Category Archives: Blog

Your blog category

‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು

‘ಧುರಂಧರ್ 2’ ಜೊತೆ ಕ್ಲ್ಯಾಶ್ ಮಿಸ್ ಮಾಡಿಕೊಂಡ ‘ಟಾಕ್ಸಿಕ್’ ಎದುರು ಬರ್ತಿವೆ ಡಜನ್ ಸಿನಿಮಾಗಳು

‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್​​ಗೆ ವಿಘ್ನ ಎದುರಾಗಿತ್ತು. ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ನೀಡಿ ಇವರು ಸಿನಿಮಾನ ಮುಂದಕ್ಕೆ ಹಾಕಿಕೊಂಡರು. ಇದರಿಂದ ‘ಧುರಂಧರ್ 2’ ಸಿನಿಮಾ ಜೊತೆಗಿನ ಕ್ಲ್ಯಾಶ್ ಮಿಸ್ ಆಗಿದೆ. ಆದರೆ, ಕೆಲವು ವರದಿಗಳ ಪ್ರಕಾರ ‘ಟಾಕ್ಸಿಕ್’ ಸಿನಿಮಾ ಈಗ ಡಜನ್ ಸಿನಿಮಾಗಳ ವಿರುದ್ಧ ಹೋರಾಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ‘ಟಾಕ್ಸಿಕ್’ ತುಂಬಾನೇ ದೊಡ್ಡ ಚಾಲೆಂಜ್ ಎದುರಿಸುವ ಸೂಚನೆ ಪಡೆದಿದೆ.

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಯಾವುದಾದರೂ ಒಂದು ಸಿನಿಮಾ ಮುಂದಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿ ಆಗಿತ್ತು. ಕೊನೆಗೆ, ‘ಟಾಕ್ಸಿಕ್’ ತಂಡದವರು ಚಿತ್ರವನ್ನು ಜೂನ್ 4ಕ್ಕೆ ಮುಂದಕ್ಕೆ ಹಾಕಿಕೊಂಡರು. ಯಶ್ ಈಗ 11 ಸಿನಿಮಾಗಳಿಂದ ಸ್ಪರ್ಧೆ ಎದುರಿಸಬೇಕಿದೆ.

‘ಟಾಕ್ಸಿಕ್’ ಸಿನಿಮಾದ ಬಜೆಟ್ ದೊಡ್ಡದಿದೆ. ಹೀಗಾಗಿ, ಈ ಸಿನಿಮಾ ಕನಿಷ್ಠ ಎರಡು ತಿಂಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಎರಡು ತಿಂಗಳಲ್ಲಿ ಬರೋಬ್ಬರಿ 12 ಚಿತ್ರಗಳು ಬರುತ್ತಿವೆ.

ಜೂನ್ 5ಕ್ಕೆ ಹಾಲಿವುಡ್​​ನ ‘ಮಾಸ್ಟರ್ ಆಫ್ ದಿ ಯೂನಿವರ್ಸ್’ ಬರುತ್ತಿದೆ. ಜೂನ್ 12ರಂದು ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’, ‘ಮೇ ವಾಪ್ಸ್ ಆವುಂಗಾ’ ತೆರೆಗೆ ಬರುತ್ತಿದೆ. ಜೂನ್ 19ರಂದು ‘ಕಾಕ್​​ಟೇಲ್ 2’ ಹಾಗೂ ‘ಟಾಯ್ ಸ್ಟೋರಿ 5’ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಕೆಲಸದ ಮಧ್ಯೆ ಶೀಘ್ರವೇ ಹೊಸ ಸಿನಿಮಾ ಸೆಟ್ ಸೇರಿಕೊಳ್ಳಲಿದ್ದಾರೆ ಯಶ್

ಜೂನ್ 26ಕ್ಕೆ ‘ಕ್ಯಾರಿ ಆನ್ ಜಟ್ಟಾ 4’ ತೆರೆಗೆ ಬರಲಿದೆ. ಜುಲೈ 1ರಂದು ‘ಮಿನೀಯನ್ 2’, ಜುಲೈ 3ರಂದು ‘ಧಮಾಲ್ 4’, ಜುಲೈ 9ರಂದು ‘ಮೋನಾ’, ಜುಲೈ 10ರಂದು ‘ಆಲ್ಫಾ’, ಜುಲೈ 17ರಂದು ‘ದಿ ಒಡಿಸ್ಸಿ’, ಜುಲೈ 31ರಂದು ‘ಸ್ಪೈಡರ್ ಮ್ಯಾನ್, ‘ಬ್ರ್ಯಾಂಡ್ ನ್ಯೂ ಡೇ’ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುತ್ರಿಯರಿಂದಲೇ ಅಂತ್ಯಸಂಸ್ಕಾರ: ಗಂಡು ಮಕ್ಕಳಿಲ್ಲದಿದ್ದರೇನು? ತಂದೆಗೆ ಅಗ್ನಿಸ್ಪರ್ಶ ಮಾಡಿದ ಇಬ್ಬರು ಹೆಣ್ಮಕ್ಕಳು!

ಕಡೂರು, ಮಾ.14 : “ಗಂಡು ಮಕ್ಕಳಿದ್ದರೆ ಮಾತ್ರ ಮುಕ್ತಿ” ಎಂಬ ಹಳೆಯ ಸಂಪ್ರದಾಯದ ನಂಬಿಕೆಯನ್ನು ಬದಿಗೊತ್ತಿ, ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಬೀರೂರು ಪಟ್ಟಣದ ನಿವಾಸಿ ವಿಶ್ವನಾಥ್ ಅವರು ನಿನ್ನೆ ನಿಧನರಾಗಿದ್ದರು. ಇವರಿಗೆ ಗಂಡು ಮಕ್ಕಳಿರಲಿಲ್ಲ, ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಪುತ್ರಿಯರು, ತಂದೆಯ ಮೇಲಿನ ಗೌರವ ಮತ್ತು ಪ್ರೀತಿಯಿಂದ ತಾವೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇಬ್ಬರು ಪುತ್ರಿಯರು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದರು. ಮೃತ ವಿಶ್ವನಾಥ್ ಅವರ ಪುತ್ರಿ ಐಶ್ವರ್ಯ ಮತ್ತು ಅವರ ಸೋದರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Saturn Combustion 2026: ಇನ್ನು 40 ದಿನಗಳ ಕಾಲ ಮೀನ ರಾಶಿಯಲ್ಲಿ ಶನಿ ಅಸ್ತಂಗತ; ಯಾವ ರಾಶಿಗೆ ಅಶುಭ?

ಗ್ರಹಗಳ ವಿಷಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಲಿದೆ. ಕರ್ಮ ಕಾರಕ ಮತ್ತು ನ್ಯಾಯಾಧೀಶನಾಗಿರುವ ಶನಿ ಗ್ರಹವು ಅಸ್ತಂಗತನಾಗಲಿದ್ದಾನೆ. ಅಸ್ತಂಗತ ಎಂದರೆ ಸೂರ್ಯನಿಗೆ ಹತ್ತಿರ ಬಂದಾಗ ಯಾವುದೇ ಗ್ರಹವು ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಳ್ಳುವುದು. ಶನಿ ಗ್ರಹವು ನಿನ್ನೆ ಅಂದರೆ ಮಾರ್ಚ್ 13 ರಂದು ಸಂಜೆ 7 ಗಂಟೆ 13 ನಿಮಿಷದಿಂದ ಏಪ್ರಿಲ್ 22 ರ ಬೆಳಗಿನ ಜಾವ 4 ಗಂಟೆ 43 ನಿಮಿಷದವರೆಗೆ ಅಸ್ತಂಗತ ಸ್ಥಿತಿಯಲ್ಲಿ ಇರಲಿದ್ದು, ಈ ಅವಧಿಯಲ್ಲಿ ಅದರ ಪ್ರಭಾವ ಕಡಿಮೆಯಾಗಲಿದೆ. ಈ ಅವಧಿಯು ಸುಮಾರು 40 ದಿನಗಳ ಕಾಲ ಮೀನ ರಾಶಿಯಲ್ಲಿ ಸಂಭವಿಸಲಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಶನಿ ಗ್ರಹವು 15 ಡಿಗ್ರಿಗಳೊಳಗೆ ಸೂರ್ಯನಿಗೆ ಹತ್ತಿರ ಬಂದಾಗ ಅಸ್ತಂಗತನಾಗುತ್ತದೆ. ರಾಹು ಮತ್ತು ಕೇತು ಗ್ರಹಗಳು ಅಸ್ತಂಗತವಾಗುವುದಿಲ್ಲ ಎಂಬುದನ್ನು ಗಮನಿಸಬೇಕು. ಗುರು ಮತ್ತು ಶುಕ್ರ ಅಸ್ತವಾದಾಗ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅದೇ ರೀತಿ, ಶನಿ ಅಸ್ತಂಗತನಾದಾಗ ಕೆಲವು ಕ್ಷೇತ್ರಗಳಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆ ಇದೆ. ಸಿಸ್ತು ಮತ್ತು ಪರಿಶ್ರಮದ ಸಂಕೇತವಾಗಿರುವ ಶನಿಯು ಅಸ್ತಂಗತನಾದಾಗ ಪೊಲೀಸ್, ಆರ್ಮಿ, ಹಾಗೂ ಸಾರ್ವಜನಿಕ ಜೀವನದಂತಹ ಕ್ಷೇತ್ರಗಳಲ್ಲಿ ಶಿಸ್ತಿನ ಬಗ್ಗೆ ಹೆಚ್ಚು ಗಮನ ನೀಡಬೇಕಾಗಬಹುದು.

ಈ ಶನಿ ಅಸ್ತಂಗತದ ಪರಿಣಾಮವಾಗಿ ಯುದ್ಧಗಳು, ಗ್ಯಾಸ್ ಸಿಲಿಂಡರ್‌ಗಳ ಕೊರತೆ, ಉದ್ಯೋಗ, ವ್ಯಾಪಾರ, ವ್ಯವಹಾರ ಮತ್ತು ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳು, ಕೆಲವು ಆರೋಗ್ಯ ಸಮಸ್ಯೆಗಳು ಮತ್ತು ಜವಾಬ್ದಾರಿಗಳ ನಿರ್ವಹಣೆಯಲ್ಲಿ ಏರುಪೇರುಗಳು ಸಂಭವಿಸಬಹುದು.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ದ್ವಾದಶ ರಾಶಿಗಳ ಮೇಲೆ ಶನಿ ಅಸ್ತಂಗತದ ಪರಿಣಾಮಗಳು:

  • ಮೇಷ ರಾಶಿ: ಧನ ಹಾನಿ ಮತ್ತು 12ನೇ ಮನೆಯಲ್ಲಿ ಉದ್ಯೋಗದಲ್ಲಿ ಕಷ್ಟಗಳ ಸಾಧ್ಯತೆ.
  • ವೃಷಭ ರಾಶಿ: 11ನೇ ಮನೆಯಲ್ಲಿ ಆದಾಯದಲ್ಲಿ ಏರುಪೇರುಗಳು.
  • ಮಿಥುನ ರಾಶಿ: 10ನೇ ಮನೆಯಲ್ಲಿ ಜವಾಬ್ದಾರಿಗಳು ಮತ್ತು ವೃತ್ತಿಯಲ್ಲಿ ಬದಲಾವಣೆಗಳು.
  • ಕರ್ಕಾಟಕ ರಾಶಿ: 9ನೇ ಮನೆಯಲ್ಲಿ ಪಿತ್ರಾರ್ಜಿತ ಆಸ್ತಿಗಳ ಸಮಸ್ಯೆಗಳು.
  • ಸಿಂಹ ರಾಶಿ: 8ನೇ ಮನೆಯಲ್ಲಿ ಅಷ್ಟಮ ಶನಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಮಯ.
  • ಕನ್ಯಾ ರಾಶಿ: 7ನೇ ಮನೆಯಲ್ಲಿ ವಿವಾಹ ಮತ್ತು ಪಾಲುದಾರಿಕೆ ವಿಷಯಗಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಸಮಯ.
  • ತುಲಾ ರಾಶಿ: 6ನೇ ಮನೆಯಲ್ಲಿ ದುಸ್ಥಾನ, ಶತ್ರು ಸ್ಥಾನ, ಸಾಲಬಾಧೆಗಳು ಕಡಿಮೆಯಾಗಬಹುದು.
  • ವೃಶ್ಚಿಕ ರಾಶಿ: 5ನೇ ಸ್ಥಾನದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಬೇಕಾದ ಅವಧಿ.
  • ಧನುಸ್ಸು ರಾಶಿ: 4ನೇ ಸುಖ ಸ್ಥಾನದಲ್ಲಿ ಶುಭಸುದ್ದಿಗಳು, ಮನೆ ಯೋಗ, ತಂದೆತಾಯಿಗಳ ಆಶೀರ್ವಾದ ಸಿಗುತ್ತದೆ, ಸಾಕಷ್ಟು ಶುಭ ಫಲಗಳು.
  • ಮಕರ ರಾಶಿ: 3ನೇ ಸ್ಥಾನದಲ್ಲಿ ಅಣ್ಣತಮ್ಮಂದಿರ ಜೊತೆ ಭಿನ್ನಾಭಿಪ್ರಾಯಗಳು, ಆದರೆ ಆತ್ಮವಿಶ್ವಾಸ ವೃದ್ಧಿ.
  • ಕುಂಭ ರಾಶಿ: 2ನೇ ವಾಕ್‌ಸ್ಥಾನ, ಧನಸ್ಥಾನ, ಕುಟುಂಬ ಸ್ಥಾನದಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಶುಭ ಫಲ.
  • ಮೀನ ರಾಶಿ: 1ನೇ ಮನೆಯಲ್ಲಿ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ವ್ಯಾಪಾರ ವ್ಯವಹಾರಗಳಲ್ಲಿ ಜಾಗರೂಕರಾಗಿದ್ದರೆ ಒಳ್ಳೆಯದು.

ಈ ಎಲ್ಲಾ ಫಲಗಳು ದಶಾಭುಕ್ತಿಗಳನ್ನೂ ಅವಲಂಬಿಸಿರುತ್ತವೆ. ಶನಿ ಅಸ್ತಂಗತನಾದಾಗ ಶನಿಯ ಮಂತ್ರ, ಶನಿಯ ಸ್ತೋತ್ರ, ಎಳ್ಳಿನ ದೀಪ ಹಚ್ಚುವುದು, ದೇವಿಯ ದರ್ಶನ ಮತ್ತು ಹನುಮನ ಆರಾಧನೆ ಮಾಡುವುದರಿಂದ ಬಹಳಷ್ಟು ಶುಭಫಲಗಳನ್ನು ಪಡೆಯಬಹುದು. ಈ 40 ದಿನಗಳಲ್ಲಿ ಭೂಗೋಳ ಮತ್ತು ಪ್ರಪಂಚದಲ್ಲಿ ಸಾಕಷ್ಟು ಪರಿವರ್ತನೆಗಳು ಆಗುತ್ತವೆ. ಇವೆಲ್ಲವೂ ಶಾಸ್ತ್ರಬದ್ಧವಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲು ಸತ್ಯ ತಿಳೀರಿ, ವಿದ್ಯಾರ್ಥಿಗಳ ಪ್ರವೇಶ, ಅಧ್ಯಾಪಕರ ನೇಮಕದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ದೆಹಲಿ ವಿವಿ ತೀವ್ರ ಆಕ್ಷೇಪ

ನವದೆಹಲಿ, ಮಾರ್ಚ್​ 14: ದೆಹಲಿ ವಿಶ್ವವಿದ್ಯಾಲಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಹಾಗೂ ಅಧ್ಯಾಪಕರ ನೇಮಕದ ಕುರಿತು ರಾಹುಲ್ ಗಾಂಧಿ(Rahul Gandhi) ಹೇಳಿಕೆಗೆ ದೆಹಲಿ ವಿವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮೊದಲು ನಿಖರವಾದ ಸಂಗತಿ ಏನೆಂದು ತಿಳಿಯುವುದು ಬಹಳ ಮುಖ್ಯ ಎಂದು ವಿವಿ ಹೇಳಿದೆ.

ದೆಹಲಿ ವಿಶ್ವವಿದ್ಯಾನಿಲಯವು ಅಧಿಕೃತ ಹೇಳಿಕೆಯಲ್ಲಿ, ವಿದ್ಯಾರ್ಥಿಗಳ ಪ್ರವೇಶವು ಪ್ರಾಥಮಿಕವಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (CUET) ಅಂಕಗಳನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಿದೆ. ಹೆಚ್ಚಿನ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂದರ್ಶನಗಳು ಕಡ್ಡಾಯವಲ್ಲ ಎಂದು ವಿಶ್ವವಿದ್ಯಾನಿಲಯವು ವಿವರಿಸಿದೆ. ಆದ್ದರಿಂದ, ಸಂದರ್ಶನಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶದಿಂದ ಹೊರಗಿಡಲಾಗುತ್ತದೆ ಎಂಬ ಹೇಳಿಕೆ ತಪ್ಪಾಗಿದೆ.

ದೆಹಲಿ ವಿಶ್ವವಿದ್ಯಾಲಯ ಹೇಳಿದ್ದೇನು?
ರಾಹುಲ್ ಗಾಂಧಿಯ ಹೇಳಿಕೆಯು ಬೋಧನಾ ಹುದ್ದೆಗಳು ಅಥವಾ ಇತರ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಿಸಿದ್ದಾಗಿದ್ದರೆ, ಅದು ತಪ್ಪು ಎಂದು ದೆಹಲಿ ವಿಶ್ವವಿದ್ಯಾಲಯವು ಸ್ಪಷ್ಟಪಡಿಸಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಸಾವಿರಾರು ಬೋಧನಾ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಗಳು ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುತ್ತವೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಸ್ಥಾಪಿತ ನಿಯಮಗಳು ಮತ್ತು ಮಾನದಂಡಗಳಿಗೆ ಅನುಸಾರವಾಗಿ ನಡೆಸಲಾಗುತ್ತದೆ.

ಇಂತಹ ಹೇಳಿಕೆಗಳು ವಿಶ್ವವಿದ್ಯಾಲಯದ ಪರಿಸರದ ಮೇಲೆ ಪರಿಣಾಮ ಬೀರಬಹುದು ಎಂದು ಡಿಯು ಹೇಳಿದೆ. ಸಂಪೂರ್ಣ ಮಾಹಿತಿಯಿಲ್ಲದೆ ನೀಡುವ ಹೇಳಿಕೆಗಳು ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳಲ್ಲಿ ತಪ್ಪು ತಿಳಿವಳಿಕೆಗೆ ಕಾರಣವಾಗಬಹುದು ಎಂದು ಸಂಸ್ಥೆ ನಂಬಿದೆ. ಆದ್ದರಿಂದ, ಯಾವುದೇ ಪ್ರಮುಖ ಶಿಕ್ಷಣ ಸಂಸ್ಥೆಯ ಬಗ್ಗೆ ಕಾಮೆಂಟ್ ಮಾಡುವ ಮೊದಲು ಸತ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಮುಖ್ಯ.

ಮತ್ತಷ್ಟು ಓದಿ: ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಗಾಂಧಿ​ ಮಹತ್ವದ ಸಂದೇಶ

ರಾಹುಲ್ ಗಾಂಧಿ ಹೇಳಿದ್ದೇನು?

ಇತ್ತೀಚೆಗೆ, ಕಾನ್ಶಿರಾಮ್ ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ದೆಹಲಿ ವಿಶ್ವವಿದ್ಯಾಲಯವನ್ನು ಉಲ್ಲೇಖಿಸುತ್ತಾ, ತಾವು ಅಲ್ಲಿಗೆ ಭೇಟಿ ನೀಡಿರುವುದಾಗಿ ಮತ್ತು ವಿದ್ಯಾರ್ಥಿಗಳನ್ನು ಸಂದರ್ಶನಗಳ ಮೂಲಕ ಹೊರಗಿಡುವುದನ್ನು ಕಣ್ಣಾರೆ ಕಂಡಿರುವುದಾಗಿ ಹೇಳಿದರು. ಜಾತಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಸಂದರ್ಶನಗಳಲ್ಲಿ ತಿರಸ್ಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ಪಟ್ಟಿಯನ್ನು ಸಂಗ್ರಹಿಸಿದರೆ, ಅದು ಒಬಿಸಿ ಅಥವಾ ಎಸ್‌ಸಿ ಸದಸ್ಯರನ್ನು ಸೇರಿಸುವುದಿಲ್ಲ, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದರು.

ರಾಹುಲ್ ಗಾಂಧಿಯವರ ಈ ಹೇಳಿಕೆಯ ನಂತರ, ದೆಹಲಿ ವಿಶ್ವವಿದ್ಯಾಲಯವು ಪ್ರತಿಕ್ರಿಯಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿತು ಮತ್ತು ವಿಶ್ವವಿದ್ಯಾಲಯದ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿದೆ ಮತ್ತು ನಿಯಮಗಳ ಪ್ರಕಾರವಾಗಿದೆ ಎಂದು ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Cylinder Price Hike: 1700 ರೂ. ಬೆಲೆಯ ಸಿಲಿಂಡರ್ 5000 ರೂ.ಗೆ ಮಾರಾಟ!

ಬೆಂಗಳೂರು, ಮಾರ್ಚ್​ 14: ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದೆ. ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ರಾಜಧಾನಿಯ ಹೋಟೆಲ್‌ಗಳಿಗೂ ತಟ್ಟಿದೆ. ಸಿಲಿಂಡರ್‌ಗಳ ಕೊರತೆಯಿಂದ ಕಾಳ ಸಂತೆಯಲ್ಲಿ 1,700 ರೂ. ಬೆಲೆಯ ಕಮರ್ಷಿಯಲ್ ಸಿಲಿಂಡರ್‌ಗಳು 5,000 ದಿಂದ 5,500 ರೂ.ಗೆ ಮಾರಾಟವಾಗುತ್ತಿವೆ. ಡಿಸ್ಟ್ರಿಬ್ಯೂಟರ್‌ಗಳು ಮತ್ತು ಕೆಲ ಏಜೆನ್ಸಿಗಳು ಈ ಪರಿಸ್ಥಿತಿಯ ಲಾಭ ಪಡೆದು ಹೋಟೆಲ್ ಮಾಲೀಕರನ್ನು ಸುಲಿಗೆ ಮಾಡುತ್ತಿವೆ ಎನ್ನಲಾಗುತ್ತಿದೆ.

ಈ ಸಂಕಷ್ಟದಿಂದ ಹೋಟೆಲ್ ಮಾಲೀಕರು ತಮ್ಮ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ಮತ್ತು ಗ್ರಾಹಕರಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸಿಲಿಂಡರ್‌ಗಳನ್ನು ದುಬಾರಿ ಬೆಲೆಗೆ ಖರೀದಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಹೋಟೆಲ್ ಮೆನುಗಳಲ್ಲಿನ ತಿಂಡಿಗಳ ದರ ಏರಿಕೆಯಾಗಿದೆ. ಈ ಅಕ್ರಮ ಮಾರಾಟದ ಮೇಲೆ ಕಡಿವಾಣ ಹಾಕಲು ಮತ್ತು ಹೋಟೆಲ್‌ಗಳಿಗೆ ಸಮಾನವಾಗಿ ಸಿಲಿಂಡರ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಐಪಿಎಲ್​ಗೆ ಟಕ್ಕರ್: ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ

ಪಾಕಿಸ್ತಾನ್ ಸೂಪರ್ ಲೀಗ್​ ವೇಳಾಪಟ್ಟಿ ಪ್ರಕಟವಾಗಿದೆ. ಈ ಬಾರಿ ಪಿಎಸ್​ಎಲ್​ ಟೂರ್ನಿ ಶುರುವಾಗುವುದು ಮಾರ್ಚ್ 26 ರಿಂದ. ಅಂದರೆ ಐಪಿಎಲ್ ಆರಂಭಕ್ಕೂ ಎರಡು ದಿನ ಮೊದಲು ಪಿಎಸ್​ಎಲ್​ ಟೂರ್ನಿಗೆ ಚಾಲನೆ ನೀಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.

ಅಷ್ಟೇ ಅಲ್ಲದೆ ಐಪಿಎಲ್​ನ ಪ್ರತಿ ಪಂದ್ಯಗಳಿಗೂ ಅರ್ಧಗಂಟೆ ಮುಂಚೆಯೇ ಪಾಕಿಸ್ತಾನ್ ಸೂಪರ್ ಲೀಗ್​ನ ಮ್ಯಾಚ್​ಗಳು ಶುರುವಾಗಲಿದೆ. ಅಂದರೆ ಐಪಿಎಲ್​ನ ಮೊದಲ ಪಂದ್ಯ 3.30 ಆರಂಭವಾದರೆ, ಅತ್ತ ಪಿಎಸ್​ಎಲ್​ನ ಮೊದಲ ಪಂದ್ಯ ಭಾರತೀಯ ಕಾಲಮಾನ 3 ಗಂಟೆಗೆ ಶುರುವಾಗಲಿದೆ. ಇನ್ನು ದ್ವಿತೀಯ ಪಂದ್ಯ 7 ಗಂಟೆಗೆ ಆರಂಭವಾಗಲಿದೆ. ಇತ್ತ ಐಪಿಎಲ್​ನ ರಾತ್ರಿಯ ಮ್ಯಾಚ್​ಗಳು ಶುರುವಾಗುವುದು 7.30 ಕ್ಕೆ.

ಇದನ್ನೂ ಓದಿ:

ಅಂದರೆ ಇಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ ಜೊತೆ ಪೈಪೋಟಿ ನೀಡಲು ಪಾಕಿಸ್ತಾನ್ ಸೂಪರ್ ಲೀಗ್ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ಅದರಲ್ಲೂ ಐಪಿಎಲ್​ನಲ್ಲಿ ಅವಕಾಶ ವಂಚಿತರಾಗಿದ್ದ 47 ವಿದೇಶಿ ಆಟಗಾರರಿಗೆ ಈ ಬಾರಿ ಪಿಎಸ್​ಎಲ್​ನಲ್ಲಿ ಚಾನ್ಸ್ ನೀಡಲಾಗಿದೆ. ಈ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಜೊತೆ ಪೈಪೋಟಿಗಿಳಿಯಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ.

ಪಾಕಿಸ್ತಾನ್ ಸೂಪರ್ ಲೀಗ್ ವೇಳಾಪಟ್ಟಿ:

  • ಮಾರ್ಚ್ 26 – ಪಂದ್ಯ 1 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
  • ಮಾರ್ಚ್ 27  ಪಂದ್ಯ 2 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಮಾರ್ಚ್ 28 – ಪಂದ್ಯ 3 – ಪೇಶಾವರ್ ಝಲ್ಮಿ vs ರಾವಲ್ಪಿಂಡಿ ರೈಡರ್ಸ್ – ಪೇಶಾವರ್ – ಮಧ್ಯಾಹ್ನ
  • ಮಾರ್ಚ್ 28 – ಪಂದ್ಯ 4 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ಮುಲ್ತಾನ್ – ರಾತ್ರಿ
  • ಮಾರ್ಚ್ 29 – ಪಂದ್ಯ 5 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಮಾರ್ಚ್ 29 – ಪಂದ್ಯ 6 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಮಾರ್ಚ್ 31 – ಪಂದ್ಯ 7 – ಇಸ್ಲಾಮಾಬಾದ್ ಯುನೈಟೆಡ್ vs ಪೇಶಾವರ್ ಝಲ್ಮಿ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 1 – ಪಂದ್ಯ 8 – ಮುಲ್ತಾನ್ ಸುಲ್ತಾನ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 2 – ಪಂದ್ಯ 9 – ಇಸ್ಲಾಮಾಬಾದ್ ಯುನೈಟೆಡ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ರಾವಲ್ಪಿಂಡಿ – ದಿನ
  • ಏಪ್ರಿಲ್ 2 – ಪಂದ್ಯ 10 – ರಾವಲ್ಪಿಂಡಿ ರೈಡರ್ಸ್ vs ಕರಾಚಿ ಕಿಂಗ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 3 – ಪಂದ್ಯ 11 – ಮುಲ್ತಾನ್ ಸುಲ್ತಾನ್ಸ್ vs ಲಾಹೋರ್ ಖಲಂದರ್ಗಳು – ಮುಲ್ತಾನ್ – ರಾತ್ರಿ
  • ಏಪ್ರಿಲ್ 5 – ಪಂದ್ಯ 12 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 6 – ಪಂದ್ಯ 13 – ಮುಲ್ತಾನ್ ಸುಲ್ತಾನ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 7  – ಪಂದ್ಯ 14 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಮುಲ್ತಾನ್ – ರಾತ್ರಿ
  • ಏಪ್ರಿಲ್ 8 – ಪಂದ್ಯ 15 – ಹೈದರಾಬಾದ್ ಕಿಂಗ್ಸ್‌ಮೆನ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
  • ಏಪ್ರಿಲ್ 9 – ಪಂದ್ಯ 16 – ಲಾಹೋರ್ ಖಲಂದರ್ಗಳು vs ಇಸ್ಲಾಮಾಬಾದ್ ಯುನೈಟೆಡ್ – ಫೈಸಲಾಬಾದ್ – ಮಧ್ಯಾಹ್ನ
  • ಏಪ್ರಿಲ್ 9 – ಪಂದ್ಯ 17 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
  • ಏಪ್ರಿಲ್ 10 – ಪಂದ್ಯ 18 – ಕರಾಚಿ ಕಿಂಗ್ಸ್ vs ಲಾಹೋರ್ ಖಲಂದರ್ಗಳು – ಕರಾಚಿ – ರಾತ್ರಿ
  • ಏಪ್ರಿಲ್ 11 – ಪಂದ್ಯ 19 – ಪೇಶಾವರ್ ಝಲ್ಮಿ vs ಹೈದರಾಬಾದ್ ಕಿಂಗ್ಸ್‌ಮೆನ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 12 – ಪಂದ್ಯ 20 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಕರಾಚಿ – ರಾತ್ರಿ
  • ಏಪ್ರಿಲ್ 12 – ಪಂದ್ಯ 21 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 15 – ಪಂದ್ಯ 22 – ಹೈದರಾಬಾದ್ ಕಿಂಗ್ಸ್‌ಮೆನ್ vs ಇಸ್ಲಾಮಾಬಾದ್ ಯುನೈಟೆಡ್ – ಕರಾಚಿ – ರಾತ್ರಿ
  • ಏಪ್ರಿಲ್ 16 – ಪಂದ್ಯ 23 – ಪೇಶಾವರ್ ಝಲ್ಮಿ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 16 – ಪಂದ್ಯ 24 – ಹೈದರಾಬಾದ್ ಕಿಂಗ್ಸ್‌ಮೆನ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ಮಧ್ಯಾಹ್ನ
  • ಏಪ್ರಿಲ್ 17 – ಪಂದ್ಯ 25 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಕರಾಚಿ – ರಾತ್ರಿ
  • ಏಪ್ರಿಲ್ 18 – ಪಂದ್ಯ 26 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್ಸ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 19 – ಪಂದ್ಯ 27 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ರಾತ್ರಿ
  • ಏಪ್ರಿಲ್ 19 – ಪಂದ್ಯ 28 – ಲಾಹೋರ್ ಖ್ಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 21 – ಪಂದ್ಯ 29 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 21 – ಪಂದ್ಯ 30 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಲಾಹೋರ್ – ರಾತ್ರಿ
  • ಏಪ್ರಿಲ್ 22 – ಪಂದ್ಯ 31 – ರಾವಲ್ಪಿಂಡಿ ರೈಡರ್ಸ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 22 – ಪಂದ್ಯ 32 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 23 – ಪಂದ್ಯ 33 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 23 – ಪಂದ್ಯ 34 – ರಾವಲ್ಪಿಂಡಿ ರೈಡರ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ಮಧ್ಯಾಹ್ನ
  • ಏಪ್ರಿಲ್ 24 – ಪಂದ್ಯ 35 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
  • ಏಪ್ರಿಲ್ 24 – ಪಂದ್ಯ 36 – ಇಸ್ಲಾಮಾಬಾದ್ ಗ್ಲಾಡಿಯೇಟರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 25 – ಪಂದ್ಯ 37 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ಮಧ್ಯಾಹ್ನ
  • ಏಪ್ರಿಲ್ 25 – ಪಂದ್ಯ 38 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
  • ಏಪ್ರಿಲ್ 26 – ಪಂದ್ಯ 39 – ರಾವಲ್ಪಿಂಡಿ ರೈಡರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ಮಧ್ಯಾಹ್ನ
  • ಏಪ್ರಿಲ್ 26 – ಪಂದ್ಯ 40 – ಇಸ್ಲಾಮಾಬಾದ್ ಯುನೈಟೆಡ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 28 – ಪಂದ್ಯ 41 – ಅರ್ಹತಾ ಸುತ್ತು – ರಾವಲ್ಪಿಂಡಿ – ರಾತ್ರಿ
  • ಏಪ್ರಿಲ್ 29 – ಪಂದ್ಯ 42 – ಎಲಿಮಿನೇಟರ್ 1 – ಲಾಹೋರ್ – ರಾತ್ರಿ
  • ಮೇ 1 – ಪಂದ್ಯ 43 – ಎಲಿಮಿನೇಟರ್ 2 – ಲಾಹೋರ್ – ರಾತ್ರಿ
  • ಮೇ 3 – ಪಂದ್ಯ 44 – ಫೈನಲ್ – ಲಾಹೋರ್

 

Source link

ಡಿಸಿ, ಎಡಿಸಿ ಡಿಜಿಟಲ್ ಸಹಿ ದುರುಪಯೋಗ! ಸಿಬ್ಬಂದಿ ಸೇರಿ 6 ಜನರ ಮೇಲೆ ಎಫ್​ಐಆರ್

ಚಿತ್ರದುರ್ಗ, ಮಾರ್ಚ್ 14: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಲ್ಲಿ ಚಿತ್ರದುರ್ಗ (Chitradurga) ನಗರಾಭಿವೃದ್ಧಿ ಕೋಶದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಕೆ!

ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಟಿ ಲೆವಲ್ ಟೆಕ್ನಿಕಲ್ ಸೆಲ್ (CLTC) ಸಿಬ್ಬಂದಿಗಳ ವೇತನದ ಹೆಸರಿನಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಈ ಅಕ್ರಮ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮೆಹಬೂಬ್ ಭಾಷಾ ಹಾಗೂ VMH ಎಂಟರ್‌ಪ್ರೈಸಸ್‌ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಮಗುವಿನ ಮುಖ ನೋಡುವ ಮೊದಲೇ ಕಣ್ಮುಚ್ಚಿದ ಮಹಿಳೆ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?

ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ. ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಿಗ್ನೇಚರ್ ಸೆರ್ಟಿಫಿಕೆಟ್ (DSC) ಕೀ ಕಳವು ಮಾಡಿ ದುರುಪಯೋಗಪಡಿಸಿಕೊಂಡಿರುವ ಆರೋಪವೂ ಹೊರಬಂದಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

76ರ ವಯಸ್ಸಿನಲ್ಲಿ ಅಕ್ರಮ ಸಂಬಂಧ?: ಒಬ್ಬಂಟಿಯಾಗಿದ್ದ ವೃದ್ಧನ ಭೀಕರ ಹತ್ಯೆ

ವಡಗೇರ, ಮಾ.14: ತನ್ನ ಪಾಡಿಗೆ ತಾನು ಜಮೀನಿನಲ್ಲಿ ಮನೆ ಮಾಡಿಕೊಂಡು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧನೊಬ್ಬನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿಯ ವಡಗೇರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. 76 ವರ್ಷದ ಹಂಪಣ್ಣ ಸಜ್ಜನ ಕೊಲೆಯಾದ ದುರ್ದೈವಿ. ಹಂಪಣ್ಣ ಸಜ್ಜನ ಅವರಿಗೆ ಮೂವರು ಗಂಡು ಮಕ್ಕಳಿದ್ದು, 15 ವರ್ಷಗಳ ಹಿಂದೆಯೇ ಆಸ್ತಿ ಹಂಚಿಕೆ ಮಾಡಿ ತನಗಾಗಿ 12 ಎಕರೆ ಜಮೀನು ಉಳಿಸಿಕೊಂಡಿದ್ದರು. 12 ವರ್ಷಗಳ ಹಿಂದೆ ಪತ್ನಿ ನಿಧನರಾದ ಬಳಿಕ, ಮಕ್ಕಳು ಗ್ರಾಮದಲ್ಲಿದ್ದರೂ ಹಂಪಣ್ಣ ಜಮೀನಿನಲ್ಲಿ ಪುಟ್ಟ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ವಾಸವಿದ್ದರು.

ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಹಂಪಣ್ಣ ಮಲಗಿದ್ದಾಗ ಕಲ್ಲಿನಿಂದ ತಲೆ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಗ್ರಾಮಕ್ಕೆ ಹಾಲು ಪಡೆಯಲು ವೃದ್ಧ ಬಾರದಿದ್ದಾಗ ಅನುಮಾನಗೊಂಡು ಜಮೀನಿಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಹಾಗೂ ವಡಗೇರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಪ್ರಾಥಮಿಕ ತನಿಖೆಯ ವೇಳೆ, ಹಂಪಣ್ಣ ಅವರು ಪರ ಸ್ತ್ರೀಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಮಾಹಿತಿ ಗ್ರಾಮಸ್ಥರಿಂದ ಲಭ್ಯವಾಗಿದೆ. ಇದೇ ಕಾರಣಕ್ಕೆ ದ್ವೇಷ ಸಾಧಿಸಿ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Jitesh Sharma: ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು!

ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಜಿತೇಶ್ ಶರ್ಮಾ ಕಾಣಿಸಿಕೊಂಡಿರಲಿಲ್ಲ. ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡದ ಭಾಗವಾಗಿದ್ದ ಜಿತೇಶ್ ಅವರನ್ನು ಏಕಾಏಕಿ ತಂಡದಿಂದ ಕೈ ಬಿಡಲಾಗಿತ್ತು. ಹೀಗೆ ತಂಡದಿಂದ ಕೈ ಬಿಟ್ಟಿದ್ದರ ಬಗ್ಗೆ ಯುವ ವಿಕೆಟ್ ಕೀಪರ್ ಬ್ಯಾಟರ್ ಮನಬಿಚ್ಚಿ ಮಾತನಾಡಿದ್ದಾರೆ.

ಭಾರತ ತಂಡದಿಂದ, ಅದರಲ್ಲೂ ಟಿ20 ವಿಶ್ವಕಪ್​ನಿಂದ ನನ್ನನ್ನು ಕೈ ಬಿಟ್ಟಿದ್ದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ. ಏಕೆಂದರೆ ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಜಿತೇಶ್ ಶರ್ಮಾ, ಫೆಬ್ರವರಿ 1 ರಂದು ನನ್ನ ತಂದೆ ತೀರಿಕೊಂಡಿದ್ದಾರೆ. ನಾನು ತಂಡಕ್ಕೆ ಆಯ್ಕೆಯಾಗದ ಕಾರಣ, ನನಗೆ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಇರಲು ಸಾಧ್ಯವಾಯಿತು. “ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯವಿತ್ತು” ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.

ಆರಂಭದಲ್ಲಿ ತಂಡದಿಂದ ಹೊರಬಿದ್ದಾಗ ಬೇಸರವಾಗಿದ್ದರೂ, ತಂದೆಯ ಸಾವಿನ ನಂತರ ಆ ನೋವು ಮಾಯವಾಯಿತು. ಏಕೆಂದರೆ ಒಬ್ಬ ಮಗನಾಗಿ ಅವರ ಕೊನೆಯ ಕ್ಷಣಗಳಲ್ಲಿ ಅವರ ಜೊತೆಗಿದ್ದುದು ನನಗೆ ತೃಪ್ತಿ ತಂದಿದೆ. ಹಾಗಾಗಿ ವಿಶ್ವಕಪ್ ತಪ್ಪಿದ್ದಕ್ಕೆ ನನಗೆ ಈಗ ಯಾವುದೇ ವಿಷಾದವಿಲ್ಲ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.

ಜಿತೇಶ್ ಶರ್ಮಾ ಅವರ ತಂದೆ ಮೋಹನ್ ಶರ್ಮಾ ಅವರು ಸುದೀರ್ಘ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಕಳೆದ ತಿಂಗಳು ಒಂದನೇ ತಾರೀಖಿನಂದು ನಿಧನರಾಗಿದ್ದರು. ಆ ಸಮಯದಲ್ಲಿ ಟಿ20 ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ನಡೆಯುತ್ತಿತ್ತು. ಜಿತೇಶ್ ಅವರು ತಂಡದಲ್ಲಿ ಸ್ಥಾನ ಪಡೆಯದಿದ್ದಾಗ ಆರಂಭದಲ್ಲಿ ನಿರಾಸೆಗೊಂಡಿದ್ದರು.

ಆದರೆ, ತಂದೆಯ ಆರೋಗ್ಯ ಕ್ಷೀಣಿಸುತ್ತಿದ್ದ ಕಾರಣ, ಅವರು ತಂಡದಲ್ಲಿಲ್ಲದ ಕಾರಣದಿಂದಲೇ ತಮ್ಮ ತಂದೆಯ ಕೊನೆಯ 7 ದಿನಗಳ ಕಾಲ ಅವರ ಜೊತೆಗಿರಲು ಸಾಧ್ಯವಾಯಿತು ಎಂದು ಜಿತೇಶ್ ಶರ್ಮಾ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಇನ್ನು ತಂದೆಯ ನಿಧನದ ನಂತರ, ಮನೆಯ ಹಿರಿಯ ಮಗನಾಗಿ ತಮ್ಮ ತಾಯಿ ಮತ್ತು ತಮ್ಮನ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದಾಗಿ ಜಿತೇಶ್ ಶರ್ಮಾ ತಿಳಿಸಿದ್ದಾರೆ. ಕ್ರಿಕೆಟ್ ಜೀವನದ ಏರಿಳಿತಗಳಿಗಿಂತ ಕುಟುಂಬದ ಸಾಮೀಪ್ಯ ದೊಡ್ಡದು ಎಂಬುದು ಅವರ ನಿಲುವು. ಇದೀಗ ಸಂಪೂರ್ಣ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಅವರೊಂದಿಗೆ ನಾನು ಸಮಯ ಕಳೆಯಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಇದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಗಂಭೀರ್ ನೀಡಿದ ಎಚ್ಚರಿಕೆ..!

ಇದೀಗ ಆರ್​ಸಿಬಿ ಕ್ಯಾಂಪ್ ಸೇರಿರುವ ಜಿತೇಶ್ ಶರ್ಮಾ ಮುಂಬರುವ ಐಪಿಎಲ್​ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಐಪಿಎಲ್ 2026 ರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ ಉಳಿಸಿಕೊಡುವ ಭರವಸೆ ನೀಡಿದ್ದಾರೆ.

 

Source link

‘ಶ್ರೀ ಗಂಧದ ಗುಡಿ’ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ ಬುರ್ಲಿ

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಸಂಜನಾ ಬುರ್ಲಿ ಅವರು ಹೊರ ಬಂದಿದ್ದಾರೆ. ಅವರು ಧಾರಾವಾಹಿಯನ್ನು ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿತ್ತು. ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ನಾನು ವಿವಾಹ ಆಗುತ್ತಿರುವ ಕಾರಣದಿಂದ ಧಾರಾವಾಹಿಯಿಂದ ಹೊರ ಬಂದಿದ್ದೇನೆ’ ಎಂದು ಅವರು ಹೇಳಿದ್ದಾರೆ. ಹೊಸ ಪಾತ್ರಧಾರಿ, ಸ್ನೇಹಾ ಮಂಜುನಾಥ್​​ಗೂ ಪ್ರೀತಿ ತೋರಿಸುವಂತೆ ಅವರು ಕೋರಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link