ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ? ಇಲ್ಲಿದೆ ವಿವರಣೆ
ಹಿಂದೂ ಸನಾತನ ಧರ್ಮದಲ್ಲಿ ಪಾಪ ಕರ್ಮಗಳನ್ನು ಕಳೆಯಲು, ಕಷ್ಟಗಳನ್ನು ನಿವಾರಿಸಲು ಮತ್ತು ಭಗವಂತನ ಸಂತೃಪ್ತಿಗಾಗಿ ಯಜ್ಞ, ಯಾಗಾದಿ ಹೋಮ ಹವನಗಳನ್ನು ನಡೆಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಹೋಮಗಳಿಗೆ ನಿರ್ದಿಷ್ಟ ಸಮಿಧೆ ಅಥವಾ ಸಮಿತ್ತುಗಳನ್ನು (ಪವಿತ್ರ ಮರದ ತುಂಡುಗಳು) ಬಳಸಲಾಗುತ್ತದೆ. ಹೋಮ ಹವನಗಳ ಸಂಪೂರ್ಣ ಫಲ ಪ್ರಾಪ್ತಿಗಾಗಿ, ಯಜ್ಞವನ್ನು ನಡೆಸುವ ಕರ್ತನು ಕನಿಷ್ಠ ಒಂದೆರಡು ಸಮಿತ್ತುಗಳನ್ನಾದರೂ ಸ್ವತಃ ತನ್ನ ಕೈಯಾರೆ ಸಂಗ್ರಹಿಸಿ ಅರ್ಪಿಸಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ ಎಂಬುದಾಗಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು…