Category Archives: Blog

Your blog category

Gajalakshmi Rajayoga: ಗಜಲಕ್ಷ್ಮಿ ರಾಜಯೋಗ; ಗುರು-ಶುಕ್ರರ ಅಪರೂಪದ ಸಂಯೋಗ, ಈ 5 ರಾಶಿಯವರ ಬದುಕು ಬಂಗಾರ! – Kannada News | June 10th Gajalakshmi Rajayoga: Jupiter and Venus Conjunction Brings Wealth

ಜೂನ್ 10 ರಂದು ಒಂದು ಅದ್ಭುತ ವಿದ್ಯಮಾನ ಘಟಿಸಲಿದೆ. ದೃಕ್ ಪಂಚಾಂಗದ ಪ್ರಕಾರ, ಅಂದು ಜ್ಞಾನದ ಕಾರಕ ಗುರು ಮತ್ತು ಐಶ್ವರ್ಯದ ಕಾರಕ ಶುಕ್ರ ಒಂದೇ ಮಟ್ಟದಲ್ಲಿ ಸಂಧಿಸಲಿದ್ದಾರೆ. ಈ ಇಬ್ಬರು ಶುಭ ಗ್ರಹಗಳ ನಿಕಟ ಸಂಯೋಗದಿಂದಾಗಿ ಅತ್ಯಂತ ಶಕ್ತಿಶಾಲಿ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ವಿಸ್ತರಣೆ ಮತ್ತು ಜ್ಞಾನವನ್ನು ಪ್ರತಿನಿಧಿಸಿದರೆ, ಶುಕ್ರನು ಸುಖ-ಸಂತೋಷ ಮತ್ತು ಆಕರ್ಷಣೆಯನ್ನು ನೀಡುತ್ತಾನೆ. ಈ ಇಬ್ಬರ ಮಿಲನವು ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ.

ಯಾವ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ?

ವೃಷಭ ರಾಶಿ:

ವೃಷಭ ರಾಶಿಯವರಿಗೆ ಈ ಯೋಗವು ಆರ್ಥಿಕವಾಗಿ ಭರ್ಜರಿ ಲಾಭ ತರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದ್ದು, ಪ್ರೀತಿಪಾತ್ರರ ಜೊತೆಗಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ಕರ್ಕಾಟಕ ರಾಶಿ:

ವೃತ್ತಿ ರಂಗದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಸಿಗುವುದರ ಜೊತೆಗೆ ಆರ್ಥಿಕ ಸ್ಥಿರತೆ ಲಭಿಸಲಿದೆ. ವೈಯಕ್ತಿಕ ಜೀವನದಲ್ಲಿ ಸಂಗಾತಿಯೊಂದಿಗೆ ಉತ್ತಮ ಸಾಮರಸ್ಯ ಮೂಡಲಿದ್ದು, ನೆಮ್ಮದಿಯ ವಾತಾವರಣವಿರುತ್ತದೆ.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಇದು ಸುವರ್ಣ ಕಾಲ. ಸ್ಥಗಿತಗೊಂಡಿದ್ದ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ಗೌರವ-ಮನ್ನಣೆ ಹೆಚ್ಚಾಗಲಿದ್ದು, ದೂರದ ಪ್ರಯಾಣಗಳು ಲಾಭದಾಯಕವಾಗಿರಲಿವೆ. ಹೊಸ ಅನುಭವಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಮೆರುಗುಗೊಳಿಸಲಿವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ತುಲಾ ರಾಶಿ:

ಪಾಲುದಾರಿಕೆ ವ್ಯವಹಾರದಲ್ಲಿರುವವರಿಗೆ ಈ ರಾಜಯೋಗವು ಅತ್ಯುತ್ತಮ ಫಲ ನೀಡಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಸಕಾಲ. ವೈಯಕ್ತಿಕ ಸಂಬಂಧಗಳಲ್ಲಿ ಪರಸ್ಪರ ತಿಳುವಳಿಕೆ ಹೆಚ್ಚಾಗಲಿದ್ದು, ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.

ಧನು ರಾಶಿ:

ಧನು ರಾಶಿಯವರಿಗೆ ಶಿಕ್ಷಣ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದ್ದು, ಮಕ್ಕಳ ಕಡೆಯಿಂದ ಉತ್ತಮ ಸುದ್ದಿಯನ್ನು ನಿರೀಕ್ಷಿಸಬಹುದು.

ಹೂಡಿಕೆ ಮತ್ತು ನಿರ್ಧಾರಗಳಿಗೆ ಶುಭ ಸಮಯ:

ಗುರು ಮತ್ತು ಶುಕ್ರರ ಈ ಯುಗಲಬಂದಿಯು ಸಮತೋಲಿತ ಜೀವನಕ್ಕೆ ನಾಂದಿ ಹಾಡಲಿದೆ. ನೀವು ಹೊಸ ಉದ್ಯಮ ಆರಂಭಿಸಲು ಅಥವಾ ದೊಡ್ಡ ಮಟ್ಟದ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ ಎಂದು ಜ್ಯೋತಿಷ್ಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೀಗ ಹಾಕಿದ ಮನೆಯೊಳಗೆ ನಾಲ್ವರು ಮಕ್ಕಳ ಭೀಕರ ಹತ್ಯೆ, ತಾಯಿ ನಾಪತ್ತೆ – Kannada News | Four Children Found Dead Inside Locked Home in Uttar Pradesh, Probe Underway

ಲಕ್ನೋ, ಮೇ 03: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಹಂತಕರು, ನಾಲ್ವರು ಅಪ್ರಾಪ್ತ ಒಡಹುಟ್ಟಿದವರನ್ನು ಇಟ್ಟಿಗೆಯಿಂದ ಜಜ್ಜಿ,ಚೂಪಾದ ಆಯುಧಗಳಿಂದ ಇರಿದು ಹತ್ಯೆ(Murder) ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗಿನ ರಣರಂಗದಂತಹ ದೃಶ್ಯ ಕಂಡು ತನಿಖಾಧಿಕಾರಿಗಳೇ ದಿಗ್ಭ್ರಮೆಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಟ್ಟಿಗೆಗಳಿಂದ ತಲೆಗೆ ಹೊಡೆದು ಮತ್ತು ಚೂಪಾದ ಆಯುಧಗಳಿಂದ ಇರಿದು ಈ ಕೃತ್ಯ ಎಸಗಲಾಗಿದೆ.

ಘಟನೆ ಬೆಳಕಿಗೆ ಬಂದ ತಕ್ಷಣ ಮಕ್ಕಳ ತಾಯಿ ಸ್ಥಳದಿಂದ ನಾಪತ್ತೆಯಾಗಿರುವುದು ಪೊಲೀಸರ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. ಆ ಮನೆ ಆಕೆಯ ಹೆಸರಿನಲ್ಲೇ ನೋಂದಣಿಯಾಗಿದ್ದು, ಪ್ರಸ್ತುತ ಆಕೆಯೇ ಈ ತನಿಖೆಯ ಕೇಂದ್ರಬಿಂದುವಾಗಿದ್ದಾರೆ. ಪೊಲೀಸರು ಆಕೆಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ

ಪೊಲೀಸ್ ಮೂಲಗಳ ಪ್ರಕಾರ, ಮಕ್ಕಳ ತಂದೆ ಕಳೆದ ಒಂದು ವರ್ಷದಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ತಂದೆಯ ಗೈರುಹಾಜರಿಯಲ್ಲಿ ಈ ಭೀಕರ ಹತ್ಯಾಕಾಂಡ ನಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ ಪ್ರಾಚಿ ಸಿಂಗ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ನಾಪತ್ತೆಯಾಗಿರುವ ಮಹಿಳೆಗೆ ಸೇರಿದ್ದರಿಂದ, ಆಸ್ತಿ ಹಂಚಿಕೆಯ ವಿವಾದವೇನಾದರೂ ಇತ್ತೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ. ಅಪರಾಧದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ (Forensic) ತಂಡವನ್ನು ಬಳಸಿಕೊಳ್ಳಲಾಗುತ್ತಿದೆ. ಹತ್ಯೆಯ ನಿಖರವಾದ ವಿಧಾನ ಮತ್ತು ಸಮಯವನ್ನು ತಿಳಿಯಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಆ ಪ್ರದೇಶವನ್ನು ಪೊಲೀಸರು ಸೀಲ್ ಮಾಡಿದ್ದು, ತಲೆಮರೆಸಿಕೊಂಡಿರುವ ತಾಯಿ ಸಿಕ್ಕಿಬಿದ್ದರೆ ಮಾತ್ರ ಈ ನಿಗೂಢ ಹತ್ಯಾಕಾಂಡದ ಹಿಂದಿನ ಅಸಲಿ ರಹಸ್ಯ ಬಯಲಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 12:06 pm, Sun, 3 May 26

Source link

ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದಾಂಡೇಲಿ, ಮೇ.3: ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಇಲ್ಲದ ಕಾರಣ ನದಿ ದಡಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಮೊಸಳೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ರಸ್ತೆಯಲ್ಲಿ ನಡೆದಿದೆ. ಕುಳಗಿ ನಿವಾಸಿ ಆನಂದ ಮಣ್ಣವಡ್ಡರ (42) ಎಂಬುವವರೇ ಮೊಸಳೆ ದಾಳಿಗೆ ಒಳಗಾದ ದುರ್ದೈವಿ. ಕುಳಗಿ ರಸ್ತೆಯ ಕಾಳಿ ನದಿ ದಡದಲ್ಲಿ ಆನಂದ ಅವರು ಶೌಚಕ್ಕೆಂದು ಕುಳಿತಿದ್ದಾಗ ಏಕಾಏಕಿ ನದಿಯಿಂದ ಬಂದ ಮೊಸಳೆ ಅವರ ಮೇಲೆರಗಿದೆ. ದಾಳಿಯಿಂದ ಕಂಗಾಲಾದ ಆನಂದ ಅವರು ಜೋರಾಗಿ ಕೂಗಾಡಿದ್ದಾರೆ. ಅವರ ಕಿರುಚಾಟ ಕೇಳಿ ಸ್ಥಳೀಯರು ಕೂಡಲೇ ಧಾವಿಸಿ ಬಂದು ಮೊಸಳೆಯನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಆನಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ದಾಂಡೇಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯಗಳು ಸಮರ್ಪಕವಾಗಿ ನಿರ್ವಹಣೆ ಆಗದ ಕಾರಣ ಅನಿವಾರ್ಯವಾಗಿ ಜನರು ನದಿ ತೀರಕ್ಕೆ ಹೋಗುತ್ತಿದ್ದಾರೆ. ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Video: ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುದು ಈಗ ಸುಲಭ: ಚಮಚ-ಟೇಪ್ ಬಳಸಿ ಪೈಪ್ ಅನ್ನು ಮಿನಿ ಸ್ಪ್ರೇ ಆಗಿ ಪರಿವರ್ತಿಸಿದ ಗಾರ್ಡನರ್ – Kannada News | Viral Video Watering plants in summer is now easier Gardener turns pipe into mini sprayer using spoon tape

ಬೆಂಗಳೂರು (ಮೇ. 03): ಈ ಬೇಸಿಗೆಯಲ್ಲಿ (Summer) ಸಸ್ಯಗಳ ಆರೈಕೆ ತುಂಬಾ ಮುಖ್ಯವಾಗುತ್ತದೆ. ತೀವ್ರವಾದ ಸೂರ್ಯನ ಬೆಳಕು ಮತ್ತು ಹೆಚ್ಚುತ್ತಿರುವ ತಾಪಮಾನದಿಂದ ಸಸ್ಯಗಳು ಬೇಗನೆ ಒಣಗಲು ಪ್ರಾರಂಭವಾಗುತ್ತದೆ, ಆದ್ದರಿಂದ ಸಮಯಕ್ಕೆ ಸರಿಯಾಗಿ ನೀರುಹಾಕುವುದು ಬಹಳ ಮುಖ್ಯ. ಈ ಬೇಸಿಗೆಯಲ್ಲಿ ಕೇವಲ ಸಸ್ಯಗಳ ಬುಡಕ್ಕೆ ನೀರು ಹಾಕಿದರೆ ಸಾಲದು, ಸಸ್ಯದ ಎಲೆಗಳನ್ನು ಸ್ವಚ್ಛಗೊಳಿಸುವುದು ಅಷ್ಟೇ ಮುಖ್ಯ. ಧೂಳು ಮತ್ತು ಕೊಳಕು ಸಂಗ್ರಹವಾಗುವುದು ಸಸ್ಯ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಜನರು ಮೆದುಗೊಳವೆಯಿಂದ ಸಸ್ಯಗಳನ್ನು ತೊಳೆಯಲು ಪ್ರಯತ್ನಿಸುತ್ತಾರೆ, ಆದರೆ ಏಕಕಾಲದಲ್ಲಿ ಅನೇಕ ಸಸ್ಯಗಳನ್ನು ಸ್ವಚ್ಛಗೊಳಿಸುವಾಗ, ಈ ಕೆಲಸವು ಸಮಯ ತೆಗೆದುಕೊಳ್ಳುತ್ತದೆ.

ಇತ್ತೀಚೆಗೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ಸರಳ ಮತ್ತು ಆಸಕ್ತಿದಾಯಕ ಟ್ರಿಕ್ ವೈರಲ್ ಆಗುತ್ತಿದೆ, ಇದು ಈ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ. ಈ ಟ್ರಿಕ್‌ನ ವಿಶೇಷವೆಂದರೆ ನಿಮ್ಮ ಗಾರ್ಡನ್​ಗೆ ನೀರು ಹಾಕಲು ನಿಮಗೆ ಯಾವುದೇ ದುಬಾರಿ ಉಪಕರಣಗಳು ಅಗತ್ಯವಿಲ್ಲ. ಕೇವಲ ಒಂದು ಚಮಚ ಮತ್ತು ಟೇಪ್ ತುಂಡು ಇದ್ದರೆ ಸಾಕು.

ವೈರಲ್ ವಿಡಿಯೋದಲ್ಲಿ ಏನಿದೆ?

ಈ ಸರಳ ವಿಧಾನವನ್ನು ಅನುಸರಿಸಲು, ಮೊದಲು ಒಂದು ಚಮಚವನ್ನು ತೆಗೆದುಕೊಳ್ಳಿ. ನಂತರ, ಚಮಚವನ್ನು ನೀರಿನ ಪೈಪ್‌ನ ಬಾಯಿಯ ಮೇಲೆ ಇರಿಸಿ, ಅದರ ದುಂಡಗಿನ ತುದಿ ನೀರು ಹರಿವ ಕಡೆ ಇಡಿ. ನಂತರ, ಚಮಚವನ್ನು ಟೇಪ್‌ನಿಂದ ಪೈಪ್‌ಗೆ ಬಿಗಿಯಾಗಿ ಭದ್ರಪಡಿಸಿ, ಅದು ಅಲ್ಲಾಡದಂತೆ ನೋಡಿಕೊಳ್ಳಿ. ಈ ಸೆಟಪ್ ಪೂರ್ಣಗೊಂಡ ನಂತರ, ನೀರಿನ ಟ್ಯಾಪ್ ಅನ್ನು ಆನ್ ಮಾಡಿ.

Viral Video: ಕಾರ್ಖಾನೆಯಲ್ಲಿ ಆಲೂಗಡ್ಡೆ ಚಿಪ್ಸ್ ತಯಾರಿಸುವುದು ಹೀಗೆಯೇ?, ಈ ವಿಡಿಯೋ ನೋಡಿದರೆ ತಿನ್ನುವುದನ್ನೇ ಮರೆತುಬಿಡುತ್ತೀರಿ!

ನೀರು ಹೆಚ್ಚಿನ ಒತ್ತಡದಿಂದ ಪೈಪ್‌ನಿಂದ ಹೊರಬಂದು ಚಮಚಕ್ಕೆ ತಾಗಿದಾಗ, ಅದು ಸ್ಪ್ರೇನಂತೆ ಚಿಮ್ಮುತ್ತದೆ. ಇದು ಸಸ್ಯಗಳನ್ನು ತೊಳೆಯುವುದು ಮತ್ತು ನೀರುಹಾಕುವುದು ಎರಡನ್ನೂ ಸುಲಭಗೊಳಿಸುತ್ತದೆ. ನೀವು ಏಕಕಾಲದಲ್ಲಿ ಅನೇಕ ಚಟ್ಟಿಗಳನ್ನು ಅಥವಾ ಸಸ್ಯಗಳನ್ನು ಸ್ವಚ್ಛಗೊಳಿಸಬೇಕಾದಾಗ ಈ ವಿಧಾನವು ವಿಶೇಷವಾಗಿ ಉಪಯುಕ್ತವಾಗಿದೆ.

ಆದಾಗ್ಯೂ, ಈ ತಂತ್ರವು ಎಲ್ಲಾ ಸಂದರ್ಭಗಳಲ್ಲಿಯೂ ಪರಿಣಾಮಕಾರಿಯಾಗಿರುವುದಿಲ್ಲ. ಎತ್ತರದ ಮರಗಳಿಂದ ಇದರಿಂದ ನೀರು ಹಾಕುವುದು ಅಸಾಧ್ಯ. ನೀರಿನ ದಿಕ್ಕು ಬದಲಾಗುವುದರಿಂದ ನೀವು ಒದ್ದೆ ಆಗಬಹುದು. ಆದ್ದರಿಂದ, ಈ ತಂತ್ರವನ್ನು ಬಳಸುವಾಗ ಅದರ ಮಿತಿಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Upavasa: ನಿಮ್ಮ ಇಷ್ಟಾರ್ಥ ಸಿದ್ಧಿಗೆ ಯಾವ ದಿನ ಉಪವಾಸ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ – Kannada News | Understanding Upavasa: Rewards of Fasting According to Hindu Tithis

ಪ್ರತಿಯೊಂದು ತಿಥಿಯ ಉಪವಾಸದ ಫಲಗಳು ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಅನಾದಿ ಕಾಲದಿಂದಲೂ, ಕೃತಯುಗ, ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗಗಳಲ್ಲಿ ಭಗವಂತನನ್ನು ಆರಾಧಿಸಲು ಮತ್ತು ಆತನ ಕೃಪೆಗೆ ಪಾತ್ರರಾಗಲು ಉಪವಾಸದಂತಹ ದೇಹದಂಡನೆಯ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಉಪವಾಸ ಎಂಬ ಪದವು ಉಪ ಅಂದರೆ ಹತ್ತಿರ, ವಾಸ ಅಂದರೆ ಜೀವಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಅಂದರೆ, ಭಗವಂತನಿಗೆ ಹತ್ತಿರವಾಗಿ ಜೀವಿಸುವುದು ಅಥವಾ ಆತನನ್ನು ಸಮರ್ಪಣಾ ಭಾವದಿಂದ ಆರಾಧಿಸುವುದೇ ಉಪವಾಸದ ಮೂಲ ಉದ್ದೇಶ. ಇದು ನಮ್ಮ ಕಾಮ್ಯಗಳ ಸಿದ್ಧಿಗಾಗಿ, ಅಂದರೆ ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಮನೆ ಕಟ್ಟಿಕೊಳ್ಳಲು, ಗ್ರಹಕಾಟ ನಿವಾರಣೆಗೆ ಅಥವಾ ಇತರೆ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಕೈಗೊಳ್ಳುವ ಭಕ್ತಿಯ ಒಂದು ವಿಧಾನವಾಗಿದೆ.

ಸಾಮಾನ್ಯವಾಗಿ ನಾವು ಏಕಾದಶಿ, ಹಬ್ಬ ಹರಿದಿನಗಳು ಮತ್ತು ವ್ರತಗಳನ್ನು ಆಚರಿಸುವ ಸಂದರ್ಭದಲ್ಲಿ ಉಪವಾಸ ಮಾಡುತ್ತೇವೆ. ಆದರೆ, ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ 15 ದಿನಗಳಲ್ಲಿ ಬರುವ ಪ್ರತಿಯೊಂದು ತಿಥಿಗೂ ತನ್ನದೇ ಆದ ಮಹತ್ವ ಮತ್ತು ಫಲವಿದೆ. ಯಾವ ತಿಥಿಯಂದು ಉಪವಾಸ ಮಾಡಿದರೆ ಯಾವ ಶುಭ ಫಲ ಸಿಗುತ್ತದೆ ಎಂಬುದನ್ನು ತಿಳಿದು ಆಚರಿಸಿದರೆ ಹೆಚ್ಚು ಪ್ರಯೋಜನಕಾರಿ.

  • ಪಾಡ್ಯಮಿಯ ಉಪವಾಸ: ಇದು ಸಂಪತ್ತು ವೃದ್ಧಿಗೆ ಸಹಕಾರಿಯಾಗಿದೆ. ಅಮಾವಾಸ್ಯೆ ಅಥವಾ ಹುಣ್ಣಿಮೆಯ ನಂತರ ಬರುವ ಶುಕ್ಲ ಪಕ್ಷದ ಪಾಡ್ಯಮಿಯ ಉಪವಾಸಗಳು ಶೀಘ್ರ ಫಲವನ್ನು ನೀಡುತ್ತವೆ.
  • ದ್ವಿತೀಯ (ಬಿದಿಗೆ) ಉಪವಾಸ: ಐಷಾರಾಮಿ ಜೀವನ, ಆಭರಣ ಯೋಗ ಮತ್ತು ಉತ್ತಮ ವಾಹನ ಪ್ರಾಪ್ತಿಗಾಗಿ ಇದನ್ನು ಆಚರಿಸಲಾಗುತ್ತದೆ.
  • ತೃತೀಯ (ತದಿಗೆ) ಉಪವಾಸ: ನಮ್ಮ ಕೋರಿಕೆಗಳು, ಸಂಕಲ್ಪಗಳು ಮತ್ತು ಆಸೆ ಆಕಾಂಕ್ಷೆಗಳು ಈಡೇರಲು ಈ ಉಪವಾಸವು ಸಹಾಯಕವಾಗಿದೆ.
  • ಚತುರ್ಥಿ (ಚೌತಿ) ಉಪವಾಸ: ಸಂಕಷ್ಟ ಚತುರ್ಥಿ ಎಂದೂ ಕರೆಯಲ್ಪಡುವ ಈ ಉಪವಾಸವು ವಾಹನ ಯೋಗ ಮತ್ತು ಗೃಹ ಯೋಗವನ್ನು ನೀಡುತ್ತದೆ.
  • ಪಂಚಮಿಯ ಉಪವಾಸ: ಕುಟುಂಬದ ವರ್ಗದವರು, ಮಕ್ಕಳು ಮತ್ತು ಕಾರ್ಯ ಸಿದ್ಧಿಗಾಗಿ ಈ ಉಪವಾಸವನ್ನು ಆಚರಿಸಲಾಗುತ್ತದೆ. ಪಂಚಮಿಯ ಉಪವಾಸವು ಕೆಲಸ ಕಾರ್ಯಗಳನ್ನು ಪರಿಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
  • ಷಷ್ಠಿಯ ಉಪವಾಸ: ಆರೋಗ್ಯ, ವಿವಾಹ ಮತ್ತು ಸಂತಾನ ಪ್ರಾಪ್ತಿಗಾಗಿ ಇದು ಉತ್ತಮ.
  • ಸಪ್ತಮಿಯ ಉಪವಾಸ: ಕುಟುಂಬದ ಶ್ರೇಯಸ್ಸು, ಶಕ್ತಿ ವೃದ್ಧಿ ಮತ್ತು ಗಂಡ ಹೆಂಡತಿಯರ ಕಲಹಗಳು ಬಗೆಹರಿಯಲು ಈ ಉಪವಾಸವು ಸಹಾಯಕ. ಇದು ಉತ್ತಮ ಭಾವನೆಗಳನ್ನು ಮೂಡಿಸುತ್ತದೆ.
  • ಅಷ್ಟಮಿಯ ಉಪವಾಸ: ಅಧಿಕಾರ ಪ್ರಾಪ್ತಿ, ರಾಜಕೀಯ ಪ್ರಗತಿ ಮತ್ತು ಜವಾಬ್ದಾರಿಗಳ ಸಮರ್ಥ ನಿರ್ವಹಣೆಗಾಗಿ ಅಷ್ಟಮಿಯ ಉಪವಾಸವನ್ನು ಕೈಗೊಳ್ಳಲಾಗುತ್ತದೆ.
  • ನವಮಿಯ ಉಪವಾಸ: ಕೀರ್ತಿ, ಪ್ರತಿಷ್ಠೆ, ಅಪನಿಂದೆಗಳ ನಿವಾರಣೆ ಮತ್ತು ಅಪವಾದಗಳಿಂದ ಮುಕ್ತಿ ಪಡೆಯಲು ನವಮಿಯ ಉಪವಾಸ ಉತ್ತಮ.
  • ದಶಮಿಯ ಉಪವಾಸ: ದೋಷಗಳ ನಿರ್ಮೂಲನೆ ಮತ್ತು ಕೋರ್ಟ್ ಕೇಸ್ ವಿಚಾರಗಳಲ್ಲಿ ಯಶಸ್ಸಿಗಾಗಿ ಈ ಉಪವಾಸವನ್ನು ಆಚರಿಸಲಾಗುತ್ತದೆ.
  • ಏಕಾದಶಿಯ ಉಪವಾಸ: ಸರ್ವ ವಿಧದಲ್ಲೂ ಮನಸ್ಸಿನ ಇಚ್ಛೆಗಳನ್ನು ಈಡೇರಿಸುವ ಶಕ್ತಿ ಈ ಉಪವಾಸಕ್ಕಿದೆ. ಆಕಸ್ಮಿಕ ಧನಲಾಭ, ಅದೃಷ್ಟ ಮತ್ತು ಫಲಿತಾಂಶಗಳನ್ನು ಇದು ನೀಡುತ್ತದೆ.
  • ದ್ವಾದಶಿಯ ಉಪವಾಸ: ಕ್ಷೇತ್ರ ದರ್ಶನ ಮತ್ತು ದೈವಾನುಗ್ರಹ ಪ್ರಾಪ್ತಿಗಾಗಿ ಇದನ್ನು ಕೈಗೊಳ್ಳಲಾಗುತ್ತದೆ. ಇದು ವೈರಾಗ್ಯವನ್ನೂ ಸಹ ಉಂಟುಮಾಡಬಹುದು.
  • ತ್ರಯೋದಶಿಯ ಉಪವಾಸ: ಅರ್ಧಂಬರ್ಧ ನಿಂತ ಕೆಲಸಗಳು ಪರಿಪೂರ್ಣಗೊಳ್ಳಲು ಈ ಉಪವಾಸವು ಸಹಾಯಕ.
  • ಚತುರ್ದಶಿಯ ಉಪವಾಸ: ಅಪಮೃತ್ಯುವಿನಿಂದ ಪಾರಾಗಲು, ಆರೋಗ್ಯದಲ್ಲಿ ಚೇತರಿಕೆ ಕಾಣಲು ಮತ್ತು ವ್ಯವಹಾರದಲ್ಲಿ ಯಶಸ್ಸು ಪಡೆಯಲು ಚತುರ್ದಶಿಯ ಉಪವಾಸವನ್ನು ಮಾಡಲಾಗುತ್ತದೆ.
  • ಪೌರ್ಣಮಿಯ ಉಪವಾಸ: ದೇವತಾ ಅನುಗ್ರಹ ಮತ್ತು ಕುಲದೇವರ ಆಶೀರ್ವಾದಕ್ಕಾಗಿ ಈ ಉಪವಾಸ ಉತ್ತಮ.
  • ಅಮಾವಾಸ್ಯೆಯ ಉಪವಾಸ: ಪಿತೃಗಳ ಅನುಗ್ರಹ, ಮಾನಸಿಕ ನೆಮ್ಮದಿ ಮತ್ತು ಮಾಟ ಮಂತ್ರಗಳಿಂದ ಮುಕ್ತಿ ಪಡೆಯಲು ಅಮಾವಾಸ್ಯೆಯ ಉಪವಾಸವನ್ನು ಆಚರಿಸಲಾಗುತ್ತದೆ.

ಹೀಗೆ, ಉಪವಾಸವು ಭಗವಂತನನ್ನು ತಲುಪಲು ಒಂದು ಸುಲಭ ಮಾರ್ಗವಾಗಿದೆ. ಇದು ಕೇವಲ ನಂಬಿಕೆಯ ಆಧಾರದ ಮೇಲೆ ನಿಂತಿರುವ ಒಂದು ಮಹತ್ವಪೂರ್ಣ ಆಚರಣೆಯಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:19 am, Sun, 3 May 26

Source link

ಶೃಂಗೇರಿ ಅಂಚೆ ಮತಗಳ ಟ್ಯಾಂಪರಿಂಗ್: ಚುನಾವಣಾಧಿಕಾರಿ ಗೌರವ್ ಕುಮಾರ್ ‌ಶೆಟ್ಟಿ ಹೇಳಿದ್ದೇನು? – Kannada News | Sringeri Postal Vote Recount: Returning Officer Clarifies Process Amidst Tampering Allegations

ಚಿಕ್ಕಮಗಳೂರು, ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಹೈಕೋರ್ಟ್ ಆದೇಶದಂತೆ ಪೂರ್ಣಗೊಂಡಿದ್ದು, ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ಚಿಕ್ಕಮಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ಯಾಂಪರಿಂಗ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಆ ಆರೋಪಗಳು ಕ್ರಿಮಿನಲ್ ಅಪರಾಧ ವ್ಯಾಪ್ತಿಗೆ ಬರುತ್ತಿದ್ದು, ರಿಟರ್ನಿಂಗ್ ಆಫೀಸರ್ ಆಗಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವ್ಯಾಪ್ತಿ ಕೇವಲ ಅಂಚೆ ಮತಪತ್ರಗಳ ಮರು ಪರಿಶೀಲನೆ ಮತ್ತು ಮರು ಎಣಿಕೆಗೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ನಿರ್ದೇಶನದಂತೆ 279 ತಿರಸ್ಕೃತ ಮತಗಳನ್ನು ಮರು ಪರಿಶೀಲನೆ ಮಾಡಲಾಗಿದೆ. ಅಲ್ಲದೆ, 1543 ಮತಗಳನ್ನು ಮರು ಎಣಿಕೆ ಮಾಡಲಾಗಿದ್ದು, ಮರು ಪರಿಶೀಲನೆಯಲ್ಲಿ ಮಾನ್ಯ ಎಂದು ಕಂಡುಬಂದ ತಿರಸ್ಕೃತ ಮತಗಳನ್ನೂ ಎಣಿಕೆಗೆ ಪರಿಗಣಿಸಲಾಗಿದೆ. ಮತಗಳನ್ನು ಮಾನ್ಯ ಮಾಡುವುದು ಅಥವಾ ಅಮಾನ್ಯ ಮಾಡುವುದು ಚುನಾವಣಾ ಆಯೋಗದ ಹ್ಯಾಂಡ್‌ಬುಕ್ ಮತ್ತು ಕಾಯ್ದೆಗಳ ಪ್ರಕಾರ ನಡೆಯುತ್ತದೆ ಎಂದು ಶೆಟ್ಟಿ ಹೇಳಿದ್ದಾರೆ. ಹಿಂದೆ ಮಾನ್ಯವಾಗಿದ್ದ ಕೆಲವು ಮತಗಳು ಈಗ ಅಮಾನ್ಯವಾಗಿರುವುದಕ್ಕೆ ಇದು ಕಾರಣ. 12 ಮತಗಳ ನಾಪತ್ತೆಯ ಕುರಿತು ಪ್ರತಿಕ್ರಿಯಿಸಲು ತಮಗೆ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಪುಣೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ: 65 ವರ್ಷದ ಆರೋಪಿಗಿದೆ ಕ್ರಿಮಿನಲ್ ಹಿನ್ನೆಲೆ – Kannada News | Pune Case Triggers Outrage as Accused’s Past Comes Under Scrutiny

ಪುಣೆ, ಮೇ 03: ಪುಣೆ ಜಿಲ್ಲೆಯಲ್ಲಿ ನಾಲ್ಕು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಬಂಧಿತನಾಗಿರುವ 65 ವರ್ಷದ ವ್ಯಕ್ತಿಯ ಕರಾಳ ಮುಖ ಈಗ ಬೆಳಕಿಗೆ ಬಂದಿದೆ. ಈತ ಕೇವಲ ಆಕಸ್ಮಿಕವಾಗಿ ಅಪರಾಧವೆಸಗಿದ್ದಲ್ಲ, ಬದಲಿಗೆ ದಶಕಗಳಿಂದ ಲೈಂಗಿಕ ಅಪರಾಧಗಳಲ್ಲಿ ತೊಡಗಿದ್ದವನು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

1998ರಲ್ಲಿ ಆರೋಪಿಯ ವಿರುದ್ಧ ಮೊದಲ ಬಾರಿಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿತ್ತು, 2015ರಲ್ಲಿ ಲೈಂಗಿಕ ಕಿರುಕುಳ ಮತ್ತು ಕೊಲೆಯತ್ನದ ಮತ್ತೊಂದು ಪ್ರಕರಣ ದಾಖಲಾಗಿತ್ತು. 2015 ರಲ್ಲಿ ಪಕ್ಕದ ಮನೆ ಹುಡುಗಿಯ ಮೇಲೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದ ಮೇಲೆ ಪೋಕ್ಸೊ (POCSO) ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 1998 ಮತ್ತು 2015ರ ಎರಡೂ ಪ್ರಕರಣಗಳಲ್ಲಿ ಈತ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು. 2019 ರಲ್ಲಿ ನ್ಯಾಯಾಲಯವು ಈತನನ್ನು ಮುಕ್ತಗೊಳಿಸಿತ್ತು, ಇದು ಈತನ ಕ್ರೂರ ಪ್ರವೃತ್ತಿ ಮುಂದುವರೆಯಲು ಕಾರಣವಾಯಿತು.

ಬಾಲಕಿ ನಾಪತ್ತೆಯಾದ ನಂತರ ಕುಟುಂಬದವರು ಹುಡುಕಾಟ ಆರಂಭಿಸಿದಾಗ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. 36 ಸೆಕೆಂಡುಗಳ ಈ ವೀಡಿಯೊದಲ್ಲಿ, ಆರೋಪಿಯು ಮಗುವಿಗೆ ಆಮಿಷವೊಡ್ಡಿ ಗಲ್ಲಿಯೊಂದಕ್ಕೆ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಸಾಕ್ಷ್ಯದ ಆಧಾರದ ಮೇಲೆ ಪುಣೆ ಗ್ರಾಮೀಣ ಪೊಲೀಸರು ಮಾಹಿತಿ ಬಂದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಯಾರಿಗಾದರೂ ಹೇಳಿದ್ರೆ ಗಂಡ-ಮಗ ರಕ್ತ ಕಾರಿ ಸಾಯ್ತಾರೆ: ಮಾಟ-ಮಂತ್ರದ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!

ಮಹಾರಾಷ್ಟ್ರ ಸರ್ಕಾರವು ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದೆ. ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು, ಆರೋಪಿಯನ್ನು ಗಲ್ಲಿಗೇರಿಸಲು ಅಗತ್ಯವಿರುವ ಭದ್ರವಾದ ಪುರಾವೆಗಳನ್ನು ಸಂಗ್ರಹಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ (Fast-track Court) ನಡೆಸುವಂತೆ ಆದೇಶಿಸಲಾಗಿದೆ. ಪ್ರಸ್ತುತ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮೇ 7 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಯಲ್ಲಿ ಬಿಗ್ ಟ್ವಿಸ್ಟ್​​: ಸ್ಫೋಟಕ ಹೇಳಿಕೆ ನೀಡಿದ ರಾಯರೆಡ್ಡಿ – Kannada News | Karnataka Congress Leadership: Rayareddi Discusses Stability and Kharges Potential Role

ಬೆಂಗಳೂರು, ಮೇ,3: ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಂಬರುವ ನಾಯಕತ್ವ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕುರ್ಚಿ ಕದನಕ್ಕೆ ಸಂಬಂಧಿಸಿದಂತೆ ಅವರು “ಸ್ಪೋಟಕ ಟ್ವಿಸ್ಟ್” ನೀಡಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಯರೆಡ್ಡಿ ಅವರು ನವದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಕರ್ನಾಟಕದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಬದಲಾವಣೆಯಾದರೆ, ಖರ್ಗೆ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ರಾಯರೆಡ್ಡಿ ಖರ್ಗೆ ಅವರಿಗೆ ಸೂಚಿಸಿದ್ದಾರೆ. ಅಲ್ಲದೆ, ಖರ್ಗೆ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ರಾಯರೆಡ್ಡಿ ಬಹಿರಂಗಪಡಿಸಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಣತಂತ್ರದ ಭಾಗ ಎಂದೂ ಅವರು ಹೇಳಿದ್ದಾರೆ. ಪಕ್ಷದ ಅಭಿವೃದ್ಧಿ ಮತ್ತು ಸರ್ಕಾರದ ಸ್ಥಿರತೆಗೆ ಅನಗತ್ಯ ಮುಖ್ಯಮಂತ್ರಿ ಬದಲಾವಣೆ ಮಾತುಗಳು ಹಿನ್ನಡೆಯಾಗಬಹುದು ಎಂದು ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಕ್ಸರ್‌ನಿಂದ ಗಾಯಗೊಂಡ ಅಭಿಮಾನಿಯ ನೆರವಿಗೆ ಧಾವಿಸಿದ ಪಂಜಾಬ್ ಕಿಂಗ್ಸ್ – Kannada News | IPL 2026: Punjab Kings’ touching gesture for elderly fan

ಮೈದಾನದಲ್ಲಿ ಆಟಗಾರರು ಸಿಡಿಸುವ ಬೌಂಡರಿ-ಸಿಕ್ಸರ್‌ಗಳು ಅಭಿಮಾನಿಗಳಿಗೆ ಸಂಭ್ರಮ ತರುವುದು ಸಹಜ. ಆದರೆ, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟರ್ ಪ್ರಿಯಾನ್ಶ್ ಆರ್ಯ ಹೊಡೆದ ಒಂದು ಸಿಕ್ಸರ್ ಹಿರಿಯ ಅಭಿಮಾನಿಯೊಬ್ಬರ ಪಾಲಿಗೆ ಸಂಕಷ್ಟ ತಂದೊಡ್ಡಿತ್ತು. ಇದೀಗ ಆ ಅಭಿಮಾನಿಯ ನೆರವಿಗೆ ಧಾವಿಸುವ ಮೂಲಕ ಪಂಜಾಬ್ ಕಿಂಗ್ಸ್ (PBKS) ತಂಡ ಕ್ರೀಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಘಟನೆ ಹಿನ್ನಲೆ ಏನು?

ಮುಲ್ಲನ್‌ಪುರದ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಪ್ರಿಯಾನ್ಶ್ ಆರ್ಯ ಸಿಡಿಸಿದ ಭರ್ಜರಿ ಸಿಕ್ಸರ್ ನೇರವಾಗಿ ಸ್ಟ್ಯಾಂಡ್‌ನಲ್ಲಿದ್ದ ಕ್ರಿಶನ್ ಚಂದ್ ಎಂಬ ವೃದ್ಧರ ಮುಖಕ್ಕೆ ಬಡಿಯಿತು. ಏಟಿನ ರಭಸಕ್ಕೆ ಅವರ ಕಣ್ಣಿನ ಮೇಲ್ಭಾಗದಲ್ಲಿ ಆಳವಾದ ಗಾಯವಾಗಿ ರಕ್ತಸ್ರಾವವಾಗಿತ್ತು. ಕೂಡಲೇ ಮೈದಾನದ ವೈದ್ಯಕೀಯ ಸಿಬ್ಬಂದಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.

ಪಂಜಾಬ್ ಕಿಂಗ್ಸ್ ತಂಡದ ಮಾನವೀಯ ಸ್ಪಂದನೆ:

ಘಟನೆಯ ನಂತರ ಅಭಿಮಾನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ:

  • ವಿಡಿಯೋ ಕಾಲ್ ಮೂಲಕ ಸಾಂತ್ವನ: ತಂಡದ ಸಹ-ಮಾಲೀಕಿ ಪ್ರೀತಿ ಝಿಂಟಾ ಮತ್ತು ಬ್ಯಾಟರ್ ಪ್ರಿಯಾನ್ಶ್ ಆರ್ಯ ಅವರು ನೇರವಾಗಿ ಕ್ರಿಶನ್ ಚಂದ್ ಅವರಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಆರ್ಯ ಅವರು ಆಕಸ್ಮಿಕವಾಗಿ ನಡೆದ ಘಟನೆಗೆ ಅಭಿಮಾನಿಯ ಬಳಿ ಕ್ಷಮೆಯನ್ನೂ ಕೋರಿದರು.
  • ವಿಶೇಷ ಅತಿಥಿಯಾಗಿ ಆಹ್ವಾನ: ಗಾಯದಿಂದ ಚೇತರಿಸಿಕೊಂಡ ಕ್ರಿಶನ್ ಚಂದ್ ಅವರಿಗೆ ತಂಡವು ಗೌರವ ಸೂಚಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ತಂಡದ ಮುಂದಿನ ಪಂದ್ಯಕ್ಕೆ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಯಿತು.
  • ವಿಐಪಿ ಸೌಲಭ್ಯ: ಅವರಿಗೆ ಕ್ರೀಡಾಂಗಣದಲ್ಲಿ ವಿಐಪಿ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಪ್ರೀತಿ ಝಿಂಟಾ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ:

ಅಭಿಮಾನಿಯ ಬಗ್ಗೆ ತೋರಿದ ಈ ಕಾಳಜಿಯ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. “ಕೇವಲ ಆಟ ಗೆಲ್ಲುವುದು ಮುಖ್ಯವಲ್ಲ, ಅಭಿಮಾನಿಗಳ ಮನ ಗೆಲ್ಲುವುದು ಕೂಡ ಮುಖ್ಯ” ಎಂದು ನೆಟ್ಟಿಗರು ಪಂಜಾಬ್ ಕಿಂಗ್ಸ್ ತಂಡದ ನಡೆಯನ್ನು ಕೊಂಡಾಡುತ್ತಿದ್ದಾರೆ.

Source link

ಬಿಸಿಲ ಬೇಗೆಯ ನಡುವೆ ತಂಪು ಸುದ್ದಿ: ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ! – Kannada News | Early Monsoon 2026: IMD Predicts Early Arrival in Andaman and Kerala Amid Heatwave

ಮೇ ಮಧ್ಯಭಾಗದಲ್ಲೇ ಮುಂಗಾರು ಎಂಟ್ರಿ!

ನವದೆಹಲಿ, ಮೇ 03: ದೇಶದಲ್ಲಿ ತೀವ್ರ ಬಿಸಿಲಿನ ನಡುವೆಯೇ ಮುಂಗಾರು ಮಾರುತ ಕುರಿತಾಗಿ ಹವಾಮಾನ ಇಲಾಖೆ (IMD) ಮಹತ್ವದ ಮುನ್ಸೂಚನೆ ನೀಡಿದೆ. ಈ ಬಾರಿ ನೈಋತ್ಯ ಮುಂಗಾರು ಮಾರುತವು ಅವಧಿಗಿಂತ ಮುಂಚೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಮೇ 14ರಿಂದ 16ರ ನಡುವೆ ಮುಂಗಾರು ಅಂಡಮಾನ್ ಪ್ರದೇಶಕ್ಕೆ ತಲುಪುವ ನಿರೀಕ್ಷೆಯಿದ್ದು, ಬಳಿಕ ಜೂನ್ 1ರ ಬದಲು ಮೇ ಕೊನೆಯ ವಾರದಲ್ಲೇ ಕೇರಳ ಕರಾವಳಿಗೆ ಅಪ್ಪಳಿಸಬಹುದು ಎಂದು ಇಲಾಖೆ ತಿಳಿಸಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ

ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ವಾಡಿಕೆಯಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇದು ಕೃಷಿ ಚಟುವಟಿಕೆಗಳಿಗೆ ಕೆಲ ಮಟ್ಟಿಗೆ ಸಹಕಾರಿ ಆಗಬಹುದು. ಆದರೆ, ಈಶಾನ್ಯ, ಪೂರ್ವ ಹಾಗೂ ಕೇಂದ್ರ ಭಾರತದ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ವಾಡಿಕೆಯಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದರ ನಡುವೆ ದೇಶದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಭಾರತ ಹಾಗೂ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಹೀಟ್‌ವೇವ್ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಬಹುದು. ಏಪ್ರಿಲ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇತ್ತು.

ಇದನ್ನೂ ಓದಿ ಸುಡುವ ಬಿಸಿಲಿನ ನಡುವೆ ಎಲ್ ನಿನೋ ಆತಂಕ: ಮುಂಗಾರು ಮಳೆಗೆ ಕಂಟಕ, ದೇಶಾದ್ಯಂತ ಬರಗಾಲದ ಭೀತಿ!

ಮಳೆಯ ಮೇಲೆ ಪರಿಣಾಮ ಬೀರಲಿದೆ ‘ಎಲ್ ನಿನೊ’

ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ‘ಎಲ್ ನಿನೊ’ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಈ ವರ್ಷದ ಮುಂಗಾರು ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆಯಿಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ. ಹವಾಮಾನ ಇಲಾಖೆ ನೀಡಿರುವ ಈ ಮುನ್ಸೂಚನೆ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link