Headlines

ತೋಷಖಾನಾ ಪ್ರಕರಣ, ಪಾಕ್ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಮತ್ತು ಪತ್ನಿ ಬುಶ್ರಾಗೆ 17 ವರ್ಷಗಳ ಜೈಲು ಶಿಕ್ಷೆ – Kannada News | Pak Court Hands 17 Year Jail Term to Imran Khan and Bushra Bibi in Toshakhana Case

ಇಸ್ಲಾಮಾಬಾದ್, ಡಿಸೆಂಬರ್ 20: ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪಾಕ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.ಖಾನ್ ಮತ್ತು ಬುಶ್ರಾ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಮಾಹಿತಿ…

Read More

ಸೈಬರ್ ಅಪರಾಧ ಲೋಕದ ಅತಿದೊಡ್ಡ ವಂಚನೆ ಬಯಲಿಗೆಳೆದ ದಾವಣಗೆರೆ ಪೊಲೀಸ್! ವಂಚಕನ ಖಾತೆಯಲ್ಲಿ 1000 ಕೋಟಿ ರೂ.ಗೂ ಹೆಚ್ಚು ವಹಿವಾಟು – Kannada News | Davangere Cyber Crime Bust: Police Uncover Rs 1000 plus Crore Fraud Through Single Bank Account

ಆರೋಪಿಗಳಾದ ಅರ್ಫಾತ್ ಪಾಷಾ ಹಾಗೂ ಸಂಜಯ್ ಕುಂದ್ ದಾವಣಗೆರೆ, ಡಿಸೆಂಬರ್ 20: ದಾವಣಗೆರೆ (Davanagere) ಪೊಲೀಸರು ಬಯಲಿಗೆಳೆದಿದ್ದ ಸೈಬರ್ ವಂಚನೆ ಪ್ರಕರಣವೊಂದು ಇದೀಗ ರಾಜ್ಯದಲ್ಲೇ ಅತಿದೊಡ್ಡ ಸೈಬರ್ ಅಪರಾಧ (Cyber Crime) ಪ್ರಕರಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆರಂಭದಲ್ಲಿ ಕೇವಲ 150 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದ್ದ ಈ ಪ್ರಕರಣದಲ್ಲಿ, ಇದೀಗ 1,000 ಕೋಟಿ ರೂಪಾಯಿಗೂ ಅಧಿಕ ಹಣ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರು…

Read More

Yearly Horoscope 2026: 2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ – Kannada News | Cancer Yearly Horoscope 2026: Astrological Predictions by Dr Basavaraj Guruji

ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರ ಪ್ರಕಾರ, 2026 ಕಟಕ ರಾಶಿಯವರಿಗೆ ಪ್ರಮುಖ ಗ್ರಹಗಳ ಸ್ಥಾನಪಲ್ಲಟಗಳು ಗಮನಾರ್ಹ ಪರಿಣಾಮ ಬೀರಲಿವೆ. ಜೂನ್ 2ರ ನಂತರ ಗುರು ಜನ್ಮಕ್ಕೆ ಬಂದು ಉಚ್ಛ ಸ್ಥಾನವನ್ನು ಪಡೆಯುವುದರಿಂದ, ಹಂಸ ಯೋಗ ರೂಪುಗೊಳ್ಳಲಿದೆ. ಇದರಿಂದ ವೃತ್ತಿಯಲ್ಲಿ ಬಡ್ತಿ, ಆರ್ಥಿಕ ಪ್ರಗತಿ, ಶುಭ ಕಾರ್ಯಗಳು, ಮತ್ತು ಅನಿರೀಕ್ಷಿತ ಧನ ಲಾಭ ನಿರೀಕ್ಷಿಸಬಹುದು. ಶನಿ ಭಾಗ್ಯ ಸ್ಥಾನದಲ್ಲಿರುವುದರಿಂದ ಮಹತ್ತರವಾದ ಬದಲಾವಣೆಗಳು ಮತ್ತು ಸ್ಥಾನಪಲ್ಲಟದ ಸಾಧ್ಯತೆಗಳಿವೆ. ಆದಾಯ 2, ವ್ಯಯ 11 ರ ಅನುಪಾತವಿದ್ದರೂ, ಪ್ರಯತ್ನಗಳಿಗೆ ತಕ್ಕ ಫಲ…

Read More

ಭಾರತ ತಂಡದ ಮುಂದಿನ ಸರಣಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ..!

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಉಭಯ ತಂಡಗಳು ಒಟ್ಟು 8 ಮ್ಯಾಚ್​ಗಳಲ್ಲಿ ಮುಖಾಮುಖಿಯಾಗಲಿದೆ. ಈ ಎಂಟು ಪಂದ್ಯಗಳಲ್ಲಿ ಮೂರು ಮ್ಯಾಚ್​ಗಳಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯರಾಗಲಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಈ ಸರಣಿ ವೇಳೆ ಬುಮ್ರಾಗೆ ವಿಶ್ರಾಂತಿ…

Read More

Pushya Masa: ಪಿತೃ, ಶನಿ ದೋಷದಿಂದ ಮುಕ್ತಿ ಪಡೆಯಲು ಪುಷ್ಯ ಮಾಸದಲ್ಲಿ ಈ ರೀತಿ ಮಾಡಿ – Kannada News | Pushya Masa: Spiritual Importance, Rituals and Shani, Pitru Dosha Remedies

ಪುಷ್ಯ ಮಾಸವೆಂದರೆ ಚಂದ್ರನ ಕ್ಯಾಲೆಂಡರ್ ಪ್ರಕಾರ, ಮಾಸಗಳಲ್ಲಿ 10ನೇ ಮಾಸ. ಈ ಮಾಸವು ಮಕರ ಸಂಕ್ರಾಂತಿ ಹಬ್ಬದೊಂದಿಗೆ ಆರಂಭವಾಗಿ, ನಂತರ ಮಾಘ ಮಾಸಕ್ಕೆ ದಾರಿ ಮಾಡಿಕೊಡುತ್ತದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಪುಷ್ಯ ಮಾಸಕ್ಕೆ ಅತ್ಯಂತ ಆಧ್ಯಾತ್ಮಿಕ ಮಹತ್ವವಿದೆ. ಪುಷ್ಯ ಮಾಸದಲ್ಲಿ ಸೂರ್ಯನು ಉತ್ತರ ದಿಕ್ಕಿನತ್ತ ಸಂಚರಿಸುವ ಉತ್ತರಾಯಣ ಆರಂಭವಾಗುತ್ತದೆ. ಈ ಉತ್ತರಾಯಣವು ಮಕರ ಸಂಕ್ರಾಂತಿಯೊಂದಿಗೆ ಪ್ರಾರಂಭವಾಗಿ, ದೇವರಿಗೆ ಅತ್ಯಂತ ಪ್ರಿಯವಾದ ಕಾಲವೆಂದು ಪರಿಗಣಿಸಲಾಗಿದೆ. ಸಂಕ್ರಾಂತಿ ಮರುದಿನ ದೀಪ ದಾನ ಮಾಡಿದರೆ ಸಂತಾನ ಪ್ರಾಪ್ತಿ , ಹಾಗೆಯೇ…

Read More

ಖ್ಯಾತ ನಟ, ನಿರ್ದೇಶಕ ಶ್ರೀನಿವಾಸನ್ ನಿಧನ; ಮಾಡಿದ ಸಾಧನೆಯ ಪಟ್ಟಿ ದೊಡ್ಡದಿದೆ – Kannada News | Malayalam Actor Director Sreenivasan Passes Away at 69: A Legacy Remembered

ಖ್ಯಾತ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಇಂದು (ಡಿಸೆಂಬರ್ 20) ನಿಧನ ಹೊಂದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ಅವರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಕೇರಳದ ಉದಯಂಪೆರೂರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಶ್ರೀನಿವಾಸನ್ ಅವರಿಗೆ ಕೆಲವು ಅನಾರೋಗ್ಯ ಸಮಸ್ಯೆಗಳು ಇದ್ದವು. ಕಳೆದ ಕೆಲ ವರ್ಷಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. ಇತ್ತೀಚೆಗೆ ಅವರನ್ನು ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು….

Read More

ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ! – Kannada News | How Caffeine on an Empty Stomach Affects Digestion and Energy

ಕೆಲವರಿಗೆ ಚಹಾ (Tea) ಕೇವಲ ಪಾನೀಯವಲ್ಲ, ಅದು ಅವರ ದಿನಚರಿಯ ಪ್ರಮುಖ ಭಾಗ. ಪ್ರತಿದಿನವನ್ನು ಚಹಾದೊಂದಿಗೆ ಪ್ರಾರಂಭಿಸುವುದು ಹಲವರಿಗೆ ಅಭ್ಯಾಸ. ಅದರಲ್ಲಿಯೂ ಹಾಸಿಗೆಯಿಂದ ಎದ್ದ ತಕ್ಷಣ ಚಹಾ ಕುಡಿಯುವವರಿದ್ದಾರೆ, ಇನ್ನು ಕೆಲವರು ಚಹಾ ಕುಡಿದ ಮೇಲೆಯೇ ಶಕ್ತಿ ಬರುತ್ತದೆ ಎಂದು ಅದನ್ನೇ ಅವಲಂಬಿಸಿರುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಮನಸ್ಸಿಗೆ ಖುಷಿ ನೀಡಬಹುದು. ಆದರೆ ಆರೋಗ್ಯಕ್ಕೆ… ಹೌದು, ಆರೋಗ್ಯ ತಜ್ಞರು ಈ ಅಭ್ಯಾಸ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುತ್ತಾರೆ. ಅದರಲ್ಲಿಯೂ 7 ರೀತಿಯ ಜನರು…

Read More

Puja Tips: ಪೂಜೆಯಲ್ಲಿ ಯಾವ ವಸ್ತುಗಳನ್ನು ಮರುಬಳಕೆ ಮಾಡಬಹುದು? ಯಾವುದನ್ನು ಬಳಸಬಾರದು? – Kannada News | Reusable Puja Items: What You Can and Cannot Use Again in Worship

ಪೂಜೆಯ ಸಮಯದಲ್ಲಿ ದೇವರಿಗೆ ಹಲವು ರೀತಿಯ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಪೂಜೆಯ ನಂತರ, ತುಪ್ಪ, ಹೂವುಗಳು, ಶ್ರೀಗಂಧ ಇತರ ಪೂಜೆಗಿಟ್ಟ ವಸ್ತುಗಳು ಉಳಿದುಬಿಡುತ್ತವೆ. ಕೆಲವು ವಸ್ತುಗಳು ದೇವರಿಗೆ ಅರ್ಪಿಸಿದರೂ ಹಾಳಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಶುದ್ಧೀಕರಿಸಿ ಮತ್ತೆ ಪೂಜೆಯಲ್ಲಿ ಬಳಸಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಪೂಜಾ ಸಾಮಗ್ರಿಗಳ ಬಗ್ಗೆ ಹಲವು ಸಂದೇಹಗಳಿವೆ. ಹಾಗಾಗಿ ಪೂಜೆಯಲ್ಲಿ ಬಳಸುವ ಯಾವ ವಸ್ತುಗಳನ್ನು ಮರುಬಳಕೆ ಮಾಡಬಹುದು ಮತ್ತು ಯಾವುದನ್ನು ಬಳಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಪೂಜೆಯಲ್ಲಿ…

Read More

ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕದಿಂದ ವಾಯು ದಾಳಿ, ಹೊಸ ಯುದ್ಧಕ್ಕೆ ನಾಂದಿ ಹಾಡಿದರೇ ಟ್ರಂಪ್? – Kannada News | US Airstrikes on ISIS Syria: Trump Retaliates After Soldier Deaths

ಸಿರಿಯಾ, ಡಿಸೆಂಬರ್ 20: ಅಮೆರಿಕ(America)ವು ಮಧ್ಯರಾತ್ರಿ ಸಿರಿಯಾದ 70 ಐಸಿಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿರಿಯಾದಲ್ಲಿ ಅಮೆರಿಕದ ಸೈನಿಕರ ಮೇಲಿನ ದಾಳಿಯ ನಂತರ ಅಮೆರಿಕವು ಈ ಪ್ರತೀಕಾರದ ಕ್ರಮವನ್ನು ಕೈಗೊಂಡಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ಕಳೆದ ವಾರ ಅಮೆರಿಕದ ಮಿಲಿಟರಿ ಸಿಬ್ಬಂದಿಯ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದರು. ಡಿಸೆಂಬರ್ 13 ರಂದು ಮಧ್ಯ ಸಿರಿಯಾದ ಪಾಲ್ಮಿರಾ…

Read More

ಧರ್ಮಸ್ಥಳ ಬುರುಡೆ ಪ್ರಕರಣ: ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ! – Kannada News | Dharmasthala Case Twist: Mask Man Chinnayya Files Life Threat Complaint After Jail Release

ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ! ಮಂಗಳೂರು, ಡಿಸೆಂಬರ್ 20: ಧರ್ಮಸ್ಥಳ ಪ್ರಕರಣಕ್ಕೆ (dharmasthala mass burial case ) ಹೊಸ ತಿರುವು ಸಿಕ್ಕಿದ್ದು, ಮಾಸ್ಕ್​ ಮ್ಯಾನ್ ಚಿನ್ನಯ್ಯ (Mask man chinnayya) ಜೈಲಿನಿಂದ ಹೊರಬಂದಕೂಡಲೇ ಹೊಸ ಬುರುಡೆ ಬಿಡುತ್ತಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣವೇ ಪೊಲೀಸ್ ಠಾಣೆಗೆ ಹಾಜರಾದ ಚಿನ್ನಯ್ಯ, ತಮಗೂ ಹಾಗೂ ಪತ್ನಿಗೂ ಜೀವ ಬೆದರಿಕೆ ಇರುವುದಾಗಿ ಹೋರಾಟಗಾರರ ವಿರುದ್ಧವೇ ದೂರು ನೀಡಿದ್ದಾನೆ. ಮಹೇಶ್ ತಿಮರೋಡಿ ಸೇರಿ ಐವರ ವಿರುದ್ಧವೇ ದೂರು…

Read More