Category Archives: Blog

Your blog category

ಶಾಲೆಗೆ ಹೋಗಲು ಬೇಜಾರಾಗಿ ಊರು ಸುತ್ತಿ ಅಪಹರಣದ ಕತೆ ಹೇಳಿದ ಸಹೋದರಿಯರು: ಪೊಲೀಸ್​​ ತನಿಖೆ ವೇಳೆ ಸತ್ಯ ಬಹಿರಂಗ – Kannada News | Bengaluru Sisters Fake Abduction to Skip School: Police Uncover Truth

ಬೆಂಗಳೂರು, ಫೆಬ್ರವರಿ 12: ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿಯರು ಅಪಹರಣ ಕತೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಮನೆಯಿಂದ ಸ್ಕೂಲ್​​ಗೆಂದು ಹೋಗಿದ್ದ 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದಾರೆ. ಶಾಲೆ ಬಳಿ ಹಾದುಹೋಗುತ್ತಿದ್ದ ಬಾಲಕಿಯರ ವಿಚಾರಿಸಿದಾಗ ಅವರು ತರಗತಿಗಳಿಗೆ ಹಾಜರಾಗಿಲ್ಲವೆಂಬ ವಿಷಯ ಗೊತ್ತಾಗಿದೆ. ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕ್ಯಾಂಪಸ್​​ನಲ್ಲಿ ಅವರ ಬ್ಯಾಗ್​​ ದೊರೆತಿದ್ದು, ಬಾಲಕಿಯರ ಪತ್ತೆ ಮಾತ್ರ ಆಗಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಚಾಮರಾಜಪೇಟೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಇದೇ ವೇಳೆ ಬಾಲಕಿಯರ ತಂದೆಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಿದೆ. ಹಿರಿಯ ಮಗಳು ಮಾತನಾಡಿ, ತಾವು ಮನೆ ಸಮೀಪದಲ್ಲಿದ್ದೇವೆ, ಪಾದಚಾರಿಯೊಬ್ಬರ ಫೋನ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ತಕ್ಷಣತೆರಳಿ ನೋಡಿದಾಗ ಇಬ್ಬರೂ ಸುರಕ್ಷಿತವಾಗಿರೋದು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ

ಕತೆ ಹೆಣೆದಿದ್ದ ಸಹೋದರಿಯರು

ಎಲ್ಲಿ ಹೋಗಿದ್ದಿರಿ ಎಂದು ವಿಚಾರಿಸಿದಾಗ ಬಾಲಕಿಯರು ಅಪಹರಣದ ಕತೆ ಹೇಳಿದ್ದರು. ನಾಲ್ವರು ಸದಸ್ಯರ ಗ್ಯಾಂಗ್ ಕಾರಿನಲ್ಲಿ ತಮ್ಮನ್ನು ಕರೆದೊಯ್ದಿದ್ದರು. ನಮ್ಮನ್ನು ಬೆದರಿಸಿ, ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಜೊತೆಗೆ ಮುಂದಿನ ವಾರ ಮರಳಿ ಬರುವಾಗ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಹಿರಿಯ ಬಾಲಕಿ ತಿಳಿಸಿದ್ದಾಳೆ. ಈ ಹೇಳಿಕೆಯನ್ನು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 123, 137 ಮತ್ತು 140 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಲಿಸಿದಾಗ ಯಾವುದೇ ಅನುಮಾನಾಸ್ಪದ ವಾಹನ, ಅನ್ಯ ವ್ಯಕ್ತಿಗಳ ಚಲನವಲನ ಪತ್ತೆಯಾಗಲಿಲ್ಲ. ಬದಲಾಗಿ ಪರಿಶೀಲನೆ ಮುಂದುವರಿಸಿದಾಗ ಸಿಸಿಟಿವಿಯಲ್ಲಿ ಇಬ್ಬರು ಸಹೋದರಿಯರು ಸಮೀಪದ ಬೀದಿಗಳಲ್ಲಿ ನಿರಾಳವಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಬಾಲಕಿಯರು ನಿಜವನ್ನು ಒಪ್ಪಿಕೊಂಡಿದ್ದಾರೆ.  ಶಾಲೆಗೆ ಹೋಗದೆ ಸುತ್ತಾಡಲು ನಿರ್ಧರಿಸಿದ್ದ ಅವರು, ಸಮೀಪದ ಅಂಗಡಿಯಲ್ಲಿ ಲಸ್ಸಿ ಕುಡಿದು ಕಾಲ ಕಳೆದಿದ್ದರು ಎಂಬ ವಿಚಾರ ಬಯಲಾಗಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:26 pm, Thu, 12 February 26

Source link

‘ಕಾಂತಾರ 1’ ಬಳಿಕ ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು, ಮುಹೂರ್ತ ಎಲ್ಲಿ? ಎಂದು? – Kannada News | Rishab Shetty starrer Jai Hanuman Muhurtham is on February 22

ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಮೂಲಕ ಭರ್ಜರಿ ಹಿಟ್ ನೀಡಿರುವ ರಿಷಬ್ ಶೆಟ್ಟಿ, ಇದೀಗ ಹೊಸದೊಂದು ಸಿನಿಮಾ ಪ್ರಾರಂಭ ಮಾಡತ್ತಿದ್ದಾರೆ. ‘ಕಾಂತಾರ’ದಂಥಹಾ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಪೌರಾಣಿಕ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಇದೀಗ ಪ್ರಾರಂಭ ಆಗುತ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ.

ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿರುವ ‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಸಿನಿಮಾದ ಮುಹೂರ್ತ ಫೆಬ್ರವರಿ 22 ರಂದು ಹಂಪಿಯಲ್ಲಿ ನಡೆಯಲಿದೆ. ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆದರೂ ಸಿನಿಮಾದ ಮುಹೂರ್ತವನ್ನು ಹಂಪಿಯಲ್ಲಿ ನಡೆಸುತ್ತಿರಲು ಪ್ರಮುಖ ಕಾರಣವೂ ಇದೆ.

ಹಂಪಿಯು ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದ್ದು, ಈ ಕಾರಣದಿಂದಲೇ ಚಿತ್ರತಂಡವು ಈ ಪವಿತ್ರ ಸ್ಥಳವನ್ನು ಚಿತ್ರದ ಅಧಿಕೃತ ಚಾಲನೆಗೆ ಆಯ್ಕೆ ಮಾಡಿಕೊಂಡಿದೆ. ಫೆಬ್ರವರಿ 22 ರಂದು ನಡೆಯಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ಹಂಚಿಕೊಂಡ ದಂಪತಿ

‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಹನುಮಂತ ದೇವರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಪುಷ್ಪ’, ‘ಪುಷ್ಪ 2’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಪ್ರಶಾಂತ್ ವರ್ಮಾ ನಿರ್ದೇಶಿಸಿ ಸೂಪರ್ ಹಿಟ್ ಆಗಿದ್ದ ‘ಹನುಮ್ಯಾನ್’ ಸಿನಿಮಾದ ಮುಂದುವರಿದ ಭಾಗ ಇದು ಎನ್ನಲಾಗುತ್ತಿದ್ದು, ಈ ಸಿನಿಮಾ ಸಂಪೂರ್ಣವಾಗಿ ಹನುಮಂತನ ಶಕ್ತಿ ಮತ್ತು ಸಾಹಸಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಕಲಿಯುಗದಲ್ಲಿ ಹನುಮಂತನ ಆಗಮನ ಹೇಗಿರುತ್ತದೆ ಎಂಬ ಕಲ್ಪನೆಯನ್ನು ನಿರ್ದೇಶಕ ಪ್ರಶಾಂತ್ ವರ್ಮ ತೆರೆಯ ಮೇಲೆ ತರಲಿದ್ದಾರೆ.

ಮೂಲಗಳ ಪ್ರಕಾರ, ಮುಹೂರ್ತ ಮುಗಿದ ಬಳಿಕ ಏಪ್ರಿಲ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪ್ರಶಾಂತ್ ವರ್ಮ ಈಗಾಗಲೇ ಸ್ಕ್ರಿಪ್ಟ್ ಮತ್ತು ವಿಎಫ್‌ಎಕ್ಸ್ ಕೆಲಸಗಳಿಗಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿದ್ದಾರೆ. ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾಕ್ಕಾಗಿ ದೇಹವನ್ನು ಇನ್ನಷ್ಟು ಹುರಿಗೊಳಿಸಿಕೊಂಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಳಿಕ ಛತ್ರಪತಿ ಶಿವಾಜಿ ಜೀವನ ಆಧರಿತ ಹಿಂದಿ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಫಿ ಬಿಲ್​ ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮೂವರು ಕಾನ್ಸ್​ಟೇಬಲ್ಸ್ – Kannada News | Bengaluru: Police Constables Assault Hotel staff Over Coffee Bill

ದೇವನಹಳ್ಳಿ, ಫೆಬ್ರವರಿ 12: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಲ್ಫಾ ಕ್ಯಾಂಟೀನ್‌ನಲ್ಲಿ ರಾತ್ರಿ ಬೀಟ್ ಡ್ಯೂಟಿಯಲ್ಲಿದ್ದ ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎಂಬ ಮೂವರು ಪೊಲೀಸರು ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ನಾವು ಪೊಲೀಸರು, ನಮಗೆ ಬಿಲ್ ಏಕೆ ಎಂದು ದರ್ಪದಿಂದ ವರ್ತಿಸಿದ್ದಾರೆ. ಪೊಲೀಸರು ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರ – Kannada News | Mohammed Nadeem Breaks Jayasuriya’s Record: Oldest T20 WC Fifty as Sri Lanka Dominates Oman

ಓಮನ್ ತಂಡವನ್ನು 105 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಶ್ರೀಲಂಕಾ ತಂಡ ಅತಿ ದೊಡ್ಡ ಗೆಲುವಿನ ದಾಖಲೆಯನ್ನು ಬರೆದಿದೆ. ಇದರ ಜೊತೆಗೆ 19 ಎಸೆತಗಳಲ್ಲಿ ಅರ್ಧಶತಕದ ಬಾರಿಸಿದ ದಸುನು ಶನಕ ಕೂಡ ಲಂಕಾ ಪರ ಅತಿ ವೇಗದ ಟಿ20 ಶತಕ ಬಾರಿಸಿದ ದಾಖಲೆ ನಿರ್ಮಿಸಿದರು. ಇದು ಲಂಕಾ ತಂಡದ ಕಥೆಯಾದರೆ, ಈ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಓಮನ್ ತಂಡದ ಮೊಹಮ್ಮದ್ ನದೀಮ್ ಕೂಡ ದಾಖಲೆಯೊಂದನ್ನು ನಿರ್ಮಿಸಿದರು. ಓಮನ್ ಪರ ಅರ್ಧಶತಕ ಬಾರಿಸಿ ಏಕಾಂಗಿ ಹೋರಾಟ ನೀಡಿದ ಮೊಹಮ್ಮದ್ ನದೀಮ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾ ಎನಿಸಿಕೊಂಡಿದ್ದಾರೆ. ಈ ಮೂಲಕ 17 ವರ್ಷಗಳ ಹಿಂದೆ ಅರ್ಧಶತಕ ಸಿಡಿಸಿದ್ದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದಿದ್ದಾರೆ.

2009 ರ ಟಿ20 ವಿಶ್ವಕಪ್‌ನಲ್ಲಿ ಸನತ್ ಜಯಸೂರ್ಯ ವೆಸ್ಟ್ ಇಂಡೀಸ್ ವಿರುದ್ಧ ಅರ್ಧಶತಕ ಬಾರಿಸಿದ್ದರು. ಆಗ ಅವರ ವಯಸ್ಸು 39 ವರ್ಷ 345 ದಿನಗಳು. ಈಗ, ಈ ದಾಖಲೆ 43 ವರ್ಷ 161 ದಿನದಲ್ಲಿ ಅರ್ಧಶತಕ ಬಾರಿಸಿರುವ ಮೊಹಮ್ಮದ್ ನದೀಮ್ ಅವರದ್ದಾಗಿದೆ. ಈ ಟಿ20 ವಿಶ್ವಕಪ್‌ನಲ್ಲಿ ನದೀಮ್ ಅತ್ಯಂತ ಹಿರಿಯ ಕ್ರಿಕೆಟಿಗ ಕೂಡ. ಮೊಹಮ್ಮದ್ ನದೀಮ್ ಓಮನ್ ಪರ 70 ಪಂದ್ಯಗಳನ್ನಾಡಿದ್ದು, 20.7 ಸರಾಸರಿಯಲ್ಲಿ 768 ರನ್ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿರುವ ನದೀಮ್ 40 ವಿಕೆಟ್‌ ಕೂಡ ಉರಿಳಿಸಿದ್ದಾರೆ.

Source link

Video: ಯಕ್ಷಗಾನ ನೋಡಲು ವೇದಿಕೆಯತ್ತ ಬಂದ ಬೆಕ್ಕಣ್ಣ, ಮುಂದೇನಾಯ್ತು ನೋಡಿ – Kannada News | A cat rushed to the stage to watch a Yakshagana

ಕರಾವಳಿ ಗಂಡು ಕಲೆ ಯಕ್ಷಗಾನ (Yakshagana) ನೋಡುವುದೇ ಚಂದ.ಪ್ರಸಂಗದ ನಡುವೆ ಹಾಸ್ಯಮಯ ಸಂಭಾಷಣೆಗಳು ಪ್ರೇಕ್ಷಕ ವರ್ಗವನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಹೀಗಾಗಿ ಈ ಕಲೆಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಆದರೆ, ಕಲಾಭಿಮಾನಿಗಳಿಗೆ ಮಾತ್ರವಲ್ಲ ಈ ಪ್ರಾಣಿಗಳಿಗೆ ಯಕ್ಷಗಾನ ಎಂದರೆ ಪ್ರೀತಿಯಿದೆ ಎನ್ನುವುದಕ್ಕೆ ಈ ದೃಶ್ಯವೇ ಸಾಕ್ಷಿ. ಯಕ್ಷಗಾನ ನೋಡಲು ರಂಗಸ್ಥಳಕ್ಕೆ ಬೆಕ್ಕು ಬಂದಿದ್ದು, ಕಲಾವಿದರೊಬ್ಬರು ಸಮಯ ಪ್ರಜ್ಞೆಯಿಂದ ಆ ಬೆಕ್ಕಿನ ಮರಿಯನ್ನು ಕಾಲಡಿಯಲ್ಲಿ ಬೀಳದಂತೆ ರಕ್ಷಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

PK Jain Creations ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಯಕ್ಷಗಾನ ನೋಡಲು ಬೆಕ್ಕು ವೇದಿಕೆಯತ್ತ ಬಂದಿದೆ. ಕಲಾವಿದರೊಬ್ಬರು ಸಮಯಪ್ರಜ್ಞೆಯಿಂದ ಕಾಲಡಿಯಲ್ಲಿ ಸಿಲುಕುತ್ತಿದ್ದ ಬೆಕ್ಕನ್ನು ಕೈಯಲ್ಲಿಡು ಚೌಕಿಯತ್ತ ಹೋಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಕುಣಿಯುವಾಗ ಕಾಲಡಿ ಸಿಕ್ಕಿದ್ರೆ ಕಷ್ಟ. ಒಳ್ಳೆಯ ಕೆಲಸ ಮಾಡಿದ್ರಿ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚೆನ್ನಾಗಿದೆ ಎಂದು ಹೇಳಿದರೆ, ಇನ್ನೊಬ್ಬರು, ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

NCL Recruitment 2026: ಡಿಪ್ಲೊಮಾ, B.Tech ಪದವೀಧರರಿಗೆ ಸರ್ಕಾರಿ ಉದ್ಯೋಗವಕಾಶ; 270 ತಾಂತ್ರಿಕ ಹುದ್ದೆಗೆ ನೇಮಕಾತಿ – Kannada News | NCL Assistant Foreman Recruitment 2026: 270 Technical Posts Open for Diploma/B.Tech Grads

ತಾಂತ್ರಿಕ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (NCL) ಉತ್ತಮ ಅವಕಾಶವನ್ನು ಘೋಷಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್‌ಗೆ ಸೇರಿರುವ ಈ ಸಂಸ್ಥೆಯು 270 ಸಹಾಯಕ ಫೋರ್‌ಮ್ಯಾನ್ (ತರಬೇತಿ) ಗ್ರೇಡ್–C ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಮಧ್ಯಪ್ರದೇಶದ ಸಿಂಗ್ರೌಲಿ ಮತ್ತು ಉತ್ತರ ಪ್ರದೇಶದ ಸೋನ್‌ಭದ್ರ ಪ್ರದೇಶಗಳಲ್ಲಿರುವ ಕಲ್ಲಿದ್ದಲು ಗಣಿಗಳು ಹಾಗೂ ಸಂಬಂಧಿತ ಘಟಕಗಳಲ್ಲಿ ನಿಯೋಜಿಸಲಾಗುತ್ತದೆ. ಆಸಕ್ತರು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೂಲಕ ನಡೆಯಲಿದೆ.

ಈ ನೇಮಕಾತಿಯಲ್ಲಿ ಒಟ್ಟು 270 ಹುದ್ದೆಗಳಿದ್ದು, ಅವುಗಳನ್ನು ವಿವಿಧ ತಾಂತ್ರಿಕ ವಿಭಾಗಗಳಿಗೆ ಹಂಚಲಾಗಿದೆ. ವಿದ್ಯುತ್ ವಿಭಾಗಕ್ಕೆ 148 ಹುದ್ದೆಗಳು, ಯಾಂತ್ರಿಕ ವಿಭಾಗಕ್ಕೆ 108 ಹುದ್ದೆಗಳು ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ದೂರಸಂಪರ್ಕ (E&T) ವಿಭಾಗಕ್ಕೆ 14 ಹುದ್ದೆಗಳು ಮೀಸಲಾಗಿವೆ. ಹೀಗಾಗಿ ವಿವಿಧ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗಿದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ವಿಭಾಗದಲ್ಲಿ ಕನಿಷ್ಠ ಮೂರು ವರ್ಷದ ಡಿಪ್ಲೊಮಾ ಇರಬೇಕು. BE ಅಥವಾ B.Tech ಪದವಿ ಪಡೆದವರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವಯೋಮಿತಿಯ ಪ್ರಕಾರ, 2026 ಮಾರ್ಚ್ 5ರಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 30 ವರ್ಷ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳ ಹಾಗೂ ಒಬಿಸಿ (ನಾನ್-ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಆಯ್ಕೆಯಾದವರಿಗೆ ಆಕರ್ಷಕ ವೇತನ ಪ್ಯಾಕೇಜ್ ನೀಡಲಾಗುತ್ತದೆ. ತಿಂಗಳಿಗೆ ಸುಮಾರು ₹47,330 ಮೂಲ ವೇತನದ ಜೊತೆಗೆ ತುಟ್ಟಿ ಭತ್ಯೆ, HRA, ಹಾಜರಾತಿ ಬೋನಸ್ ಸೇರಿದಂತೆ ಇತರ ಸೌಲಭ್ಯಗಳು ಲಭ್ಯವಾಗುತ್ತವೆ. ತರಬೇತಿ ಅವಧಿ E&T ವಿಭಾಗಕ್ಕೆ ಒಂದು ವರ್ಷವಾಗಿದ್ದು, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗಗಳಿಗೆ ಎರಡು ವರ್ಷಗಳಿರುತ್ತದೆ.

ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ನಡೆಯಲಿದೆ. ಪರೀಕ್ಷೆ 100 ಅಂಕಗಳಿಗೆ ನಡೆಯುತ್ತಿದ್ದು, 90 ನಿಮಿಷಗಳ ಅವಧಿ ಇರುತ್ತದೆ. ಇದರಲ್ಲಿ 70 ಪ್ರಶ್ನೆಗಳು ತಾಂತ್ರಿಕ ವಿಷಯಗಳಿಂದ ಹಾಗೂ 30 ಪ್ರಶ್ನೆಗಳು ಸಾಮಾನ್ಯ ಜ್ಞಾನ, ತಾರ್ಕಿಕತೆ ಮತ್ತು ಯೋಗ್ಯತೆಯಿಂದ ಇರುತ್ತವೆ. ಯಾವುದೇ ಋಣಾತ್ಮಕ ಅಂಕ ವ್ಯವಸ್ಥೆ ಇಲ್ಲದಿರುವುದು ಅಭ್ಯರ್ಥಿಗಳಿಗೆ ಮತ್ತೊಂದು ಲಾಭವಾಗಿದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಶುಲ್ಕ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹1180 ಆಗಿದ್ದು, ಎಸ್‌ಸಿ, ಎಸ್‌ಟಿ, ದಿವ್ಯಾಂಗ ಹಾಗೂ ಮಾಜಿ ಸೈನಿಕರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಫೆಬ್ರವರಿ 11 ರಿಂದ ಆರಂಭವಾಗಿ ಮಾರ್ಚ್ 5 ರ ರಾತ್ರಿ 11:59ರವರೆಗೆ ನಡೆಯಲಿದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ nclcil.in ಗೆ ಭೇಟಿ ನೀಡಿ, ನೇಮಕಾತಿ ಲಿಂಕ್ ಮೂಲಕ ನೋಂದಣಿ ಮಾಡಿ, ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಶುಲ್ಕ ಪಾವತಿಸಿ ಫಾರ್ಮ್ ಅನ್ನು ಸಲ್ಲಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳುವುದು ಉತ್ತಮ.

ಒಟ್ಟಾರೆ, ಉತ್ತಮ ವೇತನ ಮತ್ತು ಸ್ಥಿರ ಸರ್ಕಾರಿ ಉದ್ಯೋಗವನ್ನು ಬಯಸುವ ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಯುವಕರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಆಸಕ್ತರು ಸಮಯ ವ್ಯರ್ಥ ಮಾಡದೆ ಅರ್ಜಿ ಸಲ್ಲಿಸುವುದು ಸೂಕ್ತ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಕೆಂಪು ಸುಂದರಿಗೆ ಭಾರೀ ಬೇಡಿಕೆ: ಕೆಂಗುಲಾಬಿ ಬೆಳೆದ ರೈತರ ಜೇಬಿಗೆ ಜಣಜಣ ಕಾಂಚಾಣ – Kannada News | Valentine Day Red Rose Boom: Chikkaballapur Farmers Rejoice in High Demand

ಕೆಂಪು ಗುಲಾಬಿ ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮಿಗಳ ದಿನಾಚರಣೆ ಬೇರೆ. ಪ್ರೀತಿಯ ಹುಡುಗಿಯನ್ನು ಓಲೈಸಿಕೊಳ್ಳಲು, ಒಲಿಯದ ಹುಡುಗನನ್ನು ತಬ್ಬಿಕೊಳ್ಳಲು ರೆಡ್ ರೋಸ್ ಬೇಕೇಬೇಕು. ಹೀಗಾಗಿ ರೆಡ್ ರೋಸ್​​ಗೆ ಭಾರೀ ಡಿಮ್ಯಾಂಡ್ ಬಂದಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 

ಫೆಬ್ರವರಿ 14 ಬಂದರೆ ಸಾಕು ಪ್ರೇಮಿಗಳಿಗೆ ಎಲ್ಲಿಲ್ಲದ ರೋಮಾಂಚನ. ಮತ್ತೊಂದೆಡೆ ಇದೇ ಪ್ರೇಮಿಗಳ ದಿನದಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಲಾಬಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ದೊಡ್ಡದೊಡ್ಡ ವರ್ತಕರು ತಲಾ ಒಂದು ರೆಡ್ ರೋಸ್​​​ಗೆ 20 ರೂ ಹಣ ಕೊಟ್ಟು ಖರೀದಿ ಮಾಡಿ ವಿದೇಶಗಳಿಗೆ ರಪ್ತು ಮಾಡುತ್ತಿದ್ದಾರೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಹೊಸಕೋಟೆ ನಿವಾಸಿ ಕೃಷ್ಣರೆಡ್ಡಿ ಎನ್ನುವವರು 4 ಎಕರೆ ಪಾಲಿ ಹೌಸ್​ನಲ್ಲಿ, ವಿವಿಧ ಬಣ್ಣಗಳ ಕಲರ್ ಪುಲ್ ಗುಲಾಬಿ ಬೆಳೆದಿದ್ದು, ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ.

16 ಕಲರ್​​ಗಳ ಗುಲಾಬಿ ಬೆಳೆಯಲಾಗಿದೆ. ಅದರಲ್ಲಿ ಸದ್ಯ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ರೆಡ್ ರೋಸ್​​​ಗೆ ಭಾರೀ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗುಲಾಬಿಯ ನೀಳಕಾಂಡ, ಹೊಳಪು ವೈಯ್ಯಾರ, ಮುಳ್ಳುಗಳಲ್ಲಿಲ್ಲದ ಕೆಂಪು ಬಣ್ಣದ ಕೆಂಗುಲಾಬಿಗೆ ಇನ್ನೂ ಡಿಮ್ಯಾಂಡ್ ಹೆಚ್ಚಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ಗುಲಾಬಿಗೆ ದೇಶ, ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್ ಇದೆಯಂತೆ.

ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಗೆ ಪ್ರೇಮ ನಿವೇದನೆಗೆ ಈ ರೆಡ್ ರೋಸ್​ ಬೇಕೇಬೇಕು. ಹೀಗಾಗಿ ಇದೀಗ ಗುಲಾಬಿ ಬೆಳೆದ ರೈತರಿಗೆ ಮಾತ್ರ ಹಣದ ಹೊಳೆ ಹರಿಯಲಿದೆ.

Published On – 4:27 pm, Thu, 12 February 26

Source link

Sarla Maheshwari Death: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ನಿಧನ – Kannada News | Sarla maheshwari death doordarshan veteran anchor dies at 71

ನವದೆಹಲಿ, ಫೆಬ್ರವರಿ 12: ದೂರದರ್ಶನದ ಜನಪ್ರಿಯ ನಿರೂಪಕಿ ಸರಳ ಮಹೇಶ್ವರಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸರಳ ಮಹೇಶ್ವರಿ ಅವರನ್ನು ಕೇವಲ ಸುದ್ದಿ ವಾಚಕಿಯಾಗಿ ಮಾತ್ರವಲ್ಲ, ದೂರದರ್ಶನದ (Doordarshan) ಸುದ್ದಿಗಳು ಸ್ಪಷ್ಟತೆ, ಘನತೆ ಮತ್ತು ನಂಬಿಕೆಯನ್ನು ಉಳಿಸಿಕೊಂಡಿದ್ದ ಯುಗದ ಕಾಲದ ಕೊಂಡಿಯಾಗಿದ್ದರು. ಸುದ್ದಿಗೆ ಸೊಬಗು ಮತ್ತು ಸರಳತೆಯನ್ನು ನೀಡಿದ ಸಾಂಸ್ಕೃತಿಕ ವ್ಯಕ್ತಿಯಾಗಿ ಅವರನ್ನು ಸ್ಮರಿಸಲಾಗುತ್ತಿದೆ.

ಸರಳ ಮಹೇಶ್ವರಿ ಅವರ ಕಾಲದಲ್ಲಿ ಡಿಜಿಟಲ್ ಮಾಧ್ಯಮಗಳು, ಇಡೀ ದಿನ ಸುದ್ದಿ ಪ್ರಸಾರ ಮಾಡುವ ನ್ಯೂಸ್ ಚಾನೆಲ್​ಗಳು, ಯೂಟ್ಯೂಬ್ ಚಾನೆಲ್​ಗಳು, ಸೋಷಿಯಲ್ ಮೀಡಿಯಾಗಳು ಇಲ್ಲದ ಹಿನ್ನೆಲೆಯಲ್ಲಿ ಅವರು ಓದುವ ವಾರ್ತೆಗಾಗಿ ಕೋಟ್ಯಂತರ ಜನರು ಕಾಯುತ್ತಿರುತ್ತಿದ್ದರು. ಹೀಗಾಗಿಯೇ ಅವರು ಮನೆಮಾತಾಗಿದ್ದರು.

ಸರಳ ಅವರ ನಿಧನದಿಂದಾಗಿ ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ಅವರ ವಾರ್ತಾ ವಾಚನವನ್ನು ನೋಡುತ್ತಾ ಬೆಳೆದ ವೀಕ್ಷಕರಿಂದ ಗೌರವಗಳ ಮಹಾಪೂರವೇ ಹರಿದು ಬಂದಿತು.

ಇದನ್ನೂ ಓದಿ: World Television Day 2025: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?

ದೂರದರ್ಶನದಲ್ಲಿ ಸರಳ ಮಹೇಶ್ವರಿ 1976ರಿಂದ 2005ರವರೆಗೆ ಸುಮಾರು 3 ದಶಕಗಳ ಕಾಲ ವೃತ್ತಿಯಲ್ಲಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಓದುವಾಗ ಅನೌನ್ಸರ್ ಆಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಮಕ್ಕಳ ಕಾರ್ಯಕ್ರಮಗಳಿಗೆ ಸ್ಕ್ರಿಪ್ಟ್‌ಗಳನ್ನು ನೀಡುತ್ತಿದ್ದರು. 1982ರಲ್ಲಿ ನ್ಯೂಸ್ ರೀಡಿಂಗ್ ಆರಂಭಿಸಿದರು. ಅದೇ ವೇಳೆ ಭಾರತೀಯ ದೂರದರ್ಶನದಲ್ಲಿ ಐತಿಹಾಸಿಕ ಕ್ಷಣವಾದ ಏಷ್ಯನ್ ಕ್ರೀಡಾಕೂಟದ ಮೊದಲ ಕಲರ್ ಪ್ರಸಾರ ಶುರುವಾಗಿತ್ತು. ಅವರು ಬ್ಲಾಕ್ ಆ್ಯಂಡ್ ವೈಟ್ ಟಿವಿಯಿಂದ ಕಲರ್ ಟಿವಿಯ ಬದಲಾವಣೆಯ ವೇಳೆಯೇ ನಿರೂಪಣೆ ಆರಂಭಿಸಿದ್ದರಿಂದ ಈ ಕ್ಷಣ ಅವರಿಗೆ ಹಾಗೂ ವೀಕ್ಷಕರಿಗೆ ಮಹತ್ವದ್ದಾಗಿತ್ತು. ಹೀಗಾಗಿಯೇ ಅವರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ.

ದೂರದರ್ಶನದ ಸುದ್ದಿಗಳು ಇನ್ನೂ 24 ಗಂಟೆಗಳ ಕಾಲ ಪ್ರಸಾರವಾಗದ ಸಮಯದಲ್ಲಿ ಸರಳ ಮಹೇಶ್ವರಿ ಅವರ ಅರ್ಧ ಗಂಟೆಯ ವಾರ್ತಾ ನಿರೂಪಣೆ ಬಹಳ ಪ್ರಭಾವಿ ಮತ್ತು ನಂಬಿಕೆಯನ್ನು ಉಳಿಸಿಕೊಂಡಿತ್ತು. ವೀಕ್ಷಕರು ಅವರನ್ನು ಗೌರವಾನ್ವಿತ ವ್ಯಕ್ತಿ ಎಂದು ಗೌರವಿಸುತ್ತಿದ್ದರು. ಅವರ ಸರಳತೆ ಮತ್ತು ಸುದ್ದಿಗಳನ್ನು ಓದುವ ಶೈಲಿಗೆ ಬಹಳಷ್ಟು ಅಭಿಮಾನಿಗಳಿದ್ದರು.

ಇದನ್ನೂ ಓದಿ: World Television Day 2023: ವಿಶ್ವ ದೂರದರ್ಶನ ದಿನದ ಇತಿಹಾಸ, ಪ್ರಾಮುಖ್ಯತೆ ಏನು? 

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯನ್ನು ಘೋಷಿಸಿದ ಧ್ವನಿ ಸರಳ ಮಹೇಶ್ವರಿ ಅವರದ್ದು. 1997ರಲ್ಲಿ ಅವರು ಮದರ್ ತೆರೇಸಾ ಅವರ ಅಂತ್ಯಕ್ರಿಯೆಯ ಸುದ್ದಿಯನ್ನು ಕೂಡ ಓದಿದ್ದರು. ಇವೆರಡೂ ಅವರ ವೃತ್ತಿ ಜೀವನದಲ್ಲಿ ಮಹತ್ವದ ಸಂದರ್ಭವಾಗಿತ್ತು. 1984ರಲ್ಲಿ ಪವನ್ ಮಹೇಶ್ವರಿ ಅವರನ್ನು ವಿವಾಹವಾದ ನಂತರ ಸರಳ ಅವರು ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ಅವರು ಬಿಬಿಸಿಯಲ್ಲಿ ಕೆಲಸ ಮಾಡಿದರು. ಅವರು 1988ರಲ್ಲಿ ದೂರದರ್ಶನಕ್ಕೆ ಮರಳಿದರು. 2005ರವರೆಗೂ ಬಿಬಿಸಿಯಲ್ಲಿ ಕೆಲಸ ಮಾಡಿದ್ದರು. ನಂತರ ಅವರು ಕುಟುಂಬ ಜೀವನಕ್ಕೆ ಆದ್ಯತೆ ನೀಡಲು ರಾಜೀನಾಮೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಫ್ ಅಲಿ ಖಾನ್ ಧರಿಸಿರುವ ಪುಟ್ಟ ವಸ್ತುವಿನ ಬೆಲೆಯಲ್ಲಿ ಒಳ್ಳೆ ಮನೆ ಕಟ್ಟಿಸಬಹುದು – Kannada News | Saif Ali Khan wore 42 lakh rs worth Broach here is the details

ಬಾಲಿವುಡ್‌ನ (Bollywood) ‘ನವಾಬ’ ಎಂದೇ ಖ್ಯಾತರಾಗಿರುವ ಸೈಫ್ ಅಲಿ ಖಾನ್ ತಮ್ಮ ಸ್ಟೈಲ್ ಮತ್ತು ರಾಯಲ್ ಲುಕ್‌ನಿಂದ ಸುದ್ದಿಯಲ್ಲಿರುತ್ತಾರೆ. ರಾಯಲ್ ಕುಟುಂಬದ ಸೈಫ್ ಅಲಿ ಖಾನ್, ಬಾಲಿವುಡ್​ನ ಖಾನ್​​ಗಳಷ್ಟು ಸ್ಟಾರ್ ಎನಿಸಿಕೊಳ್ಳದಿದ್ದರೂ ರಾಯಲ್​​ನೆಸ್​​ಗೆ ಏನೂ ಕಡಿಮೆ ಇಲ್ಲ. ಸಾವಿರಾರು ಕೋಟಿ ಮೌಲ್ಯದ ಅರಮನೆ, ಆಸ್ತಿಗಳು ಸಾಕಷ್ಟಿದೆ. ಇದೇ ಕಾರಣಕ್ಕೆ ಅವರು ತಮ್ಮ ನವಾಬಿ ಕುಟುಂಬದ ಘನತೆಗೆ ತಕ್ಕಂತೆ ನವಾಬರಂತೆ ಬದುಕುತ್ತಿದ್ದಾರೆ. ಸೈಫ್ ಅಲಿ ಖಾನ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ವೆಲ್ವೆಟ್ ಸೂಟ್ ಧರಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಅವರ ಸೂಟ್ ಮೇಲಿದ್ದ ನವಿಲಿನ ಆಕಾರದ ಪುಟ್ಟ ಅಲಂಕಾರಿಕ ವಸ್ತುವಿನ ಮೇಲೆ.

ಸೈಫ್ ಅಲಿ ಖಾನ್ ತಮ್ಮ ಸೂಟಿನ ಮೇಲೆ ಧರಿಸಿರವ ವಸ್ತುವನ್ನು ಬ್ರೂಚ್ ಎಂದು ಕರೆಯಲಾಗುತ್ತದೆ. ಸೂಟಿನ ಅಂದ ಹೆಚ್ಚಿಸಲು ಇದನ್ನು ತೊಡಲಾಗುತ್ತದೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಧರಿಸಿರುವ ಈ ರಾಯಲ್ ಬ್ರೂಚ್‌ನ ಬೆಲೆ ಸುಮಾರು 42 ಲಕ್ಷ ರೂಪಾಯಿಗಳು. ಒಂದು ಒಳ್ಳೆ ಮನೆ ಕಟ್ಟಬಹುದಾದಷ್ಟು ಸಮನಾದ ಬೆಲೆಯ ಈ ಆಭರಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೈಫ್ ಅಲಿ ಖಾನ್ ಅವರ ಈ ಬ್ರೂಚ್ ಅನ್ನು ಪ್ರಸಿದ್ಧ ಐಷಾರಾಮಿ ಆಭರಣ ವಿನ್ಯಾಸಕ ಸಂಸ್ಥೆಯು ವಿನ್ಯಾಸಗೊಳಿಸಿದೆ ಎಂದು ಹೇಳಲಾಗುತ್ತಿದೆ. ಇದು ವಜ್ರ ಮತ್ತು ಅತ್ಯಂತ ಅಮೂಲ್ಯವಾದ ಹರಳುಗಳನ್ನು ಈ ಬ್ರೂಚ್ ಒಳಗೊಂಡಿದೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

ಸೈಫ್ ಅಲಿ ಖಾನ್ ಅವರು ಪಟೌಡಿಯ ರಾಜಮನೆತನದ ಕುಡಿಯಾಗಿದ್ದರಿಂದ, ಅವರ ಉಡುಗೆ-ತೊಡುಗೆಗಳಲ್ಲಿ ರಾಜವಂಶದ ಕಳೆ ಎದ್ದು ಕಾಣುತ್ತದೆ. ಈ ಹಿಂದೆಯೂ ಅವರು ಅನೇಕ ಬಾರಿ ದುಬಾರಿ ವಾಚ್‌ಗಳು ಮತ್ತು ಸೂಟ್‌ಗಳನ್ನು ಧರಿಸಿ ಸುದ್ದಿಯಾಗಿದ್ದರು. ಈಗ ಈ 42 ಲಕ್ಷದ ಬ್ರೂಚ್ ಅವರ ಶ್ರೀಮಂತಿಕೆ ಸಾಕ್ಷಿಯಾಗಿದೆ.

ನೆಟ್ಟಿಗರು ಈ ಬಗ್ಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, “ಇಷ್ಟು ಸಣ್ಣ ಬ್ರೂಚ್ ಬೆಲೆ ಇಷ್ಟೊಂದಾ?” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಸೈಫ್ ಇತ್ತೀಚೆಗೆ ‘ದೇವರ’ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದು, ಅವರ ಅಭಿನಯಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಸಿನಿಮಾದಿಂದ ಹಿಡಿದು ಫ್ಯಾಷನ್ ಲೋಕದವರೆಗೆ ಸೈಫ್ ಸದಾ ಅಪ್‌ಡೇಟ್ ಆಗಿರುತ್ತಾರೆ ಎಂಬುದಕ್ಕೆ ಈ ದುಬಾರಿ ಬ್ರೂಚ್ ಮತ್ತೊಂದು ಉದಾಹರಣೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:58 pm, Thu, 12 February 26

Source link

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಮೇಲಿನ ಲೋಕಾಯುಕ್ತ ಕೇಸ್​​ಗೆ ಹೈಕೋರ್ಟ್​​ ತಡೆ – Kannada News | Zameer Khan PS Lokayukta Case: High Court Stays Disproportionate Assets Probe

ಸರ್ದಾರ್ ಸರ್ಫರಾಜ್ ಖಾನ್​​ಗೆ ತಾತ್ಕಾಲಿಕ ರಿಲೀಫ್​Image Credit source: Tv9 Kannada

ಬೆಂಗಳೂರು, ಫೆಬ್ರವರಿ 12: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್​​ಗೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಡೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ವಾದಿಸಿದ್ದ ಹಿರಿಯ ವಕೀಲ ಸಿ.ಹೆಚ್.ಜಾಧವ್, ಆಸ್ತಿಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಘೋಷಣೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಲೋಕಾಯುಕ್ತ ಪರ ವಕೀಲ ಬಿ.ಬಿ.ಪಾಟೀಲ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಪರಿಶೀಲನೆಯಲ್ಲಿ ಶೇ.131ರಷ್ಟು ಆದಾಯ ಮೀರಿದ ಆಸ್ತಿ ಗಳಿಕೆ ಕಂಡುಬಂದಿದೆ. ಸರ್ದಾರ್ ಸರ್ಫರಾಜ್ ಖಾನ್, 2 ಕೋಟಿ 80 ಲಕ್ಷ ಕೃಷಿ ಆದಾಯ ಘೋಷಿಸಿಕೊಂಡಿದ್ದಾರೆ. ಆದರೆ ಅದಕ್ಕೆ ಆಧಾರ ಒದಗಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಐಟಿ ಇಲಾಖೆಗೆ ಎಲ್ಲ ಆದಾಯ ಘೋಷಿಸಿದ್ದಾರೆಯೇ ಇಲ್ಲವೇ ಎಂದು ಫೆ.27ಕ್ಕೆ ಮಾಹಿತಿ ನೀಡಲು ಸೂಚಿಸಿ ತನಿಖೆಗೆ ತಡೆ ನೀಡಿ ಆದೇಶಿಸಿದೆ.

ಸರ್ದಾರ್ ಸರ್ಫರಾಜ್ ಖಾನ್ ನಿವಾಸದಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು, 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದರು. 8.44 ಕೋಟಿ ರೂ. ಮೌಲ್ಯ ಸ್ಥಿರಾಸ್ತಿ ಮತ್ತು 5.93 ಕೋಟಿ ರೂ. ಮೊತ್ತದ ಚರಾಸ್ತಿ ದಾಳಿ ವೇಳೆ ಪತ್ತೆಯಾಗಿದೆ. 4 ವಾಸದ ಮನೆ ಮತ್ತು 35 ಎಕರೆ ಕೃಷಿ ಜಮೀನು ದಾಖಲೆ, 66,500 ಹಣ, 2.99 ಲಕ್ಷ ಮೌಲ್ಯದ ಚಿನ್ನ, 1.29 ಕೋಟಿ ಎಫ್​ಡಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿತ್ತು.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತು ಇದೆ ಗೊತ್ತೇ?

ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಒಳಗೊಂಡು ಸರ್ಫರಾಜ್ ಖಾನ್​​ಗೆ​​ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಸರ್ದಾರ್ ಸರ್ಫರಾಜ್ ಖಾನ್ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಅಧಿಕಾರಿಯಾಗಿದ್ದು, ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಕುರಿತು ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.24 ಬೆಳ್ಳಂ ಬೆಳಿಗ್ಗೆ 50ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಆಸ್ತಿ ವಿವರಗಳ ಸಂಗ್ರಹ ಕಾರ್ಯ ನಡೆಸಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link