Category Archives: Blog

Your blog category

ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಯತ್ನಿಸಿದವರ ಹೆಡೆಮುರಿ ಕಟ್ಟಿದ ಪೊಲೀಸರು – Kannada News | Udupi: Manager and Businessman Arrested for Spreading Communal Hate Video via WhatsApp

ಉಡುಪಿ, ಜನವರಿ 30: ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಬಂದದನ್ನು ಪೋಸ್ಟ್ ಮಾಡುವವರು ಅಥವಾ ಬೇರೆಯವರಿಗೆ ಶೇರ್​ ಮಾಡುವವರು ಈ ಸ್ಟೋರಿಯನ್ನ ಒಮ್ಮೆ ಓದಿ. ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ ಆರೋಪ ಹಿನ್ನೆಲೆ ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿಕ್ಷಕರ ಸಹಕಾರ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಕುಮಾರಶೆಟ್ಟಿ ಮತ್ತು ಉದ್ಯಮಿ ಕೆ.ನಾಗರಾಜ್ ಬಂಧಿತರು (Arrested). ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಟ್ಸಾಪ್ ಗ್ರೂಪ್​ನಲ್ಲಿ ವಿಡಿಯೋ ಶೇರ್​​

ಬಂಧಿತರು ವಾಟ್ಸಾಪ್ ಗ್ರೂಪ್​ನಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ವಿಡಿಯೋ ಶೇರ್​​ ಮಾಡಿದ್ದರು. ಹಾಗಾಗಿ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಸದ್ಯ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಕಳ್ಳರ ಕರಾಮತ್ತು

ಕಾಪು ಪಡುಬಿದ್ರಿ ಪರಿಸರದಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದು, ಕಳ್ಳರು ಇಂದು ಮತ್ತೊಂದು ಮನೆ ದೋಚಿದ್ದಾರೆ. ಹಿರಿಯ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬುಧವಾರದಂದು ಪಡುಬಿದ್ರಿಯ ಮನೆ ಒಂದರಿಂದ ಚಿನ್ನ ದೋಚಿದ್ದ ಕಳ್ಳರು, ಕಾಪು ದಿವಾಕರ ಶೆಟ್ಟಿ ಮನೆಗೆ ಕನ್ನ ಹಾಕಿದ್ದಾರೆ.

ಇದನ್ನೂ ಓದಿ: ಉಡುಪಿ ಡಿಸಿ, ಉಸ್ತುವಾರಿ ಸಚಿವರಿಂದಲೇ ಜಿಲ್ಲಾಡಳಿತದ ಸೂಚನೆ ಉಲ್ಲಂಘನೆ? ಆಗಿದ್ದೇನು?

ಮನೆ ಮಾಲಕರು ಮುಂಬೈಗೆ ಹೋಗಿದ್ದ ವೇಳೆ ಕೃತ್ಯವೆಸಗಲಾಗಿದೆ. ಧಾರ್ಮಿಕ ಕಾರ್ಯ ಪೂರೈಸಿ ಬಂದಿದ್ದ ಕಾವಲುಗಾರ ಗಾಡ ನಿದ್ರೆಗೆ ಜಾರಿದ್ದ. ಆತನ ಅರಿವಿಗೆ ಬಾರದಂತೆ ಆತ ಮಲಗಿದ್ದಾಗಲೇ ಎದುರು ಬಾಗಿಲು ಒಡೆದು ಮನೆಗೆ ನುಗ್ಗಿದ್ದರು. ಜೊತೆಗೆ ಕಾವಲು ಕಾಯುತ್ತಿದ್ದ ವ್ಯಕ್ತಿಯ ಮೊಬೈಲ್ ದೋಚಿದ ಕಳ್ಳರು, ಕದ್ದ ಮೊಬೈಲ್​ನ್ನು ದೂರದ ಮಸೀದಿ ಬಳಿ ಎಸೆದು ಹೋಗಿದ್ದರು. ಇನ್ನು ಸಿಸಿಟಿವಿಯನ್ನ ಬೇರೆಡೆಗೆ ತಿರುಗಿಸಿ ಡಿವಿಆರ್ ಕದಿದ್ದಾರೆ.

ಇದನ್ನೂ ಓದಿ: ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ, ಕೃತಜ್ಞತೆ ವ್ಯಕ್ತಪಡಿಸಿ ಯೋಧ

ಸ್ಥಳಕ್ಕೆ ಕಾಪು ಪೊಲೀಸರ ಆಗಮಿಸಿ ಶ್ವಾನದಳದ ಮೂಲಕ ಪರಿಶೀಲನೆ ಮಾಡಿದ್ದಾರೆ. ಸದ್ಯ ಮುಂಬೈನಿಂದ ಮನೆಮಾಲಕರು ವಾಪಸ್ ಆಗುವುದನ್ನು ಕಾಯುತ್ತಿರುವ ಪೊಲೀಸರು, ಅವರು ಬಂದ ಮೇಲೆ ಕಳ್ಳತನದ ಪ್ರಮಾಣ ತಿಳಿಯಲಿದ್ದಾರೆ. ವರ್ಷದ ಹಿಂದೆ ಉದ್ಯಾವರದಲ್ಲೂ ಕೋಟ್ಯಂತರ ರೂ ಮೌಲ್ಯದ ಸ್ವತ್ತು ಕಳ್ಳತನವಾಗಿತ್ತು. ಎರಡು ದಿನದ ಹಿಂದಷ್ಟೇ ಪಡುಬಿದ್ರಿಯಲ್ಲಿ ಕೋಟ್ಯಂತರ ರೂ ಮೌಲ್ಯದ ಚಿನ್ನಕಳ್ಳತನವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 4:49 pm, Fri, 30 January 26

Source link

ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ಪರವಾಗಿ ಆಡಲಿದ್ದಾರೆ ಭಾರತ- ಪಾಕ್ ಮೂಲದ ಆಟಗಾರರು – Kannada News | T20 World Cup 2026: USA Squad Announced, Indian and Pakistani Players Included

2026 ರ ಟಿ20 ವಿಶ್ವಕಪ್‌ಗೆ (T20 World Cup) ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯಾವಳಿಯಲ್ಲಿ ಇಪ್ಪತ್ತು ತಂಡಗಳು ಆಡಲಿದ್ದು, ಈಗಾಗಲೇ ಭಾಗಶಃ ತಂಡಗಳನ್ನು ಘೋಷಿಸಲಾಗಿದೆ. ಇದೀಗ ಯುಎಸ್​ಎ (USA) ಕೂಡ ತನ್ನ 15 ಸದಸ್ಯರ ತಂಡವನ್ನು ಬಹಿರಂಗಪಡಿಸಿದೆ. ಅಚ್ಚರಿಯ ಸಂಗತಿಯೆಂದರೆ ಈ ತಂಡದಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ಮೂಲದ ಆಟಗಾರರು ಸೇರಿದ್ದು, ಒಟ್ಟಿಗೆ ಆಡಲಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಅಮೆರಿಕ ತಂಡ, ಟೀಂ ಇಂಡಿಯಾ ವಿರುದ್ಧವೂ ಸ್ಪರ್ಧಿಸಲಿದೆ.

ಒಂದೇ ತಂಡದಲ್ಲಿ ಭಾರತ, ಪಾಕ್ ಮೂಲದ ಆಟಗಾರರು

2026 ರ ಟಿ20 ವಿಶ್ವಕಪ್‌ಗಾಗಿ ಅಮೆರಿಕ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಪಂದ್ಯಾವಳಿಯಲ್ಲಿ ಯುಎಸ್ಎ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. 2024 ರ ಟಿ20 ವಿಶ್ವಕಪ್‌ನಲ್ಲಿ, ತಂಡವು ತನ್ನ ಚೊಚ್ಚಲ ಆವೃತ್ತಿಯಲ್ಲೇ ಸೂಪರ್ 8 ಹಂತವನ್ನು ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು. ಇದೀಗ ಮತ್ತೊಮ್ಮೆ ಅಂತಹದ್ದೇ ಪ್ರದರ್ಶನ ನೀಡುವ ಇರಾದೆಯಲ್ಲಿ ಅಮೆರಿಕ ತಂಡವಿದೆ. ಈ ಬಾರಿಯ ಯುಎಸ್​ಎ ಟಿ20 ವಿಶ್ವಕಪ್ ತಂಡದಲ್ಲಿ ಹಿಂದಿನ ಆವೃತ್ತಿಯಲ್ಲಿ ತಂಡದ ಭಾಗವಾಗಿದ್ದ 10 ಆಟಗಾರರು ಸೇರಿದ್ದಾರೆ. ಕೆಲವು ಹೊಸ ಮುಖಗಳು ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದು, ಮೋನಾಂಕ್ ಪಟೇಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಅಮೆರಿಕ ತಂಡವು ಹೆಚ್ಚಾಗಿ ಭಾರತೀಯ ಮೂಲದ ಆಟಗಾರರನ್ನು ಒಳಗೊಂಡಿದ್ದು, ಪಾಕಿಸ್ತಾನ ಮೂಲದ ಇಬ್ಬರು ಆಟಗಾರರನ್ನು ಸಹ ಆಯ್ಕೆ ಮಾಡಲಾಗಿದೆ. ಅಲಿ ಖಾನ್ ಮತ್ತು ಮೊಹಮ್ಮದ್ ಮೊಹ್ಸಿನ್ ಪಾಕಿಸ್ತಾನದಲ್ಲಿ ಜನಿಸಿದ ಇಬ್ಬರು ಆಟಗಾರರಾಗಿದ್ದರೂ, ಅವರು ಅಮೆರಿಕ ತಂಡಕ್ಕಾಗಿ ಆಡಲಿದ್ದಾರೆ. ಅಲಿ ಖಾನ್ ದೀರ್ಘಕಾಲದವರೆಗೆ ತಂಡದ ಭಾಗವಾಗಿದ್ದಾರೆ, ಆದರೆ ಮೊಹಮ್ಮದ್ ಮೊಹ್ಸಿನ್ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶ್ರೀಲಂಕಾ ಮೂಲದ ಶೆಹನ್ ಜಯಸೂರ್ಯ ಅವರನ್ನು ಸಹ ಆಯ್ಕೆ ಮಾಡಲಾಗಿದೆ.

ಯುಎಸ್ಎ ಟಿ20 ವಿಶ್ವಕಪ್ ವೇಳಾಪಟ್ಟಿ

  • ಫೆಬ್ರವರಿ 7 -ಅಮೆರಿಕ vs ಭಾರತ, ಮುಂಬೈ
  • ಫೆಬ್ರವರಿ 10 -ಅಮೆರಿಕ vs ಪಾಕಿಸ್ತಾನ, ಕೊಲಂಬೊ
  • ಫೆಬ್ರವರಿ 13 -ಅಮೆರಿಕ vs ನೆದರ್ಲ್ಯಾಂಡ್ಸ್, ಚೆನ್ನೈ
  • ಫೆಬ್ರವರಿ 15 -ಅಮೆರಿಕ vs ನಮೀಬಿಯಾ, ಚೆನ್ನೈ

2026 ರ ಟಿ20 ವಿಶ್ವಕಪ್‌ಗಾಗಿ ಯುಎಸ್‌ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೀಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಂ ರಂಜನೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಚಲನಚಿತ್ರೋತ್ಸವ: ಜನವರಿ 31ರಂದು ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ – Kannada News | Best movies on Jan 31 in 17th Bengaluru International Film Festival

ವಾರ್ತಾ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗೂ ಚಲನ‌ಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFfes) ನಡೆಯುತ್ತಿದೆ. ಫೆಬ್ರವರಿ 6ರವರೆಗೂ ಸಿನಿಮಾಗಳು ಪ್ರದರ್ಶನ ಆಗಲಿವೆ. ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್‍ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ಜನವರಿ 31ರಂದು ಲುಲು ಮಾಲ್​ನಲ್ಲಿ ಈ ಕೆಳಗಿನ 10 ಬೆಸ್ಟ್ ಸಿನಿಮಾಗಳನ್ನು ಸಿನಿಮಾಸಕ್ತರು ನೋಡಬಹುದು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

1. ಕ್ಲಿಯೋ ಫ್ರಮ್ 5 ಟು 7: (ಸಮಯ: ಮಧ್ಯಾಹ್ನ 3:20, ಸ್ಕ್ರೀನ್ 1). ವಿವರ: ಅಗ್ನೆಸ್ ವಾರ್ದಾ ಅವರ ಈ ಅದ್ಭುತ ಚಿತ್ರವು ಕ್ಯಾನ್ಸರ್ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಗಾಯಕಿಯೊಬ್ಬಳ ಜೀವನದ ಎರಡು ಗಂಟೆಗಳ ಆತಂಕವನ್ನು ನೈಜ ಸಮಯದಲ್ಲಿ ಚಿತ್ರಿಸುತ್ತದೆ. ಇದು ಅಸ್ತಿತ್ವದ ಪ್ರಶ್ನೆಗಳನ್ನು ಸುಂದರವಾಗಿ ಕಟ್ಟಿಕೊಡುವ ಫ್ರೆಂಚ್ ನವವಿಕಾಸದ ಪ್ರಮುಖ ಚಿತ್ರ.

2. ಒಂದಾನೊಂದು ಕಾಲದಲ್ಲಿ : (ಸಮಯ: ರಾತ್ರಿ 7. ಓಪನ್ ಏರ್ ಸ್ಕ್ರೀನಿಂಗ್ -ಮುಖ್ಯ ದ್ವಾರ). ವಿವರ: ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರವು ಸಮುರಾಯ್ ಮಾದರಿಯ ಕನ್ನಡದ ಆ್ಯಕ್ಷನ್ ಸಿನಿಮಾ. ಮಧ್ಯಕಾಲೀನ ಯೋಧರ ಜೀವನ ಮತ್ತು ಸಂಘರ್ಷವನ್ನು ಬಿಂಬಿಸುವ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಗೆದ್ದಿದೆ.

3. ದಿ ಮೇಡ್ಸ್ ಆಫ್ ವಿಲ್ಕೊ: (ಸಮಯ: ಬೆಳಿಗ್ಗೆ 10. ಸ್ಕ್ರೀನ್ 1). ವಿವರ: ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಆಂಡ್ರೆಜ್ ವಾಜ್ದಾ ಅವರ ಈ ಚಿತ್ರವು ಕಳೆದುಹೋದ ಯೌವನ ಮತ್ತು ಹಳೆಯ ಪ್ರೀತಿಯ ನೆನಪುಗಳ ಸುತ್ತ ಸಾಗುವ ಭಾವನಾತ್ಮಕ ಪಯಣ.

4. ತಾಯಿ ಸಾಹೇಬ: (ಸಮಯ: ಸಂಜೆ 4.50. ಸ್ಕ್ರೀನ್ ವಿಐಪಿ 2). ವಿವರ: ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರವು ಭೂ ಸುಧಾರಣೆ ಮತ್ತು ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆಯೊಬ್ಬಳ ಜೀವನದ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಇದು ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

5. ಮದರ್‌ಟಂಗ್ (ಸಮಯ: ರಾತ್ರಿ 7.40. ಸ್ಕ್ರೀನ್ 1). ವಿವರ: ಹೆಸರಾಂತ ನಿರ್ದೇಶಕ ಜಾಂಗ್ ಲು ಅವರ ಈ ಚಿತ್ರವು ಭಾಷೆ ಮತ್ತು ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳನ್ನು ಪರಿಶೋಧಿಸುತ್ತದೆ. ಸ್ವಂತ ಊರಿಗೆ ಮರಳುವ ನಟಿಯೊಬ್ಬಳ ಅಸ್ತಿತ್ವದ ಹುಡುಕಾಟ ಇದರ ಕಥೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ

6. ಗಮನ್ (ಸಮಯ: ಮಧ್ಯಾಹ್ನ 12.30. ಸ್ಕ್ರೀನ್ 1) ವಿವರ: ಮುಜಾಫರ್ ಅಲಿ ನಿರ್ದೇಶನದ ಈ ಚಿತ್ರವು ಮುಂಬೈಗೆ ವಲಸೆ ಬಂದ ವ್ಯಕ್ತಿಯೊಬ್ಬನ ಏಕಾಂತ ಮತ್ತು ಹೋರಾಟವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಇದರ ಸಂಗೀತ ಮತ್ತು ನೈಜ ಚಿತ್ರಣಕ್ಕೆ ಇದು ಹೆಸರುವಾಸಿಯಾಗಿದೆ.

7. ಭವನಿ ಭವಾಯಿ (ಸಮಯ: ರಾತ್ರಿ 7.30. ಸ್ಕ್ರೀನ್ ವಿಐಪಿ 2). ವಿವರ: ಕೇತನ್ ಮೆಹ್ತಾ ಅವರ ಈ ಸಿನಿಮಾವು ಜಾನಪದ ನಾಟಕ ಶೈಲಿಯನ್ನು ಬಳಸಿಕೊಂಡು ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯನ್ನು ವಿಡಂಬನಾತ್ಮಕವಾಗಿ ಟೀಕಿಸುತ್ತದೆ.

8. ಆಕ್ಸಿಡೆಂಟ್ (ಸಮಯ: ರಾತ್ರಿ 8.30. ಸ್ಕ್ರೀನ್ 6). ವಿವರ: ಶಂಕರ್ ನಾಗ್ ನಿರ್ದೇಶನದ ಈ ಸಸ್ಪೆನ್ಸ್ ಡ್ರಾಮಾವು ರಾಜಕೀಯ ಭ್ರಷ್ಟಾಚಾರ ಮತ್ತು ಮಾಧ್ಯಮದ ಜವಾಬ್ದಾರಿಯನ್ನು ಎತ್ತಿ ತೋರಿಸುವ ಇಂದಿಗೂ ಪ್ರಸ್ತುತವಾಗಿರುವ ಚಿತ್ರ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

9. ವಾಸ್ತುಹಾರ (ಸಮಯ: ಸಂಜೆ 5.30. ಸ್ಕ್ರೀನ್ ವಿಐಪಿ 3). ವಿವರ: ಜಿ. ಅರವಿಂದನ್ ಅವರ ಕೊನೆಯ ಚಿತ್ರಗಳಲ್ಲಿ ಒಂದಾದ ಇದು, ವಿಭಜನೆಯ ನಂತರ ನಿರಾಶ್ರಿತರಾದ ಜನರ ನೋವು ಮತ್ತು ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರಿಸುತ್ತದೆ.

10. ಎಲ್ಫ್ರೀಡ್ ಜೆಲಿನೆಕ್ – ಲ್ಯಾಂಗ್ವೇಜ್ ಅನ್ಲೀಶ್ಡ್ (ಸಮಯ: ಸಂಜೆ 5.20. ಸ್ಕ್ರೀನ್ 1). ವಿವರ: ನೋಬೆಲ್ ಪ್ರಶಸ್ತಿ ವಿಜೇತ ಲೇಖಕಿಯ ಜೀವನವನ್ನು ಆಧರಿಸಿದ ಈ ಚಿತ್ರವು ಭಾಷೆಯ ಶಕ್ತಿ ಮತ್ತು ಸಾಮಾಜಿಕ ವಿಮರ್ಶೆಯ ಮೇಲೆ ಬೆಳಕು ಚೆಲ್ಲುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Budget 2026: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್​ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ – Kannada News | Tax breaks, incentives, affordable land for developers, here are few expectations of Real Estate sector from Budget

ನವದೆಹಲಿ, ಜನವರಿ 30: ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್​ಗಳು, ಕೈಗಾರಿಕಾ ಕಾರಿಡಾರ್​ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್​ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate  sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್​ನಿಂದ ಮಾಡುತ್ತಿರುವ ನಿರೀಕ್ಷೆ.

ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ ತುಂಬಬೇಕಾದರೆ, ಅಭಿವೃದ್ಧಿ ಪೂರಕವಾದ ಮತ್ತು ಸಮತೋಲಿತವಾದ ಬಜೆಟ್​ನಿಂದ ಸಾಧ್ಯ ಎಂದು ಬೆಂಗಳೂರಿನ ಮನ ಪ್ರಾಜೆಕ್ಟ್ಸ್​ನ (Mana Projects) ಸಿಎಂಡಿ ಡಿ. ಕಿಶೋರ್ ರೆಡ್ಡಿ ಹೇಳುತ್ತಾರೆ.

ಸರ್ಕಾರದ ನೀತಿಗಳು ಮುಂದುವರಿಯಬೇಕು. ವಿವಿಧ ಹೌಸಿಂಗ್ ಸೆಗ್ಮೆಂಟ್​ಗಳಲ್ಲಿ ಗ್ರಾಹಕರ ವಿಶ್ವಾಸ ಮೂಡಿಸುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗುವ ಸುಧಾರಣೆಗಳೂ ಬರಬೇಕು. ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳ ಮೇಲೆ ಜಿಎಸ್​ಟಿ ದರ ಇಳಿಸಬೇಕು. ಗೃಹ ಸಾಲದ ಬಡ್ಡಿ ಮೇಲೆ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕಿಶೋರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್

ಉದಯೋನ್ಮುಖವಾಗಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ (ಟಯರ್-2 ಸಿಟಿ) ಇನ್​ಫ್ರಾಸ್ಟ್ರಕ್ಚರ್ ಮತ್ತು ನಗರ ಸಂಪರ್ಕತೆಯಲ್ಲಿ ಸತತ ಹೂಡಿಕೆ ಮಾಡಬೇಕು. ಇದರಿಂದ ಹೊಸ ವಸತಿ ಕಾರಿಡಾರ್​ಗಳು ಹೊರಹೊಮ್ಮಲು ಸಾಧ್ಯ. ಸಮತೋಲಿತವಾದ ನಗರ ಬೆಳವಣಿಗೆ ಸಾಧ್ಯ. ಹಾಗೆಯೇ, ಏಕ ಗವಾಕ್ಷಿ ಸಿಸ್ಟಂ ಮೂಲಕ ವೇಗವಾಗಿ ಪ್ರಾಜೆಕ್ಟ್​ಗಳ ಅನುಮೋದನೆ ಆಗಬೇಕು. ಎಫ್​ಡಿಐ ನಿಯಮಗಳಲ್ಲಿ ಸ್ಪಷ್ಟತೆ ಬರಬೇಕು ಎಂದೂ ಮನ ಪ್ರಾಜೆಕ್ಟ್ಸ್​ನ ಸಿಎಂಡಿ ಸಲಹೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಧಾನಗೊಳ್ಳುತ್ತಿದೆಯಾ?

ವಿಎಸ್ ರಿಯಾಲ್ಟರ್ಸ್ ಸಂಸ್ಥೆಯ ಸಿಇಒ ವಿಜಯ್ ಹರ್ಷ್ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಂದಗೊಳ್ಳುತ್ತಿರುವ ಆರಂಭಿಕ ಸುಳಿವು ಇದೆ. ಪ್ರಾಪರ್ಟಿಗಳು ಮಾರಾಟವಾಗುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದೆ. ಅದರಲ್ಲೂ ಅಧಿಕ ಬೇಡಿಕೆ ಇರುವ 1 ಕೋಟಿ ರೂ ಒಳಗಿನ ಮನೆಗಳ ಮಾರಾಟ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ವಿಜಯ್ ಹರ್ಷ್.

ಇದನ್ನೂ ಓದಿ: ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ

ಲ್ಯಾಂಡ್ ಡೆಲವಪರ್​ಗಳಿಗೆ ಕಡಿಮೆ ದರದಲ್ಲಿ ಭೂಮಿ ಸಿಗುವಂತಹ ವ್ಯವಸ್ಥೆ ಮಾಡಬೇಕು. ಮನೆ ಖರೀದಿದಾರರಿಗೆ ಗೃಹ ಸಾಲಗಳಿಗೆ ಡಿಡಕ್ಷನ್ ಇತ್ಯಾದಿ ತೆರಿಗೆ ರಿಯಾಯಿತಿ ಸೌಲಭ್ಯ ಕೊಟ್ಟರೆ ಈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚುರುಕು ಮುಟ್ಟಬಹುದು ಎನ್ನುತ್ತಾರೆ ವಿಎಸ್ ರಿಯಾಲ್ಟರ್ಸ್​ನ ಸಂಸ್ಥಾಪಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Home Guard Recruitment 2026: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು! – Kannada News | Shivamogga Home Guard Recruitment 2026: Apply Offline for 10th Pass Jobs

ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳವು ಅಧಿಕೃತ ಅಧಿಸೂಚನೆಯ ಮೂಲಕ ಗೃಹರಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 03 ರೊಳಗೆ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ಅರ್ಹತೆ:

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

  • ಕನಿಷ್ಠ ವಯಸ್ಸು: 19 ವರ್ಷ
  • ಗರಿಷ್ಠ ವಯಸ್ಸು: 45 ವರ್ಷ

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ಯಾವುದೇ ಸ್ಥಳಕ್ಕೆ ಸಲ್ಲಿಸಬಹುದು:

ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳದ ಪ್ರಧಾನ ಕಚೇರಿ ಅಥವಾ ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಘಟಕ / ಉಪಘಟಕ

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

ಅರ್ಜಿ ಸಲ್ಲಿಸುವ ಕ್ರಮಗಳು:

  • ಮೊದಲಿಗೆ ಶಿವಮೊಗ್ಗ ಗೃಹರಕ್ಷಕ ದಳ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯನ್ನು ಪಡೆದು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ.
  • ಅರ್ಜಿ ಶುಲ್ಕ ಇದ್ದಲ್ಲಿ, ನಿಮ್ಮ ವರ್ಗದ ಪ್ರಕಾರ ಪಾವತಿಸಿ. ಎಲ್ಲಾ ವಿವರಗಳು ಸರಿಯಾಗಿವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ.
  • ಕೊನೆಗೆ, ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ / ಸ್ಪೀಡ್ ಪೋಸ್ಟ್ ಅಥವಾ ನಿಗದಿತ ವಿಧಾನದಲ್ಲಿ ಕಳುಹಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:52 pm, Fri, 30 January 26

Source link

Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ – Kannada News | Union Budget 2026 FM Nirmala Sitharaman Speech Live Streaming on TV9 Kannada

ಯೂನಿಯನ್ ಬಜೆಟ್ 2026-27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರುವರಿ 1, ಭಾನುವಾರದಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 11ಗಂಟೆಗೆ ಸಂಸತ್​ನ ಜಂಟಿ ಅಧಿವೇಶನದಲ್ಲಿ ಸಚಿವೆ ಬಜೆಟ್ ಮಂಡನೆ ಆರಂಭಿಸುತ್ತಾರೆ. ಬಜೆಟ್ ಭಾಷಣ ಮುಗಿಯಲು ಮಧ್ಯಾಹ್ನ ಎರಡು ಗಂಟೆ ದಾಟಬಹುದು. ಇದು ಭಾರತದಲ್ಲಿ ಮಂಡಿಲಾಗುವ 88ನೇ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದೂ ಸತತವಾಗಿ. ಸತತ 9 ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಅವರದ್ದಾಗುತ್ತದೆ.

ಈ ಕೆಳಗಿನ ಯೂಟ್ಯೂಬ್​ನಲ್ಲಿ ಫೆಬ್ರುವರಿ 1ರಂದು ಬಜೆಟ್ ಭಾಷಣದ ಲೈವ್ ವೀಕ್ಷಿಸಬಹುದು
https://www.youtube.com/watch?v=g566v4ZRI4w
ಟ್ರಂಫ್ ಅವರ ಟ್ಯಾರಿಫ್ ಪ್ರತಾಪ, ವಿವಿಧ ದೇಶಗಳ ಮೇಲೆ ಅಮೆರಿಕದ ಧಮಕಿ, ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿರುವುದು, ಇವೇ ಮುಂತಾದ ಜಾಗತಿಕವಾಗಿ ಅನಿಶ್ಚಿತ ವಾತಾವರಣ ಒಂದೆಡೆ ಇದೆ. ಹಾಗೆಯೇ, ಯೂರೋಪ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದು, ಹಣದುಬ್ಬರಕ್ಕೆ ಕಡಿವಾಣ ಬಿದ್ದಿರುವುದು ಇತ್ಯಾದಿ ಸಕಾರಾತ್ಮಕ ಅಂಶಗಳು ಇನ್ನೊಂದೆಡೆ ಇವೆ. ಇಂಥ ಮಿಶ್ರ ಸನ್ನಿವೇಶದಲ್ಲಿ ಬಜೆಟ್ ಮಂಡನೆ ಆಗುತ್ತಿದ್ದು, ನಿರೀಕ್ಷೆಗಳು ಹಲವಿವೆ.

ಬಜೆಟ್ ಭಾಷಣ ಎಲ್ಲಿ ವೀಕ್ಷಿಸುವುದು?

2026ರ ಫೆಬ್ರುವರಿ 1, ಭಾನುವಾರದಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಆರಂಭವಾಗುತ್ತದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ನೇರ ಪ್ರಸಾರ ಇರುತ್ತದೆ. ಟಿವಿ9 ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಟಿವಿ9 ಕನ್ನಡ ಯೂಟ್ಯೂಬ್ ಮತ್ತು ವೆಬ್​ಸೈಟ್​ಗಳಲ್ಲೂ ಬಜೆಟ್ ಭಾಷಣದ ನೇರ ಪ್ರಸಾರ ವೀಕ್ಷಿಸಬಹುದು. ವೆಬ್​ಸೈಟ್​ನಲ್ಲಿ ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಲೈವ್ ಬ್ಲಾಗ್ ಕೂಡ ಇರುತ್ತದೆ. ಬಜೆಟ್​ನ ಇಂಚಿಂಚೂ ಮಾಹಿತಿಯನ್ನು ಲೈವ್ ಬ್ಲಾಗ್​ನಲ್ಲಿ ಕಾಣಬಹುದು.

ಬಜೆಟ್ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಜೆಟ್ ಪ್ರತಿ ಡೌನ್​ಲೋಡ್ ಮಾಡುವುದು

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ಕೂಡಲೇ ಅದರ ಪ್ರತಿಯು ಆನ್​ಲೈನ್​ನಲ್ಲಿ ಲಭ್ಯವಾಗಿರುತ್ತದೆ. ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್​ವರೆಗೆ ವಿವಿಧ ಸಂಬಂಧಿತ ದಾಖಲೆಗಳು ಆನ್​ಲೈನ್​ನಲ್ಲೇ ದೊರಕುತ್ತವೆ. ಅದಕ್ಕೆಂದೇ ರೂಪಿಸಲಾಗಿರುವ indiabudget.gov.in ವೆಬ್​ಸೈಟ್​ನಲ್ಲಿ ಈ ದಾಖಲೆಗಳನ್ನು ನೋಡಬಹುದು, ಮಾತ್ರವಲ್ಲ, ಡೌನ್​ಲೋಡ್ ಕೂಡ ಮಾಡಬಹುದು. ಬಜೆಟ್ ಪ್ರತಿಯು ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:33 pm, Fri, 30 January 26

Source link

ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ? – Kannada News | Michael Jackson biopic Michael to release on April 24

ವಿಶ್ವ ಸಂಗೀತ ಮತ್ತು ಪಾಪ್ ಕ್ಷೇತ್ರದಲ್ಲಿ ದಂತಕತೆ. ಅವರ ನೃತ್ಯ ಮತ್ತು ಹಾಡು ಅಮೆರಿಕದ ಪಾಪ್ ಸಂಸ್ಕೃತಿಯನ್ನೇ ಬದಲಾಯಿಸಿತು. ಮೈಕಲ್ ಜಾಕ್ಸನ್ (michael jackson) ಅವರ ನೃತ್ಯ ಶೈಲಿ, ಅವರ ಥ್ರಿಲ್ಲರ್, ಬ್ಯಾಡ್ ಮತ್ತು ಡೇಂಜರಸ್ ಆಲ್ಬಂಗಳು ಇತಿಹಾಸವನ್ನೇ ನಿರ್ಮಿಸಿವೆ. ಮೈಕಲ್ ಜಾಕ್ಸನ್ ಇಂದಿಗೂ ಸಹ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಪ್ರಭುದೇವ ಸೇರಿದಂತೆ ಕೋಟ್ಯಂತರ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಪಾಪ್ ರಾಜನೆಂಬ ಹೆಸರನ್ನು ಪಡೆದಿದ್ದ ಮೈಕಲ್ ಅವರ ಖಾಸಗಿ ಜೀವನ ಸಾಕಷ್ಟು ನೋವು, ಹೋರಾಟಗಳಿಂದ ಕೂಡಿತ್ತು. ಇದೀಗ ಮೈಕಲ್ ಜಾಕ್ಸನ್ ಜೀವನ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಮೈಕಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ಹಾಲಿವುಡ್​​ನಲ್ಲಿ ನಿರ್ಮಾಣಗೊಂಡಿದ್ದು ಸಿನಿಮಾಕ್ಕೆ ‘ಮೈಕಲ್’ ಎಂದು ಹೆಸರಿಡಲಾಗಿದೆ. ಈ ಹಿಂದೆ ಭಾರತೀಯ ಮೂಲದ ಪಾಪ್ ತಾರೆ ಫ್ರೆಡ್ಡಿ ಮರ್ಕ್ಯುರಿ ಜೀವನ ಆಧರಿಸಿದ ‘ಬೊಹಿಮಿಯನ್ ರಾಪ್ಸಡಿ’ ಸಿನಿಮಾ ನಿರ್ಮಾಣ ಮಾಡಿದ್ದ ಗ್ರಹಾಂ ಕಿಂಗ್, ಇದೀಗ ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಮೈಕಲ್’ ಸಿನಿಮಾವನ್ನು ಆಂಟೊನಿ ಫರುಖಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಈ ಸಿನಿಮಾ ಮೈಖಲ್ ಜಾಕ್ಸನ್ ಅವರ ಬಾಲ್ಯ, ಯೌವ್ವನ ಅವರ ಜನಪ್ರಿಯತೆ, ಅವರ ಬಣ್ಣ ಬದಲಾವಣೆ ಅದಕ್ಕೆ ಕಾರಣ, ಮೈಕಲ್ ಅನ್ನು ಸುತ್ತಿಕೊಂಡ ವಿವಾದಗಳು, ಮೈಕಲ್​ ಆರೋಗ್ಯ ಸಮಸ್ಯೆ, ಅವರ ಸಾವು ಎಲ್ಲವನ್ನೂ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಮೈಕಲ್ ಅವರ ಒರಿಜಿನಲ್ ಹಾಡುಗಳನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ

ಮೈಕಲ್ ಜಾಕ್ಸನ್ ಪಾತ್ರದಲ್ಲಿ ಅವರ ಸಹೋದರನ ಪುತ್ರ ಆಗಿರುವ ಜಾಫರ್ ಜಾಕ್ಸನ್ ಅವರೇ ನಟಿಸುತ್ತಿರುವುದು ವಿಶೇಷ. ಜಾಫರ್ ಜಾಕ್ಸನ್ ಸ್ವತಃ ಗಾಯಕ ಮತ್ತು ನಟರಾಗಿದ್ದು, ತಮ್ಮ ಅಂಕಲ್​ ಪಾತ್ರದಲ್ಲಿಯೇ ಅವರು ನಟಿಸುತ್ತಿದ್ದಾರೆ. ಜಾಫರ್ ಜಾಕ್ಸನ್​​ಗೆ ‘ಮೈಕಲ್’ ಮೊದಲ ಸಿನಿಮಾ ಆಗಿದೆ. ಟ್ರೈಲರ್​​ನಲ್ಲಿ ಮೈಕಲ್ ಆಗಿ ಅವರು ಗಮನ ಸೆಳೆಯುತ್ತಿದ್ದಾರೆ. 1300 ಕೋಟಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದ್ದು, ಸಿನಿಮಾದ ಮೊದಲ ಪ್ರೀಮಿಯರ್ ಏಪ್ರಿಲ್ 10 ರಂದು ಬರ್ಲಿನ್​​ನಲ್ಲಿ ನಡೆಯಲಿದೆ. ಬಳಿಕ ಏಪ್ರಿಲ್ 24 ರಂದು ವಿಶ್ವದಾದ್ಯಂತ ‘ಮೈಕಲ್’ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಿಕಲ್ ಬಾಲ್ ಲೀಗ್: ಉತ್ತಮ ಆಟ ಮುಂದುವರಿಸಿದ ಅಟ್ಲಿ ಒಡೆತನದ ‘ಬೆಂಗಳೂರು ಜವಾನ್ಸ್’ ತಂಡ – Kannada News | Priya Atlee team Bengaluru Jawans won first match in world pickleball league

ಪ್ರಿಯಾ ಅಟ್ಲೀ ಮತ್ತು ಖ್ಯಾತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್​ನ ಮೊದಲ ಸೀಸನ್​ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಉತ್ತಮ ಆಟ ಮುಂದುವರಿಸಿದೆ.

Source link

SA vs WI: ಬೃಹತ್ ಮೊತ್ತ ಬೆನ್ನಟ್ಟಿ ವಿಶ್ವ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ – Kannada News | South Africa Creates History: De Kock’s Record Century Powers Historic T20 Chase vs WI

ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 221 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ಮಾರ್ಕ್ರಾಮ್ ಔಟಾದ ನಂತರ ಬಂದ ರಿಕಲ್ಟನ್, ಡಿ ಕಾಕ್‌ಗೆ ಉತ್ತಮ ಬೆಂಬಲ ನೀಡಿದರು.

Source link

ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ – Kannada News | Confident Group Chairman C.J. Roy Dies by Suicide During IT Raid

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್Image Credit source: facebook profile

ಬೆಂಗಳೂರು, ಜನವರಿ 30: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಲ್ಯಾಂಗ್​ಫೋರ್ಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ನಡೆದಿದೆ. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳಿಂದ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್​​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಶೋಕ್​​ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link