Category Archives: Blog

Your blog category

Bengaluru Air Quality: ದಿನೇ ದಿನೇ ಹದಗೆಡುತ್ತಿದೆ ಬೆಂಗಳೂರಿನ ವಾಯು ಗುಣಮಟ್ಟ – Kannada News | Bangalore Air Pollution Crisis: Bengaluru’s Air quality is getting worse day by day

ದಿನೇ ದಿನೇ ಹದಗೆಡುತ್ತಿದೆ ಬೆಂಗಳೂರಿನ ವಾಯು ಗುಣಮಟ್ಟ

ಬೆಂಗಳೂರು, ಜನವರಿ 20: ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿ (Bengaluru Air Quality)  ಹಲವು ದಿನಗಳಿಂದ ಏರು ಪೇರಾಗುತ್ತಲೇ ಇದೆ. ಒಮ್ಮೊಮ್ಮೆ 200ರ ಗಡಿ ದಾಟುವ AQI, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ನಿನ್ನೆಗಿಂತ ಸುಧಾರಿಸಿದ AQI

ಬೆಂಗಳೂರಿನ ಗಾಳಿಯ ಗುಣಮಟ್ಟ 156 ಇದ್ದು, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ನಗರದಲ್ಲಿ PM2.5 ಮಟ್ಟ 67 ಹಾಗೂ PM10 ಮಟ್ಟ 87ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಮಾಣಗಳು ಸುರಕ್ಷಿತ ಮಿತಿಯನ್ನು ಮೀರಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಟ್ಟದಲ್ಲಿವೆ. ವಿಶೇಷವಾಗಿ PM2.5 ಸೂಕ್ಷ್ಮ ಕಣಗಳು ಶ್ವಾಸಕೋಶದ ಆಳಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆ, ಆಸ್ತಮಾ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ವಾಹನಗಳ ಅತಿಯಾದ ಬಳಕೆ, ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಧೂಳು, ಕೈಗಾರಿಕಾ ಉತ್ಸರ್ಜನೆ ಮತ್ತು ಹವಾಮಾನದಲ್ಲಿ ಗಾಳಿಯ ಚಲನೆಯ ಕೊರತೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮಾಲಿನ್ಯ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ.

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅನಿವಾರ್ಯವಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –156
  • ಮಂಗಳೂರು-150
  • ಮೈಸೂರು –98
  • ಬೆಳಗಾವಿ – 94
  • ಕಲಬುರ್ಗಿ-56
  • ಶಿವಮೊಗ್ಗ – 147
  • ಬಳ್ಳಾರಿ – 156
  • ಹುಬ್ಬಳ್ಳಿ- 87
  • ಉಡುಪಿ –123
  • ವಿಜಯಪುರ –68

Source link

‘ನಾನು ಕಪ್ ಗೆಲ್ಲದಿರಬಹುದು, ಶೋ ಗೆದ್ದಿದ್ದೇನೆ’; ಸೀಸನ್ ಚಪ್ಪಾಳೆ ಬದಲಿಸಿದ ಬಗ್ಗೆ ಧ್ರುವಂತ್ ಮಾತು – Kannada News | Dhruvanth Openly Talks about Kichcha Sudeep Season Chappale

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಅವರು ಸಾಕಷ್ಟು ಚರ್ಚೆ ಆಗಿದ್ದರು. ಅವರಿಗೆ ಸೀಸನ್ ಚಪ್ಪಾಳೆಯನ್ನು ಸುದೀಪ್ ನೀಡಿದರು. ನಂತರ ಇದಕ್ಕೆ ಟೀಕೆ ಸಿಕ್ಕಿದ್ದರಿಂದ ವಾರದ ಚಪ್ಪಾಳೆ ಎಂದು ಕಲರ್ಸ್ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಬದಲಾಯಿಸಿತ್ತು. ಈ ಬಗ್ಗೆ ಧ್ರುವಂತ್ ಮಾತನಾಡಿದ್ದಾರೆ. ‘ಟಿಆರ್​​ಪಿ ತರೋರು ಒಬ್ಬರಾದರೆ, ಕಪ್ ಗೆಲ್ಲೋರು ಮತ್ತೊಬ್ಬರಾಗಿರ್ತಾರೆ. ಕಪ್ ಗೆಲ್ಲದೆ ಇರಬಹುದು ಆದರೆ, ಶೋ ಗೆದ್ದಿದ್ದು ನಾನು’ ಎಂದು ಧ್ರುವಂತ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೇರವಾಗಿ ಫೈನಲ್​ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?

Source link

ಹಿಂದೂ ಆಗಿದ್ದ ಎಆರ್​ ರೆಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ ಗೊತ್ತೇ? – Kannada News | A.R. Rahman’s Spiritual Journey: Why Dilip Kumar Converted to Islam

ಮ್ಯೂಸಿಕ್ ಡೈರೆಕ್ಟರ್ ಎ.ಆರ್. ರೆಹಮಾನ್ (Ar Rahman) ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ಅನೇಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆಯ ಕಾರಣಕ್ಕೆ ಅವರಿಗೆ ಆಸ್ಕರ್ ಅವಾರ್ಡ್ ಕೂಡ ಸಿಕ್ಕಿದೆ ಎಂಬುದು ವಿಶೇಷ. ಧರ್ಮದ ಕಾರಣಕ್ಕೆ ಅವರಿಗೆ ಬಾಲಿವುಡ್​​ನಲ್ಲಿ ಕೆಲಸ ಸಿಗುತ್ತಿಲ್ಲ ಎಂದಿದ್ದರು. ಇದು ವಿವಾದ ಆಗಿತ್ತು. ಹಾಗಾದರೆ ರೆಹಮಾನ್ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡಿದ್ದು ಏಕೆ ಎಂಬ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ.

ಎ.ಆರ್. ರೆಹಮಾನ್ ಧರ್ಮದಿಂದ ಮುಸ್ಲಿಂ. ಆದರೆ ಅವರು ಹಿಂದೂವಾಗಿ ಜನಿಸಿದರು ಎಂದು ಬಹಳ ಕಡಿಮೆ ಜನರಿಗೆ ತಿಳಿದಿದೆ. ನಂತರ ಅವರು ಇಸ್ಲಾಂಗೆ ಮತಾಂತರಗೊಂಡರು. ಎ.ಆರ್. ರೆಹಮಾನ್ ನಾಲ್ಕು ವರ್ಷದವನಿದ್ದಾಗಿನಿಂದ ಪಿಯಾನೋ ನುಡಿಸುತ್ತಿದ್ದರು. ಅಂದಿನಿಂದ, ಸಂಗೀತ ಕ್ಷೇತ್ರದಲ್ಲಿ ಅವರ ಪ್ರಯಾಣ ಪ್ರಾರಂಭವಾಯಿತು.

ಅವರು ಮೂಲತಃ ತಮಿಳುನಾಡಿನ ಚೆನ್ನೈನವರು. ಅವರ ಹಿಂದಿನ ಹೆಸರು ದಿಲೀಪ್ ಕುಮಾರ್ ರಾಜಗೋಪಾಲ. ಇಸ್ಲಾಂಗೆ ಮತಾಂತರಗೊಂಡ ನಂತರ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಅವರ ತಂದೆಯೂ ಪ್ರಸಿದ್ಧ ಸಂಗೀತಗಾರರಾಗಿದ್ದರು. ಎ.ಆರ್. ರೆಹಮಾನ್ 9 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು.

ತಂದೆಯ ಮರಣದ ನಂತರ, ದಿಲೀಪ್ ಕುಮಾರ್ (ಈಗ ರೆಹಮಾನ್) ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡರು. ಆರಂಭಿಕ ದಿನಗಳಲ್ಲಿ, ದಿಲೀಪ್ ಕುಮಾರ್ ಕುಟುಂಬವು ದೊಡ್ಡ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಯಿತು. ದಿಲೀಪ್ ಕುಮಾರ್ ಅವರ ಕುಟುಂಬವು ಅವರ ತಂದೆಯ ಸಂಗೀತ ವಾದ್ಯಗಳನ್ನು ಬಾಡಿಗೆಗೆ ನೀಡುವ ಮೂಲಕ ಜೀವನ ನಡೆಸುತ್ತಿದ್ದರು. ದಿಲೀಪ್ ಕುಮಾರ್ ಶಾಲೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

ಆದರೆ ಅವರಿಗೆ ಸಂಗೀತ ಮತ್ತು ಸಂಗೀತ ವಾದ್ಯಗಳ ಬಗ್ಗೆ ತುಂಬಾ ಒಲವು ಇತ್ತು. ರೆಹಮಾನ್ ಹಾಗೂ ಕಟುಂಬ ಖಾದ್ರಿ ಸಾಹೇಬ್ ಎಂಬ ಸುಫಿ ಪೀರ್ (ಸಂತ) ಅವರನ್ನು ಭೇಟಿಯಾದರು. ಈ ಸುಫಿ ಸಂತನ ಪ್ರಭಾವದಿಂದ ರೆಹಮಾನ್ ಅವರ ತಾಯಿ ಮತ್ತು ಕುಟುಂಬ ಸುಫಿ ಇಸ್ಲಾಂನತ್ತ ಆಕರ್ಷಿತರಾದರು. ಅವರು ತಮ್ಮ 23 ನೇ ವಯಸ್ಸಿನಲ್ಲಿ ಕುಟುಂಬದ ಜೊತೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ‘ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಕಾರಣ ಆ ಧರ್ಮದಿಂದ ನಮಗೆ ಸಿಕ್ಕ ಮಾನಸಿಕ ಶಾಂತಿ’ ಎಂದಿದ್ದರು ರೆಹಮಾನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಛೀ.. ಥೂ.. ದೆಹಲಿ ಮೆಟ್ರೋ ಪ್ಲಾಟ್​ಫಾರ್ಮ್​ನಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ವ್ಯಕ್ತಿ – Kannada News | Man Caught Urinating On Delhi Metro Platform, Sparks Outrage

ನವದೆಹಲಿ, ಜನವರಿ 20: ದೆಹಲಿಯ ಮೆಟ್ರೋ ನಿಲ್ದಾಣದ ಪ್ಲಾಟ್​ಫಾರಂನಲ್ಲಿ ವ್ಯಕ್ತಿಯೊಬ್ಬ ಮೂತ್ರ(Urine) ವಿಸರ್ಜಿಸಿ ಮುಜುಗರ ಉಂಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಿಂಚಿತ್ತೂ ಸ್ವಚ್ಛತೆ ಬಗ್ಗೆ ಕಾಳಜಿ ಇರದ ವ್ಯಕ್ತಿಯ ನಡೆ ಕಂಡು ನೆಟ್ಟಿಗರು ಕ್ಯಾಕರಿಸಿ ಉಗಿದಿದ್ದಾರೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸಿದ್ದಾರೆ.

ಸಾವಿರಾರು ಪ್ರಯಾಣಿಕರು ಓಡಾಡುವ ಪ್ಲಾಟ್​ಫಾರ್ಮ್​ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿರುವ ವ್ಯಕ್ತಿಯ ಬೇಜವಾಬ್ದಾರಿಯುತ ವರ್ತನೆಯನ್ನು ತೋರಿಸುತ್ತದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗಾಜಿನ ಕಾರಿಡಾರ್ ಬಳಿ ನಿಂತು ಮೂತ್ರ ವಿಸರ್ಜನೆ ಮಾಡಿರುವುದನ್ನು ಕಾಣಬಹುದು. ಅದನ್ನು ಮತ್ತೊಬ್ಬ ಪ್ರಯಾಣಿಕ ರೆಕಾರ್ಡ್ ಮಾಡಿದ್ದಾನೆ. ಯಾರೋ ತನ್ನನ್ನು ರೆಕಾರ್ಡ್ ಮಾಡುತ್ತಿರುವುದನ್ನು ಆ ವ್ಯಕ್ತಿ ಗಮನಿಸಿ ಕ್ಷಮೆಯನ್ನೂ ಯಾಚಿಸದೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಿಡಿಯೋ

ಮೆಟ್ರೋ ಆವರಣದಲ್ಲಿ, ಕೆಲವರು ಬಹಿರಂಗವಾಗಿ ಮೂತ್ರ ವಿಸರ್ಜಿಸುತ್ತಾರೆ ಅಥವಾ ಮಕ್ಕಳನ್ನು ಅದೇ ರೀತಿ ಮಾಡಲು ಬಿಡುತ್ತಾರೆ ಇದು ಗಂಭೀರವಾದ ಸಂಗತಿ. ದೇಶಕ್ಕೆ ಮಾದರಿಯಾಗದಿದ್ದರೂ ತೊಂದರೆಯಿಲ್ಲ, ದೇಶದ ಮರ್ಯಾದಿ ತೆಗೆಯುವ ಇಂಥಾ ಕೆಲಸ ಯಾರೂ ಮಾಡಬೇಡಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿ೨೦ ವಿಶ್ವಕಪ್‌ನ ಮೊದಲ ಪಂದ್ಯದಿಂದ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಔಟ್

Source link

ಗಿಲ್ಲಿ ಗೆದ್ದ ದಿನವೇ ಮತ್ತೊಬ್ಬರಿಗೆ ಸಿಕ್ಕಿದೆ ಬಿಗ್ ಬಾಸ್ ವಿನ್ನರ್ ಟೈಟಲ್ – Kannada News | After Gilli Bigg Boss Kannada Win Divya Ganesh Wins At Tamil Bigg Boss Kannada

ಬಿಗ್ ಬಾಸ್ ಕನ್ನಡದಲ್ಲಿ (Bigg Boss Kannada) ಪೂರ್ಣಗೊಂಡಿದೆ. ಗಿಲ್ಲಿಗೆ ಗೆಲುವು ಸಿಕ್ಕಿದೆ. ಅದೇ ರೀತಿ ತಮಿಳಿನಲ್ಲೂ ಬಿಗ್ ಬಾಸ್ ಫಿನಾಲೆ ನಡೆದಿದೆ. ಬಿಗ್ ಬಾಸ್ ತಮಿಳಿನ 9 ಸೀಸನ್ ಪೂರ್ಣಗೊಂಡಿದೆ. ಈ ಶೋನಲ್ಲಿ ದಿವ್ಯಾ ಗಣೇಶ್ ಗೆದ್ದಿದ್ದಾರೆ. ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಮಾಡಿದ್ದರು ಎಂಬುದು ವಿಶೇಷ. ಅವರು ಗೆದ್ದು ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್ ಬಾಸ್ ತಮಿಳು ಸೀಸನ್ 9 ಅಕ್ಟೋಬರ್ 5ರಂದು ಪ್ರಾರಂಭವಾಯಿತು. ಜನವರಿ 18ರಂದು ಇದು ಕೊನೆಗೊಂಡಿದೆ. ಈ ಸೀಸನ್ ಒಟ್ಟು 20 ಸ್ಪರ್ಧಿಗಳಿದ್ದರು. ಆದರೆ ಮೊದಲ 2 ವಾರಗಳಲ್ಲಿ 3 ಸ್ಪರ್ಧಿಗಳು ಎಲಿಮಿನೇಟ್ ಆದರು. ಈ ವೇಳೆ ದಿವ್ಯಾ ಗಣೇಶ್, ಅಮಿತ್, ಸಾಂಡ್ರಾ ಮತ್ತು ಪ್ರಜಿನ್ 3ನೇ ವಾರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಗಳಾಗಿ ಪ್ರವೇಶಿಸಿದರು. ನಂತರ, ಒಟ್ಟು 21 ಸ್ಪರ್ಧಿಗಳೊಂದಿಗೆ ಕಾರ್ಯಕ್ರಮ ನಡೆಯಿತು.

ಗಾನಾ ವಿನೋದ್ ಸೀಸನ್ 9ರ ಪ್ರಶಸ್ತಿಯನ್ನು ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ, ಅವರು ಕ್ಯಾಶ್​​ಪ್ರೈಸ್ ಪೆಟ್ಟಿಗೆ ತೆಗೆದುಕೊಂಡು ರೇಸ್​​ನಿಂದ ಹೊರ ಹೋದರು. ದಿವ್ಯಾ ಗಣೇಶ್ ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದರು ಮತ್ತು ಪ್ರಶಸ್ತಿ ವಿಜೇತರಾದರು. ಶಬರಿ ಮೊದಲ ರನ್ನರ್ ಅಪ್ ಮತ್ತು ವಿಕೆಲ್ಸ್ ವಿಕ್ರಮ್ ಎರಡನೇ ರನ್ನರ್ ಅಪ್ ಆಗಿದ್ದರು ಎಂಬುದು ಗಮನಾರ್ಹ.

ದಿವ್ಯಾ ಗಣೇಶ್ ಬಿಗ್ ಬಾಸ್ ತಮಿಳು ಸೀಸನ್ 9 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಪ್ರವೇಶಿಸಿದ್ದರು. ಅವರು ವಿಜಯ್ ಟಿವಿಯ ಪ್ರಸಿದ್ಧ ಧಾರಾವಾಹಿ ನಟಿಯರಲ್ಲಿ ಒಬ್ಬರು. ತಮಿಳಿನ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಜೆನ್ನಿ ಪಾತ್ರದಲ್ಲಿ ನಟಿಸುವ ಮೂಲಕ ಅವರು ಬಹಳ ಪ್ರಸಿದ್ಧರಾಗಿದ್ದಾರೆ. ಅವರು ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ಹಳ್ಳಿ ನಟಿಯಾಗಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಬಿಗ್ ಬಾಸ್ ತಮಿಳು ಸೀಸನ್ 9 ರಲ್ಲಿ ಅವರು ಅತ್ಯಂತ ಧೈರ್ಯಶಾಲಿ ಮಹಿಳೆ ಎಂದು ಕರೆಯಲ್ಪಟ್ಟರು ಎಂಬುದು ಗಮನಾರ್ಹ.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ?

ದಿವ್ಯಾ ಬಿಗ್ ಬಾಸ್ ತಮಿಳು ಸೀಸನ್ 9 ಕಾರ್ಯಕ್ರಮಕ್ಕೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದು ಗಮನಾರ್ಹ. ಅವರು ಈ ಸೀಸನ್‌ನಲ್ಲಿ 106 ದಿನಗಳ ಕಾಲ ಇಲ್ಲದಿದ್ದರೆ, ಅವರು ತಮ್ಮ ದಿನಗಳಲ್ಲಿ ಜನರಲ್ಲಿ ಜನಪ್ರಿಯ ವ್ಯಕ್ತಿಯಾಗುತ್ತಿದ್ದರು ಎಂಬುದು ಗಮನಾರ್ಹ. ಈ ಪರಿಸ್ಥಿತಿಯಲ್ಲಿ, ಈ ಹಿಂದೆ 7 ನೇ ಸೀಸನ್‌ನಲ್ಲಿ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ತಮಿಳು ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದ ಅರ್ಚನಾ ಅವರು ಗೆದ್ದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಹೆಚ್ಚುವರಿಯಾಗಿ ಸಿಕ್ತು 20 ಲಕ್ಷ ರೂಪಾಯಿ? – Kannada News | Big Boss Kannada 12 Winner Gilli Gets Extra 20 Lakh RS From Sharavana

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ವಿನ್ನರ್ ಗಿಲ್ಲಿಗೆ ಬಂಪರ್ ಲಾಟರಿ ಹೊಡೆದಿದೆ. ಬಿಗ್ ಬಾಸ್ ಕಡೆಯಿಂದ 50 ಲಕ್ಷ ರೂಪಾಯಿ (ತೆರಿಗೆ ಕಟ್ ಆಗಿ ಸಿಗೋದು 35 ಲಕ್ಷ ರೂಪಾಯಿ), ಮಾರುತು ಸುಜುಕಿ ವಿಕ್ಟೋರಿಸ್ ಕಾರು ಹಾಗೂ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ ಸಿಕ್ಕಿದೆ. ಈಗ ಅವರಿಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ಸಿಕ್ಕಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಗೆದ್ದವರಿಗೆ ಪ್ರತಿ ಬಾರಿಯೂ 50 ಲಕ್ಷ ರೂಪಾಯಿ ಸಿಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಕೆಲವೊಮ್ಮ ಬಹುಮಾನವಾಗಿ ವಸ್ತುಗಳು ಸಿಗುತ್ತವೆ. ಈ ಬಾರಿ ಗಿಲ್ಲಿ ನಟ ಅವರಿಗೆ ಅದೃಷ್ಟ ಒಲಿದಿದೆ. ಅವರಿಗೆ ಈಗಾಗಲೇ 80 ಲಕ್ಷ ರೂಪಾಯಿ ಅಷ್ಟು(ಟ್ಯಾಕ್ಸ್ ಹೊರತುಪಡಿಸಿ) ಮೌಲ್ಯದ ವಸ್ತು/ಹಣ ಬಿಗ್ ಬಾಸ್​​ನಿಂದ ಸಿಕ್ಕಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ಸಿಕ್ಕಿತೇ ಎಂಬ ಪ್ರಶ್ನೆ ಮೂಡಿದೆ.

ಬಿಗ್ ಬಾಸ್ ರನ್ನರ್ ಅಪ್​​ ರಕ್ಷಿತಾ ಶೆಟ್ಟಿಗೆ 20 ಲಕ್ಷ ರೂಪಾಯಿ ವೋಚರ್ ಶರವಣ ಅವರ ‘ಸಾಯಿ ಗೋಲ್ಡ್ ಪ್ಯಾಲೇಸ್’ ಕಡೆಯಿಂದ ಸಿಕ್ಕಿತ್ತು. ಅವರೇ ಗಿಲ್ಲಿಗೆ 20 ಲಕ್ಷ ರೂಪಾಯಿ ಕೊಡೋದಾಗಿ ಘೋಷಣೆ ಮಾಡಿದ್ದರು. ‘ನಾನು ಬಿಗ್ ಬಾಸ್​​ಗೆ ತೆರಳುತ್ತಿದ್ದೇನೆ. ಗಿಲ್ಲಿನೇ ಗೆಲ್ಲೋದು ಅನ್ನೋದು ನನ್ನ ಅಭಿಪ್ರಾಯ. ಅವರು ಸಾಕಷ್ಟು ಮನರಂಜನೆ ನೀಡಿದ್ದಾರೆ. ಗಿಲ್ಲಿ ಗೆದ್ದರೆ ಅವರಿಗೆ 20 ಲಕ್ಷ ರೂಪಾಯಿ ಕೊಡುತ್ತೇನೆ. ಚೆಕ್ ರೆಡಿ ಇದೆ’ ಎಂದು ಶರವಣ ಅವರು ಫಿನಾಲೆಗೆ ತೆರಳುವಾಗ ಹೇಳಿದ್ದರು.

ಇದನ್ನೂ ಓದಿ: ‘ಅವರು ಹಾಗೆ ಹೇಳೋಕೆ ಸಾಧ್ಯವಿಲ್ಲ’; ಅಶ್ವಿನಿ ಗೌಡ ಬಗ್ಗೆ ಗಿಲ್ಲಿಗೆ ಎಷ್ಟು ಗೌರವ ನೋಡಿ

ವೇದಿಕೆ ಮೇಲೆ ಗಿಲ್ಲಿ ನಟ ಅವರಿಗೆ ಶರವಣ 20 ಲಕ್ಷ ರೂಪಾಯಿನ ನೀಡಿಲ್ಲ. ಗಿಲ್ಲಿಯೇ ಗೆದ್ದಿರುವುದರಿಂದ ಪ್ರತ್ಯೇಕವಾಗಿ ಈ ಮೊತ್ತವನ್ನು ಅವರು ಗಿಲ್ಲಿಗೆ ಕೊಟ್ಟಿರಬಹುದು ಎಂದು ಹೇಳಲಾಗುತ್ತಾ ಇದೆ. ಗಿಲ್ಲಿ ನಟ ಅವರು ಗೆದ್ದ ಬಳಿಕ ಹುಟ್ಟೂರಿಗೆ ತೆರಳಿದ್ದಾರೆ. ಅಲ್ಲಿ ಅದ್ದೂರಿಯಾಗಿ ಅವರಿಗೆ ಸ್ವಾಗತ ಸಿಕ್ಕಿದೆ. ಸಿಕ್ಕ ಜನಪ್ರಿಯತೆ ನೋಡಿ ಅವರಿಗೇ ಅಚ್ಚರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

WPLನಲ್ಲಿ ಆಲ್ ಟೈಮ್ ದಾಖಲೆ ನಿರ್ಮಿಸಿದ RCB – Kannada News | RCB Created all times record in WPL 2026

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಸತತ 6 ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ. ಅಂದರೆ WPL ನಲ್ಲಿ​ ಇದೇ ಮೊದಲ ಬಾರಿಗೆ ತಂಡವೊಂದು ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದುಕೊಂಡಿದೆ.

Source link