Category Archives: Blog

Your blog category

Money Tricks: ಎಷ್ಟು ದುಡಿದರೂ ಹಣ ನಿಲ್ಲುತ್ತಿಲ್ಲವಾ? ಈ 50-30-20 ಟ್ರಿಕ್ಸ್ ಉಪಯೋಗಿಸಿ – Kannada News | Learn to control expense using this 50pc 30pc 20pc rule

ನೀವು ಎಷ್ಟೇ ಹಣ ಸಂಪಾದಿಸಿದರೂ ಅದು ಸುಖಾಸುಮ್ಮನೆ ಖರ್ಚಾಗಿ ಹೋಗುತ್ತಿದೆಯಾ? ಅರ್ಧಕ್ಕಿಂತ ಹೆಚ್ಚಿನ ಜನರ ಸಮಸ್ಯೆ ಇದು. ಯಾವುದೋ ಬಹಳ ದೊಡ್ಡ ವೆಚ್ಚ ಹಣವೆಲ್ಲಾ ಖರ್ಚಾಗಿ ಹೋಗುವುದು ಬೇರೆ, ಆದರೆ ದೈನಂದಿನ ಸಾಧಾರಣ ಜಂಜಾಟಗಳಿಂದಲೇ ಹಣ ಖರ್ಚು ಮಾಡಿಕೊಳ್ಳುವುದು ಬೇರೆ. ಅವಗಡಗಳು ನಮ್ಮ ಕೈಲಿರುವುದಿಲ್ಲ. ಆದರೆ ಇತರ ಹಲವು ವೆಚ್ಚಗಳ ನಿಯಂತ್ರಣ (Expense control) ನಮ್ಮ ಕೈಲಿರುತ್ತದೆ. ಸ್ವಲ್ಪ ಯೋಜಿಸಿದರೆ ವೆಚ್ಚಗಳ ಮೇಲೆ ಸುಲಭವಾಗಿ ಕಡಿವಾಣ ಹಾಕಬಹುದು. ಹೇಗೆ ಮಾಡಬೇಕೆಂದು ಗೊಂದಲ ಇದ್ದರೆ 50-30-20 ರೂಲ್ ನೆನಪಿನಲ್ಲಿಡಿ.

ಏನಿದು 50-30-20 ನಿಯಮ?

ನಿಮ್ಮ ಆದಾಯವನ್ನು ಹೇಗೆ ವ್ಯಯಿಸಬೇಕು, ಯಾವುದಕ್ಕೆ ಉಪಯೋಗಿಸಬೇಕು ಎಂದು ವರ್ಗೀಕರಿಸಲು ಈ 50-30-20 ನಿಯಮ ಬಳಸಿ. ಅನಿವಾರ್ಯ ವೆಚ್ಚಗಳಿಗೆ ಶೇ. 50, ತುಸು ಐಷಾರಾಮ್ಯಕ್ಕೆ ಶೇ. 30, ಹಾಗೂ ಉಳಿತಾಯ ಮತ್ತು ಹೂಡಿಕೆಗೆ ಶೇ. 20 ಎಂದು ಒಂದು ಚೌಕಟ್ಟು ಹಾಕಿಕೊಳ್ಳಿ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಉಳಿತಾಯ ಮತ್ತು ಹೂಡಿಕೆಗೆಂದು ಶೇ. 20 ಮೀಸಲಿಟ್ಟಿರುವ ಹಣ ಯಾವತ್ತೂ ಕಡಿಮೆ ಆಗಬಾರದು.

ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್​ನಿಂದ ಭರ್ಜರಿ ಆದಾಯ

ಇಲ್ಲಿ ಶೇ. 50ರ ಗುಂಪಿನಲ್ಲಿರುವ ಅನಿವಾರ್ಯ ವೆಚ್ಚಗಳಲ್ಲಿ ಮನೆ ಬಾಡಿಗೆ, ಶಾಲಾ ಫೀಸ್, ದಿನಸಿ ವಸ್ತು, ವಿದ್ಯುತ್, ನೀರು, ಗ್ಯಾಸ್ ಬಿಲ್​ಗಳು, ಕಚೇರಿಗೆ ಓಡಾಡುವ ವೆಚ್ಚ, ಇನ್ಷೂರೆನ್ಸ್, ಸಾಲದ ಇಎಂಇ ಇತ್ಯಾದಿ ಸೇರುತ್ತವೆ. ಇವಿಷ್ಟೂ ಅನಿವಾರ್ಯ ವೆಚ್ಚಗಳು ನಿಮ್ಮ ಆದಾಯದ ಶೇ. 50 ಮೀರದಂತೆ ನೋಡಿಕೊಳ್ಳಬೇಕು. ಸಾಲ ತೆಗೆದುಕೊಂಡಾಗ ಇಎಂಐ ಕೂಡ ಇದೇ ವ್ಯಾಪ್ತಿಯಲ್ಲಿ ಬರಬೇಕು. ಈ ಅನಿವಾರ್ಯ ಖರ್ಚುಗಳು ಶೇ. 50ಕ್ಕಿಂತ ಕಡಿಮೆ ಇದ್ದರೆ, ಅದರಲ್ಲಿ ಮಿಗುವ ಹಣವನ್ನು ವ್ಯಯಿಸಬೇಡಿ.

ಇನ್ನು ಎರಡನೇ ವರ್ಗ ಅಗತ್ಯವಲ್ಲದ ಮತ್ತು ಐಷಾರಾಮಿ ಎನಿಸುವ ಖರ್ಚುಗಳು. ಇದರಲ್ಲಿ ನೀವು ಹೋಟೆಲ್​ಗೆ ಹೋಗಿ ತಿನ್ನುವುದು, ಆನ್​ಲೈನ್ ಶಾಪಿಂಗ್ ಮಾಡುವುದು, ಒಟಿಟಿ ಸಬ್​ಸ್ಕ್ರಿಪ್ಷನ್, ಪ್ರವಾಸ, ಹೊಸ ಗ್ಯಾಜೆಟ್ ಖರೀದಿ, ವಾಹನ ಖರೀದಿ, ಸಿನಿಮಾ ಇತ್ಯಾದಿ ಖರ್ಚುಗಳು ಇದರಲ್ಲಿ ಬರುತ್ತವೆ. ಈ ವಿಭಾಗದಲ್ಲಿ ನೀವು ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ ಮಾಡಲು ಯತ್ನಿಸಬಹುದು.

ಇದನ್ನೂ ಓದಿ: 2010ರಿಂದ ತಿಂಗಳಿಗೆ 15,000 ರೂ ಹೂಡಿಕೆ; ಇವತ್ತು ನೀವು ಕೋಟ್ಯಾಧಿಪತಿ; ಸಿಂಪಲ್ 15x15x15 ಫಾರ್ಮುಲಾದಿಂದ ಸಾಧ್ಯ

ನೀವು ಖರ್ಚು ಕಡಿಮೆ ಮಾಡಿ ಉಳಿಸಿದ ಹಣವನ್ನು ಹೂಡಿಕೆಗೆ ವರ್ಗಾಯಿಸಬಹುದು. ಅದಕ್ಕಿಂತ ಮುನ್ನ ಒಂದು ತುರ್ತು ನಿಧಿ ಮಾಡಿ ಅದರಲ್ಲಿ ನಿಮ್ಮ ಮಾಸಿಕ ವೆಚ್ಚದ ಆರರಷ್ಟು ಹಣವನ್ನು ಕೂಡಿಡಬೇಕು. ಇದು ನಿಮ್ಮ ಹಣಕಾಸು ಸಂಕಷ್ಟಕ್ಕೆ ಶಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ. ಎಮರ್ಜೆನ್ಸಿ ಫಂಡ್ ಭರ್ತಿಯಾಗಿ ನಂತರ ಉಳಿಯುವ ಹಣವನ್ನು ಹೂಡಿಕೆಗೆ ಬಳಸಬಹುದು. ಹೀಗೆ ನೀವು ನಿಮ್ಮ ಆದಾಯದಲ್ಲಿ ಹೂಡಿಕೆಗೆಂದು ನಿಗದಿ ಮಾಡಿಕೊಂಡಿರುವ ಶೇ. 20ರ ಪ್ರಮಾಣವನ್ನು ಶೇ. 30, ಶೇ. 40ಕ್ಕೆ ಹೆಚ್ಚಿಸಿದರೆ ಇನ್ನೂ ಗ್ರೇಟ್. ಇದು ಸಾಧ್ಯವಾಗಬೇಕಾದರೆ ನಿಮ್ಮ ಲೈಫ್​ಸ್ಟೈಲ್ ಬದಲಾವಣೆ ಆಗಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs NZ: ಭಾರತ ಟಿ20 ತಂಡದಲ್ಲಿ 2 ಬದಲಾವಣೆ; ವರ್ಷಗಳ ಬಳಿಕ ಶ್ರೇಯಸ್​ಗೆ ಅವಕಾಶ – Kannada News | Team India T20 Squad: Washington Sundar, Tilak Varma Out; Ravi Bishnoi, Shreyas Iyer In for NZ Series

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಡುವೆ ಟೀಂ ಇಂಡಿಯಾದಲ್ಲಿ (India vs New Zealand) ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆದಾಗ್ಯೂ ಈ ಬದಲಾವಣೆ ಏಕದಿನ ತಂಡದಲ್ಲಿ ಆಗಿಲ್ಲ. ಬದಲಾಗಿ ಮುಂಬರುವ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ವಾಸ್ತವವಾಗಿ ಭಾರತ ಟಿ20 ತಂಡದಲ್ಲಿ ಇಬ್ಬರು ಆಟಗಾರರು ಪ್ರಸ್ತುತ ಗಾಯಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಸಿಸಿಐ (BCCI) ಗಾಯಗೊಂಡಿರುವ ಆಟಗಾರರ ಬದಲಿಗೆ ಬದಲಿ ಆಟಗಾರರನ್ನು ಘೋಷಿಸಿದೆ. ಅದರಂತೆ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರ ಬದಲಿಗೆ ರವಿ ಬಿಷ್ಣೋಯ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಇಬ್ಬರು ಔಟ್, ಇಬ್ಬರು ಇನ್

ಜನವರಿ 11 ರಂದು ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಪಕ್ಕೆಲುಬುಗಳಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿತು. ಹೀಗಾಗಿ ಅವರ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರನಡೆದಿದ್ದರು. ಆ ಬಳಿಕ ಸುಂದರ್ ಅವರನ್ನು ಪರೀಕ್ಷಿಸಿದ್ದ ವೈದ್ಯಕೀಯ ತಂಡ ಅವರಿಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದೆ. ಏತನ್ಮಧ್ಯೆ, ತಿಲಕ್ ವರ್ಮಾ ಈಗಾಗಲೇ ಗಾಯದಿಂದಾಗಿ ಮೊದಲ ಮೂರು ಟಿ20ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಬದಲಿಗೆ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

3 ಪಂದ್ಯಗಳಿಗೆ ಶ್ರೇಯಸ್ ಆಯ್ಕೆ

ಮತ್ತೊಂದೆಡೆ, ಗಾಯಗೊಂಡ ತಿಲಕ್ ವರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಅಯ್ಯರ್ ಮೊದಲ ಮೂರು ಟಿ20 ಪಂದ್ಯಗಳಿಗೆ ತಂಡದ ಭಾಗವಾಗಿರುತ್ತಾರೆ. ಈ ಮೂಲಕ ಶ್ರೇಯಸ್ ಅಯ್ಯರ್ ಎರಡು ವರ್ಷಗಳ ನಂತರ ಭಾರತೀಯ ಟಿ20 ತಂಡಕ್ಕೆ ಮರಳಿದ್ದಾರೆ. ಕೊನೆಯ ಬಾರಿಗೆ ಡಿಸೆಂಬರ್ 2023 ರಲ್ಲಿ ಟೀಂ ಇಂಡಿಯಾ ಪರ ಅಯ್ಯರ್ ಟಿ20ಪಂದ್ಯವನ್ನು ಆಡಿದ್ದರು. ಏತನ್ಮಧ್ಯೆ, ರವಿ ಬಿಷ್ಣೋಯ್ ಫೆಬ್ರವರಿ 2025 ರಿಂದ ಟೀಂ ಇಂಡಿಯಾ ಪರ ಟಿ20ಪಂದ್ಯ ಆಡಿಲ್ಲ. ಆದ್ದರಿಂದ, ಈ ಸರಣಿಯು ಇಬ್ಬರೂ ಆಟಗಾರರಿಗೆ ಪ್ರಮುಖ ಅವಕಾಶವಾಗಿದ್ದು, ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಬೇಕಿದೆ.

ಏಕದಿನ ಸರಣಿ ಬಳಿಕ ಟಿ20 ಸರಣಿಯಿಂದಲೂ ವಾಷಿಂಗ್ಟನ್ ಸುಂದರ್ ಔಟ್

ಟಿ20 ಸರಣಿಗೆ ಟೀಂ ಇಂಡಿಯಾ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ಮೊದಲ ಮೂರು ಪಂದ್ಯ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್ (ಉಪನಾಯಕ), ರಿಂಕು ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಇಶನ್ ಕಿಶನ್ (ವಿಕೆಟ್ ಕೀಪರ್), ರವಿ ಬಿಷ್ಣೋಯ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:43 pm, Fri, 16 January 26

Source link

ನಾಳೆಯಿಂದ 2 ದಿನ ಬಂಗಾಳ, ಅಸ್ಸಾಂಗೆ ಪ್ರಧಾನಿ ಮೋದಿ ಭೇಟಿ; ಹಲವು ಯೋಜನೆಗಳಿಗೆ ಚಾಲನೆ – Kannada News | PM Narendra Modi to visit West Bengal and Assam on January 17 and 18 to inaugurate various projects

ನವದೆಹಲಿ, ಜನವರಿ 16: ಜನವರಿ 17 ಮತ್ತು 18ರಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಎರಡು ದಿನಗಳ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಪ್ರಮುಖ ರೈಲು ಮತ್ತು ರಸ್ತೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ “ಬಾಗುರುಂಬಾ ದ್ವೌ 2026″ದಲ್ಲಿ ಮೋದಿ ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ಪಶ್ಚಿಮ ಬಂಗಾಳದ ಮಾಲ್ಡಾಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮಾಲ್ಡಾ ಪಟ್ಟಣದ ರೈಲು ನಿಲ್ದಾಣದಲ್ಲಿ ಹೌರಾವನ್ನು ಗುವಾಹಟಿ (ಕಾಮಾಕ್ಯ)ಯನ್ನು ಸಂಪರ್ಕಿಸುವ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. 3,250 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: Video: ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಪ್ರಧಾನಿ ಮೋದಿ

ಜನವರಿ 17ರಂದು ಸಂಜೆ ಮೋದಿ ಅವರು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮವಾದ “ಬಾಗುರುಂಬಾ ದ್ವೌ 2026″ದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10,000ಕ್ಕೂ ಹೆಚ್ಚು ಕಲಾವಿದರು ಒಂದೇ ಬಾರಿಗೆ ಬಾಗುರುಂಬಾ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

ಕಲಿಯಾಬೋರ್‌ನಲ್ಲಿ 6,950 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ ಮೋದಿ ಭೂಮಿ ಪೂಜೆಯನ್ನು ಸಹ ಮಾಡಲಿದ್ದಾರೆ. 86 ಕಿ.ಮೀ. ಉದ್ದದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಪರಿಸರ ಸೂಕ್ಷ್ಮ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಯನ್ನು ಸಂರಕ್ಷಣೆಯೊಂದಿಗೆ ಸಮತೋಲನಗೊಳಿಸಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಗುಜರಾತ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

ಜನವರಿ 18ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಸುಮಾರು 830 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಮೋದಿ 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಾದ ಗುವಾಹಟಿ (ಕಾಮಾಕ್ಯ) – ರೋಹ್ಟಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ದಿಬ್ರುಗಢ – ಲಕ್ನೋ (ಗೋಮ್ತಿ ನಗರ) ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಹೊಸ ಸೇವೆಗಳು ಈಶಾನ್ಯ ಮತ್ತು ಉತ್ತರ ಭಾರತದ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ಪ್ರಯಾಣಿಕರಿಗೆ ಸುರಕ್ಷಿತ, ವೇಗದ ಮತ್ತು ಹೆಚ್ಚು ಅನುಕೂಲಕರ ಪ್ರಯಾಣವನ್ನು ಒದಗಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಎಂಸಿ ಚುನಾವಣಾ ಫಲಿತಾಂಶದ ಲೆಕ್ಕಾಚಾರ ಉಲ್ಟಾ; ಕಿಂಗ್ ಮೇಕರ್ ಆಗುತ್ತಾ ಕಾಂಗ್ರೆಸ್? – Kannada News | Mumbai BMC Election results bjp Fails to Grab Majority Congress Might become King Maker

ಮುಂಬೈ, ಜನವರಿ 16: ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಚುನಾವಣಾ ಮತ ಎಣಿಕೆ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಲೆಕ್ಕಾಚಾರವೇ ಉಲ್ಟಾ ಆಗುವಂತಿದೆ. ಬಿಎಂಸಿ ಚುನಾವಣೆಯಲ್ಲಿ (BMC Elections) ಬಿಜೆಪಿ ಅತಿ ಹೆಚ್ಚು ಮತಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ನಿಜವಾದರೂ ಬಿಜೆಪಿ ನೇತೃತ್ವದ ಮಹಾಯುತಿಗೆ ಇನ್ನೂ ಬಹುಮತ ಲಭ್ಯವಾಗಿಲ್ಲ. ಈ ಮೊದಲು ಬಹುಮತಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುಂದಿದ್ದ ಬಿಜೆಪಿ ಇದೀಗ ಕೊನೆಯ ಸುತ್ತಿನ ಮತ ಎಣಿಕೆ ವೇಳೆ ಕೊಂಚ ಹಿನ್ನಡೆ ಅನುಭವಿಸಿರುವುದರಿಂದ ಬಿಜೆಪಿಗೆ 110 ಸ್ಥಾನಗಳು ಸಿಕ್ಕಿವೆ. ಆದರೆ, ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೇರಲು 114 ಮ್ಯಾಜಿಕ್ ನಂಬರ್. ಈ ಸಂಖ್ಯೆಗೆ ಬಿಜೆಪಿ ಮೈತ್ರಿಗೆ ಇನ್ನೂ 4 ಸ್ಥಾನಗಳು ಬೇಕು.

ಇಲ್ಲಿಯವರೆಗೆ ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮತ್ತು ಶಿವಸೇನೆ ಶಿಂಧೆ ಬಣ ಮುನ್ನಡೆ ಸಾಧಿಸಿತ್ತು, ಆದರೆ ಈಗ ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದಲ್ಲಿ ದೊಡ್ಡ ತಿರುವು ಸಿಕ್ಕಿದೆ. ಕೊನೆಯ ಕ್ಷಣದಲ್ಲಿ ಸಂಖ್ಯೆಗಳು ಬದಲಾಗಿವೆ. ಇದರಿಂದಾಗಿ, ಬಿಜೆಪಿ ಮತ್ತು ಶಿವಸೇನಾ ಶಿಂಧೆ ಗುಂಪಿಗೆ ಚಡಪಡಿಕೆ ಹೆಚ್ಚಾಗಿದೆ. ಪ್ರಸ್ತುತ, ಬಿಜೆಪಿ 84 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಶಿವಸೇನಾ ಶಿಂಧೆ ಗುಂಪು 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದ್ದರಿಂದ, ಬಿಜೆಪಿ ಮತ್ತು ಶಿವಸೇನೆ ಒಟ್ಟು 110 ಅಭ್ಯರ್ಥಿಗಳಲ್ಲಿ ಮುನ್ನಡೆ ಸಾಧಿಸುತ್ತಿವೆ. ಮತ್ತೊಂದೆಡೆ, ಶಿವಸೇನಾ ಠಾಕ್ರೆ ಗುಂಪು 64 ಅಭ್ಯರ್ಥಿಗಳಲ್ಲಿ ಮುನ್ನಡೆ ಸಾಧಿಸುತ್ತಿದೆ ಮತ್ತು ಎಂಎನ್ಎಸ್ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಶಿವಸೇನಾ ಠಾಕ್ರೆ ಗುಂಪು ಮತ್ತು ಎಂಎನ್ಎಸ್ ಒಟ್ಟು 72 ಅಭ್ಯರ್ಥಿಗಳಲ್ಲಿ ಮುನ್ನಡೆ ಸಾಧಿಸಿವೆ.

ಇದನ್ನೂ ಓದಿ: BMC Election Exit Polls: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ

ಮುಂಬೈ ಮಹಾನಗರ ಪಾಲಿಕೆಯಲ್ಲಿ ಒಟ್ಟು 227 ಸ್ಥಾನಗಳಿವೆ, ಆದ್ದರಿಂದ ಯಾವುದೇ ಪಕ್ಷಕ್ಕೆ ಬಹುಮತದ ಗಡಿ ದಾಟಲು 114 ಸ್ಥಾನಗಳು ಬೇಕಾಗುತ್ತವೆ. ಪ್ರಸ್ತುತ, ಬಿಜೆಪಿ ಮತ್ತು ಶಿವಸೇನೆ ಶಿಂಧೆ ಬಣ ಬಹುಮತದ ಗಡಿಯ ಹತ್ತಿರದಲ್ಲಿದೆ. ಆದರೆ ಇನ್ನೂ ಅವರು ಬಹುಮತದ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿಗಳು ಇನ್ನೂ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಆದ್ದರಿಂದ ಪ್ರಸ್ತುತ ಅಂಕಿಅಂಶಗಳ ಪ್ರಕಾರ, ಕಾಂಗ್ರೆಸ್ ಈಗ ಮುಂಬೈನಲ್ಲಿ ಸರ್ಕಾರ ರಚಿಸಲು ಕಿಂಗ್‌ಮೇಕರ್ ಪಾತ್ರವನ್ನು ವಹಿಸಬಹುದು. ಕಾಂಗ್ರೆಸ್ ಜೊತೆಗೆ, ಗೆಲ್ಲುವ ಸ್ವತಂತ್ರ ಅಭ್ಯರ್ಥಿಯೂ ದೊಡ್ಡ ಆಟವಾಡುವ ಸಾಧ್ಯತೆಯಿದೆ. ಏಕೆಂದರೆ ಸ್ವತಂತ್ರ ಅಭ್ಯರ್ಥಿಗಳು ಮುಂಬೈನಲ್ಲಿ ಕನಿಷ್ಠ 10 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಹೀಗಾಗಿ, ಮುಂಬೈನಲ್ಲಿ ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲ ಇನ್ನೂ ಬಾಕಿ ಉಳಿದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಲಾರಲಿಂಗನಿಗೆ ಬಲಿ ಕೊಡಲು ತಂದಿದ್ದ ಕುರಿಮರಿಗಳನ್ನ ವಶಕ್ಕೆ ಪಡೆದು ಮಾರಾಟ ಮಾಡಿದ ಅಧಿಕಾರಿಗಳು – Kannada News | Yadgir Mailarlingeshwar Jatre: Temple revenue 23 Lakhs from Lamb Tenders After Ban

ಮೈಲಾರಲಿಂಗನ ಜಾತ್ರೆಗೆ ಭಕ್ತರು ತಂದಿದ್ದ ಕುರಿಮರಿಗಳು

ಯಾದಗಿರಿ, ಜನವರಿ 16: ಕಲ್ಯಾಣ ಕರ್ನಾಟಕ ಭಾಗದಲ್ಲೇ ಅತ್ಯಂತ ಪ್ರಸಿದ್ಧ ಮೈಲಾರಲಿಂಗನ ಜಾತ್ರೆ (mailaralingeshwara jatre) ಅದ್ಧೂರಿಯಾಗಿ ನಡೆದಿದೆ. ಜಾತ್ರೆಯಲ್ಲಿ ಮೈಲಾರನ ಪಲ್ಲಕ್ಕಿ ಮೇಲೆ ಭಕ್ತರು ಕುರಿಮರಿಗಳನ್ನ ಎಸೆಯಲು ತೆಗೆದುಕೊಂಡು ಬರುತ್ತಾರೆ. ಆದರೆ ಈ ಪದ್ದತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು (Devotees) ತಂದಿದ್ದ ಕುರಿಮರಿಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಅದೇ ಕುರಿಮರಿಗಳನ್ನ ಟೆಂಡರ್ ಮೂಲಕ ರೈತರಿಗೆ ಮಾರಾಟ ಮಾಡಿದ್ದರಿಂದ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಲಕ್ಷ ಲಕ್ಷ ಆದಾಯ ಹರಿದು ಬಂದಿದೆ.

ಯಾದಗಿರಿ ತಾಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆದಿದೆ. ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಲಕ್ಷಾಂತರ ಭಕ್ತರ ದಂಡೆ ಜಾತ್ರೆಗೆ ಹರಿದು ಬಂದಿತ್ತು. ಈ ಜಾತ್ರೆಯಲ್ಲಿ ಮೈಲಾರಲಿಂಗನನ್ನ ಪಲ್ಲಕ್ಕಿಯಲ್ಲಿ ಕುರಿಸಿಕೊಂಡು ಸಂಕ್ರಮಣದ ದಿನದಂದು ಹೊನ್ನ ಕೆರೆಗೆ ಗಂಗಾ ಸ್ನಾನ ಮಾಡಿಸಲು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಗುತ್ತೆ. ಈ ವೇಳೆ ಪಲ್ಲಕ್ಕಿ ಮೇಲೆ ಕುರಿಮರಿಗಳ ಎಸೆದು ಹರಕೆ ತೀರಿಸುವುದು ಇಲ್ಲಿನ ವಾಡಿಕೆ ಆಗಿತ್ತು.

ಭಕ್ತರು ತಂದಿದ್ದ 778 ಕುರಿಮರಿಗಳ ಜಪ್ತಿ

ಪ್ರಾಣಿ ಹಿಂಸೆ ಮಾಡಬಾರದು ಎನ್ನುವ ಕಾರಣಕ್ಕೆ ಈ ಸಂಪ್ರದಾಯಕ್ಕೆ ಕಳೆದ ಕೆಲ ವರ್ಷಗಳಿಂದ ಬ್ರೇಕ್ ಹಾಕಲಾಗಿದೆ. ಆದರೂ ಭಕ್ತರು ನೂರಾರು ಕುರಿಮರಿಗಳನ್ನ ಪಲ್ಲಕ್ಕಿ ಮೇಲೆ ಎಸೆಯಲು ತೆಗೆದುಕೊಂಡು ಬರುತ್ತಾರೆ. ಇದ್ದನ್ನ ತಡೆಯೋಕೆ ಜಿಲ್ಲಾಡಳಿತ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟ್​​ಗಳನ್ನು ನಿರ್ಮಿಸಿತ್ತು. ಹೀಗಾಗಿ ಭಕ್ತರು ಆಗಮಿಸುತ್ತಿದ್ದಂತೆ ಪೊಲೀಸರು ವಾಹನಗಳನ್ನ ಪರಿಶೀಲನೆ ನಡೆಸಿ ಭಕ್ತರು ತಂದಿದ್ದ ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಯಾದಗಿರಿ ಮೈಲಾರಲಿಂಗ ಜಾತ್ರೆಯಲ್ಲಿ ಹಳದಿ ಮಾರುತ: ಭಂಡಾರದೋಕುಳಿಯಲ್ಲಿ ಮುಂದೆದ್ದ ಭಕ್ತರು

ಈ ವರ್ಷ ಭಕ್ತರು ತಂದಿದ್ದ 778 ಕುರಿಮರಿಗಳನ್ನ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸರು ಜಪ್ತಿ ಮಾಡಿದ ಕುರಿಮರಿಗಳನ್ನು ಪಶು ಇಲಾಖೆಯಿಂದ ನಿರ್ಮಾಣ ಮಾಡಲಾಗಿದ್ದ ಶೆಡ್​ನಲ್ಲಿ ಇಡಲಾಗಿತ್ತು. ಇದೇ ಕುರಿಮರಿಗಳಿಂದ ಇದೀಗ ದೇವಸ್ಥಾನಕ್ಕೆ ಲಕ್ಷಾಂತರ ರೂ. ಆದಾಯ ಹರಿದು ಬಂದಿದೆ.

ಪ್ರತಿ ವರ್ಷ ಜಾತ್ರೆಯಲ್ಲಿ ವಶ ಪಡಿಸಿಕೊಂಡ ಕುರಿಮರಿಗಳನ್ನ ಯಾದಗಿರಿ ನಗರದಲ್ಲಿರುವ ಪಶು ಆಸ್ಪತ್ರೆಗೆ ತರಲಾಗುತ್ತೆ. ಇಲ್ಲಿ ಶೆಡ್​ಗಳನ್ನ ಮಾಡಿ ಕುರಿಗಳನ್ನ ಇರಿಸಲಾಗುತ್ತಿತ್ತು. ಬಳಿಕ ಹರಾಜ್ ಮೂಲಕ ತಲಾ 20 ಕುರಿಗಳನ್ನ ರೈತರಿಗೆ ಹಾಗೂ ವ್ಯಾಪರಸ್ಥರಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಪಶು ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಇಡುವುದರಿಂದ ಕೆಲ ಕುರಿಮರಿಗಳು ಸಾವನ್ನಪ್ಪುತ್ತಿದ್ದವು. ಇದೆ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಗೂ ಮುನ್ನವೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಆಸಕ್ತ ರೈತರು ಮತ್ತು ವ್ಯಾಪರಸ್ಥರಿಗೆ ಕರೆದು ಟೆಂಡರ್ ಮಾಡಲಾಗುತ್ತಿದೆ.

ಯಾರೇ ಕುರಿಮರಿಗಳನ್ನ ಖರೀದಿ ಮಾಡಿದರೂ ಕನಿಷ್ಟ 100 ಕುರಿಗಳನ್ನ ಖರೀದಿ ಮಾಡಬೇಕಾಗಿತ್ತು. ಪ್ರತಿ ಕುರಿಮರಿಗೆ ಅಧಿಕಾರಿಗಳು 1700 ರೂ ದರ ನಿಗದಿ ಮಾಡಿದ್ದರು. ಇದರ ಮೇಲೆ ಟೆಂಡರ್​ನಲ್ಲಿ ಭಾಗವಹಿಸಿದವರು ಬೆಲೆ ಏರಿಸಿ ಟೆಂಡರ್ ಪಡೆಯಬಹುದಾಗಿತ್ತು. ಒಟ್ಟು ಈ ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ 15 ಜನರು ಭಾಗವಹಿಸಿದ್ದರು. ಪ್ರತಿಯೊಂದು ಕುರಿಗೆ 2800 ರೂ ಯಿಂದ ಹಿಡಿದು 3211 ರೂ. ತನಕ ಬೆಲೆಯನ್ನ ಏರಿಕೆ ಮಾಡಿ ಟೆಂಡರ್ ಪಡೆದಿದ್ದರು. ಸುಮಾರು 8 ಜನರಿಗೆ ಮಾತ್ರ ಕುರಿಗಳನ್ನ ಖರೀದಿ ಮಾಡುವುದ್ದಕ್ಕೆ ಅವಕಾಶ ಸಿಕ್ಕಿದೆ.

23 ಲಕ್ಷಕ್ಕೂ ಅಧಿಕ ಆದಾಯ

ಮೈಲಾರಪುರ ಹತ್ತಿರ ಹಾಕಿದ್ದ ಶೆಡ್ ಬಳಿಯ ಟೆಂಡರ್ ಪಡೆದವರು 100 ಕುರಿಮರಿಗಳ ಜಮಾ ಆಗುತ್ತಿದ್ದ ಹಾಗೆ ವಾಹನ ತಂದು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಸುಮಾರು ದೇವಸ್ಥಾನಕ್ಕೆ 23 ಲಕ್ಷಕ್ಕೂ ಅಧಿಕ ಆದಾಯ ಹರಿದು ಬಂದಿದೆ. ಕಳೆದ ಬಾರಿ 760 ಕುರಿಗಳನ್ನ ವಶಕ್ಕೆ ಪಡೆಯಲಾಗಿದ್ದು, ಸುಮಾರು 19 ಲಕ್ಷ ರೂ ಆದಾಯ ಬಂದಿತ್ತು. ಆದರೆ ಈ ಬಾರಿ ಟೆಂಡರ್​ನಿಂದ ಹೆಚ್ಚಿನ ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ. ಇನ್ನು ಕುರಿಮರಿಗಳ ಟೆಂಡರ್​ನಿಂದ ಹರಿದು ಬಂದ ಹಣದಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಬಳಕೆ ಮಾಡಲಾಗುವುದು.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಏನು ಸಿಕ್ತು? ಮುಂದೇನು? ಅಧಿಕಾರಿ ಹೇಳಿದ್ದಿಷ್ಟು

ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನ ಎಸೆಯುವ ಪದ್ಧತಿಗೆ ಬ್ರೇಕ್ ಬಿದ್ದಿರುವ ಕಾರಣಕ್ಕೆ ಭಕ್ತರು ತಂದಿದ್ದ ಕುರಿಮರಿಗಳಿಂದ ದೇವಸ್ಥಾನಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ. ಹೀಗಾಗಿ ಕುರಿಮರಿಗಳಿಂದ ಬಂದ ಹಣದಿಂದ ದೇವಸ್ಥಾನದಲ್ಲಿ ಭಕ್ತರಿಗಾಗಿ ಮೂಲಭೂತ ಸೌಕರ್ಯಗಳನ್ನ ಒದಗಿಸುವ ಕೆಲಸ ಕೂಡ ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:34 pm, Fri, 16 January 26

Source link

Spiritual Power: ರುದ್ರಾಕ್ಷಿ ಧರಿಸುವ ಮುನ್ನ ತಿಳಿದುಕೊಳ್ಳಲೇಬೇಕಾದ ನಿಯಮಗಳಿವು – Kannada News | Rudraksha Benefits and Wearing Rules: Spiritual Power and Protection Guide

ರುದ್ರಾಕ್ಷವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ರುದ್ರಾಕ್ಷಿಯಿಂದ ಮಂತ್ರ ಜಪಿಸುವುದು ಬಹಳ ಫಲಪ್ರದವೆಂದು ಪರಿಗಣಿಸಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯಿಂದ ಜಪಿಸುವುದರಿಂದ ಹಲವು ಪಟ್ಟು ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಇದನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ, ಆದರೆ ಶಾಸ್ತ್ರಗಳು ಅದನ್ನು ಧರಿಸಲು ನಿಯಮಗಳನ್ನು ಸಹ ಸೂಚಿಸುತ್ತವೆ. ಶಾಸ್ತ್ರಗಳಲ್ಲಿ ಸೂಚಿಸಲಾದ ನಿಯಮಗಳ ಪ್ರಕಾರ ಇದನ್ನು ಧರಿಸಬೇಕು. ಇಲ್ಲದಿದ್ದರೆ, ಪ್ರಯೋಜನದ ಬದಲು, ಅದು ಹಾನಿಯನ್ನುಂಟುಮಾಡಬಹುದು.

ರುದ್ರಾಕ್ಷಿ ಧರಿಸುವ ನಿಯಮಗಳು:

ರುದ್ರಾಕ್ಷಿಯನ್ನು ಈ ರೀತಿ ಧರಿಸಿ:

ಮಾರುಕಟ್ಟೆಯಿಂದ ನೇರವಾಗಿ ತರಿಸಿದ ರುದ್ರಾಕ್ಷಿಯನ್ನು ಎಂದಿಗೂ ಧರಿಸಬೇಡಿ. ಬದಲಾಗಿ, ಅದನ್ನು ಗಂಗಾ ಜಲ ಅಥವಾ ಹಸಿ ಹಾಲಿನಿಂದ ಶುದ್ಧೀಕರಿಸಿ. ನಂತರ ಧರಿಸಿ. ಶುಭ ಸಮಯದಲ್ಲಿ 108 ಬಾರಿ “ಓಂ ನಮಃ ಶಿವಾಯ” ಎಂದು ಜಪಿಸಿ ಅಥವಾ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಮುಟ್ಟಿ. ನಂತರ ರುದ್ರಾಕ್ಷಿಯನ್ನು ಧರಿಸಿ.

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ:

ರುದ್ರಾಕ್ಷಿ ಧರಿಸುವ ಮೊದಲು, ಶುಭ ದಿನವನ್ನು ಪರೀಕ್ಷಿಸಲು ಮರೆಯದಿರಿ. ರುದ್ರಾಕ್ಷಿ ಧರಿಸಲು ಅತ್ಯಂತ ಶುಭ ದಿನಗಳು ಅಮಾವಾಸ್ಯೆ, ಪೂರ್ಣಿಮೆ, ಶ್ರಾವಣ, ಸೋಮವಾರ ಅಥವಾ ಶಿವರಾತ್ರಿ ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೆ, ಯಾವಾಗಲೂ ರುದ್ರಾಕ್ಷಿಯನ್ನು ಸ್ವಚ್ಛವಾಗಿಡಿ. ಇದಲ್ಲದೆ, ನೀವು ಧರಿಸಿರುವ ರುದ್ರಾಕ್ಷಿಯನ್ನು ಬೇರೆಯವರಿಗೆ ಎಂದಿಗೂ ನೀಡಬೇಡಿ, ಅಥವಾ ಬೇರೆಯವರ ರುದ್ರಾಕ್ಷಿಯನ್ನು ತೆಗೆದುಕೊಳ್ಳಬೇಡಿ. ನೀವು ಈ ನಿಯಮಗಳನ್ನು ನಿರ್ಲಕ್ಷಿಸಿದರೆ, ರುದ್ರಾಕ್ಷಿಯ ಪ್ರಯೋಜನಗಳ ಬದಲಿಗೆ ನೀವು ಅಶುಭ ಫಲಿತಾಂಶಗಳನ್ನು ಅನುಭವಿಸಬಹುದು.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ರುದ್ರಾಕ್ಷಿ ಧರಿಸುವುದರಿಂದಾಗುವ ಪ್ರಯೋಜನಗಳು:

ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ನಕಾರಾತ್ಮಕ ಶಕ್ತಿ ಮತ್ತು ದುಷ್ಟ ಕಣ್ಣುಗಳನ್ನು ದೂರವಿಡುತ್ತದೆ. ಅಶುದ್ಧ ಮತ್ತು ದುಷ್ಟ ಆಲೋಚನೆಗಳನ್ನು ದೂರವಿಡಲಾಗುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಇದು ಗ್ರಹಗಳ ಋಣಾತ್ಮಕ ಪರಿಣಾಮಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ – Kannada News | Bengaluru Maid Caught: Stolen Watch on WhatsApp Status Leads to Arrest

ಬೆಂಗಳೂರು ಜ.16: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು, ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ, ಇದೀಗ ಯಜಮಾನನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ (Bengaluru Maid Caught) ನಡೆದಿದೆ. ಬ್ರಾಂಡ್ ವಾಚ್ ಧರಿಸಿದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್​​​​ನಲ್ಲಿ ಹಾಕಿಕೊಂಡಿರುವುದೇ, ಆಕೆ ಸಿಕ್ಕಿ ಬೀಳಲು ಕಾರಣವಾಗಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ.

ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಹಿರಿಯ ಉತ್ಪನ್ನ ವ್ಯವಸ್ಥಾಪಕ ಆಗಿರುವ ರೋಹಿತ್ (39)ಅವರು ಜನವರಿ 5 ರಂದು ಈ ಬಗ್ಗೆ ದೂರು ನೀಡಿದ್ದಾರೆ. ಡಿಸೆಂಬರ್ 8, 2025 ರಂದು ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೋಹಿತ್ ಅವರು ಸೌಮ್ಯ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಇಲ್ಲ ನಾನು ಕದ್ದಿಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಯಾವುದನ್ನು ಕದ್ದಿಲ್ಲ ಎಂದು ಹೇಳಿದ್ದಾಳೆ. ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾ ತನ್ನ ವಾಟ್ಸಾಪ್ ಸ್ಟೇಟಸ್​​​ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿಕೊಂಡಿದ್ದಾಳೆ.

ಇದನ್ನೂ ಓದಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಆತ್ಮಹತ್ಯೆ, ಕಾರಣ ಏನು ಗೊತ್ತಾ?

ರೋಹಿತ್​​ ಈ ಫೋಟೋದ ಬಗ್ಗೆ ತನ್ನ ಕುಟುಂಬದವರನ್ನು ಕೇಳಿದ್ದಾರೆ. ಈ ವೇಳೆ ಮನೆಯವರು ಹೌದು ಇದು ನಮ್ಮ ವಾಚ್ ಎಂದು ಹೇಳಿದ್ದಾರೆ. ನಂತರ ತನ್ನ ಮನೆಯಿಂದ ಕದ್ದ ಅದೇ ಗಡಿಯಾರ ಎಂದು ತಿಳಿದು. ಸೌಮ್ಯಾ ಹಾಕಿದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್‌ಶಾಟ್‌ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 8 ರಂದು ಸೌಮ್ಯಾಳನ್ನು ಬಂಧಿಸಲಾಯಿತು. ವಿಚಾರಣೆಯ ನಿಜ ಒಪ್ಪಿಕೊಂಡಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20,000 ರೂ. ಮೌಲ್ಯದ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:00 pm, Fri, 16 January 26

Source link

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು – Kannada News | Ballari SP Details Strict Security for BJP Protest Amidst Banner and Firing Tensions

ಬಳ್ಳಾರಿ, ಜನವರಿ 16: ಬ್ಯಾನರ್​​​ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಎಸ್​​ಪಿ ಸುಮನ್ ಡಿ.ಪನ್ನೇಕರ್​ ಪ್ರತಿಕ್ರಿಯಿಸಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್​ಪಿ, 7 ಹೆಚ್ಚವರಿ ಎಸ್​​​ಪಿ, 15 ಡಿವೈಎಸ್​ಪಿ, 55 ಸಿಪಿಐ, 122 ಪಿಎಸ್ಐ, 81 ಎಎಸ್ಐ, 1233 ಪೊಲೀಸ್ ಕಾನ್ಸ್​ಟೇಬಲ್, 171 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಮ್​ಗಾರ್ಡ್​ ಸಿಬ್ಬಂದಿ, 12 ಡಿಎಆರ್ ತುಕಡಿ, 17 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸಮಾವೇಶದ ಆಯೋಜಕರಿಂದ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Startup India @10: ಸ್ಟಾರ್ಟಪ್ ಇಂಡಿಯಾಗೆ ದಶಕದ ಸಂಭ್ರಮ; ಸಾಧನೆ, ಮೈಲಿಗಲ್ಲುಗಳೇನು? ಇಲ್ಲಿದೆ ವಿವರ – Kannada News | Startup India’s 10 Year Journey: Fuelling India’s Entrepreneurial Growth & Vikasit Bharat

ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಹಳ ಮುತುವರ್ಜಿಯಿಂದ ಆರಂಭಿಸಿದ ಸ್ಟಾರ್ಟಪ್ ಇಂಡಿಯಾ ಯೋಜನೆಗೆ (Startup India Program) 10 ವರ್ಷದ ಸಂಭ್ರಮ ಇಂದು. 2016ರಲ್ಲಿ ದೇಶದ ಉದ್ದಿಮೆಗಾರಿಕೆಗೆ ಉತ್ತೇಜಿಸಲು ಸಣ್ಣದಾಗಿ ಶುರುವಾದ ಸ್ಟಾರ್ಟಪ್ ಇಂಡಿಯಾ ಇದೀಗ ಬಹಳ ವ್ಯಾಪಕವಾದ ಇಕೋಸಿಸ್ಟಂ ಆಗಿ ಬೆಳೆದಿದೆ. ವಿಕಸಿತ ಭಾರತ 2047ರ ಗುರಿ ತಲುಪಲು ದೇಶದ ಪ್ರಗತಿಯ ಎಂಜಿನ್ ಆಗಿ ಮಾರ್ಪಾಡುಗೊಂಡಿದೆ. ನಗರ ಮತ್ತು ಗ್ರಾಮೀಣ ಭಾಗಗಳ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಿದೆ. ಮಹಿಳೆಯರ ನೇತೃತ್ವದ ಸ್ಟಾರ್ಟಪ್​ಗಳಿಗೆ ಉತ್ತೇಜನ ಸಿಕ್ಕಿದೆ. ಸಮತೋಲಿತ ಸಮಾಜ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಇದು ಪುಷ್ಟಿ ಕೊಟ್ಟಿದೆ.

2025ರ ಡಿಸೆಂಬರ್​ನಲ್ಲಿ ಡಿಪಿಐಐಟಿ ಮಾನ್ಯತೆ ಪಡೆದಿರುವ ಎರಡು ಲಕ್ಷಕ್ಕೂ ಅಧಿಕ ಸ್ಟಾರ್ಟಪ್​ಗಳಿವೆ. ವಿಶ್ವದಲ್ಲೇ ಅತಿದೊಡ್ಡ ಸ್ಟಾರ್ಪಟ್ ಇಕೋಸಿಸ್ಟಂ ಹೊಂದಿದ ದೇಶಗಳಲ್ಲಿ ಭಾರತವೂ ಇದೆ. ಅರ್ಧದಷ್ಟು ಸ್ಟಾರ್ಟಪ್​ಗಳು ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲೇ ಹುಟ್ಟಿರುವುದು ವಿಶೇಷ. ಎಸ್​ವಿಇಪಿ, ಆಸ್ಪೈರ್, ಎಸ್​ಎಂಇಜಿಪಿ ಇತ್ಯಾದಿ ಯೋಜನೆಗಳು ಗ್ರಾಮೀಣ ಭಾಗದಲ್ಲಿ ಸಣ್ಣ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ಕೊಡುತ್ತಿರುವುದು ಗಮನಾರ್ಹ. ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ ಹಲವಾರು ಯೋಜನೆಗಳು, ಸ್ಕೀಮ್​ಗಳನ್ನು ತರಲಾಗಿದೆ. ಅದರ ವಿವರ ಇಲ್ಲಿದೆ:

ಸ್ಟಾರ್ಟಪ್​ಗಳಿಗೆ ಫಂಡ್ (ಎಫ್​ಎಫ್​ಎಸ್): ಡಿಪಿಐಐಟಿ ಅಡಿಯಲ್ಲಿ ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ಸ್ ಸ್ಕೀಮ್ (FFS- Fund of Funds for Startups) ರಚಿಸಲಾಗಿದೆ. ಇದು ಸೆಬಿ ನೊಂದಾಯಿತ ಆಲ್ಟರ್ನೇಟಿವ್ ಇನ್ವೆಸ್ಟ್​ಮೆಂಟ್ ಫಂಡ್​ಗಳಿಗೆ ನೆರವು ನೀಡುತ್ತದೆ. ಈ 140ಕ್ಕೂ ಅಧಿಕ ಎಐಎಫ್​ಗಳು 1,370ಕ್ಕೂ ಅಧಿಕ ಸ್ಟಾರ್ಟಪ್​ಗಳಿಗೆ 25,500 ಕೋಟಿ ರೂಗೂ ಅಧಿಕ ಮೊತ್ತದ ಹೂಡಿಕೆಗಳನ್ನು ಮಾಡಿವೆ.

ಕ್ರೆಡಿಟ್ ಗ್ಯಾರಂಟೀ ಸ್ಕೀಮ್: ಈ ಸಿಜಿಎಸ್​​ಎಸ್ ಸ್ಕೀಮ್​ನಲ್ಲಿ (Credit Guarantee Scheme for Startups) 800 ಕೋಟಿ ರೂಗೂ ಹೆಚ್ಚು ಮೊತ್ತದಷ್ಟು 330ಕ್ಕೂ ಹೆಚ್ಚು ಸಾಲಗಳನ್ನು ವಿತರಿಸಲಾಗಿದೆ.

ಸೀಡ್ ಫಂಡ್ ಸ್ಕೀಮ್: ಸ್ಟಾರ್ಟಪ್​ಗಳ ಆರಂಭಿಕ ಹಂತದಲ್ಲಿ ಉತ್ತೇಜನ ನೀಡಲು ಈ ಸ್ಕೀಮ್ (SISFS- Startup India Seed Fund Scheme) ರಚಿಸಲಾಗಿದೆ. ಇನ್ಕುಬೇಟರ್​ಗಳ ಮೂಲಕ ಸ್ಟಾರ್ಟಪ್​ಗಳಿಗೆ ಸೀಡ್ ಫಂಡಿಂಗ್ ಕೊಡಲಾಗುತ್ತದೆ.

ಸ್ಟಾರ್ಟಪ್ ಇಂಡಿಯಾ ಹಬ್: ಸ್ಟಾರ್ಟಪ್ ಇಕೋಸಿಸ್ಟಂನ ಮುಖ್ಯ ಪಾತ್ರಧಾರಿಗಳಾದ ಹೂಡಿಕೆದಾರರು, ಮೆಂಟರ್​​ಗಳು, ಇನ್ಕುಬೇಟರ್​ಗಳು, ಉದ್ದಿಮೆದಾರರು ಎಲ್ಲರೂ ಒಂದೇ ಕಡೆ ಸಿಗುವಂತಾಗಲು ಒಂದು ಆನ್ಲೈನ್ ಪ್ಲಾಟ್​ಫಾರ್ಮ್ ರಚಿಸಲಾಗಿದೆ.

ರಾಜ್ಯಗಳ ಸ್ಟಾರ್ಟಪ್ ರ್ಯಾಂಕಿಂಗ್ ಫ್ರೇಮ್​ವರ್ಕ್: ಸ್ಟಾರ್ಟಪ್​ಗಳ ಆರಂಭ ಮತ್ತು ಬೆಳವಣಿಗೆಗೆ ಉತ್ತೇಜಿಸುವಂತಹ ಅತ್ಯುತ್ತಮ ನೀತಿ ಮತ್ತು ವಾತಾವರಣ ಹೊಂದಿರುವಂತಹ ರಾಜ್ಯಗಳನ್ನು ಗುರುತಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ.

ನ್ಯಾಷನಲ್ ಮೆಂಟರ್​ಶಿಪ್ ಪೋರ್ಟಲ್ (ಮಾರ್ಗ್): ಉದ್ದಿಮೆದಾರರಿಗೆ ಅನುಭವಿ ಮೆಂಟರ್​ಗಳನ್ನು (ಮಾರ್ಗದರ್ಶಕರು) ದೊರಕಿಸಿಕೊಡುವಂತಹ ಒಂದು ವ್ಯವಸ್ಥೆಯನ್ನು ಮಾರ್ಗ್ ಯೋಜನೆ ಮೂಲಕ ಮಾಡಲಾಗುತ್ತಿದೆ.

ಸ್ಟಾರ್ಟಪ್ ಇಂಡಿಯಾ ಇನ್ವೆಸ್ಟರ್ ಕನೆಕ್ಟ್ ಪೋರ್ಟಲ್: ಉದ್ದಿಮೆದಾರರು ಒಂದೇ ಅರ್ಜಿ ಮೂಲಕ ಹಲವು ಹೂಡಿಕೆದಾರರನ್ನು ತಲಪಲು ಅಥವಾ ಆಕರ್ಷಿಸಲು ವಿಶೇಷ ಡಿಜಿಟಲ್ ಪ್ಲಾಟ್​ಫಾರ್ಮ್ ರಚಿಸಲಾಗಿದೆ. ವೆಂಚರ್ ಕ್ಯಾಪಿಟಲ್ ಫಂಡ್​ಗಳು ಮತ್ತು ಹೂಡಿಕೆದಾರರನ್ನು ಈ ಪೋರ್ಟಲ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: G-RAM-G: ಜಿ ರಾಮ್‌ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ

ಸ್ಟಾರ್ಟಪ್ ಇಕೋಸಿಸ್ಟಂ ಗಟ್ಟಿಗೊಳಿಸಲು ವಿವಿಧ ಉಪಕ್ರಮಗಳು…

ಅಟಲ್ ಇನ್ನೋವೇಶನ್ ಮಿಷನ್: ಅಟಲ್ ಟಿಂಕರಿಂಗ್ ಲ್ಯಾಬ್, ಕಮ್ಯೂನಿಟಿ ಇನ್ನೋವೇಟರ್ ಫೆಲೋಶಿಪ್, ಯೂತ್ ಕೋ ಲ್ಯಾಬ್ ಪ್​ರೋಗ್ರಾಮ್, ಡೀಪ್​ಟೆಕ್ ರಿಯಾಕ್ಟರ್, ಲಿಪಿ ಇತ್ಯಾದಿ ವಿವಿಧ ಯೋಜನೆಗಳ್ನು ಈ ಮಿಷನ್​ನಲ್ಲಿ ಜಾರಿಗೊಳಿಸಲಾಗಿದೆ. ಹೊಸ ತಲೆಮಾರಿನ ತಂತ್ರಜ್ಞಾನಗಳಲ್ಲಿ ಯುವಕರು ನಾವೀನ್ಯತೆ ತೋರಲು ಉತ್ತೇಜಿಸುವುದು, ತಳಮಟ್ಟದಿಂದ ಉದ್ದಿಮೆಗಾರಿಕೆಗೆ ಪ್ರೋತ್ಸಾಹಿಸುವುದು ಇತ್ಯಾದಿ ಕೆಲಸಗಳನ್ನು ಈ ಮಿಷನ್​ನಲ್ಲಿ ಮಾಡಲಾಗುತ್ತಿದೆ.

ಜೆನೆಸಿಸ್ ಯೋಜನೆ: ಡೀಪ್ ಟೆಕ್ ಕ್ಷೇತ್ರದಲ್ಲಿ ಇನ್ನೋವೇಶನ್ ಅನ್ನು ಪ್ರೋತ್ಸಾಹಿಸಲು ಜನರೇಶನ್ ನೆಕ್ಸ್ಟ್ ಸಪೋರ್ಟ್ ಫಾರ್ ಇನ್ನೋವೇಟಿವ್ ಸ್ಟಾರ್ಟಪ್ಸ್ (ಜೆನೆಸಿಸ್) ಎನ್ನುವ ಒಂದು ಪ್ಲಾಟ್​​ಫಾರ್ಮ್ ರಚಿಸಲಾಗಿದೆ.

ಎಂಎಸ್​ಎಚ್ ಯೋಜನೆ: ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಡಿ ಸ್ಟಾರ್ಟಪ್ ಹಬ್ ಎನ್ನುವ ಉಪಕ್ರಮ 2016ರಲ್ಲಿ ಜಾರಿಯಾಗಿದೆ. ಸಚಿವಾಲಯದಿಂದ ಮಾನ್ಯತೆ ಪಡೆದ ಇನ್ಕುಬೇಶನ್ ಸೆಂಟರ್​ಗಳು, ಹೊಸ ತಂತ್ರಜ್ಞಾನಗಳ ಕೇಂದ್ರಗಳು ಮತ್ತಿತರ ಪ್ಲಾಟ್​ಫಾರ್ಮ್​ಗಳನ್ನು ಒಂದೇ ವೇದಿಕೆಯಲ್ಲಿ ಕಲೆಹಾಕಿ ತಂತ್ರಜ್ಞಾನ ಆಧಾರಿತವಾದ ಆರ್ಥಿಕ ಪ್ರಗತಿಗೆ ಉತ್ತೇಜಿಸುವುದು ಈ ಯೋಜನೆಯ ಉದ್ದೇಶ.

ಟೈಡ್ 2.0 ಸ್ಕೀಮ್: ಎಂಎಸ್​ಎಚ್ ರೀತಿಯಲ್ಲಿ ಇದೂ ಕೂಡ ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನಡೆಸಲಾಗುತ್ತಿರುವ ಉಪಕ್ರಮವಾಗಿದೆ. ಎಐ, ಬ್ಲಾಕ್​ಚೇನ್, ರೋಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವ ಸ್ಟಾರ್ಟಪ್​ಗಳಿಗೆ ಉತ್ತೇಜಿಸುವುದು ಇದರ ಗುರಿ.

ನಿಧಿ ಸ್ಕೀಮ್: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2016ರಲ್ಲಿ ಆರಂಭ ಮಾಡಿರುವ ನ್ಯಾಷನಲ್ ಇನಿಶಿಯೇಟಿವ್ ಫಾರ್ ಡೆವಲಪಿಂಗ್ ಅಂಡ್ ಹಾರ್ನೆಸಿಂಗ್ ಇನ್ನೋವೇಶನ್ಸ್ (ನಿಧಿ) ಉಪಕ್ರಮ ಇದು. ಯಶಸ್ವಿ ಸ್ಟಾರ್ಟಪ್​ಗಳಿಗೆ ಉಪಯುಕ್ತ ಐಡಿಯಾಗಳು ಮತ್ತು ಇನ್ನೋವೇಶನ್​ಗಳನ್ನು ಬೆಳೆಸಲು ಇರುವ ಒಂದು ಪ್ಲಾಟ್​ಫಾರ್ಮ್ ಇದು. ಈ ಅದ್ಭುತ ಉಪಕ್ರಮದಿಂದ 1,100ಕ್ಕೂ ಅಧಿಕ ಐಟಿ ಪೇಟೆಂಟ್​ಗಳು ಸಿಕ್ಕಿವೆ. 12 ಸಾವಿರಕ್ಕೂ ಅಧಿಕ ಸ್ಟಾರ್ಟಪ್​ಗಳಿಗೆ ಬಲ ಸಿಕ್ಕಿದೆ. 1.3 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಗೆ ನೆರವಾಗಿದೆ.

ಗ್ರಾಮೀಣ ಉದ್ದಿಮೆಗಾರಿಕೆ ಯೋಜನೆ (ಎಸ್​ವಿಇಪಿ): ದೀನದಯಾಳ್ ಅಂತ್ಯೋದಯ ಯೋಜನೆ ನ್ಯಾಷನಲ್ ರೂರಲ್ ಲೈವ್​ಲಿಹುಡ್ ಮಿಷನ್ ಯೋಜನೆ ಅಡಿ ಸ್ಟಾರ್ಟಪ್ ವಿಲೇಜ್ ಆಂಟ್ರಪ್ರನ್ಯೂರ್​ಶಿಪ್ ಪ್ರೋಗ್ರಾಮ್ ಒಂದು ಉಪಯೋಜನೆಯಾಗಿದೆ. ಗ್ರಾಮೀಣ ಭಾಗದಲ್ಲಿ ಉದ್ದಿಮೆಗಾರಿಕೆಗೆ ಉತ್ತೇಜಿಸುವುದು ಇದರ ಉದ್ದೇಶ. ಹತ್ತಿರಹತ್ತಿರ 4 ಲಕ್ಷ ಉದ್ದಿಮೆಗಳಿಗೆ ಈ ಸ್ಕೀಮ್ ಮೂಲಕ ನೆರವಾಗಲಾಗಿದೆ.

ಆಸ್ಪೈರ್ ಯೋಜನೆ: ಎಂಎಸ್​ಎಂಇ ಸಚಿವಾಲಯ 2015ರಲ್ಲಿ ಆರಂಭಿಸಿದ ಇದು ಇನ್ನೋವೇಶನ್, ಗ್ರಾಮೀಣ ಕೈಗಾರಿಕೆ ಮತ್ತು ಉದ್ದಿಮೆಗಾರಿಕೆಗೆ ಉತ್ತೇಜಿಸುವ ಯೋಜನೆ ಎನಿಸಿದೆ. ಸಣ್ಣ ಉದ್ದಿಮೆಗಳಿಗೆ ಬೇಕಾದ ಕೌಶಲ್ಯ ಒದಗಿಸುವುದು, ಕೌಶಲ್ಯವಂತ ಕೆಲಸಗಾರರನ್ನು ಒದಗಿಸುವುದು, ತಂತ್ರಜ್ಞಾನ ಮತ್ತು ಹಣಕಾಸು ನೆರವು ನೀಡುವುದು ಇದರ ಉದ್ದೇಶ.

ಪಿಎಂಇಜಿಪಿ ಯೋಜನೆ: ಪಿಎಂ ರೋಜಗಾರ್ ಯೋಜನೆ ಮತ್ತು ಗ್ರಾಮೀಣ ಉದ್ಯೋಗಸೃಷ್ಟಿ ಯೋಜನೆ ಎರಡನ್ನೂ ಸೇರಿಸಿ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯನ್ನು ರೂಪಿಸಲಾಗಿದೆ. ಎಂಎಸ್​ಎಂಇ ಸಚಿವಾಲಯದ ಅಡಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ (ಕೆವಿಐಸಿ) ಮೂಲಕ ಈ ಸ್ಕೀಮ್ ಅನ್ನು ಜಾರಿಗೊಳಿಸಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದುಡ್ಡಿನ ಆಸೆಗೆ ಕಳ್ಳಾಟ ಆಡುತ್ತಿದ್ದ ಬೆಂಗಳೂರಿನ ಪಿಜಿ ಮಾಲೀಕರಿಗೆ ಶಾಕ್ ಕೊಟ್ಟ ಅಧಿಕಾರಿಗಳು – Kannada News | GBA Officer inspects 204 paying guest In Bengaluru today And 6 locked

ಬೆಂಗಳೂರು, (ಜನವರಿ 16): ಶುಚಿತ್ವದ ಕೊರತೆ, ಎಫ್‌ಎಸ್‌ಎಸ್‌ಎಐ ಮಾನದಂಡಗಳ ಉಲ್ಲಂಘನೆ, ಸುರಕ್ಷತಾ ಮಾರ್ಗಸೂಚಿಗಳ ಪಾಲಿಸದಿರುವುದು ಸೇರಿ ನಿಯಮಗಳನ್ನ ಪಾಲಿಸದ ಪಿಜಿಗಳ (paying guest )ವಿರುದ್ಧ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಸಮರ ಸಾರಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯಾಧಿಕಾರಿಗಳು ಪಿಜಿ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ನಿರ್ದೇಶನದ ಮೇರೆಗೆ 204 ಪೇಯಿಂಗ್‌ ಗೆಸ್ಟ್‌(ಪಿಜಿ)ಗಳನ್ನ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಲೋಪ ಕಂಡುಬಂದ ಹಿನ್ನೆಲೆ 6 ಪಿಜಿಗಳಿಗೆ ಬೀಗ ಜಡಿದಿದ್ದಾರೆ. ಹಾಗೇ ಜೊತೆಗೆ 1.96 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ನ್ಯೂನತೆ ಸರಿಪಡಿಸಿಕೊಳ್ಳಲು ಕಾಲಾವಕಾಶ

ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನ, ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSAIನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುವ ಒಟ್ಟು 204 ಪೇಯಿಂಗ್ ಗೆಸ್ಟ್ ವಸತಿ ಗೃಹ ಉದ್ದಿಮೆಗಳ ತಪಾಸಣೆ ನಡೆಸಿದ್ದಾರೆ. 7 ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡುವುದಕ್ಕೆ ಪಿಜಿ ಮಾಲೀಕರಿಗೆ ತಿಳುವಳಿಕೆ ಪತ್ರ ನೀಡಿ, ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ವೇಳೆ ಚಿಕ್ಕಪೇಟೆ ಮತ್ತು ಶಿವಾಜಿನಗರ ಆರೋಗ್ಯ ವೈದ್ಯಾಧಿಕಾರಿಗಳಿದ್ದರು.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಈ ಎರಡು ದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್​​ ಇರುವುದಿಲ್ಲ

ಅನಧಿಕೃತ ಪಿಜಿಗಳ ಹಾವಳಿ

ಬೆಂಗಳೂರಿನಾದ್ಯಂತ ಸಾಕಷ್ಟು ಜೆಂಟ್ಸ್, ಗರ್ಲ್ಸ್ ಪಿಜಿಗಳು ಇದ್ದು. ರಾಜ್ಯದ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಜನ ಹೆಚ್ಚಾದಂತೆ ಕಟ್ಟಡ ನಿಯಮ, ಸುರಕ್ಷತಾ ಮಾನದಂಡ ಉಲ್ಲಂಘಿಸಿ ಪಿಜಿಗಳನ್ನು ನಡೆಸಲಾಗುತ್ತಿದೆ. ಹೌದು.. ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಪಿಜಿಗಳಿಗಿಂತ ಅನಧಿಕೃತ ಪಿಜಿಗಳ ಹಾವಳಿ ಹೆಚ್ಚಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಪರವಾನಗಿ ಪಡೆಯದೆ ಕಾರ್ಯಾಚರಿಸುತ್ತಿರುವ 165 ಪಿಜಿಗಳು ಪತ್ತೆಯಾಗಿದ್ದವು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಿರಾತಂಕವಾಗಿ ಕಟ್ಟಡ ಬೈಲಾ, ಮಾರ್ಗಸೂಚಿ, ಪರವಾನಗಿ ನಿಯಮ ಉಲ್ಲಂಘನೆ, ಸುರಕ್ಷತಾ ಮಾನದಂಡಗಳನ್ನು ಅನುಸರಿಸದೇ ರಾಜಾರೋಷವಾಗಿ ಪಿಜಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪಿಜಿಗಳ ಮೇಲೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆರೋಗ್ಯ ಅಧಿಕಾರಿಗಳ ತಂಡ, ದಾಳಿ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ – 2020ರ ಕಾಯಿದೆಯಡಿ ಪಿಜಿಗಳಿಗೆ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಅಲ್ಲದೆ, ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ – ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಪಿಜಿಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೂ, ಮಾರ್ಗಸೂಚಿ ಪಾಲನೆ ಮಾಡದ 187 ಪಿಜಿಗಳಿಗೆ ಬೀಗ ಜಡಿದಿದ್ದರು.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link