Category Archives: Blog

Your blog category

Karnataka Weather Forecast: ತಿಂಗಳಾಂತ್ಯದವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ – Kannada News | IMD issues yellow And Orange alert for Karnataka Some Districts amid rain Till May 30

ಬೆಂಗಳೂರು, (ಮೇ 26): ಕರ್ನಾಟಕ(Karnataka) ಹಲವೆಡೆ ಪೂರ್ವ ಮುಂಗಾರು ಮಳೆ (Pre Monsoon) ಭರ್ಜರಿಯಾಗುತ್ತಿದ್ದು, ಇದು ಈ ತಿಂಗಳು ಅಂತ್ಯ ಅಂದರೆ ಜೂನ್ 30ರ ವರೆಗೂ ಮುಂದುವರೆಯಲಿದೆ.  ಹೌದು…ಜೂನ್ 3ರ ವರೆಗೂ ರಾಜ್ಯದ ವಿವಿದೆಡೆ ಗುಡುಗು, ಮಿಂಚು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಆಲಿಕಲ್ಲು ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ (ಮೇ 27) ‘ಯೆಲ್ಲೋ (Yellow Alert) ಹಾಗೂ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಮೇ 30ರ ವರೆಗೂ ಮಳೆ

ಮೇ 26 ರಿಂದ 28 ರವರೆಗೆ ಉತ್ತರ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.ದಕ್ಷಿಣ ಒಳನಾಡು ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಇನ್ನು ಮೇ 26 ರಿಂದ 30, 2026 ರವರೆಗೆ ಕರಾವಳಿ ಕರ್ನಾಟಕದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ: ವಿದ್ಯಾರ್ಥಿಗಳು, ಶಿಕ್ಷಕರಿಗೂ ಡಿಜಿಟಲ್ ಹಾಜರಿ ಕಡ್ಡಾಯ

ಬೆಂಗಳೂರು ನಗರಕ್ಕೆ ಮುನ್ಸೂಚನೆ

ಇಂದು (ಮೇ 26) ಸಂಜೆ ವೇಳೆಗೆ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಗಾಳಿಯೊಂದಿಗೆ (ಗಂಟೆಗೆ 30-40 ಕಿ.ಮೀ) ಹಗುರದಿಂದ ಮಧ್ಯಮ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್

ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 26 ಮತ್ತು 27ರಂದು ಭಾರೀ ಮಳೆ (64.5mm – 115.5mm) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಯೆಲ್ಲೊ ಅಲರ್ಟ್ ನೀಡಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮೇ 27 ರಂದು, ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 50-60 ಕಿಮೀ ತಲುಪುವ ಸಾದ್ಯತೆಯಿದ್ದು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ IMD ಆರೆಂಜ್‌ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ? – Kannada News | Human Creators Thrive Amidst AI Influencers: The Future of Trustworthy Brand Endorsements

AI ಇನ್‌ಫ್ಲುಯೆನ್ಸರ್ಸ್Image Credit source: Whosthat and Anandbazar

ಬೆಂಗಳೂರು, ಮೇ 26: ಇತ್ತೀಚಿನ ದಿನಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ತಮ್ಮ ಮಾರ್ಕೆಟಿಂಗ್ ಬಜೆಟ್ ಅನ್ನು ಮರುಹಂಚಿಕೆ ಮಾಡುತ್ತಿವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ, ಬ್ರ್ಯಾಂಡ್‌ಗಳು ಈಗ ನ್ಯಾನೋ ಮತ್ತು ಮೈಕ್ರೋ ಕಂಟೆಂಟ್ ಕ್ರಿಯೇಟರ್ಸ್‌ಗಳ ಬದಲಿಗೆ ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ವರ್ಚುವಲ್ ವ್ಯಕ್ತಿತ್ವಗಳನ್ನು (AI Influencers) ಬಳಸಿಕೊಳ್ಳಲು ಮುಂದಾಗುತ್ತಿವೆ. ಆದರೆ, ಮಾರುಕಟ್ಟೆಯಲ್ಲಿ ಇಂತಹ ಸಿಂಥೆಟಿಕ್ ಇನ್‌ಫ್ಲುಯೆನ್ಸರ್‌ಗಳ ಸಂಖ್ಯೆ ಹೆಚ್ಚುತ್ತಿದ್ದರೂ, ನೈಜ ಮತ್ತು ವಿಶ್ವಾಸಾರ್ಹ ಫಾಲೋವರ್ಸ್ ಹೊಂದಿರುವ ಹ್ಯೂಮನ್ ಕ್ರಿಯೇಟರ್ಸ್‌ಗಳಿಗೆ (ಕಂಟೆಂಟ್ ಸೃಷ್ಟಿಸುವ ವ್ಯಕ್ತಿಗಳು) ಬೇಡಿಕೆ, ಮೌಲ್ಯ ಹಾಗೂ ಸಂಭಾವನೆ ಮತ್ತಷ್ಟು ಹೆಚ್ಚುತ್ತಿದೆ ಎಂದು ದಿ ಮಿಂಟ್ ಪತ್ರಿಕೆಯ ವಿಶೇಷ ವರದಿಯಲ್ಲಿ ಹೇಳಲಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಟ್ಟ ‘ಮೈರಾ ಕಪೂರ್’ ಮತ್ತು ‘ಕೈರಾ’

ಖ್ಯಾತ ಕಾಂಡೋಮ್ ಬ್ರ್ಯಾಂಡ್ ‘ಮ್ಯಾನ್‌ಫೋರ್ಸ್’ ಇತ್ತೀಚೆಗೆ ‘ಮೈರಾ ಕಪೂರ್’ ಎಂಬಾಕೆಯನ್ನು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಆದರೆ ಅಚ್ಚರಿಯ ವಿಷಯವೆಂದರೆ, ಮೈರಾ ಎಂಬಾಕೆ ನಿಜವಾಗಿ ಅಸ್ತಿತ್ವದಲ್ಲೇ ಇಲ್ಲ! ಆಕೆ ಸಂಪೂರ್ಣವಾಗಿ ಬ್ರ್ಯಾಂಡ್ ಒಡೆತನದ ಒಂದು ಎಐ ಮಾಡೆಲ್.

“ಸಾಂಪ್ರದಾಯಿಕ ಅಂಬಾಸಿಡರ್‌ಗಳಿಗೆ ಹೋಲಿಸಿದರೆ, AI ಪಾತ್ರಗಳು (Character) ಹೆಚ್ಚಿನ ಕ್ರಿಯೇಟಿವಿಟಿಗೆ ಅವಕಾಶ (Creative flexibility) ನೀಡುತ್ತವೆ. ವಿವಿಧ ಪ್ರಚಾರಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಗೆ ತಕ್ಕಂತೆ ಇವುಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು” ಎಂದು ಮ್ಯಾನ್‌ಕೈಂಡ್ ಫಾರ್ಮಾ ಲಿಮಿಟೆಡ್‌ನ ಗ್ರಾಹಕ ವ್ಯವಹಾರಗಳ ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಜಾಯ್ ಚಟರ್ಜಿ ತಿಳಿಸಿದ್ದಾರೆ. ಸಂಸ್ಥೆಯು ಮುಂದಿನ ದಿನಗಳಲ್ಲಿ ಕಂಟೆಂಟ್ ರಚನೆ ಮತ್ತು ಗ್ರಾಹಕರ ಸಂವಹನಕ್ಕಾಗಿ ಎಐ ಉಪಕರಣಗಳನ್ನು ವ್ಯಾಪಕವಾಗಿ ಬಳಸಲು ಯೋಜಿಸಿದೆ.

ಇದನ್ನೂ ಓದಿ: ಏರ್ಟೆಲ್​ನಿಂದ ಕಮರ್ಷಿಯಲ್ 5ಜಿ ನೆಟ್ವರ್ಕ್ ಸ್ಲೈಸಿಂಗ್ ಸರ್ವಿಸ್; ಉತ್ತಮ ವೇಗಕ್ಕೆ ಪ್ರೀಮಿಯಮ್ ದರ?

ಇದೇ ಹಾದಿಯಲ್ಲಿ, ಪ್ರಸಿದ್ಧ ಐಸ್‌ಕ್ರೀಮ್ ತಯಾರಕ ಸಂಸ್ಥೆ ‘ವಾಡಿಲಾಲ್’ ಮಾನವ ಮತ್ತು ಎಐ ಮಿಶ್ರಣದ ‘ವ್ಯಾಡಿ’ (Vaddy) ಎಂಬ ಮ್ಯಾಸ್ಕಾಟ್ ಅನ್ನು ಬಿಡುಗಡೆ ಮಾಡಿದೆ. ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್ ‘ಕ್ಯಾರಟ್‌ಲೇನ್’ (Carat Lane) ಎಐ ಇನ್‌ಫ್ಲುಯೆನ್ಸರ್ ‘ಕೈರಾ’ (Kyra) ಜೊತೆ ಅಭಿಯಾನ ನಡೆಸಿದ್ದರೆ, ಮತ್ತೊಂದು ಜನಪ್ರಿಯ ಎಐ ಇನ್‌ಫ್ಲುಯೆನ್ಸರ್ ‘ನೈನಾ’ (Naina) ಈಗಾಗಲೇ ಒಪ್ಪೋ, ಕೋಟಕ್ ಮತ್ತು ಸೋಫಿ ಅಂತಹ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದೆ.

ದೀರ್ಘಾವಧಿಯ ತಂತ್ರಗಾರಿಕೆ

‘ನೈನಾ’ ಎಐ ಪಾತ್ರವನ್ನು ಸೃಷ್ಟಿಸಿದ ‘ಅವತಾರ್ ಮೆಟಾ ಲ್ಯಾಬ್ಸ್’ನ ಸಹ-ಸ್ಥಾಪಕ ಅಭಿಷೇಕ್ ರಜ್ದಾನ್ ಮಾತನಾಡಿ, “ಹಿಂದೆ ಎಐ ಇನ್‌ಫ್ಲುಯೆನ್ಸರ್‌ಗಳನ್ನು ಕೇವಲ ಒಂದು ಪ್ರಚಾರದ ಪ್ರಯೋಗವಾಗಿ ನೋಡಲಾಗುತ್ತಿತ್ತು. ಆದರೆ ಇಂದು ಬ್ರ್ಯಾಂಡ್‌ಗಳು ಇದನ್ನು ದೀರ್ಘಾವಧಿಯ ವಿಷಯ ಮತ್ತು ಸಂವಹನ ತಂತ್ರವಾಗಿ ಪರಿಗಣಿಸುತ್ತಿವೆ,” ಎಂದಿದ್ದಾರೆ.

ಇದನ್ನೂ ಓದಿ: ವಿದೇಶೀ ಹೂಡಿಕೆದಾರರು ಸದ್ಯಕ್ಕೆ ಭಾರತಕ್ಕೆ ಬರಲ್ಲ ಎಂದ ಅಮರ್ ಅಂಬಾನಿ; ಎಫ್​ಐಐಗಳ ಆಗನಕ್ಕೆ ಬೇಕು ಈ 3 ಕಾರಣಗಳು

ಆದರೆ, ಕೇವಲ ಎಐ ತಂತ್ರಜ್ಞಾನವಿದ್ದರೆ ಸಾಲದು, ಅದಕ್ಕೆ ಸಾಂಸ್ಕೃತಿಕ ಪ್ರಸ್ತುತತೆ ಮತ್ತು ಬಲವಾದ ಕಥೆ ಹೇಳುವ ಶೈಲಿ (Storytelling) ಬೇಕು. ಭವಿಷ್ಯದಲ್ಲಿ ಎಐ ಇನ್‌ಫ್ಲುಯೆನ್ಸರ್‌ಗಳು ಕೇವಲ ಪುನರಾವರ್ತಿತ ಬ್ರ್ಯಾಂಡ್ ಸಂವಹನಗಳನ್ನು ನಿಭಾಯಿಸಲಿದ್ದಾರೆ. ಆದರೆ ನೈಜ ವಿಶ್ವಾಸಾರ್ಹತೆಗಾಗಿ ಮಾನವ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಭಾರತದಲ್ಲಿ ವರದಕ್ಷಿಣೆ ಎಂಬ ಅನಿಷ್ಠ ಪದ್ಧತಿ ಹೇಗೆ ಆರಂಭವಾಯಿತು? – Kannada News | How did the dowry system start? Here is information about it

ನಮ್ಮ ಭಾರತದಲ್ಲಿ ವರದಕ್ಷಿಣೆ ಪದ್ಧತಿ (dowry system) ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ವರದಕ್ಷಿಣೆ ತೆಗೆದುಕೊಳ್ಳುವುದು ಮತ್ತು ಕೊಡುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ ಸಹ ಇಂದಿಗೂ ಅದೆಷ್ಟೋ ಕಡೆ ವರದಕ್ಷಿಣೆಯೆಂಬ ಅನಿಷ್ಟ ಪಿಡುಗು ಜೀವಂತವಾಗಿದೆ. ಈ ಪಿಡುಗಿಗೆ ಅದೆಷ್ಟೋ ಮುಗ್ಧ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಇತ್ತೀಚಿಗಷ್ಟೇ ಭೋಪಾಲ್‌ನ  33 ವರ್ಷದ  ತ್ವಿಷಾ ಶರ್ಮಾ ಹಾಗೂ ಗ್ರೇಟರ್‌ ನೋಯ್ಡದ 24 ವರ್ಷದ ದೀಪಿಕಾ ನಾಗರ್‌ ಎಂಬ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗೆ ಎಷ್ಟೋ ಹೆಣ್ಣು ಮಕ್ಕಳು ವರದಕ್ಷಿಣೆ ಪಿಡುಗಿಗೆ ಬಲಿಯಾಗಿದ್ದಾರೆ. ಹೆಣ್ಣು ಮಕ್ಕಳ ಜೀವ ಕಸಿಯುತ್ತಿರುವ ಈ ಅನಿಷ್ಟ ಪಿಡುಗು ಪ್ರಾರಂಭವಾದದ್ದು ಹೇಗೆ ಗೊತ್ತಾ? ಈ ಕುರಿತ ಕೂತೂಹಲಕಾರಿ ಮಾಹಿತಿ ಇಲ್ಲಿದೆ.

ಭಾರತದಲ್ಲಿ ವರದಕ್ಷಿಣೆ ಪದ್ಧತಿ ಆರಂಭವಾದ್ದು ಹೇಗೆ?

ವರದಕ್ಷಿಣೆ ಯಾವಾಗ ಪ್ರಾರಂಭವಾಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ. ನಾವು ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಇದು ಆರಂಭದಲ್ಲಿ ಸಾಮಾಜಿಕ ಪಿಡುಗು ಆಗಿರಲಿಲ್ಲ, ಬದಲಿಗೆ ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗವಾಗಿತ್ತು. ಆದರೆ ಕಾಲ ಕ್ರಮೇಣ ವರದಕ್ಷಿಣೆ ಹೆಣ್ಣು ಮಕ್ಕಳ ಜೀವ ಕಸಿಯುವ ಅನಿಷ್ಟ ಪಿಡುಗಾಯಿತು.

ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ಮಾರ್ಗ:

ಪ್ರಾಚೀನ ಭಾರತದಲ್ಲಿ ಅಥವಾ ವೈದಿಕ ಕಾಲದಲ್ಲಿ, ಇಂದು ಪ್ರಚಲಿತದಲ್ಲಿರುವ ದುರಾಸೆಯ ವರದಕ್ಷಿಣೆ ವ್ಯವಸ್ಥೆ ಅಸ್ತಿತ್ವದಲ್ಲಿರಲಿಲ್ಲ. ಹಿಂದೂ ಧರ್ಮಗ್ರಂಥಗಳು ಆ ಸಮಯದಲ್ಲಿ ಕನ್ಯಾದಾನ (ಮಗಳನ್ನು ದಾನ) ಜೊತೆಗೆ ದಕ್ಷಿಣೆ (ಉಡುಗೊರೆಗಳು) ನೀಡುವ ಪದ್ಧತಿಯನ್ನು ಉಲ್ಲೇಖಿಸುತ್ತವೆ. ಒಬ್ಬ ಹುಡುಗಿ ಮದುವೆಯಾದಾಗ, ಮದುವೆಯ ನಂತರ ತನ್ನ ತಂದೆಯ ಆಸ್ತಿಯ ಒಂದು ಭಾಗವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದಳು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಇಡೀ ವ್ಯವಸ್ಥೆಯನ್ನು ಮಹಿಳೆಯರೇ ಮಹಿಳೆಯರಿಗಾಗಿ ನಡೆಸುತ್ತಿದ್ದರು. ಮದುವೆಯ ಸಮಯದಲ್ಲಿ ಪಡೆದ ಹಣ ಮತ್ತು ಅಮೂಲ್ಯ ಉಡುಗೊರೆಗಳನ್ನು ವರ ಅಥವಾ ಅವನ ಕುಟುಂಬಕ್ಕೆ ಅಲ್ಲ, ವಧುವಿಗೆ ನೇರವಾಗಿ ನೀಡಲಾಗುತ್ತಿತ್ತು. ಈ ಮೂಲಕ ಮಹಿಳೆಯರಿಗೆ ಸಮಾಜದಲ್ಲಿ ಆರ್ಥಿಕ ಬೆಂಬಲ, ಸ್ವಾತಂತ್ರ್ಯವನ್ನು ನೀಡಲಾಯಿತು.

ಸಮಾಜದಲ್ಲಿ ಹೆಮ್ಮೆಯ ಸಂಕೇತ:

ಕಾಲ ಬದಲಾಯಿತು, ಮತ್ತು ಮಧ್ಯಯುಗದ ವೇಳೆಗೆ, ಈ ವರದಕ್ಷಿಣೆ ಪದ್ಧತಿ ಸಂಪೂರ್ಣವಾಗಿ ಬದಲಾಯಿತು.  ರಾಜರು, ಚಕ್ರವರ್ತಿಗಳು ಮತ್ತು ಶ್ರೀಮಂತ ಕುಟುಂಬಗಳ ಯುಗದ ವೇಳೆ, ನಿರ್ದಿಷ್ಟವಾಗಿ ರಜಪೂತ ಕುಟುಂಬಗಳು ತಮ್ಮ ಹೆಣ್ಣುಮಕ್ಕಳ ವಿವಾಹದ ಜೊತೆಗೆ ದೊಡ್ಡ ಮೊತ್ತದ ಹಣ, ಆಭರಣಗಳು ಮತ್ತು ಸೇವಕರನ್ನು ವರದಕ್ಷಿಣೆಯ ರೂಪದಲ್ಲಿ ಗಂಡಿನ ಮನೆಗೆ  ಕಳುಹಿಸಲು ಪ್ರಾರಂಭಿಸಿದವು, ಈ ಪದ್ಧತಿಯು ಪ್ರತಿಷ್ಠೆಯ ಸಂಕೇತವಾಗಿ ಬದಲಾಯಿತು. ಈ ವಿವಾಹಗಳಿಂದ ಪಡೆದ ಅಪಾರ ವರದಕ್ಷಿಣೆಯು ರಾಜಮನೆತನದ ಖಜಾನೆಯನ್ನು ಶ್ರೀಮಂತಗೊಳಿಸಿತು ಮತ್ತು ಈ ಪದ್ಧತಿ ಮುಸ್ಲಿಂ ಸಮುದಾಯಕ್ಕೂ ಹರಡಿತು. ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಜವಾಬ್ದಾರಿಯಿಂದ ಬೇಗನೆ ಮುಕ್ತರಾಗಲು, ಪೋಷಕರು ದೊಡ್ಡ ಮೊತ್ತದ ವರದಕ್ಷಿಣೆಯನ್ನು ನೀಡಲು ಪ್ರಾರಂಭಿಸಿದರು. ನಂತರದಲ್ಲಿ ವರದಕ್ಷಿಣೆಯೆಂಬ ಪಿಡುಗು ಸಮಾಜದಲ್ಲಿ  ಮತ್ತಷ್ಟು ಬೇರೂರಿತು.

ಇದನ್ನೂ ಓದಿ: ಚೀನಾದ ಜನರು ಜಿರಳೆಗಳನ್ನು ತಿನ್ನೋದೇಕೆ? ಇದರ ಹಿಂದಿನ ಕಾರಣವೇನು ಗೊತ್ತಾ?

ವರದಕ್ಷಿಣೆ ಸಮಾಜಿಕ ಪಿಡುಗಾಗಿ ಬದಲಾಯಿತು:

ವಿವಾಹಿತ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಒಂದು ಮಾರ್ಗವಾಗಿ ಸ್ಥಾಪಿಸಲಾದ ವರದಕ್ಷಿಣೆ ವ್ಯವಸ್ಥೆಯು ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಸಾಮಾಜಿಕ ಪಿಡುಗಾಗಿ ಬದಲಾಯಿತು. ಈ ಸಮಯದಲ್ಲಿ ಬ್ರಿಟಿಷರು ಮಹಿಳೆಯರ ಸ್ಥಾನವನ್ನು ತೀವ್ರವಾಗಿ ದುರ್ಬಲಗೊಳಿಸುವ ಕಾನೂನನ್ನು ಜಾರಿಗೆ ತಂದರು. ಈ ನಿಯಮವು ಮಹಿಳೆಯರು ಯಾವುದೇ ಆಸ್ತಿಯನ್ನು ಹೊಂದುವುದನ್ನು ಸಂಪೂರ್ಣವಾಗಿ ನಿಷೇಧಿಸಿತು. ಪರಿಣಾಮವಾಗಿ, ಮದುವೆಯ ನಂತರ ವಧು ತನ್ನ ಹೆತ್ತವರಿಂದ ಪಡೆದ ಯಾವುದೇ ಹಣ ಅಥವಾ ಆಸ್ತಿಯು ಕಾನೂನುಬದ್ಧವಾಗಿ ಅವಳ ಗಂಡನ ಒಡೆತನಕ್ಕೆ ಹೋಗಲು ಪ್ರಾರಂಭಿಸಿತು. ಇದು ಹಳೆಯ ಸಂಪ್ರದಾಯವನ್ನು ದುರಾಸೆಯ ಅಪಾಯಕಾರಿ ಆಟವಾಗಿ ಪರಿವರ್ತಿಸಿತು. ಇದರ ಬಳಿಕ ವರನ ಕುಟುಂಬಗಳು ತಮ್ಮ ಮನೆಗೆ ಬರುವ  ವಧುವನ್ನು ಸೊಸೆಯಾಗಿ ನೋಡದೆ ಹಣ, ಆಸ್ತಿಯನ್ನು ಕೊಡುವ ವಸ್ತುವಾಗಿ ನೋಡಲು ಪ್ರಾರಂಭಿಸಿದವು. ಹಣ, ಆಸ್ತಿ, ಬಂಗಾರ ಸೇರಿದಂತೆ ದುಬಾರಿ ವಸ್ತುಗಳ ಸಲುವಾಗಿ ವರದಕ್ಷಿಣೆಯ ಹೆಸರಲ್ಲಿ ಹೆಣ್ಣಿಗೆ ಚಿತ್ರಹಿಂಸೆಯನ್ನು ಕೊಡಲು ಪ್ರಾರಂಭಿಸಿದವು.

ಈ ರೀತಿಯಾಗಿ, ಒಂದು ಕಾಲದಲ್ಲಿ ಮಗಳನ್ನು ತನ್ನ ಹೊಸ ಮನೆಯಲ್ಲಿ ಆರ್ಥಿಕವಾಗಿ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿಡಲು ಪ್ರಾರಂಭಿಸಲಾದ ವರದಕ್ಷಿಣೆ ಪದ್ಧತಿ, ಇಂದು ಹೆಣ್ಣು ಮಕ್ಕಳ ಜೀವ ಕಸಿಯುತ್ತವೆ. 1961 ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕವೂ ಇಂದಿಗೂ ಆಧುನಿಕ ಸಮಾಜದಲ್ಲಿ ವರದಕ್ಷಿಣೆಯೆಂಬ ಪಿಡುಗು ಜೀವಂತವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೋಲಾರದಲ್ಲಿ ಮುಂದುವರೆದ ಕೃಷಿ ಹೊಂಡ ಸಾವಿನ ಸರಣಿ: 20 ದಿನದಲ್ಲಿ ಮಕ್ಕಳು ಸೇರಿ 9 ಜನ ಸಾವು – Kannada News | Kolar Farm Pond Tragedy: 9 Deaths Including Children Reported in Just 20 Days

ಕೋಲಾರ, ಮೇ 26: ಜಿಲ್ಲೆಯಲ್ಲಿ ಕೃಷಿ ಹೊಂಡಗಳು (Farm Ponds) ಅಕ್ಷರಶಃ ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ನಿನ್ನೆ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮತ್ತೆ ಇಬ್ಬರು ಸಹೋದರರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ನಡೆದಿದೆ. ಆ ಮೂಲಕ ಕಳೆದ ಇಪ್ಪತ್ತು ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರು ಮೃತಪಟ್ಟಿದ್ದಾರೆ. ಕೃಷಿಹೊಂಡಗಳಿಗೆ ತಂತಿ ಬೇಲಿ ಅಳವಡಿಸಿ, ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶದ ನಡುವೆಯೂ ಸಾವಿನ ಸರಣಿ ಮುಂದುವರೆದಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ ಮೃತ್ಯು ಕೂಪವಾದ ಕೃಷಿ ಹೊಂಡಗಳು
  • ಕಳೆದ 20 ದಿನದಲ್ಲಿ ಕೃಷಿ ಹೊಂಡದಲ್ಲಿ ಬಿದ್ದು 9 ಜನರ ಸಾವು
  • ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ

ತಾತನ ಮನೆಗೆ ಬಂದಿದ್ದ ಅಣ್ಣತಮ್ಮ ಕೃಷಿ ಹೊಂಡಕ್ಕೆ ಬಿದ್ದು ಸಾವು

ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರ ಸಂಖ್ಯೆ ಏರಿಕೆ ಆಗುತ್ತಿದೆ. ಕೃಷಿ ಹೊಂಡಗಳಿಗೆ ಮುಳ್ಳುತಂತಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂಆರ್​​ ರವಿ ಒಂದು ವಾರದ ಗಡುವು ನೀಡಿದ್ದರು. ಒಂದು ವಾರದ ನಂತರವೂ ಸಾವಿನ ಸರಣಿ ಮುಂದುವರೆದಿದೆ. ನಿನ್ನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಬಳಿ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ಮುಳುಗಿ ಇಬ್ಬರು ಸಹೋದರರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಮೃತ್ಯುಕೂಪವಾದ ಕೃಷಿ ಹೊಂಡಗಳು: 15 ದಿನದಲ್ಲಿ 7 ಮಂದಿ ಸಾವು

ದೇವಕಿರಣ್(12) ಮತ್ತು ವಿನುತ್​(9) ಮೃತ ಸಹೋದರರು. ಬಾಲಕರು ವಸತಿ ಶಾಲೆಯಲ್ಲಿ ಓದುತ್ತಿದ್ದರು. ಬೇಸಿಗೆ ರಜೆ ಹಿನ್ನೆಲೆ ತಾತನ ಮನೆಗೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದು ಮೃತರಾದವ ವಿವರ

  • ಮೇ-5ರಂದು ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಗ್ರಾಮದ ತನುಶ್ರೀ(15) ಮತ್ತು ಕಾರ್ತಿಕ್ (8) ಮೃತಪಟ್ಟಿದ್ದರು.
  • ಮೇ-8ರಂದು ಶ್ರೀನಿವಾಸಪುರ ‌ತಾಲ್ಲೂಕಿನ ಪಚ್ಚರಮಾಕಲಹಳ್ಳಿಯಲ್ಲಿ ಈಜಲು ಹೋಗಿದ್ದ ನರೇಂದ್ರ (25) ಮತ್ತು ಚಂದನ್ (24) ಮೃತಪಟ್ಟಿದ್ದರು.
  • ಮೇ- 17ರಂದು ಜಿಲ್ಲೆಯ ಮಾಲೂರು ತಾಲ್ಲೂಕು ನಕ್ಕನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸ್ (40), ಮಕ್ಕಳಾದ ಚೇತನ್ (13) ಹಾಗೂ ರಾಜೇಶ್ (8) ಸಾವನ್ನಪ್ಪಿದ್ದರು.
  • ಮೇ-25ರಂದು ಮಾಲೂರು ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಸೋದರರಾದ ದೇವಿಕಿರಣ್ (12) ಹಾಗೂ ವಿನುತ್(9) ಸಾವನ್ನಪ್ಪಿದ್ದರು. ಸದ್ಯ ಸುರಕ್ಷತಾ ಕ್ರಮಕೈಗೊಳ್ಳದ ಕೃಷಿಹೊಂಡ ಮುಚ್ಚಲು ಜಿಲ್ಲಾಧಿಕಾರಿ ಖಡಕ್​ ಸೂಚನೆ ನೀಡಿದ್ದಾರೆ.

ಹೈವೇಯಲ್ಲಿ ಮತ್ತೊಂದು ಅಪಘಾತ: ಬಾಲಕ ಸಾವು

ಕೋಲಾರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿದ್ದು, ನಾಲ್ಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ನಡೆದಿದೆ. ಬಂಗಾರಪೇಟೆ ಮೂಲದ ಮುಜಾಮಿಲ್ (9) ಮೃತ ಬಾಲಕ. ಇನೋವಾ ಕಾರಿನಲ್ಲಿದ್ದ ನಾಲ್ಕು ಜನರಿಗೆ ಗಾಯಗಾಳಾಗಿವೆ.

ಇದನ್ನೂ ಓದಿ: ಗಡಿಪಾರಾಗಿದ್ದ ರೌಡಿಯನ್ನು ಮಗಳ ಮದುವೆ ಮಂಟಪದಿಂದಲೇ ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದ ಪೊಲೀಸರು: ವಿಡಿಯೋ ವೈರಲ್

ಗಾಯಾಳುಗಳಾದ ಸಯ್ಯದ್ ಉಲ್ಲಾ, ಸಯ್ಯದ್ ಅಫ್ರಿದ್, ಯಾಸ್ಮಿನ್ ಹಾಗೂ ಅಸೀಬಾರನ್ನು ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ? – Kannada News | Ranveer Singh visited Chamundi temple to asks apology as per High Court order

ನಟ ರಣ್ವೀರ್ ಸಿಂಗ್ (Ranveer Singh) ಕೆಲ ತಿಂಗಳ ಹಿಂದೆ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ಕಾಂತಾರ’ ಸಿನಿಮಾದ ಅನುಕರಣೆ ಮಾಡುತ್ತಾ ತುಳು ನಾಡಿನ ದೈವವನ್ನು ಕೆಟ್ಟದಾಗಿ ಅನುಕರಣೆ ಮಾಡಿದ್ದರು. ಅದರ ವಿರುದ್ಧ ಪ್ರಕರಣ ದಾಖಲಾಗಿ, ಕರ್ನಾಟಕ ಹೈಕೋರ್ಟ್​​ನಲ್ಲಿ ವಿಚಾರಣೆ ಸಹ ನಡೆದಿತ್ತು. ನ್ಯಾಯಾಲಯವು, ರಣ್ವೀರ್ ಸಿಂಗ್ ಮಾಡಿದ್ದು ತಪ್ಪೆಂದು ಅಭಿಪ್ರಾಯ ವ್ಯಕ್ತಪಡಿಸಿ, ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಕೇಳಬೇಕೆಂದು ಸೂಚಿಸಿತ್ತು. ಅಂತೆಯೇ ಇದೀಗ ನಟ ರಣ್ವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು ದೈವಕ್ಕೆ ಅಪಮಾನ ಎಸಗಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Online Job Scams: ಉದ್ಯೋಗಾಕಾಂಕ್ಷಿಗಳೇ ಎಚ್ಚರ! ಯುವಜನತೆಯನ್ನೇ ಗುರಿಯಾಗಿಸುತ್ತಿವೆ ಆನ್‌ಲೈನ್ ಜಾಬ್ ಸ್ಕ್ಯಾಮ್‌ಗಳು – Kannada News | Online Job Scams: How Gen Z Falls Prey and Safety Tips for Digital Recruitment

ಉದ್ಯೋಗಾಕಾಂಕ್ಷಿಗಳೇ ಎಚ್ಚರImage Credit source: Pinterest

ಇಂದಿನ ಡಿಜಿಟಲ್ ಯುಗದಲ್ಲಿ ಉದ್ಯೋಗದ ಹುಡುಕಾಟ ಮೊಬೈಲ್ ಅಥವಾ ಕಂಪ್ಯೂಟರ್ ಪರದೆಯ ಒಂದು ಸ್ಕ್ರೋಲ್‌ನೊಂದಿಗೆ ಪ್ರಾರಂಭವಾಗುತ್ತದೆ. ಆಕರ್ಷಕ ಸಂಬಳ, ಪ್ರಮುಖ ಹುದ್ದೆ, ಮತ್ತು ತಕ್ಷಣದ ನೇಮಕಾತಿಯ ಭರವಸೆ ನೀಡುವ ಜಾಹೀರಾತುಗಳು ನಿರುದ್ಯೋಗಿ ಯುವಕರಿಗೆ ಆಶಾಕಿರಣದಂತೆ ಕಾಣಿಸುತ್ತವೆ. ಆದರೆ, ಇದೇ ಆಸೆಗಳನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ಯುವ ಪೀಳಿಗೆಯನ್ನು ಅಪಾಯಕಾರಿ ಜಾಲಕ್ಕೆ ಎಳೆಯುತ್ತಿದ್ದಾರೆ. ಇತ್ತೀಚಿನ ಲಿಂಕ್ಡ್‌ಇನ್ (LinkedIn) ಸಮೀಕ್ಷೆಯ ಪ್ರಕಾರ, ಭಾರತದ ‘ಜೆನ್-ಝಿ’ (Gen Z – ಅಂದರೆ 1997 ರಿಂದ 2012ರ ನಡುವೆ ಜನಿಸಿದ ಯುವ ಪೀಳಿಗೆ) ಉದ್ಯೋಗಾಕಾಂಕ್ಷಿಗಳಲ್ಲಿ ಸುಮಾರು ಅರ್ಧದಷ್ಟು ಮಂದಿ ಇಂತಹ ಆನ್‌ಲೈನ್ ಉದ್ಯೋಗ ವಂಚನೆಗಳ ಸುಳಿಗೆ ಸಿಲುಕಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ತಂತ್ರಜ್ಞಾನ ತಿಳಿದಿದ್ದರೂ ವಂಚನೆಗೆ ಒಳಗಾಗುತ್ತಿರುವುದು ಏಕೆ?

ಇಂದಿನ ಯುವ ಪೀಳಿಗೆ ಇಂಟರ್ನೆಟ್, ಸಾಮಾಜಿಕ ಜಾಲತಾಣಗಳು ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಅತ್ಯಂತ ನಿಪುಣರಾಗಿದ್ದಾರೆ. ಆದಾಗ್ಯೂ, ವಂಚಕರ ಮಾನಸಿಕ ತಂತ್ರಗಳಿಗೆ ಇವರು ಬಲಿಯಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣಗಳು:

ತೀವ್ರ ಪೈಪೋಟಿ ಮತ್ತು ನಿರುದ್ಯೋಗದ ಭಯ:

ಮಾರುಕಟ್ಟೆಯಲ್ಲಿ ಉದ್ಯೋಗಗಳ ಕೊರತೆ ಮತ್ತು ಶೀಘ್ರವಾಗಿ ನೆಲೆಕಾಣಬೇಕೆಂಬ ಒತ್ತಡ ಯುವಕರಲ್ಲಿ ಹೆಚ್ಚಾಗಿದೆ.

ತಪ್ಪಿಹೋಗುವ ಭಯ (FOMO):

ಸಮೀಕ್ಷೆಯಲ್ಲಿ ಶೇಕಡಾ 54 ರಷ್ಟು ಯುವಕರು, “ಒಳ್ಳೆಯ ಅವಕಾಶ ಕೈತಪ್ಪಿ ಹೋಗಬಹುದು” ಎಂಬ ಭಯದಿಂದ ಕಂಪನಿಗಳ ಹಿನ್ನೆಲೆಯನ್ನು ಪರಿಶೀಲಿಸದೆ ಮುಂದುವರಿದಿರುವುದಾಗಿ ಒಪ್ಪಿಕೊಂಡಿದ್ದಾರೆ.

ವಂಚಕರ ಹೊಸ ತಂತ್ರಗಳು (Modus Operandi):

ಹಳೆಯ ಕಾಲದಂತೆ ಈಗಿನ ವಂಚನೆಗಳು ಕಳಪೆ ಇಮೇಲ್‌ಗಳು ಅಥವಾ ನಕಲಿ ಭರವಸೆಗಳಿಗಷ್ಟೇ ಸೀಮಿತವಾಗಿಲ್ಲ. ಸೈಬರ್ ಅಪರಾಧಿಗಳು ಈಗ ಹೆಚ್ಚು ವೃತ್ತಿಪರರಾಗಿದ್ದಾರೆ. ಅವರು ನಿಜವಾದ ಕಂಪನಿಗಳಂತೆಯೇ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಅಧಿಕೃತ ಭಾಷೆಯನ್ನು ಬಳಸುತ್ತಾರೆ.

ಉದ್ಯೋಗದ ಪೋರ್ಟಲ್‌ಗಳಲ್ಲಿ (Job Portals) ಸಂವಹನ ಆರಂಭಿಸಿ, ನಂತರ ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಂತಹ ವೈಯಕ್ತಿಕ ಮೆಸೇಜಿಂಗ್ ಆ್ಯಪ್‌ಗಳಿಗೆ ಅಭ್ಯರ್ಥಿಗಳನ್ನು ಸೆಳೆಯುತ್ತಾರೆ. ವರದಿಯ ಪ್ರಕಾರ, ಶೇಕಡಾ 90 ರಷ್ಟು ಉದ್ಯೋಗ ವಂಚನೆಗಳು ಇಂತಹ ಖಾಸಗಿ ಚಾಟ್‌ಗಳ ಮೂಲಕವೇ ನಡೆಯುತ್ತಿವೆ.

ಆರಂಭಿಕ ಹಂತದ (Entry-level) ಉದ್ಯೋಗಗಳಿಗೆ ಸಾವಿರಾರು ಅರ್ಜಿಗಳು ಬರುವುದರಿಂದ ಮತ್ತು ಪ್ರಮುಖ ಕಂಪನಿಗಳಿಂದ ಪ್ರತಿಕ್ರಿಯೆ ಸಿಗುವುದು ತಡವಾಗುವುದರಿಂದ, ವಂಚಕರು ನೀಡುವ ತಕ್ಷಣದ ಪ್ರತಿಕ್ರಿಯೆಗಳನ್ನು ಯುವಕರು ನಿಜವೆಂದು ನಂಬಿಬಿಡುತ್ತಾರೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಕೇವಲ ಹಣದ ನಷ್ಟವಲ್ಲ, ಮಾನಸಿಕ ಹಿಂಸೆ:

ಈ ಸ್ಕ್ಯಾಮ್‌ಗಳಿಂದ ಯುವಕರು ಕೇವಲ ಹಣ ಕಳೆದುಕೊಳ್ಳುತ್ತಿಲ್ಲ, ಬದಲಿಗೆ ಅವರ ಆತ್ಮವಿಶ್ವಾಸವೇ ಕುಸಿಯುತ್ತಿದೆ. ಇಂತಹ ಘಟನೆಗಳು ಇಡೀ ಡಿಜಿಟಲ್ ನೇಮಕಾತಿ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸುವಂತೆ ಮಾಡುತ್ತವೆ. ಮೊದಲ ಬಾರಿಗೆ ಉದ್ಯೋಗ ಹುಡುಕುತ್ತಿರುವ ಯುವಕರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾನಹಾನಿ ಮತ್ತು ಭವಿಷ್ಯದ ಭಯದಿಂದಾಗಿ ಅನೇಕರು ತಾವು ಮೋಸಹೋಗಿರುವುದನ್ನು ಹೊರಗೆ ಹೇಳಿಕೊಳ್ಳದೆ ಮೌನಕ್ಕೆ ಶರಣಾಗುತ್ತಿದ್ದಾರೆ.

ಸುರಕ್ಷಿತವಾಗಿರಲು ಏನು ಮಾಡಬೇಕು?

ಯಾವುದೇ ಆಫರ್ ಬಂದಾಗ ಆ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಲಿಂಕ್ಡ್‌ಇನ್ ಪ್ರೊಫೈಲ್ ಅನ್ನು ಸರಿಯಾಗಿ ಪರಿಶೀಲಿಸಿ. ಯಾವುದೇ ಪ್ರತಿಷ್ಠಿತ ಕಂಪನಿಯು ಉದ್ಯೋಗ ನೀಡಲು ತರಬೇತಿ ಶುಲ್ಕ, ಲ್ಯಾಪ್‌ಟಾಪ್ ಶುಲ್ಕ ಅಥವಾ ಸೆಕ್ಯೂರಿಟಿ ಡಿಪಾಸಿಟ್ ಹೆಸರಿನಲ್ಲಿ ಹಣವನ್ನು ಕೇಳುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದಲ್ಲದೇ ಇಮೇಲ್‌ಗಳು @gmail.com ನಿಂದ ಬಾರದೆ, ಕಂಪನಿಯ ಅಧಿಕೃತ ಡೊಮೈನ್ (ಉದಾಹರಣೆಗೆ: careers@companyname.com) ನಿಂದ ಬಂದಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ವಿವರಗಳನ್ನು ಸಂದರ್ಶನ ಮತ್ತು ನೇಮಕಾತಿ ಪ್ರಕ್ರಿಯೆ ಅಧಿಕೃತಗೊಳ್ಳುವ ಮುನ್ನ ಯಾರಿಗೂ ನೀಡಬೇಡಿ. ಆದ್ದರಿಂದ, ಉದ್ಯೋಗ ಹುಡುಕುವಾಗ ಆತುರ ಬೇಡ, ಜಾಗರೂಕತೆ ಅತ್ಯಗತ್ಯ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:27 pm, Tue, 26 May 26

Source link

ಗ್ರಾಹಕರಿಗೆ ಶೀಘ್ರ ಮತ್ತೊಂದು ದರ ಏರಿಕೆ ಬರೆ: ಸರಕು ಸಾಗಾಟ ವಾಹನಗಳ ಬಾಡಿಗೆ ದರ ಶೇ.10ರಷ್ಟು ಹೆಚ್ಚಳ ಸಾಧ್ಯತೆ – Kannada News | Fuel Pinch: Karnataka Lorry Owners Weigh 10 Percent Hike in Freight Charges as Diesel Prices Soar

ಬೆಂಗಳೂರು, ಮೇ 26: ಇಂಧನಗಳ ಬೆಲೆ ಸತತ ಏರಿಕೆಯಿಂದ ಈಗಾಗಲೇ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದುರುವ ನಡುವೆ ಶೀಘ್ರವೇ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಕಳೆದ 10 ದಿನಗಳಲ್ಲಿ ಡೀಸೆಲ್ ದರವು ಒಟ್ಟು 7.81 ರೂ. ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಲಾರಿ ಮಾಲೀಕರು ಹಾಗೂ ಸಾರಿಗೆ ಸಂಸ್ಥೆಗಳು ಸರಕು ಸಾಗಣೆ ದರವನ್ನು ಕನಿಷ್ಠ ಶೇ. 10ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ ಆತಂಕ

ಒಂದೊಮ್ಮೆ ಸರಕು ಸಾಗಣೆ ವಾಹನಗಳ ಬಾಡಿಗೆ ದರ ಏರಿಕೆ ಆಗಿದ್ದೇ ಆದಲ್ಲಿ ಇದರ ಪರಿಣಾಮವಾಗಿ ತರಕಾರಿ, ಪ್ಲೈವುಡ್, ಕಬ್ಬಿಣ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಲಾರಿ ಮಾಲಕರು ಮತ್ತು ಏಜೆಂಟ್​​ ಅಸೋಸಿಯೇಷನ್​​ ಅಧ್ಯಕ್ಷ ಜಿ.ಆರ್. ಶಣ್ಮುಗಪ್ಪ, ಇಂಧನ ದರ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸರಕು ಸಾಗಣೆ ದರ ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯೇ ಇಲ್ಲ ಎಂದಿದ್ದಾರೆ. ಡೀಸೆಲ್ ದರ ಏರಿದಾಗ ಸಾರಿಗೆ ವೆಚ್ಚವೂ ಸ್ವಯಂಚಾಲಿತವಾಗಿ ಹೆಚ್ಚುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ; ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!

ದರ ಏರಿಕೆ ಸಂಬಂಧ ನಾಳೆ ಸಭೆ

ಡೀಸೆಲ್ ದರ ಏರಿಕೆಗೆ ಅನುಗುಣವಾಗಿ ಸರಕು ಸಾಗಣೆ ದರವನ್ನು ಶೇ.10ರಷ್ಟು ಹೆಚ್ಚಿಸುವ ಕುರಿತು ಚರ್ಚಿಸಲು ಬುಧವಾರ (ಮೇ 27) ಸಾರಿಗೆ ಸಂಸ್ಥೆಗಳ ಸಭೆ ಕರೆಯಲಾಗಿದೆ ಎಂದು ಶಣ್ಮುಗಪ್ಪ ಹೇಳಿದ್ದಾರೆ. ಸಾರಿಗೆ ವಲಯ ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ಸರ್ಕಾರಕ್ಕೆ ಭಾರೀ ಆದಾಯ ನೀಡುತ್ತಿದ್ದರೂ, ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ನಡುವೆ ಯಾವುದೇ ನೇರ ಪರಿಹಾರ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ವಾರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಲಾಜಿಸ್ಟಿಕ್ಸ್ ವೆಚ್ಚ ಸಹಜವಾಗಿಯೇ ಹೆಚ್ಚಲಿದೆ. ಜೂನ್ ಮೊದಲ ವಾರದಿಂದ ಗ್ರಾಹಕರು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ಕನಿಷ್ಠ 50 ಪೈಸೆ ಹೆಚ್ಚುವರಿ ದರವನ್ನು ಪಾವತಿಸಬೇಕಾಗಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಲಹೆಗಾರ ರಮೇಶ್ ಚಂದ್ರ ಲಹೋಟಿ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 4:28 pm, Tue, 26 May 26

Source link

IPL 2026: ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪಬಹುದು..! ಹೇಗೆ ಗೊತ್ತಾ? – Kannada News | IPL 2026 Qualifier 1: RCB’s Direct Final Path! Rain Rule and Points Table Advantage Explained

ಐಪಿಎಲ್ 2026 (IPL 2026) ರ ಸೀಸನ್ ಅಂತಿಮ ಹಂತಕ್ಕೆ ತಲುಪಿದೆ. ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ (RCB vs GT) ಇಂದು ಧರ್ಮಶಾಲಾದಲ್ಲಿ ಮೊದಲ ಕ್ವಾಲಿಫೈಯರ್ ಆಡಲು ಸಿದ್ಧವಾಗಿವೆ. ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಇತ್ತ ಸೋತ ತಂಡಕ್ಕೆ ಮತ್ತೊಂದು ಅವಕಾಶವಿದ್ದರೂ (ಕ್ವಾಲಿಫೈಯರ್-2), ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿವೆ. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್‌ಸಿಬಿ ಕ್ವಾಲಿಫೈಯರ್ ಆಡದೆಯೇ ಫೈನಲ್ ತಲುಪುವ ಅವಕಾಶವನ್ನು ಹೊಂದಿದೆ. ಅದು ಹೇಗೆ ಸಾಧ್ಯ? ಇಲ್ಲಿದೆ ವಿವರ.

ಅಗ್ರಸ್ಥಾನದಲ್ಲಿ ಆರ್​ಸಿಬಿ

ಐಪಿಎಲ್ 2026 ರ ಗುಂಪು ಹಂತ ಮುಗಿದ ಬಳಿಕ ನಾವು ಪಾಯಿಂಟ್ ಪಟ್ಟಿಯನ್ನು ನೋಡುವುದಾದರೆ.. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಆರ್​ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದ್ದು, +0.783 ನೆಟ್ ರನ್​ರೇಟ್ ಹೊಂದಿದೆ. ಇತ್ತ ಎರಡನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಕೂಡ ಆಡಿದ 14 ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲುಗಳೊಂದಿಗೆ 18 ಅಂಕಗಳನ್ನು ಕಲೆಹಾಕಿದೆ. ಆದರೆ ಗುಜರಾತ್ ತಂಡದ ನೆಟ್ ರನ್​ರೇಟ್ ಆರ್​ಸಿಬಿಗಿಂತ ಕಡಿಮೆ ಅಂದರೆ +0.695 ಆಗಿರುವ ಕಾರಣ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಪಂದ್ಯ ರದ್ದಾದರೆ ಆರ್​ಸಿಬಿ ಫೈನಲ್​ಗೆ

ವಾಸ್ತವವಾಗಿ ಫೈನಲ್ ಹೊರತುಪಡಿಸಿ ಯಾವುದೇ ಪ್ಲೇಆಫ್ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ, ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ಮಳೆಯಿಂದಾಗಿ ರದ್ದಾದರೆ, ಮರುದಿನ ಪಂದ್ಯಗಳನ್ನು ಆಡಲಾಗುವುದಿಲ್ಲ. ಹೀಗಾಗಿ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮಳೆ ಬಂದರೆ, ಅದೇ ದಿನ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಪಂದ್ಯದ ಆರಂಭ ವಿಳಂಬವಾದರೆ, ಕನಿಷ್ಠ ಐದು ಓವರ್‌ಗಳ ಪಂದ್ಯವನ್ನು ಆಡಿಸಲು ಪ್ರಯತ್ನಿಸಲಾಗುತ್ತದೆ. ಇದಕ್ಕಾಗಿ, 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ. ಆದರೆ ಹೆಚ್ಚುವರಿ ಸಮಯದ 120 ನಿಮಿಷಗಳಲ್ಲೂ ಪಂದ್ಯ ಮುಗಿಯದಿದ್ದರೆ, ಆಗ ಪಾಯಿಂಟ್‌ ಪಟ್ಟಿ ಪ್ರಮುಖ ಪಾತ್ರವಹಿಸುತ್ತದೆ.

ಅಂದರೆ ಪಾಯಿಂಟ್ ಪಟ್ಟಿಯಲ್ಲಿ ಯಾವ ತಂಡ ಮೇಲುಗೈ ಸಾಧಿಸಿರುತ್ತದೋ ಆ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇದರರ್ಥ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆರ್​ಸಿಬಿ ಕ್ವಾಲಿಫೈಯರ್ 1 ಆಡದೆಯೇ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತದೆ. ಇತ್ತ ಗುಜರಾತ್ ತಂಡ ಕ್ವಾಲಿಫೈಯರ್ 2 ಆಡಬೇಕಾಗುತ್ತದೆ.

IPL 2026: ಕ್ವಾಲಿಫೈಯರ್​ನಲ್ಲಿ ಆರ್​ಸಿಬಿ- ಗುಜರಾತ್ ದಾಖಲೆ ಹೇಗಿದೆ? ಯಾರದ್ದು ಮೇಲುಗೈ?

ಧರ್ಮಶಾಲಾದಲ್ಲಿ ಹವಾಮಾನ ಹೇಗಿರಲಿದೆ?

ಧರ್ಮಶಾಲಾ ಮೈದಾನವು ಪರ್ವತಗಳಿಂದ ಸುತ್ತುವರೆದಿದೆ. ಇದರಿಂದಾಗಿ, ಹವಾಮಾನ ಯಾವುದೇ ಸಮಯದಲ್ಲಿ ಬದಲಾಗಬಹುದು. ಆದಾಗ್ಯೂ, ಹವಾಮಾನ ಮುನ್ಸೂಚನೆಯ ಪ್ರಕಾರ, ಪಂದ್ಯದ ದಿನದಂದು ಮಳೆಯಾಗುವ ಸಾಧ್ಯತೆ ಶೇ. 25 ರಷ್ಟು ಇದೆ. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ, ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪೂರ್ಣ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಮಳೆ ಬರುವ ಸಾಧ್ಯತೆ ಇರದ ಕಾರಣ, ಆರ್​ಸಿಬಿ ಈ ಪಂದ್ಯವನ್ನು ಆಡಿ, ಜಯ ಸಾಧಿಸಿಯೇ ಫೈನಲ್​ಗೆ ಟಿಕೆಟ್ ಪಡೆಯಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:20 pm, Tue, 26 May 26

Source link

ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಯುಎಸ್ ಕಾರ್ಯದರ್ಶಿ ರೂಬಿಯೋ – Kannada News | US Secretary Marco Rubio visits Taj Mahal With Wife During India Visit

ಆಗ್ರಾ, ಮೇ 26: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ (Marco Rubio) ತಮ್ಮ ಪತ್ನಿ ಜೀನೆಟ್ ರೂಬಿಯೋ ಅವರೊಂದಿಗೆ ಆಗ್ರಾದಲ್ಲಿರುವ ಐತಿಹಾಸಿಕ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ತಾಜ್ ಮಹಲ್ ಸೌಂದರ್ಯವನ್ನು ಹೊಗಳಿದ ರೂಬಿಯೋ ಈ ಸ್ಮಾರಕವನ್ನು ವಿಶ್ವದ ಅತ್ಯಮೂಲ್ಯ ನಿಧಿಗಳಲ್ಲಿ ಒಂದೆಂದು ಶ್ಲಾಘಿಸಿದ್ದಾರೆ. ತಾಜ್ ಮಹಲ್‌ನಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಕಳೆದ ದಂಪತಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ (Visitors Book) “ವಿಶ್ವದ ನಿಜವಾದ ನಿಧಿಗಳಲ್ಲಿ ಒಂದನ್ನು ವೀಕ್ಷಿಸಲು ನಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.

ವಿಶ್ವದ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್, ಭಾರತಕ್ಕೆ ಭೇಟಿ ನೀಡುವ ಜಾಗತಿಕ ಮಟ್ಟದ ಉನ್ನತ ನಾಯಕರು ಮತ್ತು ಗಣ್ಯರನ್ನು ಸತತವಾಗಿ ಆಕರ್ಷಿಸುತ್ತಲೇ ಬಂದಿದೆ. ಕಳೆದ ವರ್ಷ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳಾದ ವಿವೇಕ್, ಮಿರಾಬೆಲ್ ಮತ್ತು ಇವಾನ್ ಅವರೊಂದಿಗೆ ಈ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ; ತಿಂಗಳಿಗೆ 9,000ರೂ. ಸ್ಟೈಫಂಡ್‌ನೊಂದಿಗೆ ಬಂಪರ್ ಉದ್ಯೋಗಾವಕಾಶ! – Kannada News | Government Internship 2026: Paid Opportunities and Skill Development for Youth

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆImage Credit source: Pinterest

ದೇಶದ ಯುವಜನತೆಗೆ ಉದ್ಯೋಗ ಕೌಶಲ್ಯ ಹಾಗೂ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ (PM Internship Scheme 2026) ಅನ್ನು ಮತ್ತಷ್ಟು ಆಕರ್ಷಕ ನಿಯಮಗಳೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯಡಿ ದೇಶದ ಪ್ರಮುಖ 500 ಕ್ಕೂ ಹೆಚ್ಚು ಕಂಪನಿಗಳಲ್ಲಿ ಯುವಕ-ಯುವತಿಯರಿಗೆ ಇಂಟರ್ನ್‌ಶಿಪ್ (ತರಬೇತಿ) ಅವಕಾಶ ಸಿಗಲಿದ್ದು, ಪ್ರತಿ ತಿಂಗಳು ಭಾರಿ ಸ್ಟೈಫಂಡ್ ಕೂಡ ಲಭ್ಯವಾಗಲಿದೆ. ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಸುವರ್ಣಾವಕಾಶವಾಗಿದೆ.

ತಿಂಗಳ ಭತ್ಯೆ (Stipend):

ಆಯ್ಕೆಯಾಗುವ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತಿ ತಿಂಗಳು 9,000 ಸ್ಟೈಫಂಡ್ ಸಿಗಲಿದೆ. ಇದರಲ್ಲಿ 8,100 ರೂ. ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ (DBT) ಜಮಾ ಮಾಡಿದರೆ, ಉಳಿದ 900ರೂ. ಹಣವನ್ನು ಇಂಟರ್ನ್‌ಶಿಪ್ ನೀಡುವ ಕಂಪನಿ ಭರಿಸುತ್ತದೆ. ಇದಲ್ಲದೇ ಇಂಟರ್ನ್‌ಶಿಪ್‌ಗೆ ಸೇರಿದ ತಕ್ಷಣ ಆರಂಭಿಕ ವೆಚ್ಚಗಳಿಗಾಗಿ ಸರ್ಕಾರದಿಂದ 6,000ರೂ. ಒನ್-ಟೈಮ್ ಗ್ರಾಂಟ್ (ಒಂದು ಬಾರಿಯ ಧನಸಹಾಯ) ಸಿಗಲಿದೆ.

ಉಚಿತ ವಿಮೆ ಸೌಲಭ್ಯ:

ಇಂಟರ್ನ್‌ಶಿಪ್ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮಾ ಸೌಲಭ್ಯ ಸಿಗುತ್ತದೆ.

ಕರ್ನಾಟಕದ ಕಂಪನಿಗಳಲ್ಲೇ ಅವಕಾಶ:

ಈ ಯೋಜನೆಯಡಿ ಭಾರತದ ಪ್ರಮುಖ ಕಾರ್ಪೊರೇಟ್ ಕಂಪನಿಗಳು (ಉದಾಹರಣೆಗೆ ಮಾರುತಿ, ಐಸಿಐಸಿಐ, ಎಕ್ಸೈಡ್, ಮತ್ತು ಬೆಂಗಳೂರಿನ ಹಲವು ಪ್ರಮುಖ ಐಟಿ/ಕಾರ್ಪೊರೇಟ್ ಸಂಸ್ಥೆಗಳು) ಭಾಗವಹಿಸುತ್ತಿರುವುದರಿಂದ, ಕರ್ನಾಟಕದ ಯುವಕ-ಯುವತಿಯರು ತಮ್ಮದೇ ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ (ಬೆಂಗಳೂರು, ಮೈಸೂರು, ಮಂಗಳೂರು ಮುಂತಾದೆಡೆ) ತರಬೇತಿ ಪಡೆಯಬಹುದು.

ಅರ್ಹತೆಗಳೇನು?

ಈ ಬಾರಿ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಹೆಚ್ಚಿನ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ. 18 ರಿಂದ 25 ವರ್ಷದೊಳಗಿನ ಭಾರತೀಯ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ, ಪಿಯುಸಿ (12th), ಐಟಿಐ (ITI), ಪಾಲಿಟೆಕ್ನಿಕ್ ಡಿಪ್ಲೊಮಾ, ಬಿಎ, ಬಿಕಾಂ, ಬಿಸ್ಸಿ, ಬಿಸಿಎ, ಬಿಬಿಎ, ಬಿಇ/ಬಿಟೆಕ್ ಪದವೀಧರರು ಅರ್ಜಿ ಸಲ್ಲಿಸಬಹುದು. ಅಂತಿಮ ವರ್ಷದ ಪದವಿ (UG) ಮತ್ತು ಸ್ನಾತಕೋತ್ತರ ಪದವಿ (PG) ವಿದ್ಯಾರ್ಥಿಗಳಿಗೂ ಈಗ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

ಇಂಟರ್ನ್‌ಶಿಪ್ ಅವಧಿ ಮತ್ತು ಕೆಲಸದ ಕ್ಷೇತ್ರಗಳು:

ಈ ಇಂಟರ್ನ್‌ಶಿಪ್ ಅವಧಿಯು 6 ರಿಂದ 9 ತಿಂಗಳು ಇರಲಿದ್ದು, ಅಭ್ಯರ್ಥಿಗಳಿಗೆ ಕೇವಲ ತರಗತಿ ತರಬೇತಿ ನೀಡದೆ ನೇರವಾಗಿ ಕಂಪನಿಗಳ ನೈಜ ಕೆಲಸದ ವಾತಾವರಣದಲ್ಲಿ (Hands-on experience) ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಐಟಿ, ಸಾಫ್ಟ್‌ವೇರ್, ಬ್ಯಾಂಕಿಂಗ್, ಹಣಕಾಸು ಸೇವೆಗಳು, ಟೆಲಿಕಾಂ, ರೀಟೇಲ್ ಸೇರಿದಂತೆ 21 ಕ್ಕೂ ಹೆಚ್ಚು ವಲಯಗಳಲ್ಲಿ ಈ ಅವಕಾಶಗಳಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆದ PM Internship Portal ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಶೈಕ್ಷಣಿಕ ಪ್ರಮಾಣಪತ್ರಗಳು ಹಾಗೂ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಅತ್ಯಗತ್ಯ. ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿರುವ ಕರ್ನಾಟಕದ ಯುವಕ-ಯುವತಿಯರು ಈ ಕೌಶಲ್ಯಾಭಿವೃದ್ಧಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link