವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ದಿನನಿತ್ಯದ ಯಾವ ಅಭ್ಯಾಸಗಳು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇಂದಿನ ದಿನಗಳಲ್ಲಿ ಜನರು ಹೆಚ್ಚು ಪ್ರಾಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ ಇರುವ ಕೆಮಿಕಲ್ಸ್, ಪ್ರಿಸರ್ವೇಟಿವ್ಸ್ ಮತ್ತು ಹೆಚ್ಚಿನ ಸಕ್ಕರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೆಚ್ಚು ಎಣ್ಣೆ ಬಳಸಿ ತಯಾರಿಸಿದ ಅಥವಾ ಸುಟ್ಟ ಆಹಾರ ಪದಾರ್ಥಗಳ ಸೇವನೆಯೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೊರಗಿನಿಂದ ತರಿಸಿಕೊಳ್ಳುವ ಆಹಾರವನ್ನು ಬಿಸಿ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸುವುದು ಕೂಡ ಹಾನಿಕಾರಕ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಬಹುದು.

ನಿದ್ರೆ ಕೊರತೆ ಮತ್ತು ಒತ್ತಡದ ಪಾತ್ರ

ಸಾಕಷ್ಟು ನಿದ್ರೆ ಆಗದಿದ್ದರೆ ದೇಹದ ಸಹಜ ಸಮತೋಲನ ಹಾಳಾಗುತ್ತದೆ. ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಸ್ಕ್ರೀನ್ ಬಳಕೆ ಮತ್ತು ಅನಿಯಮಿತ ದಿನಚರಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಜೊತೆಗೆ ನಿರಂತರ ಒತ್ತಡ ಮತ್ತು ವ್ಯಾಯಾಮದ ಕೊರತೆ ಕೂಡ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು

ತಜ್ಞರ ಪ್ರಕಾರ, ದೀರ್ಘಕಾಲದ ದೌರ್ಬಲ್ಯ, ದೇಹದಲ್ಲಿ ಅನಿರೀಕ್ಷಿತವಾಗಿ ತೂಕ ಇಳಿಕೆಯಾಗುವುದು, ಯಾವುದೇ ಭಾಗದಲ್ಲಿ ಗುಡ್ಡೆ ಕಾಣಿಸಿಕೊಳ್ಳುವುದು ಅಥವಾ ನಿರಂತರ ನೋವು ಇರುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇವು ಕಾಣಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಜೊತೆಗೆ ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸಮಯಕ್ಕೆ ತಕ್ಕ ಪರೀಕ್ಷೆ ಮತ್ತು ವೈದ್ಯರ ಸಲಹೆ ಪಡೆಯುವುದು ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ? ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್ ಸುಮೈರಾ ಖಾನ್ – Kannada News | Tv9 exclusive ground report from iran Reporter sumaira khan in Tehran amid War

ಟೆಹ್ರಾನ್, ಮೇ 1: ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾನ್​ನ ಟೆಹ್ರಾನ್‌ನಲ್ಲಿದ್ದಾರೆ. ಅಲ್ಲಿಂದ ನೆಲದ ವರದಿಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಟಿವಿ9 ತಂಡವು ಬಾಗ್ದಾದ್ ಮೂಲಕ ಬಹಳ ದೂರ ಪ್ರಯಾಣಿಸಿ ಮೆಹ್ರಾನ್ ಗಡಿಯನ್ನು ದಾಟಿ ರಸ್ತೆಯ ಮೂಲಕ ಟೆಹ್ರಾನ್ ತಲುಪಿತು. 40 ದಿನಗಳ ಸಂಘರ್ಷದ ನಡುವೆ ಇರಾನ್‌ನಲ್ಲಿನ (Iran War) ನೆಲದ ಪರಿಸ್ಥಿತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಹಳ ಹತ್ತಿರದಿಂದ ಮತ್ತು ಯುದ್ಧಭೂಮಿಯಿಂದಲೇ ತೋರಿಸಲಾಗುತ್ತಿದೆ.

ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದ್ದಾರೆ. ಸುಮೈರಾ ಪ್ರಕಾರ, ಇರಾನ್ ನೆಲದ ವಾಸ್ತವ ಈಗ ಸ್ಪಷ್ಟವಾಗಿದೆ. ಇಲ್ಲಿ ಎಲ್ಲವೂ ಸಾಮಾನ್ಯವೆಂದು ತೋರುತ್ತಿದೆ. ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡುಬಂದರೂ, ಅತಿ ಹೆಚ್ಚು ಕ್ಷಿಪಣಿ ದಾಳಿಗಳು ನಡೆದ ಪ್ರದೇಶ ಇದಾಗಿದೆ ಎಂದು ಸುಮೈರಾ ವಿವರಿಸಿದ್ದಾರೆ. ಮುಂಬರುವ ದಿನಗಳಲ್ಲಿಯೂ ಅವರು ಟೆಹ್ರಾನ್‌ನಿಂದ ನೇರ ವರದಿ ಮಾಡಲಿದ್ದಾರೆ.

ಏಪ್ರಿಲ್ 8ರಿಂದ ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಜಾರಿಯಲ್ಲಿದೆ. ಆದರೂ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಿರಂತರವಾಗಿ ಮಾತಿನ ಚಕಮಕಿ ನಡೆಯುತ್ತಿದೆ. ಅಗತ್ಯ ಬಂದರೆ ಯುದ್ಧ ಪುನರಾರಂಭವಾಗಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸಂಘರ್ಷದಲ್ಲಿ ಇದುವರೆಗೆ 250 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 1,700ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನ್​ನ ಯುದ್ಧಭೂಮಿಯಿಂದ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಟಿವಿ9 ಎಂಬುದು ವಿಶೇಷ. ಅದರಲ್ಲೂ ಓರ್ವ ಮಹಿಳಾ ರಿಪೋರ್ಟರ್ ಯುದ್ಧಪೀಡಿತ ಮುಸ್ಲಿಂ ದೇಶದಿಂದ ನೇರ ವರದಿ ಮಾಡುತ್ತಿರುವುದು ಇನ್ನೂ ವಿಶೇಷ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಂಕದಕಟ್ಟಿ ಮೃಗಾಲಯದಲ್ಲಿ ಕೂಲ್-ಕೂಲ್ ವಾತಾವರಣ ಸೃಷ್ಟಿ: ಬಿಸಿಲಿನಿಂದ ತತ್ತರಿಸಿದ ಪ್ರಾಣಿಗಳಿಗೆ ವಿಶೇಷ ನಿಗಾ – Kannada News | Gadag Zoo Fights Heatwave: Special Care for Animals in Scorching Summer

ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳ ಆರೋಗ್ಯದ ಮೇಲೆ ಹಗಲು-ರಾತ್ರಿ ಕಣ್ಗಾವಲು ಇರಿಸಲಾಗಿದ್ದು, ಸಿಬ್ಬಂದಿ ವಿಶೇಷ ನಿಗಾವಹಿಸಿದ್ದಾರೆ. ತಜ್ಞರ ಸಲಹೆ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Source link

RR vs DC: ಡೆಲ್ಲಿ ವಿರುದ್ಧ ನಡೆಯದ ರಾಜಸ್ಥಾನ್ ಆರಂಭಿಕರ ಅಬ್ಬರ – Kannada News | IPL 2026: Yashasvi Jaiswal, Vaibhav Sooryavanshi Fail as RR Openers Struggle vs DC in Match 43

ಐಪಿಎಲ್ 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಅದರಂತೆ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೇಲೆ ಎಂದಿನಂತೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ಇವರಿಬ್ಬರು ವಿಫಲರಾದರು.

ಈ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ರಾಜಸ್ಥಾನ್ ತಂಡಕ್ಕೆ ಭಾಗಶಃ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದೆ. ಇದರ ಪರಿಣಾಮವಾಗಿ ರಾಜಸ್ಥಾನ್ ಕೂಡ ಈ ಎಲ್ಲಾ ಭಾಗಶಃ ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಇವರಿಬ್ಬರು ಮಿಂಚಿದರೆ ರಾಜಸ್ಥಾನ್ ತಂಡಕ್ಕೆ ಗೆಲುವು ಖಚಿತವಂತ್ತಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರಿಗೆ ಒಂದಂಕಿ ದಾಟಿ ಹೋಗಲು ಸಾಧ್ಯವಾಗಲಿಲ್ಲ.

ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್, ಅನುಭವಿ ಮಿಚೆಲ್ ಸ್ಟಾರ್ಕ್​ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಬಾರಿಸಿದರು. ಆ ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತವನ್ನು ಸ್ಟಾರ್ಕ್​ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜೈಸ್ವಾಲ್, ಸ್ಟಾರ್ಕ್​ಗೆ ಕ್ಯಾಚ್ ನೀಡಿ ಔಟಾದರು.

ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ವೈಭವ್ ಸೂರ್ಯವಂಶಿ, ಕೈಲ್ ಜೇಮಿಸನ್ ಬೌಲ್ ಮಾಡಿದ ಎರಡನೇ ಎಸೆತವನ್ನು ಸೀದಾ ಬೌಂಡರಿಗಟ್ಟಿದರು. ಆದರೆ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅಂದರೆ ಇವರಿಬ್ಬರ ವಿಕೆಟ್​ ಕೇವಲ 12 ರನ್​ಗಳಿಗೆ ಪತನವಾಯಿತು. ಜೈಸ್ವಾಲ್ 6 ರನ್ ಬಾರಿಸಿ ಔಟಾದರೆ, ವೈಭವ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಹೇಗಿದೆ ನೋಡಿ – Kannada News | DCM dk shivakumar inaugurates double decker flyover between rv road and central silk board

ಬೆಂಗಳೂರು, (ಮೇ 01): ಬೆಂಗಳೂರಿನಲ್ಲಿಂದು ಆರ್‌.ವಿ. ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಲ್ಲಿ (Bengaluru’s double-decker flyover) ವಾಹನ ಸಂಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿದರು.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಹಾಗೂ ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಪ್ರದೇಶಗಳಿಗೆ ಓಡಾಡಲು ಈ ಫ್ಲೈಓವರ್‌ ಅನುಕೂಲವಾಗಲಿದೆ. ಇನ್ನು ಬನಶಂಕರಿ ಜಂಕ್ಷನ್‌ನಲ್ಲಿ ಪಾದಚಾರಿಗಳ ಸೈವಾಕ್ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂದು ಈ ಸ್ಕೈವಾಕ್‌ ನಿರ್ಮಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನಿಂದ ನೈಜ ಚಿತ್ರಣ ನೀಡಿದ ವರದಿಗಾರ್ತಿ – Kannada News | TV9 becomes first Indian channel to reach Iran for Ground Reporting from Tehran

ಟೆಹ್ರಾನ್, ಮೇ 1: ಇರಾನ್​ನಲ್ಲಿ ಇನ್ನೂ ಯುದ್ಧದ ಭೀತಿ ಕಡಿಮೆಯಾಗಿಲ್ಲ. ಇರಾನ್​ನಲ್ಲಿನ (Iran War) ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಲು ಟಿವಿ9 ತಂಡ ಟೆಹ್ರಾನ್​ಗೆ ತೆರಳಿದೆ. ಈ ಮೂಲಕ ಇರಾನ್​ನಿಂದ ನೇರ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಎಂಬ ಹೆಗ್ಗಳಿಕೆಗೆ ಟಿವಿ9 ಪಾತ್ರವಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್​ನಿಂದಲೇ ವರದಿ ಮಾಡುತ್ತಿದ್ದಾರೆ. ರಸ್ತೆ ಮತ್ತು ಕಾಲ್ನಡಿಗೆಯ ಮೂಲಕ ಪ್ರಯಾಣಿಸಿದ ಅವರು ಫ್ರೀಡಂ ಸ್ಕ್ವೇರ್ ಬಳಿಯಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ.

ಟಿವಿ9 ಭಾರತ್‌ವರ್ಷ್ ವರದಿಗಾರ್ತಿ ಸುಮೈರಾ ಖಾನ್ ಟೆಹ್ರಾನ್‌ನಿಂದ ವರದಿ ಮಾಡುತ್ತಿದ್ದಾರೆ. ಸುಮೈರಾ ಫ್ರೀಡಂ ಸ್ಕ್ವೇರ್‌ನಿಂದ ಟೆಹ್ರಾನ್‌ನಲ್ಲಿನ ವಿನಾಶ ಮತ್ತು ನೆಲದ ಪರಿಸ್ಥಿತಿಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಟೆಹ್ರಾನ್‌ಗೆ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಮೊದಲು ವಿಮಾನದ ಮೂಲಕ ಇರಾಕ್‌ಗೆ ಪ್ರಯಾಣ ಬೆಳೆಸಿದರು. ನಂತರ ಬಾಗ್ದಾದ್‌ನಿಂದ ಸುದೀರ್ಘವಾದ ಕಾರು ಪ್ರಯಾಣ ಮಾಡಿದರು. ನಂತರ ಸ್ವಲ್ಪ ದೂರ ನಡೆಯಬೇಕಾಯಿತು. ಅನೇಕ ತೊಂದರೆಗಳು ಮತ್ತು ಸವಾಲುಗಳ ಹೊರತಾಗಿಯೂ, ಸುಮೈರಾ ಖಾನ್ ಟೆಹ್ರಾನ್ ತಲುಪಿದರು.

ಸುಮೈರಾ ಅವರು ಫ್ರೀಡಂ ಸ್ಕ್ವೇರ್ ಹಲವಾರು ದಾಳಿಗಳನ್ನು ಕಂಡಿದ್ದರೂ ತಕ್ಷಣ ಅದನ್ನು ಇರಾನ್ ಮರು ನಿರ್ಮಿಸಿದೆ. ದಾಳಿಗಳು ಹೋಟೆಲ್‌ಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳನ್ನು ಸಹ ಹಾನಿಗೊಳಿಸಿವೆ. ಈಗಾಗಲೇ ಅವುಗಳನ್ನು ದುರಸ್ತಿ ಮಾಡಲಾಗಿದೆ. ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದರು. ಸುಮೈರಾ ಇಂಕಿಲಾಬ್ ಬೀದಿಯಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ಫೋಟೋವನ್ನು ಕೂಡ ತೋರಿಸಿದರು. ಈ ಫೋಟೋ ಇರಾನಿನ ಜನರ ಚೈತನ್ಯವನ್ನು ಪ್ರತಿನಿಧಿಸುವುದರಿಂದ ಬಹಳ ಮುಖ್ಯವಾಗಿದೆ. ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಬಲವಾಗಿ ನಿಂತಿದೆ ಎಂದು ಈ ಚಿತ್ರ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಬಿಗ್ ಬಾಸ್ ಹಂಸಾ – Kannada News | Bigg Boss Kannada fame Hamsa talks about Vasudeva Kutumba Serial producer payment due

‘ವಸುದೇವ ಕುಟುಂಬ’ (Vasudeva Kutumba) ಧಾರಾವಾಹಿ ತಂಡದ ಕಿರಿಕ್ ಬೀದಿಗೆ ಬಂದಿದೆ. ನಿರ್ಮಾಪಕ ಅನಿಲ್ ವಿರುದ್ಧ ಕಲಾವಿದರು ಮತ್ತು ತಂತ್ರಜ್ಞರು ತಿರುಗಿ ಬಿದ್ದಿದ್ದಾರೆ. ತಿಂಗಳುಗಳಿಂದ ಕೆಲಸ ಮಾಡಿದ್ದಕ್ಕೆ ಸಂಬಳ ನೀಡಿಲ್ಲ ಎಂದು ಆರೋಪಿಸಲಾಗಿದೆ. ‘ಬಿಗ್ ಬಾಸ್ ಕನ್ನಡ’ ಖ್ಯಾತಿಯ ನಟಿ ಹಂಸಾ ಅವರು ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾನು ಆ ಧಾರಾವಾಹಿಯಿಂದ ಹೊರಗೆ ಬಂದೆ. ನಮಗೆ ಗೌರವ ಇಲ್ಲದ ಜಾಗದಲ್ಲಿ ನಾನು ಕೆಲಸ ಮಾಡಲ್ಲ. ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ನಾವು ಬಿಟ್ಟು ಬಂದಿದ್ದೇವೆ. ಅನಿಲ್ ಟಿಆರ್​ಪಿ ಫ್ರಾಡ್ ಮಾಡಿದ್ದಾನೆ. ಇಂಥ ಒಬ್ಬ ನಿರ್ಮಾಪಕನಿಂದ ಇನ್ನುಳಿದವರಿಗೂ ಕೆಟ್ಟ ಹೆಸರು. ನನಗೆ 3 ಲಕ್ಷ ರೂಪಾಯಿ ಬರಬೇಕಿದೆ. ನನಗೆ ಆ ಹಣ ಬರದಿದ್ದರೂ ಪರವಾಗಿಲ್ಲ. ಅವನ ಮಾನ ಮರ್ಯಾದೆ ತೆಗೆಯದೇ ಬಿಡಲ್ಲ. ಇನ್ನೊಮ್ಮೆ ಅವನು ಯಾರಿಗೂ ಮೋಸ ಮಾಡಬಾರದು. 10 ವರ್ಷ ಆದರೂ ಪರವಾಗಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದು ಹಂಸಾ (Hamsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಆರ್​​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಲಕ್ನೋ ತಂಡಕ್ಕೆ ಡೇಂಜರಸ್ ಬ್ಯಾಟರ್​​ ಆಗಮನ – Kannada News | IPL 2026: Josh Inglis Joins LSG! Can He Revive Lucknow’s Poor Performance?

ವಾಸ್ತವವಾಗಿ ಆಸ್ಟ್ರೇಲಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಾಸ್ತವವಾಗಿ ಇಂಗ್ಲಿಸ್ ಐಪಿಎಲ್ ಹರಾಜಿಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಹೀಗಾಗಿ ಅವರು ಐಪಿಎಲ್​ಗೆ ತಮ್ಮ ಲಭ್ಯತೆಯ ಬಗ್ಗೆ ಮೊದಲೇ ತಿಳಿಸಿದ್ದರು. ಅದರಂತೆ ಇಂಗ್ಲಿಸ್ ಈಗ ಲಕ್ನೋ ತಂಡವನ್ನು ಸೇರಿಕೊಂಡಿದ್ದು, ಮೇ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

Source link

ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ, ಹೇಗಿದೆ ನೋಡಿ – Kannada News | Oldest Vithal temple appearing In belagavi Hidkal Dam after Water Empty for Summer

ಬೆಳಗಾವಿ, (ಮೇ 01): ಒಂದೆಡೆ ಬೇಸಿಗೆ ಬಿಸಿಲು ಜನರ ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರದ ಸ್ಥಿತಿ ಎದುರಾಗಿದೆ. ಹೌದು…ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರ ಬಳಿ ಇರುವ 51ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯ (Hidkal Dam) ಬಹುತೇಕ ಖಾಲಿಯಾಗಿದೆ. ಇದರ ಪರಿಣಾಮ ಡ್ಯಾಂ ಹಿನ್ನೀರಿನಲ್ಲಿ ಮುಳುಗಿದ್ದ ದೇವಸ್ಥಾನ ಗೋಚರವಾಗಿದೆ. ವಿಠ್ಠಲ ದೇವಸ್ಥಾನ 1978ರಿಂದ ನೀರಲ್ಲೇ ಮುಳುಗಿ ಹೋಗಿದೆ. ಆದ್ರೆ, 2022ರಲ್ಲಿ ಜಲಾಶಯದಲ್ಲಿ ನೀರು ಖಾಲಿಯಾಗಿದ್ದಾಗ ವಿಠ್ಠಲ ಭಕ್ತರಿಗೆ ದರ್ಶನ ನೀಡಿದ್ದ. ಗುತ್ತಿ ಮಣ್ಣನಿಂದ ನಿರ್ಮಿಸಿರುವ ದೇವರ ಮೂರ್ತಿ ನಿರಂತರವಾಗಿ ನೀರಲ್ಲಿದ್ದರೂ ಸಹ ಎನೂ ಆಗಿಲ್ಲ. ಈ ಬಾರಿ ಸಹ ಅತೀ ಹೆಚ್ಚು ಬಿಸಿಲು ಹಿನ್ನೆಲೆಯಲ್ಲಿ ಡ್ಯಾಂನಲ್ಲಿ ನೀರು ಖಾಲಿಯಾಗಿದ್ದು, ಸಂಪೂರ್ಣವಾಗಿ ದೇವಸ್ಥಾನ ಓಪನ್ ಆಗುವ ಸಾಧ್ಯತೆಗಳಿವೆ. ಈ ಕುರಿತು ನಮ್ಮ ಪ್ರತಿನಿಧಿ ಸ್ಥಳದಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: 42 ಪಂದ್ಯಗಳ ನಂತರ ಸನ್‌ರೈಸರ್ಸ್ ತಂಡಕ್ಕೆ ಅಂಬ್ರಿಶ್ ಆಗಮನ

Source link