Category Archives: Blog

Your blog category

Video: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್ – Kannada News | The little girls went on stage to dance, do you know what happened next?

ಪುಟಾಣಿಗಳು (kids) ಏನು ಮಾಡಿದ್ರು ಅದಕ್ಕೂ ನೋಡೋಕೆ ಚಂದ. ಈ ಮಕ್ಕಳ ಆಟ ತುಂಟಾಟಗಳನ್ನು ಹೆತ್ತವರು ಕಣ್ತುಂಬಿಸಿಕೊಳ್ತಾರೆ. ಇಬ್ಬರೂ ಮುದ್ದಾದ ಪುಟಾಣಿಗಳು ಡ್ಯಾನ್ಸ್ (dance) ಮಾಡಲು ವೇದಿಕೆ ಹತ್ತಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಪುಟಾಣಿಯೊಂದು ಅಳಲು ಶುರು ಮಾಡಿದೆ. ಈ ಪುಟ್ಟ ಹುಡುಗಿಯ ಅಳಲು ಶುರು ಮಾಡಿದ್ದು, ವೇದಿಕೆಯಲ್ಲಿನ ಹೊಗೆ ನೋಡಿ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಲಾಕಾರ್ಸ್ (Kalakaars) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನರ್ಸರಿಯ ವಾರ್ಷಿಕೋತ್ಸವವಾಗಿದ್ದು, ಇಬ್ಬರೂ ಪುಟಾಣಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಡ್ಯಾನ್ಸ್ ಮಾಡಲು ವೇದಿಕೆ ಹತ್ತಿದ್ದಾರೆ. ಮಕ್ಕಳು ರೆಡಿಯಾಗುತ್ತಿದ್ದಂತೆ ಹಿಂದಿನಿಂದ ಟುಸ್​ ಎಂದು ಹೊಗೆ ಬಂದಿದೆ. ಇದರಿಂದ ಸ್ಟೇಜ್ ಮೇಲಿದ್ದ ಒಂದು ಪುಟಾಣಿ ಹೆದರಿ ಓಡಿ ಹೋಗಿದೆ. ಇತ್ತ ಇನ್ನೊಂದು ಪುಟಾಣಿ ಜೋರಾಗಿ ಅಳಲು ಪ್ರಾರಂಭಿಸಿದ್ದು, ಅಲ್ಲೇ ಇದ್ದ ಹೆತ್ತವರು ಬಂದು ಪುಟ್ಟ ಹುಡುಗಿಯನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಮಗಳ ಡ್ಯಾನ್ಸ್‌ನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಸೆರೆಹಿಡಿದ ತಂದೆ, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನನ್ನ ಮಗಳು ಚಿಕ್ಕವಳಿದ್ದಾಗ ಹೀಗೆಯೇ ಮಾಡುತ್ತಿದ್ದಳು ಎಂದಿದ್ದಾರೆ. ಮತ್ತೊಬ್ಬರು, ಅಯ್ಯೋ ಎಷ್ಟು ಮುಗ್ಧತೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮಕ್ಕಳಿಗೆ ಪ್ರಾಕ್ಟೀಸ್ ಮಾಡುವಾಗ ಈ ರೀತಿ ಹೊಗೆ ಬಿಡಿ, ಇಲ್ಲದಿದ್ದರೆ ಹೀಗೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಭಾರತ-ಯುಎಸ್ ವ್ಯಾಪಾರ ಒಪ್ಪಂದ ಐತಿಹಾಸಿಕ, ರೈತರಿಗೆ ಯಾವುದೇ ಹಾನಿ ಇಲ್ಲ: ಪಿಯೂಷ್ ಗೋಯಲ್ – Kannada News | In Lok Sabha, Piyush Goyal Outlines India’s Stand in India US Trade Negotiations

ನವದೆಹಲಿ, ಫೆಬ್ರವರಿ 04: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್(Piyush Goyal) ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಈ ಒಪ್ಪಂದ ಐತಿಹಾಸಿಕವಾಗಿದ್ದು, ರೈತರಿಗೆ ಯಾವುದೇ ಹಾನಿಯಿಲ್ಲ, ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಸಂಸದರು ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುವುದನ್ನು ಮುಂದುವರೆಸಿದರು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಗದ್ದಲದ ನಡುವೆಯೂ ಮಾತನಾಡಿದ ಅವರು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದರು.

ಕೃಷಿ ಕ್ಷೇತ್ರದ ಹಿತಾಸಕ್ತಿಗಳನ್ನು ರಕ್ಷಿಸಲಾಗುತ್ತದೆ ಮತ್ತು ಅಮೆರಿಕದ ಮಾರುಕಟ್ಟೆಗೆ ಭಾರತದ ರಫ್ತು ಹೆಚ್ಚಾಗುತ್ತದೆ. ಕೃಷಿ ವಲಯವನ್ನು ರಕ್ಷಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಮತ್ತು ಹಲವಾರು ಕ್ಷೇತ್ರಗಳ ಕುರಿತು ಚರ್ಚೆಯ ನಂತರ ಒಮ್ಮತಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದರು. ಡೈರಿ ಕ್ಷೇತ್ರದಲ್ಲಿ ನಮ್ಮ ಹಿತಾಸಕ್ತಿಗಳನ್ನು ಸಹ ರಕ್ಷಿಸಲಾಗಿದೆ ಮತ್ತು ಒಪ್ಪಂದವು ಎರಡೂ ಕಡೆಯವರಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಎರಡೂ ದೇಶಗಳು ಪ್ರಯೋಜನ ಪಡೆಯುತ್ತವೆ. ಭಾರತವು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ಕ್ಷೇತ್ರಗಳಲ್ಲಿ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ . ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದಿದ ಭಾರತ ಮತ್ತು ಸ್ವಾವಲಂಬಿ ಭಾರತ ಉಪಕ್ರಮಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದರು.

ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಲು ಮತ್ತು ಫಲಕಗಳನ್ನು ಹಿಡಿದು ಪ್ರತಿಭಟಿಸಲು ಪ್ರಾರಂಭಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಗದಗದ ಪ್ರೀತಮ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಪ್ರೀತಮ್ ಮಾತನಾಡೋದನ್ನು ಕೇಳಿ ಅನುಶ್ರೀ ಅವರೇ ಸುಸ್ತಾಗಿ ಹೋಗಿದ್ದಾರೆ. ಪ್ರೀತಮ್ ಡ್ಯಾನ್ಸ್ ಅದ್ಭುತವಾಗಿತ್ತು. ಮಾತು ಕೂಡ ತುಂಬಾನೇ ಚೂಟಿ ಆಗಿತ್ತು. ಆ ವಿಡಿಯೋ ಮೇಲೆ ವೀಕ್ಷಣೆಗೆ ಲಭ್ಯವಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬ್ಯಾಟಲ್ ರೌಂಡ್ ಈ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

SSLC ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಇಲಾಖೆ ಹೊಸ ಪ್ಲಾನ್; ಪರೀಕ್ಷೆ ಮುಗಿಯುವವರೆಗೂ ಟಿವಿ–ಮೊಬೈಲ್ ಆಫ್! – Kannada News | Education Department’s new plan to improve SSLC students’ results; TV mobile off until the exam is over!

ಬೆಂಗಳೂರು, ಫೆಬ್ರುವರಿ 04: ಎಸ್ಎಸ್ಎಲ್ಸಿ  (SSLC) ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಫಲಿತಾಂಶಗಳನ್ನು ಸುಧಾರಿಸಲು ಮಹತ್ವದ ಉಪಕ್ರಮ ಕೈಗೊಂಡಿದೆ. ಇದಕ್ಕಾಗಿ ಮನೆಗೆ ತೆರಳಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಅಭಿಯಾನದಡಿ, ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಪೋಷಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಮುಂಬರುವ ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆಯಲಿರುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಉತ್ತಮವಾಗಿ ಸಿದ್ಧರಾಗಲು, ಪ್ರತಿ ಮನೆಯಲ್ಲಿ ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಮೊಬೈಲ್ ಮತ್ತು ಟಿವಿಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವಂತೆ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಈ ಅವಧಿಯಲ್ಲಿ ಮಕ್ಕಳು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಲು ಪ್ರೇರೇಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಲು ಇದು ಸಹಾಯಕವಾಗಲಿದೆ ಎಂದು ಇಲಾಖೆ ತಿಳಿಸಿದೆ. ಸರ್ಕಾರದ ಈ ಆದೇಶವನ್ನು ಕೆಲವು ವಿದ್ಯಾರ್ಥಿಗಳು ಸ್ವಾಗತಿಸಿದ್ದು, ಇದು ಓದಿಗೆ ಸಹಾಯಕವಾಗಲಿದೆ ಎಂದಿದ್ದಾರೆ. ಆದರೆ, ಪೋಷಕರು ಈ ನಿಯಮವನ್ನು ಎಷ್ಟು ಪಾಲಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Video:ಸುಪ್ರೀಂನಲ್ಲಿ ಎಸ್​ಐಆರ್ ವಿರುದ್ಧ ತಾವೇ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ ಬ್ಯಾನರ್ಜಿ – Kannada News | Mamata Banerjee Appears in Supreme Court Over Challenge to Bengal Electoral Roll SIR

ನವದೆಹಲಿ, ಫೆಬ್ರವರಿ 04: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್​​ನಲ್ಲಿ ಇಂದು ನಡೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖುದ್ದು ವಾದ ಮಂಡಿಸಲು ಕೋರ್ಟ್​​ಗೆ ತೆರಳಿರುವ ವಿಡಿಯೋ ವೈರಲ್ ಆಗಿದೆ. ಬಿಳಿ ಸೀರೆ ಜತೆ ಕಪ್ಪು ದುಪಟ್ಟಾ ಧರಿಸಿ ಅವರು ಕೋರ್ಟ್​ಗೆ ತೆರಳಿದ್ದರು.

ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದೆ.ಮಮತಾ ಬ್ಯಾನರ್ಜಿ, ಮೋಸ್ತಾರಿ ಬಾನೋ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರಾದ ಡೆರೆಕ್ ಒ’ಬ್ರೇನ್ ಮತ್ತು ಡೋಲಾ ಸೇನ್ ಅವರು ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಹಲವಾರು ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಲಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್​​ ವೈರಲ್ – Kannada News | Bengaluru Job Crisis 2025: Tech Layoffs and Their Impact on Young Professionals’ Careers

ಬೆಂಗಳೂರು, ಫೆ.4: ಬೆಂಗಳೂರಿನ ಟೆಕ್ ಕಂಪನಿಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತ ಬಗ್ಗೆ ದಿನದಿಂದ ದಿನಕ್ಕೆ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಬೆಂಗಳೂರಿನ ಟೆಕ್ ಉದ್ಯಮದಲ್ಲಿ 2025ರ ಕೊನೆಯ ಅವಧಿಯಲ್ಲಿ ಉಂಟಾದ ಉದ್ಯೋಗ ಕಡಿತ (Layoffs) ಮತ್ತು ಯುವ ವೃತ್ತಿಪರರ ಮಾನಸಿಕ ಸಂಘರ್ಷದ ಬಗ್ಗೆ ಬೆಂಗಳೂರಿನ ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಒಂದು ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ. ಡಿಸೆಂಬರ್ 25 ಎಂದರೆ ಎಲ್ಲೆಡೆ ಸಂಭ್ರಮ, ರಜೆಯ ಮೋಜು. ಆದರೆ ಬೆಂಗಳೂರಿನ ಸಾವಿರಾರು ಯುವ ಟೆಕ್ಕಿಗಳಿಗೆ 2025ರ ಕ್ರಿಸ್‌ಮಸ್ ತಂದದ್ದು ಕೇವಲ ಆತಂಕ ಮತ್ತು ಅನಿಶ್ಚಿತತೆ. ಕೆಲಸ ಕಳೆದುಕೊಂಡ ನೋವು ಮತ್ತು ಭವಿಷ್ಯದ ಭಯ ಅವರ ಹಬ್ಬದ ಖುಷಿಯನ್ನು ನುಂಗಿ ಹಾಕಿತ್ತು.

26 ವರ್ಷದ ಯುವ ಡೇಟಾ ಇಂಜಿನಿಯರ್ ಒಬ್ಬರು ರೆಡ್ಡಿಟ್​​​ನಲ್ಲಿ (Reddit) ಹಂಚಿಕೊಂಡ ಕಥೆ ಇಡೀ ಉದ್ಯಮದ ಸ್ಥಿತಿಗೆ ಕೈಗನ್ನಡಿಯಾಗಿದೆ. ಅವರನ್ನು ಡಿಸೆಂಬರ್ 15 ರಂದು ಹಠಾತ್ತನೆ ಕೆಲಸದಿಂದ ತೆಗೆದುಹಾಕಲಾಯಿತು. ಲೇಆಫ್ ಆದ ಮೇಲೆ ದಿನಕ್ಕೆ 5-6 ಗಂಟೆ ಹೊಸ ಸ್ಕಿಲ್ ಕಲಿಯುವುದು, 3-4 ಗಂಟೆ ಕೆಲಸ ಹುಡುಕುವುದು ನನ್ನ ದಿನಚರಿಯಾಯಿತು. ಕೊನೆಗೂ ಅಮೆಜಾನ್‌ನಂತಹ ದೊಡ್ಡ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ, ಇದರಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. 10 ದಿನಗಳು ಕಳೆದರೂ ಒಂದೇ ಒಂದು ಪಾಸಿಟಿವ್ ರೆಸ್ಪಾನ್ಸ್ ಇಲ್ಲ. ಯಾಕೆಂದರೆ ಮತ್ತೆ ಕೆಲಸ ಕಳೆದುಕೊಂಡರೆ ಎಂಬ ಭಯ.

ಇದನ್ನೂ ಓದಿ: “ನಿಮ್ಮ ಸಂಸ್ಥೆಗಾಗಿ ನನ್ನ ರಕ್ತ ಸುರಿಸಿದ್ದೇನೆ”: ಕಾರಣವಿಲ್ಲದೆ ವಜಾ ಮಾಡಿದ ಕಂಪನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಬೆಂಗಳೂರಿನ ಯುವಕ

ಇಲ್ಲಿದೆ ನೋಡಿ ಪೋಸ್ಟ್​:

Tech Layoffs

ಡಿಸೆಂಬರ್ 10 ರವರೆಗೆ 257 ಟೆಕ್ ಕಂಪನಿಗಳಿಂದ ಸುಮಾರು 1,22,549 ಉದ್ಯೋಗಿಗಳನ್ನು ಹೊರಹಾಕಲಾಗಿದೆ.ಜನವರಿ ತಿಂಗಳೊಂದರಲ್ಲೇ 27 ಕಂಪನಿಗಳಿಂದ 24,818 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಈ ಬಗ್ಗೆ ಹಲವು ಜನ ಹಲವು ರೀತಿಯಲ್ಲಿ ಸಲಹೆ ನೀಡಿದ್ದಾರೆ. ಒಬ್ಬ ರೆಡಿಟ್​​​ ನೆಟ್ಟಿಗರೊಬ್ಬರು 776 ಕಂಪನಿಗಳಿಗೆ ಅರ್ಜಿ ಹಾಕಿ, 100 ದಿನಗಳ ಸತತ ಪ್ರಯತ್ನದ ನಂತರ ಕೆಲಸ ಪಡೆದಿದ್ದೇನೆ ಎಂದು ಹೇಳಿದ್ದಾರೆ. ನೀವು ಜಿಮ್, ಕ್ರೀಡೆ ಅಥವಾ ಇತರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹಬ್ಬಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಿಧಾನವಾಗಿರುತ್ತದೆ. ಹಾಗಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

M Letter Personality: ‘M’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರ ಸ್ವಭಾವ ಹೇಗಿರುತ್ತದೆ ಗೊತ್ತಾ..? – Kannada News | M Letter Personality: Traits, Career and Love Revealed by Namashastra

ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರ, ರಾಶಿ ಮಾತ್ರವಲ್ಲ, ವ್ಯಕ್ತಿಯ ಹೆಸರಿಗೂ ವಿಶೇಷ ಮಹತ್ವ ನೀಡಲಾಗಿದೆ. ಕೆಲವರು ಹೆಸರಿನ ಮೊದಲ ಅಕ್ಷರವೇ ಜೀವನದ ದಿಕ್ಕನ್ನು ನಿರ್ಧರಿಸುತ್ತದೆ ಎಂದು ನಂಬುತ್ತಾರೆ. ನಾಮಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಸ್ವಭಾವ, ಚಿಂತನೆ, ನಡೆನುಡಿ ಹಾಗೂ ಯಶಸ್ಸಿನ ಮೇಲೆ ಸೂಕ್ಷ್ಮವಾದ ಪ್ರಭಾವ ಬೀರುತ್ತದೆ. ಅದೇ ಕಾರಣಕ್ಕೆ ಅಕ್ಷರ ಆಧಾರಿತ ವ್ಯಕ್ತಿತ್ವ ವಿಶ್ಲೇಷಣೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈ ಹಿನ್ನೆಲೆದಲ್ಲಿ ಇಂಗ್ಲಿಷ್‌ನ ‘M’ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳವರ ಗುಣಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಾಮಶಾಸ್ತ್ರದ ಪ್ರಕಾರ ‘M’ ಅಕ್ಷರವನ್ನು ಸಂಖ್ಯೆ 4 ರೊಂದಿಗೆ ಸಂಪರ್ಕಿಸಲಾಗುತ್ತದೆ. ಸಂಖ್ಯೆ 4 ಧೈರ್ಯ, ಬುದ್ಧಿವಂತಿಕೆ, ಕಠಿಣ ಪರಿಶ್ರಮ ಮತ್ತು ಶಿಸ್ತುಬದ್ಧತೆಯ ಸಂಕೇತವಾಗಿದೆ. ಈ ಅಕ್ಷರದಿಂದ ಹೆಸರು ಆರಂಭವಾಗುವವರು ಸಾಮಾನ್ಯವಾಗಿ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಅವರು ಎಲ್ಲರಿಗೂ ಬೇಗನೆ ಹತ್ತಿರವಾಗುತ್ತಾರೆ. ಆದರೆ ಸಣ್ಣ ವಿಷಯಗಳಿಗೂ ಬೇಗ ಕೋಪಗೊಳ್ಳುವ ಸ್ವಭಾವವೂ ಇರಬಹುದು. ಕೆಲವೊಮ್ಮೆ ಹಠಮಾರಿತನ ಅಥವಾ ನಾಚಿಕೆ ಸ್ವಭಾವವು ಅವರ ದೌರ್ಬಲ್ಯವಾಗಬಹುದು. ಆದರೂ ತಮ್ಮ ಅಭಿಪ್ರಾಯದಲ್ಲಿ ದೃಢವಾಗಿರುವುದು ಇವರ ವೈಶಿಷ್ಟ್ಯ.

ವೃತ್ತಿಜೀವನದ ವಿಷಯದಲ್ಲಿ ‘M’ ಅಕ್ಷರದವರು ಬಹಳ ಗಂಭೀರರು ಮತ್ತು ಪರಿಶ್ರಮಿಗಳು. ಬದಲಾವಣೆಯನ್ನು ಕಾಯುವುದಕ್ಕಿಂತ ತಮ್ಮದೇ ಆದ ಬದಲಾವಣೆಗಳನ್ನು ಸೃಷ್ಟಿಸಲು ಇಷ್ಟಪಡುತ್ತಾರೆ. ಯಾವುದೇ ಕೆಲಸ ಆರಂಭಿಸುವ ಮೊದಲು ಸರಿಯಾದ ಯೋಜನೆ ಮಾಡುವುದು ಇವರ ಗುಣ. ಒಂದು ಕೆಲಸ ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವ ತನಕ ವಿಶ್ರಾಂತಿ ಪಡೆಯುವುದಿಲ್ಲ. ಪ್ರಾಯೋಗಿಕ ಮನೋಭಾವ ಮತ್ತು ಜವಾಬ್ದಾರಿತನ ಇವರನ್ನು ಯಶಸ್ಸಿನತ್ತ ಕರೆದೊಯ್ಯುತ್ತದೆ.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಪ್ರೀತಿಯ ವಿಷಯದಲ್ಲಿಯೂ ಇವರ ಸ್ವಭಾವ ವಿಶೇಷ. ಸುಲಭವಾಗಿ ಯಾರ ಮೇಲೂ ನಂಬಿಕೆ ಇಡುವುದಿಲ್ಲ, ಆದರೆ ಒಮ್ಮೆ ಮನಸಾರೆ ಪ್ರೀತಿಸಿದರೆ ಜೀವನಪೂರ್ಣ ನಿಷ್ಠೆಯಿಂದ ಜೊತೆಯಾಗಿರುತ್ತಾರೆ. ತಮ್ಮ ಸಂಗಾತಿ, ಕುಟುಂಬ ಮತ್ತು ಸ್ನೇಹಿತರಿಗಾಗಿ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಶಿಸ್ತು, ಪ್ರಾಮಾಣಿಕತೆ ಮತ್ತು ವಿಶ್ವಾಸ ಇವರ ಸಂಬಂಧಗಳ ಬಲ.

ಒಟ್ಟಾರೆ, ‘M’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರು ಶಕ್ತಿಶಾಲಿ ವ್ಯಕ್ತಿತ್ವ, ಪರಿಶ್ರಮ ಮತ್ತು ನಿಷ್ಠೆಯಿಂದ ಜೀವನದಲ್ಲಿ ಗುರುತಿಸಿಕೊಂಡು ಮುಂದೆ ಸಾಗುವವರು ಎಂದು ನಾಮಶಾಸ್ತ್ರ ಹೇಳುತ್ತದೆ. ಅವರ ದೌರ್ಬಲ್ಯಗಳನ್ನು ನಿಯಂತ್ರಿಸಿಕೊಂಡರೆ, ಯಶಸ್ಸು ಖಚಿತ ಎಂದು ಹೇಳಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ನಿಮ್ಮ ಮಕ್ಕಳ ಕೈಹಿಡಿದು ರಸ್ತೆ ದಾಟಿಸಿ, ಇಲ್ಲವಾದ್ರೆ ಹೀಗೆ ಅಪಘಾತವಾಗಬಹುದು

ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಪಘಾತದ ವಿಡಿಯೋವೊಂದು ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬಾಲಕನೊಬ್ಬ ಅಮ್ಮನ ಕೈಯಿಂದ ತಪ್ಪಿಸಿಕೊಂಡು ರಸ್ತೆ ದಾಟಲು ಯತ್ನಿಸುತ್ತಾನೆ. ಆಗ ಬೈಕ್​ವೊಂದು ವೇಗವಾಗ ಬಂದು ಬಾಲಕನಿಗೆ ಡಿಕ್ಕಿ ಹೊಡೆಯುತ್ತದೆ. ಡಿಕ್ಕಿಯ ರಭಸಕ್ಕೆ ಬಾಲಕ ತುಂಬಾ ದೂರ ಹೋಗಿ ಬೀಳುತ್ತಾನೆ, ಬೈಕ್ ಸವಾರ ಕೂಡ ಆಯ ತಪ್ಪಿ ಬೀಳುತ್ತಾರೆ. ತಾಯಿ ಮಗನ ಕೈ ಹಿಡಿದು ರಸ್ತೆ ದಾಟಿಸಿದ್ದಕ್ಕೆ ಈ ಅಪಘಾತ ತಪ್ಪುತ್ತಿತ್ತು. ಮತ್ತೆ ಶಾಲೆ, ವಸತಿ ಪ್ರದೇಶಗಳಲ್ಲಿ ವಾಹನ ಚಲಾಯಿಸುವವರು ಕೂಡ ನಿಧಾನವಾಗಿ, ಜಾಗರೂಕರಾಗಿ ವಾಹನ ಚಲಾಯಿಸಿ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಸಿದ್ದಾಪುರ ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರ್ ಭಟ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ – Kannada News | Siddapura Murder Case: Kamalakar Bhat Among Four Sent to Judicial Custody

ಕಾರವಾರ, ಫೆಬ್ರವರಿ 04: ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಉತ್ತರ ಕನ್ನಡದ ಸಿದ್ದಾಪುರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಎರಡು ಮಕ್ಕಳ ತಾಯಿ ಸುಚಿತ್ರಾ ಜೊತೆಗಿನ ಅಕ್ರಮ ಸಂಬಂಧವೇ ಈ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ಅಕ್ರಮ ಸಂಬಂಧದ ವಿಚಾರದಲ್ಲಿ ವಾಗ್ವಾದ ನಡೆದು ವಸಂತ್ ಎಂಬುವವರ ಕೊಲೆ ಸಂಭವಿಸಿತ್ತು. ಮೃತ ವಸಂತ್ ಅವರು ಸುಚಿತ್ರಾ ಅವರ ಗಂಡನ ಸೋದರನಾಗಿದ್ದು, ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಸಿದ್ದಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಕಮಲಾಕರ್ ಭಟ್ ಅವರನ್ನು ಹತ್ತು ನಿಮಿಷಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ ಪ್ರಸಂಗವೂ ನಡೆದಿದೆ. ಇನ್ನು ಪ್ರಕರಣ ಸಂಬಂಧ ಎ1 ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ ಭಟ್ ಮತ್ತು ಎ4 ಆಕಾಶ್​​ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಸಿದ್ದಾಪುರ ಜೆಎಂಎಫ್​ಸಿ ಕೋರ್ಟ್​ ಆದೇಶ ಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? – Kannada News | Can Pakistan boycott ICC T20 World Cup 2026 match?

ಪಾಕಿಸ್ತಾನ್ ತಂಡಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಇತ್ತೀಚಿನ ನಿರ್ಧಾರ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಪಿಸಿಬಿ ತಿಳಿಸಿದೆ. ಇದರ ಬೆನ್ನಲ್ಲೇ ಹೀಗೆ ಒಂದು ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ… ಖಂಡಿತವಾಗಿಯೂ ಇದೆ.

ಏಕೆಂದರೆ ಐಸಿಸಿ ವಿಶ್ವಕಪ್​​ನಲ್ಲಿ 4 ಪಂದ್ಯಗಳು ಹೀಗೆ ಕಾರಣಾಂತರಗಳಿಂದ ರದ್ದಾಗಿವೆ. ಹೀಗೆ ರದ್ದಾಗಲು ಮುಖ್ಯ ಕಾರಣ ಪಂದ್ಯವನ್ನು ಬಹಿಷ್ಕರಿಸಿರುವುದು. ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಈ ಹಿಂದೆ ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಪಂದ್ಯವಾಡಲು ನಿರಾಕರಿಸಿದೆ.

ಇದೇ ರೀತಿ ಇದೀಗ ಪಾಕಿಸ್ತಾನ್ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದೆ. ಅತ್ತ ಈ ಹಿಂದೆ ನಾಲ್ಕು ತಂಡಗಳು ಐಸಿಸಿ ಟೂರ್ನಿಯ ಪಂದ್ಯಗಳನ್ನು ಬಹಿಷ್ಕರಿಸಿರುವ ಇತಿಹಾಸ ಹೊಂದಿರುವುದೇ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.

ಏಕೆಂದರೆ ಈ ಹಿಂದೆ ಪಂದ್ಯ ಬಹಿಷ್ಕರಿಸಿದ ರಾಷ್ಟ್ರಗಳ ವಿರುದ್ಧ ಐಸಿಸಿ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಇದೇ ಭಂಡ ಧೈರ್ಯದಲ್ಲೇ ಪಾಕಿಸ್ತಾನ್ ಕೂಡ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದೆ. ಆದರೆ ಈ ಬಾರಿ ಐಸಿಸಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಟೂರ್ನಿಗೆ ಆರ್ಥಿಕ ಹೊಡೆತ ಬೀಳಲಿದೆ.

ಹೀಗಾಗಿ ಫೆಬ್ರವರಿ 15 ರಂದು ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಕಣಕ್ಕಿಳಿಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 ವಿಶ್ವಕಪ್ ಬಾಯ್ಕಾಟ್ ಪಂದ್ಯಗಳ ಪಟ್ಟಿ:

ವರ್ಷ ಪಂದ್ಯಾವಳಿ ಪಂದ್ಯ ಕಾರಣ ಫಲಿತಾಂಶ
1996 ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
1996 ಏಕದಿನ ವಿಶ್ವಕಪ್ ವೆಸ್ಟ್ ಇಂಡೀಸ್ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ಇಂಗ್ಲೆಂಡ್ vs ಝಿಂಬಾಬ್ವೆ ರಾಜಕೀಯ ಕಾರಣ (ಮುಗಾಬೆ ಆಡಳಿತದ ವಿರುದ್ಧ) ಝಿಂಬಾಬ್ವೆಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ನ್ಯೂಝಿಲೆಂಡ್ vs ಕೀನ್ಯಾ ಭದ್ರತೆಯ ಕಾರಣ (ಭಯೋತ್ಪಾದನೆಯ ಭೀತಿ) ಕೀನ್ಯಾಗೆ ವಾಕ್‌ಓವರ್
2026 ಟಿ20 ವಿಶ್ವಕಪ್ ಪಾಕಿಸ್ತಾನ್ vs ಭಾರತ ರಾಜಕೀಯ ಮತ್ತು ಬಾಂಗ್ಲಾದೇಶ್​ ಬೆಂಬಲಕ್ಕಾಗಿ ಬಹಿಷ್ಕಾರದ ಘೋಷಣೆ

ಪ್ರಮುಖ ಮಾಹಿತಿ:

  • 1996: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭದ್ರತೆಯ ಕಾರಣ ಕೊಲಂಬೊದಲ್ಲಿ ಆಡಲು ನಿರಾಕರಿಸಿದವು. ಅಂಕಗಳನ್ನು ಕಳೆದುಕೊಂಡರೂ ಈ ಎರಡೂ ತಂಡಗಳು ನಾಕೌಟ್ ಹಂತಕ್ಕೆ ತಲುಪಿದ್ದವು.
  • 2003: ಇಂಗ್ಲೆಂಡ್ ತಂಡವು ಝಿಂಬಾಬ್ವೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪಂದ್ಯವನ್ನು ಬಹಿಷ್ಕರಿಸಿತು. ಇದರಿಂದಾಗಿ ಇಂಗ್ಲೆಂಡ್ ಟೂರ್ನಿಯಿಂದ ಬೇಗನೆ ಹೊರಬರಬೇಕಾಯಿತು.
  • 2026 (ಪ್ರಸ್ತುತ): ಫೆಬ್ರವರಿ 1, 2026 ರಂದು ಪಾಕಿಸ್ತಾನ ಸರ್ಕಾರವು ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
  • ಐಸಿಸಿ ನಿಯಮಗಳ ಪ್ರಕಾರ, ಯಾವುದೇ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಎದುರಾಳಿ ತಂಡಕ್ಕೆ ಜಯ (ವಾಕ್‌ಓವರ್) ನೀಡಲಾಗುತ್ತದೆ. ಅಲ್ಲದೆ ಬಹಿಷ್ಕರಿಸಿದ ತಂಡಕ್ಕೆ ಭಾರಿ ಆರ್ಥಿಕ ದಂಡ ವಿಧಿಸಲಾಗುತ್ತದೆ.

Source link