Category Archives: Blog

Your blog category

ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ – Kannada News | Govt accepted 16th finance commission recommendation for 41pc tax devolution to states, says Nirmala Sitharaman

ನವದೆಹಲಿ, ಫೆಬ್ರುವರಿ 1: ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ (Tax Devolution) ಕ್ರಮದ ಬಗ್ಗೆ 16ನೇ ಹಣಕಾಸು ಆಯೋಗ (16th Finance Commission) ಮಾಡಿದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಒಪ್ಪಿದೆ. ಇದರೊಂದಿಗೆ, ರಾಜ್ಯಗಳಿಗೆ ಕೇಂದ್ರದ ಶೇ. 41ರಷ್ಟು ತೆರಿಗೆ ಹಂಚಿಕೆ ಆಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಈ ಮಾಹಿತಿಯನ್ನು ತಮ್ಮ ಬಜೆಟ್ ಭಾಷಣದಲ್ಲಿ ನೀಡಿದ್ದಾರೆ.

ಬಜೆಟ್​ಗೆ ಮುನ್ನ ಅವರು 16ನೇ ಹಣಕಾಸು ಆಯೋಗದ ವರದಿಯನ್ನು ಸಂಸತ್​ನಲ್ಲಿ ಪ್ರಸ್ತುಪಡಿಸಿದರು. ಈ ಆಯೋಗವು 2025ರ ನವೆಂಬರ್ 17ರಂದೇ ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸಿತ್ತು. ರಾಜ್ಯಗಳಿಗೆ ಶೇ. 41ರಷ್ಟು ತೆರಿಗೆ ಹಂಚಿಕೆ ಮಾಡಬೇಕೆಂದು ಈ ವರದಿಯಲ್ಲಿ ಮಾಡಲಾಗಿರುವ ಶಿಫಾರಸನ್ನು ಸರ್ಕಾರ ಸ್ವೀಕರಿಸಿದೆ. ಆಯೋಗದ ಶಿಫಾರಸಿನಂತೆ 2026-27ರ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಪತ್ತು ನಿರ್ವಹಣಾ ನಿಧಿಗಳಿಗೆ ನೀಡುವ ಹಣವೂ ಒಳಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್

ಏನಿದು ಶೇ. 41 ತೆರಿಗೆ ಹಂಚಿಕೆ?

16ನೇ ಹಣಕಾಸು ಆಯೋಗ ಮಾಡುವ ಶಿಫಾರಸುಗಳು 2026ರಿಂದ 2031ರವರೆಗೂ ಚಾಲ್ತಿಯಲ್ಲಿರಲಿವೆ. ಅಂದರೆ, ಶೇ. 41ರ ಟ್ಯಾಕ್ಸ್ ಹಂಚಿಕೆ ಸೂತ್ರ ಇನ್ನು ಐದು ವರ್ಷ ಮುಂದುವರಿಯುತ್ತದೆ. ಹಿಂದಿನ 15ನೇ ಫೈನಾನ್ಸ್ ಕಮಿಷನ್ ಕೂಡ ಶೇ. 41 ಟ್ಯಾಕ್ಸ್ ಡೆವಲ್ಯೂಶನ್ ಸೂತ್ರವನ್ನೇ ಶಿಫಾರಸು ಮಾಡಿತ್ತು. 2020ರಿಂದಲೂ ಶೇ. 41 ತೆರಿಗೆ ಹಂಚಿಕೆ ಕ್ರಮ ಚಾಲನೆಯಲ್ಲಿದೆ. ಅದಕ್ಕೆ ಮುನ್ನ 14ನೇ ಹಣಕಾಸು ಆಯೋಗವು ಶೇ. 42 ಟ್ಯಾಕ್ಸ್ ಡೆವಲ್ಯೂಶನ್​ಗೆ ಶಿಫಾರಸು ಮಾಡಿತ್ತು.

ತೆರಿಗೆ ಹಂಚಿಕೆ ಸೂತ್ರದ ಪ್ರಕಾರ ಕೇಂದ್ರ ಸರ್ಕಾರಕ್ಕೆ ಸಿಗುವ ಎಲ್ಲಾ ಕೇಂದ್ರೀಯ ತೆರಿಗೆಗಳಲ್ಲಿ ಎಷ್ಟು ಪಾಲು ರಾಜ್ಯಗಳಿಗೆ ಹೋಗಬೇಕು ಎಂಬುದನ್ನು ಈ ಟ್ಯಾಕ್ಸ್ ಡೆವೊಲ್ಯೂಶನ್ ಫಾರ್ಮುಲಾ ನಿರ್ಧರಿಸುತ್ತದೆ.

ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿ ಆಯಾ ರಾಜ್ಯಗಳಿಗೆ ಪೂರ್ಣವಾಗಿ ಹೋಗುತ್ತದೆ. ಐಜಿಎಸ್​ಟಿ, ವೈಯಕ್ತಿಕ ಆದಾಯ ತೆರಿಗೆ, ಕಂಪನಿಗಳ ಲಾಭದ ಮೇಲಿನ ಟ್ಯಾಕ್ಸ್, ಆಮದು ಸುಂಕ, ರಫ್ತು ಸುಂಕ ಇತ್ಯಾದಿ ತೆರಿಗೆಯಲ್ಲಿ ಕೇಂದ್ರ ಸರ್ಕಾರವು ಶೇ. 41ರಷ್ಟನ್ನು ರಾಜ್ಯಗಳಿಗೆ ಕೊಡುತ್ತೆ.

ಇದನ್ನೂ ಓದಿ: Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ?

ಈ ಶೇ. 41 ತೆರಿಗೆಯನ್ನು ಯಾವ್ಯಾವ ರಾಜ್ಯಗಳಿಗೆ ಎಷ್ಟೆಷ್ಟು ಹಂಚಿಕೆ ಮಾಡಬೇಕು ಎಂಬುದಕ್ಕೆ ಒಂದಿಷ್ಟು ಮಾನದಂಡಗಳಿವೆ. ಜನಸಂಖ್ಯೆ, ಆದಾಯ ಅಂತರ ಇತ್ಯಾದಿ ಮಾನದಂಡಗಳ ಅನುಸಾರ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಕಡಿಮೆ ತೆರಿಗೆ ಹಂಚಿಕೆ ಮಾಡಲಾಗುವುದುಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಯ್ತು ‘ಕರಿಕಾಡ’ ಟ್ರೇಲರ್; ಯಾವುದಕ್ಕೆ ಈ ಹೀರೋ ಯುದ್ಧ? – Kannada News | Kaada Natraj and Niriksha Shetty starrer Karikaada Movie Trailer released

‘ಜಗತ್ತಿನಲ್ಲಿ ಯುದ್ಧ ಅಂತ ಶುರು ಆಗೋದು ಒಂದು ಹೆಣ್ಣಿಗೆ, ಇನ್ನೊಂದು ಮಣ್ಣಿಗೆ’ ಎಂಬ ಡೈಲಾಗ್ ‘ಕರಿಕಾಡ’ (Karikaada) ಸಿನಿಮಾದ ಟ್ರೇಲರ್​​ನಲ್ಲಿ ಗಮನ ಸೆಳೆದಿದೆ. ಹಾಗಾದರೆ ಈ ಸಿನಿಮಾದಲ್ಲಿ ಹೀರೋ ಯಾವುದಕ್ಕಾಗಿ ಯುದ್ಧ ಮಾಡುತ್ತಾನೆ? ಹೆಣ್ಣಿಗಾಗಿ ಅಥವಾ ಮಣ್ಣಿಗಾಗಿ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಈ ಚಿತ್ರ ಫೆಬ್ರವರಿ 6ರಂದು ರಿಲೀಸ್ ಆಗಲಿದೆ. ಕಾಡ ನಟರಾಜ್ (Kaada Natraj) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ನಿರೀಕ್ಷಾ ಶೆಟ್ಟಿ ಜೋಡಿ ಆಗಿದ್ದಾರೆ. ಅನೇಕ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ರಿದ್ದಿ ಎಂಟರ್​ಟೇನ್ಮೆಂಟ್’ ಮೂಲಕ ‘ಕರಿಕಾಡ’ ಸಿನಿಮಾ ನಿರ್ಮಾಣ ಆಗಿದೆ. ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾಯಕನಾಗಿ ನಟಿಸುವುದರ ಜೊತೆಗೆ ನಟರಾಜ್ ಅವರು ಕಥೆ ಕೂಡ ಬರೆದಿದ್ದಾರೆ. ಕೆ. ವೆಂಕಟೇಶ್ ಅವರು ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ‘ಕರಿಕಾಡ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡರು. ಈಗಾಗಲೇ ಈ ಸಿನಿಮಾದ ಟೀಸರ್, ಹಾಡು ಗಮನ ಸೆಳೆದಿದ್ದವು. ಈಗ ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರ ಕೌತುಕ ಹೆಚ್ಚಾಗಿದೆ. ಬೇರೆ ಭಾಷೆಯಲ್ಲಿ ಕೂಡ ಈ ಚಿತ್ರ ರಿಲೀಸ್ ಆಗಲಿದೆ.

‘ಕರಿಕಾಡ’ ಸಿನಿಮಾ ಟ್ರೇಲರ್:

‘ನಮ್ಮ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸಿ, ಅಳಿಸುತ್ತದೆ. 5 ಭಾಷೆಯಲ್ಲಿ ಸಿನಿಮಾ ತಯಾರಾಗಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್ ರೆಡಿ ಇದೆ. ತೆಲುಗು ಹಾಗೂ ಹಿಂದಿ ವರ್ಷಗ್​ಗೆ ಸೆನ್ಸಾರ್ ಆಗಬೇಕಿದೆ. ಹಾಗಾಗಿ 1 ವಾರದ ನಂತರ ಬಿಡುಗಡೆ ಮಾಡುತ್ತೇವೆ. ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ ಫೆ.6ರಂದು ರಿಲೀಸ್ ಆಗಲಿದೆ’ ಎಂದು ನಟ ಕಾಡ ನಟರಾಜ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಮನ ಸೆಳೆಯುತ್ತಿದೆ ‘ಕರಿಕಾಡ’, ಆಸಕ್ತ ತಂಡದ ಸಾಹಸಮಯ ಪ್ರಯತ್ನ

ಶಶಾಂಕ್ ಶೇಷಗಿರಿ ಮತ್ತು ಅತಿಶಯ್ ಜೈನ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಯಶ್ ಶೆಟ್ಟಿ, ವಿಜಯ್ ಚಂಡೂರ್, ಬೇಬಿ ರಿದ್ಧಿ, ರಶ್ಮಿ, ಬಲರಾಜ್ ವಾಡಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯಾಗಿ ನಾಯಕಿ ನಿರೀಕ್ಷಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಟ್ರೇಲರ್ ನೋಡಿದರೆ ಮೇಕಿಂಗ್ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ

ಸೌತ್ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 6 ರನ್​ಗಳ ರೋಚಕ ಜಯ ಸಾಧಿಸಿದೆ. ಅದು ಸಹ ಡಕ್​ವರ್ತ್​ ಲೂಯಿಸ್ ನಿಯಮದ ಪ್ರಕಾರ. ಮಳೆ ಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 10 ಓವರ್​ಗಳಲ್ಲಿ ಕಲೆಹಾಕಿದ್ದು 114 ರನ್​ಗಳು ಮಾತ್ರ.

ಆದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ, ಸೌತ್ ಆಫ್ರಿಕಾ ತಂಡಕ್ಕೆ 10 ಓವರ್​ಗಳಲ್ಲಿ 125 ರನ್​ಗಳ ಗುರಿ ನೀಡಲಾಯಿತು. ಈ ಗುರಿಯನ್ನು ಬೆನ್ನತ್ತಿದ ಆಫ್ರಿಕಾ ಪಡೆ 10 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 118 ರನ್ ಕಲೆಹಾಕಿದ್ದರು. ಇದಾಗ್ಯೂ ಡಿಎಲ್​ಎಸ್ ನಿಯಮದ ಪ್ರಕಾರ 6 ರನ್​ಗಳಿಂದ ಹಿಂದೆ ಉಳಿದಿದ್ದರಿಂದ ವೆಸ್ಟ್ ಇಂಡೀಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಈ ಸೋಲಿನ ಹೊರತಾಗಿಯೂ ಮೂರು ಪಂದ್ಯಗಳ ಈ ಟಿ20 ಸರಣಿಯನ್ನು ಸೌತ್ ಆಫ್ರಿಕಾ ತಂಡ 2-1 ಅಂತರದಿಂದ ಗೆದ್ದುಕೊಂಡಿದೆ.

Source link

‘ಆಪರೇಷನ್ ಸಿಂಧೂರ್’ ನಂತರ ಎಚ್ಚೆತ್ತುಕೊಂಡ ಕೇಂದ್ರ: ರಕ್ಷಣಾ ವಲಯಕ್ಕೆ ಅಭೂತಪೂರ್ವ ಕೊಡುಗೆ – Kannada News | Union Budget 2026: India Boosts Defense with Focus on IAF, AI and Indigenous Tech

ದೆಹಲಿ, ಫೆ.1: ಇಂದು (ಫೆಬ್ರವರಿ 1) ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ, ಭಾರತದ ರಕ್ಷಣಾ ವಲಯಕ್ಕೆ ಅಭೂತಪೂರ್ವ ಒತ್ತು ನೀಡಲಾಗಿದೆ. ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ (Operation Sindoor) ಮತ್ತು ಜಾಗತಿಕವಾಗಿ ಎದುರಾಗಿರುವ ಹೊಸ ಭಯೋತ್ಪಾದನಾ ಬೆದರಿಕೆಗಳ ಹಿನ್ನೆಲೆಯಲ್ಲಿ, ರಕ್ಷಣಾ ಬಜೆಟ್‌ನಲ್ಲಿ ದಾಖಲೆ ಮಟ್ಟದ ಹೆಚ್ಚಳವನ್ನು ಘೋಷಿಸಲಾಗಿದೆ. ರಕ್ಷಣಾ ಸಚಿವಾಲಯಕ್ಕೆ ಈ ಬಾರಿ ಸುಮಾರು 6.81 ಲಕ್ಷ ರೂ. ಕೋಟಿ ಹಣವನ್ನು ಮೀಸಲಿಡಲಾಗಿದೆ. ಇದು ಕಳೆದ ವರ್ಷಕ್ಕಿಂತ ಸುಮಾರು 9.53% ರಷ್ಟು ಹೆಚ್ಚಳವಾಗಿದೆ. ದೇಶದ ಒಟ್ಟು ಬಜೆಟ್‌ನ ಸುಮಾರು 13.45% ಭಾಗವನ್ನು ರಕ್ಷಣೆಗೆ ನೀಡಲಾಗಿದ್ದು, ಇದು ಎಲ್ಲಾ ಸಚಿವಾಲಯಗಳಿಗಿಂತ ಅತ್ಯಂತ ಹೆಚ್ಚಿನ ಹಂಚಿಕೆಯಾಗಿದೆ.

2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ಎಂಬ ವಾಯುದಾಳಿ ನಡೆಸಿತ್ತು. ಈ ಯುದ್ಧದ ಸಮಯದಲ್ಲಿ ಎದುರಾದ ತಾಂತ್ರಿಕ ಸವಾಲುಗಳನ್ನು ಎದುರಿಸಲು ಈ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಲಾಗಿದೆ. ಆಪರೇಷನ್ ಸಿಂಧೂರ್ ವೇಳೆ ಪ್ರಮುಖ ಪಾತ್ರ ವಹಿಸಿದ್ದ ಎಐ-ಆಧಾರಿತ ‘ಆಕಾಶತೀರ್’ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ. ಸದ್ಯ 107 ಯುನಿಟ್‌ಗಳಿರುವ ಈ ವ್ಯವಸ್ಥೆಯನ್ನು 500ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಹೊಸ ಯುದ್ಧವಿಮಾನಗಳು, ಜಲಾಂತರ್ಗಾಮಿಗಳು ಮತ್ತು ಡ್ರೋನ್ ವಿರೋಧಿ ವ್ಯವಸ್ಥೆಗಳಿಗಾಗಿ ಸುಮಾರು 1.80 ಲಕ್ಷ ರೂ. ಕೋಟಿ ಹಣವನ್ನು ‘ಕ್ಯಾಪಿಟಲ್ ಔಟ್‌ಲೇ’ ಅಡಿಯಲ್ಲಿ ಮೀಸಲಿಡಲಾಗಿದೆ.

ಒಟ್ಟು ಬಂಡವಾಳ ವೆಚ್ಚದ ಬಹುಪಾಲು ಹಣವನ್ನು (ಸುಮಾರು 1.12 ಲಕ್ಷ ರೂ. ಕೋಟಿ) ದೇಶೀಯ ಕಂಪನಿಗಳಿಂದ ಶಸ್ತ್ರಾಸ್ತ್ರ ಖರೀದಿಸಲು ಬಳಸಲಾಗುವುದು. ಚೀನಾ ಮತ್ತು ಪಾಕಿಸ್ತಾನ ಗಡಿಗಳಲ್ಲಿ ರಸ್ತೆ ಹಾಗೂ ಸುರಂಗ ಮಾರ್ಗಗಳ ಅಭಿವೃದ್ಧಿಗಾಗಿ BRO ಗೆ 7,146 ಕೋಟಿ ರೂ. ನೀಡಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (DRDO) 26,816 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಭವಿಷ್ಯದ ಯುದ್ಧಗಳಿಗೆ ಸಜ್ಜಾಗಲು ಎಐ (AI) ಮತ್ತು ಸೈಬರ್ ಭದ್ರತೆಗೆ ಒತ್ತು ನೀಡಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್ 2026ರಲ್ಲಿ ಭಾರತೀಯ ವಾಯುಪಡೆಯನ್ನು (IAF) ಆಧುನೀಕರಣಗೊಳಿಸಲು ಮತ್ತು ಶತ್ರು ರಾಷ್ಟ್ರಗಳ ಸವಾಲುಗಳನ್ನು ಎದುರಿಸಲು ಭವಿಷ್ಯದ ಯುದ್ಧವಿಮಾನಗಳ ಖರೀದಿಗೆ ಭಾರಿ ಮೊತ್ತವನ್ನು ಮೀಸಲಿಡಲಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿಂದ ಹೆಚ್ಚುವರಿ 97 ತೇಜಸ್ ಮಾರ್ಕ್ 1A ಯುದ್ಧವಿಮಾನಗಳ ಖರೀದಿಗೆ ಈ ಬಜೆಟ್‌ನಲ್ಲಿ ಹಣಕಾಸಿನ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ

ಬಹುಕಾಲದಿಂದ ಬಾಕಿ ಉಳಿದಿರುವ 114 ಬಹುಪಯೋಗಿ ಯುದ್ಧವಿಮಾನಗಳ (MRFA) ಖರೀದಿ ಪ್ರಕ್ರಿಯೆಯನ್ನು ವೇಗಗೊಳಿಸಲು ಬಜೆಟ್‌ನಲ್ಲಿ ವಿಶೇಷ ನಿಧಿಯನ್ನು ಮೀಸಲಿಡಲಾಗಿದೆ. ಇದರಲ್ಲಿ ಫ್ರಾನ್ಸ್‌ನ ರಫೇಲ್ (Rafale) ಅಥವಾ ಅಮೆರಿಕದ ಎಫ್-21 ರೇಸ್‌ ಸೇರಿವೆ. ಭಾರತವೇ ಸ್ವದೇಶಿಯಾಗಿ ಅಭಿವೃದ್ಧಿಪಡಿಸುತ್ತಿರುವ 5ನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನ ಯೋಜನೆಗೆ ಈ ಬಜೆಟ್‌ನಲ್ಲಿ ಭಾರಿ ಉತ್ತೇಜನ ನೀಡಲಾಗಿದೆ. ಈ ವಿಮಾನವು ಶತ್ರುಗಳ ರಾಡಾರ್‌ಗೆ ಸಿಗದಂತೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಅಮೆರಿಕದಿಂದ ಖರೀದಿಸುತ್ತಿರುವ MQ-9B ಪ್ರಿಡೇಟರ್ ಡ್ರೋನ್‌ಗಳ ಮುಂದಿನ ಕಂತಿನ ಪಾವತಿಗಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಇವು ಗಡಿ ಭಾಗದಲ್ಲಿ 35 ಗಂಟೆಗಳಿಗೂ ಹೆಚ್ಚು ಕಾಲ ನಿರಂತರ ನಿಗಾ ವಹಿಸಬಲ್ಲವು. ಜಿಇ (GE) ಕಂಪನಿಯೊಂದಿಗೆ ಜಂಟಿಯಾಗಿ ಭಾರತದಲ್ಲಿ ಯುದ್ಧವಿಮಾನದ ಇಂಜಿನ್‌ಗಳನ್ನು ತಯಾರಿಸುವ ಯೋಜನೆಗೆ ಈ ಬಜೆಟ್‌ನಲ್ಲಿ ಹಣಕಾಸಿನ ನೆರವು ಘೋಷಿಸಲಾಗಿದೆ. ಇದು ಭಾರತದ ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಯತ್ತ ದೊಡ್ಡ ಹೆಜ್ಜೆಯಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CJ Roy death Case: CJ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು? – Kannada News | Home Minister Parameshwara on CJ Roy Death Case SIT Investigation

ಬೆಂಗಳೂರು, ಫೆಬ್ರುವರಿ 01: ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್ ಅವರು ಮಾಹಿತಿ ನೀಡಿದ್ದಾರೆ. ಜಾಯಿಂಟ್ ಕಮಿಷನರ್ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ದಳ (ಎಸ್.ಐ.ಟಿ) ರಚಿಸಲಾಗಿದ್ದು, ನಿನ್ನೆಯಿಂದಲೇ ತನಿಖೆ ಪ್ರಾರಂಭವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ತನಿಖಾ ವರದಿ ಬರುವವರೆಗೂ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗ ಯಾವುದೇ ಹೇಳಿಕೆ ನೀಡಿದರೆ ಅದು ಊಹಾಪೋಹಗಳಿಗೆ ಕಾರಣವಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರು ಐಟಿ, ಇಡಿ, ಸಿಬಿಐ ವಿಚಾರಗಳಲ್ಲಿ ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳ ಬಗ್ಗೆ ಕೇಳಿದಾಗ, ಯಾವುದೇ ಮಾಹಿತಿ ಅಥವಾ ವಿಚಾರಗಳು ತಿಳಿದಿಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಪರಮೇಶ್ವರ್ ತಿಳಿಸಿದರು. ತನಿಖಾ ವರದಿ ಬಂದ ನಂತರ ಎಲ್ಲ ವಿಷಯಗಳು ಸ್ಪಷ್ಟವಾಗಲಿವೆ ಮತ್ತು ಆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದರು.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Budget 2026: ಲಖ್ಪತಿ ದೀದಿ ಯೋಜನೆ ವಿಸ್ತರಣೆ, ಮಹಿಳಾ ಉದ್ಯಮಶೀಲತೆ ಉತ್ತೇಜಿಸಲು ಶಿ-ಮಾರ್ಟ್ ಸ್ಥಾಪನೆ – Kannada News | Budget 2026 Boosts Women Entrepreneurs Through Lakhpati Didi and She Marts

ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸತತ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್​ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ಲಖ್ಪತಿ ದೀದಿ ಯೋಜನೆಯನ್ನು ವಿಸ್ತರಿಸಲಾಗಿದ್ದು, ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ಶಿ-ಮಾರ್ಟ್​ ಸ್ಥಾಪಿಸುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ.

ಈ ಘೋಷಣೆಯು ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳು ಸ್ಥಳೀಯ ಚಿಲ್ಲರೆ ಜಾಲಗಳನ್ನು ನಡೆಸಲು, ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸಲು ಮತ್ತು ಸಮುದಾಯ ಮಟ್ಟದಲ್ಲಿ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುವ ಮೂಲಕ ತಳಮಟ್ಟದ ಉದ್ಯಮಶೀಲತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಸಚಿವರು ‘ಶಿ-ಮಾರ್ಟ್ಸ್’ ಬಗ್ಗೆ ಘೋಷಿಸಿದ್ದು, ಇದು ಲಖ್ಪತಿ ದೀದಿ ಕಾರ್ಯಕ್ರಮದ ಯಶಸ್ಸಿನ ಮೇಲೆ ನಿರ್ಮಿಸಬೇಕಾದ ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗೆ ಗುರುತು ಎಂದರು.

ಲಖ್ಪತಿ ದೀದಿ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ ಉದ್ಯಮಗಳ ಮಾಲೀಕರಾಗುವವರೆಗೆ ಮುಂದಿನ ಹೆಜ್ಜೆ ಇಡಲು ಸಹಾಯ ಮಾಡುತ್ತದೆ. ಸ್ವಸಹಾಯ ಗುಂಪುಗಳೊಂದಿಗೆ (SHGs) ಸಂಬಂಧ ಹೊಂದಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ಅವರ ವಾರ್ಷಿಕ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಲಖ್ಪತಿ ದೀದಿ ಯೋಜನೆಯು ಮಹಿಳೆಯರಿಗೆ ತರಬೇತಿ ನೀಡುವುದಲ್ಲದೆ, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶಾದ್ಯಂತ ಹೆಚ್ಚಿನ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯುತ್ತದೆ ಎಂದು ಬಜೆಟ್ ಸ್ಪಷ್ಟಪಡಿಸಿದೆ. ಇದು ಮಹಿಳೆಯರನ್ನು ಮಾರುಕಟ್ಟೆಗಳಿಗೆ ಸಂಪರ್ಕಿಸಲು, ಸುಸ್ಥಿರ ಆದಾಯದ ಮೂಲಗಳನ್ನು ಸೃಷ್ಟಿಸಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ಸರ್ಕಾರಿ ಉಪಕ್ರಮವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಹೊಸ ಅವಕಾಶಗಳನ್ನು ಹುಟ್ಟುಹಾಕುತ್ತದೆ.

ಮತ್ತಷ್ಟು ಓದಿ: ⁠Union Budget 2026: ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ

ಲಖಪತಿ ದೀದಿ ಯೋಜನೆ ಎಂದರೇನು?
ಲಖ್ಪತಿ ದೀದಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸ್ವ-ಸಹಾಯ ಗುಂಪುಗಳಲ್ಲಿ (SHGs) ತೊಡಗಿರುವ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, ಸ್ವಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರಿಗೆ 5 ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಪಡೆದ ಸಾಲಗಳಿಗೆ ಸರ್ಕಾರವು ಬಡ್ಡಿ ಸಬ್ಸಿಡಿಯನ್ನು ನೀಡುತ್ತದೆ.

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Video: ಅಮ್ಮ ಬೈದದ್ದಕ್ಕೆ ಮನೆಯ ಮುದ್ದಿನ ಶ್ವಾನದ ಬಳಿ ಅಳುತ್ತಾ ಕಂಪ್ಲೇಂಟ್ ಹೇಳಿದ ಪುಟಾಣಿ – Kannada News | A little girl complained about her mother to her pet dog

ಶ್ವಾನಗಳ (Dogs) ನಿಷ್ಕಲ್ಮಶ ಪ್ರೀತಿ, ನಿಷ್ಠೆಗೆ ಸರಿಸಾಟಿಯೇ ಇಲ್ಲ. ಮನೆಯಲ್ಲಿ ಮಕ್ಕಳಿದ್ರೆ ಅವುಗಳ ಪಾಲಿಗೆ ಈ ಶ್ವಾನಗಳು ಬಾಡಿ ಗಾರ್ಡ್ ನಂತೆ ಇರುತ್ತದೆ. ಪುಟಾಣಿಗಳು ಅಪಾಯಕ್ಕೆ ಸಿಲುಕಿಕೊಂಡ್ರೆ ರಕ್ಷಿಸುವುದರಲ್ಲಿ ಈ ಶ್ವಾನಗಳು ಎತ್ತಿದ ಕೈ. ಹೀಗಾಗಿ ಪುಟಾಣಿ ಮಕ್ಕಳು ಹಾಗೂ ಶ್ವಾನಗಳ ಸುಂದರ ಬಾಂಧವ್ಯಕ್ಕೆ ಇಂತಹ ದೃಶ್ಯಗಳು ಸಾಕ್ಷಿಯಾಗುತ್ತವೆ. ಆದರೆ ಪುಟ್ಟ ಹುಡುಗಿಯೊಬ್ಬಳು (little girl) ಅಮ್ಮನ ಕೈಯಲ್ಲಿ ಬೈಗುಳ ತಿಂದು ಅಳುತ್ತಾ ಕುಳಿತಿದ್ದರೆ, ಮನೆಯ ಮುದ್ದಿನ ಶ್ವಾನ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಹೌದು,  ಅಮ್ಮನ ಬಗ್ಗೆ ಪುಟಾಣಿಯೂ ದೂರು ಹೇಳುತ್ತಿದ್ದಂತೆ ಶ್ವಾನವೂ ಪಕ್ಕದಲ್ಲೇ ಕುಳಿತು ಸಮಾಧಾನ ಪಡಿಸಿದ್ದಂತಿದೆ ಈ ದೃಶ್ಯ. ಈ ಶುದ್ಧ ಬಾಂಧವ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಈ ಕ್ಲಿಪ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚೀನಾ ಡೈರೀಸ್ 2025 (chinadairies) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟಾಣಿಯೊಂದು ಅಮ್ಮನ ಕೈಯಲ್ಲಿ ಬೈಗುಳ ತಿಂದು ಅಳುತ್ತಾ ಕುಳಿತಿದೆ. ಈ ಪುಟಾಣಿಯೂ ಶ್ವಾನದ ಬಳಿ ಅಮ್ಮನ ಬಗ್ಗೆ ಕಂಪ್ಲೇಂಟ್ ಹೇಳಿದ್ದು ಶ್ವಾನವು ಅಪ್ಪಿಕೊಂಡು ಸಮಾಧಾನ ಪಡಿಸಿರುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುದ್ದಿನ ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯಲು 15 ಲಕ್ಷ ರೂ. ಖರ್ಚು ಮಾಡಿದ ದಂಪತಿ!

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ದೃಶ್ಯ ಮುದ್ದಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಬ್ಬರದ್ದು ಮುಗ್ಧ ಹಾಗೂ ಶುದ್ಧ ಮನಸ್ಸು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Union Budget 2026 : ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕಿಲ್ಲ ತೆರಿಗೆ; ಮಹತ್ವದ ಘೋಷಣೆ – Kannada News | Budget 2026; FM Nirmala Sitharaman Announces No Tax On Interest Awarded for Insurance Claims on the Motor Accident

ವಿತ್ತ ಸಚಿವರಿಂದ ಮಹತ್ವದ ಘೋಷಣೆImage Credit source: Google

ನವದೆಹಲಿ, ಫೆ. 01: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ದಾಖಲೆಯ 9ನೇ ಬಜೆಟ್​​ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಏಪ್ರಿಲ್ 1ರಿಂದ ನೂತನ ಐಟಿ ಕಾಯ್ದೆ ಜಾರಿಯ ಬಗ್ಗೆ ಸಚಿವರು ಮಾಹಿತಿ ನೀಡಿದ್ದು, ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31ರವರೆಗೂ ಅವಕಾಶ ನೀಡಿರೋದಾಗಿ ತಿಳಿಸಿದ್ದಾರೆ. ಆದಾಯ ತೆರಿಗೆಯಲ್ಲಿ ಅಪರಾಧ ಮಾಡಿದ್ರೆ ಶಿಕ್ಷೆ ಬಗ್ಗೆ ಕೋರ್ಟ್​​ನಲ್ಲಿ ತೀರ್ಮಾನ ಆಗಲಿದೆ. ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ ಎಂದು ಸಚಿವರು ತಿಳಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿಯೂ ಶೇ.2ರಷ್ಟು TCS ಕಡಿತ ಮಾಡಲಾಗಿದ್ದು, ಇನ್ಮುಂದೆ ಬೈಕ್​ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇರಲ್ಲ. ವಿದೇಶಿ ಪ್ರವಾಸ ಕೈಗೊಳ್ಳುವವರಿಗೂ ಕೇಂದ್ರ ಸರ್ಕಾರ ಗುಡ್​​ನ್ಯೂಸ್​​ ನೀಡಿದ್ದು, ಪ್ರಯಾಣದ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲಾಗುತ್ತದೆ. ವಿದೇಶಿ ಪ್ರಯಾಣಕ್ಕಾಗಿ ಟಿಸಿಎಸ್ ದರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಜುಲೈ 31 ರವರೆಗೆ ರಿಟರ್ನ್ಸ್ ಸಲ್ಲಿಸಬಹುದು. ಈ ಕಾನೂನು ಅಘೋಷಿತ ಆದಾಯವನ್ನು ಒಂದು ಕೋಟಿ ರೂಪಾಯಿಗಳಿಗೆ ಮಿತಿಗೊಳಿಸಲು ಸಹ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ

ಐಟಿ ಸೇವೆಗಳಿಗಾಗಿ Safe Harbour ಮಿತಿಯನ್ನು 300 ಕೋಟಿಯಿಂದ 2,000 ಕೋಟಿಗೆ ಹೆಚ್ಚಳ ಮಾಡಲಾಗಿದೆ. ಭಾರತದ ಡೇಟಾ ಸೆಂಟರ್ ಸೇವೆಗಳ ಮೂಲಕ ಜಾಗತಿಕ ಗ್ರಾಹಕರಿಗೆ ಕ್ಲೌಡ್ ಸೇವೆ ನೀಡುವ ಕಂಪನಿಗಳಿಗೆ 2047 ರವರೆಗೆ ತೆರಿಗೆ ರಜೆ, ಮುನ್ಸಿಪಲ್ ಬಾಂಡ್‌ಗಳ ವಿತರಣೆಗಾಗಿ 100 ಕೋಟಿ ಪ್ರೋತ್ಸಾಹಧನ ಘೋಷಿಸಲಾಗಿದೆ. ಫ್ಯೂಚರ್ಸ್ ಮೇಲಿನ STT ಅನ್ನು 0.02% ರಿಂದ 0.05%ಕ್ಕೆ ಹೆಚ್ಚಿಸಲಾಗಿದೆ. ಮೀನುಗಾರಿಕಾ ಹಡಗುಗಳು ಎಕ್ಸ್‌ಕ್ಲೂಸಿವ್ ಎಕನಾಮಿಕ್ ಝೋನ್‌ನಲ್ಲಿ ಹಿಡಿಯುವ ಮೀನಿನ ಮೇಲೆ ಸುಂಕ ವಿನಾಯಿತಿಯನ್ನು ಕೇಂದ್ರ ಘೋಷಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:19 pm, Sun, 1 February 26

Source link

Budget 2026: ಡಿಫೆನ್ಸ್​ನಿಂದ ಹಿಡಿದು ಚಿಪ್​ವರೆಗೆ ಭಾರತವನ್ನು ತಂತ್ರಜ್ಞಾನ ದೈತ್ಯವಾಗಿಸಬಲ್ಲ ಬಜೆಟ್ – Kannada News | Union Budget focusing on making India tech super power

ನವದೆಹಲಿ, ಫೆಬ್ರುವರಿ 1: ಜಾಗತಿಕ ಅನಿಶ್ಚಿತ ವಾತಾವರಣದ ನಡುವೆ ಬೆಳ್ಳಿ ಚುಕ್ಕಿಯಂತೆ ಮಿನುಗುತ್ತಿರುವ ಭಾರತದ ಆರ್ಥಿಕ ಶಕ್ತಿಗೆ ಇನ್ನಷ್ಟು ಮೆರಗು ಕೊಡಲು ನಿರ್ಮಲಾ ಸೀತಾರಾಮನ್ ಬಜೆಟ್ (Union budget) ಮಂಡಿಸಿದ್ದಾರೆ. ಭಾರತವನ್ನು ಟೆಕ್ ಸೂಪರ್ ಪವರ್ ಆಗಿಸುವತ್ತ ಪೂರಕವಾದ ಬಜೆಟ್ ಅನ್ನು ಮಂಡಿಸುವ ಪ್ರಯತ್ನ ಮಾಡಿದ್ದಾರೆ ಹಣಕಾಸು ಸಚಿವೆ. ಸೆಮಿಕಂಡಕ್ಟರ್, ರೇರ್ ಅರ್ಥ್, ಡಿಫೆನ್ಸ್ ಇತ್ಯಾದಿ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶೀ ಅವಲಂಬನೆ ತಪ್ಪಿಸಿ ಪೂರ್ಣ ಸ್ವಾವಂಬನೆಯ ಭಾರತವನ್ನು ನಿರ್ಮಿಸುವ ಗುರಿ ಇಡಲಾಗಿದೆ.

ಡಿಫೆನ್ಸ್ ಸೆಕ್ಟರ್​ಗೆ ಪುಷ್ಟಿ

ನ್ಯಾಷನಲ್ ಮ್ಯಾನುಫ್ಯಾಕ್ಚರಿಂಗ್ ಮಿಷನ್ ರೂಪಿಸಲಾಗಿದೆ. ಹೈಸ್ಪೀಡ್ ರೈಲುಗಳು, ಡ್ರೋನ್, ಅತ್ಯಾಧುನಿಕ ಮ್ಯೂನಿಶನ್​ಗಳು ಎಲ್ಲವನ್ನೂ ದೇಶೀವಾಗಿ ತಯಾರಿಸಲಾಗುವುದು. ಇವುಗಳಿಗೆ ನೀಡಲಾದ ಅನುದಾನದಲ್ಲಿ ಶೇ 20ರಷ್ಟು ಹೆಚ್ಚಳ ಆಗಿದೆ.

ಇದನ್ನೂ ಓದಿ: ರೈತರಿಗೆ ಗುಡ್​​​ ನ್ಯೂಸ್​​​ ನೀಡಿದ ಕೇಂದ್ರ: ಕರಾವಳಿ ಕೃಷಿಕರಿಗೆ ಬಂಪರ್​​​ ಕೊಡುಗೆ

ಎಐ ಮತ್ತು ಡೀಪ್​ಟೆಕ್ ಕ್ರಾಂತಿ

ಡಿಫೆನ್ಸ್ ಟೆಕ್ ಮತ್ತು ಡೀಪ್ ಟೆಕ್ ಸ್ಟಾರ್ಟಪ್​ಗಳಿಗೆ 10,000 ಕೋಟಿ ರೂ ಫಂಡ್ ಆಫ್ ಫಂಡ್ಸ್ ಪ್ರಕಟಿಸಲಾಗಿದೆ. ಸ್ವಂತವಾಗಿ ಎಐ ಅಭಿವೃದ್ಧಿ ಮತ್ತು ಡಾಟಾ ಸೆಕ್ಯೂರಿಟಿಗೆ ಒತ್ತು ಕೊಡಲಾಗಿದೆ.

ಕ್ರಿಟಿಕಲ್ ಮಿನರಲ್​ಗಳ ಲಭ್ಯತೆ

ದೇಶೀಯವಾಗಿ ರೇರ್ ಅರ್ಥ್ ಮೈನಿಂಗ್ ಮತ್ತು ಪ್ರೋಸಸಿಂಗ್​ಗೆ ಒತ್ತು ಕೊಡಲಾಗಿದೆ. ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಲಿಥಿಯಂ, ಕೊಬಾಲ್ಟ್ ಬ್ಯಾಟರಿಗಳಿಗೆ ಆಮದು ಸುಂಕ ಕಡಿತಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಚೀನಾ ಮೇಲಿನ ಅವಲಂಬನೆ ತಪ್ಪಿಸುವ ಪ್ರಯತ್ನವಾಗಿದೆ.

ಎಂಎಸ್​ಎಂಇಗಳಿಗೆ ಪುಷ್ಟಿ

ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಕ್ರೆಡಿಟ್ ಗ್ಯಾರಂಟಿ ಮಿತಿಯನ್ನು 10 ಕೋಟಿ ರೂಗೆ ಏರಿಸಲಾಗಿದೆ. ಹಿಂದಿನ ಬಜೆಟ್​ನಲ್ಲಿ ನೀಡಲಾಗಿದ್ದಕ್ಕಿಂತ ಎರಡು ಪಟ್ಟು ಹೆಚ್ಚಿದೆ. ನಗರ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್ ಸ್ಥಾಪಿಸಲಾಗಿದೆ. ಪಾದರಕ್ಷೆ ಮತ್ತು ಲೆದರ್ ಸೆಕ್ಟರ್​ನಲ್ಲಿ 22 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲು ಸ್ಕೀಮ್ ರಚಿಸಲಾಗಿದೆ.

ಇದನ್ನೂ ಓದಿ: Budget 2026: ಕೇಂದ್ರ ಬಜೆಟ್ 2026: ಯಾವುದು ಅಗ್ಗ, ಯಾವುದು ದುಬಾರಿ?

ವಿತ್ತೀಯ ಕೊರತೆ ಶೇ. 4.3ಕ್ಕೆ ಸೀಮಿತ

ಭಾರತದ ವಿತ್ತೀಯ ಕೊರತೆಯ ಗುರಿಯನ್ನು ಶೇ. 4.4ರಿಂದ ಶೇ. 4.3ಕ್ಕೆ ಇಳಿಸಲಾಗಿದೆ. ಆರ್ಥಿಕ ಬೆಳವಣಿಗೆಯ ವೇಗ ಶೇ. 7.4 ಎಂದು ಅಂದಾಜಿಸಲಾಗಿದೆ.

ಹಾಗೆಯೇ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್, ಬಯೋಫಾರ್ಮಾ, 20 ಹೊಸ ರಾಷ್ಟ್ರೀಯ ಜಲಮಾರ್ಗ ಇತ್ಯಾದಿ ಅನೇಕ ಘೋಷಣೆಗಳನ್ನ ಬಜೆಟ್​ನಲ್ಲಿ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರೈತರಿಗೆ ಗುಡ್​​​ ನ್ಯೂಸ್​​​ ನೀಡಿದ ಕೇಂದ್ರ: ಕರಾವಳಿ ಕೃಷಿಕರಿಗೆ ಬಂಪರ್​​​ ಕೊಡುಗೆ – Kannada News | Nirmala Sitharaman’s Budget: High Value Crops, AI and Agri Tech for Farmer Prosperity

ದೆಹಲಿ, ಫೆ.1: ಇಂದಿನ (ಫೆಬ್ರವರಿ 1, 2026) ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರ ಆದಾಯವನ್ನು ಹೆಚ್ಚಿಸಲು “ಅಧಿಕ ಮೌಲ್ಯದ ಬೆಳೆಗಳ” (High-value crops) ಮೇಲೆ ವಿಶೇಷ ಗಮನ ಹರಿಸಿದ್ದಾರೆ. ಪ್ರಮುಖವಾಗಿ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಬೆಳೆಗಾರರಿಗೆ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಲಾಗಿದೆ. ಭಾರತೀಯ ಶ್ರೀಗಂಧದ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವ ಹೊಂದಲಿದೆ. ಶ್ರೀಗಂಧದ ವ್ಯವಸ್ಥಿತ ಕೃಷಿ, ಕೊಯ್ಲು ಮತ್ತು ಕೊಯ್ಲಿನ ನಂತರದ ಸಂಸ್ಕರಣೆಗೆ (Post-harvest processing) ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದು ಭಾರತೀಯ ಶ್ರೀಗಂಧಕ್ಕೆ ಜಾಗತಿಕ ಮಟ್ಟದಲ್ಲಿ ಮರುಜೀವ ನೀಡುವ ಗುರಿ ಹೊಂದಿದೆ.

ಕರಾವಳಿ ಪ್ರದೇಶಗಳಲ್ಲಿ ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮವನ್ನು ಘೋಷಿಸಲಾಗಿದೆ. 2030 ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್‌ಗಳಾಗಿ ರೂಪಿಸಲು ಸರ್ಕಾರ ಗುರಿಯನ್ನು ಹೊಂದಿದೆ. ಇಳುವರಿ ಕಡಿಮೆಯಾಗಿರುವ ಹಳೆಯ ತೋಟಗಳನ್ನುಆಧುನೀಕರಿಸಲು ಮತ್ತು ಹೆಚ್ಚಿನ ಸಾಂದ್ರತೆಯ ಕೃಷಿ ಅಳವಡಿಸಲು ನೆರವು ನೀಡಲಾಗುವುದು. ವಾಲ್‌ನಟ್ , ಬಾದಾಮಿ ಮತ್ತು ಪೈನ್ ನಟ್ಸ್‌ಗಳ ಕೃಷಿಯನ್ನು ವಿಸ್ತರಿಸಲು ಯುವಜನರನ್ನು ಈ ವಲಯಕ್ಕೆ ಸೆಳೆಯಲು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೈತರಿಗೆ ಕೃಷಿ ಮಾಹಿತಿ, ಮಾರುಕಟ್ಟೆ ದರ ಮತ್ತು ಹವಾಮಾನ ಮುನ್ಸೂಚನೆಯನ್ನು ಅವರದ್ದೇ ಭಾಷೆಯಲ್ಲಿ ನೀಡಲು ಬಹುಭಾಷಾ AI ಕೃಷಿ ಉಪಕರಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ

ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಉತ್ತೇಜನ ಸಿಗುತ್ತದೆ:

ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸಲು 500 ಜಲಾಶಯಗಳು ಮತ್ತು ಇತರ ಜಲಮೂಲಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಉಪಕ್ರಮಗಳನ್ನು ಪ್ರಸ್ತಾಪಿಸಿದೆ. ಈ ಪ್ರಯತ್ನಗಳು ಮಾರುಕಟ್ಟೆ ಸಂಪರ್ಕಗಳನ್ನು ಸುಧಾರಿಸುವುದು ಮತ್ತು ಸ್ಟಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಗುಂಪುಗಳು ಮತ್ತು ಮೀನು ರೈತ ಉತ್ಪಾದಕ ಸಂಸ್ಥೆಗಳನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಪಶುಸಂಗೋಪನೆಗಾಗಿ, ಉದ್ಯಮಶೀಲತೆಯನ್ನು ಉತ್ತೇಜಿಸಲು, ಜಾನುವಾರು ಉದ್ಯಮಗಳನ್ನು ಆಧುನೀಕರಿಸಲು ಮತ್ತು ಡೈರಿ, ಕೋಳಿ ಮತ್ತು ಜಾನುವಾರು ವಲಯಗಳಲ್ಲಿ ಸಮಗ್ರ ಮೌಲ್ಯ ಸರಪಳಿಗಳನ್ನು ಹೆಚ್ಚಿಸಲು ಕ್ರೆಡಿಟ್-ಸಂಬಂಧಿತ ಸಬ್ಸಿಡಿ ಕಾರ್ಯಕ್ರಮವನ್ನು ಪರಿಚಯಿಸಲಾಗುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು ಜಾನುವಾರು ರೈತ ಉತ್ಪಾದಕ ಸಂಸ್ಥೆಗಳ ರಚನೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ.

ರೈತರಿಗೆ AI-ಚಾಲಿತ ನಿರ್ಧಾರ ಬೆಂಬಲ:

ತಂತ್ರಜ್ಞಾನ-ಚಾಲಿತ ಕೃಷಿಯನ್ನು ಬೆಂಬಲಿಸಲು, ಬಹುಭಾಷಾ AI ಸಾಧನವಾದ ಭಾರತ್ ವಿಸ್ತಾರ್ ಅನ್ನು ಪ್ರಾರಂಭಿಸಲು ಬಜೆಟ್ ಪ್ರಸ್ತಾಪಿಸಿದೆ, ಇದು ಅಗ್ರಿಸ್ಟ್ಯಾಕ್ ಪೋರ್ಟಲ್‌ಗಳು ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಕೃಷಿ ಪದ್ಧತಿಗಳ ಪ್ಯಾಕೇಜ್ ಅನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳೊಂದಿಗೆ ಹೊಂದಿಸಲಾಗುವುದು. ಇದು ರೈತರು ಉತ್ತಮ, ಡೇಟಾ-ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಒಟ್ಟಾರೆ ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬಜೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link