Category Archives: Blog

Your blog category

ಜೊತೆ ನೃತ್ಯ ಮಾಡಲು ಪೀಡಿಸಿ, ಮೊಬೈಲ್ ನಂಬರ್‌ಗಾಗಿ ಡಿಮ್ಯಾಂಡ್!: ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ – Kannada News | Bengaluru Resort Incident: Woman Harassed at Office Event, Sparks Outrage Online

ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ

ಬೆಂಗಳೂರು, ಏ,30: ಬೆಂಗಳೂರಿನಲ್ಲಿ ಕಾಮ ಪಿಶಾಚಿಗಳ ಹವಾಳಿ ಹೆಚ್ಚಾಗಿದೆ. ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಬೆಂಗಳೂರಿನ ರೆಸಾರ್ಟ್‌ನಲ್ಲಿ ಅಸಭ್ಯ ವರ್ತನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ರಜೆಯಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಮೋಜು, ವಿಶ್ರಾಂತಿ ಮತ್ತು ನಿರಾತಂಕವಾಗಿ ಇರುವ ಎಂದರೆ ಇಂತವರ ಕಾಟ ಹೆಚ್ಚಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ತಮ್ಮ ಕೆಟ್ಟ ಅನುಭವದ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ತನ್ನ ಕೆಲಸದ ನಿಮಿತ್ತ ನಗರದ ಸಮೀಪವಿರುವ ರೆಸಾರ್ಟ್‌ಗೆ ಹೋಗಿದ್ದರು. ಅದು ಅವರ ಆಫೀಸ್​​​ ಕೆಲಸ ಆಗಿರುವ ಕಾರಣ ಅಲ್ಲಿ ಪುರುಷರು ಕೂಡ ಇದ್ದರು. ಅಲ್ಲಿ ಕುಡಿಯಲು, ತಿನ್ನಲು ಎಲ್ಲವೂ ಇತ್ತು. ಆದರೆ ಈ ಮಹಿಳೆಗೆ ಅಲ್ಲಿ ಅವರ ಜತೆ ಕೆಲಸ ಬಗ್ಗೆ ಚರ್ಚೆ ಮಾಡಲು ಮಾತ್ರ ಇತ್ತು. ಇನ್ನು ಈ ಮಹಿಳೆಯ ಹೆಸರು ತುಷಿಕಾ ಅಗರ್ವಾಲ್ ಎಂದು, ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ತುಷಿಕಾ ಅಗರ್ವಾಲ್ ಊಟ ಮಾಡುತ್ತಿರುವ ಪುರುಷರ ಗುಂಪೊಂದು ಕೆಟ್ಟಾಗಿ ನೋಡುತ್ತಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆ ಪುರುಷರು ನೋಡುತ್ತಿರುವುದನ್ನು ಸರಿಯಾಗಿ ಇವರು ಗಮನಿಸಿದ್ದಾರೆ. 20 ರಿಂದ 30 ಜನರ ಮದ್ಯಪಾನ ಮಾಡಿದ ಪುರುಷರು ನೀವು ನಮ್ಮ ಜತೆಗೆ ಡ್ಯಾನ್ಸ್​​ ಮಾಡುತ್ತೀರಾ ಎಂದು ಕೇಳಿದರು. ಆದರೆ ಇದಕ್ಕೆ ತುಷಿಕಾ ನಿರಾಕರಿಸಿದ್ದಾರೆ. ಆದರೆ ಈ ವಿಷಯವನ್ನು ಅಷ್ಟಕ್ಕೆ ಬಿಡಲಿಲ್ಲ. ಆ ಪುರುಷರಲ್ಲಿ ಒಬ್ಬ ನಂತರ ನೇರವಾಗಿ ಬಂದು ತುಷಿಕಾ ಅವರಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತೀರಾ ಎಂದು ಕೇಳಲು ಆರಂಭಿಸಿದ್ದಾನೆ. ಇದಕ್ಕೂ ಕೂಡ ತುಷಿಕಾ ವಿರೋಧಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳ ಜೀವದ ಜೊತೆ ಆಟವಾಡಬೇಡಿ: ಬೆಂಗಳೂರಿನಲ್ಲಿ ಆರು ಮಕ್ಕಳ ಕಿಕ್ಕಿರಿದ ಸ್ಕೂಟರ್ ಜರ್ನಿ

ಇಲ್ಲಿದೆ ನೋಡಿ ವಿಡಿಯೋ:

ಇಷ್ಟಕ್ಕೆ ಬಿಡದ ಆ ಪುರುಷರ ಗುಂಪು ತುಷಿಕಾ ಅವರ ಮೊಬೈಲ್​​​ ನಂಬರ್​​​ನ್ನು ಅವರ ಆಫೀಸ್​​ ಸಿಬ್ಬಂದಿಗಳಿಂದ ಕೇಳಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆಯೇ? ಎಂಬ ಬಗ್ಗೆ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹದೇ ಘಟನೆ ನನ್ನ ಜೀವನದಲ್ಲೂ ನಡೆದಿದೆ ಎಂದು ಮತ್ತೊಂದು ಮಹಿಳೆ ಕಮೆಂಟ್ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯನ್ನು ಇಷ್ಟು ಕೆಟ್ಟ ಮನಸ್ಥಿತಿಯ ಪುರುಷರೊಂದಿಗೆ ಮೀಟಿಂಗ್​ ಮಾಡಲು ಹೇಗೆ ಕಳಿಸುತ್ತಾರೆ ಈ ಕಂಪನಿಯವರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಾಕ್ಷಿ ಇದ್ದರೆ ಇಲ್ಲಿ ಹಾಕಿ, ಇಲ್ಲದಿದ್ದರೆ ಇದು ಕಥೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ – Kannada News | KD The Devil Kannada Movie Review Ft Dhruva Sarja Sanjay Dutt Jogi Prem

ಕೆಡಿ: ದಿ ಡೆವಿಲ್

A

  • Time – 141 Minutes
  • Released – April 30, 2026
  • Language – Kannada
  • Genre – Action, Drama, Period, Thriller

Cast – ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ರಮೇಶ್ ಅರವಿಂದ್​, ರವಿಚಂದ್ರನ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು.

Director – ಜೋಗಿ ಪ್ರೇಮ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಕೆಡಿ’ ಸಿನಿಮಾ (KD Movie) ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಮಾಸ್ ಸಿನಿಮಾ ಆದ್ದರಿಂದ ಬಿಡುಗಡೆಗೂ ಮುನ್ನವೇ ಒಂದು ಹೈಪ್ ಸೃಷ್ಟಿ ಆಗಿತ್ತು. ಪಾತ್ರವರ್ಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರುವುದರಿಂದ ಸಹಜವಾಗಿಯೇ ಸ್ಟಾರ್ ಮೆರುಗು ಹೆಚ್ಚಿತ್ತು. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾ ಆದ್ದರಿಂದ ಅದ್ದೂರಿತನಕ್ಕೆ ಕೊರತೆ ಇಲ್ಲ ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇತ್ತು. ಹಾಗಾದರೆ, ಅಂದುಕೊಂಡಂತೆಯೇ ‘ಕೆಡಿ’ ಸಿನಿಮಾ ಮೂಡಿಬಂದಿದೆಯಾ? ಈ ವಿಮರ್ಶೆ ಓದಿ..

ನಿರ್ದೇಶಕ ಪ್ರೇಮ್ ಅವರು ಭೂಗತ ಜಗತ್ತು ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಸೇರಿಸಿ ಕಥೆ ಹೆಣೆದರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಈಗ ಅವರು ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲೂ ಅದನ್ನೇ ಮಾಡಿದ್ದಾರೆ. ರೆಟ್ರೋ ಕಾಲದ ಒಂದು ಮಾಸ್ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಅದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುವಂತಹ ಎಮೋಷನಲ್ ಕಥೆಯನ್ನು ಬೆರೆಸಿದ್ದಾರೆ. ಕಥೆ ಹೀಗಿರುವುದರಿಂದ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನ ಆಗಿದೆ.

1975ರ ಕಾಲಘಟ್ಟದಲ್ಲಿ ‘ಕೆಡಿ’ ಸಿನಿಮಾದ ಕಥೆ ನಡೆಯುತ್ತದೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ. ಮನಸ್ಸಿನಲ್ಲಿ ಕಲ್ಮಶವೇ ಇಲ್ಲದ ಆತ ಯಾರ ಮೇಲೂ ಕೈ ಎತ್ತಲ್ಲ. ಆದರೆ ಒಂದು ದಿನ ಅತಿ ಭಯಾನಕವಾದ ರಾಕ್ಷಸನ ರೂಪದಲ್ಲಿ ಭೂಗತ ಲೋಕಕ್ಕೆ ಎಂಟ್ರಿ ನೀಡುತ್ತಾನೆ. ಆ ರೀತಿ ಬದಲಾವಣೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಕೆಡಿ’ ಸಿನಿಮಾವನ್ನು ಸಿಕ್ಕಾಪಟ್ಟೆ ಅದ್ದೂರಿಯಾಗಿ ಸಿದ್ಧಪಡಿಸಲಾಗಿದೆ. ಬೃಹತ್ ಸೆಟ್​ಗಳಲ್ಲಿಯೇ ಬಹುತೇಕ ಸನ್ನಿವೇಶಗಳ ಶೂಟಿಂಗ್ ನಡೆದಿದೆ. ಕಾಳಿ ಕಥಾನಾಯಕ ಆಗಿದ್ದರೂ ಆತನ ಸುತ್ತಮುತ್ತ ಇರುವ ಎಲ್ಲ ಪಾತ್ರಗಳು ಕೂಡ ಅಷ್ಟೇ ಮಹತ್ವ ಹೊಂದಿವೆ. ಹಾಗಾಗಿ ಎಲ್ಲ ಪಾತ್ರಗಳ ಪರಿಚಯ ಮಾಡಿಕೊಡಲು ಮೊದಲಾರ್ಧದಲ್ಲಿ ಹೆಚ್ಚು ಸಮಯ ಹಿಡಿದಿದೆ. ಹಾಗಾಗಿ ಕಥೆ ವೇಗ ಪಡೆದುಕೊಳ್ಳಲು ಕೊಂಚ ವಿಳಂಬ ಆಯ್ತು ಎನಿಸುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಸಿನಿಮಾ ವೇಗವಾಗಿ ಸಾಗುತ್ತದೆ.

ಧ್ರುವ ಸರ್ಜಾ ಅವರ ಮ್ಯಾನರಿಸಂ ಇಷ್ಟಪಡುವ ಅಭಿಮಾನಿ ವರ್ಗ ಇದೆ. ಅಂಥ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಮನರಂಜನೆ ನೀಡುತ್ತದೆ. ಧ್ರುವ ಅವರ ಎಂಟ್ರಿ ಸಾಮಾನ್ಯವಾಗಿದೆ. ಆದರೆ ಕಥೆ ಮುಂದುವರಿದಂತೆಲ್ಲ ಆ ಪಾತ್ರ ಹೆಚ್ಚು ರಗಡ್ ಆಗುತ್ತದೆ. ಕೈಯಲ್ಲಿ ಮಚ್ಚು ಹಿಡಿದ ಬಳಿಕ ಆ್ಯಕ್ಷನ್ ಮೂಲಕ ಅವರು ಅಬ್ಬರಿಸುತ್ತಾರೆ. ಹೀರೋ ಧ್ರುವ ಸರ್ಜಾ ಮತ್ತು ವಿಲನ್ ಸಂಜಯ್ ದತ್ ನಡುವಿನ ಮುಖಾಮುಖಿಯಿಂದಾಗಿ ಚಿತ್ರದಲ್ಲಿ ಮಾಸ್ ಅಂಶ ಹೆಚ್ಚಿದೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಎರಡು ಶೇಡ್​​ನಲ್ಲಿ ನೋಡಬಹುದು. ಒಂದು ಶೇಡ್​ನಲ್ಲಿ ಮುಗ್ಧನಾಗಿ ನಗಿಸುತ್ತಾರೆ. ಇನ್ನೊಂದು ಶೇಡ್​​ನಲ್ಲಿ ರಕ್ತದೋಕುಳಿ ಹರಿಸುತ್ತಾರೆ. ಅವರಿಗೆ ನಟಿ ರೀಷ್ಮಾ ನಾಣಯ್ಯ ಜೋಡಿ ಆಗಿದ್ದಾರೆ. ನಾಯಕಿಯ ಪಾತ್ರ ಆರಂಭದಲ್ಲಿ ಸ್ವಲ್ಪ ಅಸಹಜ ಎನಿಸುತ್ತದೆ. ಕಥೆ ಎಮೋಷನಲ್ ತಿರುವು ಪಡೆದುಕೊಂಡಾಗ ರೀಷ್ಮಾ ಅವರು ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ.

ಇದನ್ನೂ ಓದಿ: ‘ಕೆಡಿ ಬ್ಲಾಕ್​​ಬಸ್ಟರ್​’; ಪ್ರೇಮ್ ನಿರ್ದೇಶನಕ್ಕೆ ಮೆಚ್ಚುಗೆ, ಕಿಚ್ಚನ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ

ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಯಶ್ ಶೆಟ್ಟಿ ಮುಂತಾದವರು ನಿಭಾಯಿಸಿರುವ ಪಾತ್ರಗಳು ಕೂಡ ಹೆಚ್ಚು ಹೈಲೈಟ್ ಆಗಿವೆ. ಅಂದಹಾಗೆ, ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿರುವುದು ಅರ್ಧ ಕಥೆ ಮಾತ್ರ! ಹೌದು, ಕಾಳಿದಾಸನ ಕಥೆ ಇನ್ನೂ ಮುಂದುವರಿಯಲಿದೆ. ಸದ್ಯಕ್ಕೆ ಕಾಲ ಭೈರವನ (ಕಿಚ್ಚ ಸುದೀಪ್) ಎಂಟ್ರಿಯೊಂದಿಗೆ ಮೊದಲ ಪಾರ್ಟ್ ಮುಗಿದಿದೆ. ಮುಂದಿನದ್ದನ್ನು ‘ಕೆಡಿ 2’ ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂಬುದನ್ನು ಕ್ಲೈಮ್ಯಾಕ್ಸ್​​ನಲ್ಲಿ ತಿಳಿಸಲಾಗಿದೆ. ಜೊತೆಗೆ ಒಂದು ಟ್ವಿಸ್ಟ್ ಕೂಡ ಇದೆ.

ಅದ್ದೂರಿಯಾಗಿ ಸಿನಿಮಾವನ್ನು ಕಟ್ಟಿಕೊಡುವಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಹಿಂದೆ ಬಿದ್ದಿಲ್ಲ. 1975ರ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲು ಲೆಕ್ಕವಿಲ್ಲದಷ್ಟು ಸೆಟ್​ಗಳನ್ನು ಹಾಕಿ, ಲೆಕ್ಕವಿಲ್ಲದಷ್ಟು ಪ್ರಾಪರ್ಟಿಗಳನ್ನು ಬಳಸಲಾಗಿದೆ. ಹಾಡುಗಳು ಸಹ ಶ್ರೀಮಂತಿಕೆಯಿಂದ ಕೂಡಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಮುಂತಾದ ತಂತ್ರಜ್ಞರ ಕೆಲಸ ಪ್ರತಿ ಫ್ರೇಮ್​​ನಲ್ಲೂ ಎದ್ದು ಕಾಣಿಸುತ್ತದೆ. ನೋರಾ ಫತೇಹಿ ನರ್ತಿಸಿದ್ದ ವಿವಾದಾತ್ಮಕ ಸಾಹಿತ್ಯದ ಹಾಡನ್ನು ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ – Kannada News | Change Your Law Supreme Court pulls up Centre Over minor’s Pregnancy Termination

ನವದೆಹಲಿ, ಏಪ್ರಿಲ್ 30: ಅತ್ಯಾಚಾರಕ್ಕೊಳಗಾದ 15 ವರ್ಷದ ಮಗುವಿನ 31 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಿಂದಿನ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತರಾಟೆಗೆ ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಗರ್ಭಧಾರಣೆಯನ್ನು ಹೊರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅತ್ಯಾಚಾರ ಸಂತ್ರಸ್ತೆ 20 ವಾರಗಳನ್ನು ಮೀರಿದ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿಸಲು ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಪ್ರಾಪ್ತ ಬಾಲಕಿ ಸೇರಿದಂತೆ ಅತ್ಯಾಚಾರದಿಂದ ಗರ್ಭಿಣಿಯಾದವರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿರುತ್ತದೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು 15 ವರ್ಷದ ಬಾಲಕಿಯೊಬ್ಬಳು ತನ್ನ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಏಮ್ಸ್ ಸಲ್ಲಿಸಿದ ಮನವಿಗೆ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿತು. ಆ ಬಾಲಕಿಯ ಗರ್ಭಪಾತಕ್ಕೆ ಅನುವು ಮಾಡಿಕೊಡುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಆಸ್ಪತ್ರೆಯ ಬಗ್ಗೆ ಕೋರ್ಟ್ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್

“ಅತ್ಯಾಚಾರ ಇತ್ಯಾದಿಗಳಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಗರ್ಭಪಾತಕ್ಕೆ ಸಮಯದ ಮಿತಿ ಇರುವುದಿಲ್ಲ ಎಂದು ದಯವಿಟ್ಟು ನಿಮ್ಮ ಕಾನೂನನ್ನು ತಿದ್ದುಪಡಿ ಮಾಡಿ. ಅಂತಹ ಪ್ರಕರಣದ ವಿಚಾರಣೆಗಳು ಒಂದು ವಾರದೊಳಗೆ ಪೂರ್ಣಗೊಳ್ಳುವಂತೆ ಕಾನೂನನ್ನು ತಿದ್ದುಪಡಿ ಮಾಡಿ. ವಿಚಾರಣೆಯ ಬಾಕಿ ಇರುವ ಆಘಾತವನ್ನು ಆ ಮಗು ಏಕೆ ಅನುಭವಿಸಬೇಕು” ಎಂದು ಸಿಜೆಐ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

“ಅತ್ಯಾಚಾರದ ನಂತರ ಆಕೆ ಅನುಭವಿಸಿದ ಸಂಕಟವನ್ನು ಯಾವುದೂ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಇಂದು ಬೆಳಿಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಖಂಡಿಸುತ್ತಾ ಹೇಳಿದ್ದಾರೆ. “ನಾಗರಿಕರಿಗೆ ಗೌರವ ನೀಡಿ, ಮೇಡಂ. ನಿಮಗೆ ನ್ಯಾಯಾಲಯದ ಆದೇಶ ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ. ಸಂತ್ರಸ್ತೆ ಅಥವಾ ಅವರ ಕುಟುಂಬ ಮಾತ್ರ ಪ್ರಶ್ನಿಸಬಹುದು. ನಾವು ಜನರ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುತ್ತೇವೆ. ಅದನ್ನು ನೀವು ಸಹ ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ಈ ಹಿಂದೆ ಅಪ್ರಾಪ್ತ ವಯಸ್ಕಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿತ್ತು. ಗರ್ಭಧಾರಣೆಯನ್ನು ಮುಂದುವರಿಸಲು ಅನುಮತಿ ನೀಡುವುದು ಆಕೆಯ ಘನತೆಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ – Kannada News | Dharwad: Mysterious death of Buddhist monk; Dead Body found

ಸನ್ಯಾಸಿ ಥಾಶಿದೊಂಡುImage Credit source: tv9 kannada

ಧಾರವಾಡ, ಏಪ್ರಿಲ್​ 30: ಧಾರವಾಡ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ (Buddhist monk) ಮೃತದೇಹ (dead body) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಟಿಬೆಟಿಯನ್ ಮೂಲದ ಥಾಶಿದೊಂಡು(39) ಮೃತ ಬೌದ್ಧ ಸನ್ಯಾಸಿ. ಮುಖದ ಮೇಲೆ ಗಾಯಗಳಾಗಿದ್ದು, ಬೇರೆಡೆ ಕೊಲೆಗೈದು ಶವ ತಂದು ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವು 

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಬಳಿ ನಡೆದಿದೆ. ಮರಕ್ಕೆ ಕಾರು ಡಿಕ್ಕಿಯಾಗಿ ಎಲ್‌.ಎನ್.ಮನು(29) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ

ಎಲ್‌.ಎನ್.ಮನು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್​​ಪೇಟೆ ನಿವಾಸಿ. ಮೇ 10ರಂದು ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಪ್ರೀವೆಡ್ಡಿಂಗ್ ಶೂಟ್​ಗೆ ವಧು ಕರೆತರಲು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ​ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎಲ್‌.ಎನ್.ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ರಜೆಗೆ ಆಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

ರಜೆಗೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಯೋಧ ಮಾರುತಿ ಯಮನಪ್ಪ ದಳವಾಯಿ(38) ಮೃತ ದುರ್ದೈವಿ. ಇವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮಿಲಿಟರಿ/ಝಾನ್ಸಿ/UP/ ಹವಾಲ್ದಾರ್ ಮೆಕ್ಯಾನಿಕಲ್ ಪುನಾ ರೆಜಿಮೆಂಟ್​​ದಲ್ಲಿ ಸೇವೆ ಸಲ್ಲಿಸುತ್ತಿದ್ದರು.‌

ಇದನ್ನೂ ಓದಿ: ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

ಸುಮಾರು 10 ದಿನದ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು.‌ ಶನಿವಾರ ರಾತ್ರಿ 11.45 ಗಂಟೆಗೆ ಮನೆಯಲ್ಲಿ ಮಲಗಿಕೊಂಡಾಗ ಹೃದಯಘಾತವಾಗಿ ಆಕಸ್ಮಿಕವಾಗಿ ಮರಣ ಹೊಂದಿರುವುದಾಗಿ ತಿಳಿದುಬಂದಿದೆ. ರವಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶಾಸಕರ ತಾಯಿ ರತ್ನಾಬಾಯಿ‌ ಚಿಮ್ಮನಕಟ್ಟಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಾಕಾ’ ಇತಿಹಾಸ ಸೃಷ್ಟಿಸಲಿದೆ: ವಿಎಫ್​​ಎಕ್ಸ್ ಮೇಲ್ವಿಚಾರಕ ಹೇಳಿದ್ದೇನು? – Kannada News | SFX team supervisor talks about Allu Arjun’s Raaka Movie

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಈಗಾಗಲೇ ಉತ್ತರ ಭಾರತದ ಕೆಲವು ವಿತರಕರು ಸಿನಿಮಾದ ಹಕ್ಕುಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಎಡತಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಕುರಿತು ಒಂದು ಆಸಕ್ತಿಕರ ಅಪ್‌ಡೇಟ್ ಹೊರಬಿದ್ದಿದೆ. ‘ರಾಕಾ’ ಸಿನಿಮಾಕ್ಕಾಗಿ ಕೆಲಸ ಮಾಡಿರುವ ಎಸ್‌ಎಫ್‌ಎಕ್ಸ್ (SFX) ಮೇಲ್ವಿಚಾರಕರು, ಸಿನಿಮಾದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ರಾಕಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದಿರುವ ಎಸ್​​ಎಫ್​​ಎಕ್ಸ್ (ಸ್ಪೆಷಲ್ ಎಫೆಕ್ಸ್ಟ್) ತಂಡದ ಮೇಲ್ವಿಚಾರಕ. ಭಾರತದ ಇನ್ಯಾವ ಸಿನಿಮಾ ಸಹ ಮಾಡಿರದ ಗಳಿಕೆಯನ್ನು ಸಿನಿಮಾ ಮಾಡಲಿದೆ ಎಂದಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಇರುವ ಪ್ಯಾನ್ ಇಂಡಿಯಾ ಕ್ರೇಜ್ ಮತ್ತು ಅಟ್ಲೀ ಅವರ ಮಾಸ್ ದೃಶ್ಯಗಳನ್ನು ಸೆರೆಹಿಡಿಯುವ ಶೈಲಿ ಒಟ್ಟಿಗೆ ಸೇರಿ ಅದ್ಭುತವೇ ಸೃಷ್ಟಿ ಆಗುತ್ತಿದೆ. ಅದು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುವುದು ಖಚಿತ ಎನ್ನಲಾಗುತ್ತಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವಂತಹ ಅದ್ದೂರಿ ಬಿಡುಗಡೆಗೆ ಚಿತ್ರತಂಡ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ.

ವಿಶಾಲ್ ತ್ಯಾಜಿ ಎಂಬುವರು ‘ರಾಕಾ’ ಸಿನಿಮಾದ ಎಸ್​​ಎಫ್​ಎಕ್ಸ್ ಮೇಲ್ವಿಚಾರಕರಾಗಿದ್ದು, ಸಿನಿಮಾ ತಾಂತ್ರಿಕವಾಗಿ ಭಾರಿ ಶ್ರೀಮಂತವಾಗಿರಲಿದೆ ಎಂದಿದ್ದಾರೆ. ಈ ಸಿನಿಮಾವನ್ನು ಕೇವಲ ಭಾರತೀಯ ಮಟ್ಟಕ್ಕೆ ಸೀಮಿತಗೊಳಿಸದೆ, ಜಾಗತಿಕ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ಸ್ಪೆಷಲ್ ಎಫೆಕ್ಟ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದ್ದು, ಪ್ರೇಕ್ಷಕರಿಗೆ ಇದೊಂದು ವಿಷುಯಲ್ ಟ್ರೀಟ್ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಹೈದರಾಬಾದ್‌ನಿಂದ ಮುಂಬೈಗೆ ಶಿಫ್ಟ್ ಆಗ್ತಾರಾ ಅಲ್ಲು ಅರ್ಜುನ್?

ಅಟ್ಲೀ ಅವರು ಈ ಹಿಂದೆ ಶಾರುಖ್ ಖಾನ್ ಅವರ ‘ಜವಾನ್’ ಮೂಲಕ ದೊಡ್ಡ ಯಶಸ್ಸು ಕಂಡಿದ್ದರು. ಈಗ ಅಲ್ಲು ಅರ್ಜುನ್ ಅವರಂತಹ ಸ್ಟೈಲಿಶ್ ಸ್ಟಾರ್ ಜೊತೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ‘ಪುಷ್ಪ’ ಚಿತ್ರದ ನಂತರ ಅಲ್ಲು ಅರ್ಜುನ್ ಅವರ ಮಾರುಕಟ್ಟೆ ಮೌಲ್ಯ ಹತ್ತು ಪಟ್ಟು ಹೆಚ್ಚಾಗಿದ್ದು, ‘ರಾಕಾ’ ಸಿನಿಮಾ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಹಿಟ್ ಆಗುವ ಮುನ್ಸೂಚನೆ ನೀಡುತ್ತಿದೆ.

ಎಸ್​​ಎಫ್​​ಎಕ್ಸ್ ಎಂದರೆ ಪೋಸ್ಟ್ ಪ್ರೊಡಕ್ಷನ್​​ಗೆ ಮುಂಚೆಯೇ ಸೆಟ್​ನಲ್ಲಿ ವಿಶೇಷ ಎಫೆಕ್ಟ್​​ಗಳನ್ನು ಸೃಷ್ಟಿಸುವುದಾಗಿರುತ್ತದೆ. ಬಾಂಬ್ ಬ್ಲಾಸ್ಟ್, ಭಿನ್ನ ರೀತಿಯ ದೃಶ್ಯ ಸಂಯೋಜನೆ, ವಿವಿಧ ಮುಖವಾಡಗಳ ಸೃಷ್ಟಿಸುವುದು, ಚಿತ್ರೀಕರಣಕ್ಕೆ ಬೇಕಾದ ಆಯುಧಗಳು ಮತ್ತು ಅವುಗಳನ್ನು ಹ್ಯಾಂಡಲ್ ಮಾಡುವುದು, ರೋಪಿಂಗ್ ಇನ್ನೂ ಹಲವನ್ನು ಈ ಎಸ್​​ಎಫ್​​ಎಕ್ಸ್ ತಂಡ ನೋಡಿಕೊಳ್ಳುತ್ತದೆ. ವಿಶಾಲ್ ತ್ಯಾಗಿ ಅವರು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಿಗೆ ಸ್ಪೆಷಲ್ ಎಫೆಕ್ಟ್ಸ್​​ಗಳನ್ನು ಮಾಡಿದ್ದಾರೆ. ರಜನೀಕಾಂತ್ ಇನ್ನೂ ಕೆಲವು ಹಿರಿಯ ನಟರ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದೀಗ ‘ರಾಕಾ’ ಸಿನಿಮಾನಲ್ಲೂ ಇವರೇ ಕೆಲಸ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:41 pm, Thu, 30 April 26

Source link

Kailash Manasarovar Yatra 2026: ಕೈಲಾಸ ಯಾತ್ರೆಗೆ ನೋಂದಣಿ ಆರಂಭ; 60 ವರ್ಷಗಳ ನಂತರ ಸಂಭವಿಸಿದೆ ಅಪರೂಪದ ‘ದೈವಿಕ ಸಂಯೋಗ’! – Kannada News | Kailash Manasarovar Yatra 2026 Registration Open: ‘Fire Horse Year’ Pilgrimage for Moksha

ಕೈಲಾಸ ಮಾನಸ ಸರೋವರ ಯಾತ್ರೆImage Credit source: Pinterest

ಶಿವನ ವಾಸಸ್ಥಾನವೆಂದೇ ನಂಬಲಾದ ಪವಿತ್ರ ಕೈಲಾಸ ಪರ್ವತದ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. 2026ರ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದಿನಿಂದ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಯಾತ್ರೆಯು ಕೇವಲ ಧಾರ್ಮಿಕ ಪ್ರಯಾಣವಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ವಿಶೇಷವೆನಿಸಿದೆ.

60 ವರ್ಷಗಳ ನಂತರ ಬಂದಿದೆ ‘ಅಗ್ನಿ ಕುದುರೆ ವರ್ಷ’ದ ಶುಭ ಯೋಗ!

ಈ ಬಾರಿಯ ಯಾತ್ರೆಯು 60 ವರ್ಷಗಳಿಗೊಮ್ಮೆ ಬರುವ ಅಪರೂಪದ ಟಿಬೆಟಿಯನ್ ಮತ್ತು ಹಿಮಾಲಯನ್ ಜ್ಯೋತಿಷ್ಯದ ಸಂಯೋಜನೆಯಲ್ಲಿ ನಡೆಯುತ್ತಿದೆ. ಇದನ್ನು ‘ಅಗ್ನಿ ಕುದುರೆ ವರ್ಷ’ (Fire Horse) ಎಂದು ಕರೆಯಲಾಗುತ್ತಿದ್ದು, ಈ ಅವಧಿಯಲ್ಲಿ ಕೈಲಾಸ ದರ್ಶನ ಮಾಡುವುದು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ‘ಮೋಕ್ಷದ ಬಾಗಿಲು’ ತೆರೆದಂತೆ ಎಂದು ನಂಬಲಾಗಿದೆ. ಈ ದೈವಿಕ ಸಂಯೋಗದ ಕಾರಣದಿಂದಾಗಿ ಈ ವರ್ಷ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಯಾತ್ರೆಯ ಪ್ರಮುಖ ವಿವರಗಳು:

ಯಾತ್ರೆಯ ಮೊದಲ ಬ್ಯಾಚ್ ಜೂನ್ ಮೊದಲ ವಾರದಲ್ಲಿ ಹೊರಡಲಿದೆ. ಈ ಬಾರಿ ಉತ್ತರಾಖಂಡ ಮಾರ್ಗದ ಮೂಲಕ 500 ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಸರ್ಕಾರ ಯೋಜಿಸಿದೆ. ಹಿಮಾಲಯದ ಕಠಿಣ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯವು (MEA) ಭಕ್ತರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿದೆ.

ಯಾತ್ರೆಗೆ ಇರುವ ಎರಡು ಪ್ರಮುಖ ಮಾರ್ಗಗಳು:

ವಿದೇಶಾಂಗ ಸಚಿವಾಲಯವು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆಯನ್ನು ಆಯೋಜಿಸುತ್ತದೆ:

  • ಲಿಪುಲೇಖ್ ಪಾಸ್ (ಉತ್ತರಾಖಂಡ): ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ದೆಹಲಿಯಿಂದ ಪ್ರಾರಂಭವಾಗಿ ತನಕ್‌ಪುರ, ಪಿಥೋರಗಢ ಮತ್ತು ಧಾರ್ಚುಲಾ ಮೂಲಕ ಲಿಪುಲೇಖ್ ಪಾಸ್ ತಲುಪುತ್ತದೆ. ಈ ಮಾರ್ಗವು ಈಗ ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಕೈಲಾಸ ಪರ್ವತದ ಪವಿತ್ರ ಪ್ರದಕ್ಷಿಣೆಯನ್ನು ಒಳಗೊಂಡಿದೆ.
  • ನಾಥು ಲಾ ಪಾಸ್ (ಸಿಕ್ಕಿಂ): ಈ ಮಾರ್ಗವು ದೆಹಲಿಯಿಂದ ಗ್ಯಾಂಗ್ಟಾಕ್ ಮೂಲಕ ಸಾಗುತ್ತದೆ. ಲಿಪುಲೇಖ್ ಮಾರ್ಗಕ್ಕೆ ಹೋಲಿಸಿದರೆ ಇಲ್ಲಿ ಪಾದಯಾತ್ರೆ (Trekking) ಕಡಿಮೆ ಮತ್ತು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ.

ಇದನ್ನೂ ಓದಿ: ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಏಕೆ? ವಾಸ್ತು ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಅರ್ಹತೆ ಮತ್ತು ಅಗತ್ಯ ದಾಖಲೆಗಳು:

ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಡ್ಡಾಯ:

  • ವಿದೇಶಾಂಗ ಸಚಿವಾಲಯದ (MEA) ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
  • ಮಾನ್ಯತೆ ಇರುವ ಭಾರತೀಯ ಪಾಸ್‌ಪೋರ್ಟ್ ಅಥವಾ OCI ಕಾರ್ಡ್ ಮತ್ತು ಸರ್ಕಾರಿ ಗುರುತಿನ ಚೀಟಿ.
  • ಹೆಚ್ಚಿನ ಎತ್ತರದಲ್ಲಿ ಪ್ರಯಾಣಿಸಬೇಕಿರುವುದರಿಂದ ನವೀಕರಿಸಿದ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಅತ್ಯಗತ್ಯ.

ಯಾತ್ರಾರ್ಥಿಗಳಿಗೆ ಪ್ರಮುಖ ಸೂಚನೆಗಳು:

ಕೈಲಾಸ ಮಾನಸ ಸರೋವರವು ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವುದರಿಂದ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ, ಪ್ರಯಾಣಕ್ಕೆ ಕೆಲವು ದಿನಗಳ ಮೊದಲು ದೇಹವನ್ನು ಅಲ್ಲಿನ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು (Acclimatization) ಬಹಳ ಮುಖ್ಯ. ಸಾಮಾನ್ಯವಾಗಿ ಈ ಇಡೀ ಯಾತ್ರೆಯು ಪೂರ್ಣಗೊಳ್ಳಲು ಹವಾಮಾನಕ್ಕೆ ಅನುಗುಣವಾಗಿ 15 ರಿಂದ 20 ದಿನಗಳು ಬೇಕಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’; ಅರ್ಜುನ್​ ಕಪೂರ್​ಗೆ ಕೋರ್ಟ್ ಕಿವಿಮಾತು – Kannada News | Arjun Kapoor Personality Rights: Delhi HC Cautions on Free Speech vs. AI Deepfakes

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನು (Personality Rights) ಅನುಮತಿಯಿಲ್ಲದೆ ಬಳಸುವುದನ್ನು ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಎಲ್ಲರಿಗೂ ಕೋರ್ಟ್ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅರ್ಜುನ್ ಕಪೂರ್ ಇತ್ತೀಚೆಗೆ ಇದೇ ರೀತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್​​ಗೆ ಸಲ್ಲಿ ಮಾಡಿದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ಡೀಪ್‌ಫೇಕ್ ದೃಶ್ಯಗಳ ವಿರುದ್ಧ ಅವರು ರಕ್ಷಣೆ ಕೋರಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಕೆಲವು ಪ್ರಮುಖ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ‘ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅವರ ಬಗ್ಗೆ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಯಾವುದಾದರೂ ಅಂಶವು ಅವರ ಗೌರವಕ್ಕೆ ಧಕ್ಕೆ ತರುವಂತಿದ್ದರೆ ಅಥವಾ ಮಾನಹಾನಿಕರವಾಗಿದ್ದರೆ ಮಾತ್ರ ಅಂತಹವುಗಳನ್ನು ತೆಗೆದುಹಾಕಲು ಆದೇಶಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.
ಅರ್ಜುನ್ ಕಪೂರ್ ಪರ ವಾದ ಮಂಡಿಸಿದ ಪ್ರವೀಣ್ ಆನಂದ್ ಅವರು, ‘ನಟನ ಫೋಟೋಗಳನ್ನು ಬಳಸಿ ಅನೇಕರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ಜೊತೆ ನಟನ ಫೋಟೋ ಮಾರ್ಫಿಂಗ್ ಮಾಡುವುದು ಅಥವಾ ಅಶ್ಲೀಲವಾಗಿ ಬಿಂಬಿಸುವುದು ಒಬ್ಬ ಸಾಮಾನ್ಯ ಮನುಷ್ಯನಿಗೂ ಇಷ್ಟವಾಗದ ಸಂಗತಿ’ ಎಂದು ವಾದಿಸಿದರು.

ಇದಕ್ಕೆ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಖಾರವಾಗಿ ಪ್ರತಿಕ್ರಿಯೆ ನೀಡಿದರು.
‘ಸಾಮಾನ್ಯ ಜನರು ವ್ಯಕ್ತಿತ್ವ ಹಕ್ಕುಗಳಿಗಾಗಿ ನ್ಯಾಯಾಲಯಕ್ಕೆ ಬರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವವರ ಬಗ್ಗೆ ಹತ್ತು ಹಲವು ಚರ್ಚೆಗಳು ನಡೆಯುತ್ತವೆ. ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶೀಘ್ರದಲ್ಲೇ ತನ್ನ ವಿವರವಾದ ಮಧ್ಯಂತರ ಆದೇಶವನ್ನು ಹೊರಡಿಸಲಿದೆ.

ಇದನ್ನೂ ಓದಿ: ‘ಅಂತ್ಯವನ್ನು ಒಪ್ಪಿಕೊಳ್ಳಿ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅರ್ಜುನ್ ಕಪೂರ್ ಮನಸ್ಥಿತಿ

ಹಿಂದೆ ಸುನಿಲ್ ಗವಾಸ್ಕರ್, ಕರಣ್ ಜೋಹರ್ ಮತ್ತು ಅಲ್ಲು ಅರ್ಜುನ್ ಅವರಂತಹ ಪ್ರಮುಖ ವ್ಯಕ್ತಿಗಳಿಗೆ ಇಂತಹ ರಕ್ಷಣೆ ನೀಡಲಾಗಿತ್ತು. ಆದರೆ, ಈಗ ಅರ್ಜುನ್ ಕಪೂರ್ ವಿಷಯದಲ್ಲಿ ಬೇರೆಯದೇ ರೀತಿಯ ಅಭಿಪ್ರಾಯ ಹೊರಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಯಕತ್ವ ಗಟ್ಟಿಮಾಡಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್! – Kannada News | Power Tussle In Karnataka Congress: intelligence chief Changed By CM Siddaramaiah fourth Time In History

ಬೆಂಗಳೂರು (ಏಪ್ರಿಲ್.30): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಸ್ಥಾನ ಬೇಕೇ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತಲೇ ಬಂದಿದ್ದಾರೆ. ಆದ್ರೆ, ಇದಕ್ಕೆ ಹೈಕಮಾಂಡ್ ತಲೆಕೆಡಿಸಿಕೊಂಡಂತಿಲ್ಲ. ಇನ್ನೊಂದೆಡೆ ಡಿಕೆ ಶಿವಕುಮಾರ್ ಟಕ್ಕರ್ ಕೊಡಲು ಇತ್ತ ಸಿದ್ದರಾಮಯ್ಯ ಹಾಗೂ ತಂಡ ಮೆಗಾ ತಂತ್ರಗಾರಿಗೆ ಮಾಡುತ್ತಿದ್ದು. ಇತಿಹಾಸದಲ್ಲೇ ಮೊದಲು ಬರೋಬ್ಬರಿ ನಾಲ್ಕು ಬಾರಿ ಗುಪ್ತಚರ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ. ಗುಪ್ತಚರ ಮುಖ್ಯಸ್ಥರ ಬದಲಾವಣೆ ಮೂಲಕ ತಂತ್ರ ಹೆಣೆದಿದ್ದಾರೆ.

ಇದನ್ನೂ ನೋಡಿ: ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ದೆಹಲಿಯಲ್ಲಿ ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!

Source link

ಬಂಧನದ ಮೂಲಕ ನನ್ನನ್ನು ಅವಮಾನಿಸುವ ಅಗತ್ಯವಿಲ್ಲ: ಪವನ್​ ಖೇರಾ – Kannada News | Pawan Khera Bail Plea: SC Reserves Order on Fake Passport and Defamation Case

ನವದೆಹಲಿ, ಏಪ್ರಿಲ್ 30: ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ದೂರಿನ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಅವರ ಪೀಠವು ಈ ವಿಚಾರಣೆ ನಡೆಸಿತು.

ಖೇರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಪ್ರಕರಣವು ಕೇವಲ ಮಾನನಷ್ಟಕ್ಕೆ ಸಂಬಂಧಿಸಿದ್ದು, ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ವಾದಿಸಿದರು. ಕಸ್ಟಡಿ ವಿಚಾರಣೆಯ ಮೂಲಕ ಅವಮಾನಿಸುವ ಅಗತ್ಯ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಸ್ಸಾಂ ಸಿಎಂ ಅವರು ಖೇರಾ ಅವರಿಗೆ ಜೈಲು ಶಿಕ್ಷೆಯ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಸಿಂಘ್ವಿ, ಖೇರಾ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಅಸ್ಸಾಂ ರಾಜ್ಯದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖೇರಾ ಅವರು ತೋರಿಸಿರುವ ವಿದೇಶಿ ಪಾಸ್‌ಪೋರ್ಟ್ ದಾಖಲೆಗಳು ನಕಲಿ ಎಂದು ಪ್ರತಿಪಾದಿಸಿದರು. ಈ ನಕಲಿ ದಾಖಲೆಗಳನ್ನು ಸೃಷ್ಟಿಸಿದವರು ಯಾರು ಮತ್ತು ಇದರ ಹಿಂದೆ ವಿದೇಶಿ ಅಂಶಗಳಿವೆಯೇ ಎಂದು ಪತ್ತೆಹಚ್ಚಲು ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಅವರು ವಾದಿಸಿದರು. ಅಲ್ಲದೆ, ಎಫ್‌ಐಆರ್ ದಾಖಲಾದಾಗಿನಿಂದ ಖೇರಾ ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ಮತ್ತಷ್ಟು ಓದಿ: ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್ ಶಾಕ್: ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಕೇಸ್‌ನಲ್ಲಿ ಜಾಮೀನು ನಿರಾಕರಣೆ

ಖೇರಾ ಅವರು ರಿನಿಕಿ ಭುಯಾನ್ ಶರ್ಮಾ ಅವರ ವಿರುದ್ಧ ವಿದೇಶಿ ಪಾಸ್‌ಪೋರ್ಟ್ ಮತ್ತು ಆರ್ಥಿಕ ಹಿತಾಸಕ್ತಿಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ವಂಚನೆ, ನಕಲಿ ದಾಖಲೆಗಳ ಬಳಕೆ ಮತ್ತು ಮಾನನಷ್ಟ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಗುವಾಹಟಿ ಹೈಕೋರ್ಟ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ – Kannada News | Bidar Road Accident: Three Youths Killed in Bike Car Collision; Lorry Catches Fire Near Bhalki

ಬೀದರ್, ಏಪ್ರಿಲ್ 30: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಬುಧವಾರ (ಏಪ್ರಿಲ್ 29) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಮತ್ತು ಕಾರಿನ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ ಬೆಚ್ಚಿಬೀಳಿಸುವಂತಿದೆ. ಭಾಲ್ಕಿ ತಾಲ್ಲೂಕಿನ ಕಳಸದಾಳ ವ್ಯಾಪ್ತಿಯ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ಕಳಸದಾಳ ಗ್ರಾಮದ ವಿಠ್ಠಲ ಪಾಂಚಾಳ (25), ಮಹೇಶ್ ಬಿರಾದಾರ (25) ಮತ್ತು ಕಾಕನಾಳ ಗ್ರಾಮದ ರಾಜೇಂದ್ರ ಪಾಂಚಾಳ (28) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್ ತಂತಿ ತಗುಲಿ ಲಾರಿಗೆ ಬೆಂಕಿ

ಇನ್ನೊಂದೆಡೆ, ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಮೇವು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿಯಲ್ಲಿ ತುಂಬಿದ್ದ ಒಣ ಮೇವಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ ಮತ್ತು ಸ್ಥಳೀಯರು, ತಕ್ಷಣವೇ ಜೆಸಿಬಿ ಮೂಲಕ ಮೇವನ್ನು ಕೆಳಕ್ಕೆ ತಳ್ಳಿದ್ದಾರೆ. ಇದರಿಂದಾಗಿ ಇಡೀ ಲಾರಿ ಸುಟ್ಟು ಭಸ್ಮವಾಗುವುದು ತಪ್ಪಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೆಂಕಿಯ ಕೆನ್ನಾಲಗೆಗೆ ಲಾರಿಯ ಹಿಂಭಾಗ ಭಾಗಶಃ ಸುಟ್ಟು ಕರಕಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link