Category Archives: Blog

Your blog category

ಭಾಸ್ಕರ ಪರ್ವ: ಮಾಧ್ಯಮ ಲೋಕದ ಧೀಮಂತ ಗುರು ಡಾ. ಭಾಸ್ಕರ ಹೆಗಡೆಗೆ ವಿಶಿಷ್ಟ ಬೀಳ್ಕೊಡುಗೆ, ಸನ್ಮಾನ – Kannada News | Bhaskara Parva: SDM Ujire to Honor Journalism Legend Dr. Bhaskara Hegde on Jan 31

ಡಾ. ಭಾಸ್ಕರ ಹೆಗಡೆ

ಮಂಗಳೂರು, ಜನವರಿ 29: ಶಿಕ್ಷಣ ಮತ್ತು ಪತ್ರಿಕೋದ್ಯಮ (Journalism) ಕ್ಷೇತ್ರದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ (Dr. Bhaskara Hegde) ಅವರು ಜನವರಿ 31ರಂದು ವೃತ್ತಿ ಬದುಕಿನಿಂದ ನಿವೃತ್ತರಾಗುತ್ತಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಹಿರಿಯ-ಕಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದ ವತಿಯಿಂದ ‘ಭಾಸ್ಕರ ಪರ್ವ – ಮಾಧ್ಯಮ ಗುರುವಿಗೆ ಅಭಿನಂದನೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 31 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಉಜಿರೆ ಎಸ್​ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

‘ಭಾಸ್ಕರ ಪರ್ವ’ ಕಾರ್ಯಕ್ರಮದಲ್ಲಿ ಏನೇನು?

  • ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ಎಸ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಭಾಸ್ಕರ ಹೆಗಡೆ ಕುರಿತಾದ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
  • ಸಾಕ್ಷ್ಯಚಿತ್ರ ಪ್ರದರ್ಶನ: ಡಾ. ಭಾಸ್ಕರ ಹೆಗಡೆ ವೃತ್ತಿ ಜೀವನದ ಸಾಧನೆಗಳನ್ನು ಬಿಂಬಿಸುವ ವಿಶೇಷ ಸಾಕ್ಷ್ಯಚಿತ್ರವನ್ನು ಬೆಂಗಳೂರಿನ ‘ಕ್ಷೇಮವನ’ದ ಕಾರ್ಯನಿರ್ವಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಅವರು ಬಿಡುಗಡೆಗೊಳಿಸಲಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭಕ್ಕೆ ಪತ್ರಿಕೋದ್ಯಮ ಆಸಕ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.

33 ವರ್ಷಗಳ ಸಾರ್ಥಕ ಪಯಣ

ಡಾ. ಭಾಸ್ಕರ ಹೆಗಡೆ ಪ್ರಾಧ್ಯಾಪಕರಾಗಿ ಮಾತ್ರವಲ್ಲದೆ, ನೂರಾರು ಜನ ಪತ್ರಕರ್ತರನ್ನು ರೂಪಿಸಿದ ಶಿಲ್ಪಿ ಎಂದೇ ಪ್ರಸಿದ್ಧರು. ಅವರ 33 ವರ್ಷಗಳ ಸುದೀರ್ಘ ಸೇವೆಯ ಗೌರವಾರ್ಥವಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ಷೂರೆನ್ಸ್ ಹೆಚ್ಚು ಜನರನ್ನು ಯಾಕೆ ತಲುಪುತ್ತಿಲ್ಲ? ಪ್ರಶ್ನೆ ಮಾಡುತ್ತಿರುವ ಆರ್ಥಿಕ ಸಮೀಕ್ಷೆ – Kannada News | Economic Survey 2026 points out reasons for low insurance penetration rate

ನವದೆಹಲಿ, ಜನವರಿ 29: ವಿಮಾ ಕ್ಷೇತ್ರದಲ್ಲಿ ಕಂಪನಿಗಳಿಗೆ ಆದಾಯ ಹೆಚ್ಚುತ್ತಿದೆ. ಆದರೆ, ಹೆಚ್ಚು ಜನರನ್ನು ಇದು ತಲುಪುತ್ತಿಲ್ಲ. ಇಂಥದ್ದೊಂದು ಪರಿಸ್ಥಿತಿಯನ್ನು ಆರ್ಥಿಕ ಸಮೀಕ್ಷೆಯಲ್ಲಿ (Economic Survey) ಎತ್ತಿ ತೋರಿಸಲಾಗಿದೆ. ಹಾಗೆಯೇ ಅದಕ್ಕೆ ಕಾರಣವೇನಿರಬಹುದು ಎಂದೂ ಅಂದಾಜಿಸಿದೆ. ಸಮೀಕ್ಷೆ ವರದಿ ಪ್ರಕಾರ ಭಾರತದಲ್ಲಿ ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ವೆಚ್ಚ ಬಹಳ ಅಧಿಕ ಇದೆ. ಇದರಿಂದಾಗಿ ಈ ಕ್ಷೇತ್ರದ ಬೆಳವಣಿಗೆ ತಡೆ ಎದುರಿಸುತ್ತಿದೆ.

ಭಾರತದಲ್ಲಿ ಇನ್ಷೂರೆನ್ಸ್ ಉದ್ಯಮ ಬೆಳೆಯುತ್ತಿದೆ. ಆದಾಯವೂ ಹೆಚ್ಚುತ್ತಿದೆ. ಆದರೆ, ಈಗಿರುವ ಗ್ರಾಹಕರಿಂದಲೇ ಹೆಚ್ಚಾಗಿ ಆದಾಯ ಬರುತ್ತಿರುವುದು. 2024-25ರಲ್ಲಿ ಇನ್ಷೂರೆನ್ಸ್ ದಟ್ಟಣೆ (ಪ್ರೀಮಿಯಮ್ ಸಂಗ್ರಹ) 97 ಡಾಲರ್​ಗೆ ಏರಿದೆ. ಅದರೆ, ಇನ್ಷೂರೆನ್ಸ್ ವ್ಯಾಪ್ತಿ (ಹೊಸ ಗ್ರಾಹಕರು) ಶೇ. 3.7ಕ್ಕೆ ಇಳಿಕೆಯಾಗಿದೆ. ಅಂದರೆ, ಹಾಲಿ ಗ್ರಾಹಕರಿಗೆ ಕವರೇಜ್ ಹೆಚ್ಚುತ್ತಿರುವುದು ಹಾಗೂ ಹೊಸ ಗ್ರಾಹಕರಿಗೆ ವಿಸ್ತರಣೆಯಾಗುತ್ತಿರುವುದು, ಈ ಎರಡರ ಮಧ್ಯೆ ಅಂತರ ಹೆಚ್ಚುತ್ತಿದೆ ಎಂದು ಸಮೀಕ್ಷೆಯು ಗಮನಿಸಿದೆ.

ಇದನ್ನೂ ಓದಿ: Economic Survey 2026: ಆರ್ಥಿಕ ಸಮೀಕ್ಷೆ ವರದಿ ಮಂಡನೆ; ಜಿಡಿಪಿ ಶೇ. 6.8-7.2 ಬೆಳೆಯುವ ನಿರೀಕ್ಷೆ

ಲೈಫ್ ಇನ್ಷೂರೆನ್ಸ್ ಮತ್ತು ನಾನ್-ಲೈಫ್ ಇನ್ಷೂರೆನ್ಸ್ ಸೆಗ್ಮೆಂಟ್ ಎರಡರಲ್ಲೂ ಈ ಸಮಸ್ಯೆ ಇದೆ. ಡಿಸ್ಟ್ರಿಬ್ಯೂಶನ್ ಅಥವಾ ಅಡ್ಮಿನಿಸ್ಟ್ರೇಟಿವ್ ವೆಚ್ಚ ಬಹಳ ಅಧಿಕ ಇರುವುದರಿಂದ ಕಂಪನಿಗಳ ಆಪರೇಟಿಂಗ್ ವೆಚ್ಚ ಹೆಚ್ಚಾಗಿದೆ ಎಂದು 2025-26ರ ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.

ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಇನ್ಷೂರೆನ್ಸ್ ಲಭ್ಯ ಇದೆಯಾದರೂ ಈಗಲೂ ಕೂಡ ಮಧ್ಯವರ್ತಿಗಳು ಭಾಗಿಯಾಗಿರುವ ಡಿಸ್ಟ್ರಿಬ್ಯೂಶನ್ ನೆಟ್ವರ್ಕ್​ಗಳ ಮೂಲಕವೇ ಹೆಚ್ಚಿನ ಬ್ಯುಸಿನೆಸ್ ನಡೆಯುತ್ತಿದೆ. ಈ ಡಿಸ್ಟ್ರಿಬ್ಯೂಶನ್ ವೆಚ್ಚವು ಪ್ರೀಮಿಯಮ್ ಮೌಲ್ಯ ಹೆಚ್ಚಲು ಕಾರಣವಾಗುತ್ತದೆ. ಹೀಗಾಗಿ, ಜಿಡಿಪಿ ಬೆಳವಣಿಗೆಯ ವೇಗಕ್ಕೆ ಇನ್ಷೂರೆನ್ಸ್ ಬೆಳವಣಿಗೆ ತಾಳೆಯಾಗುತ್ತಿಲ್ಲ ಎಂಬುದನ್ನು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಗುರುತಿಸಲಾಗಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ

ಭಾರತದ ಇನ್ಷೂರೆನ್ಸ್ ಸೆಕ್ಟರ್​ನಲ್ಲಿ 83 ಲಕ್ಷ ಇಂಟರ್ಮೀಡಿಯರಿಗಳಿದ್ದಾರೆ (ಏಜೆಂಟ್ಸ್ ಇತ್ಯಾದಿ ಮಧ್ಯವರ್ತಿ). ಇದು ಈ ಸೆಕ್ಟರ್​ನ ಬಲ ಮತ್ತು ದೌರ್ಬಲ್ಯ. ಇನ್ಷೂರೆನ್ಸ್ ಡಿಸ್ಟ್ರಿಬ್ಯೂಶನ್ ಅನ್ನು ಇನ್ನಷ್ಟು ಡಿಜಿಟಲೀಕರಣಗೊಳಿಸಿದರೆ ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಉತ್ತಮ ಇನ್ಷೂರೆನ್ಸ್ ಉತ್ಪನ್ನಗಳನ್ನು ಕೊಡಲು ಸಾಧ್ಯವಾಗಬಹುದು ಎನ್ನುವ ಸಲಹೆಯನ್ನೂ ಸಮೀಕ್ಷೆಯಲ್ಲಿ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Video: ಏನ್ ನಡೀತಿದೆ ಅಲ್ಲಿ? ನಾಯಿಗೂ ಜನರ ಜಗಳ ನೋಡುವ ಕುತೂಹಲ – Kannada News | Dogs Silent Stare at Street Argument Amuses the Internet

ಸಾಮಾನ್ಯವಾಗಿ ಒಂದಿಷ್ಟು ಜನ ಒಟ್ಟಿಗೆ ವಾಸಿಸುತ್ತಿದ್ದಾರೆಂದರೆ ಜಗಳಗಳು ಸಾಮಾನ್ಯ. ಒಬ್ಬರಿಗೆ ಒಂದು ಸರಿ ಎನಿಸಿದರೆ ಮತ್ತೊಬ್ಬರಿಗೆ ಅದು ತಪ್ಪೆನಿಸುವುದು. ಬೀದಿಯಲ್ಲಿ ಜಗಳ ನಡೆಯುತ್ತಿರುವಾಗ ಜನರು ನಿಂತು ನೋಡುವುದು ಕಾಮನ್ ಆದರೆ ನಾಯಿಗೂ ಇದೇನಿದು ಕುತೂಹಲ. ತಾರಸಿಯಲ್ಲಿ ನಿಂತು ಕೆಳಗೆ ನಡೆಯುತ್ತಿರುವ ಜಗಳವನ್ನು ನಾಯಿಯೊಂದು ಗಂಭೀರವಾಗಿ ನಿಂತು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೈಸೂರು ಸಂಚಾರ ಪೊಲೀಸರಿಂದ ವಿದ್ಯಾರ್ಥಿನಿಯರಿಗೆ ಉಚಿತ ಹೆಲ್ಮೆಟ್ ವಿತರಣೆ – Kannada News | Free Helmets for Students: Mysuru Police Intensify Road Safety Awareness Campaign

ಹೆಲ್ಮೆಟ್ ವಿತರಣೆ, ರಸ್ತೆ ಸುರಕ್ಷತೆImage Credit source: Tv9 kannada

ಮೈಸೂರು, ಜ.29: ಮೈಸೂರು ಸಂಚಾರ ಪೊಲೀಸರು (Mysuru Traffic Police) ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿನೂತನ ಜಾಗೃತಿ ಅಭಿಯಾನವನ್ನು ನಡೆಸಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ, ಮೈಸೂರಿನ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಜೆಎಲ್‌ಬಿ ರಸ್ತೆಯಲ್ಲಿರುವ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಪಿ ಸುಂದರ್ ರಾಜ್ ಅವರು 250 ಪೂರ್ಣ ಮುಖ ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ವಿತರಿಸಿದರು. ಈ ಮೂಲಕ ವಿದ್ಯಾರ್ಥಿನಿಯರು ಸಂಚಾರ ನಿಯಮಗಳನ್ನು ಪಾಲಿಸಬೇಕು ಮತ್ತು ಹೆಲ್ಮೆಟ್ ಧರಿಸುವ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿಂದ ರಸ್ತೆ ಸಂಚಾರ ಸುರಕ್ಷತಾ ಸಪ್ತಾಹವನ್ನು ಆಚರಿಸುತ್ತಿರುವ ಮೈಸೂರು ಪೊಲೀಸರು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದಾರೆ. ಕೆ.ಆರ್. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಸ್.ಡಿ.ಎಂ. ಕಾಲೇಜನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಸುಗುಣ ಎಂಬ ಸಂಸ್ಥೆಯು ಈ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಕೈಜೋಡಿಸಿತ್ತು. ಹೆಲ್ಮೆಟ್ ಧರಿಸುವುದಕ್ಕೆ ಯಾಕೆ ಆದ್ಯತೆ ನೀಡಬೇಕು ಎಂಬುದನ್ನು ವಿವರಿಸಿದ ಡಿಸಿಪಿ ಸುಂದರ್ ರಾಜ್, ಸಂಭವಿಸುವ 100 ಅಪಘಾತಗಳಲ್ಲಿ ಶೇಕಡ 75ರಷ್ಟು ದ್ವಿಚಕ್ರ ವಾಹನಗಳ ಸವಾರರೇ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಅಂಕಿಅಂಶಗಳ ಮೂಲಕ ತಿಳಿಸಿದರು. ಮಾರಣಾಂತಿಕ ಪ್ರಕರಣಗಳು ವರದಿಯಾಗುವುದರಿಂದ ಇಡೀ ಕುಟುಂಬವೇ ದುಃಖಕ್ಕೆ ಈಡಾಗುತ್ತದೆ ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಅಪಘಾತಗಳಿಂದಾಗುವ ದುಷ್ಪರಿಣಾಮಗಳು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಇಲ್ಲಿದೆ ನೋಡಿ ವಿಡಿಯೋ;

ಈ ರಸ್ತೆ ಸುರಕ್ಷತಾ ಸಪ್ತಾಹದ ಘೋಷವಾಕ್ಯ “ರೋಡ್, ಸಡಕ್, ಜೀವನ್ ರಕ್ಷಕ್” (ರಸ್ತೆ ಸುರಕ್ಷತೆ, ಜೀವನ ರಕ್ಷಕ) ಎಂಬುದಾಗಿದೆ. ಸೇಫ್ ಸವಾರಿ, ಸುರಕ್ಷಿತ ಸವಾರಿ ಎಂಬ ಧ್ಯೇಯದೊಂದಿಗೆ ಮೈಸೂರು ಸಂಚಾರ ಪೊಲೀಸರು ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಯುವಕರು ವೇಗವಾಗಿ ವಾಹನ ಚಲಾಯಿಸುವ ಪ್ರವೃತ್ತಿ ಹೊಂದಿರುವುದರಿಂದ, ಅವರಿಗೆ ಅರಿವು ಮೂಡಿಸಿ ಅವರ ಸುರಕ್ಷತೆಗೆ ಆದ್ಯತೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಮೈಸೂರು ಪ್ರವಾಸಿಗರಿಗೆ ದುಃಖದ ಸುದ್ದಿ: ಇನ್ಮುಂದೆ ಸಿಗಲ್ಲ ಜಿರಾಫೆ ‘ಯುವರಾಜ’

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಂ. ಕಾಲೇಜಿನ ಪ್ರತಿನಿಧಿಗಳು, ತಮ್ಮ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್, ಎನ್‌ಎಸ್‌ಎಸ್ ಮತ್ತು ವೈಆರ್‌ಸಿ ಕಾರ್ಯಕ್ರಮಗಳ ಮೂಲಕ ಸಂಚಾರ ಪೊಲೀಸರೊಂದಿಗೆ ಸೇರಿ ಜಾಥಾ ಕಾರ್ಯಕ್ರಮಗಳನ್ನು ನಡೆಸಿ, ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿಯರಾದವರು ಈ ಹಿಂದೆ ಕೂಡ ಹೆಲ್ಮೆಟ್ ಧರಿಸುತ್ತಿದ್ದರು ಎಂದು ದೃಢಪಡಿಸಿದರು. ಈ ಕಾರ್ಯಕ್ರಮದಿಂದ ದೊರೆತ ಮಾಹಿತಿಯು ಹೆಲ್ಮೆಟ್ ಧರಿಸುವಿಕೆಯ ಪರಿಣಾಮಕಾರಿತ್ವವನ್ನು ಇನ್ನಷ್ಟು ಮನವರಿಕೆ ಮಾಡಿಕೊಟ್ಟಿದೆ ಎಂದು ತಿಳಿಸಿದರು. ಭವಿಷ್ಯದಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೂ ಹೆಲ್ಮೆಟ್ ಧರಿಸುವಂತೆ ಉತ್ತೇಜಿಸುವುದಾಗಿ ವಿದ್ಯಾರ್ಥಿನಿಯರು ಪ್ರತಿಜ್ಞೆ ಮಾಡಿದರು. ಹೆಲ್ಮೆಟ್ ಧರಿಸುವುದು ಪೊಲೀಸರಿಂದ ದಂಡ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್ಲ, ಬದಲಾಗಿ ನಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಎಂಬುದನ್ನು ಅವರು ಒತ್ತಿ ಹೇಳಿದರು. ಇದು ನಮ್ಮ ಜೀವನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಾವೇ ತೆಗೆದುಕೊಳ್ಳಬೇಕೆಂಬ ಸಂದೇಶವನ್ನು ಸಾರಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹಾವಿನ ಜತೆಗೆ ಯುವತಿಯ ಚೆಲ್ಲಾಟ, ಮುಂದೇನಾಯ್ತು ನೋಡಿ – Kannada News | A young woman tried to hold a snake in her hand without any fear

ಹಾವು (Snakes) ಕಂಡ್ರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಇನ್ನು ಹಾವುಗಳು ಮನೆಯೊಳಗೆ ಎಂಟ್ರಿ ಕೊಟ್ಟರೆ ಸಾಕು, ಅಲ್ಲಿ ನಿಲ್ಲುವ ಧೈರ್ಯವಂತೂ ಮಾಡಲ್ಲ. ಆದರೆ ಇನ್ನು ಕೆಲವರು ಭಂಡ ಧೈರ್ಯದಲ್ಲಿ ಯಾವುದೇ ಸಾಧನಗಳಿಲ್ಲದೇ ಬರಿಗೈಯಲ್ಲಿ ಹಾವನ್ನು ಹಿಡಿಯುವ ಪ್ರಯತ್ನ ಮಾಡ್ತಾರೆ. ಇದೀಗ ಯುವತಿಯೊಬ್ಬಳು (young woman) ಹಾವಿನೊಂದಿಗೆ ಚೆಲ್ಲಾಟವಾಡಿದ್ದಾಳೆ. ಕೋಪಗೊಂಡ ಹಾವು ಈ ಯುವತಿಯ ಮೇಲೆ ಪ್ರತಿ ದಾಳಿ ನಡೆಸಿದೆ. ಈ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಯುವತಿಯ ವಿರುದ್ಧ ಗರಂ ಆಗಿದ್ದಾರೆ.

ಶ್ವೇತಾ ಸುತರ್ (shweta_wildliferescuer) ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿ ಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿಯು ಹಾವಿನೊಂದಿಗೆ ಚೆಲ್ಲಾಟ ಆಡುತ್ತಿರುವುದನ್ನು ಕಾಣಬಹುದು. ಯುವತಿಯು ಹಾವಿನ ಬಾಲವನ್ನು ಹಿಡಿಯಲು ಪ್ರಯತ್ನಿಸಿದ್ದು, ಅದು ಆಕೆಯ ಮೇಲೆ ಪ್ರತಿದಾಳಿ ನಡೆಸುತ್ತಿರುವುದನ್ನು ನೋಡಬಹುದು. ಈ ಹಾವನ್ನು ಹಿಡಿಯಲು ಪ್ರಯತ್ನಿಸುವ ಯುವತಿಯ ಕೈಯಲ್ಲಿ ಯಾವುದೇ ಸಾಧನಗಳಿಲ್ಲದಿರುವುದನ್ನು ಗಮನಿಸಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಯಮನನ್ನೇ ಕೈಯಲ್ಲಿ ಹಿಡಿದುಕೊಂಡ ವ್ಯಕ್ತಿ, ನೀವು ತುಂಬಾ ಲಕ್ಕಿ ಎಂದ ನೆಟ್ಟಿಗರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು, ಇದನ್ನೇ ಸಾವಿನೊಂದಿಗೆ ಆಟವಾಡುವುದು ಎನ್ನುವುದು ಎಂದಿದ್ದಾರೆ. ಮತ್ತೊಬ್ಬರು, ತುಂಬಾ ಅಪಾಯಕಾರಿ ದೃಶ್ಯ ಎಂದು ಹೇಳಿದರೆ, ಇನ್ನೊಬ್ಬರು ದಯವಿಟ್ಟು ಈ ರೀತಿ ಪ್ರಾಣದ ಜತೆಗೆ ಚೆಲ್ಲಾಟ ಆಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್​ಗೂ ಮುನ್ನ ಪ್ರಮುಖ ಆಟಗಾರ ಅಮಾನತು..! – Kannada News | USA cricketer Aaron Jones suspended From Cricket

ಅಮೆರಿಕ ತಂಡದ ಸ್ಟಾರ್ ಬ್ಯಾಟರ್ ಆರೋನ್ ಜೋನ್ಸ್ (Aaron Jones)​ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ಅಮಾನತುಗೊಳಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ಸಂಹಿತೆಗಳ ಉಲ್ಲಂಘನೆಗಳ ಅಡಿಯಲ್ಲಿ ಜೋನ್ಸ್ ಅವರನ್ನು ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.

2023-24 ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಬಿಮ್10 ಟೂರ್ನಮೆಂಟ್‌ನಲ್ಲಿ ಆರೋನ್ ಜೋನ್ಸ್ ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿವೆ. ಒಟ್ಟು ಐದು ಆರೋಪಗಳಲ್ಲಿ ಎರಡು ಅಂತರರಾಷ್ಟ್ರೀಯ ಪಂದ್ಯಗಳಿಗೆ ಸಂಬಂಧಿಸಿವೆ ಎಂದು ಐಸಿಸಿ ತಿಳಿಸಿದೆ. 

ಜೋನ್ಸ್ ಬಿಮ್​10 ಟೂರ್ನಮೆಂಟ್‌ನಲ್ಲಿ ಪಂದ್ಯಗಳಲ್ಲಿನ ಫಿಕ್ಸಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದಲ್ಲದೆ ಭ್ರಷ್ಟಚಾರದಲ್ಲಿ ತೊಡಗಿಸಿಕೊಳ್ಳುವ ವಿಧಾನಗಳನ್ನು ಬಹಿರಂಗಪಡಿಸದಿರುವುದು ಮತ್ತು ಗೊತ್ತುಪಡಿಸಿದ ಭ್ರಷ್ಟಾಚಾರ-ವಿರೋಧಿ ಅಧಿಕಾರಿಯಿಂದ ಸಮಂಜಸವಾದ ತನಿಖೆಗೆ ಸಹಕರಿಸದಿರುವ ಆರೋಪ ಹೊರಿಸಲಾಗಿದೆ.

ಈ ಆರೋಪಗಳು ವ್ಯಾಪಕ ತನಿಖೆಯ ಭಾಗವಾಗಿದ್ದು, ಹೀಗಾಗಿ ಜೋನ್ಸ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಆರೋಪಗಳಿಗೆ ಪ್ರತಿಕ್ರಿಯಿಸಲು ಅವರಿಗೆ ಜನವರಿ 28, 2026 ರಿಂದ 14 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಐಸಿಸಿ ತಿಳಿಸಿದೆ.

ಆರೋನ್ ಜೋನ್ಸ್ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಯುಎಸ್​ಎ (ಅಮೆರಿಕ) ತಂಡದ ಪರ ಕಣಕ್ಕಿಳಿದಿದ್ದರು. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ಅಮಾನತುಗೊಂಡಿದ್ದಾರೆ. ಹೀಗಾಗಿ ಅವರು ಭಾರತ-ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತ.

31 ವರ್ಷದ ಆರೋನ್ ಜೋನ್ಸ್ ಯುಎಸ್ಎ ಪರ 100 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 52 ಏಕದಿನ ಪಂದ್ಯಗಳಿಂದ 1664 ರನ್ ಕಲೆಹಾಕಿದ್ದಾರೆ. ಹಾಗೆಯೇ 48 ಟಿ20 ಪಂದ್ಯಗಳಿಂದ 770 ರನ್ ಕಲೆಹಾಕಿದ್ದಾರೆ. ಹಾಗೆಯೇ ಯುಎಸ್ಎ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಸಿಯಾಟಲ್ ಓರ್ಕಾಸ್ ಪರ ಮತ್ತು ಸಿಪಿಎಲ್‌ನಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ಪರ ಕಣಕ್ಕಿಳಿದಿದ್ದಾರೆ. ಇದೀಗ ಅಮಾನತುಗೊಂಡಿದ್ದರಿಂದ ಅವರು ಇನ್ಮುಂದೆ ಯಾವುದೇ ರೀತಿಯ ಕ್ರಿಕೆಟ್ ಆಡುವಂತಿಲ್ಲ.

Published On – 2:09 pm, Thu, 29 January 26

Source link

ಗೃಹ ಕಾರ್ಮಿಕರ ಕನಿಷ್ಠ ವೇತನ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ನಕಾರ – Kannada News | Supreme Court Declines PIL for Domestic Workers Minimum Wage: State Action Advised

ನವದೆಹಲಿ, ಜನವರಿ 29: ಗೃಹ ಕಾರ್ಮಿಕ(Domestic Worker) ರಿಗೆ ಸಮಗ್ರ ಕಾನೂನು ಚೌಕಟ್ಟು ಮತ್ತು ಕನಿಷ್ಠ ವೇತನ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಮತ್ತು ರಾಜ್ಯಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡುವುದನ್ನು ಪರಿಗಣಿಸುವಂತೆ ಕೇಳುವ ರಿಟ್ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಜಾರಿಗೊಳಿಸುವಂತಹ ವಿಷಯಗಳನ್ನು ಸಂಬಂಧಪಟ್ಟ ರಾಜ್ಯ ಅಧಿಕಾರಿಗಳಿಗೆ ಬಿಡುವುದು ಉತ್ತಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು , ಕಡ್ಡಾಯ ಕನಿಷ್ಠ ವೇತನ ನಿಗದಿಯು ಕೆಲಸ ಕೊಡುವವರನ್ನು ಸಂಕಷ್ಟಕ್ಕೆ ತಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿತು. ಏಕೆಂದರೆ ಕಾರ್ಮಿಕ ಸಂಘಗಳು ಪ್ರತಿಯೊಂದು ಮನೆಯನ್ನೂ ಮೊಕದ್ದಮೆಗೆ ಎಳೆಯಬಹುದು ಮತ್ತು ಇದು ಗೃಹ ಕಾರ್ಮಿಕರನ್ನು ನೇಮಿಸಿಕೊಳ್ಳುವಲ್ಲಿ ಹಿಂಜರಿಕೆಗೆ ಕಾರಣವಾಗಬಹುದು.

ಕಾನೂನಿನಲ್ಲಿ ಬದಲಾವಣೆಗಳನ್ನು ಒಳಗೊಂಡಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯಕ್ಕೆ ಸೀಮಿತ ಅಧಿಕಾರವಿದೆ , ಅರ್ಜಿದಾರರು ಪರಿಹಾರಕ್ಕಾಗಿ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಪೀಠವು ಅಂತಿಮವಾಗಿ ಸೂಚಿಸಿತು. ಗೃಹ ಕಾರ್ಮಿಕರು ಸಂವಿಧಾನದ 21 ಮತ್ತು 23 ನೇ ವಿಧಿಗಳಿಂದ ರಕ್ಷಿಸಲ್ಪಟ್ಟ ಮತ್ತು ಖಾತರಿಪಡಿಸಲಾದ ಕನಿಷ್ಠ ವೇತನದ ಮೂಲಭೂತ ಹಕ್ಕನ್ನು ಹೊಂದಿದ್ದಾರೆ ಎಂದು ಘೋಷಿಸುವಂತೆ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಾಗಿತ್ತು.

ಮತ್ತಷ್ಟು ಓದಿ: ಬಾಕಿ ಬಿಲ್ ಕ್ಲಿಯರ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಏಷ್ಯಾದಲ್ಲಿ, ಸಿಂಗಾಪುರದಲ್ಲಿ, ರಜೆ ಇತ್ಯಾದಿಗಳನ್ನು ನೀಡದೆ ನೀವು ಮನೆಕೆಲಸಗಾರನನ್ನು ನೇಮಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉದಾಹರಣೆ ನೀಡಲಾಯಿತು. ಕನಿಷ್ಠ ವೇತನವನ್ನು ಜಾರಿಗೊಳಿಸದ ರಾಜ್ಯಗಳಿಗೆ ನಾವು ನೋಟಿಸ್ ಕೊಡಿ ಎಂದು ಕೇಳುತ್ತಿದ್ದೇವೆ, ಆದರೆ ಕೆಲವು ರಾಜ್ಯಗಳು ಈಗಾಗಲೇ ಅದನ್ನು ಜಾರಿಗೊಳಿಸಿವೆ. ದೇಶೀಯ ಉದ್ಯೋಗದ ಸ್ವರೂಪವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುವುದಿಲ್ಲ. ರಾಜ್ಯಗಳು ನಿರ್ಧಾರ ತೆಗೆದುಕೊಳ್ಳಬೇಕೆಂದು ಒಕ್ಕೂಟ ಹೇಳುತ್ತದೆ ಎಂದು ಹಿರಿಯ ವಕೀಲ ರಾಮಚಂದ್ರನ್ ವಾದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ? – Kannada News | Kapil Sharma Show Losing Charm: Is Sunil Grover Key to Revival? Netflix Viewership Drops

ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯದ ಶೋಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಮೊದಲು ಸೋನಿ ಟಿವಿಯಲ್ಲಿ ಅವರು ಸಾಕಷ್ಟು ಶೋಗಳನ್ನು ಮಾಡುತ್ತಿದ್ದರು. ಆ ಬಳಿಕ ಅವರು ನೆಟ್​​​ಫ್ಲಿಕ್ಸ್​​ಗೆ ಬಂದರು. ಈ ವೇಳೆ ಸುನೀಲ್ ಗ್ರೋವರ್ ಜೊತೆ ಒಂದಾದರು. ಹಾಳಾಗಿದ್ದ ಗೆಳೆತನ ಸರಿ ಆಯಿತು. ಈಗ ಕಪಿಲ್ ಶರ್ಮಾ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆ. ಸುನೀಲ್ ಗ್ರೋವರ್ ಇಲ್ಲವಾದಲ್ಲಿ ಶೋ ಝೀರೋ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ 2017ರಲ್ಲಿ ಬೇರೆ ಆದರು. ನೆಟ್​​ಫ್ಲಿಕ್ಸ್​​ನಲ್ಲಿ 2024ರಲ್ಲಿ ಬಂದ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಇವರನ್ನು ಒಂದು ಮಾಡಿತು. ಈಗ ಶೋಗೆ ನಾಲ್ಕನೇ ಸೀಸನ್ ನಡೆಯುತ್ತಿದೆ. ಆದರೆ, ಇದಕ್ಕೆ ವೀಕ್ಷಣೆ ಕಡಿಮೆ ಆಗುತ್ತಲೇ ಇದೆ. ಹೀಗಾಗಿ ಹೊಸತನ ಹುಡುಕುವ ಅನಿವಾರ್ಯತೆ ಇದೆ.

2024ರಲ್ಲಿ ಪ್ರಸಾರ ಕಂಡ ಮೊದಲ ಸೀಸನ್ 2.5 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈ ವೇಳೆ 24 ಲಕ್ಷ ಗಂಟೆ ವೀಕ್ಷಣೆ ಕಂಡಿತ್ತು. ನೆಟ್​​ಫ್ಲಿಕ್ಸ್​​​ನಲ್ಲಿ ಗ್ಲೋಬಲ್ ರ್ಯಾಂಕಿಂಗ್ ಕೂಡ ಪಡೆದುಕೊಂಡಿತ್ತು. ಆ ಸೀಸನ್​ ಅಲ್ಲಿ ವೀಕ್ಷಣೆಯ ಅವಧಿ ಹೆಚ್ಚುತ್ತಲೇ ಹೋಗಿತ್ತು. ಆ ಸೀಸನ್ ಅಲ್ಲಿ 46 ಲಕ್ಷ ಗಂಟೆ ಶೋ ಕಂಡ ಎಪಿಸೋಡ್ ಇತ್ತು.

ಎರಡು ಹಾಗೂ ಮೂರನೇ ಸೀಸನ್​​ ಅಲ್ಲಿ ವೀಕ್ಷಣೆಯ ಅವಧಿ 40-45 ಲಕ್ಷ ಗಂಟೆಯಲ್ಲೇ ಇತ್ತು. ಆದರೆ, ಈ ಸೀಸನ್ ಕೈ ಕೊಟ್ಟಿದೆ. ಈಗಾಗಲೇ ಈ ಸೀಸನ್ 4 ಎಪಿಸೋಡ್ ಪ್ರಸಾರ ಕಂಡಿದೆ. ಇದು ಗ್ಲೋಬಲ್ ಮಟ್ಟದಲ್ಲಿ ರ್ಯಾಂಕ್ ಆಗುತ್ತಿಲ್ಲ. ವೀಕ್ಷಣಾ ಅವಧಿ 40 ಲಕ್ಷ ದಾಟುತ್ತಿಲ್ಲ. ಇದು ಕಪಿಲ್ ಚಿಂತೆಗೆ ಕಾರಣ ಆಗಿದೆ.

ಇದನ್ನೂ ಓದಿ: ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಭುಗಿಲೆದ್ದ ಆಕ್ರೋಶ; ಕಪಿಲ್ ಶರ್ಮಾ ಶೋ ನಿಲ್ಲಿಸೋ ಎಚ್ಚರಿಕೆ

ಸುನೀಲ್ ಗ್ರೋವರ್ ಅವರು ವಿವಿಧ ಸೆಲೆಬ್ರಿಟಿಗಳ ವೇಷದಲ್ಲಿ ಬರುತ್ತಾರೆ. ಅವರ ಮಿಮಿಕ್ರಿ ಮಾಡುತ್ತಾರೆ. ಇದುವೇ ಶೋನ ಜೀವಾಳ ಎನ್ನಲಾಗುತ್ತಿದೆ. ಉಳಿದಂತೆ ಯಾವುದು ಕೂಡ ಜನರ ಗಮನ ಸೆಳೆಯುತ್ತಿಲ್ಲ. ಕಪಿಲ್ ಶರ್ಮಾ ಹಳೆಯ ಟ್ರೆಂಡ್ ಫಾಲೋ ಮಾಡುತ್ತಿರುವುದೇ ಇದಕ್ಕೆ ಕಾರಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ವಿವಾಹೇತರ ಸಂಬಂಧ ಹೊಂದುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಯುವತಿ – Kannada News | Young woman says corporate employees are more likely to have extramarital affairs

ಇಂದಿನ ಯುವಪೀಳಿಗೆಯೂ ದಾಂಪತ್ಯ ಜೀವನಕ್ಕೆ ನಿಷ್ಠಾವಂತರಾಗಿರುವುದು ತುಂಬಾನೇ ಕಡಿಮೆನೇ. ಕೆಲಸ ಮಾಡುವ ಸ್ಥಳಗಳಲ್ಲಿ ಸಂಬಂಧ ಹೊಂದಿ ಪತಿ ಅಥವಾ ಪತ್ನಿಗೆ ಮೋಸ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಈ ಕಾರ್ಪೋರೇಟ್ ಜಗತ್ತಿನಲ್ಲಿ (corporate world) ವಿವಾಹೇತರ ಸಂಬಂಧಗಳು ಕಾಮನ್ ಅಂತೆ. ವಿವಾಹೇತರ ಸಂಬಂಧದ ಬಗ್ಗೆ ಯುವತಿಯೊಬ್ಬಳು (young woman) ಖಾರವಾಗಿ ಮಾತನಾಡಿದ್ದಾಳೆ. ಈ ವೇಳೆ ಆಕೆ ಅಚ್ಚರಿಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾಳೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ನಾನಾ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

venom ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಶೇ. 50 ರಷ್ಟು ಕಾರ್ಪೊರೇಟ್ ಉದ್ಯೋಗಿಗಳು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಈ ಯುವತಿ ಹೇಳುತ್ತಿದ್ದಾರೆ. ಹಾಗಾದರೆ ಮದುವೆಯ ಅರ್ಥವೇನು? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಈ ವಿಡಿಯೋದಲ್ಲಿ ಯುವತಿಯೂ ಕಾರ್ಪೊರೇಟ್ ಉದ್ಯೋಗದ ಸ್ಥಳಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ. ಆದರೂ ಜನರು ಏಕೆ ಮದುವೆಯಾಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮದುವೆಯಾಗುವುದಕ್ಕೆ ಮುಖ್ಯ ಕಾರಣವೇ ಅವರಿಗೆ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಹಾಗೂ ಮಕ್ಕಳನ್ನು ಪಡೆಯಲು ಯಾರಾದರೂ ಬೇಕಾಗಿರುವುದು ಎಂದು ನೇರವಾಗಿಯೇ ಹೇಳಿದ್ದಾಳೆ. ನೀವು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ನಿಮ್ಮ ಪೋಷಕರನ್ನು ನೋಡಿಕೊಳ್ಳಲು ಕೆಲಸಗಾರರನ್ನು ನೇಮಿಸಿಕೊಳ್ಳಿ, ಬದಲಾಗಿ ಮದುವೆಯಾಗುವುದಲ್ಲ ಎಂದು ವಿವಾಹೇತರ ಸಂಬಂಧ ಹೊಂದುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾಳೆ.

ಇದನ್ನೂ ಓದಿ: 100 ರೂ. ಡಿಸ್ಕೌಂಟ್​​ಗಾಗಿ ಫ್ರೀ ಎಂಟರ್ಟೈನ್ಮೆಂಟ್’: ಛೀ.. ಈ ಯುವತಿಯರು ಮಾಡಿದ ಕೆಲಸ ನೋಡಿ

ಈ ಪೋಸ್ಟ್ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಕ್ರಮ ಸಂಬಂಧಗಳಿಂದ ಅದೆಷ್ಟೋ ಸಂಸಾರಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ವಿವಾಹೇತರ ಸಂಬಂಧಗಳು 90% ಕ್ಕಿಂತ ಹೆಚ್ಚು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂದಿನ ಜನರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಡಿದು ಅಪಘಾತ ಮಾಡಿದ ಮಯೂರ್ ಪಟೇಲ್​ಗೆ ಹೆಚ್ಚಿತು ಸಂಕಷ್ಟ – Kannada News | Mayur Patel In Trouble FIR Lodge Against him After Drink Drive Car crash

ಮಯೂರ್ ಪಟೇಲ್ ಅವರು ಕುಡಿದು ಕಾರು ಅಪಘಾತ ಮಾಡಿಕೊಂಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿಯ ಸಿಗ್ನಲ್ ಅಲ್ಲಿ ತಮ್ಮ ಫಾರ್ಚೂನರ್ ಕಾರನ್ನು ಯದ್ವಾ ತದ್ವಾ ಓಡಿಸಿ ಡಿಕ್ಕಿ ಹೊಡೆಸಿದ್ದಾರೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಬಿಎನ್ ಎಸ್ 281,ಮತ್ತು IMA 185 ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ. ಇನ್ನು, ಸಂತ್ರಸ್ತ ಕಾರು ಚಾಲಕ ಶ್ರೀನಿವಾಸ್ ಮಾತನಾಡಿದ್ದು, ಘಟನೆ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link