Category Archives: Blog

Your blog category

ಡಿವೋರ್ಸ್​​ ನೀಡದೆ 2ನೇ ಮದುವೆ: ಪೊಲೀಸರ ಜೊತೆ ಮಂಟಪಕ್ಕೇ ನುಗ್ಗಿ ಪತಿಗೆ ಶಾಕ್​​ ಕೊಟ್ಟ ಪತ್ನಿ – Kannada News | Wife Stops Husband’s Second Marriage in Filmy Style at Yedeyuru in Tumakuru

ಪತಿಯ ಎರಡನೇ ಮದುವೆ ತಡೆದ ಪತ್ನಿImage Credit source: Tv9 Kannada

ತುಮಕೂರು, ಫೆಬ್ರವರಿ 08: ತನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತ್ನಿ ಭರ್ಜರಿ ಶಾಕ್​​ ಕೊಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ನಡೆದಿದೆ. ಥೇಟ್​​ ಸಿನಿಮಾ ಶೈಲಿಯ ದೃಶ್ಯ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದು, ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆ ಮಾಡಲಾಗ್ತಿತ್ತು ಎಂಬ ಆರೋಪ ಕೇಳಿಬಂದಿದೆ.

2014ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಲೇಪಾಕ್ಷಿ ಎಂಬಾಕೆಯನ್ನ ಹರಿಪ್ರಸಾದ್ ಮದುವೆಯಾಗಿದ್ದರು. 8ನೇ ತರಗತಿಯಿಂದಲೇ ಇವರಿಬ್ಬರು ಪರಸ್ಪರ ಪ್ರಿತಿಸಿದ್ದರು ಎನ್ನಲಾಗಿದ್ದು, ಮದುವೆ ಬಳಿಕ 10 ವರ್ಷ ಸಂಸಾರವನ್ನೂ ನಡೆಸಿದ್ದರು. ಆ ಬಳಿಕ ಕೌಟುಂಬಿಕ ಕಲಹದ ಕಾರಣಕ್ಕೆ ದಂಪತಿ ಬೇರೆಯಾಗಿದ್ದರು. ಈ ನಡುವೆ ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆಗೆ ಮದುವೆಗೆ ಹರಿಪ್ರಸಾದ್​ ಮುಂದಾಗಿದ್ದಾರೆ. ಅದರಂತೆ ಯಡೆಯೂರಿನ SLN ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ 8:15ರಿಂದ 8:40ರ ವರೆಗೆ ಇದ್ದ ಮುಹೂರ್ತದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರ ಜೊತೆ ಲೇಪಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:  ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ; 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ

ಇನ್ನು ಪತ್ನಿ ಕಂಡು ಹರಿಪ್ರಸಾದ್​​ ಕಕ್ಕಾಬಿಕ್ಕಿಯಾಗಿದ್ದರೆ, ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ತೆಗೆದ ಲೇಪಾಕ್ಷಿ ಕೊನೆಗೂ ಮದುವೆ ನಿಲ್ಲಿಸಿದ್ದಾರೆ. ಮತ್ತೊಂದು ಮದುವೆಯ ಆಸೆಯಲ್ಲಿ ಹಸೆಮಣೆ ಏರಿದ್ದ ಹರಿಪ್ರಸಾದ್​​, ತಾಳಿ ಕಟ್ಟದೆ ಪೊಲೀಸ್​​ ಠಾಣೆಗೆ ತೆರಳಿದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲೇಪಾಕ್ಷಿ ಕುಟುಂಬಸ್ಥರು ಹರೀಶ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರೀತಿಸಿ ಮುದುವೆಯಾದಾಕೆಗೆ ವಿಚ್ಚೇದನವನ್ನೂ ನೀಡದೆ ಈಗ ಮತ್ತೊಬ್ಬಳಿಗೆ ತಾಳಿಕಟ್ಟಲು ಈತ ಹೋಗಿದ್ದಾನೆ ಅಂದ್ರೆ ಏನು ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:26 pm, Sun, 8 February 26

Source link

ಟಾಪ್​​ಲೆಸ್ ಆಗಿ ಕಾಣಿಸಿಕೊಂಡ ‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ; ಫೋಟೋ ವೈರಲ್ – Kannada News | Arjun Reddy actress Shalini Pandey Goes Topless for latest photoshoot

ಸೂಪರ್ ಹಿಟ್ ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿ ಶಾಲಿನಿ ಪಾಂಡೆ (Shalini Pandey) ಅವರು ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಆ ಪಾತ್ರದಲ್ಲಿ ಅವರನ್ನು ಪ್ರೇಕ್ಷಕರು ಬಹಳ ಇಷ್ಟಪಟ್ಟಿದ್ದರು. ಆದರೆ ಶಾಲಿನಿ ಪಾಂಡೆ ಅವರು ರಿಯಲ್ ಲೈಫ್​​ನಲ್ಲಿ ಸಖತ್ ಬೋಲ್ಡ್. ಈಗ ತಮ್ಮ ಗ್ಲಾಮರಸ್ ಅವತಾರದ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಸಾಮಾನ್ಯವಾಗಿ ತೆರೆಯ ಮೇಲೆ ಸಂಪ್ರದಾಯಬದ್ಧ ಪಾತ್ರಗಳಲ್ಲಿ ನಟಿಸುವ ಶಾಲಿನಿ ಅವರು, ತಮ್ಮ ಇಮೇಜ್ ಬದಿಗಿಟ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶಾಲಿನಿ ಪಾಂಡೆ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಶಾಲಿನಿ ಕೇವಲ ಟವಲ್ ಸುತ್ತಿಕೊಂಡು, ಬೆನ್ನು ತೋರಿಸಿ ಪೋಸ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದೇ ಸರಳ ಮೇಕಪ್, ಬಿಟ್ಟ ಕೂದಲು ಹಾಗೂ ಮಂದ ಬೆಳಕಿನಲ್ಲಿ ಮೂಡಿಬಂದಿರುವ ಈ ಫೋಟೋಗಳು ಶಾಲಿನಿ ಅವರ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತಿವೆ.

ಶಾಲಿನಿ ಪಾಂಡೆ ಅವರ ಸಹಜವಾದ ಸೌಂದರ್ಯ ಮತ್ತು ಫಿಟ್‌ನೆಸ್‌ನಿಂದಾಗಿ ಈ ಫೋಟೋಗಳು ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿವೆ. ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಮೆಚ್ಚುಗೆಯ ಮಳೆ ಸುರಿಯುತ್ತಿದ್ದಾರೆ. ಕೆಲವರಿಗೆ ಶಾಲಿನಿ ಅವರ ಈ ಅವತಾರ ಕಂಡು ಅಚ್ಚರಿ ಆಗಿದೆ. ‘ಮುಗ್ಧತೆಯ ಹಿಂದೆ ಇಷ್ಟೊಂದು ಹಾಟ್‌ನೆಸ್ ಅಡಗಿದೆಯಾ’ ಎಂದು ಕೆಲವು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ತೆಲುಗಿನ ‘ಅರ್ಜುನ ರೆಡ್ಡಿ’ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ಶಾಲಿನಿ ಪಾಂಡೆ, ನಂತರ ಬಾಲಿವುಡ್‌ನತ್ತ ಮುಖ ಮಾಡಿದರು. ಇತ್ತೀಚೆಗಷ್ಟೇ ಅವರು ಪುಲ್ಕಿತ್ ಸಾಮ್ರಾಟ್ ಮತ್ತು ವರುಣ್ ಶರ್ಮಾ ನಟನೆಯ ‘ರಾಹು ಕೇತು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಆರಿಸಿಕೊಳ್ಳುತ್ತಿರುವ ಶಾಲಿನಿ, ಈಗ ತಮ್ಮ ಈ ಬೋಲ್ಡ್ ಫೋಟೋಶೂಟ್ ಮೂಲಕ ತಾನು ಕೇವಲ ಸಾಂಪ್ರದಾಯಿಕ ಪಾತ್ರಗಳಿಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಸಮುದ್ರ ತೀರದಲ್ಲಿ ಬಿಕಿನಿ ಧರಿಸಿ ಮಿಂಚಿದ ಶಾಲಿನಿ ಪಾಂಡೆ

ತೆರೆಯ ಮೇಲಿನ ಸರಳತೆ ಮತ್ತು ಆಫ್-ಸ್ಕ್ರೀನ್‌ನಲ್ಲಿನ ಈ ಬೋಲ್ಡ್ ಲುಕ್ ಎರಡನ್ನೂ ಶಾಲಿನಿ ಸಮಾನವಾಗಿ ನಿಭಾಯಿಸುತ್ತಿರುವುದು ಅವರ ವೃತ್ತಿಜೀವನದ ಹೊಸ ಆಯಾಮವನ್ನು ಸೂಚಿಸುತ್ತಿದೆ. ಇನ್​ಸ್ಟಾಗ್ರಾಮ್​​ನಲ್ಲಿ ಶಾಲಿನಿ ಅವರನ್ನು 23 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:04 pm, Sun, 8 February 26

Source link

Orbit Snooping: ಶತ್ರು ಉಪಗ್ರಹಗಳ ಮೇಲೆ ಬೇಹುಗಾರಿಕೆ ಮಾಡಬಲ್ಲ ಸೆಟಿಲೈಟ್​ಗಳು ಭಾರತದಿಂದ – Kannada News | India develops capability of orbit snooping that can keep eye on enemy satellites

ನವದೆಹಲಿ, ಫೆಬ್ರುವರಿ 8: ಬಾಹ್ಯಾಕಾಶದಲ್ಲಿ ಬೇರೊಂದು ಸೆಟಿಲೈಟ್​ಗಳ ಚಲನವಲನ ಗ್ರಹಿಸುವಂತಹ ಬೇಹುಗಾರಿಕೆ ಸಾಮರ್ಥ್ಯವನ್ನು ಭಾರತ ಪಡೆದಿದೆ. ಗುಜರಾತ್​ನ ಅಹ್ಮಾದಾದ್ ಮೂಲದ ಅಝಿಸ್ಟಾ ಇಂಡಸ್ಟ್ರೀಸ್ ಪ್ರೈ ಲಿ ಸಂಸ್ಥೆ (Azista Industries) ಇಂಥದ್ದೊಂದು ಸಾಮರ್ಥ್ಯ ತನಗಿರುವುದನ್ನು ಸಾಬೀತುಪಡಿಸಿದೆ. ಅದರ ಏರೋಸ್ಪೇಸ್ ವಿಭಾಗವು ಒಂದೇ ಕಕ್ಷೆಯಲ್ಲಿರುವ ಇನ್ನೊಂದು ಸೆಟಿಲೈಟ್​ನ ಇಮೇಜ್​ಗಳನ್ನು ಸೆರೆ ಹಿಡಿಯಬಲ್ಲುದು. ಇನ್ನು ಆರ್ಬಿಟ್ ಸ್ನೂಪಿಂಗ್ (Orbit Snooping) ಎಂದು ಕರೆಯಲಾಗುತ್ತದೆ. ಭಾರತದ ಖಾಸಗಿ ಕಂಪನಿಯೊಂದು ಸ್ವಂತವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಿ ಈ ಸಾಧನೆ ಮಾಡಿದ್ದು ಇದೇ ಮೊದಲು.

ಅಝಿಸ್ಟಾ ಸಂಸ್ಥೆಯ 80 ಕಿಲೋ ಭಾರದ ಭೂ ಪರಿವೀಕ್ಷಣಾ ಉಪಗ್ರಹವಾದ ಎಎಫ್​ಆರ್ (AFR – earth observing satellite) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಇಮೇಜ್​ಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಫೆಬ್ರುವರಿ 3ರಂದು ಅಝಿಸ್ಟಾ ನಡೆಸಿದ ಎರಡೂ ಪ್ರಯೋಗಗಳು ಯಶಸ್ವಿಯಾಗಿವೆ.

ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ

ಕಕ್ಷೆಯಲ್ಲಿ ಸೆಟಿಲೈಟ್​ಗಳು ಗಂಟೆಗೆ ಸುಮಾರು 50,000 ಕಿಮೀ ವೇಗದಲ್ಲಿ ತಿರುಗುತ್ತಿರುತ್ತವೆ. ಕಕ್ಷೆಯಲ್ಲಿ ಇನ್ನೊಂದು ವಸ್ತುವಿನ ದೃಶ್ಯ ಸೆರೆ ಹಿಡಿಯುವುದು ಕಷ್ಟ. ಅದರಲ್ಲೂ ಸೂರ್ಯನ ಪ್ರಖರ ಬಿಸಿಲು ಇರುವಾಗ ಬಹಳ ಕಷ್ಟ. ಅಝಿಸ್ಟಾದ ಸೆಟಿಲೈಟ್​ನಲ್ಲಿರುವ ಬಹಳ ಸುಧಾರಿತ ಸಾಫ್ಟ್​ವೇರ್ ಮತ್ತು ಕ್ಯಾಮೆರಾಗಳು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿವೆ. ಐಎಸ್​ಎಸ್ ಅನ್ನು 245-300 ಕಿಮೀ ದೂರದಿಂದ ಫೋಟೋ ಸೆರೆ ಹಿಡಿಯುವ ಕೆಲಸ ಮಾಡಿದೆ.

ಆರ್ಬಿಟ್ ಸ್ನೂಪಿಂಗ್ ಯಾಕೆ ಮುಖ್ಯ?

ಕಕ್ಷೆಯಲ್ಲಿ ಹಾನಿಕಾರಕವಾಗಬಹುದಾದ ವಸ್ತುಗಳು ಹಾಗೂ ಶತ್ರುಗಳ ಸೆಟಿಲೈಟ್​ಗಳನ್ನು ಗುರುತಿಸಲು ಈ ಸ್ನೂಪಿಂಗ್ ಸಹಾಯಕವಾಗುತ್ತದೆ. ಭಾರತದಿಂದ ಹಲವು ಸಾವಿರಾರು ಕೋಟಿ ರೂ ಮೌಲ್ಯದ ಹಲವು ಸೆಟಿಲೈಟ್​ಗಳು ಕಕ್ಷೆಯಲ್ಲಿ ತಿರುಗುತ್ತಿವೆ. ರಕ್ಷಣೆಯಿಂದ ಹಿಡಿದು ಸಂವಹನದವರೆಗೆ ಮಹತ್ವದ ಕಾರ್ಯಗಳಿಗೆ ಈ ಸೆಟಿಲೈಟ್​ಗಳು ಬಳಕೆ ಆಗುತ್ತಿವೆ. ಶತ್ರು ದೇಶಗಳ ದಾಳಿಯಿಂದಲೋ ಅಥವಾ ಮತ್ತೊಂದರಿಂದಲೂ ಇವುಗಳು ಹಾನಿಯಾಗದಂತೆ ನೋಡಿಕೊಳ್ಳಲು ಕಕ್ಷೆಯಲ್ಲಿ ಕಣ್ಣಿಟ್ಟಿರುವುದು ಬಹಳ ಮುಖ್ಯ. ಹೀಗಾಗಿ, ಆರ್ಬಿಟ್ ಸ್ನೂಪಿಂಗ್ ಅಗತ್ಯ ಎನಿಸುತ್ತದೆ.

ಇದನ್ನೂ ಓದಿ: ಭಾರತದ ನಕ್ಷೆಯಲ್ಲಿ ಪಿಒಕೆ ಸೇರಿಸಿದ ಅಮೆರಿಕ; ಪಾಕಿಸ್ತಾನಕ್ಕೆ ಬಿಸಿ ತುಪ್ಪವಾದ ಟ್ರಂಪ್

ಭಾರತದ ಖಾಸಗಿ ಕಂಪನಿಯೊಂದು ಸ್ವಂತವಾಗಿ ಇಂಥದ್ದೊಂದು ಸಾಮರ್ಥ್ಯ ಅಭಿವೃದ್ಧಿಪಡಿಸಿರುವುದು ಗಮನಾರ್ಹ. ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೂ ತೆರೆಯುವ ಸರ್ಕಾರದ ಕ್ರಮ ಮತ್ತು ಉದ್ದೇಶ ಫಲಕೊಡುತ್ತಿರುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಿಹಾರ್ ಜೈಲು ಪಾಲಾದ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್; ಕಾರಣ ಏನು? – Kannada News | Actor Rajpal Yadav sent to Tihar Jail in check bounce case

ಹಿಂದಿ ಚಿತ್ರರಂಗದ ಖ್ಯಾತ ಹಾಸ್ಯ ನಟ ರಾಜ್​​ಪಾಲ್ ಯಾದವ್ (Rajpal Yadav) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಅಪರಾಧದ ಕಾರಣದಿಂದ ಅವರು ಜೈಲು ಪಾಲಾಗುವಂತಾಗಿದೆ. ಒಂದೂವರೆ ದಶಕದ ಹಿಂದೆ ಪಡೆದಿದ್ದ ಸಾಲವನ್ನು ಮರುಪಾವತಿ ಮಾಡಲಾಗದೇ ಇದ್ದಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಗಿದೆ. ರಾಜ್​ಪಾಲ್ ಯಾದವ್ ಅವರು ಈಗ ತಿಹಾರ್ ಜೈಲು (Tihar Jail) ಸೇರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಸಿನಿಮಾ ಮಾಡುವ ಸಲುವಾಗಿಯೇ ಸಾಲ ಪಡೆದಿದ್ದ ರಾಜ್​ಪಾಲ್ ಯಾದವ್ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ.

ದೆಹಲಿ ಮೂಲದ ಉದ್ಯಮಿಯೊಬ್ಬರಿಂದ ರಾಜ್​ಪಾಲ್ ಯಾದವ್ ಅವರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ತಮ್ಮದೇ ನಿರ್ದೇಶನದ ‘ಅತಾ ಪತಾ ಲಾಪತಾ’ ಸಿನಿಮಾ ಸಲುವಾಗಿ ಅವರ ಸಾಲ ಮಾಡಿದ್ದರು. ಆದರೆ ಆ ಸಿನಿಮಾ ಸೋತಿತು. ಆದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಶುರು ಆಯಿತು. ಸಾಲ ತೀರಿಸಲು ರಾಜ್​ಪಾಲ್ ಯಾದವ್ ಅವರಿಗೆ ಸಾಧ್ಯವಾಗಲೇ ಇಲ್ಲ.

ಸಾಲ ಕೊಟ್ಟವರು ರಾಜ್​ಪಾಲ್ ಯಾದವ್ ಮೇಲೆ ಕೇಸ್ ಹಾಕಿದರು. ರಾಜ್​ಪಾಲ್ ಯಾದವ್ ನೀಡಿದ್ದ ಹಲವು ಚೆಕ್​​ಗಳು ಬೌನ್ಸ್ ಆಗಿದ್ದರಿಂದ ಅವರಿಗೆ 2018ರಲ್ಲೇ ಶಿಕ್ಷೆ ಪ್ರಕಟ ಆಯಿತು. 6 ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಲಾಯಿತು. ಆ ಬಳಿಕವೂ ರಾಜ್​ಪಾಲ್ ಯಾದವ್ ಬುದ್ಧಿ ಕಲಿಯಲಿಲ್ಲ. ಸಾಲ ತೀರಿಸಲು ಅವರು ವಿಫಲರಾದರು.

ಒಂದೂವರೆ ದಶಕಗಳ ಕಾಲ ಎಳೆದಾಡಿಕೊಂಡು ಬಂದಿದ್ದ ಈ ಕೇಸ್ ಈಗ ಅಂತಿಮ ಘಟಕ್ಕೆ ಬಂದಿದೆ. ನೀವು ಕೂಡಲೇ ಶರಣಾಗಬೇಕು ಎಂದು ರಾಜ್​ಪಾಲ್ ಯಾದವ್ ಅವರಿಗೆ ಕೋರ್ಟ್ ಸೂಚನೆ ನೀಡಿತು. ಅದರಂತೆ, ರಾಜ್​ಪಾಲ್ ಯಾದವ್ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಸಮಯಾವಕಾಶ ನೀಡುವಂತೆ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: Rajpal Yadav: 26,000 ರೂ. ನೀಡಿ ಹೇರ್​ಕಟ್​ ಮಾಡಿಸಿಕೊಂಡಿದ್ದ ರಾಜ್​ಪಾಲ್​ ಯಾದವ್​; ಹಾಸ್ಯ ನಟನ ಪ್ರಯತ್ನವೆಲ್ಲ ನೀರಲ್ಲಿ ಹೋಮ

2010ರಲ್ಲಿ ರಾಜ್​ಪಾಲ್ ಯಾದವ್ ಪಡೆದಿದ್ದ 5 ಕೋಟಿ ರೂಪಾಯಿ ಸಾಲ ಈಗ 9 ಕೋಟಿ ರೂಪಾಯಿ ಆಗಿ ಬೆಳೆದಿದೆ. ಇದನ್ನು ಮರುಪಾವತಿ ಮಾಡಲು ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿತ್ತು. ಆದರೆ ಅದನ್ನು ಅವರು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಈ ಬಾರಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ: 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ – Kannada News | Married Woman Dies by Suicide Over Alleged Harassment by Mother in Law in Basavakalyan, Bidar

ಮೃತ ಅಂಜನಾಬಾಯಿ ಶೇಖರ್ ಪಾಟೀಲ್Image Credit source: Tv9 Kannada

ಬೀದರ್​​, ಫೆಬ್ರವರಿ 08: ವೇಶ್ಯಾವಾಟಿಕೆಗೆ ಅತ್ತೆಯಿಂದ ಒತ್ತಾಯ ಆರೋಪ ಹಿನ್ನೆಲೆ 11 ತಿಂಗಳ ಮಗು ಬಿಟ್ಟು ಗೃಹಿಣಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ. ಅಂಜನಾಬಾಯಿ ಶೇಖರ್ ಪಾಟೀಲ್(22) ಮೃತ ಯುವತಿಯಾಗಿದ್ದು, ಪತಿ ಮನೆಯವರಿಂದ ನಿತ್ಯ ಕಿರುಕುಳ ಹಿನ್ನೆಲೆ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಮದುವೆ ಬಳಿಕ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿ ಯುವತಿಗೆ ನಿತ್ಯವೂ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಅಂಜನಾಬಾಯಿ ಪತಿ ಶೇಖರ್​​ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಿತ್ಯವೂ ರಾತ್ರಿ 11-12 ಗಂಟೆ ಅವಧಿಯಲ್ಲಿ ಮನೆಗೆ ಬರುತ್ತಿದ್ದ. ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು. ಆದರೆ ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ. ನಿನಗೆ ಅಡುಗೆ ಬರಲ್ಲ, ನೀನು ಚೆನ್ನಾಗಿಲ್ಲ ಎಂದೆಲ್ಲ ಹೀಯಾಳಿಸಿದ್ದಾರೆ. ಜೊತೆಗೆ ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದು, ಆ ಬಗ್ಗೆ ಅಂಜನಾಬಾಯಿ ಹೆತ್ತವರ ಬಳಿಯೂ ಹೇಳಿಕೊಂಡಿದ್ದಳು. ಆದರೆ ಈ ಬಗ್ಗೆ ಪೋಷಕರು ಆಕೆಗೆ ಸಮಾಧಾನ ಮಾಡಿದ್ದು, ಇಂದೆಲ್ಲ ನಾಳೆ ಸರಿಹೋಗಬಹುದು ಎಂದು ತಿಳುವಳಿಕೆ ಹೇಳಿದ್ದರು.  ಈ ನಡುವೆ ಕಿರುಕುಳ ತಾಳಲಾರದೆ ಅಂಜನಾಬಾಯಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಆಕೆಯ ತಂದೆ ವಿಜಯಕುಮಾರ್ ದೂರಿನ ಮೇರೆಗೆ ಮೃತಳ ಗಂಡ ಶೇಖರ್ ಸೇರಿ ಮೂವರ ವಿರುದ್ಧ ಬಸವಕಲ್ಯಾಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾತ್ರಿ ಹಿಂದೂ ಮಹಿಳೆಯ ಮನೆಯಲ್ಲಿ ಕಾಂಗ್ರೆಸ್​​ ಮುಖಂಡ ಸಿಕ್ಕಿಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಸ್ಪಿರಿಟ್ ಕುಡಿದು ಇಬ್ಬರು ಯುವಕರ ಸಾವು

ಪಾರ್ಟಿಗೆಂದು ಹೋದಾಗ ಸ್ಪಿರಿಟ್ ಕುಡಿದು ಅಸ್ವಸ್ಥರಾಗಿದ್ದ ಇಬ್ಬರು ಯುವಕರು ಮೃತಪಟ್ಟಿರವ ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿಯಲ್ಲಿ ನಡೆದಿದೆ. ಫೆಬ್ರವರಿ 4ರಂದು ಸ್ಪಿರಿಟ್ ಸೇವಿಸಿದ್ದ ಬಳಿಕ ನಾಲ್ವರು ಅಸ್ವಸ್ಥಗೊಂಡಿದ್ದರು. ಆ ಪೈಕಿ ಹುಬ್ಬಳ್ಳಿಯ ಕಿಮ್ಸ್​​ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರಮೇಶ್ ಹೊಸಹಳ್ಳಿ ಮತ್ತು ಅಮರಯ್ಯ ಹಿರೇಮಠ ಪ್ರಾಣ ಕಳೆದುಕೊಂಡಿದ್ದರೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇಬ್ಬರಿಗೆ ಅನಾರೋಗ್ಯ… ಟೀಮ್ ಇಂಡಿಯಾಗೆ ಚಿಂತೆ ಶುರು

Source link

ಮೆಟ್ರೋ ಪ್ರಯಾಣಿಕರಿಗೆ ಬಿಗ್​​ ಶಾಕ್​​: ವಿವಾದದ ನಡುವೆಯೂ ನಿರ್ಧಾರದಂತೆ ನಾಳೆಯಿಂದ ದರ ಏರಿಕೆ ಫಿಕ್ಸ್​ – Kannada News | Namma Metro Fare Hike Confirmed: Ticket Prices to Increase from February 9

ನಮ್ಮ ಮೆಟ್ರೋ ರೈಲುಗಳ ಟಿಕೆಟ್​​ ದರ ಏರಿಕೆ ಫಿಕ್ಸ್​Image Credit source: Google

ಬೆಂಗಳೂರು, ಫೆಬ್ರವರಿ 08: ನಮ್ಮ ಮೆಟ್ರೋ ಬೆಲೆ ಏರಿಕೆ ವಿಚಾರವಾಗಿ ಪ್ರಯಾಣಿಕರ ಆಕ್ರೋಶ ಒಂದೆಡೆಯಾದ್ರೆ ರಾಜಕೀಯ ಕೆಸರೆರೆಚಾಟಗಳು ಮತ್ತೊಂದೆಡೆ ನಡೆಯುತ್ತಿವೆ. ಈ ನಡುವೆ ಬಿಎಂಆರ್​​ಸಿಎಲ್​​ ಮಾತ್ರ ನಾಳೆಯಿಂದಲೇ ದರ ಏರಿಕೆ ಆಗೋದು ಫಿಕ್ಸ್​​ ಎಂದಿದೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ BMRCL ಎಂಡಿ ರವಿಶಂಕರ್, ಕೇಂದ್ರ ಸರ್ಕಾರದಿಂದ ಅಧಿಸೂಚನೆ ಬಾರದ ಕಾರಣ ಮೆಟ್ರೋ ದರ ಏರಿಕೆಗೆ ಸದ್ಯ ತಡೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತುರ್ತಾಗಿ ದರ ಏರಿಕೆ ನಿಲ್ಲಿಸುವಂತೆ ಆದೇಶ ಬಂದರೆ ಮಾತ್ರ ಈ ನಿರ್ಧಾರಕ್ಕೆ ಬ್ರೇಕ್​​ ಬೀಳಲಿದೆ ಎಂದು ತಿಳಿಸಿದ್ದಾರೆ.

ಸೋಮವಾರದಿಂದ ನಮ್ಮ ಮೆಟ್ರೋ ರೈಲುಗಳ ಟಿಕೆಟ್ ದರ ಹೆಚ್ಚಳ ಆಗೋದಿಲ್ಲ. ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಕಟ್ಟರ್ ಇದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ ಎಂದು ಸಂಸದ ತೇಜಸ್ವಿಸೂರ್ಯ ಹೇಳಿದ್ದರು. ಆದರೆ ಇತ್ತ BMRCL ಅಧಿಕಾರಿಗಳು ಮಾತ್ರ, ನಮಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲಿಯವರೆಗೆ ನಮ್ಮ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ಮಾಹಿತಿ ಬಂದ ನಂತರ ಟಿಕೆಟ್ ದರ ಇಳಿಕೆ ಬಗ್ಗೆ ತೀರ್ಮಾನ ಮಾಡುತ್ತೇವೆ ಅಂತಿದ್ದಾರೆ.

ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಸಮರ; ಯುದ್ಧ ಪೂರ್ತಿ ಗೆದ್ದಿಲ್ಲ ಎಂದ ಸಂಸದ

ಬೆಲೆ ಏರಿಕೆಗೆ ಬ್ರೇಕ್​​ ಬಿದ್ದರೂ ಅದು ತಾತ್ಕಾಲಿಕ?

ಇನ್ನು ನಾಳೆಯಿಂದ ಟಿಕೆಟ್​​ ದರ ಏರಿಕೆಗೆ ಒಂದೊಮ್ಮೆ ಬ್ರೇಕ್​​ ಬಿದ್ದರೂ ಅದು ಕೇವಲ ತಾತ್ಕಾಲಿಕ ಅವಧಿಗೆ ಮಾತ್ರ. ಮುಂದೆ ಮಾರ್ಚ್​​ ಅಥವಾ ಎಪ್ರಿಲ್​​ ತಿಂಗಳಲ್ಲಿ ರೇಟ್​​ ಹೆಚ್ಚಳ ಆಗೋದು ಪಕ್ಕಾ ಎನ್ನುವ ಮಾಹಿತಿ ಕೂಡ ಇದೆ. ಈ ವರ್ಷ ಫೆಬ್ರವರಿಯಲ್ಲಿ ಟಿಕೆಟ್​​ ದರ ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷ ಶೇ.10ರಷ್ಟು ಏರಿಕೆ ಮಾಡುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನುವ ಬಗ್ಗೆ ಮಾಹಿತಿಯನ್ನು BMRCL ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡಿದ್ದಾರಂತೆ.

ಮೆಟ್ರೋ ನಿಲ್ದಾಣಗಳಿಗೆ ಭದ್ರತೆಗೆ ಮನವಿ

ಮತ್ತೊಂದೆಡೆ ಫೆಬ್ರವರಿ 9ರಿಂದ (ನಾಳೆ)  ಟಿಕೆಟ್ ದರ ಏರಿಕೆ ಹಿನ್ನೆಲೆ ಬೆಂಗಳೂರಿನ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಕೋರಿ ಪೊಲೀಸರಿಗೆ ಪತ್ರ ಬರೆಯಲಾಗಿದೆ. ದರ ಏರಿಕೆ ವಿರೋಧಿಸಿ ಆಗಬಹುದಾದ ಅಹಿತಕರ ಘಟನೆ ತಪ್ಪಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗ್ತಿದ್ದು, ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಭದ್ರತೆ ಕೋರಿ ಶಂಕರಪುರಂ ಠಾಣೆಗೆ ಮನವಿ ನೀಡಲಾಗಿದೆ. ಫೆಬ್ರವರಿ 9ರಿಂದ 11ರ ವರೆಗೂ ಮೆಟ್ರೋ ನಿಲ್ದಾಣದ ಒಳಗೆ ಹಾಗೂ ಹೊರಗೆ ಭದ್ರತೆಗೆ ಆಗ್ರಹಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:38 pm, Sun, 8 February 26

Source link

ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು! ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ – Kannada News | Bengaluru: Boy on Cycle Hit by car in Girinagar, CCTV Captures Horrific Crash

ಬೆಂಗಳೂರು, ಫೆಬ್ರುವರಿ 08: ಮನೆಯ ಮುಂದೆ ಸೈಕಲ್ ಹೊಡೆಯುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ (Car accident) ಹೊಡೆದಿರುವ ಘಟನೆ ಗಿರಿನಗರದ ಮೊದಲನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ರಸ್ತೆ ಬದಿ ನಿಂತಿದ್ದ ಮಹೀಂದ್ರಾ XUV300 ಕಾರನ್ನು ಚಾಲಕ ರಸ್ತೆಗಿಳಿಸುವ ವೇಳೆ ಸೈಲಕ್​ನಲ್ಲಿದ್ದ ಬಾಲಕ ವಿಕಾಸ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ವಿಕಾಸ್‌ನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ – Kannada News | Sarvam AI releases advanced document intelligence model for Indic languages, gets praises from critical reviewers

ನವದೆಹಲಿ, ಫೆಬ್ರುವರಿ 8: ಭಾರತದ ಎಐ ಸ್ಟಾರ್ಟಪ್ ಸರ್ವಮ್ ಎಐ (Sarvam AI) ಇದೀಗ ಹೊಸ ಹೊಸ ಮಲ್ಟಿಮೋಡಲ್ ಎಐ ಮಾಡಲ್​ವೊಂದನ್ನು ಅನಾವರಣಗೊಳಿಸಿದೆ. ಸರ್ವಮ್ ವಿಶನ್ (Sarvam Vision) ಎಂದು ಕರೆಯಲಾಗಿರುವ ಈ ಮಾಡಲ್ ಭಾರತೀಯ ಭಾಷೆಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಆಪ್ಟಿಕಲ್ ಕ್ಯಾರೆಕ್ಟರ್ ರೆಗಗ್ನಿಶನ್ (ಒಸಿಆರ್) ಮತ್ತು ವಿಶುವಲ್ ಲ್ಯಾಂಗ್ವೇಜ್ ಗ್ರಹಿಕೆಯ (Visual Language Understanding) ಪರಿಣಿತಿ ಹೊಂದಿದೆ. ಅಂದರೆ, ಭಾರತೀಯ ಭಾಷೆಗಳ ವಿಡಿಯೋ, ಪಠ್ಯ ಮತ್ತು ದಾಖಲೆಗಳನ್ನು ಇದು ಗ್ರಹಿಸಿ, ನಿಮಗೆ ಬೇಕಾದ ಹೂರಣವಾಗಿ ಸಿದ್ದಪಡಿಸಬಲ್ಲುದು.

ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಚ್ಯಾಟ್​ಜಿಪಿಟಿ 5.2, ಜೆಮಿನಿ 3 ಪ್ರೋ ಇತ್ಯಾದಿ ವಿಶ್ವದ ಶಕ್ತಿಶಾಲಿ ಎಐ ಮಾಡಲ್​ಗಳನ್ನು ಮೀರಿಸುವ ಮಟ್ಟಿಗೆ ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಇದೆ. ಭಾರತದ ಹೆಚ್ಚಿನ ಸಾಂಪ್ರದಾಯಿಕ ಜ್ಞಾನವು ಭೌತಿಕ ದಾಖಲೆಗಳು, ಸ್ಕ್ಯಾನ್ ಆದ ಪ್ರತಿಗಳು ಇತ್ಯಾದಿಗಳ ರೂಪದಲ್ಲಿವೆ. ಇವುಗಳಲ್ಲಿರುವ ಪಠ್ಯವನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಸರ್ವಮ್ ಎಐ ನಿರಾಯಾಸವಾಗಿ ಮಾಡಬಲ್ಲುದು.

ಇದನ್ನೂ ಓದಿ: ಭಾರತೀಯರ ಇಂಧನ ಭದ್ರತೆಗೆ ಮೊದಲ ಆದ್ಯತೆ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಭಾರತೀಯ ಭಾಷೆಗಳ ಪಠ್ಯವನ್ನು ಸರ್ವಮ್ ಎಐನಷ್ಟು ಕರಾರುವಾಕ್ಕಾಗಿ ವಿಶ್ವದ ಯಾವುದೇ ಮಾಡಲ್​ಗಳು ಓದಲಾಗಿಲ್ಲ ಎಂದು ಹೇಳಲಾಗುತ್ತಿದೆ. ಕನ್ನಡವೂ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಇದು ಪರಿಣಿತಿ ಹೊಂದಿದೆ. ಪಠ್ಯ ಮತ್ತು ದೃಶ್ಯಗಳಲ್ಲಿರುವ ವಿಚಾರಗಳನ್ನು ಇದು ಹೆಚ್ಚು ನಿಖರವಾಗಿ ಗ್ರಹಿಸಬಲ್ಲುದು.

ಕಟು ಟೀಕಾಕಾರರಿಂದಲೂ ಸರ್ವಮ್ ಪ್ರಶಂಸೆ

ಸರ್ವಮ್ ಎಐ ಆವಿಷ್ಕಾರಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಶಂಸಿಸಿದ್ದಾರೆ. ‘ದೇಶೀಯ ಮಾಡಲ್ ನಿರ್ಮಿಸುವ ತಂತ್ರಗಾರಿಕೆಯು ಫಲಕೊಡುತ್ತಿದೆ. ನಮ್ಮ ಎಐ ಮಿಷನ್​ನ ಭಾಗವಾಗಿ ಸರ್ವಂ ಬಿಡುಗಡೆ ಮಾಡಿದ ಸುಧಾರಿತ ಮಾಡಲ್ ಅನ್ನು ಕಟು ಟೀಕಾಕಾರರೂ ಪ್ರಶಂಸಿಸುತ್ತಿದ್ದಾರೆ. ಈ ಮಧ್ಯೆ ನಮ್ಮ ಬುದ್ಧಿವಂತ ಯುವ ಎಂಜಿನಿಯರುಗಳು ಮೆಟೀರಿಯಲ್ ಸೈನ್ಸ್, ಹೆಲ್ತ್​ಕೇರ್ ಮತ್ತು ಸೈಬರ್​ಸೆಕ್ಯೂರಿಟಿ ಕ್ಷೇತ್ರದಲ್ಲಿ ನಾವೀನ್ಯತೆ ಸಾಧಿಸಲು ಕೆಲಸ ಮಾಡುತ್ತಿದ್ದು, ಅದನ್ನು ಇಡೀ ವಿಶ್ವವೇ ಆದರಿಸುವಂತಾಗುತ್ತದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಟ್ವೀಟ್ ಮಾಡಿದ್ದಾರೆ.

ವರ್ಷದ ಹಿಂದೆ ಸರ್ವಮ್ ಎಐನ ಮೂಲ ಮಾಡಲ್ ಬಿಡುಗಡೆಯಾದಾಗ ಕಟುವಾಗಿ ಟೀಕಿಸಿದ್ದ ವ್ಯಕ್ತಿಯೊಬ್ಬರು ಈಗ ಸರ್ವಮ್​ನ ಅಡ್ವಾನ್ಸ್ಡ್ ಮಾಡಲ್ ಕಂಡು ಬೆರಗಾಗಿದ್ದಾರೆ. ತಾನು ಸರ್ವಮ್ ಬಗ್ಗೆ ಆಗ ಹೇಳಿದ್ದು ತಪ್ಪಾಗಿದೆ ಎಂದು ಹೇಳಿ, ಸರ್ವಮ್ ಅದೆಷ್ಟು ಉಪಯುಕ್ತ ಮಾಡಲ್ ಆಗಿ ರೂಪುಗೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ವೈಷ್ಣವ್ ಅವರು ಆ ವ್ಯಕ್ತಿಯ ಆ ಟ್ವೀಟ್ ಅನ್ನು ಪ್ರಸ್ತಾಪಿಸಿದ್ದಾರೆ.

ಅಶ್ವಿನಿ ವೈಷ್ಣವ್ ಅವರ ಟ್ವೀಟ್

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ಸರ್ವಮ್ ಬಗ್ಗೆ ಹೇಳಿದ್ದೇನು?

‘ವರ್ಷದ ಹಿಂದೆ ಅವರ ಬಗ್ಗೆ (ಸರ್ವಮ್ ಎಐ) ನಾನು ಬರೆದಾಗ, ಸಣ್ಣ ಭಾರತೀಯ ಭಾಷಾ ಮಾಡಲ್​ಗಳನ್ನು ಟ್ರೈನ್ ಮಾಡುವ ರೀತಿ ತಪ್ಪಿದೆ ಎನಿಸಿತ್ತು. ಆದರೆ, ಪೂರ್ಣ ಪರಿವರ್ತನೆಯೇ ಮಾಡಿಬಿಟ್ಟಿದ್ದಾರೆ. ಇಂಡಿಕ್ ಲ್ಯಾಂಗ್ವೇಜ್​ಗಳಿಗೆ ಇವರ ಪಠ್ಯದಿಂದ ಮಾತು, ಮಾತಿನಿಂದ ಪಠ್ಯ, ಒಸಿಆರ್ ಮಾಡಲ್​ಗಳು ಅತ್ಯುತ್ತಮ ಎನಿಸಿವೆ. ಬೆಲೆಯೂ ಕಡಿಮೆ ಇದೆ. ವೆಬ್​ಸೈಟ್ ಕೂಡ ಸುಂದರವಾಗಿದೆ. ಬಳಕೆಗೆ ಸುಲಭವಿದೆ’ ಎಂದು ಡೀಡಿ ಹೆಸರಿನ ಆ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:36 am, Sun, 8 February 26

Source link

ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಬ್ಬರ: ಕರ್ನಾಟಕದಲ್ಲೂ ಶುರುವಾಯತ್ತು H5N1 ಟೆನ್ಷನ್ – Kannada News | Bird Flu Alert in Karnataka: Doctors Urge Preventive Measures

ಬೆಂಗಳೂರು, ಫೆಬ್ರವರಿ 08: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನೆಲೆ ರಾಜ್ಯದಲ್ಲೂ H5N1 ಟೆನ್ಷನ್ ಶುರುವಾಗಿದೆ. ಹಕ್ಕಿ ಜ್ವರಕ್ಕೆ ತಮಿಳನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದರೆ, ಇತ್ತ ಮಹಾರಷ್ಟ್ರದಲ್ಲೂ ವೈರಸ್​​ ಸದ್ದು ಮಾಡತೊಡಗಿದೆ. ಹೀಗಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಪಶುಸಂಗೋಪಾನ ಇಲಾಖೆ ಸೂಚಿಸಿದೆ. ಹಕ್ಕಿ ಜ್ವರದ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಏನಿದು ಹಕ್ಕಿಜ್ವರ?

ಇದು H5N1 ವೈರಸ್‌ನಿಂದ ಪಕ್ಷಿಗಳಲ್ಲಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಲಾಲಾರಸ ಅಥವಾ ಮಲದಿಂದ ಮನುಷ್ಯರಲ್ಲೂ ಹಕ್ಕಿ ಜ್ವರ ಕಾಣಿಸಿಕೊಳ್ಳಬಹುದಾಗಿದೆ. ಸೋಂಕಿತ ಪ್ರಾಣಿಗಳ ಮಲ, ಮೂಗು ಅಥವಾ ಬಾಯಿಯ ಸ್ರವಿಸುವಿಕೆಯಿಂದ ಮನುಷ್ಯರಿಗೆ ಈ ವೈಎಸ್​​ ಹರಡುವ ಸಾಧ್ಯತೆ ಹೆಚ್ಚು. ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ಹಕ್ಕಿಯೊಂದಿಗೆ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳ ನಂತರ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಹಕ್ಕಿ ಜ್ವರ ಹೇಗೆ ಹರಡುತ್ತೆ? ಯಾವ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು

ರೋಗ ಲಕ್ಷಣಗಳು ಏನು?

  • ಉಸಿರಾಟದಲ್ಲಿ ತೊಂದರೆ
  • ಜ್ವರ
  • ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ
  • ಕೆಮ್ಮು
  • ಗಂಟಲು ನೋವು
  • ಸ್ನಾಯು ಅಥವಾ ದೇಹದ ನೋವು
  • ತಲೆನೋವು -ಆಯಾಸ
  • ನ್ಯೂಮೋನಿಯಾ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್, ಪೌಲ್ಟ್ರಿ ಮತ್ತು ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತೆ. ಹಕ್ಕಿ ಜ್ವರಕ್ಕೆ ತುತ್ತಾದವರ ಸಾವಿನ ಪ್ರವಾಣ ಶೇ.50ರಷ್ಟಿದ್ದು, ಸೋಂಕು ಹೆಚ್ಚಾದರೆ ಸಾಂಕ್ರಾಮಿಕ ಆಗುವ ಸಾಧ್ಯತೆ ಇದೆ. ಹೀಗಾಗಿ ಸೆಮಿ ಬಾಯ್ಲ್ಡ್‌ ಫುಡ್ ಬಗ್ಗೆ ಜನರು ಎಚ್ಚರ ವಹಿಸಬೇಕು. ಅರೆಬೆಂದ ಮಾಂಸಾಹಾರದಿಂದ ಈ ವೈರಸ್​​ ಹರಡುವ ಸಾಧ್ಯತೆ ಹೆಚ್ಚಿದೆ. ಹ್ಯಾಂಡ್ ಹೈಜಿನ್ ಕಡೆಗೂ ಮುಖ್ಯವಾಗಿ ಗಮನ ವಹಿಸಬೇಕು ಎಂದು ತಿಳಿಸಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಯ ವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link