Category Archives: Blog

Your blog category

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮರ್ಮಾಘಾತ: ಅಚ್ಚರಿ ಮೂಡಿಸಿದ ಅಣ್ಣಾಮಲೈ ನಡೆ! – Kannada News | Former Tamil Nadu BJP chief K Annamalai steps down as election in charge for six constituencies, here is Why

ಚೆನ್ನೈ, (ಫೆಬ್ರವರಿ 03): ತಮಿಳುನಾಡು ವಿಧಾನಸಭೆ ಚುನಾವಣೆಯ (Tamil Nadu Assembly Elections 2026) ಹೊಸ್ತಿಲಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (Annamalai) ಬಿಜೆಪಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನ ಆರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಅಣ್ಣಾಮಲೈ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಹೌದು…ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ತಂದೆ ಅನಾರೋಗ್ಯ ಕಾರಣ ನೀಡಿ ಇಂದು (ಫೆಬ್ರವರಿ 03) ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಆರಂಭಿಕ ಆಘಾತವಾದಂತಾಗಿದ್ದು, ಇನ್ನೊಂದೆಡೆ ಅಣ್ಣಾಮಲೈ ಅವರು ಈ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

 ರಾಜೀನಾಮೆಗೆ ಅಣ್ಣಾಮಲೈ ನೀಡಿದ ಕಾರಣ ಹೀಗಿದೆ

ರಾಜೀನಾಮೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅಣ್ಣಾಮಲೈ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನ ತಂದೆಯ ಅನಾರೋಗ್ಯ. ಹೀಗಾಗಿ ತಂದೆಯ ಆರೈಕೆ, ಆರೋಗ್ಯ ಕಾಳಜಿ ಪ್ರಮುಖ ಆದ್ಯತೆಯಾಗಿರುವ ಕಾರಣ ಕೊಯಂಬತ್ತೂರಿನಲ್ಲಿ ಉಳಿಯಬೇಕಾಗಿದೆ. ಆದ್ದರಿಂದ ನನಗೆ ನೀಡಲಾಗಿದ್ದ 6 ಕ್ಷೇತ್ರಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಸಾಧ್ಯವಾಗಿದೆ. ಈ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ ಮೋದಿಗೆ ಹೇಳಿ; ಹಿಂದಿ ವಿವಾದದ ಬಗ್ಗೆ ಉದಯನಿಧಿ ಸ್ಟಾಲಿನ್‌ಗೆ ಅಣ್ಣಾಮಲೈ ನೇರ ಸವಾಲು

ವಿಧಾನಸಭೆ ಎಲೆಕ್ಷನ್​​ಗೆ ಅಣ್ಣಾಮಲೈ ಸ್ಪರ್ಧಿಸಲ್ವಾ?

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡಿರುವ ಅಣ್ಣಾಮಲೈ ಈ ಬಾರಿ ವಿಧಾನಸಭಾ ಚುನಾವಣೆಗೆ ಅಣ್ಣಾಮಲೈ ಸ್ಪರ್ಧಿಸುತ್ತಾರಾ? ಇಲ್ವಾ ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದವು. ಕೆಲವರು ಸ್ಪರ್ಧೆ ಮಾಡುತ್ತಾರೆ, ಇನ್ನೂ ಕೆಲವರು ಸ್ಪರ್ಧೆ ಮಾಡಲ್ಲ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದೀಗ ಅದಕ್ಕೂ ಸಹ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಪಕ್ಷದ ನಿರ್ಧಾರ ನೋಡಿಕೊಂಡು ಘೋಷಿಸುವುದಾಗಿ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೊಯಂಬತ್ತೂರು ಜನತೆಗೆ ಯಾವುದ ಮನವಿಗೆ ನಾನು ಸಿಗುವಂತಿರಬೇಕು. ಹೀಗಾಗಿ ಸದ್ಯ ಬಾಡಿಗೆ ಮನೆ ಮಾಡಿದ್ದೇನೆ. ಜನರ ಮನವಿಗಳು, ದೂರುಗಳಿಗೆ ಸ್ಪಂದಿಸಲು ಅನೂಕೂಲವಾಗುವಂತೆ ಬಾಡಿಗೆ ಮನೆ ಮಾಡಿದ್ದೇನೆ. ಪಕ್ಷದ ನಿರ್ಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಣ್ಣಾಮಲೈ ರಾಜೀನಾಮೆ ಹಿಂದೆ ನಾನಾ ಚರ್ಚೆ

ಇನ್ನು ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ತಂದೆ ಅವರ ಅನಾರೋಗ್ಯದ ಬಗ್ಗೆ ನೀಡಿದ್ದ ಕಾರಣ ಕೇವಲ ನೆಪ ಅಷ್ಟೇ. ಆದ್ರೆ ಅವರ ರಾಜೀನಾಮೆಯಿಂದ ಬೇರೆನೇ ಇದೆ. ಈ ಹಿಂದೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯ್ತು.  ಬಳಿಕ ಯಾವುದೇ ಹುದ್ದೆ ನೀಡಿಲ್ಲ. ಆದ್ರೆ, ಇದೀಗ 234  ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 6 ಕ್ಷೇತ್ರಗಳ ಉಸ್ತುವಾರಿ ನೀಡಿರುವುದು ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬಳಿಕ ಯಾವುದೇ ಜವಾಬ್ದಾರಿ ನೀಡದಿರುವುದು. ಹೀಗೆ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ  ಅಣ್ಣಾಮಲೈ ತಂದೆಯ ಅನಾರೋಗ್ಯದ ಕಾರಣ ನೀಡಿ ಪಕ್ಷ ನೀಡಿದ್ದ ಜವಾಬ್ದಾರಿಯಿಂದ ಹಿಂದೆ ಸರಿದಿರುವುದರಿಂದ ನಾನಾ ಚರ್ಚೆಗಳು ನಡೆಯುತ್ತಿದ್ದು, ಅವರ ಮುಂದಿನ ನಡೆ ಏನು ಎನ್ನುವುದೇ ನಿಗೂಢವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:02 pm, Tue, 3 February 26

Source link

ಸ್ವಚ್ಛತಾ ಕಾರ್ಮಿಕೆ ಪದ್ಮಮ್ಮನ ಸನ್ಮಾನಿಸಿದ ರಜನೀಕಾಂತ್: ಕಾರಣ? – Kannada News | Rajinikanth felicitate A Sanitation Worker With A Gold Chain

ಮೇ 1ರಂದು ಅಥವಾ ಯಾವುದಾದರೂ ವಿಶೇಷ ದಿನದ ಹೊರತಾಗಿ ಸ್ವಚ್ಛತಾ ಕಾರ್ಮಿಕರನ್ನು ನೆನಪಿಸಿಕೊಳ್ಳುವುದೇ ಇಲ್ಲ. ಸಿನಿಮಾ ಸೆಲೆಬ್ರಿಟಿಗಳು ತಮಗೆ ಪ್ರಚಾರ ಬೇಕಾದಾಗ ಅಥವಾ ತಮ್ಮ ಸಿನಿಮಾಕ್ಕೆ ಪ್ರಚಾರ ಬೇಕಾದಾಗ ಮಾತ್ರ ಸ್ವಚ್ಛತಾ ಕಾರ್ಮಿಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸನ್ಮಾನ ಮಾಡಿ ಫೋಟೊ ತೆಗೆಸಿಕೊಳ್ಳುತ್ತಾರೆ. ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ಅವರು ಸ್ವಚ್ಛತಾ ಮಹಿಳಾ ಕಾರ್ಮಿಕರಾಗಿರುವ ಪದ್ಮ ಎಂಬುವರನ್ನು ಮನೆಗೆ ಕರೆಸಿ ಸನ್ಮಾನ ಮಾಡಿದ್ದಾರೆ. ಆದರೆ ಇದು ಪ್ರಚಾರಕ್ಕಾಗಿ ಮಾಡಿದ್ದಲ್ಲ, ಸನ್ಮಾನದ ಹಿಂದೆ ಕಾರಣವಿದೆ.

ಚೆನ್ನೈನಲ್ಲಿ ಸ್ವಚ್ಛತಾ ಕಾರ್ಮಿಕೆಯಾಗಿ ಕೆಲಸ ಮಾಡುವ ಪದ್ಮ ಅವರನ್ನು ನಟ ರಜನೀಕಾಂತ್ ಪೋಯಸ್ ಗಾರ್ಡನ್​​ನ ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ಪದ್ಮ ಅವರನ್ನು ಮಾತ್ರವೇ ಅಲ್ಲದೆ ಅವರ ಇಡೀ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದ ರಜನೀಕಾಂತ್, ಪದ್ಮ ಅವರಿಗೆ ಹಾರ ಹಾಕಿ, ಶಾಲು ಹಾಕಿ ಸನ್ಮಾನ ಮಾಡಿರುವ ಜೊತೆಗೆ ಪದ್ಮಾ ಅವರ ಕೊರಳಿಗೆ ಉಡುಗೊರೆಯಾಗಿ ಚಿನ್ನದ ಸರವನ್ನು ಸಹ ನೀಡಿದ್ದಾರೆ. ಆದರೆ ರಜನೀಕಾಂತ್ ಅವರು ಪದ್ಮ ಅವರಿಗೆ ಸನ್ಮಾನ ಮಾಡಲು ಕಾರಣವೇನು?

ಸ್ವಚ್ಛತಾ ಕಾರ್ಮಿಕೆಯಾಗಿರುವ ಪದ್ಮ ತಮ್ಮ ಪ್ರಾಮಾಣಿಕತೆಯಿಂದ ಇತ್ತೀಚೆಗೆ ಸುದ್ದಿಯಾಗಿದ್ದರು. ಪದ್ಮ ಅವರು ಇತ್ತೀಚೆಗೆ ತಮ್ಮ ಕೆಲಸ ಮಾಡುವಾಗ ಅವರಿಗೆ 40 ಗ್ರಾಂ ಚಿನ್ನ ಕಸದಲ್ಲಿ ಸಿಕ್ಕಿತ್ತು. ಆದರೆ ಪದ್ಮ ಅವರು ಅದನ್ನು ಇರಿಸಿಕೊಳ್ಳದೆ, ಅದನ್ನು ಕಳೆದುಕೊಂಡವರಿಗೆ ಪ್ರಾಮಾಣಿಕವಾಗಿ ಮರಳಿಸಿದರು. ಇದು ರಾಜ್ಯದಾದ್ಯಂತ ಸುದ್ದಿ ಆಗಿದ್ದಲ್ಲದೆ, ಪದ್ಮ ಅವರಿಗೆ ಭಾರಿ ಪ್ರಶಂಸೆಗಳು ಸಹ ದೊರಕಿತು. ಇತ್ತೀಚೆಗಷ್ಟೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಪದ್ಮ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ಸೂಚಿಸಿ, ಪದ್ಮ ಅವರನ್ನು ಸನ್ಮಾನಿಸಿ, ಒಂದು ಲಕ್ಷ ರೂಪಾಯಿ ಹಣವನ್ನು ಸಹ ನೀಡಿದ್ದಾರೆ. ಇದೀಗ ನಟ ರಜನೀಕಾಂತ್ ಸಹ ಪದ್ಮ ಅವರನ್ನು ತಮ್ಮ ಮನೆಗೆ ಆಹ್ವಾನಿಸಿ ಸನ್ಮಾನಿಸಿರುವ ಜೊತೆಗೆ ಚಿನ್ನದ ಸರವೊಂದನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.

ಇದನ್ನೂ ಓದಿ:ಆ ನಟನಿಗಿಂತ ನಾನು ದೊಡ್ಡ ಸ್ಟಾರ್: ರಜನೀಕಾಂತ್ ಹೇಳಿದ್ದು ಯಾರ ಬಗ್ಗೆ?

ರಜನೀಕಾಂತ್ ಅವರಿಗೆ ಯಾರಾದರೂ ಮಾಡಿರುವ ಕಾರ್ಯ ಇಷ್ಟವಾದರೆ ಅವರನ್ನು ಮನೆಗೆ ಕರೆಸಿ, ಚಿನ್ನದ ಸರ ಕೊರಳಿಗೆ ಹಾಕಿ ಸನ್ಮಾನ ಮಾಡುತ್ತಾರೆ. ‘ಕಾಂತಾರ’ ಸಿನಿಮಾ ಇಷ್ಟವಾದಾಗ ರಿಷಬ್ ಶೆಟ್ಟಿಯನ್ನು ಮನೆಗೆ ಕರೆಸಿ ಚಿನ್ನದ ಸರ ಹಾಕಿ ಸನ್ಮಾನ ಮಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ತಮ್ಮ ಅಭಿಮಾನಿಯ ಸಾಮಾಜಿಕ ಕಾರ್ಯವನ್ನು ಮೆಚ್ಚಿ ಸನ್ಮಾನ ಮಾಡಿದ್ದರು. ರಜನೀಕಾಂತ್ ಅಭಿಮಾನಿಯೊಬ್ಬ ದಶಕಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಾ ಬರುತ್ತಿದ್ದಾರೆ. ಆತನ ಸೇವೆ ಮೆಚ್ಚಿ ರಜನೀಕಾಂತ್ ಅವರು ಸನ್ಮಾನ ಮಾಡಿದ್ದರು. ಇದೀಗ ಪದ್ಮ ಅವರ ಪ್ರಾಮಾಣಿಕತೆ ಮೆಚ್ಚಿ ಅವರನ್ನು ಸನ್ಮಾನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಗುಜರಾತ್ ಕನಸು ಭಗ್ನ; ಸತತ 4ನೇ ಬಾರಿಗೆ ಫೈನಲ್​ಗೇರಿದ ಡೆಲ್ಲಿ – Kannada News | WPL 2026 Eliminator: Delhi Capitals Beat Gujarat Giants, Secure Final Berth

2026 ರ ಮಹಿಳಾ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆಯಿತು. ಎರಡೂ ತಂಡಗಳು ಇದುವರೆಗೆ ಪ್ರಶಸ್ತಿ ಗೆಲ್ಲದ ಕಾರಣ ಯಾವ ತಂಡ ಫೈನಲ್​ಗೇರಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಡೆಲ್ಲಿ ತಂಡ ಗುಜರಾತ್​ ತಂಡದ ಮೊದಲ ಫೈನಲ್ ಕನಸನ್ನು ಭಗ್ನಗೊಳಿಸಿ ಸತತ ನಾಲ್ಕನೇ ಬಾರಿಗೆ ಫೈನಲ್​ಗೆ ಟಿಕೆಟ್ ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನು 26 ಎಸೆತಗಳು ಬಾಕಿ ಇರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದೀಗ ಡೆಲ್ಲಿ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

Source link

ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ – ಇಂಡಿಗೋ ಡಿಕ್ಕಿ: ತಪ್ಪಿದ ಭಾರೀ ಅನಾಹುತ – Kannada News | CSMIA Incident: Air India and IndiGo Wing Tips Collide, Flights Grounded

ಮುಂಬೈ, ಫೆ.3: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳೆರಡು ಡಿಕ್ಕಿ ಹೊಡೆದುಕೊಂಡಿದೆ. ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ (AI 2732) ಮತ್ತು ಇಂಡಿಗೋ (6E 791) ವಿಮಾನಗಳ ನಡುವೆ ಡಿಕ್ಕಿ ಹೊಡೆದುಕೊಂಡಿದೆ. ಕೊಯಮತ್ತೂರಿಗೆ ಹೊರಡಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಟ್ಯಾಕ್ಸಿ ಮಾಡುತ್ತಿದ್ದಾಗ, ಹೈದರಾಬಾದ್‌ನಿಂದ ಬಂದಿಳಿದ ಇಂಡಿಗೋ ವಿಮಾನ ಅದೇ ಹಾದಿಯಲ್ಲಿ ಬರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲಪಕ್ಕದ ರೆಕ್ಕೆಗಳ ತುದಿಗಳು (Wing tips) ಪರಸ್ಪರ ಸ್ಪರ್ಶಿಸಿವೆ. ಘಟನೆಯ ಸಮಯದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಗಾಯಗಳಾಗಿಲ್ಲ. ತಾಂತ್ರಿಕ ತಪಾಸಣೆಗಾಗಿ ಎರಡೂ ವಿಮಾನಗಳನ್ನು ಸದ್ಯಕ್ಕೆ ಹಾರಾಟವನ್ನು ರದ್ದು ಮಾಡಲಾಗಿದೆ. ಏರ್ ಇಂಡಿಯಾ ತನ್ನ ಪ್ರಯಾಣಿಕರನ್ನು ಅವರ ತಲುಪಬೇಕಾದ ಸ್ಥಳಕ್ಕೆ ಕಳುಹಿಸಲು ಪರ್ಯಾಯ ವ್ಯವಸ್ಥೆ ಮಾಡಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಎರಡೂ ವಿಮಾನಯಾನ ಸಂಸ್ಥೆಗಳು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿವೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:

ವಿಮಾನ ನಿಲ್ದಾಣದಲ್ಲಿ ನಡೆದದ್ದೇನು?

ಏರ್ ಇಂಡಿಯಾ ವಿಮಾನ AI 2732 ನಿರ್ಗಮನಕ್ಕಾಗಿ C1 ರಿಂದ M4 ಕಡೆಗೆ ಟ್ಯಾಕ್ಸಿ ಮಾಡುತ್ತಿದ್ದಾಗ, ರನ್​​ ವೇಯಲ್ಲಿ ಬರುತ್ತಿದ್ದ ಇಂಡಿಗೋ ವಿಮಾನವು ಟ್ಯಾಕ್ಸಿ ಮಾಡಿ B1 ಗೆ ಸೇರುತ್ತಿತ್ತು. ಈ ಚಲನೆಯ ಸಮಯದಲ್ಲಿ, ಎರಡೂ ವಿಮಾನಗಳ ಬಲ ರೆಕ್ಕೆ ತುದಿಗಳು ಪರಸ್ಪರ ಸ್ಪರ್ಶಿಸಿದೆ. ಇದರಿಂದ ಎರಡು ವಿಮಾನಗಳು ರೆಕ್ಕೆಗೆ ಡ್ಯಾಮೇಜ್​​ ಆಗಿದೆ. ಇದು ದೊಡ್ಡ ಅಪಘಾತಕ್ಕೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಗೆ ಏರ್ ಇಂಡಿಯಾ, ಇಂಡಿಗೋ ಪ್ರತಿಕ್ರಿಯೆ:

ಫೆಬ್ರವರಿ 3 ರಂದು ಮುಂಬೈನಿಂದ ಕೊಯಮತ್ತೂರಿಗೆ ಹಾರಾಟ ನಡೆಸುತ್ತಿದ್ದ AI2732 ವಿಮಾನವು ಟೇಕ್-ಆಫ್ ಆಗುವ ಮೊದಲು ಟ್ಯಾಕ್ಸಿವೇಯಲ್ಲಿ ಕಾಯುತ್ತಿದ್ದಾಗ ಮತ್ತೊಂದು ವಿಮಾನದ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಎರಡೂ ವಿಮಾನಗಳ ರೆಕ್ಕೆ ತುದಿಗಳು ಡ್ಯಾಮೇಜ್​​ ಆಗಿದೆ. ಇದರ ಪರಿಣಾಮವಾಗಿ ನಮ್ಮ ವಿಮಾನದ ರೆಕ್ಕೆ ತುದಿಗೆ ಹಾನಿಯಾಯಿತು ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಹೆಚ್ಚಿನ ತಾಂತ್ರಿಕ ತಪಾಸಣೆಗಾಗಿ ವಿಮಾನವನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ನಮ್ಮ ತಂಡ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಘಟನೆಯ ಬಗ್ಗೆ ನಿಯಂತ್ರಕರಿಗೆ ವರದಿ ಮಾಡಲಾಗಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದಿಸುತ್ತದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಏರ್ ಇಂಡಿಯಾ ಡ್ರೀಮ್‌ಲೈನರ್​ನಲ್ಲಿ ಮತ್ತೆ ಇಂಧನದ ಸ್ವಿಚ್ ಸಮಸ್ಯೆ; ಲಂಡನ್-ಬೆಂಗಳೂರು ವಿಮಾನ ಹಾರಾಟ ಸ್ಥಗಿತ

ಇನ್ನು ಇಂಡಿಗೋ ಕೂಡ ಸ್ಪಷ್ಟನೆ ನೀಡಿದೆ. ಹೈದರಾಬಾದ್‌ನಿಂದ ಮುಂಬೈಗೆ ಹೊರಟಿದ್ದ ನಮ್ಮ 6E 791 ವಿಮಾನದ ರೆಕ್ಕೆಯ ತುದಿಯು ಲ್ಯಾಂಡಿಂಗ್ ನಂತರ ಟ್ಯಾಕ್ಸಿ ಮಾಡುವಾಗ ಮತ್ತೊಂದು ವಿಮಾನದ ರೆಕ್ಕೆ ಡಿಕ್ಕಿ ಹೊಡೆದಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಪಾರ್ಕಿಂಗ್ ನಂತರ ಕೆಳಗಿಳಿದಿದ್ದಾರೆ. ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಈ ಘಟನೆ ನಡೆದ ನಂತರ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಲಾಗಿದೆ. ಅವರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇಂಡಿಗೋದಲ್ಲಿ, ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ಮತ್ತು ಭದ್ರತೆ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ಎಂದು ಹೇಳಿದೆ .

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಫೈನಲ್​ಗೇರಿದ ಇಂಗ್ಲೆಂಡ್‌ – Kannada News | U19 World Cup Semi Final: England Beats Australia by 27 Runs to Reach Final

ಅಂಡರ್ 19 ವಿಶ್ವಕಪ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೂಪರ್ ಸಿಕ್ಸ್ ಹಂತ ಮುಗಿದಿದ್ದು, ಸೆಮಿಫೈನಲ್‌ ಸುತ್ತು ಕೂಡ ಆರಂಭವಾಗಿದೆ. ಅದರಂತೆ ಇಂದು ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಇಂಗ್ಲೆಂಡ್‌ ತಂಡ 27 ರನ್​ಗಳೊಂದಿಗೆ ಗೆದ್ದುಕೊಳ್ಳುವ ಮೂಲಕ ಫೈನಲ್​ಗೇರಿದೆ. ಇದರ ಜೊತೆಗೆ ಇಂಗ್ಲೆಂಡ್‌ 28 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸುವ ಅವಕಾಶವನ್ನು ಪಡೆದುಕೊಂಡಿದೆ. ಇತ್ತ ಸತತ ಎರಡನೇ ಪ್ರಶಸ್ತಿಯನ್ನು ಗೆಲ್ಲುವ ಆಸ್ಟ್ರೇಲಿಯಾದ ಕನಸ ಛಿದ್ರಗೊಂಡಿದೆ.

ಕ್ಯಾಪ್ಟನ್  ದಾಖಲೆಯ ಶತಕ

ಬುಲವಾಯೊದಲ್ಲಿ ನಡೆದ 2026 ರ ಅಂಡರ್-19 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 277 ರನ್ ಗಳಿಸಿತು. ತಂಡದ ಆರಂಭ ಉತ್ತಮವಾಗಿರಲಿಲ್ಲ. ಇದರ ಪರಿಣಾಮವಾಗಿ ತಂಡ ಕೇವಲ 60 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ನಾಯಕನ ಇನ್ನಿಂಗ್ಸ್ ಆಡಿದ ಥಾಮಸ್ ರೆವ್, ಕ್ಯಾಲೆಬ್ ಫಾಕ್ನರ್ ಜೊತೆ 135 ರನ್​ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಜೊತೆಯಾಟ ಇಂಗ್ಲೆಂಡ್ ತಂಡವನ್ನು 200 ರನ್​ಗಳ ಹತ್ತಿರಕ್ಕೆ ಕೊಂಡೊಯ್ದಿತು. ಇದೇ ವೇಳೆ ನಾಯಕ ರ್ಯು ಸ್ಮರಣೀಯ ಶತಕ ಕೂಡ ಬಾರಿಸಿದರು.

97 ಎಸೆತಗಳಲ್ಲಿ ಶತಕ ಬಾರಿಸಿದ ಥಾಮಸ್​ಗೆ ಈ ವಿಶ್ವಕಪ್​ನಲ್ಲಿ ಇದು ಮೊದಲ ಶತಕವಾಗಿದೆ. ಈ ಶತಕದೊಂದಿಗೆ ಥಾಮಸ್ ಅಂಡರ್ -19 ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಶತಕ ಬಾರಿಸಿದ ಮೊದಲ ಇಂಗ್ಲೆಂಡ್ ಬ್ಯಾಟ್ಸ್​ಮನ್ ಎನಿಸಿಕೊಂಡರು. ಆದಾಗ್ಯೂ, 43 ನೇ ಓವರ್​ನಲ್ಲಿ ಅವರು ಔಟಾದರು. ಹೀಗಾಗಿ ಇಂಗ್ಲೆಂಡ್​ಗೆ 300 ರನ್ ದಾಖಲಿಸಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ, ಹೇಡನ್ ಶಿಲ್ಲರ್ 31 ರನ್​ಗಳಿಗೆ 2 ವಿಕೆಟ್ ಪಡೆದರು.

ನಾಯಕನ ಶತಕ ವ್ಯರ್ಥ

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೂಡ ಕಳಪೆ ಆರಂಭ ಪಡೆದುಕೊಂಡಿತು. ಕೇವಲ 47 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಥಾಮಸ್ ರ್ಯು ಅವರಂತೆಯೇ, ಆಸ್ಟ್ರೇಲಿಯಾ ನಾಯಕ ಆಲಿವರ್ ಪೀಕ್ ಕೂಡ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಆರಂಭದಲ್ಲಿ, ಪೀಕ್ ನಿತೇಶ್ ಸ್ಯಾಮ್ಯುಯೆಲ್ ಅವರೊಂದಿಗೆ 62 ರನ್‌ಗಳ ಪಾಲುದಾರಿಕೆಯೊಂದಿಗೆ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಆದರೆ ವಿಕೆಟ್‌ಗಳು ಪತನಗೊಂಡಂತೆ ಇನ್ನಿಂಗ್ಸ್ ಮತ್ತೊಮ್ಮೆ ಕುಸಿಯಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ 208 ರನ್​ಗಳಿಗೆ ಎಂಟು ವಿಕೆಟ್​ಗಳನ್ನು ಕಳೆದುಕೊಂಡಿತ್ತು.

ಆದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಆಸ್ಟ್ರೇಲಿಯಾದ ನಾಯಕ 46 ನೇ ಓವರ್‌ನಲ್ಲಿ ಸತತ ಐದು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸುವ ಮೂಲಕ ತಂಡದ ಭರವಸೆಯನ್ನು ಹೆಚ್ಚಿಸಿದರು ಮತ್ತು ಶತಕದಂಚಿಗೆ ಬಂದರು. ಆದಾಗ್ಯೂ, ಒಂಬತ್ತನೇ ವಿಕೆಟ್ ಮುಂದಿನ ಓವರ್‌ನ ಮೊದಲ ಎಸೆತದಲ್ಲಿ ಪತನವಾಯಿತು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ನಾಯಕ ಪೀಕ್ ಕೇವಲ 85 ಎಸೆತಗಳಲ್ಲಿ ಸತತ ಎರಡನೇ ಶತಕವನ್ನು ಬಾರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪೀಕ್ (100) ಔಟ್ ಆಗುವುದರೊಂದಿಗೆ, ಆಸ್ಟ್ರೇಲಿಯಾ 250 ರನ್‌ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2026 ರ ಐಪಿಎಲ್​ಗೆ ಜೆರ್ಸಿ ಬದಲಿಸಿದ ಆರ್​ಸಿಬಿ; ಹೊಸ ಜೆರ್ಸಿಯ ವಿಡಿಯೋ ನೋಡಿ – Kannada News | RCB New IPL Jersey: Star for First Trophy, Nothing Sponsor Revealed

ಟಿ20 ವಿಶ್ವಕಪ್ ಮುಗಿದ ಕೂಡಲೇ 2026 ರ ಐಪಿಎಲ್ ಕೂಡ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಈ ಆವೃತ್ತಿಯಲ್ಲೂ ತನ್ನ ಟ್ರೋಫಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಆರ್​ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇಲ್ಲಿಯವರೆಗೆ ಖಚಿತವಾಗಿಲ್ಲ. ಒಂದೆಡೆ ಕೆಎಸ್​ಸಿಎ, ಆರ್​ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಆರ್​ಸಿಬಿ ಮ್ಯಾನೇಜ್​ಮೆಂಟ್ ಮಾತ್ರ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನೋಡುತ್ತಿದೆ. ಇದೆಲ್ಲದರ ನಡುವೆ ಆರ್​ಸಿಬಿ ಫ್ರಾಂಚೈಸಿ ಮುಂಬರುವ ಐಪಿಎಲ್​ಗೆ ತನ್ನ ತಂಡದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ.

ಮಾರ್ಚ್ 26 ರಿಂದ ಪ್ರಾರಂಭವಾಗುವ ಐಪಿಎಲ್‌ನ 19 ನೇ ಆವೃತ್ತಿಯಲ್ಲಿ ಆರ್​ಸಿಬಿ ಆಟಗಾರರು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೂರ್ನಮೆಂಟ್‌ ಆರಂಭಕ್ಕೆ ಸುಮಾರು ಒಂದೂವರೆ ತಿಂಗಳ ಮೊದಲು ಆರ್​ಸಿಬಿ ಫ್ರಾಂಚೈಸಿ ತಂಡದ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 3 ರಂದು ಆರ್​ಸಿಬಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ವೀಡಿಯೊ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಆರ್‌ಸಿಬಿ ತನ್ನ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.

ವಾಸ್ತವವಾಗಿ ಬಿಡುಗಡೆಯಾಗಿರುವ ನೂತನ ಜೆರ್ಸಿ ಹಳೆಯ ಜೆರ್ಸಿಯನ್ನೇ ಹೋಲುತ್ತದೆ. ಅಂದರೆ ಆರ್‌ಸಿಬಿ ಆಟಗಾರರು ತಮ್ಮ ಐಕಾನಿಕ್ ಕೆಂಪು, ಕಪ್ಪು ಮತ್ತು ಚಿನ್ನದ ಬಣ್ಣದ ಮಿಶ್ರಿತ ಜೆರ್ಸಿಯಲ್ಲೇ ಮಿಂಚಲಿದ್ದಾರೆ. ಆದರೆ ಈ ಬಾರಿ ಜೆರ್ಸಿಯಲ್ಲಿ ಕೆಲವು ಬದಲಾವಣೆಗಳಿವೆ. ಹೊಸ ಜೆರ್ಸಿಯಲ್ಲಿ ಕಾಲರ್‌ ಇದ್ದು, ಇದರ ಜೊತೆಗೆ ಶೀರ್ಷಿಕೆ ಪ್ರಾಯೋಜಕರು ಸಹ ಬದಲಾಗಿದ್ದಾರೆ. ಕಳೆದ ಕೆಲವು ಸೀಸನ್​ಗಳಲ್ಲಿ ಆರ್​ಸಿಬಿ ಪ್ರಾಯೋಜಕತ್ವವನ್ನು ಕತಾರ್ ಏರ್‌ವೇಸ್ ಪಡೆದುಕೊಂಡಿತ್ತು. ಆದರೀಗ ನಥಿಂಗ್ ಸ್ಮಾರ್ಟ್‌ಫೋನ್‌ ಆರ್​ಸಿಬಿ ಪ್ರಾಯೋಜಕತ್ವದ ಜವಾಬ್ದಾರಿ ಹೊತ್ತುಕೊಂಡಿದೆ. ಇದರ ಜೊತೆಗೆ ತಂಡದ ಲೋಗೋ ಮೇಲೆ 1 ಸ್ಟಾರ್ ಚಿಹ್ನೆಯೂ ಮುದ್ರಿತವಾಗಿದೆ.

ಹೊಸ ಜೆರ್ಸಿಯಲ್ಲಿ ಆರ್‌ಸಿಬಿ ಲೋಗೋದ ಮೇಲೆ ಸ್ಟಾರ್ ಚಿಹ್ನೆಯನ್ನು ನಮೂದಿಸಲಾಗಿದ್ದು, ಇದು ಆರ್‌ಸಿಬಿಯ ಮೊದಲ ಪ್ರಶಸ್ತಿಯನ್ನು ಸಂಕೇತಿಸುತ್ತದೆ. ಕಳೆದ 17 ವರ್ಷಗಳಿಂದ ಆರ್‌ಸಿಬಿಯ ಜೆರ್ಸಿಯಲ್ಲಿ ಈ ಸ್ಟಾರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು, ಈಗ ಅದರ ಕಾಯುವಿಕೆಗೆ ತೆರೆ ಬಿದ್ದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈ ವೋಲ್ಟೇಜ್ ತಂತಿ ತಗುಲಿ ಯುವಕ ಸಾವು; ಇಲ್ಲಿದೆ ವಿಡಿಯೋ – Kannada News | Punjab moga young man died after touching high voltage wires

ಮೋಗಾ, ಫೆಬ್ರವರಿ 3: ಪಂಜಾಬ್​ನ ಮೋಗಾ ಜಿಲ್ಲೆಯ ಬೂತಾರ್ ಗ್ರಾಮದಲ್ಲಿ ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ಯುವಕ ಮೃತಪಟ್ಟಿದ್ದಾನೆ. ಸತ್ನಮ್ ಸಿಂಗ್ ಎಂಬುವವರ ಮನೆಯಲ್ಲಿ ನಿರ್ಮಾಣ ಹಂತದ ಕೆಲಸದ ಸಮಯದಲ್ಲಿ, ಯುವಕನೊಬ್ಬ ಪ್ಲಂಬಿಂಗ್ ಕೆಲಸ ಮಾಡಲು ಟೆರೇಸ್ ಮೇಲೆ ಹತ್ತಿದ್ದ. ಆತ ಆಗ ಆಕಸ್ಮಿಕವಾಗಿ ಕೆಳಗೆ ನೇತಾಡುತ್ತಿದ್ದ ಹೈ-ವೋಲ್ಟೇಜ್ ತಂತಿಗಳು ತಾಗಿ ಕೆಳಗೆ ಬಿದ್ದ.

ಮೋಗಾ ಜಿಲ್ಲೆಯ ಬೂತಾರ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಾಗ 11,000 ಕೆವಿ ಹೈಟೆನ್ಷನ್ ಲೈನ್‌ಗೆ ವಿದ್ಯುತ್ ಸ್ಪರ್ಶಿಸಿ 22 ವರ್ಷದ ಯುವಕ ದುರಂತವಾಗಿ ಸಾವನ್ನಪ್ಪಿದ್ದಾನೆ. ಮೃತನನ್ನು ರಾನಿಯಾ ಗ್ರಾಮದ ನಿವಾಸಿ ಮನ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಬೂತಾರ್ ಗ್ರಾಮದ ನಿವಾಸಿ ಸತ್ನಮ್ ಸಿಂಗ್ ಅವರ ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಯಲ್ಲಿ ಪೈಪ್‌ಗಳನ್ನು ಅಳವಡಿಸುವ ಕೆಲಸದಲ್ಲಿ ಮನ್ಪ್ರೀತ್ ಸಿಂಗ್ ಕೆಲಸ ಮಾಡುತ್ತಿದ್ದ. ಆಗ ಈ ಘಟನೆ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಆತನನ್ನು ಆಂಬ್ಯುಲೆನ್ಸ್ ಸಹಾಯದಿಂದ ಮೋಗಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಆತನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಈ ಊರಿನಲ್ಲಿ ನಡೆಯುತ್ತೇ ಅಪರೂಪದ ವಜ್ರಾಭರಣಗಳ ಜಾತ್ರೆ – Kannada News | Kempegowda’s Heritage: Devanahalli’s Grand Kote Venugopala Swamy Festival and Rare VajrabharaNa

ಬೆಂಗಳೂರು, ಫೆ.3: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಅದ್ದೂರಿ ರಥೋತ್ಸವ (Devanahalli Ratha Utsav) ಮತ್ತು ಅಪರೂಪದ ವಜ್ರಾಭರಣಗಳ ಜಾತ್ರೆ. ದೇವನಹಳ್ಳಿ ಎಂದರೆ ಕೇವಲ ವಿಮಾನ ನಿಲ್ದಾಣ ಮಾತ್ರವಲ್ಲ, ಶತಮಾನಗಳ ಇತಿಹಾಸವಿರುವ ರಾಜ-ಮಹಾರಾಜರ ಕಾಲದ ವೈಭವಕ್ಕೂ ಸಾಕ್ಷಿ. ನಾಡಪ್ರಭು ಕೆಂಪೇಗೌಡರ ಪೂರ್ವಿಕರು ಈ ದೇವಾಲಯಕ್ಕೆ ಬೆಲೆಕಟ್ಟಲಾಗದ ವಜ್ರಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದರು. ರಾಜರ ಕಾಲ ಮುಗಿದ ನಂತರ ಈ ಆಭರಣಗಳು ಸರ್ಕಾರದ ಖಜಾನೆ ಸೇರಿವೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗಾಗಿ ದೇವನಹಳ್ಳಿಯ ತಾಲೂಕು ಕಚೇರಿಯಿಂದ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆಯಲ್ಲಿ ಈ ಆಭರಣಗಳನ್ನು ತರಲಾಗುತ್ತದೆ.

ಅಧಿಕಾರಿಗಳು ಪೆಟ್ಟಿಗೆಯನ್ನು ಭಕ್ತಿಯಿಂದ ಹೊತ್ತು ತಂದು ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದಂತೆ, ಉತ್ಸವ ಮೂರ್ತಿಗೆ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ತೊಡಿಸಲಾಯಿತು. ಈ ಸುಂದರ ದೃಶ್ಯವನ್ನು ಕಂಡ ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ ಪುಳುಕಿತರಾದರು. ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುವ ಸಮಯದಲ್ಲಿ ಆಕಾಶದಲ್ಲಿ ಗರುಡ ಪಕ್ಷಿ ಪ್ರತ್ಯಕ್ಷವಾಗಿ, ರಥ ಮತ್ತು ದೇವಸ್ಥಾನದ ಮೇಲೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ್ದು ಭಕ್ತರ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಯಿತು. ವಜ್ರಾಭರಣಗಳ ಅಲಂಕಾರದಲ್ಲಿ ದೇವರು ರಥಾರೂಢನಾದ ನಂತರ, ಭಕ್ತರು ದವನ ಮತ್ತು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಈ ಜಾತ್ರೆಯ ಮೂಲಕ ದೇವನಹಳ್ಳಿಯ ಜನತೆ ಕೇವಲ ಪುಸ್ತಕಗಳಲ್ಲಿ ಓದಿದ್ದ ರಾಜ-ಮಹಾರಾಜರ ಕಾಲದ ಗತವೈಭವವನ್ನು ಕಣ್ಣಾರೆ ಕಂಡು ಸಂಭ್ರಮಿಸಿದರು. ಜಾತ್ರೆಯ ನಂತರ ಭಕ್ತರು ಬೂಂದಿ ಪಾಯಸ ಮತ್ತು ಮುದ್ದೆ ಕಾಳುಸಾರಿನ ಊಟವನ್ನು ಸವಿದರು.

ಇಲ್ಲಿದೆ ನೋಡಿ ವಿಡಿಯೋ:

ಈ ವಜ್ರಾಭರಣಗಳು ನಾಡಪ್ರಭು ಕೆಂಪೇಗೌಡರ ಕಾಲದ ಅತ್ಯಂತ ಅಮೂಲ್ಯವಾದ ಆಸ್ತಿಗಳಾಗಿವೆ. ಇವುಗಳ ಭದ್ರತೆಯ ದೃಷ್ಟಿಯಿಂದ ನಾವು ಇವುಗಳನ್ನು ಸರ್ಕಾರದ ಖಜಾನೆಯಲ್ಲಿ ಇರಿಸಿರುತ್ತೇವೆ. ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕರ ದರ್ಶನಕ್ಕೆ ಮತ್ತು ದೇವರಿಗೆ ಅಲಂಕಾರ ಮಾಡಲು ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾಗುತ್ತದೆ. ಈ ಪರಂಪರೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ (AC) ದುರ್ಗಾಶ್ರೀ ಅವರು ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರು, ದೇವನಹಳ್ಳಿ ಕೋಟೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಥೋತ್ಸವದ ದಿನದಂದು ಮಾತ್ರ ಈ ಅಪರೂಪದ ವಜ್ರಖಚಿತ ಕಿರೀಟ ಮತ್ತು ಆಭರಣಗಳನ್ನು ಹೊರತೆಗೆಯಲಾಗುತ್ತದೆ. ತಾಲೂಕು ಕಚೇರಿಯಿಂದ ದೇವಸ್ಥಾನದವರೆಗೆ ಶಸ್ತ್ರಸಜ್ಜಿತ ಪೊಲೀಸರ ಕಾವಲಿನಲ್ಲಿ ಇವುಗಳನ್ನು ತಂದು, ಉತ್ಸವ ಮೂರ್ತಿಗೆ ಅಲಂಕಾರ ಮಾಡಿದ ಬಳಿಕ ರಥೋತ್ಸವ ನೆರವೇರುತ್ತದೆ. ಕಾರ್ಯಕ್ರಮ ಮುಗಿದ ತಕ್ಷಣವೇ ಇವುಗಳನ್ನು ಮರಳಿ ಖಜಾನೆಗೆ ಸುರಕ್ಷಿತವಾಗಿ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸೂರು ಗ್ರಾಮದಲ್ಲಿ ಅಚ್ಚರಿಯ ಘಟನೆ: ಕಹಿ ಬೇವಿನ ಮರದಲ್ಲಿ ಸಿಹಿ ದ್ರಾವಣ

ಗರುಡನ ಪ್ರದಕ್ಷಿಣೆ :

ಧಾರ್ಮಿಕ ನಂಬಿಕೆಗಳ ಪ್ರಕಾರ, ರಥೋತ್ಸವದ ಸಮಯದಲ್ಲಿ ಗರುಡ ಪಕ್ಷಿ ಕಾಣಿಸಿಕೊಳ್ಳುವುದು ಅತ್ಯಂತ ಶುಭ ಶಕುನ ಎಂದು ಹೇಳಲಾಗುತ್ತದೆ. ದೇವಸ್ಥಾನದ ಒಳಭಾಗದಲ್ಲಿ ಉತ್ಸವ ಮೂರ್ತಿಗೆ ವಜ್ರಾಭರಣಗಳನ್ನು ತೊಡಿಸಿ, ರಥದಲ್ಲಿ ಪ್ರತಿಷ್ಠಾಪಿಸುವ ಸರಿಯಾದ ಸಮಯಕ್ಕೆ ಆಕಾಶದಲ್ಲಿ ಗರುಡ ಕಾಣಿಸಿಕೊಂಡಿದೆ. ಕೇವಲ ಹಾರಿ ಹೋಗದೆ, ರಥ ಮತ್ತು ದೇವಸ್ಥಾನದ ಗೋಪುರದ ಮೇಲೆ ಗರುಡನು ಮೂರು ಬಾರಿ ಪ್ರದಕ್ಷಿಣೆ ಹಾಕಿದೆ. ವೇಣುಗೋಪಾಲ ಸ್ವಾಮಿಯು ವಿಷ್ಣುವಿನ ಅವತಾರವಾಗಿದ್ದು, ವಿಷ್ಣುವಿನ ವಾಹನವಾದ ಗರುಡನೇ ಬಂದು ರಥೋತ್ಸವಕ್ಕೆ ಚಾಲನೆ ನೀಡಿದ್ದಾನೆ ಎಂಬುದು ಭಕ್ತರ ನಂಬಿಕೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಗರುಡ ಕಾಣಿಸಿಕೊಳ್ಳುವುದು ಇಲ್ಲಿನ ಒಂದು ವಿಶೇಷ ಸಂಪ್ರದಾಯ ಮತ್ತು ಪವಾಡದಂತೆ ನಡೆದುಕೊಂಡು ಬಂದಿದೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಫಲಿತಾಂಶ ಸುಧಾರಣೆಗೆ ಹೊಸ ಕ್ರಮ: ನಿತ್ಯ 2 ಗಂಟೆ ಮೊಬೈಲ್, ಟಿವಿ ಆಫ್ ಮಾಡಿಸುವಂತೆ ಟಾಸ್ಕ್ – Kannada News | Karnataka School education Task To Teachers For switch off Mobile And TV In Village For SSLC Examinations

ಬೆಂಗಳೂರು, (ಫೆಬ್ರವರಿ 03): ಎಸ್ಸೆಸ್ಸೆಲ್ಸಿ ಪರೀಕ್ಷಾ ಪಲಿತಾಂಶದಲ್ಲಿ  (SSLC Result) ಸುಧಾರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ‍್ಯಕ್ರಮಗಳನ್ನು ಹಮ್ಮಿಳ್ಳುತ್ತಿದೆ. ಈ ಮೂಲಕ ಈ ಬಾರಿ ಎಸ್​​ಎಸ್​​ಎಲ್​ಸಿ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಸಂಬಂಧ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಾನಾ ಟಾಸ್ಕ್​​​ಗಳನ್ನು ನೀಡುತ್ತಿದೆ. ಇದೀಗ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆಯೇ ಹೊಸದಾಗಿ ಮತ್ತೊಂದು ಟಾಸ್ಟ್​ ನೀಡಿದ್ದು, ಪ್ರತಿ ದಿನ ಸಂಜೆ 7 ಗಂಟೆಯಿಂದ 9ರವರೆಗೆ ಎರಡು ಗಂಟೆ ಮೊಬೈಲ್ ಮತ್ತು ಟಿವಿ ಸ್ವಿಚ್ ಆಫ್ ಮಾಡಿಸುವಂತೆ ಸೂಚಿಸಿದೆ. PDOಗಳ ಹಂತದಲ್ಲಿಯೂ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಡಂಗೂರು ಬಾರಿಸಿ ಪೋಷಕರಿಗೆ ಜಾಗೃತಿ ಮಾಡಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ – Kannada News | Bengaluru’s Hindi Imposition Debate: Social Media Fuels North South Language Conflict

ಸಾಮಾಜಿಕ ಜಾಲತಾಣದಲ್ಲಿ ಭಾಷಾವಾರು (India language) ಗಲಾಟೆ ನಡೆಯತ್ತ ಇರುತ್ತದೆ. ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ನಡುವೆ ಭಾಷೆಯ ವಿಷಯವಾಗಿ ಭಾರೀ ಜಗಳಗಳು ನಡೆದಿದೆ. ಬೆಂಗಳೂರಿನಲ್ಲೂ ಕೂಡ ಹಿಂದಿ ಏರಿಕೆ ಆಗುತ್ತಿದೆ ಎಂಬ ಕೂಗು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಎಕ್ಸ್​ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್​​ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಇದು ದಕ್ಷಿಣ ಹಾಗೂ ಉತ್ತರ ಭಾರತ ನಡುವಿನ ಭಾಷೆ ವಿಚಾರವಾಗಿ ಹೊಸ ವಿವಾದವನ್ನು ಹುಟ್ಟು ಹಾಕಿದೆ. ಈ ಪೋಸ್ಟ್​​ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಉತ್ತರ ಭಾರತ ಮತ್ತು ದಕ್ಷಿಣ ಭಾರತ’ ನಡುವಿನ ಭಾಷಾ ಸಂಘರ್ಷ ಅಥವಾ ವಿವಾದದ ಒಂದು ಮುಖವನ್ನು ತೋರಿಸುತ್ತಿದೆ. ಈ ಮೀಮ್ (meme) ಮೂಲಕ ಉತ್ತರ ಭಾರತೀಯರು ತಮ್ಮನ್ನು ತಾವು ಕೇವಲ ಭಾರತೀಯರು ಎಂದು ಗುರುತಿಸಿಕೊಳ್ಳುತ್ತಾರೆ ಮತ್ತು ಹಿಂದಿ-ಇಂಗ್ಲಿಷ್ ಬಳಸುತ್ತಾರೆ ಎಂಬ ಹೆಮ್ಮೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದಾರೆ.

ಎಕ್ಸ್​​​ನಲ್ಲಿ ಹಂಚಿಕೊಂಡಿರುವ ಪೋಸ್ಟ್​​ನಲ್ಲಿ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಮಾತನಾಡುವವರನ್ನು ‘ಕ್ಲೌನ್’ (clown) ಎಮೋಜಿಗಳ ತೋರಿಸಿದ್ದಾರೆ. ಈ ಮೂಲಕ ಭಾಷಾ ಪ್ರೇಮವನ್ನು ಹಾಸ್ಯದ ರೀತಿಯಲ್ಲಿ ಇಲ್ಲಿ ಪೋಸ್ಟ್​ನಲ್ಲಿ ಹಾಕಿದ್ದಾರೆ. ದಕ್ಷಿಣ ಭಾರತೀಯರು ಜೋಕರ್​​​ ಎಂಬ ರೀತಿಯಲ್ಲಿ ಇಲ್ಲಿ ಬಿಂಬಿಸಿದ್ದಾರೆ. ಹಿಂದಿ ಮತ್ತು ಇಂಗ್ಲಿಷ್ ಬಳಸುವುದರಿಂದ ಇಡೀ ದೇಶಕ್ಕೆ ಒಂದು ಸಾಮಾನ್ಯ ಭಾಷೆ ಸಿಗುತ್ತದೆ ಮತ್ತು ಅದು “ರಾಷ್ಟ್ರೀಯತೆಯ” ಸಂಕೇತ ಎಂದು ಹೇಳಲಾಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ (Federalism) ಪ್ರತಿಯೊಂದು ಭಾಷೆಯೂ ಸಮಾನ ಮತ್ತು ಗೌರವಾರ್ಹ. ತನ್ನ ಭಾಷೆಯನ್ನು ಪ್ರೀತಿಸುವುದು ಎಂದರೆ ದೇಶವನ್ನು ದ್ವೇಷಿಸುವುದು ಎಂದಲ್ಲ.

ಇಲ್ಲಿದೆ ನೋಡಿ ವೈರಲ್​ ಪೋಸ್ಟ್​:

ಇದರ ಜತೆಗೆ ಮತ್ತೊಂದು ಪೋಸ್ಟ್​​ನ್ನು ಕೂಡ ಹಂಚಿಕೊಳ್ಳಲಾಗಿದೆ. ಅದರಲ್ಲಿ ಭಾಷೆಯ ಬಗ್ಗೆ ಇರುವಷ್ಟೇ ಕಳಕಳಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಏಕಿಲ್ಲ ಎಂದು ಈ ಪೋಸ್ಟ್​​ನಲ್ಲಿ ಕೇಳಿದ್ದಾರೆ. ಇನ್ನು “ಏಕರೂಪತೆ” (Uniformity) ಕೇವಲ ಭಾಷೆಗೆ ಸೀಮಿತವಾಗದೆ, ಎಲ್ಲ ಧರ್ಮದವರಿಗೂ ಸಮಾನ ಕಾನೂನು ಮತ್ತು ಸ್ವಾಯತ್ತತೆ ಸಿಗುವಲ್ಲಿಯೂ ಇರಬೇಕು. ಸಾಂಸ್ಕೃತಿಕ ಹೆಮ್ಮೆಯು ಅಂಧಾಭಿಮಾನವಾಗಬಾರದು. ಭಾಷೆಯ ಜೊತೆಗೆ ನೀವು ಹೇಳಿದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆಯೂ ಸುಸಂಬದ್ಧವಾದ ಚರ್ಚೆ ನಡೆಯುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ ಎಂದು ಈ ಪೋಸ್ಟ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಯುವತಿಯರೇ ನಿಮ್ಮ ಖಾಸಗಿ ಫೋಟೋ ಇಟ್ಟುಕೊಂಡು ಯಾರಾದರೂ ಬ್ಲ್ಯಾಕ್‌ಮೇಲ್​​​ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಸಾಕು

ಇನ್ನು ಈ ಬಗ್ಗೆ ಉತ್ತರ ಭಾರತದ ಪಂಜಾಬ್ ಹಾಗೂ ಈಶಾನ್ಯ ಭಾರತದ ಪಶ್ಚಿಮ ಬಂಗಾಳದ ರಾಜ್ಯದ ಜನರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಬಂಗಾಳಿಗಳು ಹಿಂದಿ ಅಲ್ಲ, ಬಂಗಾಳಿ ಮಾತನಾಡುತ್ತಾರೆ. ನಾವು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸಿಕೊಂಡು ನಮ್ಮ ದೇಶವನ್ನು ಮತ್ತೆ ಒಗ್ಗೂಡಿಸಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಅದೇ ರೀತಿ ಪಂಜಾಬ್‌ನಲ್ಲಿ ನಾವು ಪಂಜಾಬಿ ಮಾತನಾಡುತ್ತೇವೆ ಎಂದಿದ್ದಾರೆ. ಇನ್ನು ಈ ಪೋಸ್ಟ್​​ಗೆ ಕಮೆಂಟ್​​ನಲ್ಲಿ ಮೊತ್ತೊಂದು ಪೋಸ್ಟ್​​ನ್ನು ಕಮೆಂಟ್​ ಮಾಡಿದ್ದಾರೆ.  ಹಿಂದಿಯವರು ಹಾಗಾಗಿ ನೀವು ಪಾಕಿಸ್ತಾನದ ಹಿಂದಿ ಹಾಗೂ ಉರ್ದು ಮಾತನಾಡಿ,  ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ಭಾರತೀಯರು ನಿಜವಾದ ಭಾರತೀಯರು ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:37 pm, Tue, 3 February 26

Source link