Category Archives: Blog

Your blog category

T20 World Cup 2026: ದಕ್ಷಿಣ ಆಫ್ರಿಕಾ ತಂಡದಿಂದ ಇಬ್ಬರು ಔಟ್; ಬದಲಿಯಾಗಿ ಇಬ್ಬರ ಆಯ್ಕೆ – Kannada News | 2026 T20 World Cup: South Africa’s Injury Crisis and Squad Changes Revealed

2026 ರ ಟಿ20 ವಿಶ್ವಕಪ್​ಗಾಗಿ (T20 World Cup 2026) ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಇದೆಲ್ಲದರ ನಡುವೆ ಕೆಲವು ತಂಡಗಳಿಗೆ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಟಗಾರರ ಗಾಯದಿಂದ ಸಂಕಷ್ಟಕ್ಕೆ ಸಿಲುಕಿರುವ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾವೂ ಸೇರಿದೆ. ಇದೀಗ ಆ ಪಟ್ಟಿಗೆ ಕಳೆದ ಬಾರಿಯ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡ ಸೇರಿಕೊಂಡಿದೆ. ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಅವರ ಬದಲಿಯಾಗಿ ಮತ್ತಿಬ್ಬರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದೆ.

ಆಫ್ರಿಕಾ ತಂಡದಲ್ಲಿ 2 ಬದಲಾವಣೆ

2026 ರ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ದೊಡ್ಡ ಹಿನ್ನಡೆ ಅನುಭವಿಸಿದೆ. ಟೋನಿ ಡಿ ಜಾರ್ಜಿ ಮತ್ತು ಡೊನೊವನ್ ಫೆರೇರಾ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಡಿಸೆಂಬರ್‌ನಲ್ಲಿ ಭಾರತ ಪ್ರವಾಸದ ಸಮಯದಲ್ಲಿ ಟೋನಿ ಡಿ ಜಾರ್ಜಿ ಅವರಿಗೆ ಮಂಡಿರಜ್ಜು ನೋವು ಕಾಣಿಸಿಕೊಂಡಿತು, ಅದರಿಂದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇತ್ತ ಎಸ್‌ಎ 20 ಲೀಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಡೊನೊವನ್ ಫೆರೇರಾ ಕೂಡ ಭುಜದ ಗಾಯಕ್ಕೆ ತುತ್ತಾಗಿದ್ದರು. ಪರಿಣಾಮವಾಗಿ, ಇಬ್ಬರೂ ಆಟಗಾರರು ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಈ ಇಬ್ಬರು ಆಟಗಾರರಿಗೆ ಬದಲಿಯಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಯಾನ್ ರಿಕಲ್ಟನ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿರುವ ರಿಕಲ್ಟನ್ SA20 ಲೀಗ್​ನಲ್ಲಿ 156.01 ಸ್ಟ್ರೈಕ್ ರೇಟ್‌ನೊಂದಿಗೆ 337 ರನ್ ಗಳಿಸಿದ್ದಾರೆ.

ಈ ಆಟಗಾರರು ಕೂಡ ಗಾಯಗೊಂಡಿದ್ದಾರೆ

ದಕ್ಷಿಣ ಆಫ್ರಿಕಾದ ಚಿಂತೆಗಳು ಇನ್ನೂ ದೂರವಾಗಿಲ್ಲ. ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ ಮತ್ತು ಡೆವಾಲ್ಡ್ ಬ್ರೆವಿಸ್ ಕೂಡ ಇಂಜುರಿಗೆ ತುತ್ತಾಗಿದ್ದು, ಫಿಟ್‌ನೆಸ್ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ. ಪರಿಣಾಮವಾಗಿ, ತಂಡದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಐಸಿಸಿ ನಿಯಮಗಳ ಪ್ರಕಾರ, ಜನವರಿ 31 ರವರೆಗೆ ಪೂರ್ವಾನುಮತಿ ಇಲ್ಲದೆ ತಂಡ ಬದಲಾವಣೆಗಳನ್ನು ಮಾಡಬಹುದು. ಅದರ ನಂತರ, ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಐಸಿಸಿ ಅನುಮೋದನೆ ಅಗತ್ಯವಿರುತ್ತದೆ.

T20 World Cup 2026: ಟಿ20 ವಿಶ್ವಕಪ್​ ಬಹಿಷ್ಕರಿಸಿದ ಬಾಂಗ್ಲಾದೇಶ

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಮಾರ್ಕೊ ಯಾನ್ಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೆನಾ ಮಫಕಾ, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಚ್ ನೋಕಿಯಾ, ಕಗಿಸೊ ರಬಾಡಾ, ರಯಾನ್ ರಿಕೆಲ್ಟನ್, ಜೇಸನ್ ಸ್ಮಿತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಬಿಎಲ್​ನಿಂದ ಹೊರಬಿದ್ದ ಬಾಬರ್ ಪ್ರತಿ ರನ್​ಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತಾ? – Kannada News | Babar Azam’s BBL Debacle: Sydney Sixers Paid 1.26 Lakh Per Run for Star’s Slow Play

ಬಿಗ್ ಬ್ಯಾಷ್ ಲೀಗ್​ನಲ್ಲಿ ಇದೇ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಬಾಬರ್ ಪ್ರದರ್ಶನ ತೀರ ಕಳಪೆಯಾಗಿತ್ತು. ಪ್ರತಿ ರನ್ ಗಳಿಸಲು ಬಾಬರ್ ಹರಸಾಹಸ ಪಡಬೇಕಾಯಿತು. ಕಳಪೆ ಫಾರ್ಮ್​ ಜೊತೆಗೆ ರಾಷ್ಟ್ರೀಯ ಕರ್ತವ್ಯದಿಂದಾಗಿ ಬಾಬರ್ ಸೀಸನ್ ಮಧ್ಯದಲ್ಲೇ ಲೀಗ್ ತೊರೆದಿದ್ದಾರೆ. ಪರಿಣಾಮವಾಗಿ, ಬಾಬರ್ ಗಳಿಸಿದ ಪ್ರತಿ ರನ್​ಗೆ ಸಿಡ್ನಿ ಸಿಕ್ಸರ್ಸ್‌ ಲಕ್ಷಾಂತರ ರೂಗಳ ವೇತನ ನೀಡಬೇಕಾಗಿ ಬಂದಿದೆ.

Source link

ಪತ್ನಿಗೆ ಮಚ್ಚಿನಿಂದ ಹೊಡೆದ ಪತಿ: ಓಡೋಡಿ ಬಂದು ಜೀವ ಉಳಿಸಿತು ಖಾಕಿ! – Kannada News | Nelamangala Domestic Violence: Police Rescue Wife from Machete Assault

ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ ಪೊಲೀಸ್​

ನೆಲಮಂಗಲ, ಜನವರಿ 22: ದಂಪತಿ (couple) ಜಗಳದಲ್ಲಿ ಮಚ್ಚಿನಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ನೆಲಮಂಗಲ ಗ್ರಾಮಾಂತರ ಪೊಲೀಸರಿಂದ (police) ಒಂದು ಜೀವ ಉಳಿದಿದೆ. ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಡೆದದ್ದೇನು?

ನಗ್ಮಾ (25) ಹಲ್ಲೆಗೊಳಾಗಾದ ಪತ್ನಿ. ಸಲ್ಮಾನ್ (26) ಮಚ್ಚಿನಿಂದ ಹಲ್ಲೆ ಮಾಡಿದ ಪತಿ. ಬಳ್ಳಾರಿ ಮೂಲದ ದಂಪತಿ ಎರಡು ವರ್ಷದ ಹಿಂದೆ ಕೆಲಸ ಹರಸಿ ನೆಲಮಂಗಲಕ್ಕೆ ಬಂದಿದ್ದರು. ನೆಲಮಂಗಲ ತಾಲೂಕಿನ ಗೋವಿಂದಪುರದಲ್ಲಿ ವಾಸವಿದ್ದರು.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ಏರ್​ಲೈನ್ಸ್ ಸಿಬ್ಬಂದಿಯ ಬಂಧನ

ಇಂದು ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಸಲ್ಮಾನ್ ಮಚ್ಚಿನಿಂದ ನಗ್ಮಾಳ ಕೊಲೆ ಮಾಡಲು ಮುಂದಾಗಿದ್ದ. ಘಟನೆ ವೇಳೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ನಗ್ಮಾ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೂಡಲೇ ಪೊಲೀಸ್ ಜೀಪ್​​ನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಎಸ್​ಪಿ ವೆಂಕಟೇಶ್ ಪ್ರಸನ್ನ ಹಾಗೂ ಇನ್‌ಸ್ಪೆಕ್ಟರ್ ನರೇಂದ್ರ ಬಾಬು ಅವರಿಂದ ನಗ್ಮಾಳನ್ನ ಸಿದ್ದಾರ್ಥ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪೊಲೀಸರ ಮಾನವೀಯತೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತ ಆರೋಪಿ ಪತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸರಣಿ ಅಂಗಡಿ ಕಳ್ಳತನ: 2 ಲಕ್ಷ ರೂ ಬೆಲೆಬಾಳುವ ವಸ್ತು ಕಳ್ಳತನ 

ಬೆಂಗಳೂರು ವಾಯುವ್ಯ ವಿಭಾಗದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಕಾಟ ಜಾಸ್ತಿಯಾಗಿದ್ದು, ರಾತ್ರಿ ವೇಳೆ ರಾಡ್ ಹಿಡಿದು ಅಂಗಡಿ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಸದ್ಯ ಅಡಕಮಾರನಹಳ್ಳಿಯಲ್ಲಿ ಸರಣಿ ಅಂಗಡಿ ಕಳ್ಳತನ ನಡೆದಿದೆ.

ಇದನ್ನೂ ಓದಿ: 1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್​​ ಸದಸ್ಯ

3 ಅಂಗಡಿಗಳ ಬೀಗ ಮುರಿದು 2 ಲಕ್ಷ ರೂ ಬೆಲೆಬಾಳುವ ವಸ್ತು ಮತ್ತು ನಗದು ಕಳ್ಳತನ ಮಾಡಲಾಗಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಾದನಾಯಕನಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವರದಿ: ಮಂಜುನಾಥ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನನ್ನ ಸಿನಿಮಾ ಯಾಕೆ ಕೊಲ್ತೀರ?’ ದುನಿಯಾ ವಿಜಿಯ ಪ್ರಶ್ನಿಸಿದ ಝೈದ್ ಖಾನ್, ಉತ್ತರ ಏನಿತ್ತು? – Kannada News | Zaid Khan talks about his Cult movie clash with Duniya Vijay’s Landlord movie

ಸ್ಯಾಂಡಲ್​​ವುಡ್​​ನಲ್ಲಿ (Sandalwood) ಮತ್ತೆ ಎರಡು ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. ಡಿಸೆಂಬರ್ ತಿಂಗಳಲ್ಲಿ ದರ್ಶನ್ ನಟನೆಯ ‘ಡೆವಿಲ್’ ಬಿಡುಗಡೆ ಆಗಿತ್ತು, ಅದಾದ ಬಳಿಕ ಡಿಸೆಂಬರ್ 25 ರಂದು ಒಂದೇ ದಿನ ಸುದೀಪ್ ನಟನೆಯ ‘ಮಾರ್ಕ್’ ಮತ್ತು ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಬಿಡುಗಡೆ ಆಗಿತ್ತು. ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ ಸ್ಪರ್ಧೆಗೆ ಬಿದ್ದಿದ್ದವು. ಈಗ ಇದೇ ಶುಕ್ರವಾರ ಮತ್ತೊಮ್ಮೆ ಎರಡು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿವೆ ಅದುವೇ ದುನಿಯಾ ವಿಜಯ್ ನಟನೆಯ ‘ಲ್ಯಾಂಡ್​​ಲಾರ್ಡ್’ ಮತ್ತು ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ.

ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಮಲೈಕಾ ವಸುಪಾಲ್ ಮತ್ತು ರಚಿತಾ ರಾಮ್ ನಾಯಕಿ. ಇನ್ನು ‘ಲ್ಯಾಂಡ್​​ಲಾರ್ಡ್’ ಸಿನಿಮಾನಲ್ಲಿ ದುನಿಯಾ ವಿಜಯ್, ರಚಿತಾ ರಾಮ್ ನಟಿಸಿದ್ದಾರೆ. ಇದೀಗ ಝೈದ್ ಖಾನ್ ಅವರು ಟಿವಿ9ಗೆ ನೀಡಿರುವ ಸಂದರ್ಶನದಲ್ಲಿ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಬಗ್ಗೆ ಮಾತನಾಡಿದ್ದು, ‘ಈ ವಿಷಯವಾಗಿ ನಾನು ಖುದ್ದಾಗಿ ದುನಿಯಾ ವಿಜಯ್ ಜೊತೆಗೆ ಮಾತನಾಡಿದ್ದು, ನನ್ನ ಸಿನಿಮಾವನ್ನು ಏಕೆ ಕೊಲೆ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದೆ ಎಂದು ಹೇಳಿದ್ದಾರೆ.

‘ನಾವು ಅಕ್ಟೋಬರ್ 2ನೇ ತಾರೀಖಿನಂದೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕ ಜನವರಿ 23 ಎಂದು ಘೋಷಣೆ ಮಾಡಿದೆವು. ಅಂದು ರಚಿತಾ ರಾಮ್ ಅವರ ಹುಟ್ಟುಹಬ್ಬ ಇತ್ತು, ಹಾಗಾಗಿ ವಿಶೇಷ ದಿನದಂದೇ ನಮ್ಮ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆವು. ಆದರೆ ಅವರು ತುಸು ತಡವಾಗಿ ಘೋಷಣೆ ಮಾಡಿದರು. ಎಷ್ಟೇ ಆಗಲಿ ಅವರು ಸೂಪರ್ ಸ್ಟಾರ್ ನಾನು ಅವರಿಗೆ ಕರೆ ಮಾಡಿ ನೋಡಿ ಸರ್ ಮುಂದೆ ಹಾಕಿಕೊಳ್ಳಲು ಆಗುತ್ತಾ? ನನ್ನ ಸಿನಿಮಾವನ್ನೇ ಕೊಲೆ ಮಾಡ್ತಿದ್ದೀರಲ್ಲ, ಎಷ್ಟೇ ಆಗಲಿ, ನಾನು ನಿಮ್ಮ ಹುಡುಗನೇ’ ಎಂದು ಕೇಳಿಕೊಂಡೆ’ ಎಂದಿದ್ದಾರೆ ಝೈದ್ ಖಾನ್.

ಇದನ್ನೂ ಓದಿ:ದುನಿಯಾ ವಿಜಯ್ ನಟನೆಯನ್ನು ಮೆಚ್ಚಿ ಕೊಂಡಾಡಿದ ತೆಲುಗಿನ ಸ್ಟಾರ್ ನಿರ್ದೇಶಕ

‘ಅದಕ್ಕೆ ಉತ್ತರಿಸಿದ ದುನಿಯಾ ವಿಜಯ್, ಜನವರಿ 20ರಂದು ನನ್ನ ಹುಟ್ಟುಹಬ್ಬ ಇದೆ ಆ ಸಮಯಕ್ಕೆ ಸಿನಿಮಾ ರಿಲೀಸ್ ಮಾಡುವುದು ನಾನು ಪಾಲಿಸಿಕೊಂಡು ಬಂದಿದ್ದೇನೆ. ಎರಡು ಸಿನಿಮಾಗಳು ಒಟ್ಟಿಗೆ ಬರ್ತಿವೆ ಅಂತ ನೀನೇನು ತಲೆ ಕೆಡಿಸಿಕೊಳ್ಳೋಕೆ ಹೋಗಬೇಡ. ಅದೇನು ದೊಡ್ಡ ಸಮಸ್ಯೆ ಆಗಲ್ಲ. ನಮ್ಮಲ್ಲಿ ಸಾಕಷ್ಟು ಚಿತ್ರಮಂದಿರಗಳು ಇವೆ, ಒಳ್ಳೆಯ ಆಡಿಯೆನ್ಸ್ ಸಹ ಇದ್ದಾರೆ. ನನಗಿರುವ ಪ್ರೇಕ್ಷರೇ ಬೇರೆ, ನಿನಗಿರುವ ಪ್ರೇಕ್ಷಕರೇ ಬೇರೆ ಹಾಗಾಗಿ ಒಟ್ಟಿಗೆ ಬಂದರೂ ಸಮಸ್ಯೆ ಆಗಲ್ಲ ಎಂದರು’ ಎಂದು ಝೈದ್ ಖಾನ್ ಹೇಳಿದ್ದಾರೆ.

‘ಆಗ ನಾನು, ಸರಿ ಸರ್, ಹಾಗಿದ್ದರೆ ನಾನು ‘ಕಲ್ಟ್’ ಪ್ರಚಾರಕ್ಕೆ ಹೋದಾಗೆಲ್ಲ ‘ಲ್ಯಾಂಡ್​​ಲಾರ್ಡ್’ ಸಿನಿಮಾ ಪ್ರಚಾರವನ್ನೂ ಮಾಡುತ್ತೀನಿ, ನೀವು ‘ಲ್ಯಾಂಡ್​​ಲಾರ್ಡ್’ ಸಿನಿಮಾ ಪ್ರಚಾರಕ್ಕೆ ಹೋದಾಗೆಲ್ಲ ‘ಕಲ್ಟ್’ ಸಿನಿಮಾದ ಬಗ್ಗೆಯೂ ಮಾತನಾಡಿ, ಎರಡೂ ಕನ್ನಡ ಸಿನಿಮಾನೇ, ಜೊತೆಯಾಗಿ ಕೈಹಿಡಿದುಕೊಂಡು ಕೆಲಸ ಮಾಡೋಣ, ಜೋಡೆತ್ತಿನ ರೀತಿ ಕೆಲಸ ಮಾಡೋಣ ಎಂದೆ, ಅದಕ್ಕೆ ದುನಿಯಾ ವಿಜಯ್ ಅವರು ಸಹ ಒಪ್ಪಿಕೊಂಡರು. ಹಾಗಾಗಿ ಈಗ ಇಬ್ಬರ ಸಿನಿಮಾಗಳು ಸಹ ಒಂದೇ ದಿನ ಬಿಡುಗಡೆ ಆಗುತ್ತಿವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮುಡಾ ಹಗರಣ: ಸಿದ್ದರಾಮಯ್ಯ ಆಪ್ತನ 10 ಸ್ಥಿರ ಆಸ್ತಿಗಳು ಮುಟ್ಟುಗೋಲು – Kannada News | Muda Scam Case: ED Attaches Siddaramaiah Close Aide Marigowda Property

ಬೆಂಗಳೂರು.ಮೈಸೂರು, (ಜನವರಿ 22): ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಇತರರ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ (Muda Scam Case) ಮಹತ್ವದ ಬೆಳವಣಿಗೆ ನಡೆದಿದೆ. ಸಿದ್ದರಾಮಯ್ಯನವರ ಪರಮಾಪ್ತ, ಮುಡಾದ ಮಾಜಿ ಅಧ್ಯಕ್ಷ ಮರೀಗೌಡ (Marigowda)  ಕೂಡ ಅಕ್ರಮ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಹೀಗಾಗಿ ಇಡಿ, ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳು ಮುಟ್ಟುಗೋಲು

ಇಡಿ ದಾಳಿ ವೇಳೆ ಸೈಟ್‌ಗಳ ಹಂಚಿಕೆಯಲ್ಲಿ ನಿಯಮಗಳನ ಉಲ್ಲಂಘನೆ ಕಂಡುಬಂದಿತ್ತು. ಈ ಸಂಬಂಧ ಇನ್ನಷ್ಟು ತನಿಖೆ ನಡೆಸಿದಾಗ ಮುಡಾದ ಮಾಜಿ ಅಧ್ಯಕ್ಷ ಮರಿಗೌಡ ಕೂಡ ಅಕ್ರಮ ನಿವೇಶನ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರ ಸಹಾಯದಿಂದ ಮರೀಗೌಡ ಅಕ್ರಮವಾಗಿ ಸೈಟ್ ಪಡೆದಿದ್ದಾರೆ ಎನ್ನುವುದು ಗೊತ್ತಾಗಿದೆ. ಇದರಿಂದ ಇಡಿ, ಮರಿಗೌಡಗೆ ಸೇರಿದ 10 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 6 ಅಕ್ರಮ ಮುಡಾ ನಿವೇಶನಗಳು, 3 ಸ್ಥಿರ ಆಸ್ತಿಗಳು ಮತ್ತು 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಮುಟ್ಟುಗೋಲು ಹಾಕಿದೆ.

ಇದನ್ನೂ ಓದಿ: ಮುಡಾದಲ್ಲಿ ಅಕ್ರಮ ದೃಢ: 100 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಇದೇ ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ, ಈಗಾಗಲೇ 283 ಮುಡಾ ಸೈಟ್‌ಗಳು ಮತ್ತು 03 ವೈಯಕ್ತಿಕ ಆಸ್ತಿ ಸೇರಿದಂತೆ ಒಟ್ಟು 60 ಕೋಟಿ ರೂಪಾಯಿ ಮೌಲ್ಯದ ಅಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಈಗಾಗಲೇ ಇಡಿ ಬಂಧನಕ್ಕೊಳಗಾಗಿರುವ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸದ್ಯ ಜೈಲಿನಲ್ಲಿದ್ದು, ನಿನ್ನೆ ಅಷ್ಟೇ ಅವರ ಜಾಮೀನು ಅರ್ಜಿಯನ್ನು ಸಹ ಹೈಕೋರ್ಟ್ ವಜಾ ಮಾಡಿದೆ. ಇನ್ನು ಸಿದ್ದರಾಮಯ್ಯ ವಿರುದ್ಧದ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್​ ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಲಾಗಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ವಿಚಾರಣೆ ನಡೆಸಿದ್ದು,  ಜನವರಿ 28ಕ್ಕೆ ಆದೇಶ ಕಾಯ್ದಿರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

RCB: ಆರ್​ಸಿಬಿ ಖರೀದಿಗೆ ಖಜಾನೆ ತೆರೆದ 2 ಲಕ್ಷ ಕೋಟಿ ರೂ. ಒಡೆಯ

Source link

ಆಸ್ಕರ್ ನಾಮಿನೇಷನ್ಸ್ ಘೋಷಣೆ: ಭಾರತದ ‘ಹೋಮ್​​ಬೌಂಡ್​’ಗೆ ನಿರಾಸೆ – Kannada News | Oscars 2026 nominations announced: Homebound movie out of the race

ಸಿನಿಮಾಗಳಿಗೆ ನೀಡಲಾಗುವ ಜಗತ್ತಿನ ಅತ್ಯುತ್ತಮ ಪ್ರಶಸ್ತಿ ಎನ್ನಲಾಗುವ ‘ಆಸ್ಕರ್ಸ್’ನ 2026ನೇ (Oscar 2026) ಸಾಲಿನ ಪ್ರಶಸ್ತಿಗೆ ನಾಮಿನೇಟ್ ಆಗಿರುವ ಸಿನಿಮಾಗಳ ಪಟ್ಟಿಯನ್ನು ಇಂದು (ಜನವರಿ 22) ಬಿಡುಗಡೆ ಮಾಡಲಾಗಿದೆ. ಭಾರತದ ‘ಹೋಮ್​​ಬೌಂಡ್’ ಸಿನಿಮಾ ವಿದೇಶಿ ಸಿನಿಮಾಗಳ ಪಟ್ಟಿಯಲ್ಲಿ ಅಂತಿಮ 15 ಸಿನಿಮಾಗಳಲ್ಲಿ ಸ್ಥಾನ ಪಡೆದುಕೊಂಡು, ನಾಮಿನೇಟ್ ಆಗುವ ಭರವಸೆ, ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ ಅಂತಿಮ ಸುತ್ತಿಗೆ ಆಯ್ಕೆ ಆಗಲು ವಿಫಲವಾಗಿ ರೇಸಿನಿಂದ ಹೊರಬಿದ್ದಿದೆ.

ಕರಣ್ ಜೋಹರ್ ನಿರ್ಮಾಣ ಮಾಡಿ, ನೀರಜ್ ಗಯ್ವಾನ್ ನಿರ್ದೇಶನ ಮಾಡಿರುವ ‘ಹೋಮ್​​ಬೌಂಡ್’ ಸಿನಿಮಾ ಭಾರತದಲ್ಲಿರುವ ಜಾತಿ ಪದ್ಧತಿ, ಧರ್ಮ ವಿಭಜನೆ, ಮಹಿಳಾ ದೌರ್ಜನ್ಯ ಇನ್ನಿತರೆ ವಿಷಯಗಳ ಮೇಲೆ ಬೆಳಕು ಚೆಲ್ಲಿತ್ತು, ಸಿನಿಮಾನಲ್ಲಿ ಇಶಾನ್ ಕಟ್ಟರ್, ಜಾನ್ಹವಿ ಕಪೂರ್ ಮತ್ತು ವಿಶಾಲ್ ಜೇಟ್ವ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ, ಆದರೆ ಆಸ್ಕರ್​​ಗೆ ರೇಸಿನಲ್ಲಿ ಈ ವರ್ಷ ಗಮನ ಸೆಳೆಯಿತು. ಅಂತಿಮ 15 ಪಟ್ಟಿಯಲ್ಲಿ ಸಹ ಆಯ್ಕೆ ಆಗಿತ್ತು. ಆದರೆ ನಾಮಿನೇಷನ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

ಡಾಕ್ಯುಮೆಂಟರಿ ಮತ್ತು ಶಾರ್ಟ್ ಡಾಕ್ಯುಮೆಂಟರಿ ವಿಭಾಗಗಳಲ್ಲಿ ಭಾರತ ಕಳೆದ ಕೆಲ ವರ್ಷಗಳಿಂದ ಆಸ್ಕರ್ಸ್​​ನಲ್ಲಿ ಗಮನ ಸೆಳೆದಿತ್ತು. ಆದರೆ ಈ ಬಾರಿ ಅದೂ ಸಹ ಇಲ್ಲವಾಗಿದೆ. ಭಾರತದಲ್ಲಿ ನಿರ್ಮಾಣವಾದ ಯಾವ ಡಾಕ್ಯುಮೆಂಟರಿ ಅಥವಾ ಶಾರ್ಟ್ ಡಾಕ್ಯುಮೆಂಟರಿ ಈ ಬಾರಿ ಆಸ್ಕರ್ಸ್ ನಾಮಿನೇಷನ್ಸ್​​ನಲ್ಲಿ ಸ್ಥಾನ ಪಡೆದಿಲ್ಲ. ಆದರೆ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಗೀತಾ ಗಂಭೀರ್ ನಿರ್ದೇಶನ ಮಾಡಿರುವ ‘ದಿ ಪರ್ಫೆಕ್ಟ್ ನೇಬರ್’ ಡಾಕ್ಯುಮೆಂಟರಿ ನಾಮಿನೇಷನ್ಸ್​​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ

ವಿದೇಶಿ ವಿಭಾಗದಲ್ಲಿ ಬ್ರಜಿಲ್, ಟುನೇಷಿಯಾ, ಫ್ಯಾನ್ಸ್, ನೋರ್ವೆ, ಸ್ಪೈನ್​​ ದೇಶದ ಸಿನಿಮಾಗಳು ಆಯ್ಕೆ ಆಗಿವೆ. ಇನ್ನು ಒಟ್ಟಾರೆಯಾಗಿ ‘ಸಿನ್ನರ್ಸ್’ ಸಿನಿಮಾ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಸಿನ್ನರ್ಸ್ ಸಿನಿಮಾವು ಬರೋಬ್ಬರಿ 16 ನಾಮಿನೇಷನ್ಸ್​​ಗಳನ್ನು ಬಾಚಿಕೊಂಡು ದಾಖಲೆ ಬರೆದಿದೆ. ಕಳೆದ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾದ ಲಿಯಾನಾರ್ಡೊ ಡಿಕ್ಯಾಪ್ರಿಕೋವ್ ನಟನೆಯ ‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಸಿನಿಮಾ ಬರೋಬ್ಬರಿ 12 ನಾಮಿನೇಷನ್​​ಗಳನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ಲಿಯೊನಾರ್ಡೊ ಅವರು ಅತ್ಯುತ್ತಮ ನಟ ವಿಭಾಗದಲ್ಲಿಯೂ ನಾಮಿನೇಟ್ ಆಗಿದ್ದು, ಮತ್ತೊಂದು ಆಸ್ಕರ್ ಅವರಿಗೆ ಲಭಿಸುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸತತ 3 ದಿನ ರಜೆ: ಪ್ರಯಾಣಿಕರಿಗಾಗಿ KSRTC ಜತೆ BMTC ಬಸ್ಸುಗಳ ಸಂಚಾರ – Kannada News | BMTC special buses operate With KSRTC From Jan 23 From Bengaluru For handle Long Holiday rush

ಬೆಂಗಳೂರು, (ಜನವರಿ 22): ಸಾಲು ಸಾಲು ರಜೆ (Long Holiday) ಇದ್ರೆ ಸಾಕು ಬೆಂಗಳೂರಿನ (Bengaluru) ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ. ಇನ್ನು ಕೆಲವರು ಟ್ರಿಪ್​ಗೆ ತೆರಳುತ್ತಾರೆ. ಈಗ ಜನವರಿ ಅಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿರುವ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಜನ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್​​ಆರ್​​​ಟಿಸಿ ಬಸ್ ಜೊತೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್​​ಗಳ (KSRTC And BMTC Buses) ವ್ಯವಸ್ಥೆ ಮಾಡಲಾಗಿದೆ.

ಸತತ ಮೂರು ದಿನ ರಜೆ

ಜನವರಿ 24 ನಾಲ್ಕನೇ ಶನಿವಾರ, ಜನವರಿ 25 ಭಾನುವಾರ, ಇನ್ನು ಜನವರಿ 26 ಸೋಮವಾರ ಗಣರಾಜ್ಯೋತ್ಸವ ಸಾರ್ವತ್ರಿಕ ರಜೆ. ಹೀಗೆ ಈ ತಿಂಗಳಾಂತ್ಯದಲ್ಲಿ ಸತತ ಮೂರು ದಿನ ರಜೆ ಬಂದಿದೆ.  ಹೀಗಾಗಿ ಜನರು ಬೇರೆ ಬೇರೆ ಊರುಗಳತ್ತ ತೆರಳುವ ಸಾಧ್ಯತೆಗಳಿದ್ದು, ಈ ವೇಳೆ ಜನ ದಟ್ಟಣೆಯಾಗುವ ಸಾಧ್ಯತೆಗಳಿವೆ.ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದ್ದು, ಈ ಬಸ್​​ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ ಸಂಚಾರ

ನಾಳೆ (ಜನವರಿ 23) ಶುಕ್ರವಾರ ಕೆಲಸ ಮುಗಿಸಿಕೊಂಡು ಸಂಜೆಯಿಂದಲೇ ಹಲವರು ಊರಿಗೆ ತೆರಳುವವರಿದ್ದಾರೆ. ಆದ್ದರಿಂದ ನಾಳೆಯಿಂದಲೇ (ಜನವರಿ 23) KSRTC ಬಸ್ ಜೊತೆಗೆ ಬಿಎಂಟಿಸಿ ಬಸ್​​ಗಳು ಸಹ ಸಂಚರಿಸಲಿವೆ. ನಾಳೆ 265 BMTC ಬಸ್ ಹಾಗೂ ಜನವರಿ 24ರಂದು‌ 500ಕ್ಕೂ BMTC ಹೆಚ್ಚು ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.

2026ರ ವರ್ಷದಲ್ಲಿ ಹೆಚ್ಚಿನ ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿದೆ. ಅಂದರೆ, ಒಂದು ದಿನ ರಜೆ ಹಾಕಿದರೆ, ಮೂರು ಅಥವಾ ನಾಲ್ಕು ದಿನಗಳ ಸರಣಿ ರಜೆಯ ಮಜಾವನ್ನು ಜನರು ಸವಿಯಬಹುದಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

1997ರ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸ್: 29 ವರ್ಷ ಬಳಿಕ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್​​ ಸದಸ್ಯ – Kannada News | Mangaluru Police Arrest Dandupalya Gang’s member After 29 Years in 1997 Double Murder

ಮಂಗಳೂರು, ಜನವರಿ 22: ಕೊಲೆ, ಅತ್ಯಾಚಾರ ಮತ್ತು ದರೋಡೆಗಳಿಗೆ ಕುಖ್ಯಾತವಾಗಿದ್ದ ದಂಡುಪಾಳ್ಯ ಗ್ಯಾಂಗ್​​​ನ (Dandupalya Gang) ಓರ್ವ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ (Arrest). ಮಂಗಳೂರಿನ ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್​ ಚಿಕ್ಕ ಹನುಮಂತಪ್ಪನನ್ನು ಬಂಧಿಸಿದ್ದಾರೆ. ಬಂಧಿತನ ವಿರುದ್ಧ ಈವರೆಗೆ ರಾಜ್ಯದಲ್ಲಿ ಸುಮಾರು 13 ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ.

ಏನಿದು ಪ್ರಕರಣ?

1997 ಅಕ್ಟೋಬರ್​​ 11ರಂದು ಉರ್ವ ಮಾರಿಗುಡಿ ಕ್ರಾಸ್ ಬಳಿಯ ಅನ್ವರ್ ಮಹಲ್ ಎಂಬ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್​​, ಮನೆಯಲ್ಲಿದ್ದ ಲೂವಿಸ್ ಡಿಮೆಲ್ಲೋ(80), ರಂಜಿತ್ ವೇಗಸ್(19)ರನ್ನು ಕೊಲೆ ಮಾಡಿತ್ತು. ಬಳಿಕ ಚಿನ್ನಾಭರಣಗಳ್ನು ದೊಚಿಕೊಂಡು ಪರಾರಿಯಾಗಿದ್ದರು. ಚಿಕ್ಕ ಹನುಮಂತಪ್ಪ ಸೇರಿದಂತೆ ಎಂಟು ಸದಸ್ಯರಿಂದ ಕೃತ್ಯ ಎಸಗಲಾಗಿತ್ತು.

ಇದನ್ನೂ ಓದಿ: ದಂಡುಪಾಳ್ಯ ಸಿನಿಮಾ ರೀತಿಯಲ್ಲಿ ಅಧಿಕಾರಿ ಪ್ರತಿಮಾ ಹತ್ಯೆ: ಇಬ್ಬರು ಹಂತಕರ ಸ್ಫೋಟಕ ಅಂಶ ಬೆಳಕಿಗೆ

ಪ್ರಕರಣದ ವಿಚಾರಣೆ ಮುಕ್ತಾಯಗೊಂಡು ಆಪಾದಿತರು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಆರೋಪಿ ಚಿಕ್ಕ ಹನುಮ ಹೆಸರು ಬದಲಿಸಿಕೊಂಡು ನಾಪತ್ತೆಯಾಗಿದ್ದ. ಚಿಕ್ಕ ಹನುಮ ಅಲಿಯಾಸ್​​ ಚಿಕ್ಕ ಹನುಮಂತಪ್ಪ, ಕೆ.ಕೃಷ್ಣಪ್ಪ ಅಲಿಯಾಸ್​ ಕೃಷ್ಣ ಎಂದು ಹೆಸರು ಬದಲಿಸಿಕೊಂಡಿದ್ದ.

ಇದನ್ನೂ ಓದಿ: ಕರ್ನಾಟಕದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್​ಮೇಲ್, ಲಕ್ಷಾಂತರ ರೂ. ವಸೂಲಿ: ಚಿಕ್ಕಮಗಳೂರಿನ ಮಹಿಳೆಯ ಬಂಧನ

ಚಿಕ್ಕ ಹನುಮನ ವಿರುದ್ದ 2010ರಲ್ಲಿ‌ ಮಂಗಳೂರಿನ JMFC 2ನೇ ನ್ಯಾಯಾಲಯ ಎಲ್​​​ಪಿಸಿ ವಾರೆಂಟ್ ಹೊರಡಿಸಿತ್ತು. 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆಂಧ್ರಪ್ರದೇಶ ರಾಜ್ಯದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆ ಎಂಬಲ್ಲಿ ಬಂಧಿಸಲಾಗಿದೆ. ಸದ್ಯ ಆರೋಪಿಯ ಪತ್ತೆ ಕಾರ್ಯ ನಡೆಸಿದ ಉರ್ವ ಪೊಲೀಸ್ ತಂಡಕ್ಕೆ ಪೊಲೀಸ್ ಕಮೀಷನರ್ ಪ್ರಶಂಸೆ ವ್ಯಕ್ತಪಡಿಸಿದ್ದು, ಹೆಚ್ಚಿನ ಬಹುಮಾನಕ್ಕಾಗಿ ರಾಜ್ಯದ ಡಿಜಿ ಮತ್ತು ಐಜಿಪಿಗೆ ಶಿಫಾರಸ್ಸು ಮಾಡಿದ್ದಾರೆ.

ನ್ಯಾಯಾಲಯದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ 5ನೇ ಹೆಚ್ಚುವರಿ ಕೋರ್ಟ್​ನಲ್ಲೇ ವ್ಯಕ್ತಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಾವು ಮಣಿಯಡ್ಕ ನಿವಾಸಿ ರವಿ(35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತಕ್ಷಣ ರವಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಿ ಶಿಫ್ಟ್ ಮಾಡಲಾಗಿದೆ.​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಜೀವನದಲ್ಲಿ ಸದಾ ಸಂತೋಷವಾಗಿರಲು ಚಾಣಕ್ಯರ ಈ ಸರಳ ಸೂತ್ರವನ್ನು ಪಾಲಿಸಿ – Kannada News | Chanakya Niti: Follow this simple formula of Chanakya to always be happy in life

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.  ಅವರ ಈ ತತ್ವ, ಮಾರ್ಗದರ್ಶನಗಳನ್ನು ಸರಿಯಾಗಿ ಅನುಸರಿಸಿದರೆ, ಒಬ್ಬ ವ್ಯಕ್ತಿ ಯಶಸ್ವಿ, ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು. ಇದೇ ರೀತಿ ನೀವು ಸಹ ಶಾಂತಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಬಯಸುವಿರಾ? ಹಾಗಿದ್ರೆ ಈ ಸರಳ ಸೂತ್ರಗಳನ್ನು ಪಾಲಿಸಿ. ಇದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ.

ಜೀವನದಲ್ಲಿ ಸಂತೋಷ ನೆಲೆಸಲು ಈ ಸೂತ್ರಗಳನ್ನು ಅನುಸರಿಸಿ:

ಸಕಾರಾತ್ಮಕ ಚಿಂತನೆಯನ್ನು ಇಟ್ಟುಕೊಳ್ಳಿ: ನೀವು ಸಂತೋಷವಾಗಿರಲು ಬಯಸಿದರೆ, ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಎಷ್ಟೇ ಸವಾಲುಗಳನ್ನು ಎದುರಿಸಿದರೂ, ಪ್ರತಿಯೊಂದು ಸನ್ನಿವೇಶದ ಸಕಾರಾತ್ಮಕ ಬದಿಯನ್ನು ನೋಡಲು ಪ್ರಯತ್ನಿಸಿ. ನಕಾರಾತ್ಮಕ ಚಿಂತನೆಯು ನಿಮ್ಮ ಒತ್ತಡ ಮತ್ತು ಅತೃಪ್ತಿಯನ್ನು ಮಾತ್ರ ಹೆಚ್ಚಿಸುತ್ತದೆ ಆದರೆ ಸಕಾರಾತ್ಮಕ ಚಿಂತನೆಯು ಪ್ರತಿಯೊಂದು ಸನ್ನಿವೇಶದಲ್ಲಿಯೂ ಪರಿಹಾರ ಮತ್ತು ತೃಪ್ತಿಯ ಮಾರ್ಗವನ್ನು ತೋರಿಸುತ್ತದೆ.ಹಾಗಾಗಿ ಯಾವಾಗಲೂ ಪಾಸಿಟಿವ್‌ ಆಗಿರಿ.

ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ: ನಾವು ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ತಪ್ಪನ್ನು ಮಾಡುತ್ತೇವೆ. ಚಾಣಕ್ಯರ ಪ್ರಕಾರ, ಈ ಸಣ್ಣ ಅಭ್ಯಾಸವು ವ್ಯಕ್ತಿಯ ಎಲ್ಲಾ ಸಂತೋಷವನ್ನು ಕಸಿದುಕೊಳ್ಳಬಹುದು. ಹಾಗಾಗಿ ಯಾವುದೇ ಕಾರಣಕ್ಕೂ ನಿಮ್ಮ ಜೀವನವನ್ನು ಇತರರೊಂದಿಗೆ ಹೋಲಿಕೆ ಮಾಡಬೇಡಿ. ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿದಾಗ, ನಿಮ್ಮ ಮನಸ್ಸು ಹಗುರವಾಗುತ್ತದೆ ಮತ್ತು ನೀವು ಸಂತೋಷವಾಗಿರಲು ಪ್ರಾರಂಭಿಸುತ್ತೀರಿ.

ಸರಳ ಮತ್ತು ಸಮತೋಲಿತ ಜೀವನವನ್ನು ನಡೆಸಿ:

ಭೌತಿಕ ವಸ್ತುಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವುದು ಎಂದಿಗೂ ಸರಿಯಲ್ಲ ಅಂತಹ ವಿಷಯಗಳು ನಿಮಗೆ ಕೇವಲ ತಾತ್ಕಾಲಿಕ ಸಂತೋಷವನ್ನು ತರಬಹುದು. ಆದರೆ ಸರಳ ಮತ್ತು ಸಮತೋಲಿತ ಜೀವನವು ನಿಮಗೆ ನಿಜವಾದ ಸಂತೋಷವನ್ನು ತರಬಹುದು. ನೀವು ಅತಿಯಾದ ಆಸೆಗಳನ್ನು ಮತ್ತು ದುರಾಸೆಯನ್ನು ಹೊಂದಿದಾಗ, ನೀವು ಮಾನಸಿಕವಾಗಿ ಅಶಾಂತರಾಗುತ್ತೀರಿ. ಇದರಿಂದ ನಿಮಗೆ ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ. ಅದೇ  ನಿಮ್ಮಲ್ಲಿರುವದರಲ್ಲಿ ನೀವು ತೃಪ್ತರಾಗಲು ಕಲಿತಾಗ ನೀವು ಸಂತೋಷವಾಗಿರುತ್ತೀರಿ ಎಂದು ಚಾಣಕ್ಯ ಹೇಳುತ್ತಾರೆ.

ಇದನ್ನೂ ಓದಿ: ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ

ಉತ್ತಮ ಸ್ನೇಹಿತ, ಸಂಗಾತಿಯನ್ನು ಆರಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನಿಮ್ಮ ಸ್ನೇಹಿತರು ಮತ್ತು ಸಂಗಾತಿ ನಿಮ್ಮ ಜೀವನದ ಮೇಲೆ ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯ ಮೇಲೂ ಆಳವಾದ ಪರಿಣಾಮ ಬೀರುತ್ತಾರೆ. ಆದ್ದರಿಂದ ಉತ್ತಮ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಆಯ್ಕೆ ಮಾಡಿ, ಉತ್ತಮ ವ್ಯಕ್ತಿಗಳ ಸ್ನೇಹ ಬೆಳೆಸಿ. ಜೀವನದಲ್ಲಿ ಸಂತೋಷವಾಗಿರಲು, ನೀವು ಸಕಾರಾತ್ಮಕ ಮತ್ತು ಪ್ರೇರಣಾದಾಯಕ ಜನರೊಂದಿಗೆ ನೀವು ಇರಬೇಕು. ಅದೇ ನಕಾರಾತ್ಮಕ ಜನರು ಮತ್ತು ಇತರರನ್ನು ನಿರಂತರವಾಗಿ ಟೀಕಿಸುವವರು ನಿಮ್ಮ ಸಂತೋಷವನ್ನೇ ಕಸಿದುಕೊಳ್ಳುತ್ತಾರೆ.

ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ: ಚಾಣಕ್ಯರ ಪ್ರಕಾರ, ಸಮಯಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ. ಸಮಯವನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸಬೇಕೆಂದು ತಿಳಿದಿರುವವರು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರುತ್ತಾರೆ  ಮತ್ತು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಹಾಗಾಗಿ ನೀವು ನಿಮ್ಮ ಜೀವನದ ಪ್ರತಿ ಕ್ಷಣವನ್ನೂ ಸಹ ಒಳ್ಳೆಯ ಕಾರ್ಯಗಳು ಮತ್ತು ಸಕಾರಾತ್ಮಕ ಆಲೋಚನೆಗಳಿಗೆ ಮೀಸಲಿಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link