Category Archives: Blog

Your blog category

Peacock Feather Vastu: ಮನೆಯ ಈ 5 ಸ್ಥಳಗಳಲ್ಲಿ ನವಿಲು ಗರಿ ಇರಿಸಿ; ಹಣಕ್ಕೆಂದೂ ಕೊರತೆಯಾಗದು! – Kannada News | Peacock Feather Vastu: Attract Wealth and Positive Energy with Kuber’s Blessings

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ ನವಿಲು ಗರಿ ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯಲ್ಲಿ ಸರಿಯಾದ ಸ್ಥಳಗಳಲ್ಲಿ ನವಿಲು ಗರಿಗಳನ್ನು ಇರಿಸುವ ಮೂಲಕ, ನೀವು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು. ಕುಬೇರನ ಆಶೀರ್ವಾದದ ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಮನೆಯ ಈ ಜಾಗಗಗಳಲ್ಲಿ ನವಿಲು ಗರಿಯನ್ನು ಇರಿಸಿ.

ಪೂಜಾ ಕೊಠಡಿ:

ಮನೆಯ ಪೂಜಾ ಮಂಟಪದಲ್ಲಿ 3 ಅಥವಾ 7 ನವಿಲು ಗರಿಗಳನ್ನು ಇರಿಸಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಭಗವಾನ್ ಕುಬೇರನನ್ನು ಮೆಚ್ಚಿಸುತ್ತದೆ. ದೈನಂದಿನ ಪ್ರಾರ್ಥನೆಯ ಸಮಯದಲ್ಲಿ, ನವಿಲು ಗರಿಗಳನ್ನು ಸ್ಪರ್ಶಿಸಿ ಸಂಪತ್ತನ್ನು ಪ್ರಾರ್ಥಿಸಿ. ಈ ಆಚರಣೆಯು ನಿಮ್ಮ ಮನೆಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ತರುತ್ತದೆ. ಹಣ ಬರುತ್ತದೆ ಎಂದು ನಂಬಲಾಗಿದೆ.

ಖಜಾನೆ ಪೆಟ್ಟಿಗೆ:

ನಿಮ್ಮ ಖಜಾನೆ ಪೆಟ್ಟಿಗೆಯಲ್ಲಿ ಅಥವಾ ನೀವು ಹಣವನ್ನು ಎಲ್ಲಿ ಇರಿಸುತ್ತೀರೋ ಅಲ್ಲಿ 5 ನವಿಲು ಗರಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಿ. ಕುಬೇರನು ನವಿಲು ಗರಿಗಳಿಗೆ ಆಕರ್ಷಿತನಾಗಿ ಸಂಪತ್ತನ್ನು ರಕ್ಷಿಸುತ್ತಾನೆ. ಈ ಆಚರಣೆ ಅನಗತ್ಯ ಖರ್ಚುಗಳನ್ನು ತಡೆಯುತ್ತದೆ. ಆದಾಯವನ್ನು ಹೆಚ್ಚಿಸುತ್ತದೆ. ಪ್ರತಿ ಶುಕ್ರವಾರ ನವಿಲು ಗರಿಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಇದು ಮನೆಯನ್ನು ಸಂಪತ್ತಿನಿಂದ ತುಂಬುತ್ತದೆ ಎಂದು ನಂಬಲಾಗಿದೆ.

ಪ್ರವೇಶದ್ವಾರದಲ್ಲಿ ನವಿಲು ಗರಿ:

ಏಳು ನವಿಲು ಗರಿಗಳ ಹಾರವನ್ನು ಮುಖ್ಯ ಬಾಗಿಲಿನ ಮೇಲೆ ಅಥವಾ ಹತ್ತಿರ ನೇತುಹಾಕಿ. ಇದು ಮನೆಗೆ ಪ್ರವೇಶಿಸುವ ಶಕ್ತಿಯನ್ನು ಶುದ್ಧೀಕರಿಸುತ್ತದೆ. ಇದು ಕುಬೇರನ ಆಶೀರ್ವಾದವನ್ನು ನಿರ್ದೇಶಿಸುತ್ತದೆ. ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಮತ್ತು ಸಂಪತ್ತು ಒಳಗೆ ಹರಿಯುತ್ತದೆ. ನೀವು ಬಾಗಿಲು ತೆರೆದ ತಕ್ಷಣ ನವಿಲು ಗರಿಗಳನ್ನು ನೋಡುವುದರಿಂದ ಇಡೀ ದಿನವು ಶುಭವಾಗಿರುತ್ತದೆ.

ಸ್ಟಡಿ ಟೇಬಲ್:

ನಿಮ್ಮ ಮಗುವಿನ ಸ್ಟಡಿ ಟೇಬಲ್ ಅಥವಾ ಆಫೀಸ್ ಟೇಬಲ್ ಮೇಲೆ ಮೂರು ನವಿಲು ಗರಿಗಳನ್ನು ಇರಿಸಿ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ, ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ. ವೃತ್ತಿ ಪ್ರಗತಿಯನ್ನು ಉತ್ತೇಜಿಸುತ್ತದೆ. ಓದುವಾಗ ಅಥವಾ ಕೆಲಸ ಮಾಡುವಾಗ ನವಿಲು ಗರಿಗಳನ್ನು ನೋಡುವುದರಿಂದ ಮನಸ್ಸಿನ ಶಾಂತಿ ಸಿಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಮನೆಯ ಉತ್ತರ ದಿಕ್ಕು:

ಉತ್ತರ ದಿಕ್ಕು ಕುಬೇರನಿಗೆ ಸೇರಿದ್ದು. ಗೋಡೆಯ ಮೇಲೆ ಅಥವಾ ಈ ದಿಕ್ಕಿನಲ್ಲಿ ಒಂದು ಮೂಲೆಯಲ್ಲಿ ಹನ್ನೊಂದು ನವಿಲು ಗರಿಗಳ ಹಾರವನ್ನು ಇರಿಸಿ. ಇದು ಸಂಪತ್ತಿನ ನಿರಂತರ ಹರಿವನ್ನು ಖಚಿತಪಡಿಸುತ್ತದೆ. ಇದು ವ್ಯವಹಾರದಲ್ಲಿ ಸಮೃದ್ಧಿ, ಉದ್ಯೋಗದಲ್ಲಿ ಪ್ರಗತಿ ಮತ್ತು ಅನಿರೀಕ್ಷಿತ ಪ್ರಯೋಜನಗಳನ್ನು ತರುತ್ತದೆ. ಉತ್ತರ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯಲ್ಲಿ ಶಾಶ್ವತ ಸಮೃದ್ಧಿ ಬರುತ್ತದೆ.

ಆರ್ಥಿಕ ಬಿಕ್ಕಟ್ಟನ್ನು ಶಾಶ್ವತವಾಗಿ ಕೊನೆಗೊಳಿಸಿ:

ಈ ಐದು ಸ್ಥಳಗಳಲ್ಲಿ ನವಿಲು ಗರಿಗಳನ್ನು ಇರಿಸಿದ ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸ ತಿಳಿಯುವಿರಿ. ಹೀಗೆ ಮಾಡುವುದರಿಂದ ಹಣ ಉಳಿಸಿಕೊಳ್ಳಲು, ಆದಾಯ ಹೆಚ್ಚಿಸಲು ಮತ್ತು ಮನೆಗೆ ಸಮೃದ್ಧಿ ತರುತ್ತದೆ ಎಂದು ನಂಬಲಾಗಿದೆ.

ನವಿಲು ಗರಿಗಳನ್ನು ಇಟ್ಟುಕೊಳ್ಳಲು ಪ್ರಮುಖ ನಿಯಮಗಳು:

ಯಾವಾಗಲೂ ನವಿಲು ಗರಿಗಳನ್ನು ಬೆಸ ಸಂಖ್ಯೆಯಲ್ಲಿ ಇಟ್ಟುಕೊಳ್ಳಿ, ಉದಾಹರಣೆಗೆ 3, 5, 7, 11. ಮುರಿದ ಅಥವಾ ಕೊಳಕಾದ ನವಿಲು ಗರಿಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ಪ್ರತಿ ಶುಕ್ರವಾರ ಅವುಗಳನ್ನು ಸ್ವಚ್ಛಗೊಳಿಸಿ. ಅವುಗಳನ್ನು ಎಂದಿಗೂ ನೆಲದ ಮೇಲೆ ಇಡಬೇಡಿ. ನವಿಲು ಗರಿಗಳನ್ನು ಖರೀದಿಸುವಾಗ “ಓಂ ಕುಬೇರ ನಮಃ” ಎಂದು ಜಪಿಸಿ. ಈ ನಿಯಮಗಳು ಕುಬೇರನ ಆಶೀರ್ವಾದವನ್ನು ದ್ವಿಗುಣಗೊಳಿಸುತ್ತವೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಗಿಲ್ಲಿ ಮೇಲಿನ ಅಭಿಪ್ರಾಯ ಬದಲಾಗಿದೆ’; ಅಶ್ವಿನಿ ಗೌಡ ಪ್ರೀತಿಯ ಮಾತು – Kannada News | Gilli Ashwini Gowda Fight: Bigg Boss Journey From Conflicts to Understanding and Forgiveness

ಗಿಲ್ಲಿ ನಟ (Gilli Nata) ಹಾಗೂ ಅಶ್ವಿನಿ ಗೌಡ ಮಧ್ಯೆ ಆದ ಕಿತ್ತಾಟಗಳು ಒಂದೆರಡಲ್ಲ. ಇಬ್ಬರೂ ಸಾಕಷ್ಟು ಬಾರಿ ಕಿತ್ತಾಡಿಕೊಂಡಿದ್ದು ಇದೆ. ಇವರ ಮಾತುಗಳು ಸಾಕಷ್ಟು ಬಾರಿ ಮಿತಿಮೀರಿದ್ದವು. ಈ ಬಗ್ಗೆ ಇಬ್ಬರಿಗೂ ಬೇಸರ ಇತ್ತು. ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕೊಟ್ಟ ಚಟುವಟಿಕೆ ವೇಳೆ ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಕ್ಷಮೆ ಕೂಡ ಕೇಳಿದ್ದಾರೆ. ಈ ಪ್ರೀತಿಯ ಮಾತುಗಳು ವೀಕ್ಷಕರಿಗೆ ಇಷ್ಟ ಆಗಿದೆ.

ಬಿಗ್ ಬಾಸ್ ಚಟುವಟಿಕೆ ಒಂದನ್ನು ನೀಡಿದ್ದರು. ಇದರ ಅನುಸಾರ ಯಾವುದೇ ಸ್ಪರ್ಧಿಗೆ ಕ್ಷಮೆ ಕೇಳುವ ಅವಕಾಶ ಇತ್ತು. ಆಗ ಅಶ್ವಿನಿ ಅವರು ಮೊದಲು ಗಿಲ್ಲಿಗೆ ಕ್ಷಮೆ ಕೇಳಿದರು. ‘ನಾನು ನಿನಗೆ ಸಾಕಷ್ಟು ಬೇಸರ ಮಾಡಿದ್ದೇನೆ. ಫ್ರೆಂಡ್ಸ್ ಹೇಗಿರ್ತಾರೆ ಗೊತ್ತಿಲ್ಲ, ಕಾಲೇಜು ಜೀವನ ಎಂಜಾಯ್ ಮಾಡಿಲ್ಲ. ಹೀಗಾಗಿ ಯಾರೇ ರೇಗಿಸಿದರೂ ಸಿಟ್ಟು ಬರುತ್ತಿತ್ತು. ಬಹುಶಃ ನಿನ್ನ ರೀತಿಯ ಗೆಳೆಯ ಅಥವಾ ತಮ್ಮ ಇದ್ದಿದ್ರೆ ನಾನು ಅದಕ್ಕೆ ಅಡ್ಜಸ್ಟ್ ಆಗುತ್ತಿದ್ದೆ. ರೇಗಿಸೋದು ನೋಡೋಕೆ ಆಗ್ತಾ ಇರಲಿಲ್ಲ’ ಎಂದು ಕೋಪಗೊಳ್ಳುತ್ತಿದ್ದರ ಹಿಂದಿನ ಕಾರಣವನ್ನು ಅಶ್ವಿನಿ ಹೇಳಿದರು.

‘ಹಲವು ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡೆ. ಆದರೆ, ನಿನ್ನನ್ನು ಗಮನಿಸುತ್ತಾ ಬಂದೆ. ನನಗೆ ಬೇಸರ ಆದಾಗ ನೀನು ಮಂಕಾಗುತ್ತಿದೆ. ಆಗ ನನಗೆ ಅರ್ಥ ಆಯಿತು. ಆದರೂ ರೇಗಿಸೋದು ನಿಲ್ಲಿಸಿಲ್ಲ. ನಿನ್ನ ತಂದೆ-ತಾಯಿ ಬಂದಾಗ ನಿನ್ನ ಮೇಲಿನ ಗೌರವ ಹೆಚ್ಚಾಯ್ತು.ನೀನು ಇರೋದೆ ಹೀಗೆ ಎಂದು ನಿನ್ನ ತಂದೆ ತಾಯಿಯಿಂದ ಅರಿತೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ

‘ಗಂಭೀರ ಪರಿಸ್ಥಿತಿಯಲ್ಲೂ ನಗಬಹುದು ಎಂಬುದನ್ನು ನಿನ್ನ ನೋಡಿ ಕಲಿತಿ. ನಿನ್ನ ಮೇಲೆ ಬಂದ ದಿನ ಇದ್ದ ಅಭಿಪ್ರಾಯಕ್ಕೂ, ಈಗಿನ ಅಭಿಪ್ರಾಯಕ್ಕೂ ಸಾಕಷ್ಟು ಬದಲಾಗಿದೆ. ಜೀವನನ ಲೈಟ್ ಆಗಿ ತೆಗೆದುಕೊಂಡು ಎಂಜಾಯ್ ಮಾಡಬಹುದು ಎಂಬುದನ್ನು ಕಲಿತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿದರು. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಒಬ್ಬರ ಕೈಗೆ ಕಪ್ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಪುಟ್ಟ ಬಾಲಕ ಸಿಎಂ ಯೋಗಿ ಬಳಿ ಇಟ್ಟ ಬೇಡಿಕೆ ಏನು ಗೊತ್ತೇ? – Kannada News | A Simple Wish Steals the Show During CM Yogi’s Interaction With a Child

ಲಕ್ನೋ, ಜನವರಿ 16: ಪುಟ್ಟ ಬಾಲಕ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಳಿ ಹೋಗಿ ಕಿವಿಯಲ್ಲಿ ಪಿಸುಗುಟ್ಟಿದ್ದಾನೆ. ಏನೋ ದೊಡ್ಡ ಬೇಡಿಕೆಯಲ್ಲ ಕೇಳಿದ್ದು ಒಂದು ಪ್ಯಾಕೆಟ್ ಚಿಪ್ಸ್​. ಆ ವಿಡಿಯೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಅಷ್ಟರಲ್ಲಿ ಒಂದು ಪುಟ್ಟ ಮಗು ಅವರ ಬಳಿಗೆ ಬರುತ್ತಾನೆ. ಯೋಗಿ ಮಗುವನ್ನು ನೋಡಿ ನಗುತ್ತಾ ಮಾತನಾಡುತ್ತಾನೆ. ಏನು ಬೇಕು ನಿನಗೆ ಎಂದು ಕೇಳುತ್ತಾರೆ. ಬಾಲಕ ಸಿಎಂ ಕಿವಿಯಲ್ಲಿ ನನಗೆ ಚಿಪ್ಸ್ ಬೇಕು ಎಂದು ಪಿಸುಗುಟ್ಟುತ್ತದೆ, ಇದನ್ನು ಕೇಳಿದ ಸಿಎಂ ಯೋಗಿ ಕೂಡ ನಕ್ಕರು.ನಂತರ ಯೋಗಿ ಮಗುವಿಗೆ ಚಿಪ್ಸ್ ಆರ್ಡರ್ ಮಾಡುತ್ತಾರೆ. 14 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್​​ಬಾಸ್ ಮನೆಗೆ ಬಂದ ‘ಗಿಚ್ಚಿ ಗಿಲಿ ಗಿಲಿ’ ತಂಡ: ನಗುವೋ ನಗು – Kannada News | Bigg Boss Kannada 12: Gichi Gili Gili team arrived as guest

ಬಿಗ್​​ಬಾಸ್ (Bigg Boss) ಫಿನಾಲೆ ವಾರ ಚಾಲ್ತಿಯಲ್ಲಿದೆ. ಹಿಂದೆಲ್ಲ ಜನರಿಂದ ತುಂಬಿಕೊಂಡಿರುತ್ತಿದ್ದ ಮನೆಯಲ್ಲಿ ಈಗ ಉಳಿದಿರುವುದು ಕೇವಲ ಆರು ಜನ ಮಾತ್ರ. ಮನೆಯೆಲ್ಲ ಖಾಲಿ-ಖಾಲಿ ಎನಿಸುತ್ತಿದೆ. ಆದರೆ ಅತಿಥಿಗಳು ಬಂದು ಮನೆಯನ್ನು ತುಂಬಿಸುತ್ತಿದ್ದಾರೆ. ಇಂದಿನ ಎಪಿಸೋಡ್​​ನಲ್ಲಿ ಭಾರಿ ಸಂಖ್ಯೆಯ ಅತಿಥಿಗಳೇ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದು, ‘ಜೂನಿಯರ್ ಗಿಚ್ಚಿ ಗಿಲಿ ಗಿಲಿ’ ಬಗ್ಗೆ ಸಹ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಸಹ ಹಾಸ್ಯ ಮಾಡಿ ನಕ್ಕು-ನಲಿದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಮೂರು ಹಿಟ್ ಕೊಟ್ಟ ನಿರ್ದೇಶಕನಿಗೆ ಎರಡನೇ ಬಾರಿ ಕೈಕೊಟ್ಟ ಅಲ್ಲು ಅರ್ಜುನ್? – Kannada News | Did Allu Arjun say no to Trivikram Srinivas again

ಅಲ್ಲು ಅರ್ಜುನ್ (Allu Arjun) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸಹ ಸೆಳೆದಿವೆ. ಇದೀಗ ಅಲ್ಲು ಅರ್ಜುನ್ ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ಹಾಲಿವುಡ್ ಸ್ಟುಡಿಯೋಗಳ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಈ ಸಿನಿಮಾ ಮೂಲಕ ಹಾಲಿವುಡ್ ಕದ ತಟ್ಟುವ ಆಲೋಚನೆಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಒಂದೊಂದೆ ಮೆಟ್ಟಿಲು ಏರುತ್ತಾ ಸಾಗುತ್ತಿರುವ ಅಲ್ಲು ಅರ್ಜುನ್, ಏರಲು ಸಹಾಯ ಮಾಡಿದವರನ್ನೇ ನಿರ್ಲಕ್ಷಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಅಲ್ಲು ಅರ್ಜುನ್ ಅವರಿಗೆ ಅವರ ವೃತ್ತಿ ಜೀವನದಲ್ಲಿ ಹಲವು ಅತ್ಯುತ್ತಮ ನಿರ್ದೇಶಕರುಗಳು ದೊರಕಿದ್ದಾರೆ. ಸುಕುಮಾರ್, ಭಾಸ್ಕರ್, ಕ್ರಿಶ್, ಗುಣಶೇಖರ್ ಇನ್ನೂ ಹಲವರು ಅಲ್ಲು ಅರ್ಜುನ್​​ಗೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸುಕುಮಾರ್ ಅಲ್ಲು ಅರ್ಜುನ್​​ಗಾಗಿ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದು ಮೂರಕ್ಕೆ ಮೂರು ಸೂಪರ್ ಹಿಟ್ ಆಗಿವೆ. ‘ಆರ್ಯ’, ‘ಪುಷ್ಪ’ ಮತ್ತು ‘ಪುಷ್ಪ 2’. ಆದರೆ ಸುಕುಮಾರ್ ಈ ಸಾಧನೆ ಮುಂಚೆಯೇ ಮತ್ತೊಬ್ಬ ನಿರ್ದೇಶಕ ಈ ದಾಖಲೆ ಬರೆದಿದ್ದರು ಅದುವೇ ತ್ರಿವಿಕ್ರಮ್ ಶ್ರೀನಿವಾಸ್.

ತೆಲುಗಿನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ತ್ರಿವಿಕ್ರಮ್ ಶ್ರೀನಿವಾಸ್, ತೆಲುಗು ಚಿತ್ರರಂಗಕ್ಕೆ ಹಲವು ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಅಲ್ಲು ಅರ್ಜುನ್​​ ಅವರಿಗಾಗಿ ಮೂರು ಸಿನಿಮಾ ನಿರ್ದೇಶಿಸಿ, ಮೂರಕ್ಕೆ ಮೂರು ಸಹ ದೊಡ್ಡ ಬ್ಲಾಕ್ ಬಸ್ಟರ್ ಆಗುವಂತೆ ಮಾಡಿದ್ದಾರೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವ ಮೊದಲೇ ಈ ಹಿಟ್​​ಗಳನ್ನು ತ್ರಿವಿಕ್ರಮ್ ನೀಡಿದ್ದರು. ಆದರೆ ಈಗ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದೂ ಒಂದಲ್ಲ ಎರಡೆರಡು ಭಾರಿ.

ಇದನ್ನೂ ಓದಿ:ಜಪಾನ್ ಅಭಿಮಾನಿಗಳ ಜೊತೆ ಅಲ್ಲು ಅರ್ಜುನ್

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಬೇಕಿತ್ತು. ‘ಪುಷ್ಪ’ ಸಿನಿಮಾದ ಸಮಯದಲ್ಲಿಯೇ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ‘ಪುಷ್ಪ 2’ ಬಳಿಕ ಅಲ್ಲು ಅರ್ಜುನ್, ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದ ಸಿನಿಮಾಕ್ಕೆ ಎಸ್ ಹೇಳಿದರು. ಆ ಬಳಿಕ ತ್ರಿವಿಕ್ರಮ್ ಅವರು ಅದೇ ಕತೆಯನ್ನು ಜೂ ಎನ್​​ಟಿಆರ್ ಅವರಿಗೆ ಹೇಳಿದರು. ಆದರೆ ಜೂ ಎನ್​​ಟಿಆರ್ ಕತೆ ಸೂಟ್ ಆಗುವುದಿಲ್ಲವೆಂದು ನಿರ್ಧರಿಸಿ ಮತ್ತೆ ಕತೆಯನ್ನು ಅಲ್ಲು ಅರ್ಜುನ್ ಅವರಿಗೇ ಒಪ್ಪಿಸಿದರು ತ್ರಿವಿಕ್ರಮ್ ಶ್ರೀನಿವಾಸ್.

ಆದರೆ ಇದೀಗ ಮತ್ತೆ ತ್ರಿವಿಕ್ರಮ್ ಶ್ರೀನಿವಾಸ್​​ಗೆ ಕೈಕೊಟ್ಟಂತಿದೆ ಅಲ್ಲು ಅರ್ಜುನ್. ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಅಲ್ಲು ಅರ್ಜುನ್ ಅವರ ಸಿನಿಮಾ ಇದೇ ವರ್ಷ ಶುರುವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಅವರು ತಮಿಳಿನ ಲೋಕೇಶ್ ಕನಗರಾಜ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಆ ಮೂಲಕ ತ್ರಿವಿಕ್ರಮ್ ಸಿನಿಮಾಕ್ಕೆ ಮತ್ತೊಮ್ಮೆ ನೋ ಹೇಳಿರುವುದು ಖಾತ್ರಿ ಆಗಿದೆ.

ತ್ರಿವಿಕ್ರಮ್ ಶ್ರೀನಿವಾಸ್ ಅವರು, ದೇವರು ಸುಬ್ರಹ್ಮಣ್ಯ ಅಥವಾ ಮುರುಗನ್ ಅವರನ್ನು ಆಧರಿಸಿದ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದರು. ಅದಕ್ಕೆ ಅಲ್ಲು ಅರ್ಜುನ್ ಅವರೇ ಸೂಕ್ತ ಎಂಬ ನಂಬಿಕೆಯಲ್ಲಿದ್ದಾರೆ ಆದರೆ ಅಲ್ಲು ಅರ್ಜುನ್ ಪದೇ ಪದೇ ಸಿನಿಮಾಕ್ಕೆ ನೋ ಹೇಳುತ್ತಿದ್ದಾರೆ. ಇದೀಗ ಈ ಸಿನಿಮಾ ಮತ್ತೆ ಜೂ ಎನ್​​ಟಿಆರ್ ಪಾಲಾಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜನರ ಬದುಕಿಗೆ ಮಾರಕವಾದ ಗಣಿಗಾರಿಕೆ ಧೂಳು: ಸರ್ಕಾರ ಸೈಲೆಂಟ್, ಸಿಡಿದೆದ್ದ ರೈತಸಂಘ – Kannada News | Mining Dust Chokes Lives in Chitradurga: Farmers’ Union Protests as Government Remains Silent

ಚಿತ್ರದುರ್ಗ, ಜನವರಿ 16: ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಸ್ಥಳೀಯ ಜನಜೀವನಕ್ಕೆ ಸಮಸ್ಯೆಯಾಗಿ ಪರಿಣಮಿಸಿವೆ. ಇಲ್ಲಿನ ರಸ್ತೆಗಳಲ್ಲಿ ಪ್ರತಿದಿನ ಸಾವಿರಾರು ಗಣಿ ಲಾರಿಗಳು ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿವೆ. ಈ ಲಾರಿಗಳಿಗೆ ಟಾರ್ಪಲ್ ಹೊದಿಸದಿರುವುದು ಮತ್ತು ರಾತ್ರಿ ಮಾತ್ರ ಸಂಚಾರ ಮಾಡಬೇಕೆಂಬ ನಿಯಮವನ್ನು ಪಾಲಿಸದಿರುವುದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದೆ.

ಈ ನಿಯಮಬಾಹಿರ ಸಂಚಾರದಿಂದಾಗಿ ಬೆಳೆದ ಬೆಳೆಗಳು ಹಾಳಾಗುತ್ತಿವೆ. ಭಾರಿ ಗಾತ್ರದ ಲಾರಿಗಳ ಸಂಚಾರದಿಂದ ಸಮೀಪದ ಮನೆಗಳು ಕಂಪಿಸುತ್ತಿವೆ ಹಾಗೂ ಧೂಳಿನಿಂದ ಜನರ ಆರೋಗ್ಯ ಹದಗೆಡುತ್ತಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗಣಿಗಾರಿಕೆ ನಡೆಯುತ್ತಿದ್ದರೂ, ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಿಲ್ಲ. ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಡಿಎಂಎಫ್ ನಿಧಿಯನ್ನೂ ಸರಿಯಾಗಿ ಬಳಸುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾಡಳಿತದ ಮೌನದಿಂದ ರೋಸಿಹೋಗಿರುವ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಹೋರಾಟಕ್ಕಿಳಿದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿದ ಮುಸ್ಲಿಂ ಸ್ನೇಹಿತೆಯರು – Kannada News | Uttar Pradesh: Was It Choice or Influence Student’s Dress Decision Draws Attention

ಲಕ್ನೋ, ಜನವರಿ 16: ಮುಸ್ಲಿಂ ಸ್ನೇಹಿತೆಯರು ಹಿಂದೂ ಹುಡುಗಿಗೆ ಬುರ್ಖಾ ತೊಡಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಕೋಚಿಂಗ್ ಕ್ಲಾಸ್​ನಿಂದ ಮನೆಗೆ ಹೊರಡುವಾಗ ಆಕೆಗೆ ಸ್ನೇಹಿತೆಯರು ಬುರ್ಖಾವನ್ನು ತಂದುಕೊಟ್ಟಿದ್ದು, ಆಕೆ ಧರಿಸಿರುವುದನ್ನು ಕಾಣಬಹುದು, ಆದರೆ ಅವರು ಬುರ್ಖಾ ಧರಿಸುವಂತೆ ಒತ್ತಡ ಹೇರಿದ್ದರೋ ಅಥವಾ ಆಕೆಯೇ ಇಷ್ಟ ಪಟ್ಟು ಧರಿಸಿದ್ದಾಳೋ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲ. ದಿ ತತ್ವ ಎನ್ನುವ ಎಕ್ಸ್​ ಅಕೌಂಟ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಹೊರ ಹೋದ್ಮೇಲೆ ಬ್ಲಾಕ್ ಮಾಡ್ತೀನಿ’; ಬ್ಲ್ಯಾಕ್​​ಮೇಲ್ ಮಾಡಿದ ಕಾವ್ಯಾಗೆ ತಿರುಗೇಟು ಕೊಟ್ಟ ಗಿಲ್ಲಿ – Kannada News | Block Me If You Dare Gilli Challenge to Kavya Bigg Boss Challenge

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಗೆಳೆತನ ಮೂಡಿದೆ. ಈ ಗೆಳೆತನದಲ್ಲಿ ವೀಕ್ಷಕರಿಗೆ ಪರಿಶುದ್ಧತೆ ಕಾಣುತ್ತಿದೆ. ಕಾವ್ಯಾಗೆ ಏನೇ ಆದರೂ ಗಿಲ್ಲಿ ಅಲ್ಲಿ ನಿಲ್ಲುತ್ತಾರೆ. ತಮ್ಮ ಗೆಳತಿಯ ಪರ ಧ್ವನಿ ಎತ್ತುತ್ತಾರೆ. ಆದರೆ, ಕಾವ್ಯಾ ಎಲ್ಲಾ ಸಂದರ್ಭದಲ್ಲೂ ಗಿಲ್ಲಿ ಪರ ನಿಂತಿದ್ದಾರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂಬ ಉತ್ತರ ಸಿಗುತ್ತದೆ. ಸ್ವತಃ ಕಾವ್ಯಾಗೆ ಹಾಗೆ ಅನಿಸಿದೆ. ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ವಿಷಯದಲ್ಲಿ ಗಿಲ್ಲಿ ಬಳಿ ಅವರು ಕ್ಷಮೆ ಕೇಳಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಕೊನೆಯ ವಾರ ಇದು. ಈ ಕಾರಣದಿಂದಲೇ ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದರು. ಸೀಸನ್ ಉದ್ದಕ್ಕೂ ಯಾವುವಾದರೂ ಸ್ಪರ್ಧಿಯನ್ನು ನೋಯಿಸಿದ್ದರೆ ಅದಕ್ಕೆ ಕ್ಷಮೆ ಕೇಳಬೇಕು. ಗಿಲ್ಲಿ ನಟ ಅವರಿಗೆ ನೋವು ಮಾಡಿದಂತೆ ಕಾವ್ಯಾಗೆ ಅನಿಸಿದೆ. ಹೀಗಾಗಿ, ಅವರು ಕ್ಷಮೆ ಕೇಳಿದ್ದಾರೆ. ಈ ವೇಳೆ ಹೊರ ಹೋದ್ಮೇಲೆ ಬ್ಲಾಕ್ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದ್ದಾರೆ.

‘ಬೇಜಾರು ಮಾಡಿದ್ದೀಯಾ ಎಂದು ನೀನು ಯಾವಾಗಲೂ ಹೇಳಿಕೊಂಡೇ ಇಲ್ಲ. ಹಾಗಂತ ನಾನು ನಿನಗೆ ಬೇಜಾರು ಮಾಡೇ ಇಲ್ಲ ಅಂತ ಅಲ್ಲ. ನೀನು ಹೇಳಿಲ್ಲ ಅಷ್ಟೇ. ಅದು ನಿನ್ನ ದೊಡ್ಡತನ ಇರಬಹುದು. ಇದು ಶೋ ಎಂಬುದನ್ನು ನೋಡದೇ ಸಾಕಷ್ಟು ಬಾರಿ ನಿನ್ನ ಅಹಂಗೆ ಪೆಟ್ಟು ಕೊಟ್ಟಿದ್ದೇನೆ. ಕೆಲವೊಮ್ಮೆ ನಿನ್ನನ್ನು ಬೇರೆಯವರ ಮುಂದೆ ಬಿಟ್ಟುಕೊಟ್ಟಿದ್ದೇನೆ. ಇದಕ್ಕೆಲ್ಲ ಕಾರಣ ಇತ್ತು. ಅದು ನಿನಗೂ ಗೊತ್ತು. ಗೆಳೆತಿಯಾಗಿ ಯೋಚಿಸಿದಾಗ ನಿನಗೆ ನೋವು ಮಾಡಿದ್ದೇನೆ. ಕ್ಷಮೆ ಇರಲಿ’ ಎಂದರು ಕಾವ್ಯಾ.

ಇದನ್ನೂ ಓದಿ: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಧ್ರುವಂತ್ ಔಟ್; ಕಿಚ್ಚನ ಚಪ್ಪಾಳೆಯೇ ಮುಳುವಾಯ್ತಾ?
ಆ ಬಳಿಕ ಕಾವ್ಯಾ ಅವರು ಗಿಲ್ಲಿಗೆ ಬ್ಲ್ಯಾಕ್​ಮೇಲ್ ಮಾಡುವ ಪ್ರಯತ್ನ ಮಾಡಿದರು. ‘ಇನ್ನು ಉಳಿದುಕೊಂಡಿರೋದು ಕೆಲವೇ ದಿನ ಮಾತ್ರ. ಇನ್ನಾದರೂ ರೇಗಿಸೋದನ್ನು ನಿಲ್ಲಿಸು. ಇಲ್ಲವಾದಲ್ಲಿ ಹೊರಗೆ ಹೋಗುತ್ತಿದ್ದಂತೆ ನಿನ್ನ ಬ್ಲಾಕ್ ಮಾಡೋದಂತೂ ಪಕ್ಕಾ’ ಎಂದು ಕಾವ್ಯಾ ಹೇಳಿದರು. ಆಗ ಗಿಲ್ಲಿ, ‘ನಾನು ಕಾಯ್ತಾ ಇದೀನಿ. ಧೈರ್ಯ ಇದ್ರೆ ಮಾಡು’ ಎಂದು ಸವಾಲು ಹಾಕಿದರು. ಸದ್ಯ ಈ ವಿಷಯ ಚರ್ಚೆಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:15 am, Fri, 16 January 26

Source link

ಬೆಂಗಳೂರಿನ ಚಿಣ್ಣರಿಗೆ ಹೊಸ ಹಾಟ್‌ಸ್ಪಾಟ್! ಕಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್ – Kannada News | Bengaluru’s Cubbon Park Bal Bhavan Gets Rs.1.5 Cr Olympic Level Skating Park by May

ಬ್ಬನ್ ಪಾರ್ಕ್​ ಬಾಲಭವನದಲ್ಲಿ ಆರಂಭವಾಗಲಿದೆ ಸ್ಕೇಟಿಂಗ್ ಬೋರ್ಡ್ ಪಾರ್ಕ್

ಬೆಂಗಳೂರು, ಜನವರಿ 16: ನೈಸರ್ಗಿಕ ಸೌಂದರ್ಯದಿಂದ ಮನಸೂರೆಗೊಳ್ಳುವ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಬಾಲಭವನವು ಚಿಣ್ಣರು ಹಾಗೂ ಯುವಕರಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ವಾರಾಂತ್ಯಗಳಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭೇಟಿ ನೀಡುವ ಈ ಸ್ಥಳದಲ್ಲಿ ಈಗ ಮತ್ತೊಂದು ಪ್ರಮುಖ ಆಕರ್ಷಣೆ ಸೇರ್ಪಡೆಯಾಗಲು ಸಿದ್ಧವಾಗಿದೆ. ಬಾಲಭವನದಲ್ಲಿ ಅತಿ ಶೀಘ್ರದಲ್ಲೇ ಆಧುನಿಕ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ.

ಒಂದೂವರೆ ಕೋಟಿ ವೆಚ್ಚದ ಪ್ರಾಜೆಕ್ಟ್

ಬಾಲಭವನ ಸೊಸೈಟಿ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಕೇಟಿಂಗ್ ಬೋರ್ಡ್ ಪಾರ್ಕ್ ನಿರ್ಮಾಣವಾಗಲಿದೆ. ವಿಶ್ವೇಶ್ವರಯ್ಯ ಮ್ಯೂಸಿಯಂ ಹಿಂಭಾಗದಲ್ಲಿರುವ ಬೋಟಿಂಗ್ ಪ್ರದೇಶದ ಬಳಿ, ಬಾಲಭವನದ ಅರ್ಧ ಎಕರೆ ಜಾಗದಲ್ಲಿ ಈ ಪಾರ್ಕ್ ರೂಪುಗೊಳ್ಳಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಿರ್ಮಾಣವಾಗುವ ಈ ಸ್ಕೇಟಿಂಗ್ ಪಾರ್ಕ್‌ನಲ್ಲಿ ಒಂದೇ ಸಮಯದಲ್ಲಿ ಸುಮಾರು 40 ಮಂದಿ ಸ್ಕೇಟಿಂಗ್ ಬೋರ್ಡ್ ಬಳಸುವ ಅವಕಾಶವಿರಲಿದೆ. ಒಲಿಂಪಿಕ್ಸ್ ಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ ವಿನ್ಯಾಸಗೊಳ್ಳುತ್ತಿದ್ದು, ಐದು ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಮೇ ನಂತರ ಪಾರ್ಕ್​ ಲೋಕಾರ್ಪಣೆ

ಜನವರಿಯ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದ್ದು, ಮೇ ತಿಂಗಳ ವೇಳೆಗೆ ಸ್ಕೇಟಿಂಗ್ ಪಾರ್ಕ್‌ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ. ಬಾಲಭವನದಲ್ಲಿ ಮತ್ತೊಂದು ಕ್ರೀಡಾ ಚಟುವಟಿಕೆ ಆರಂಭವಾಗುತ್ತಿರುವುದು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 8:45 am, Fri, 16 January 26

Source link

ಬೆಂಗಳೂರೇ ಬೇಡ, ಚಿನ್ನಸ್ವಾಮಿಯಲ್ಲಿ ಪಂದ್ಯವಾಡಲ್ಲ ಅಂತಿದೆ RCB! ಅಭಿಮಾನಿಗಳಿಗೆ ನಿರಾಸೆ, KSCAಗೆ ಶಾಕ್ – Kannada News | RCB Likely to Skip Chinnaswamy Stadium Matches, Leaving Fans and KSCA Disappointed

ಬೆಂಗಳೂರು, ಜನವರಿ 16: ಕಳೆದ ವರ್ಷ ಜೂನ್ ನಾಲ್ಕರಂದು ಆರ್​ಸಿಬಿ (RCB) ಅಭಿಮಾನಿಗಳಿಗೆ ಅತ್ಯಂತ ಕೆಟ್ಟ ಘಳಿಗೆ. ಟ್ರೋಫಿ ಗೆದ್ದ ಖುಷಿ ಅರೆ ಕ್ಷಣದಲ್ಲಿ ಮಾಯವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನ ಅವ್ಯವಸ್ಥೆ, ಪೊಲೀಸರ ನಿರ್ಲಕ್ಷ್ಯ, ಸರ್ಕಾರದ ಬೇಜವಬ್ದಾರಿಗೆ 11 ಜನ ಮೃತಪಟ್ಟಿದ್ದರು. ಆ ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಮತ್ತೆ ಹಳೆ ವೈಭವವನ್ನು ಕಾಣಲು ಸಾಧ್ಯವಾಗದೆ ಪರದಾಡುತ್ತಾ ಇದೆ. ಕೆಎಸ್​ಸಿಎ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕೂಡ ಭರವಸೆ ಕೊಟ್ಟಿದ್ದರು. ಆದರೆ KSCAಗೆ ಆರ್​ಸಿಬಿ ಮ್ಯಾನೇಜ್​ಮೆಂಟ್ ಸಡನ್ ಶಾಕ್ ನೀಡಿದೆ.

ಕಾಲ್ತುಳಿತ ಪ್ರಕರಣದಲ್ಲಿ ಆರ್​ಸಿಬಿ ಮ್ಯಾನೇಜ್ಮೆಂಟ್ ಪ್ರಮುಖ ಆರೋಪಿ ಸ್ಥಾನದಲ್ಲಿದೆ‌. ಅಲ್ಲದೆ ಉಪಾಧ್ಯಕ್ಷ ರಾಜೇಶ್ ಮೆನನ್​​ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಅಲ್ಲದೆ ಆರ್​ಸಿಬಿ ಮ್ಯಾನೇಜ್ಮೆಂಟ್ ಮೇಲೆ ಈ ಘಟನೆ ಕಪ್ಪು ಚುಕ್ಕೆ ತಂದಿಟ್ಟಿತ್ತು. ಈ ಹಿನ್ನಲೆ ರಾಜೇಶ್ ಮೆನನ್ ಚಿನ್ನಸ್ವಾಮಿ ಸಹವಾಸ ಬೇಡ ಅಂದಿದ್ದಾರೆ. ನಾವು ರಾಯಪುರ್ ಅಥವಾ ನವೀ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ಹೋಮ್ ಗ್ರೌಂಡ್ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಆರ್​ಸಿಬಿ ಪಂದ್ಯ ಚಿನ್ನಸ್ವಾಮಿಯಿಂದ ದೂರವಾದ್ರೆ ಕೆಎಸ್​ಸಿಎಗೆ ಇದು ದೊಡ್ಡ ನಷ್ಟ.

ಚಿನ್ನಸ್ವಾಮಿ ಸ್ಟೇಡಿಯಂ ಕಾಮಗಾರಿಗಳ ಪರಿಶೀಲಿಸಿದ ಪೊಲೀಸ್ ಆಯುಕ್ತ

ಪೊಲೀಸ್ ಕಮಿಷನರ್ ಒಳಗೊಂಡು ಗುರುವಾರ ಸಭೆ ಕೂಡ ಮಾಡಲಾಗಿದೆ‌. ಪೊಲೀಸ್ ಇಲಾಖೆ ಈಗಾಗಲೆ 17 ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು KSCAಗೆ ಸೂಚನೆ ಕೊಟ್ಟಿತ್ತು. ಅದರ ಕಾಮಗಾರಿಯನ್ನು ಈಗಾಗಲೆ KSCA ಶುರುಮಾಡಿಕೊಂಡಿದೆ‌. ಗುರುವಾರದ ಸಭೆಯ ನಂತರ, ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಕಮಿಷನರ್ ಪರಿಶೀಲನೆ ನಡೆಸಿದ್ದಾರೆ. ಸಭೆಯಲ್ಲಿ ಜಿಬಿಎ, ಅಗ್ನಿಶಾಮಕ, BWSSB, ಬೆಸ್ಕಾಂ ಅಧಿಕಾರಿಗಳು ಬಾಗಿಯಾಗಿದ್ದರು. ಹೇಗಾದ್ರೂ ಮಾಡಿ ಸಮಸ್ಯೆ ಬಗೆಹರಿಸಿಕೊಂಡು ಆರ್​ಸಿಬಿ ಪಂದ್ಯವನ್ನು ಚಿನ್ನಸ್ವಾಮಿಯಲ್ಲಿ ಆಡಿಸಲು KSCA ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮುಳುವಾದ ಆರ್​ಸಿಬಿ ಬಾಯ್ಸ್; ಟೂರ್ನಿಯಲ್ಲಿ ಮೊದಲ ಸೋಲು

ಒಟ್ಟಾರೆ ಈ ವರ್ಷ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಪಂದ್ಯವಾಡುವುದು ಬಹುತೇಕ ಅನುಮಾನ. ವ್ಯವಸ್ಥೆ ಸರಿ ಇಲ್ಲ, ಏನಾದರೂ ಆದರೆ ನಾವೇ ಹೊಣೆಯಾಗುತ್ತೇವೆ ಎಂಬ ಭಯ ಆರ್​ಸಿಬಿ ಮ್ಯಾನೇಜ್ಮೆಂಟ್ ಹಿಂದಿದೆ. ಈ ನಡುವೆ KSCA ಮಾತ್ರ ಎಲ್ಲಾ ಸಮಸ್ಯೆ ಕ್ಲಿಯರ್ ಮಾಡಿ ಆರ್​ಸಿಬಿ ಮ್ಯಾನೇಜ್ಮೆಂಟ್ ಮನವೊಲಿಸುವ ಕೆಲಸ ಮಾಡುತ್ತಾ ಇದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link