Category Archives: Blog

Your blog category

ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ನಿಂಬೆ ನೀರು ಕುಡಿಯುವುದು ಒಳ್ಳೆಯದೇ… ಇಲ್ಲಿದೆ ತಜ್ಞರ ಅಭಿಪ್ರಾಯ – Kannada News | Can Lemon Water Control High Blood Pressure? Expert Weighs In

ಅಧಿಕ ರಕ್ತದೊತ್ತಡ (High Blood Pressure) ಸಾಮಾನ್ಯ ಸಮಸ್ಯೆ ಅಲ್ಲವೇ ಅಲ್ಲ. ದೇಹದಲ್ಲಿ ಸದ್ದಿಲ್ಲದೆ ಹೆಚ್ಚಾಗಿ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಕ್ರಮೇಣ ಹೃದಯ, ಮೂತ್ರಪಿಂಡ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದಲ್ಲದೆ, ಅಧಿಕ ರಕ್ತದೊತ್ತಡವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ ರಕ್ತದೊತ್ತಡವನ್ನು ನಿಯಂತ್ರಿಸಲು ಕೆಲವರು ನಿಂಬೆ ನೀರು (Lemon Water) ಕುಡಿಯುತ್ತಾರೆ. ಅದರಲ್ಲಿಯೂ ನಿಂಬೆಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೂ ಒಳ್ಳೆಯದು. ಆದರೆ ಇದು ನಿಜವಾಗಿಯೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ… ಈ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಂಬೆ ನೀರು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆಯೇ?

ಎನ್ ಸಿ ಬಿ ಐ ಅಧ್ಯಯನಗಳ ಪ್ರಕಾರ, ನಿಂಬೆ ನೀರು ಅದರ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶದಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇವು ರಕ್ತನಾಳಗಳನ್ನು ಸಡಿಲಗೊಳಿಸುತ್ತವೆ ಮತ್ತು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತವೆ. ಆದರೆ ಇದು ಚಿಕಿತ್ಸೆಯಲ್ಲ, ಕೇವಲ ಪೋಷಕ ಆಹಾರ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. ಏಷ್ಯನ್ ಜರ್ನಲ್ ಆಫ್ ನರ್ಸಿಂಗ್ ಎಜುಕೇಶನ್ ಅಂಡ್ ರಿಸರ್ಚ್ – ನ್ಯಾರಿಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಲೋ ಬಿಪಿ ಹೈ ಬಿಪಿಯಷ್ಟೇ ಅಪಾಯಕಾರಿ! ಇದನ್ನು ನಿಯಂತ್ರಿಸಲು ಈ ಸುಲಭ ಆಹಾರಗಳನ್ನು ಪ್ರಯತ್ನಿಸಿ ನೋಡಿ

ನಿಂಬೆ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಸಿಟ್ರಸ್ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಇವು ಉತ್ಕರ್ಷಣ ನಿರೋಧಕ ಮತ್ತು ನಾಳೀಯ ಆರೋಗ್ಯಕ್ಕೆ ಸಂಬಂಧಿಸಿದ ಸಂಯುಕ್ತಗಳಾಗಿವೆ. ಅಷ್ಟೇ ಅಲ್ಲ, ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಹಾಗಾಗಿ ರಕ್ತ ಪರಿಚಲನೆಗೆ ಅಗತ್ಯವಾಗಿರುತ್ತದೆ.

ಜಲಸಂಚಯನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ: ನಿಂಬೆ ನೀರು ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ಇದು ಬಹಳ ಮುಖ್ಯ. ಅಷ್ಟೇ ಅಲ್ಲ, ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಆದ್ದರಿಂದ, ನಿಮಗೆ ಅಧಿಕ ರಕ್ತದೊತ್ತಡವಿದ್ದರೂ ಸಹ, ನೀವು ಈ ಪಾನೀಯವನ್ನು ನಿಯಮಿತವಾಗಿ ಕುಡಿಯಬಹುದು. ಆದರೆ, ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫ್ಯಾನ್ಸ್ ವಾರ್​​ ಬಗ್ಗೆ ನಟ ವಿನೋದ್ ರಾಜ್ ಮಾತು: ವಿಡಿಯೋ – Kannada News | Vinod Raj talks about ongoing Fans war

ಕನ್ನಡ ಚಿತ್ರರಂಗದಲ್ಲಿ (Sandalwood) ಪ್ರಸ್ತುತ ಫ್ಯಾನ್ಸ್ ವಾರ್ ಚರ್ಚೆ ಜೋರಾಗಿ ನಡೆಯುತ್ತಿದೆ. ‘ಮಾರ್ಕ್’ ಸಿನಿಮಾ ಇವೆಂಟ್​​ನಲ್ಲಿ ಸುದೀಪ್ ಅವರು ಪೈರಸಿ ಬಗ್ಗೆ, ಪೈರಸಿ ಮಾಡುವವರ ಬಗ್ಗೆ ಆಡಿದ ಮಾತುಗಳು ಫ್ಯಾನ್ಸ್ ವಾರ್​ಗೆ ನಾಂದಿ ಹಾಡಿದೆ. ದರ್ಶನ್ ಅಭಿಮಾನಿಗಳು ಸುದೀಪ್ ಮತ್ತು ಸುದೀಪ್ ಅಭಿಮಾನಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರ ಶುರು ಮಾಡಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಸಹ ದಾವಣಗೆರೆಯಲ್ಲಿ ಆಡಿರುವ ಮಾತುಗಳು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿವೆ. ಚಿತ್ರರಂಗದ ಹಿರಿಯ ನಟರಲ್ಲಿ ಒಬ್ಬರಾಗಿರುವ ವಿನೋದ್ ರಾಜ್ ಅವರು ಇದೀಗ ಪ್ರಸ್ತುತ ಚಾಲ್ತಿಯಲ್ಲಿರುವ ಫ್ಯಾನ್ಸ್ ವಾರ್​​ ಬಗ್ಗೆ ಮಾತನಾಡಿದ್ದಾರೆ, ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ; ಕಾರಣ ಇಲ್ಲಿದೆ

ಬೆಂಗಳೂರು, ಡಿಸೆಂಬರ್​​ 24: ನಗರದಲ್ಲಿ 50ಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಶಿಕ್ಷಣ ಸಂಸ್ಥೆಗಳು  ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದು, ಅನಧಿಕೃತವಾಗಿ ಬೋಧನೆ ನಡೆಸುತ್ತಿವೆ. ಇಂತಹ ಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಡಿಡಿಪಿಐ ಮತ್ತು ಬಿಇಒಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.  ಹೆಣ್ಣೂರು ರಸ್ತೆಯ ಯುರೋಸ್ಕೂಲ್, ಕಿಡ್ಸ್ ಕ್ಯಾಸಲ್ ಪೂರ್ವ ಪ್ರಾಥಮಿಕ ಶಾಲೆ ಸಿಂಗಸಂದ್ರ, ಯರೋ ಸ್ಕೂಲ್ ತಿಪ್ಪಸಂದ್ರ ಗುಂಜೂರು, ಗರೇಭಾವಿಪಾಳ್ಯದ ಅಪೋಲೊ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ನರ್ಸರಿ ಶಾಲೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸ್ಟಾರ್ ವಾರ್​​ಗಳ ನಡುವೆ ಸೂಪರ್ ಸ್ಟಾರ್ ಮಮ್ಮುಟಿಯ ಮಾತೊಮ್ಮೆ ಕೇಳಿ – Kannada News | Mammootty talks about stardom and how he wants to people recognize him

ಪ್ರಸ್ತುತ ಕರ್ನಾಟಕದಲ್ಲಿ ಫ್ಯಾನ್ಸ್ ವಾರ್ (Fans War) ಜೋರಾಗಿದೆ. ನಮ್ಮ ಸ್ಟಾರ್ ಗ್ರೇಟು, ನಿಮ್ಮ ಸ್ಟಾರು ಕಳಪೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಸ್ಟಾರ್​​ಗಳು ಅವರ ಆಪ್ತರು ಏನು ಕಡಿಮೆ ಇಲ್ಲ. ಅವರೂ ಸಹ ತಮ್ಮ ಸ್ಟಾರ್​​ ಗಿರಿಯನ್ನು ಅನವಶ್ಯಕ ಮಾತುಗಳ ಮೂಲಕ ಪ್ರದರ್ಶನಕ್ಕಿಡುತ್ತಿದ್ದಾರೆ. ತಮ್ಮ ಇಮೇಜು ಎಲ್ಲಿ ಮಂಕಾಗುತ್ತದೆಯೋ, ಜನ ಎಲ್ಲಿ ನಮ್ಮನ್ನು ಕಡೆಗಣಿಸಿಬಿಡುತ್ತಾರೆಯೋ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇಂಥಹಾ ಸಂದರ್ಭದಲ್ಲಿ ಭಾರತದ ಅಪ್ರತಿಮ ನಟರಲ್ಲಿ ಒಬ್ಬರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಮಮ್ಮುಟಿಯ ಮಾತುಗಳನ್ನು ಎಲ್ಲ ‘ಇಮೇಜು ಹುಚ್ಚಿನ’ ಸ್ಟಾರ್ ನಟರು ಕೇಳಿಸಿಕೊಳ್ಳಲೇ ಬೇಕು….

ಈಗ ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದೊಂದು ಅಡ್ಡ ಹೆಸರುಗಳಿವೆ, ಒಬ್ಬರು ರಿಯಲ್ ಸ್ಟಾರ್, ಇನ್ನೊಬ್ಬರು ಸೂಪರ್ ಸ್ಟಾರ್, ಮತ್ತೊಬ್ಬರು ಇನ್ನೊಂದು ಸ್ಟಾರ್ ಹೀಗೆ. ಒಟ್ಟಾರೆ ಜನ ತಮ್ಮನ್ನು, ತಮ್ಮ ಹೆಸರನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಅವರ ಸುಪ್ತ ಆಸೆ. ಇದೇ ಪ್ರಶ್ನೆಯನ್ನು ಸಂದರ್ಶಕನೊಬ್ಬ ಮಮ್ಮುಟಿ ಅವರಿಗೆ ಇತ್ತೀಚೆಗೆ ಕೇಳಿದ್ದಾರೆ. ‘ನಿಮಗೆ 74 ವರ್ಷ ಎಲ್ಲರೂ ಒಂದು ಹಂತಕ್ಕೆ ಬಂದ ಬಳಿಕ, ಇನ್ನು ಸಾಕು ಎಂದುಕೊಳ್ಳುತ್ತಾರೆ, ನಿಮಗೆ ಹಾಗೆ ಅನ್ನಿಸುತ್ತದೆಯೇ? ಎಂಬುದು ಸಂದರ್ಶಕನ ಪ್ರಶ್ನೆ.

‘ನನಗೆ ಸಾಕು ಎನಿಸುವುದಿಲ್ಲ, ನನಗೆ ದಣಿವು ಎನಿಸುವುದಿಲ್ಲ, ನನಗೆ ದಣಿವು ಎನಿಸಿದಾಗ ಅದೇ ನನ್ನ ಕೊನೆಯ ಉಸಿರಾಗುತ್ತದೆ. ನಾನು ಕೆಲಸ ಮಾಡುತ್ತಲೇ ಕೊನೆ ಉಸಿರೆಳೆಯಲು ಇಷ್ಟ ಪಡುತ್ತೀನಿ’ ಎನ್ನುತ್ತಾರೆ ಮಮ್ಮುಟಿ. ಕೂಡಲೇ ಸಂದರ್ಶಕ, ‘ನೀವು ಕೊನೆಯ ಉಸಿರಿನ ಬಗ್ಗೆ ಮಾತನಾಡಿದ್ದೀರಿ, ನೀವು ಹೋದ ಮೇಲೆ ಜನ ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ನೀವು ಬಯಸಿದ್ದೀರಿ’ ಎನ್ನುತ್ತಾರೆ. ಮಮ್ಮುಟಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಇಂಥಹಾ ಒಂದು ಪ್ರಶ್ನೆಯನ್ನು ಸಂದರ್ಶಕ ಮಮ್ಮುಟಿ ಅವರಿಗೆ ಕೇಳುತ್ತಾರೆ. ಆಗ ಮಮ್ಮುಟಿ ಕೊಟ್ಟ ಉತ್ತರ ಸಂದರ್ಶಕನ ಕಣ್ಣಲ್ಲಿ ನೀರು ತರಿಸಿದೆ.

ಇದನ್ನೂ ಓದಿ:ಮಮ್ಮುಟಿ ಮೇಲೆ ಗಂಭೀರ ಆರೋಪ ಮಾಡಿದ ನಟ ಪರೇಶ್ ರಾವಲ್

‘ಎಷ್ಟು ಕಾಲ ಜನ ನೆನಪಿಟ್ಟುಕೊಳ್ಳುತ್ತಾರೆ. ಒಂದು ವರ್ಷ, ಹತ್ತು ವರ್ಷ, ಹದಿನೈದು ವರ್ಷ ಅಷ್ಟೆ. ಪ್ರಪಂಚ ಇರುವವರೆಗೆ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದು ಆಶಿಸುವುದು ತಪ್ಪು. ಅದು ಯಾವ ಮಹನೀಯರಿಗೂ ಆಗಿಲ್ಲ. ಎಂತೆಥ ಮಹನೀಯರನ್ನೇ ಜನ ಸ್ಮರಿಸಿಕೊಂಡಿದ್ದು ಬಹಳ ಕಡಿಮೆ ಕಾಲಕ್ಕೆ. ಕಡಿಮೆ ಸಂಖ್ಯೆಯ ಮಹನೀಯರಷ್ಟೆ ಈಗಲೂ ಜನಸ್ಮೃತಿಯಲ್ಲಿದ್ದಾರೆ. ಎಷ್ಟೋ ಸಾವಿರಾರು ಅದ್ಭುತವಾದ ನಟರು ಇದ್ದರು, ಈಗಲೂ ಇದ್ದಾರೆ ಅವರಲ್ಲಿ ನಾನೂಬ್ಬ ಅಷ್ಟೆ. ಅಷ್ಟೋಂದು ನಟರ ನಡುವೆ ಜನ ಹೇಗೆ ನನ್ನನ್ನು ನೆನಪಿಟ್ಟುಕೊಂಡಾರು. ನಾನೇ ಈ ಜಗತ್ತಿನಲ್ಲಿ ಇಲ್ಲವಾದ ಮೇಲೆ ಜನ ನೆನಪಿಟ್ಟುಕೊಳ್ಳಬೇಕೆಂಬ ಅಪೇಕ್ಷೆ ಏಕೆ? ಅದೂ ಜಗತ್ತು ಇರುವ ವರೆಗೆ. ಆ ನಿರೀಕ್ಷೆಯೇ ಸರಿಯಲ್ಲ’ ಎಂದಿದ್ದಾರೆ ಮಮ್ಮುಟಿ.

ಮಹಾನ್ ನಟನೊಬ್ಬ, ಸ್ಟಾರ್ ಗಿರಿಯನ್ನು ಎಳ್ಳಷ್ಟು ತಲೆಗೆ ಹತ್ತಿಸಿಕೊಳ್ಳದೆ, ಇಷ್ಟು ಸರಳವಾಗಿ ನಿರ್ಗಮನದ ಬಗ್ಗೆ ಆಡಿದ ಮಾತುಗಳನ್ನು ಕೇಳಿ ಸಂದರ್ಶಕ ಕಣ್ಣೀರು ಹಾಕಿದ್ದಾರೆ. ಖಲೈದ್ ಅಲ್ ಅಮೆರಿ ಅವರ ಯೂಟ್ಯೂಬ್ ಅವರ ಚಾನೆಲ್​​ನಲ್ಲಿ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಕ್ಲು ಶಿವ ಕೊಲೆ ಕೇಸ್​​ನಲ್ಲಿ BJP ಶಾಸಕ  ಭೈರತಿ ಬಸವರಾಜ್​​ಗೆ ಮತ್ತಷ್ಟು ಸಂಕಷ್ಟ?

ಬೆಂಗಳೂರು, ಡಿಸೆಂಬರ್​​ 24: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಭೈರತಿ ಬಸವರಾಜ್​ ಸೇರಿ ಉಳಿದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೋಕಾ ಕಾಯ್ದೆಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೊರೆ ಹೋಗಲು ಅನುಮತಿ ಕೇಳಿ ಸಿಐಡಿ ಮಾಡಿದ್ದ ಮನವಿಗೆ ಗೃಹ ಇಲಾಖೆ ಹಸಿರು ನಿಶಾನೆ ತೋರಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸುತ್ತದೆ ಎಂದು ತೀರ್ಪು ನೀಡಿದರೆ, ಭೈರತಿ ಬಸವರಾಜ್ ಸೇರಿದಂತೆ ಇತರ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಾರುಕಟ್ಟೆಯನ್ನು ಪ್ರಭಾವಿಸುವ ಗ್ರಾಹಕ ಅಭ್ಯಾಸಗಳು; ಒಂದು ಅವಲೋಕನ – Kannada News | The Impact of Fluctuations: How Consumer Habits Influence Market Movements

ಬಜಾಜ್ ಫಿನ್​ಸರ್ವ್ ಎಎಂಸಿಯ ಸೌರಭ್ ಗುಪ್ತಾ

ಭಾರತದ ಬೆಳವಣಿಗೆಯ ಕಥೆಯಲ್ಲಿ ಗ್ರಾಹಕ ಅಥವಾ ಅನುಭೋಗಿಯೇ ಸೂತ್ರಧಾರ. ತುಂಬಿತುಳುಕುತ್ತಿರುವ ಮಾಲ್​ಗಳಿಂದ ಹಿಡಿದು, ಗಿಜಿಗಿಜಿಗುಡುತ್ತಿರುವ ಇ-ಕಾಮರ್ಸ್​ವರೆಗೆ ಈ ಅನುಭೋಗ ಅಥವಾ ಕನ್ಸಮ್ಷನ್ ಸೆಕ್ಟರ್ ಉತ್ತಮವಾಗಿ ಬೆಳೆಯುತ್ತಿದೆ. ಜನರ ಆದಾಯದಲ್ಲಿ ಹೆಚ್ಚಳ ಆಗುತ್ತಿರುವುದು, ವೇಗವಾಗಿ ನಗರೀಕರಣ ಆಗುತ್ತಿರುವುದು, ಜೀವನಶೈಲಿಯಲ್ಲಿ ಬದಲಾವಣೆ ಆಗುತ್ತಿರುವುದು ರಚನಾತ್ಮಕವಾಗಿ ಪುಷ್ಟಿ ಕೊಡುತ್ತಿದೆ. ಭಾರತೀಯ ಆರ್ಥಿಕತೆಯಲ್ಲಿ ಅನುಭೋಗಕ್ಕೆ ಪ್ರಾಧಾನ್ಯ ಸ್ಥಾನ ಸಿಗುವಂತೆ ಮಾಡಿದೆ. ಅನುಭೋಗ ಶಕ್ತಿಯಿಂದ ನಡೆಯುವ ಬ್ಯುಸಿನೆಸ್​ಗಳು ಈ ಒಂದು ಟ್ರೆಂಡ್​ನ ಲಾಭ ಪಡೆಯುತ್ತಿವೆ.

ಇಲ್ಲಿ ಒಂದು ಕುತೂಹಲಕಾರಿ ಅಂಶ ಗಮನಿಸಬೇಕು: ಹೂಡಿಕೆದಾರರು ಈ ಸೆಕ್ಟರ್​ನಲ್ಲಿ ಹಣ ತೊಡಗಿಸುವುದು ಮಾತ್ರವಲ್ಲ, ಅನುಭೋಗಿಗಳಾಗಿ ಪ್ರತೀ ದಿನ ಅದರಲ್ಲಿ ಭಾಗಿಯಾಗುತ್ತಿರುತ್ತಾರೆ. ಸ್ಮಾರ್ಟ್​ಫೋನ್ ಖರೀದಿಸುವುದು, ಕಾಫಿ ಕುಡಿಯುವುದು, ಆರ್ಗ್ಯಾನಿಕ್ ದಿನಸಿ ವಸ್ತುಗಳನ್ನು ಖರೀದಿಸುವುದು ಇವೆಲ್ಲವೂ ಕೂಡ ಅವರು ಹೂಡಿಕೆ ಮಾಡಿರುವ ಅನುಭೋಗ ಸೆಕ್ಟರ್​ಗೆ ಬರುತ್ತವೆ. ವ್ಯಕ್ತಿಗಳಿಗೆ ಇದು ಎರಡು ಪಾತ್ರ ಸೃಷ್ಟಿಸುತ್ತದೆ. ಈ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳು. ನಿರ್ಧಾರ ಮತ್ತು ಪೋರ್ಟ್​ಫೋಲಿಯೋ ರಿಸಲ್ಟ್ ಎರಡನ್ನೂ ಪ್ರಭಾವಿಸುವಂಥವು.

ಒಂದು ಕಡೆ, ಹೂಡಿಕೆದಾರರು ಅನುಭೋಗವನ್ನು ಅವಕಾಶದ ಕಣ್ಣಿನಿಂದ ನೋಡಬಹುದು. ಉತ್ತಮ ಫಂಡಮೆಂಟಲ್ಸ್ ಇರುವ ಮತ್ತು ಹೆಚ್ಚು ವ್ಯಾಪಿಸಬಲ್ಲ ಬ್ಯುಸಿನೆಸ್ ಮಾಡಲ್ ಹೊಂದಿರುವ ಕಂಪನಿಗಳನ್ನು ಹೂಡಿಕೆದಾರರು ಹೆಕ್ಕುತ್ತಾರೆ. ಮತ್ತೊಂದು ಕಡೆ, ಗ್ರಾಹಕರು ತಮ್ಮ ಭಾವನೆ, ಅಭಿಲಾಷೆ, ಅನುಕೂಲತೆಯ ಆಧಾರದ ಮೇಲೆ ಕನ್ಸಂಪ್ಷನ್ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಎರಡು ಅಂಶಗಳು ಮಿಳಿತಗೊಳ್ಳುವುದರಿಂದ ಹೊಸ ಚಲನಶೀಲತೆಯನ್ನು ಸೃಷ್ಟಿಸಬಹುದು. ಆದರೆ, ಅದನ್ನು ಸರಿಯಾಗಿ ಗ್ರಹಿಸದೇ ಹೋದಲ್ಲಿ ತಪ್ಪಾದ ನಿರ್ಧಾರಕ್ಕೆ ಕಾರಣವಾಗಬಹುದು.

ಹೂಡಿಕೆದಾರರು ತಾವು ಪದೇ ಪದೇ ಬಳಸುವ ಬ್ರ್ಯಾಂಡ್​ಗಳತ್ತ ಹೆಚ್ಚು ವಾಲುವುದುಂಟು. ಈ ಬ್ರ್ಯಾಂಡ್​ಗಳು ಬಹಳ ಪರಿಚಿತ ಹಾಗೂ ಸುರಕ್ಷಿತ ಭಾವನೆ ಮೂಡಿಸುವುದು ಇದಕ್ಕೆ ಕಾರಣ. ದಿನನಿತ್ಯದ ಅನುಭವವು ಆ ಬ್ಯುಸಿನೆಸ್ ಬಗ್ಗೆ ವಿಶ್ವಾಸ ಮೂಡಿಸಬಹುದು. ಆ ಕಂಪನಿಯ ಮೂಲಭೂತ ಅಂಶಗಳು ನಿರಾಸೆ ಮೂಡಿಸುವಂತಿದ್ದರೂ ಈ ವಿಶ್ವಾಸ ಗಟ್ಟಿಯಾಗಿರುತ್ತದೆ. ಇದು ಒಂದು ಸಮಸ್ಯೆ.

ಇದಕ್ಕೆ ಒಂದು ಉದಾಹರಣೆ ನೋಡೋಣ. ಒಬ್ಬ ವ್ಯಕ್ತಿ ಪ್ರತೀ ವಾರ ಒಂದೇ ಬ್ರ್ಯಾಂಡ್​ನ ಚಿಪ್​ಗಳನ್ನು ಖರೀದಿಸುತ್ತಿರುತ್ತಾನೆ. ಅಥವಾ ಅದೇ ಬ್ರ್ಯಾಂಡ್​ನ ಬಟ್ಟೆಯನ್ನು ಖರೀದಿಸುತ್ತಿರುತ್ತಾನೆ. ಅವನಿಗೆ ಆ ಬ್ರ್ಯಾಂಡ್ ಇಷ್ಟವಾಗಿರುತ್ತದೆ. ಆ ಕಂಪನಿಯೂ ಕೂಡ ಉತ್ತಮವಾಗಿರುತ್ತದೆ ಎಂಬುದು ಅವರ ಪೂರ್ವಗ್ರಹ ಪ್ರಭಾವಿತ ಅನಿಸಿಕೆ ಆಗಿರುತ್ತದೆ. ಈ ಭಾವನೆಯು ವೈಯಕ್ತಿಕ ಅನುಭೋಗವನ್ನು ಪ್ರತಿಫಲಿಸುತ್ತದೆ. ಆದ ಮಾತ್ರಕ್ಕೆ ಕಂಪನಿಯ ಗಳಿಕೆ, ಗುರಿ, ಬೆಳವಣಿಗೆ ಇವುಗಳನ್ನು ಪ್ರತಿಫಲಿಸುವುದಿಲ್ಲ ಎಂಬುದು ತಿಳಿದಿರಲಿ.

ಇದು ಇಲ್ಲಿಗೇ ನಿಲ್ಲುವುದಿಲ್ಲ. ದೃಢೀಕರಣ ಪಕ್ಷಪಾತಕ್ಕೆ (ಕನ್ಫರ್ಮೇಶನ್ ಬಯಾಸ್) ಪರಿಚಿತತೆಯು ಮೊದಲ ಹಂತವಾಗಿರುತ್ತದೆ. ಮನಸ್ಸು ಅನುಕೂಲಕರ ದೃಷ್ಟಿಕೋನವನ್ನು ರೂಪಿಸಿದ ನಂತರ, ಅದು ಹೊಸ ಉತ್ಪನ್ನ ಬಿಡುಗಡೆಗಳು, ಬಲವಾದ ಗೋಚರತೆ ಅಥವಾ ಸೆಲೆಬ್ರಿಟಿ ಅನುಮೋದನೆಯಂತಹ ಆಯ್ಕೆ ಮಾಡುವ ಮನೋಭಾವಕ್ಕೆ ನಾಂದಿಯಾಗುತ್ತದೆ, ಆದರೆ ಮಾರ್ಜಿನ್ ಒತ್ತಡ, ಸ್ಪರ್ಧಾತ್ಮಕ ತೀವ್ರತೆ ಅಥವಾ ವಿಭಿನ್ನತೆಯನ್ನು ಹೇಳಬಹುದಾದ ವಿಸ್ತೃತ ಮೌಲ್ಯಮಾಪನಗಳಂತಹ ಅಂಶಗಳನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಮಾರಾಟದ ಪ್ರಮಾಣವನ್ನು ಸಂಪೂರ್ಣವಾಗಿ ಬೆಂಬಲಿಸದಿದ್ದರೂ ಸಹ, ವೈಯಕ್ತಿಕ ಆದ್ಯತೆಯು ಹೂಡಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸಬಹುದು. ವಸ್ತುನಿಷ್ಠ ವಿಶ್ಲೇಷಣೆಯಲ್ಲಿ ಆಧಾರದ ಮೇಲೆ ಹೂಡಿಕೆ ನಡೆಯದೇ ಇರಬಹುದು.

ಪ್ರಯೋಗ ಪಕ್ಷಪಾತದ ಪಾತ್ರವೂ ಇರುತ್ತದೆ. ಅದರಲ್ಲೂ ಪ್ರಯೋಗಶೀಲತೆಯು ಲಭ್ಯ ಇದ್ದಾಗ ಇದು ಆಗುತ್ತದೆ. ಜನಪ್ರಿಯವಾಗಿರುವ ಬ್ರ್ಯಾಂಡ್, ಅಥವಾ ದುಬಾರಿ ಬೆಲೆಯ ಉತ್ಪನ್ನವು ಆ ಕಂಪನಿಗೆ ಉತ್ತಮ ಫಂಡಮೆಂಟಲ್ಸ್ ಇರಬಹುದು ಎಂದು ಹೂಡಿಕೆದಾರರು ಭಾವಿಸಿಬಿಡುವುದುಂಟು. ಹೀಗಾಗಿ, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಅಥವಾ ಕಣ್ಣಿಗೆ ಬೀಳುವ ಕಂಪನಿಗಳ ಬಗ್ಗೆ ಹೂಡಿಕೆದಾರರಿಗೆ ಒಲವು ಹೆಚ್ಚಿರುತ್ತದೆ. ಎಲೆಮರೆ ಕಾಯಿಯಂತಿರುವ, ಆದರೆ ಫಂಡಮೆಂಟಲ್ಸ್ ಉತ್ತಮವಾಗಿರುವ ಕಂಪನಿಗಳನ್ನು ಅವರು ನಿರ್ಲಕ್ಷಿಸುವುದುಂಟು.

ಇದರಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು. ಒಂದೇ ಒಂದು ಕಳಪೆ ವಿತರಣೆ ಅಥವಾ ನಿರಾಶಾದಾಯಕ ಉತ್ಪನ್ನದ ಮಾರಾಟವು ಹೂಡಿಕೆದಾರನು ತಾನು ನಂಬಿದ್ದ ಕಂಪನಿಯಿಂದ ದೂರ ಸರಿಯುವುದಕ್ಕೆ ಪ್ರೇರಕವಾಗಬುದು. ಇಲ್ಲಿ, ಇತ್ತೀಚಿನ ಘಟನೆಯು ದೀರ್ಘಕಾಲೀನ ಕಾರ್ಯಕ್ಷಮತೆಯನ್ನು ಮರೆಮಾಡುತ್ತದೆ, ಸಾಕ್ಷ್ಯದಿಂದ ಭಾವನೆಗಳಲ್ಲಿ ಬದಲಾವಣೆಯಾಗುತ್ತದೆ. ಗ್ರಾಹಕರ ಬಳಕೆಯು ಸಂಪೂರ್ಣ ವೈಯಕ್ತಿಕವಾಗಿರುವುದರಿಂದ ಇಂತಹ ಪೂರ್ವಾಗ್ರಹಗಳು ಸಹಜ. ಇದು ಗುರುತು, ಜೀವನಶೈಲಿ ಮತ್ತು ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಆದಾಗ್ಯೂ, ಹೂಡಿಕೆಯು ಶಿಸ್ತನ್ನು ಬಯಸುತ್ತದೆ.  ಆದರೆ ಮಾರುಕಟ್ಟೆ ಪಾಲು ಪ್ರವೃತ್ತಿಗಳು, ಬೆಲೆ ನಿಗದಿ ಸಾಮರ್ಥ್ಯ, ವಿತರಣಾ ವ್ಯಾಪ್ತಿ ಮತ್ತು ನಾವೀನ್ಯತೆ ಪೈಪ್‌ಲೈನ್‌ಗಳು ಮುಖ್ಯ. ವೃತ್ತಿಪರ ವಿಶ್ಲೇಷಣೆಯಿಂದ ಈ ವೈಯಕ್ತಿಕ ಆದ್ಯತೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಶ್ಲೇಷಿಸುವ ಮೂಲಕ ಹೂಡಿಕೆದಾರರು ದೀರ್ಘಾವಧಿಯ ಅವಕಾಶಗಳನ್ನು ಸೆರೆಹಿಡಿಯಲು ಉತ್ತಮ ಸ್ಥಿತಿಯಲ್ಲಿರುತ್ತಾರೆ.

ಲೇಖಕರು: Sorbh Gupta, Head- Equity, Bajaj Finserv Asset Management

Source link

Christmas 2025: ಯೇಸುಕ್ರಿಸ್ತರ ಜನ್ಮ ದಿನಾಚರಣೆಯ ಸಂಭ್ರಮ; ಕ್ರಿಸ್ಮಸ್‌ ಹಬ್ಬದ ಇತಿಹಾಸ, ಮಹತ್ವವನ್ನು ತಿಳಿಯಿರಿ – Kannada News | Christmas 2025: Do you know why we celebrate Christmas?

ಡಿಸೆಂಬರ್‌ ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದೇ ಕ್ರಿಸ್‌ಮಸ್‌ (Christmas) ಹಬ್ಬ. ಕ್ರೈಸ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಕ್ರಿಸ್ಮಸ್‌  ಹಬ್ಬವನ್ನು  ಪ್ರಪಂಚದಾದ್ಯಂತ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ, ವಿನೋದದ ಮೂಲಕ ಈ ಹಬ್ಬವನ್ನು ಆಚರಿಸುತ್ತೇವೆ. ಕ್ರಿಸ್‌ಮಸ್ ಕೇವಲ ಆಚರಣೆಯಲ್ಲ, ಇದು ಪ್ರೀತಿ, ಕರುಣೆ, ನಂಬಿಕೆ ಮತ್ತು ಮಾನವೀಯತೆಯ ಪುನರುಜ್ಜೀವನದ ಕಥೆಯಾಗಿದೆ. ಅಲ್ಲದೆ ಈ ಹಬ್ಬದ ಹಿಂದೆ ಆಳವಾದ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವಿದೆ, ಯೇಸು ಕ್ರಿಸ್ತರು ಜನಿಸಿದ ಪುಣ್ಯ ದಿನದಂದು ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಈ ಹಬ್ಬದ ಇತಿಹಾಸವೇನು, ಕ್ರಿಸ್‌ಮಸ್‌ ಹಬ್ಬ ಆರಂಭವಾಗಿದ್ದು ಹೇಗೆ ಈ ಎಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ ಬನ್ನಿ.

ಕ್ರಿಸ್‌ಮಸ್ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ?

ಯೇಸುಕ್ರಿಸ್ತರ ಜನ್ಮದಿನವಾದ ಡಿಸೆಂಬರ್‌ 25 ರಂದು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ. ಕ್ರಿಶ್ಚಿಯನ್ ನಂಬಿಕೆಯ ಪ್ರಕಾರ, ಯೇಸುಕ್ರಿಸ್ತರು ದೇವರ ಮಗ ಮತ್ತು ಮಾನವೀಯತೆಯ ರಕ್ಷಕರೆಂದು ಪರಿಗಣಿಸಲ್ಪಟ್ಟಿದ್ದಾರೆ. ಪ್ರೀತಿ, ಕ್ಷಮೆ, ಸೇವೆ ಮತ್ತು ತ್ಯಾಗದ ಮಾರ್ಗವನ್ನು ತೋರಿದ, ಸಮಾಜದಲ್ಲಿ ಕರುಣೆ ಮತ್ತು ಸಹೋದರತ್ವ ಪಾಠ ಮಾಡಿದ ಇವರನ್ನು ಸ್ಮರಿಸುವ ಸಲುವಾಗಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ.

ಕ್ರಿಸ್ಮಸ್‌ ಹಬ್ಬದ ಇತಿಹಾಸವೇನು?

ಬೈಬಲ್‌ನಲ್ಲಿ ಯೇಸುಕ್ರಿಸ್ತರ ನಿಖರವಾದ ಜನ್ಮ ದಿನಾಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇತಿಹಾಸಕಾರರ ಪ್ರಕಾರ, ರೋಮನ್ ಸಾಮ್ರಾಜ್ಯದಲ್ಲಿ, ಸೂರ್ಯ ದೇವರ ಹಬ್ಬವನ್ನು (ಸೋಲ್ ಇನ್ವಿಕ್ಟಸ್) ಡಿಸೆಂಬರ್ 25 ರಂದು ಆಚರಿಸಲಾಗುತ್ತಿತ್ತು. ಈ ಸಮಯವು ಚಳಿಗಾಲದ ಅಯನ ಸಂಕ್ರಾಂತಿಯ ಆಸುಪಾಸಿನಲ್ಲಿ ಬರುತ್ತದೆ, ಆಗ ಹಗಲು ಹೆಚ್ಚಿರುತ್ತವೆ. ಇದರಿಂದಾಗಿ ನಾಲ್ಕನೇ ಶತಮಾನದಲ್ಲಿ ನಾಲ್ಕನೇ ಶತಮಾನದಲ್ಲಿ ಕ್ರಿಶ್ಚಿಯನ್ ಧರ್ಮದ ವಿಸ್ತರಣೆಯ ಸಮಯದಲ್ಲಿ, ಚರ್ಚ್‌ಗಳು ಯೇಸುವಿನ ಜನ್ಮದಿನವನ್ನು ಡಿಸೆಂಬರ್ 25 ರಂದು ಆಚರಿಸುವುದಾಗಿ ಘೋಷಿಸಿದವು. ಹಳೆಯ ಸೂರ್ಯನ ಹಬ್ಬವನ್ನು ಆಧ್ಯಾತ್ಮಿಕ ಬೆಳಕಿನ ಹಬ್ಬವಾಗಿ, ಅಂದರೆ ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಕಲ್ಪನೆಯೊಂದಿಗೆ ಕ್ರಿಸ್ಮಸ್‌ ಹಬ್ಬದ ಆಚರಣೆ ಶುರುವಾಯಿತು.

ಕ್ರಿಸ್‌ಮಸ್ ಹಬ್ಬವನ್ನು ಮೊದಲು ಔಪಚಾರಿಕವಾಗಿ ರೋಮ್‌ನಲ್ಲಿ ನಾಲ್ಕನೇ ಶತಮಾನದಲ್ಲಿ ಆಚರಿಸಲಾಯಿತು. ಕಾಲಾನಂತರದಲ್ಲಿ, ಈ ಆಚರಣೆಯು ಯುರೋಪಿನಾದ್ಯಂತ ಮತ್ತು ನಂತರ ಪ್ರಪಂಚದಾದ್ಯಂತ ಹರಡಿತು. ಕ್ರಿಸ್‌ಮಸ್ ಹಬ್ಬವು ಭಾರತಕ್ಕೆ ಪೋರ್ಚುಗೀಸ್ ಮತ್ತು ಬ್ರಿಟಿಷ್ ಮಿಷನರಿಗಳೊಂದಿಗೆ ಆಗಮಿಸಿತು. ಇಂದು ಪ್ರಪಂಚದಾದ್ಯಂತ ಈ ಹಬ್ಬವನ್ನು ಜಾತಿ ಧರ್ಮದ ಬೇಧವಿಲ್ಲದೆ ಆಚರಿಸಲಾಗುತ್ತಿದೆ.

ಕ್ರಿಸ್‌ಮಸ್‌ಗೆ ಸಂಬಂಧಿಸಿದ ಪ್ರಮುಖ ಸಂಪ್ರದಾಯಗಳೇನು?

ಕ್ರಿಸ್‌ಮಸ್ ದಿನದಂದು ಕ್ರಿಶ್ಚಿಯನ್ನರು ಚರ್ಚ್‌ಗೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಮತ್ತು ಕ್ಯಾರೋಲ್‌ಗಳನ್ನು ಹಾಡಲಾಗುತ್ತದೆ. ಯೇಸುಕ್ರಿಸ್ತರ ಜನನವನ್ನು ಸಂಭ್ರಮಿಸುವ ಹಾಡುಗಳನ್ನು ಕ್ಯಾರೋಲ್‌ಗಳು ಎಂದು ಕರೆಯಲಾಗುತ್ತದೆ.  ಮುಖ್ಯವಾಗಿ  ಮನೆಗಳು ಮತ್ತು ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಕ್ರಿಸ್‌ಮಸ್ ಟ್ರೀ ಅಲಂಕರಿಸುವ, ಕೇಕ್ ಕತ್ತರಿಸುವ ಮತ್ತು ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಸಂಪ್ರದಾಯಗಳು ಇವೆ.

ಇದನ್ನೂ ಓದಿ: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌

ಕ್ರಿಸ್‌ಮಸ್‌ ಹಬ್ಬದ ಸಾಮಾಜಿಕ ಮತ್ತು ಮಾನವೀಯ ಸಂದೇಶ:

ಕ್ರಿಸ್‌ಮಸ್ ಕೇವಲ ಆಚರಣೆಯಲ್ಲ, ಅಗತ್ಯವಿರುವವರಿಗೆ, ಬಡವರಿಗೆ ಸಹಾಯ ನೀಡುವ ಮತ್ತು ಸೇವೆ ಮಾಡುವ ದಿನವೂ ಆಗಿದೆ. ಪ್ರೀತಿ ಮತ್ತು ಕರುಣೆ ಸಮಾಜವನ್ನು ಉತ್ತಮವಾಗಿ ಬದಲಾಯಿಸಬಹುದು ಎಂದು ಈ ಹಬ್ಬವು ನಮಗೆ ಕಲಿಸುತ್ತದೆ. ಅದಕ್ಕಾಗಿಯೇ ಇಂದು ಪ್ರಪಂಚದಾದ್ಯಂತ ಶಾಂತಿ ಮತ್ತು ಮಾನವೀಯತೆಯ ಸಂದೇಶದೊಂದಿಗೆ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:57 pm, Wed, 24 December 25

Source link

10 ರನ್​ಗಳಿಂದ ದ್ವಿಶತಕ ವಂಚಿತರಾದ ವೈಭವ್ ಆರ್ಭಟದ ಇನ್ನಿಂಗ್ಸ್ ಹೇಗಿತ್ತು ನೋಡಿ – Kannada News | Vaibhav Suryavanshi’s 190: Bihar Star Shines in Vijay Hazare Trophy 2025 26

2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಿಹಾರ ತಂಡದ ಉಪನಾಯಕನಾಗಿರುವ ವೈಭವ್ ಸೂರ್ಯವಂಶಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ತಮ್ಮ ಲಿಸ್ಟ್ ಎ ವೃತ್ತಿಜೀವನದ ಅತ್ಯಧಿಕ ಸ್ಕೋರ್ ಕೂಡ ದಾಖಲಿಸಿದ್ದಾರೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಎಂದಿನಂತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 190 ರನ್​ಗಳ ಇನ್ನಿಂಗ್ಸ್ ಆಡಿದರು. 226 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ತಮ್ಮ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ಗಳು ಮತ್ತು 16 ಬೌಂಡರಿಗಳನ್ನು ಬಾರಿಸಿದರು. ಆದಾಗ್ಯೂ ಕೇವಲ 10 ರನ್​ಗಳ ಅಂತರದಿಂದ ದ್ವಿಶತಕ ವಂಚಿತರಾದರು. ವಿಜಯ್ ಹಜಾರೆ ಟ್ರೋಫಿ ಅಥವಾ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಇದು ವೈಭವ್ ಸೂರ್ಯವಂಶಿ ಅವರ ಮೊದಲ ಶತಕವಾಗಿದ್ದು, ಲಿಸ್ಟ್ ಎ ವೃತ್ತಿಜೀವನದಲ್ಲಿ ಅವರ ಅತ್ಯಧಿಕ ಸ್ಕೋರ್ ಕೂಡ ಆಗಿದೆ.

Source link

ಕಾಂಗ್ರೆಸ್​​ಗೆ ಭಾರಿ ಮುಖಭಂಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯದ್ದೇ ಪಾರುಪತ್ಯ – Kannada News | BJP Dominates Karnataka Town Panchayat Elections, Congress Faces Major Setback

ಬೆಂಗಳೂರು, ಡಿಸೆಂಬರ್​​ 24: ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್​​ಗೆ ಭಾರಿ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್, ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯತ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್​​ಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ ಮತ್ತು ರಾಯಚೂರು ಜಿಲ್ಲೆಯ ತುರವಿಹಾಳ ಪಟ್ಟಣ ಪಂಚಾಯತ್​​ಗಳ ತಲಾ 1 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿಗೆ ಗೆಲುವಿನ ನಗೆ ಬೀರಿದೆ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಪ್ರಾಬಲ್ಯ

ಬಜಪೆ ಪಟ್ಟಣ ಪಂಚಾಯತ್‌ನ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಪಡೆದಿದೆ. SDPI ಮೂರು ಸ್ಥಾನ ಪಡೆದಿದ್ದರೆ, ಉಳಿದ ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್​​ನಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಪಡೆದಿವೆ. ಒಟ್ಟು 42 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಅಪೆಕ್ಸ್ ಬ್ಯಾಂಕ್ ಜಟಾಪಟಿ; ಡಿಕೆಶಿಗೆ ಚೆಕ್​ಮೇಟ್ ಕೊಟ್ಟ ಸಿದ್ದರಾಮಯ್ಯ!

ಮೊದಲ ಚುನಾಣೆಯಲ್ಲೇ ಗೆದ್ದ BJP

ಮಂಕಿ ಪಟ್ಟಣ ಪಂಚಾಯತ್​​ ಆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ಆದರೆ ಫಲಿತಾಂಶ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. 12 ಸ್ಥಾನಗಳನ್ನು ಗೆದ್ದು ಬಿಜೆಪಿ ಅಧಿಕಾರ ಹಿಡಿದಿದ್ದರೆ, 8 ಸ್ಥಾನಗಳನ್ನು ಗೆಲ್ಲುವಲ್ಲಿ ಮಾತ್ರ ಕಾಂಗ್ರೆಸ್​​ ಸಫಲವಾಗಿದೆ.

ಬಾಶೆಟ್ಟಿಹಳ್ಳಿಯಲ್ಲಿ ಕೇಸರಿ ಪಡೆ ಕಮಾಲ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲೂ ಕಮಲ ಪಡೆ ಗೆದ್ದು ಬೀಗಿದೆ. 19 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 11 ವರ್ಷಗಳ ಬಳಿಕ ನಡೆದ ಚುನಅವಣೆಯಲ್ಲಿ ಕೇಸರಿ ಪಡೆ ಕಮಾಲ್​​ ಮಾಡಿದೆ.

ಬಿ.ಎಲ್​​. ಸಂತೋಷ್​​ ಸಂತಸ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಸಂಘಟನಾ ‌ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಾಮಾಜಿಕ ‌ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಓಟ ಮುಂದುವರಿಸಿದೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ, ಅದರಲ್ಲೂ ಮತಪತ್ರದ ಮೂಲಕ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:41 pm, Wed, 24 December 25

Source link

ದರ್ಶನ್ ಬಗ್ಗೆ ಸುದೀಪ್ ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ: ಜೋಗಿ ಪ್ರೇಮ್ – Kannada News | KD movie director Jogi Prem talks about Darshan and Sudeep Fans War

ಕನ್ನಡ ಚಿತ್ರರಂಗದ ಸ್ಟಾರ್ ಹೀರೋಗಳಾದ ದರ್ಶನ್ ಹಾಗೂ ಸುದೀಪ್ (Kichcha Sudeep) ಅವರ ಅಭಿಮಾನಿಗಳ ನಡುವೆ ಸಂಘರ್ಷ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ. ಈ ಘಟನೆಗಳ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿರ್ದೇಶಕ ‘ಜೋಗಿ’ ಪ್ರೇಮ್ (Jogi Prem) ಅವರು ಟಿವಿ9 ಜೊತೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ತಾವು ಕಂಡಂತೆ ಕಿಚ್ಚ ಸುದೀಪ್ ಹಾಗೂ ದರ್ಶನ್ (Darshan) ಹೇಗೆ ಇದ್ದಾರೆ ಎಂಬುದನ್ನು ಪ್ರೇಮ್ ವಿವರಿಸಿದ್ದಾರೆ.

‘ನನ್ನ ಮುಂದೆ ಸುದೀಪ್ ಅವರು ದರ್ಶನ್ ಬಗ್ಗೆಯಾಗಲೀ, ದರ್ಶನ್ ಕುಟುಂಬದ ಬಗ್ಗೆಯಾಗಲಿ ಮಾತನಾಡಿಲ್ಲ. ಮಧ್ಯದಲ್ಲಿ ಯಾರೋ ಕಿತಾಪತಿ ಮಾಡುತ್ತಾರೆ. ಅದಕ್ಕೆ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳು ಕಿವಿಗೊಡಬಾರದು. ಸುದೀಪ್ ಅವರು ಒಂದು ಒಳ್ಳೆಯ ಮಾತು ಹೇಳಿದ್ದಾರೆ. ಸಿನಿಮಾ ಚೆನ್ನಾಗಿ ಇದ್ದರೆ ಮಾತ್ರ ಫ್ಯಾನ್ಸ್ ಬರುತ್ತಾರೆ, ಸಿನಿಮಾ ಚೆನ್ನಾಗಿ ಇಲ್ಲದಿದ್ದರೆ ಯಾರೂ ಬರಲ್ಲ ಅಂತ ಹೇಳಿದ್ದಾರೆ. ಇಲ್ಲಿ ಹೀರೋ, ಹೀರೋಗಿರಿಗಿಂತ ಸಿನಿಮಾ ದೊಡ್ಡದು’ ಎಂದಿದ್ದಾರೆ ಜೋಗಿ ಪ್ರೇಮ್.

‘ಸುದೀಪ್ ಮತ್ತು ದರ್ಶನ್ ಅವರ ಮನಸ್ತಾಪಕ್ಕೆ ಅವರ ವೈಯಕ್ತಿಕ ಕಾರಣ ಇರಬಹುದು. ಆದರೆ ಯಾವತ್ತೂ ಕೂಡ ಅವರು ಪರಸ್ಪರ ಕೆಟ್ಟದಾಗಿ ಬೈಯ್ದುಕೊಂಡಿಲ್ಲ. ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಅವರು ಆತ್ಮೀಯರಾದ ಕಾರಣ ತುಂಬಾ ಚೆನ್ನಾಗಿ ಗೊತ್ತಿದ್ದಾರೆ. ಸುದೀಪ್ ಜೊತೆ ಸಿನಿಮಾ ಮಾಡುತ್ತೇನೆ ಎಂದಾಗ ಚೆನ್ನಾಗಿ ಮಾಡಿ ಅಂತ ದರ್ಶನ್ ಹೇಳುತ್ತಾರೆ. ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಅಂತ ಸುದೀಪ್ ಅವರಿಗೆ ಹೇಳಿದಾಗ ಚೆನ್ನಾಗಿ ಮಾಡು ಅಂತಾನೇ ಅವರು ಕೂಡ ಹೇಳಿದ್ದರು. ದರ್ಶನ್ ಮತ್ತು ಸುದೀಪ್ ಅವರ ಮನಸ್ಸಿನ ಒಳಗಿರುವ ಭಾವನೆ ಬಗ್ಗೆ ನನಗೆ ತಿಳಿದಿಲ್ಲ’ ಎಂದಿದ್ದಾರೆ ಪ್ರೇಮ್.

‘ನನ್ನ ಕುಟುಂಬಕ್ಕೆ ದರ್ಶನ್ ಮತ್ತು ಸುದೀಪ್ ಇಬ್ಬರೂ ಆತ್ಮೀಯರು. ಇಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಸುದೀಪ್ ಅವರನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತೇನೆ. ದರ್ಶನ್ ನನಗೆ ಸ್ನೇಹಿತ, ಆತ್ಮೀಯರು. ದರ್ಶನ್ ಅವರು ಸಹ ಸುದೀಪ್ ಬಗ್ಗೆ ಒಂದು ದಿನವೂ ಕೆಟ್ಟದಾಗಿ ಮಾತಾಡಿಲ್ಲ. ಯಾರೋ ಕಿಡಿಗೇಡಿಗಳು ಮಧ್ಯದಲ್ಲಿ ಬೆಂಕಿ ಹಚ್ಚೋದರಿಂದ ಈ ರೀತಿ ಮಾಡುತ್ತಿದ್ದಾರೆ’ ಎಂಬುದು ಜೋಗಿ ಪ್ರೇಮ್ ಮಾತು.

ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್

‘ಮಾರ್ಕ್’ ಮತ್ತು ‘45’ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿವೆ. ಆ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ‘ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆದಾಗ ಖಂಡಿತವಾಗಿಯೂ ಬಾಕ್ಸ್ ಆಫೀಸ್​ ಮೇಲೆ ಹೊಡೆತ ಬೀಳುತ್ತದೆ. ಒಂದು ಸಮಯಕ್ಕೆ ಒಂದು ಸಿನಿಮಾ ಬಿಡುಗಡೆ ಆದರೆ ನಮ್ಮ ಕನ್ನಡಿಗರು ಖಂಡಿತಾ ಸಪೋರ್ಟ್ ಮಾಡುತ್ತಾರೆ. 2 ಸಿನಿಮಾ ಬಂದರೆ ವ್ಯವಹಾರಕ್ಕೆ ಹೊಡೆತ ಬೀಳುತ್ತದೆ’ ಎಂದು ಪ್ರೇಮ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link