Category Archives: Blog

Your blog category

TV9 Kannada Live: ರಾಜ್ಯದಲ್ಲಿ ಮತ್ತೆ ರೆಸಾರ್ಟ್​​ ರಾಜಕೀಯ, ಕೈ ಶಾಸಕರಿಂದು ಬಿಡದಿಗೆ ಶಿಫ್ಟ್​​ – Kannada News | TV9 Kannada News Live 16 June 2026 Karnataka Politics, Weather, Politics, MLC Polls Latest Updates

ಮತ್ತೆ ಶುರುವಾದ ರೆಸಾರ್ಟ್​​ ರಾಜಕೀಯImage Credit source: Tv9 Kannada

ರಾಜ್ಯದ ವಿವಿಧೆಡೆ ಅಧಿಕಾರಿಗಳಿಗೆ ಲೋಕಾಯುಕ್ತ ಭರ್ಜರಿ ಶಾಕ್​​ ಕೊಟ್ಟಿದ್ದು ಕಲಬುರಗಿ, ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ದಾಳಿ ನಡೆದಿದೆ. ಮನೆ ಮತ್ತು ಕಚೇರಿಗಳು ಸೇರಿದಂತೆ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ತಲಾಶ್​​ ನಡೆಸಿದ್ದಾರೆ. ಮತ್ತೊಂದೆಡೆ ವಿಧಾನ ಪರಿಷತ್​​ ಚುನಾವಣಾ ಕಣ ರಾಜ್ಯದಲ್ಲಿ ರಂಗೇರಿದ್ದು, ರೆಸಾರ್ಟ್​​ ಪಾಲಿಟಿಕ್ಸ್​​ ಶುರುವಾಗಿದೆ. ಇಂದು ‘ಕೈ’ ಶಾಸಕರಿಂದ ರೆಸಾರ್ಟ್​ ವಾಸ್ತವ್ಯ ಶುರುವಾಗಿದ್ದರೆ​, ನಾಳೆ JDSನವರ ಸರದಿ ನಿಗದಿಯಾಗಿದೆ. ಐದಾರು ಜೆಡಿಎಸ್​​ ಶಾಸಕರನ್ನು ಸೆಳೆಯಲು ಕೈ ಪಾಳಯದಲ್ಲಿ ಭಾರಿ ಕಸರತ್ತು ನಡೆಯುತ್ತಿದ್ದರೆ, ಕಾಂಗ್ರೆಸ್ ತಂತ್ರಕ್ಕೆ ಕೌಂಟರ್ ಕೊಡಲು JDS ನಾಯಕರ ಪ್ರತಿತಂತ್ರ ರೂಪಿಸಿರೋದು ಕುತೂಹಲ ಹೆಚ್ಚಿಸಿದೆ. ರಾಜ್ಯ, ದೇಶ, ಸಿನಿಮಾ, ಕ್ರೀಡೆ ಸೇರಿ ಇಂದಿನ ಪ್ರಮುಖ ಸುದ್ದಿಗಳ ಹೈಲೆಟ್ಸ್​​ ಇಲ್ಲಿದೆ.

Source link

ಕಾಕ್ರೋಚ್ ಬೆಂಬಲಿಸಿದ ಪ್ರಕಾಶ್ ರಾಜ್​​ಗೆ ಪವನ್ ಕಲ್ಯಾಣ್ ಕೌಂಟರ್ – Kannada News | Pawan Kalyan Slams ‘Cockroach Janata Party,’ Calls Supporters Divisive and Narrow Minded

ಇತ್ತೀಚೆಗೆ ಆರಂಭ ಆಗಿರೋ ‘ಕಾಕ್ರೋಚ್ ಜನತಾ ಪಾರ್ಟಿ’ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಿಂದಲೂ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಕೆಲವರು ಇದನ್ನು ಸಂಚು ಎಂದು ಕರೆದಿದ್ದಾರೆ. ಈಗ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಈ ಚಳವಳಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂಘಟನೆ ಮತ್ತು ಇದನ್ನು ಬೆಂಬಲಿಸುವವರು ದೇಶವನ್ನು ಒಡೆಯುವ ಮತ್ತು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು  (Prakash Raj) ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಬೆಂಬಲಿಸಿದ್ದರು. ಈ ಬೆನ್ನಲ್ಲೇ ಪವನ್ ಕಲ್ಯಾಣ್ ಈ ಹೇಳಿಕೆ ನೀಡಿರುವುದು ವಿಶೇಷ.

ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ (JSP) ಸಭೆಯಲ್ಲಿ ಮಾತನಾಡಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ‘ಇತ್ತೀಚೆಗೆ ನೀವು ಈ ಜಿರಳೆಗಳ (ಕಾಕ್ರೋಚ್) ಬಗ್ಗೆ ಕೇಳಿರಬಹುದು. ಒಂದು ಸಣ್ಣ ಇರುವೆ ಕೂಡ ದೊಡ್ಡ ಹಾವನ್ನು ಕೊಲ್ಲಬಲ್ಲದು’ ಎಂದಿದ್ದಾರೆ.

ಬೆಂಬಲಿಗರನ್ನು ‘ಸಂಕುಚಿತ ಮನಸ್ಸಿನವರು’ ಎಂದಿದ್ದೇಕೆ?

‘ದೇಶದ ರಾಜಕಾರಣದ ಆಳ ಗೊತ್ತಿಲ್ಲದ ಕೆಲವು ಸಂಕುಚಿತ ಮನಸ್ಸಿನ ಜನರು, ದೇಶವನ್ನು ಒಡೆಯುವ ಆಲೋಚನೆಗಳ ಮೂಲಕ ಭಾರತದ ಸಮಗ್ರತೆಯನ್ನು ಹಾಳು ಮಾಡಲು ನೋಡುತ್ತಿದ್ದಾರೆ. ನಾವು ಇಂತಹ ಆಲೋಚನೆಗಳಿಗೆ ಬಲಿಯಾಗಬಾರದು. ಸಣ್ಣ ಬುದ್ಧಿಯ ಕೋಟ್ಯಂತರ ಜನರು ಒಂದಾದರೆ ಅದರ ಪ್ರಭಾವ ದೊಡ್ಡದಾಗಿರುತ್ತದೆ, ಅದು ಒಳ್ಳೆಯದಕ್ಕಾದರೂ ಆಗಬಹುದು ಅಥವಾ ಕೆಟ್ಟದ್ದಕ್ಕಾದರೂ ಆಗಬಹುದು. ಹಾಗಾಗಿ ನಾವು ಇದರ ವಿರುದ್ಧ ಹೋರಾಡಬೇಕೇ ಹೊರತು, ಇದರಲ್ಲಿ ಭಾಗಿಯಾಗಬಾರದು’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಇದನ್ನೂ ಓದಿ: ‘ಗಾಳಿ ಸುದ್ದಿ ನಂಬಬೇಡಿ’; ಧರ್ಮಸ್ಥಳ ಪ್ರಕರಣದ ಆರೋಪಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ಇದಕ್ಕೂ ಮುನ್ನ ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ್ದ ಅವರು, ‘ಅವರಿಗೆ ಯಾಕೆ ಇಷ್ಟೊಂದು ಕೋಪ ಇದೆಯೋ ಗೊತ್ತಿಲ್ಲ. ಜಿರಳೆಗಳು ಯಾವಾಗಲೂ ಚರಂಡಿಯಲ್ಲೇ ಇರುತ್ತವೆ. ಅಂದರೆ ಬಹುಶಃ ಅವರ ನೋವು ಏನೆಂದು ನನಗೆ ಅರ್ಥವಾಗುತ್ತದೆ’ಎಂದು ಲೇವಡಿ ಮಾಡಿದ್ದರು.

ಪ್ರಕಾಶ್ ರಾಜ್ ಹೇಳಿದ್ದೇನು?

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರಕಾಶ್ ರಾಜ್, ‘ಪ್ರತಿಭಟನೆ ಮಾಡುವವರನ್ನು ನೀವು ಪಾಕಿಸ್ತಾನಿಗಳು ಎಂದರೂ ನಮಗೆ ಭಯವಿಲ್ಲ, ಭಯೋತ್ಪಾದಕರು ಎಂದರೂ ಹೆದರುವುದಿಲ್ಲ, ಜಿರಳೆಗಳು (ಕಾಕ್ರೋಚ್) ಎಂದು ಕರೆದರೂ ನಾವು ಭಯ ವಿಚಲಿರತಾಗುವುದಿಲ್ಲ. ಜನರಿಂದ ಆಯ್ಕೆಯಾದ ನಾಯಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡಬೇಕು. ನೀವು ರಾಜಕೀಯ ಮಾಡುವುದನ್ನು ಬಿಟ್ಟು ನಮಗೆ ಕೆಲಸ ಕೊಡಿ. ಈ ದೇಶದ ಯುವಕರು ತಮ್ಮ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದ್ದಾರೆ’ ಎಂದು ಪ್ರಕಾಶ್ ರಾಜ್ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..! – Kannada News | Cape Verde Stuns Spain In Fifa World Cup 2026

Fifa World Cup 2026: ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತಿನ ಅತ್ಯಂತ ಬಲಿಷ್ಠ ಪಡೆ. ಮುಂಚೂಣಿಯಲ್ಲಿ ಲಮಿನ್ ಯಮಾಲ್, ಮೈಕೆಲ್ ಒಯರ್ಝಾಬಲ್, ಫೆರಾನ್ ಟೊರೆಸ್ ಮತ್ತು ಡ್ಯಾನಿ ಓಲ್ಮೊ ಅವರಂತಹ ಆಕ್ರಮಣಕಾರಿ ಆಟಗಾರರಿದ್ದರೆ, ಮಿಡ್‌ಫೀಲ್ಡ್​ನಲ್ಲಿ ರೋಡ್ರಿ, ಪೆಡ್ರಿ, ಗಾವಿ ಹಾಗೂ ಫ್ಯಾಬಿಯನ್ ರೂಯಿಝ್ ಅವರಂತಹ ಚಾಣಾಕ್ಷ ತಂತ್ರಜ್ಞರಿದ್ದಾರೆ. ಇಂತಹದೊಂದು ವಿಶ್ವದರ್ಜೆಯ ಬಳಗ ಕಣಕ್ಕಿಳಿದರೆ ಗೆಲುವು ಯಾರದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ! ಆದರೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದಿದ್ದೇ ಬೇರೆ.

ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ಅನಿರೀಕ್ಷಿತ ಪಂದ್ಯವೊಂದಕ್ಕೆ ಜೂನ್ 15 ಸಾಕ್ಷಿಯಾಗಿದೆ. ಹಾಲಿ ಯುರೋಪಿಯನ್ ಚಾಂಪಿಯನ್ಸ್ ಬಲಿಷ್ಠ ಸ್ಪೇನ್ ವಿರುದ್ಧ ಮೊದಲ ಬಾರಿಗೆ ವಿಶ್ವಕಪ್‌ ಆಡುತ್ತಿರುವ ಪುಟ್ಟ ರಾಷ್ಟ್ರ ಕೇಪ್ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿ ಇಡೀ ವಿಶ್ವವೇ ತಮ್ಮತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.

ಪಂದ್ಯದ ಆರಂಭದಿಂದಲೇ ಸ್ಪೇನ್ ತಂಡ ಪೂರ್ಣ ಹಿಡಿತ ಸಾಧಿಸಿತ್ತು. ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಸ್ಪೇನ್, ಕೇಪ್ ವರ್ಡೆ ಗೋಲು ಪೆಟ್ಟಿಗೆಯ ಮೇಲೆ ಸರಣಿ ದಾಳಿ ನಡೆಸಿತು. ಆದರೆ ಕೇಪ್ ವರ್ಡೆ ತಂಡದ 40 ವರ್ಷದ ಅನುಭವಿ ಗೋಲ್‌ಕೀಪರ್ ‘ವೊಝಿನ್ಹಾ’ ಸ್ಪೇನ್ ಪಾಲಿಗೆ ಬಂಡೆಯಂತೆ ನಿಂತರು. ಪಂದ್ಯದುದ್ದಕ್ಕೂ ಸ್ಪೇನ್ ಹೊಡೆದ 8 ಅತ್ಯಂತ ಅಪಾಯಕಾರಿ ಶಾಟ್‌ಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಅವರು ಪಂದ್ಯದ ಹೀರೊ ಆಗಿ ಹೊರಹೊಮ್ಮಿದರು.

ಕೈಕೊಟ್ಟ ಅದೃಷ್ಟ, ಮಿಸ್ ಆದ ಅವಕಾಶಗಳು:

ಮೊದಲಾರ್ಧದಲ್ಲಿ ಸ್ಪೇನ್ ತಂಡದ ಫೆರಾನ್ ಟೊರೆಸ್ ಹೊಡೆದ ಪ್ರಬಲ ಶಾಟ್ ಗೋಲ್ ಪೋಸ್ಟ್‌ಗೆ ಬಡಿದು ವಾಪಸ್ಸಾಯಿತು. ಅದರ ಬೆನ್ನಲ್ಲೇ ಮೈಕೆಲ್ ಒಯರ್ಝಾಬಲ್ ಹೆಡರ್ ಮೂಲಕ ಗೋಲು ಗಳಿಸಲು ಯತ್ನಿಸಿದರಾದರೂ ವೊಝಿನ್ಹಾ ಅದನ್ನು ತಡೆದರು. ಇನ್ನು ಮೊದಲಾರ್ಧ ಮುಗಿಯುವ ಕೆಲವೇ ಕ್ಷಣಗಳ ಮುನ್ನ ಐಮೆರಿಕ್ ಲ್ಯಾಪೋರ್ಟೆ ಅವರ ತಲೆಯ ಮೂಲಕ ಬಂದ ಚೆಂಡನ್ನು ವೊಝಿನ್ಹಾ ಅದ್ಭುತವಾಗಿ ಡೈವ್ ಮಾಡುವ ಮೂಲಕ ರಕ್ಷಿಸಿದರು.

ವರ್ಕ್ ಆಗದ ಯಮಾಲ್ ಮ್ಯಾಜಿಕ್:

ಪಂದ್ಯದ 71ನೇ ನಿಮಿಷದಲ್ಲಿ ಸ್ಪೇನ್ ತನ್ನ ಸ್ಟಾರ್ ಆಟಗಾರ ಲಮಿನ್ ಯಮಾಲ್ ಅವರನ್ನು ಮೈದಾನಕ್ಕಿಳಿಸಿತು. ಗಾಯದಿಂದ ಚೇತರಿಸಿಕೊಂಡು ಬಂದ ಯಮಾಲ್ ಕೆಲವೇ ನಿಮಿಷಗಳಲ್ಲಿ 5 ಡ್ರಿಬಲ್ಸ್ ಮಾಡಿ ಕೇಪ್ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಯತ್ನಿಸಿದರು. ಆದರೆ ಕೇಪ್ ವರ್ಡೆ ಡಿಫೆಂಡರ್‌ಗಳು ಯಮಾಲ್ ಅವರಿಗೆ ಯಾವುದೇ ಅವಕಾಶ ನೀಡದೆ ಕಮಾಲ್ ಮಾಡಿದರು.

ಕೊನೆಯ ಕ್ಷಣದ ರೋಮಾಂಚನ:

ಈ ಪಂದ್ಯ ಮುಕ್ತಾಯಗೊಳ್ಳಲು ಕೆಲವೇ ನಿಮಿಷಗಳಿರುವಾಗ ಒಯರ್ಝಾಬಲ್ ಹೊಡೆದ ಚೆಂಡು ಕೇಪ್ ವರ್ಡೆಯ ಪಿಕೊ ಲೋಪೆಸ್ ತಮ್ಮ ದೇಹವನ್ನು ಅಡ್ಡವಿಟ್ಟು ತಡೆದರು. ಇಂಜುರಿ ಟೈಮ್‌ನಲ್ಲಿ ಒಯರ್ಝಾಬಲ್ ಅವರ ಕೊನೆಯ ಹೆಡರ್ ಶಾಟ್ ಗೋಲ್ ಪೋಸ್ಟ್‌ನ ಪಕ್ಕದಿಂದ ಹೊರಹೋಗುತ್ತಿದ್ದಂತೆ, ಕೇಪ್ ವರ್ಡೆ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು.

ಪಂದ್ಯದ ಪ್ರಮುಖ ಮುಖ್ಯಾಂಶಗಳು:

  • ಸ್ಪೇನ್ ಸಂಪೂರ್ಣ ನಿಯಂತ್ರಣ: ಪಂದ್ಯದುದ್ದಕ್ಕೂ ಸ್ಪೇನ್ ತಂಡ ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ನೂರಾರು ನಿಖರ ಪಾಸ್‌ಗಳ ಮೂಲಕ ಕೇಪ್ ವರ್ಡೆ ತಂಡದ ಮೇಲೆ ನಿರಂತರ ಒತ್ತಡ ಹೇರಿತು. ಕೇಪ್ ವರ್ಡೆ ಕೇವಲ ಶೇ. 38 ರಷ್ಟು ನಿಯಂತ್ರಣ ಹೊಂದಿದ್ದರೂ ಅತ್ಯಂತ ಶಿಸ್ತಿನ ರಕ್ಷಣಾತ್ಮಕ ಆಟ ಆಡಿತು.
  • ಗೋಲು ಶಾಟ್‌ಗಳ ಸುರಿಮಳೆ: ಸ್ಪೇನ್ ಒಟ್ಟು 23 ಬಾರಿ ಗೋಲು ಗಳಿಸಲು ಯತ್ನಿಸಿತು. ಇದರಲ್ಲಿ 8 ಶಾಟ್‌ಗಳು ನೇರವಾಗಿ ಗೋಲು ಪೆಟ್ಟಿಗೆಯತ್ತ ನುಗ್ಗಿದ್ದವು. ಆದರೆ ಕೇಪ್ ವರ್ಡೆ ಕೇವಲ 6 ಯತ್ನಗಳನ್ನು ನಡೆಸಿ, ಅದರಲ್ಲಿ 1 ಶಾಟ್ ಮಾತ್ರ ಆನ್ ಟಾರ್ಗೆಟ್ ಇಟ್ಟಿತ್ತು.
  • ವೊಝಿನ್ಹಾ ಅದ್ಭುತ ಸೇವ್ಸ್: ಕೇಪ್ ವರ್ಡೆಯ 40 ವರ್ಷದ ಗೋಲ್‌ಕೀಪರ್ ವೊಝಿನ್ಹಾ, ಸ್ಪೇನ್ ಗೋಲಾಗಬಹುದಾಗಿದ್ದ ಎಲ್ಲಾ 8 ಆನ್ ಟಾರ್ಗೆಟ್ ಶಾಟ್‌ಗಳನ್ನು ಅದ್ಭುತವಾಗಿ ತಡೆದು ಪಂದ್ಯ ಡ್ರಾ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
  • ಕಾರ್ನರ್ ಕಿಕ್ಸ್ ಅವಕಾಶಗಳು: ಸ್ಪೇನ್ ತಂಡಕ್ಕೆ ಪಂದ್ಯದಲ್ಲಿ ಬರೋಬ್ಬರಿ 11 ಕಾರ್ನರ್ ಕಿಕ್ ಅವಕಾಶಗಳು ಸಿಕ್ಕವು. ಆದರೆ ಕೇಪ್ ವರ್ಡೆಯ ಬಲಿಷ್ಠ ಡಿಫೆಂಡರ್‌ಗಳು ಈ ಯಾವುದೇ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಲು ಬಿಡಲಿಲ್ಲ. ಕೇಪ್ ವರ್ಡೆಗೆ ಸಿಕ್ಕಿದ್ದು ಕೇವಲ 1 ಕಾರ್ನರ್ ಕಿಕ್ ಮಾತ್ರ.
  • ಶಿಸ್ತಿನ ಆಟ: ಪಂದ್ಯದಲ್ಲಿ ಸ್ಪೇನ್ ತಂಡ 10 ಫೌಲ್‌ಗಳನ್ನು ಮಾಡಿದರೆ, ಕೇಪ್ ವರ್ಡೆ ಕೇವಲ 1 ಫೌಲ್ ಮಾಡುವ ಮೂಲಕ ಅತ್ಯಂತ ಕ್ಲೀನ್ ಮತ್ತು ಶಿಸ್ತಿನ ಡಿಫೆನ್ಸ್ ಪ್ರದರ್ಶಿಸಿತು.

ಈ ಮೂಲಕ ಕೇಪ್ ವರ್ಡೆ ತಂಡವು ಬಲಿಷ್ಠ ಸ್ಪೇನ್ ವಿರುದ್ಧ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಡ್ರಾನೊಂದಿಗೆ ಕೇಪ್ ವರ್ಡೆ ತಂಡವು ಒಂದು ಅಂಕ ಪಡೆದುಕೊಂಡಿದೆ.

ಇದನ್ನೂ ಓದಿ: ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!

ವಿಶ್ವದ ನಂ.1 ತಂಡಗಳಲ್ಲೊಂದಾದ ಸ್ಪೇನ್ ವಿರುದ್ಧ ಪಡೆದ ಈ 1 ಪಾಯಿಂಟ್, ಕೇಪ್ ವರ್ಡೆ ಫುಟ್‌ಬಾಲ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗಿದೆ.

Published On – 8:37 am, Tue, 16 June 26

Source link

ರನ್​ ವೇಯಿಂದ ಹಾರಿದ ಕೆಲವೇ ಕ್ಷಣದಲ್ಲಿ ಯುಎಸ್ ಬಾಂಬರ್ ವಿಮಾನ ಪತನ: ಎಂಟು ಮಂದಿ ಸಾವು – Kannada News | Deadly B 52 Crash at California Air Base Claims Eight Lives, Spotlight Turns to Iconic Bomber

ಕ್ಯಾಲಿಫೋರ್ನಿಯಾ, ಜೂನ್ 16: ಅಮೆರಿಕದ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಭೀಕರ ವಿಮಾನ ಅಪಘಾತ(Plane Crash)ವೊಂದು ಸಂಭವಿಸಿದೆ. ಯುಎಸ್ ವಾಯುಪಡೆಗೆ ಸೇರಿದ ಪ್ರಸಿದ್ಧ ‘ಬಿ-52 ಸ್ಟ್ರಾಟೊಫೋರ್ಟ್ರೆಸ್’ (B-52 Stratofortress) ಬಾಂಬರ್ ವಿಮಾನವು ರನ್‌ವೇಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಂಟೂ ಜನ ಸಾವನ್ನಪ್ಪಿದ್ದಾರೆ.

ವಿಮಾನವು ಪತನಗೊಂಡ ತಕ್ಷಣ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದರಿಂದ ವಿಮಾನ ಸಂಪೂರ್ಣವಾಗಿ ನಾಶವಾಗಿದೆ. ವಿಮಾನದಲ್ಲಿದ್ದ ಮಿಲಿಟರಿ ಸಿಬ್ಬಂದಿ ಮತ್ತು ಸರ್ಕಾರಿ ಗುತ್ತಿಗೆದಾರರು ಸೇರಿದಂತೆ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ಹಳೆಯ ರಾಡಾರ್ ವ್ಯವಸ್ಥೆಯನ್ನು ಬದಲಾಯಿಸಿ, ಅತ್ಯಾಧುನಿಕ ‘AESA’ ರಾಡಾರ್ ವ್ಯವಸ್ಥೆಯನ್ನು ಅಳವಡಿಸುವ ಮಿಲಿಟರಿ ಆಧುನೀಕರಣ ಪರೀಕ್ಷಾರ್ಥ ಹಾರಾಟದಲ್ಲಿ ಭಾಗಿಯಾಗಿತ್ತು. ಅಪಘಾತದ ನಿಖರ ಕಾರಣ ತಿಳಿಯಲು ಸುಮಾರು ಆರು ತಿಂಗಳು ಬೇಕಾಗಬಹುದು ಎಂದು ವಾಯುಸೇನೆಯ ಉಪ ಕಮಾಂಡರ್ ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು

ಬೋಯಿಂಗ್ ಸಂಸ್ಥೆ ನಿರ್ಮಿಸಿರುವ ಈ ದೀರ್ಘ-ಶ್ರೇಣಿಯ ಯುದ್ಧ ವಿಮಾನವನ್ನು 1955 ರಲ್ಲಿ ಅಮೆರಿಕ ಸೇನೆಗೆ ಸೇರಿಸಲಾಯಿತು. ಇದು ಸಾಂಪ್ರದಾಯಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳೆರಡನ್ನೂ ಹೊತ್ತೊಯ್ಯಬಲ್ಲದು.

ವಿಡಿಯೋ

ಎಂಟು ಜೆಟ್ ಎಂಜಿನ್‌ಗಳನ್ನು ಹೊಂದಿರುವ ಈ ಬೃಹತ್ ವಿಮಾನವು ಒಮ್ಮೆಗೆ 32 ಟನ್‌ಗಳಷ್ಟು ಶಸ್ತ್ರಾಸ್ತ್ರಗಳನ್ನು ಹೊತ್ತು, ಇಂಧನ ತುಂಬಿಸದೆಯೇ 14,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಹಾರಬಲ್ಲದು. ಇದು ಗಂಟೆಗೆ ಸುಮಾರು 1,000 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:32 am, Tue, 16 June 26

Source link

ಕಿರುತೆರೆ ನಟಿ ಸಂಚಿತಾ ಸಾವಿಗೆ ಕಾರಣವಾಗಿದ್ದು ಆ ಹುಡುಗ? – Kannada News | Sanchita Ugale Death: Ujjwal Sharma Reveals Actress’s Mental Battle, Live In Woes

ಹಿಂದಿ ಕಿರುತೆರೆಯ ಜನಪ್ರಿಯ ನಟಿ ಸಂಚಿತಾ ಉಗಾಲೆ ಅವರು (Sanchita Ugale) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೇವಲ 22ನೇ ವಯಸ್ಸಿಗೆ ನಟಿ ಇಂತಹ ಕಠಿಣ ಹೆಜ್ಜೆ ಇಟ್ಟು ಕೊನೆಯುಸಿರೆಳೆದಿರುವುದು ಇಡೀ ಚಿತ್ರರಂಗ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಭಾನುವಾರ ಸಂಜೆ ಈ ದುರಂತ ಸಂಭವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಸದ್ಯ ನಟಿಯ ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂಚಿತಾ ಅವರ ಹಠಾತ್ ನಿಧನದ ಬೆನ್ನಲ್ಲೇ ಉದ್ಯಮದಲ್ಲಿ ಹಲವು ವದಂತಿಗಳು ಕೇಳಿಬರುತ್ತಿದ್ದು, ಅವರು ತಮ್ಮ ಸಹನಟ ಉಜ್ವಲ್ ಶರ್ಮಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಎಂಬ ಚರ್ಚೆಗಳು ನಡಯುತ್ತಿದ್ದವು. ಆದರೆ, ಈ ಹಿಂದೆ ಸ್ವತಃ ಸಂಚಿತಾ ಅವರೇ ಇದೆಲ್ಲವೂ ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಸಂಚಿತಾ ಸಾವಿನ ನಂತರ ಮಾಧ್ಯಮವೊಂದರ ಜೊತೆ ಮಾತನಾಡಿರುವ ನಟ ಉಜ್ವಲ್ ಶರ್ಮಾ, ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

‘ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ, ಅದೆಲ್ಲವೂ ಕೇವಲ ವದಂತಿಗಳಾಗಿದ್ದವು’ ಎಂದು ಉಜ್ವಲ್ ಸ್ಪಷ್ಟನೆ ನೀಡಿದ್ದಾರೆ. ‘ಸಂಚಿತಾ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದು, ಆತನ ಜೊತೆಯೇ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆತನ ನಡವಳಿಕೆಯಿಂದಾಗಿ ಸಂಚಿತಾ ಮಾನಸಿಕವಾಗಿ ತೀವ್ರ ಕಷ್ಟದ ಸಮಯವನ್ನು ಎದುರಿಸುತ್ತಿದ್ದರು. ನಾನು ನನ್ನ ಊರಿಗೆ ತೆರಳಿದ್ದರಿಂದ ಕಳೆದ ಕೆಲವು ದಿನಗಳಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ’ ಎಂದು ಉಜ್ವಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ

ಕೊನೆಯ ದಿನಗಳಲ್ಲಿ ಸಂಚಿತಾ ಅನುಭವಿಸುತ್ತಿದ್ದ ಮಾನಸಿಕ ಒತ್ತಡವನ್ನು ಕಂಡು ಅನೇಕರು ಅವರಿಗೆ ನೆರವಾಗಿದ್ದರು. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಂಬಂಧಪಟ್ಟ ಪ್ರೊಡಕ್ಷನ್ ಹೌಸ್ ಕೂಡ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿತ್ತು. ಏನೇ ನಡೆದಿದ್ದರೂ ಇದು ಅತ್ಯಂತ ದುಃಖಕರ ಮತ್ತು ಆಘಾತಕಾರಿ ಸಂಗತಿಯಾಗಿದ್ದು, ಅವರ ಸಾವಿನ ಸುದ್ದಿ ಕೇಳಿ ತಮಗೆ ತೀವ್ರ ಆಘಾತವಾಗಿದೆ ಎಂದು ಉಜ್ವಲ್ ಶರ್ಮಾ ಹೇಳಿದ್ದಾರೆ. ಸದ್ಯ ಪೊಲೀಸರು ಸಂಚಿತಾ ಅವರ ವೈಯಕ್ತಿಕ ಜೀವನ ಹಾಗೂ ಅವರ ಮಾಜಿ ಗೆಳೆಯನ ಹಿನ್ನೆಲೆಯನ್ನು ಆಧರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:07 am, Tue, 16 June 26

Source link

ಸಿಗ್ನಲಿಂಗ್ ಸುಧಾರಣೆ, ಪ್ಲಾಟ್‌ಫಾರ್ಮ್ ವಿಸ್ತರಣೆ ಕಾಮಗಾರಿ ಹಿನ್ನೆಲೆ KSR ಬೆಂಗಳೂರು ನಿಲ್ದಾಣದಿಂದ ರೈಲುಗಳ ಸಂಚಾರದಲ್ಲಿ ವ್ಯತ್ಯಯ – Kannada News | KSR Bengaluru Faces Major Train Disruptions Amid Signalling and Platform Upgrade Works

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣImage Credit source: deccanherald.com

ಬೆಂಗಳೂರು, ಜೂನ್​​ 16: ಯಾರ್ಡ್ ಮರು ವಿನ್ಯಾಸ (Yard Remodelling) ಹಾಗೂ ಸುರಕ್ಷತಾ ಸುಧಾರಣಾ ಕಾಮಗಾರಿಗಳು ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ) ಮುಂದಿನ ಕೆಲವು ದಿನ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕಾಮಗಾರಿಗಳ ಹಿನ್ನೆಲೆ 58 ರೈಲುಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದ್ದು, 116 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳ ಸಂಚಾರವನ್ನು ಭಾಗಶಃ ವಿಸ್ತರಿಸಲಾಗಿದ್ದು, 26 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎರಡು ರೈಲುಗಳ ವೇಳಾಪಟ್ಟಿಯನ್ನು ಮರುನಿಗದಿಪಡಿಸಲಾಗಿದ್ದು, ಐದು ರೈಲುಗಳ ಸಂಚಾರ 15ರಿಂದ 60 ನಿಮಿಷಗಳವರೆಗೆ ನಿಯಂತ್ರಣಗೊಳ್ಳಲಿದೆ. ಕೆಲವು ರೈಲುಗಳ ರದ್ದತಿ ಜೂನ್ 16ರಿಂದಲೇ (ಇಂದಿನಿಂದ) ಆರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ಇದು ಮುಂದುವರಿಯಲಿದೆ.

ವಂದೇ ಭಾರತ್ ಸಂಚಾರವೂ ಬದಲಾವಣೆ

ಒಟ್ಟು 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಯಾವುದೇ ವಂದೇ ಭಾರತ್ ರೈಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿಲ್ಲ.

ಇದನ್ನೂ ಓದಿ: ಬೆಂಗಳೂರು ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಸೋಮಣ್ಣ ಗುಡ್ ನ್ಯೂಸ್; ಕೊನೆಗೂ ಈಡೇರಿತು ಬಹುಕಾಲದ ಬೇಡಿಕೆ

ಆಗಸ್ಟ್ 1ರಿಂದ 3ರವರೆಗೆ

  • ಬೆಳಗಾವಿ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26751) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ಬೆಳಗಾವಿ ವಂದೇ ಭಾರತ್ (26752) ಯಶವಂತಪುರದಿಂದ ಆರಂಭವಾಗಲಿದೆ.
  • ಕಲಬುರಗಿ–ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ (22232) ಯಲಹಂಕದಲ್ಲಿ ಅಂತ್ಯಗೊಳ್ಳಲಿದೆ.
  • ಎಸ್‌ಎಂವಿಟಿ ಬೆಂಗಳೂರು–ಕಲಬುರಗಿ ವಂದೇ ಭಾರತ್ (22231) ಯಲಹಂಕದಿಂದ ಆರಂಭವಾಗಲಿದೆ.
  • ಕೆಎಸ್‌ಆರ್ ಬೆಂಗಳೂರು–ಧಾರವಾಡ ವಂದೇ ಭಾರತ್ (20661) ಯಶವಂತಪುರದಿಂದ ಸಂಚರಿಸಲಿದೆ.

ಜುಲೈ 31ರಿಂದ ಆಗಸ್ಟ್ 3ರವರೆಗೆ

  • ಧಾರವಾಡ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (20662) ಯಶವಂತಪುರದಲ್ಲಿ ಅಂತ್ಯಗೊಳ್ಳಲಿದೆ.
  • ಎರ್ನಾಕುಲಂ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ (26652) ಕೆ.ಆರ್.ಪುರಂನಲ್ಲಿ ಅಂತ್ಯಗೊಳ್ಳಲಿದೆ.

ಆಗಸ್ಟ್ 1ರಿಂದ 4ರವರೆಗೆ

ಕೆಎಸ್‌ಆರ್ ಬೆಂಗಳೂರು–ಎರ್ನಾಕುಲಂ ವಂದೇ ಭಾರತ್ (26651) ಬೆಂಗಳೂರು ಕ್ಯಾಂಟೋನ್ಮೆಂಟ್‌ನಿಂದ ಆರಂಭವಾಗಲಿದೆ.

ರಾಜಧಾನಿ ಮತ್ತು ಕರ್ನಾಟಕ ಎಕ್ಸ್‌ಪ್ರೆಸ್ ರೈಲುಗಳು

ಆಗಸ್ಟ್ 1ರಿಂದ 3ರವರೆಗೆ

  • ಕೆಎಸ್‌ಆರ್ ಬೆಂಗಳೂರು–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (22691) ಯಶವಂತಪುರದಿಂದ ಆರಂಭವಾಗಲಿದೆ.
  • ಇದರ ಜೋಡಿ ರೈಲು (22692) ಆಗಸ್ಟ್ 2ರಂದು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣಕ್ಕೆ ಒಳಪಡಲಿದೆ.

ಜುಲೈ 29ರಿಂದ ಆಗಸ್ಟ್ 1ರವರೆಗೆ

  • ನವದೆಹಲಿ–ಕೆಎಸ್‌ಆರ್ ಬೆಂಗಳೂರು ಕರ್ನಾಟಕ ಎಕ್ಸ್‌ಪ್ರೆಸ್ (12628) ಬೈಯಪ್ಪನಹಳ್ಳಿಯಲ್ಲಿ ಅಂತ್ಯಗೊಳ್ಳಲಿದೆ.
  • ಕೆಎಸ್‌ಆರ್ ಬೆಂಗಳೂರು–ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್ (12627) ಆಗಸ್ಟ್ 1ರಿಂದ 3ರವರೆಗೆ ಬೈಯಪ್ಪನಹಳ್ಳಿಯಿಂದ ಆರಂಭವಾಗಲಿದೆ.

ಮೈಸೂರು-ತುಮಕೂರು ಪ್ರಯಾಣಿಕರಿಗೆ ಹೆಚ್ಚು ಅನಾನುಕೂಲ

ಮೈಸೂರು/ಅಶೋಕಪುರಂನಿಂದ ಆರಂಭವಾಗುವ ಅಥವಾ ಅಂತ್ಯಗೊಳ್ಳುವ 16 ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಎಸ್‌ಆರ್ ಬೆಂಗಳೂರು ನಗರವನ್ನು ಸಂಪರ್ಕಿಸುವ 9 ಮೆಮು ರೈಲುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಈ ರೈಲುಗಳು ತುಮಕೂರು ಸೇರಿದಂತೆ ನಗರದ ವಿವಿಧ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು. ಭಾಗಶಃ ರದ್ದುಗೊಂಡ ರೈಲುಗಳು ಬೆಂಗಳೂರಿನ ಇತರ ನಿಲ್ದಾಣಗಳಿಂದ ಆರಂಭವಾಗಲಿದ್ದು ಅಥವಾ ಅಲ್ಲಿ ಅಂತ್ಯಗೊಳ್ಳಲಿವೆ.

ಕಾಮಗಾರಿಗಳಿಂದ ಆಗುವ ಪ್ರಯೋಜನಗಳು

ದಕ್ಷಿಣ ಪಶ್ಚಿಮ ರೈಲ್ವೆ (SWR) ಪ್ರಕಾರ, ಈ ಯಾರ್ಡ್ ಮರು ವಿನ್ಯಾಸ ಕಾಮಗಾರಿಯಿಂದ ಹಲವು ಕಾರ್ಯಾಚರಣಾ ಸುಧಾರಣೆಗಳು ಸಾಧ್ಯವಾಗಲಿವೆ.

  • ಬೆಂಗಳೂರು ಕ್ಯಾಂಟೋನ್ಮೆಂಟ್ ದಿಕ್ಕಿನಲ್ಲಿ ಒಂದೇ ಸಮಯದಲ್ಲಿ ರೈಲು ಆಗಮನ ಹಾಗೂ ನಿರ್ಗಮನ ವ್ಯವಸ್ಥೆ.
  • 7ನೇ ಪ್ಲಾಟ್‌ಫಾರ್ಮ್ ಅನ್ನು 460 ಮೀಟರ್‌ನಿಂದ 600 ಮೀಟರ್‌ಗೆ ವಿಸ್ತರಿಸಿ 24 ಬೋಗಿಗಳ ಪೂರ್ಣ ಉದ್ದದ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ.
  • ಸರಕು ರೈಲುಗಳಿಗೆ ಪ್ರತ್ಯೇಕ ನಾನ್-ಪ್ಲಾಟ್‌ಫಾರ್ಮ್ ಮಾರ್ಗ ಸೌಲಭ್ಯ.
  • ಮೈಸೂರು ಹಾಗೂ ಕ್ಯಾಂಟೋನ್ಮೆಂಟ್ ಮಾರ್ಗಗಳಲ್ಲಿ ಉತ್ತಮ ಸಿಗ್ನಲಿಂಗ್ ವ್ಯವಸ್ಥೆ.
  • ಹಳೆಯ Solid State Interlocking (SSI) ವ್ಯವಸ್ಥೆಯನ್ನು ಅತ್ಯಾಧುನಿಕ Electronic Interlocking (EI) ವ್ಯವಸ್ಥೆಯಾಗಿ ಪರಿವರ್ತನೆ.

ಎರಡು ಹಂತಗಳಲ್ಲಿ ಕಾಮಗಾರಿ

ದಕ್ಷಿಣ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಾಡಿ ಅವರ ಪ್ರಕಾರ, ಕಾಮಗಾರಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯನ್ನು ಸುಧಾರಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಯಶವಂತಪುರ ಗ್ರಿಡ್ ಭಾಗದಲ್ಲಿ ಇನ್ನೆರಡು ಹೊಸ ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:07 am, Tue, 16 June 26

Source link

ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 13ನೇ ರೈಲು: ಶೀಘ್ರದಲ್ಲೇ 5 ನಿಮಿಷಕ್ಕೊದರಂತೆ ಮೆಟ್ರೋ ಸಂಚಾರ ಶುರು – Kannada News | Namma Metro Yellow Line Receives 13th Train in Bengaluru; Waiting Time to Drop to 5 Minutes by August

ನಮ್ಮ ಮೆಟ್ರೋ ಹಳದಿ ಮಾರ್ಗ ರೈಲಿನ ಸಂಗ್ರಹ ಚಿತ್ರImage Credit source: tv9

ಬೆಂಗಳೂರು, ಜೂನ್ 16: ಬೆಂಗಳೂರಿನ ಸಂಚಾರ ದಟ್ಟಣೆಗೆ ಪ್ರಮುಖ ಪರಿಹಾರ ಎಂದೇ ಬಿಂಬಿತವಾಗಿರುವ ನಮ್ಮ ಮೆಟ್ರೋದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಅಥವಾ ಹಳದಿ ಮಾರ್ಗಕ್ಕೆ (Yellow Line) ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಹೊಸ ರೈಲನ್ನು ಬರಮಾಡಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ಹೆಬ್ಬಗೋಡಿ ಡಿಪೋಗೆ ಆಗಮಿಸಿದ 13ನೇ ರೈಲು
  • ರಾತ್ರಿ ವೇಳೆ 750 ಕಿಮೀ ಟ್ರಯಲ್ ರನ್
  • ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿರುವ ರೈಲುಗಳ ಸೇರ್ಪಡೆ

ಆರು ಕೋಚ್‌ಗಳನ್ನು ಒಳಗೊಂಡಿರುವ ಈ ಹೊಸ ಮೆಟ್ರೋ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದೆ. ಸದ್ಯ ಟ್ರೈಲರ್‌ಗಳಿಂದ ಕೋಚ್‌ಗಳನ್ನು ಕೆಳಗಿಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ಇವುಗಳನ್ನು ಒಟ್ಟುಗೂಡಿಸಿ (Assemble) ಸ್ಟ್ಯಾಟಿಕ್ ಟೆಸ್ಟಿಂಗ್‌ಗಾಗಿ ಇನ್ಸ್‌ಪೆಕ್ಷನ್ ಬೇ ಲೈನ್‌ಗೆ (IBL) ಕೊಂಡೊಯ್ಯಲಾಗುತ್ತದೆ. ಸಾರ್ವಜನಿಕರ ಸೇವೆಗೆ ಮುಕ್ತವಾಗುವ ಮುನ್ನ ಈ ರೈಲು ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್‌ಗಳಷ್ಟು ಪರೀಕ್ಷಾರ್ಥ ಸಂಚಾರ ಪೂರ್ಣಗೊಳಿಸಬೇಕಿದೆ. ಮೆಟ್ರೋ ಸಂಚಾರಕ್ಕೆ ತೊಂದರೆಯಾಗದಂತೆ ಈ ಪ್ರಕ್ರಿಯೆಯನ್ನು ಕೇವಲ ರಾತ್ರಿ ವೇಳೆಯಲ್ಲಿ ಮಾತ್ರ ನಡೆಸಲಾಗುತ್ತದೆ.

ಪೀಕ್ ಅವರ್‌ನಲ್ಲಿ 5 ನಿಮಿಷಕ್ಕೊಂದು ರೈಲು

ಪ್ರಸ್ತುತ 19.75 ಕಿಲೋಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 10 ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಪೀಕ್ ಅವರ್‌ನಲ್ಲಿ (ಹೆಚ್ಚಿನ ದಟ್ಟಣೆ ಇರುವ ಸಮಯ) ಪ್ರತಿ 7 ನಿಮಿಷಕ್ಕೊಮ್ಮೆ ಮೆಟ್ರೋ ಸೌಲಭ್ಯ ಸಿಗುತ್ತಿದೆ. ಇನ್ನುಳಿದ ಎರಡು ರೈಲುಗಳು ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿವೆ. ಕೋಲ್ಕತ್ತಾ ಸಮೀಪದ ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಂಸ್ಥೆಯು 14 ಮತ್ತು 15ನೇ ರೈಲುಗಳನ್ನು ಸಿದ್ಧಪಡಿಸುತ್ತಿದ್ದು, ಜುಲೈ ಆರಂಭದ ವೇಳೆಗೆ ಅವು ಬೆಂಗಳೂರಿಗೆ ರವಾನೆಯಾಗಲಿವೆ.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್

ಬರುವ ಆಗಸ್ಟ್ 11ಕ್ಕೆ ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವದ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದಾಗಿ ಪೀಕ್ ಅವರ್‌ನ ಕಾಯುವಿಕೆ ಅವಧಿ 5 ನಿಮಿಷ ಅಥವಾ ಅದಕ್ಕಿಂತಲೂ ಕಡಿಮೆಯಾಗಲಿದೆ. ಇದರಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ ಎದುರಿಸಲು ರಿಸರ್ವ್ ಸ್ಟಾಕ್ ಆಗಿ ಇರಿಸಲಾಗುತ್ತದೆ. ಇದರ ನಂತರ ಟಿಆರ್‌ಎಸ್‌ಎಲ್ ಸಂಸ್ಥೆಯು ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಿಗಾಗಿ 18 ರೈಲುಗಳನ್ನು ಪೂರೈಸುವತ್ತ ಗಮನ ಹರಿಸಲಿದೆ. ಅಲ್ಲದೆ, 2027ರ ವೇಳೆಗೆ ಬೆಮೆಲ್ (BEML) ಸಂಸ್ಥೆಯಿಂದ ಹಳದಿ ಮಾರ್ಗಕ್ಕೆ ಹೆಚ್ಚುವರಿಯಾಗಿ ಮತ್ತೂ 6 ರೈಲುಗಳು ಪೂರೈಕೆಯಾಗಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರಷ್ಯಾ ಬಾಂಬರ್ ವಿಮಾನ ಪತನ: ನಾಲ್ವರು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪಾರು – Kannada News | Russian Long Range Bomber Goes Down in Fiery Incident Caught on Video

ಮಾಸ್ಕೋ, ಜೂನ್ 16: ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕುಟ್ಸ್ಕ್ ಪ್ರದೇಶದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯಾದ ವಾಯುಸೇನೆಗೆ ಸೇರಿದ ಬೃಹತ್ ‘Tu-22M3’ ಕಾರ್ಯತಂತ್ರದ ಬಾಂಬರ್ ವಿಮಾನ ಪತನ(Plane Crash)ಗೊಂಡಿದೆ. ಅದೃಷ್ಟವಶಾತ್, ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿಗಳು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ಹೊರಜಿಗಿದಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತಕ್ಕೀಡಾದ ವಿಮಾನವು ತರಬೇತಿ ಹಾರಾಟದಲ್ಲಿದ್ದ ಕಾರಣ ಯಾವುದೇ ಯುದ್ಧ ಸಾಮಗ್ರಿ ಅಥವಾ ಬಾಂಬ್‌ಗಳನ್ನು ಹೊತ್ತೊಯ್ದಿರಲಿಲ್ಲ. ವಿಮಾನವು ಕಾಮೆಂಕಾ ಗ್ರಾಮದ ಬಳಿಯ ಅಂಗಾರ ನದಿಯ ಅರಣ್ಯ ಪ್ರದೇಶದಲ್ಲಿ ಬಿದ್ದಿರುವುದರಿಂದ ನೆಲದ ಮೇಲಿನ ಸಾರ್ವಜನಿಕ ಆಸ್ತಿಗೆ ಯಾವುದೇ ಹಾನಿಯಾಗಿಲ್ಲ.

ವಿಡಿಯೋ

ವಿಮಾನವು ತಾಂತ್ರಿಕ ಕಾರಣಗಳಿಂದಾಗಿ ಇದ್ದಕ್ಕಿದ್ದಂತೆ ನೆಲಕ್ಕೆ ಧುಮುಕಿ ಬೆಂಕಿ ಹೊತ್ತಿಕೊಂಡಿದೆ. ಇರ್ಕುಟ್ಸ್ಕ್ ಗವರ್ನರ್ ಇಗೊರ್ ಕೊಬ್ಜೆವ್ ಅವರ ಪ್ರಕಾರ, ವಿಮಾನದ ಎಂಜಿನ್ ವೈಫಲ್ಯವೇ ಈ ಭೀಕರ ಅಪಘಾತಕ್ಕೆ ಪ್ರಾಥಮಿಕ ಕಾರಣ ಎನ್ನಲಾಗಿದೆ. ಗಾಯಗೊಂಡ ಸಿಬ್ಬಂದಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತಷ್ಟು ಓದಿ: Video: ಪಾಕಿಸ್ತಾನದಲ್ಲಿ ವಾಯುಸೇನೆಯ ತರಬೇತಿ ವಿಮಾನ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ, ಮೂವರಿಗೆ ಗಾಯ

ಅಪಘಾತಕ್ಕೀಡಾದ ‘Tu-22M3’ ಸೋವಿಯತ್ ಒಕ್ಕೂಟದ ಕಾಲದ ಅತ್ಯಂತ ವೇಗದ ಸೂಪರ್‌ಸಾನಿಕ್ ಬಾಂಬರ್ ವಿಮಾನವಾಗಿದೆ. ಇದನ್ನು ನ್ಯಾಟೋ (NATO) ಪಡೆಗಳು ಬ್ಯಾಕ್‌ಫೈರ್ ಎಂದೂ ಕೂಡ ಕರೆಯಲಾಗುತ್ತದೆ. ಅತ್ಯಾಧುನಿಕ ಆವೃತ್ತಿಯಾದ ಈ ವಿಮಾನವು ಹೈಪರ್‌ಸಾನಿಕ್ ಕಿಂಜಾಲ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಅಪಘಾತದ ಕುರಿತು ರಷ್ಯಾ ರಕ್ಷಣಾ ಸಚಿವಾಲಯವು ಆಳವಾದ ತನಿಖೆಗೆ ಆದೇಶಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:10 am, Tue, 16 June 26

Source link

‘ಅಮೃತಧಾರೆ’ ಮಹಾ ತಿರುವು; ಗೌತಮ್ ಹಾಗೂ ಭೂಮಿಕಾ ದಂಪತಿಗೆ ತಿಳಿಯಿತು ಮಿಂಚು ಸತ್ಯ – Kannada News | Amrutha Dhare: Minchu’s True Identity Gautam and Bhumika Reunite with Lost Child

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಈಗ ಅತ್ಯಂತ ರೋಚಕ ಹಂತ ತಲುಪಿದೆ. ಗೌತಮ್ ಹಾಗೂ ಭೂಮಿಕಾ ದಂಪತಿಯಿಂದ ಹಲವು ಸಮಯದ ಹಿಂದೆ ದೂರವಾಗಿದ್ದ ಮಗಳು ಕೊನೆಗೂ ಸಿಕ್ಕಿರುವ ಸತ್ಯ ಈಗ ಪ್ರೋಮೋ ಮೂಲಕ ರಿವೀಲ್ ಆಗಿದೆ. ಇದು ವೀಕ್ಷಕರಲ್ಲಿ ಖುಷಿ ಮೂಡಿಸಿದೆ.

ಭೂಮಿಕಾಗೆ ಅವಳಿ ಮಕ್ಕಳು ಜನಿಸಿದ್ದವು. ಆದರೆ ಕ್ರೂರ ಜೆಡಿ ಸಂಚು ನಡೆಸಿ ಒಂದು ಮಗುವನ್ನು ಕಿಡ್ನ್ಯಾಪ್ ಮಾಡಿದ್ದ. ಇದಾದ ಹಲವು ಸಮಯದ ಬಳಿಕ ಗೌತಮ್‌ಗೆ ‘ಮಿಂಚು’ ಎಂಬ ಮುದ್ದಾದ ಹುಡುಗಿ ಸಿಕ್ಕಿದ್ದಳು. ಆಕೆ ಅನಾಥೆ ಎಂದು ಭಾವಿಸಿ ಗೌತಮ್ ದತ್ತು ಪಡೆದು ಪ್ರೀತಿಯಿಂದ ಸಾಕಿದ್ದ. ಆದರೆ, ಈಗ ಆ ಮಿಂಚು ಬೇರೆ ಯಾರೂ ಅಲ್ಲ, ಗೌತಮ್ ಮತ್ತು ಭೂಮಿಕಾ ಅವರ ಸ್ವಂತ ಮಗಳು ಎಂಬ ಮಹತ್ವದ ಸತ್ಯ ಬಯಲಾಗಿದೆ.

ಈ ಮಹಾ ಸತ್ಯವನ್ನು ಗೌತಮ್ ಕುಟುಂಬದ ಮುಂದೆ ತಂದು ನಿಲ್ಲಿಸುವುದು ಜೀ ಕನ್ನಡದ ಮತ್ತೊಂದು ಹೊಸ ಧಾರಾವಾಹಿ ‘ಕರ್ಣ’ ನಾಯಕ ಕರ್ಣ. ‘ಅಮೃತಧಾರೆ’ಯ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಕರ್ಣ ಮೆಡಿಕಲ್ ರಿಪೋರ್ಟ್‌ಗಳನ್ನು ಹಿಡಿದು ಗೌತಮ್ ಮನೆಗೆ ಎಂಟ್ರಿ ಕೊಡುತ್ತಾನೆ. ‘ಯಾರೋ ಈ ರಿಪೋರ್ಟ್ ಅನ್ನು ಸ್ವಾಪ್ (ಅದಲು-ಬದಲು) ಮಾಡಿರೋ ತರ ಇದೆ’ ಎಂದು ಅನುಮಾನ ವ್ಯಕ್ತಪಡಿಸುವ ಕರ್ಣ, ಬಳಿಕ ಡಿಎನ್‌ಎ ರಿಪೋರ್ಟ್‌ಗಳನ್ನು ಮ್ಯಾಚ್ ಮಾಡಿ ತೋರಿಸುತ್ತಾನೆ.

‘ನನಗೆ ಮೊದಲೇ ಆ ಮಗು ನಿಮ್ಮ ಮಗುವೇ ಆಗಿರಬಹುದು ಅನ್ನೋ ಡೌಟ್ ಇತ್ತು. ಈಗ ರಿಪೋರ್ಟ್‌ಗಳು ಮ್ಯಾಚ್ ಆಗ್ತಿವೆ. ಆ ಮಿಂಚು ಬೇರೆ ಯಾರೂ ಅಲ್ಲ, ನಿಮ್ಮದೇ ಮಗಳು’ ಎಂದು ಕರ್ಣ ಅಧಿಕೃತವಾಗಿ ಸಾರುತ್ತಾನೆ.

ಮಗುವಿನ ಕೈ ಮೇಲಿನ ಆ ಗುರುತು

ಸತ್ಯ ಕೇಳಿ ಇಡೀ ಕುಟುಂಬ ಆಶ್ಚರ್ಯಚಕಿತರಾದಾಗ, ಕರ್ಣ ಮತ್ತೊಂದು ಮುಖ್ಯವಾದ ಸುಳಿವು ನೀಡುತ್ತಾನೆ. ‘ಆ ಮಗುವಿನ ಕೈ ಮೇಲೇನಾದರೂ ಮಚ್ಚೆ ಇತ್ತಾ?” ಎಂದು ಪ್ರಶ್ನಿಸುತ್ತಾನೆ. ತಕ್ಷಣವೇ ಭೂಮಿಕಾ ಹಾಗೂ ಗೌತಮ್‌ಗೆ ತಮ್ಮ ಮಗುವಿನ ಕೈ ಮೇಲಿದ್ದ ತ್ರಿಶೂಲದ ಆಕಾರದ ಮಚ್ಚೆ ನೆನಪಿಗೆ ಬರುತ್ತದೆ. ಇದರಿಂದಾಗಿ ಮಿಂಚು ತಾವೇ ಕಳೆದುಕೊಂಡ ಮಗಳು ಎಂಬುದು ನೂರಕ್ಕೆ ನೂರರಷ್ಟು ಖಚಿತವಾಗುತ್ತದೆ. ಇತ್ತ ಮಗುವಿನ ಸತ್ಯ ಬಯಲಾಗುತ್ತಿದ್ದಂತೆ ಸದಾ ಸಂಚು ರೂಪಿಸುತ್ತಿದ್ದ ಜೆಡಿಗೆ ತಕ್ಕ ಶಾಸ್ತಿ ಕಾದಂತಿದೆ.

ಇದನ್ನೂ ಓದಿ: ಅಮೃತಧಾರೆ ಧಾರಾವಾಹಿ: ಮಗಳು ಮಿಂಚು ಕಿಡ್ನ್ಯಾಪ್, ಭದ್ರಕಾಳಿ ಅವತಾರ ತಾಳಿದ ಭೂಮಿಕಾ

ಇಷ್ಟು ದಿನ ತನ್ನದೇ ಮಗಳನ್ನು ದತ್ತು ಪುತ್ರಿ ಎಂದು ಸಾಕುತಿದ್ದ ಗೌತಮ್‌ಗೆ ಈಗ ಅವಳೇ ತನ್ನ ಕಂದ ಎಂಬ ಸತ್ಯ ತಿಳಿದಾಗ ಆಗುವ ಭಾವುಕ ಕ್ಷಣಗಳನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..! – Kannada News | Vaibhav sooryavanshi fight with sri lanka Players

ಶ್ರೀಲಂಕಾದ ದಂಬುಲಾದಲ್ಲಿ ನಡೆದ ಟ್ರೈ-ನೇಷನ್ ‘ಎ’ ಸರಣಿಯ 4ನೇ ಪಂದ್ಯವು ಹೈ-ಡ್ರಾಮಾಗೆ ಸಾಕ್ಷಿಯಾಗಿದೆ. ಭಾರತ ಎ ಮತ್ತು ಶ್ರೀಲಂಕಾ ಎ ನಡುವಣ ಏಕದಿನ ಪಂದವು ಮೊದಲಿಗೆ ಟೈನಲ್ಲಿ ಅಂತ್ಯಗೊಂಡಿತು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿದೆ. ಈ ಸೋಲಿನ ಬೆನ್ನಲ್ಲೇ ಆಟಗಾರರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡ ಸೂರ್ಯಂಶ್ ಶೆಡ್ಗೆ (72) ಅವರ ಅರ್ಧಶತಕದ ನೆರವೇರಿಕೆಯಿಂದ 265 ರನ್ ಗಳಿಸಿತ್ತು. ಶ್ರೀಲಂಕಾ ತಂಡವೂ ಸರಿಯಾಗಿ 265 ರನ್ ಗಳಿಸಿದ್ದರಿಂದ ಪಂದ್ಯ ಟೈ ಆಗಿ, ಸೂಪರ್ ಓವರ್ ಆಡಲಾಯಿತು.

  • ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್ ಗುರಿ ನೀಡಿತು.
  • 17 ರನ್​ಗಳ ಗುರಿ ಪಡೆದ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೆಡ್ಗೆ ಕಣಕ್ಕಿಳಿದಿದ್ದರು.

ಸೂಪರ್ ಓವರ್​ನ ಮೊದಲ 4 ಎಸೆತಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 5 ರನ್​ಗಳು ಮಾತ್ರ. ಅದರಂತೆ ಕೊನೆಯ 2 ಎಸೆತಗಳಲ್ಲಿ ಭಾರತ ತಂಡಕ್ಕೆ 12 ರನ್​ಗಳು ಬೇಕಿದ್ದವು. 5ನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ ಫೋರ್ ಬಾರಿಸಿದರು.

ಆದರೆ  ಶ್ರೀಲಂಕಾದ 19 ವರ್ಷದ ಮಿಸ್ಟರಿ ಸ್ಲಿಂಗರ್  ಕುಗಥಾಸ್ ಮಥುಲನ್ ಎಸೆದ ಕೊನೆಯ ಎಸೆತವನ್ನು ಕನೆಕ್ಟ್ ಮಾಡಲು ವೈಭವ್ ವಿಫಲರಾದರು. ಈ ಮೂಲಕ ಟೀಮ್ ಇಂಡಿಯಾ  7 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

ಕೆರಳಿದ ವೈಭವ್ ಸೂರ್ಯವಂಶಿ!

ಸೂಪರ್ ಓವರ್​ನಲ್ಲಿ 7 ರನ್​ಗಳಿಂದ ಗೆಲ್ಲುತ್ತಿದ್ದಂತೆ​ ಶ್ರೀಲಂಕಾ ಆಟಗಾರರು ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಾಗೆ, ನಿರಾಸೆಯಿಂದ ಪೆವಿಲಿಯನ್‌ಗೆ ಮರಳುತ್ತಿದ್ದ ವೈಭವ್ ಸೂರ್ಯವಂಶಿಯವರನ್ನು ನೋಡಿ ಅದೇನೋ ಹೇಳಿದ್ದಾರೆ.

ಈ ಮಾತಿನಿಂದ ಕೆರಳಿದ 15 ವರ್ಷದ ವೈಭವ್ ಸೂರ್ಯವಂಶಿ, ನೇರವಾಗಿ ಹಾಲಂಬಾಗೆ ಅವರತ್ತ ಧಾವಿಸಿ ಮಾತಿನ ಚಕಮಕಿ ನಡೆಸಿದರು. ಈ ವಾಗ್ವಾದದ ನಡುವೆ ವೈಭವ್, ಲಂಕಾ ಆಟಗಾರನ ಎದೆಗೆ ಜೋರಾಗಿ ಕೈಯಿಂದ ತಳ್ಳಿದ್ದಾರೆ.

ಆಟಗಾರರ ನಡುವಣ ಈ ಜಗಳದಿಂದಾಗಿ ಮೈದಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ತಕ್ಷಣವೇ ಶ್ರೀಲಂಕಾದ ಹಿರಿಯ ವಿಕೆಟ್‌ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ಕೆಲ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ವೈಭವ್ ಸೂರ್ಯವಂಶಿ ನಡೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಸದ್ಯ ಶ್ರೀಲಂಕಾ ಎ ವಿರುದ್ಧ ಸೋತಿರುವ ಭಾರ ಎ ತಂಡವು ತನ್ನ ಮುಂದಿನ ಪಂದ್ಯವನ್ನು ಅಫ್ಘಾನಿಸ್ತಾನ್ ಎ ವಿರುದ್ಧ ಆಡಲಿದೆ. ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾ ತ್ರಿಕೋನ ಸರಣಿಯಲ್ಲಿ ಫೈನಲ್​ ಆಡಬಹುದು.

Source link