Headlines

‘ಸಿಟಿಲೈಟ್ಸ್‌’ ಹಾಡು ಬಿಡುಗಡೆ: ಹೊಸ ಪ್ರತಿಭೆಗೆ ದುನಿಯಾ ವಿಜಿ ಬೆಂಬಲ – Kannada News | New song released from City Lights movie directing by Duniya Vijay

ದುನಿಯಾ ವಿಜಯ್ (Duniya Vijay) ನಿರ್ದೇಶನದ ಮೂರನೇ ಸಿನಿಮಾ ‘ಸಿಟಿಲೈಟ್ಸ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿಂದೆ ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮೂಲಕ ಭರ್ಜರಿ ಜಯ ಕಂಡಿರುವ ದುನಿಯಾ ವಿಜಿ, ಇದೇ ಮೊದಲ ಬಾರಿಗೆ ತಮ್ಮ ನಿರ್ದೇಶನದಲ್ಲಿ ಮತ್ತೊಬ್ಬ ನಾಯಕನಿಗೆ ಅವಕಾಶ ನೀಡಿದ್ದಾರೆ. ‘ಸಿಟಿ ಲೈಟ್ಸ್’ ಸಿನಿಮಾನಲ್ಲಿ ವಿನಯ್ ರಾಜ್​ಕುಮಾರ್ ನಾಯಕ, ದುನಿಯಾ ವಿಜಿ ಅವರ ಪುತ್ರಿಯೇ ನಾಯಕಿ. ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಇದೀಗ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ‘ಬಾವ ಬಾವ’ ಎಂಬ ವಿಶಿಷ್ಟ ರ್ಯಾಪ್…

Read More

SRH vs PBKS: ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿ ಹ್ಯಾಟ್ರಿಕ್ ಸೋಲಿಗೆ ಕೊರಳೊಡ್ಡಿದ ಪಂಜಾಬ್ – Kannada News | IPL 2026: Punjab Kings’ Poor Fielding and Batting Lead to Third Consecutive Loss vs SRH

ಐಪಿಎಲ್ 2026 (IPL 2026) ರ49ನೇ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಪಂಜಾಬ್ ಕಿಂಗ್ಸ್ (SRH vs PBKS) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ತಂಡ ತನ್ನ ಕಳಪೆ ಫಿಲ್ಡಿಂಗ್ ಹಾಗೂ ಕಳಪೆ ಬ್ಯಾಟಿಂಗ್​ನಿಂದಾಗಿ ಟೂರ್ನಿಯಲ್ಲಿ ಸತತ ಮೂರನೇ ಸೋಲಿಗೆ ಕೊರಳೊಡ್ಡಬೇಕಾಯಿತು. ಇಡೀ ಆವೃತ್ತಿಯಲ್ಲಿ ಪಂಜಾಬ್ ತಂಡದ ಫಿಲ್ಡಿಂಗ್ ಅತ್ಯಂತ ಕಳಪೆಯಾಗಿದೆ. ಇದರ ನಡುವೆ ಬ್ಯಾಟ್ಸ್‌ಮನ್​ಗಳ ಅಬ್ಬರದಿಂದಾಗಿ ಪಂಜಾಬ್ ಪಂದ್ಯಗಳನ್ನು ಗೆಲ್ಲುತ್ತಿತ್ತು. ಆದರೆ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡದ ಈ ಎರಡು ವಿಭಾಗವೂ ವಿಫಲವಾಯಿತು….

Read More

ಎಗರಿಸಿದ್ದ ಮಾಂಗಲ್ಯ ಸರ ಮನೆ ಮುಂದೆ ಪ್ರತ್ಯಕ್ಷ: ಆದ್ರೂ ಅವನ್ನ ಹೊಡಿಬೇಕು ಎಂದ ಮಹಿಳೆ – Kannada News | Chikkaballapur Shock: Thieves Return Stolen Gold Chain; Victim Demands Justice

ಚಿಕ್ಕಬಳ್ಳಾಪುರ, ಮೇ 06: ನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದುಷ್ಕರ್ಮಿಗಳು ತಾವು ಕದ್ದ ಮಾಂಗಲ್ಯ ಸರವನ್ನು ವಾಪಸ್​ ಮನೆ ಮುಂದೆ ಬಿಸಾಕಿ ಹೋಗಿರುವಂತಹ ಘಟನೆ ನಡೆದಿದೆ. ಮನೆ ಮುಂದೆ ಚಿನ್ನದ ಸರ ಕಂಡು ಮಹಿಳೆಗೆ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಕಳೆದುಕೊಂಡಿದ್ದ ಚಿನ್ನದ ಮಾಂಗಲ್ಯ ಸರ ಸಿಕ್ಕರೂ ಮಹಿಳೆಗೆ ಸಮಾಧಾನವಿಲ್ಲ. ಇನ್ನು ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಶ್ರೀಮತಿ ಪ್ರಿಯಾ, ದುಷ್ಕರ್ಮಿಗಳು ನನ್ನ ಕೈಗೆ ಸಿಗಬೇಕು, ನಾನು ಅವನಿಗೆ ಹೊಡೆಯಬೇಕು. ನನಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಹೇಳಿದ್ದಾರೆ….

Read More

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ; ಕಾರು ಚಾಲಕ ಬ್ರೇಕ್ ಹಾಕಿದ್ದರಿಂದ ಉಳಿಯಿತು ಜೀವ – Kannada News | Major accident was narrowly averted in ​​Jhabua watch viral video

ನವದೆಹಲಿ, ಮೇ 6: ಮಧ್ಯಪ್ರದೇಶದ ಝಬುವಾದಲ್ಲಿ ಕಾರು, ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಬಿದ್ದಿವೆ. ಇದೇ ವೇಳೆ ಪಕ್ಕದಿಂದ ಬರುತ್ತಿದ್ದ ಕಾರು ಚಾಲಕ ಸಮಯಪ್ರಜ್ಞೆ ತೋರಿ ಬ್ರೇಕ್ ಹಾಕಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು (Accident) ಸ್ವಲ್ಪದರಲ್ಲೇ ತಪ್ಪಿದೆ. ರಸ್ತೆ ದಾಟುತ್ತಿದ್ದ ಸ್ಕೂಟರ್ ಚಾಲಕನಿಗೆ ವೇಗವಾಗಿ ಬಂದ ಬೈಕು ಡಿಕ್ಕಿ ಹೊಡೆಯಿತು. ಅದೃಷ್ಟವಶಾತ್, ಅದೇ ಸ್ಥಳದಲ್ಲಿ ಯು-ಟರ್ನ್ ತೆಗೆದುಕೊಳ್ಳುವ ಹಂತದಲ್ಲಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದರಿಂದ ಇಬ್ಬರ ಪ್ರಾಣವೂ ಉಳಿದಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು…

Read More

ಹುತಾತ್ಮ ಅಂಬಾರಿ ಆನೆ ಅರ್ಜುನ ಸ್ಮಾರಕ ಉದ್ಘಾಟನೆ, ಹೇಗಿದೆ, ಎಲ್ಲಿದೆ ನೋಡಿ – Kannada News | Arjuna elephant memorial inaugurated By Forest Minister Eshwar Khandre In Hassan

ಹಾಸನ, (ಮೇ 06) : ದಸರಾ ಸಂದರ್ಭದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಮೆರೆಸುತ್ತಿದ್ದ ಹೆಮ್ಮೆಯ ಅರ್ಜುನ ಆನೆ ಸಾವನ್ನಪ್ಪಿದ್ದು, ಇದೀಗ ಅದರ ಸ್ಮಾರಕವನ್ನು (Arjuna elephant memorial) ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಇಂದು (ಮೇ 09) ಅರಣ್ಯ ಸಚಿವ ಈಶ್ವರ್ ಖಂಡ್ರೆ (Forest Minister Eshwar Khandre) ಲೋಕಾರ್ಪಣೆಗೊಳಿಸಿದರು. 2023ರ ಡಿಸೆಂಬರ್ 4 ರಂದು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಡಿ ವೀರ ಮರಣವನ್ನಪ್ಪಿದ್ದ…

Read More

ಬೌರಿಂಗ್ ಆಸ್ಪತ್ರೆ ದುರಂತ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್: ಸರ್ಕಾರಿ ಆಸ್ಪತ್ರೆ ಕಟ್ಟಡಗಳ ಸ್ಥಿತಿಗತಿ ಪರಿಶೀಲನೆಗೆ ಆದೇಶ – Kannada News | Health Department on Alert After Bowring Hospital Tragedy; Orders Inspection of Government Hospital Buildings

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್Image Credit source: tv9 kannada ಬೆಂಗಳೂರು, ಮೇ 06: ನಗರದಲ್ಲಿ ಇತ್ತೀಚೆಗೆ ನಡೆದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿತದ (Bowring Hospital Tragedy) ದುರಂತದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯ ಬಳಿಕ ಎಚ್ಚೆತ್ತಿರುವ ಆರೋಗ್ಯ ಇಲಾಖೆ (Health Department), ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳ ಸುರಕ್ಷತೆಯನ್ನು ಖಾತ್ರಿಪಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಮತ್ತು…

Read More

ತ್ರಿಷಾ ಸಹ ಆಗಲಿದ್ದಾರೆ ಶಾಸಕಿ, ವಿಜಯ್ ಕ್ಷೇತ್ರದಿಂದಲೇ ಸ್ಪರ್ಧೆ? – Kannada News | Trisha Krishnan may contest election and became MLA

ತಮಿಳು ಚಿತ್ರರಂಗದ ಸ್ಟಾರ ನಟ ವಿಜಯ್ (Vijay) ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ವಿಜಯ್ ಅವರು ನಾಳೆ (ಮೇ 07) ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ. ವಿಜಯ್ ಅವರು ನಟಿ ತ್ರಿಷಾ ಜೊತೆಗೆ ಆಪ್ತ ಸಂಬಂಧ ಹೊಂದಿರುವುದು ಈಗ ಗುಟ್ಟೇನೂ ಅಲ್ಲ. ವಿಜಯ್ ಅವರ ಪತ್ನಿ ಸಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ತ್ರಿಷಾ ಅವರ ಹುಟ್ಟುಹಬ್ಬದ ದಿನವೇ ವಿಜಯ್ ಅವರ ಪಕ್ಷ ಗೆಲುವು ಸಾಧಿಸಿದ್ದು,…

Read More

ಕಾನೂನು ಇರುವುದೇ ಹಾಗೆ: ಬಿಜೆಪಿ ಆರೋಪಗಳಿಗೆ ಸ್ಪೀಕರ್ ಖಾದರ್ ಖಡಕ್ ಸ್ಪಷ್ಟನೆ – Kannada News | Speeker UT Khader Reacts On BJP Allegations about DN Jeevaraj oath Taking

ಬೆಂಗಳೂರು, (ಮೇ 06): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ (shringeri Assembly Result) ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ (BJP DN Jeevaraj )ಗೆಲುವು ಸಾಧಿಸಿದ್ದಾರೆ. ಸುಮಾರು ಮೂರು ವರ್ಷಗಳ ಸತತ ಕಾನೂನು ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಜೀವರಾಜ್ ಇಂದು (ಮೇ 06) ಶೃಂಗೇರಿ ಶಾರದಾಂಬೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಸ್ಪೀಕರ್ ಯುಟಿ ಖಾದರ್ (UT Khader) ಪ್ರಮಾಣವಚನ ಬೋಧಿಸಿದರು. ಬಳಿಕ ಬಿಜೆಪಿ ಆರೋಪಗಳಿಗೆ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ….

Read More

ಡಿಜಿಪಿ ಡಾ.ಕೆ.ರಾಮಚಂದ್ರ ರಾವ್ ಅಮಾನತು ಆದೇಶ ವಾಪಸ್: ಹೊಸ ಹುದ್ದೆ ಸೃಷ್ಟಿದ ಸರ್ಕಾರ – Kannada News | IPS officer Dr Ramachandra Rao suspension revoked By Karnataka Governmnet

ಡಾ. ಕೆ.ರಾಮಚಂದ್ರ ರಾವ್ ಬೆಂಗಳೂರು, (ಮೇ 6): ಮಹಿಳೆಯರೊಂದಿಗಿನ ವೀಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಐಪಿಎಸ್ ಅಧಿಕಾರಿ ಡಾ.ಕೆ.ರಾಮಚಂದ್ರ ರಾವ್ (dr ramachandra rao )ಅವರನ್ನು ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ರದ್ದುಪಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮರು ನೇಮಕ ಮಾಡಲಾಗಿದೆ. ಅಲ್ಲದೇ ಅವರಿಗಾಗಿಯೇ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯಲ್) ಎನ್ನುವ ಹೊಸ ಹುದ್ದೆ ಸೃಷ್ಟಿಸಿದೆ.  ಆಲ್ ಇಂಡಿಯಾ ಸರ್ವಿಸ್ ನಿಯಮಗಳ ಅಡಿ ಈಗ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. …

Read More

ವಿಜಯ್​ಗೆ ಹೊಸ ತಲೆನೋವು; ಸರ್ಕಾರ ರಚನೆಗೆ ಒಂದಾಗುತ್ತಾರಾ ಬದ್ಧ ವೈರಿಗಳಾದ ಡಿಎಂಕೆ- ಎಐಎಡಿಎಂಕೆ? – Kannada News | DMK and AIADMK Tie Up Rumours spark buzz in Tamil Nadu to form government

ಚೆನ್ನೈ, ಮೇ 6: ತಮಿಳುನಾಡಿನಲ್ಲಿ ವಿಜಯ್ (Vijay) ನೇತೃತ್ವದ ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿದ್ದರೂ ಸರ್ಕಾರ ರಚನೆಗೆ ಇನ್ನೂ 5 ಸ್ಥಾನಗಳ ಅಗತ್ಯವಿದೆ. ಯಾವ ಪಕ್ಷವೂ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸದ ಹಿನ್ನೆಲೆಯಲ್ಲಿ ರಾಜ್ಯಪಾಲರು ನಾಳೆ ನಿಗದಿಯಾಗಿದ್ದ ವಿಜಯ್ ಅವರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದ್ದರು. ಬಹುಮತ ಸಾಬೀತುಪಡಿಸುವವರೆಗೂ ಸರ್ಕಾರ ರಚನೆಗೆ ಅನುಮತಿ ನೀಡುವುದಿಲ್ಲ ಎಂದು ವಿಜಯ್ ಅವರನ್ನು ವಾಪಾಸ್ ಕಳುಹಿಸಿದ್ದರು. ಇದೆಲ್ಲದರ ನಡುವೆ ಬದ್ಧ ವೈರಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ತಮಿಳುನಾಡಿನಲ್ಲಿ ಸರ್ಕಾರ ರಚಿಸಿದೆಯಾ…

Read More