Category Archives: Blog

Your blog category

ಸೋಲಿಗೆ ಕಾರಣವೇನು? ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದ ರಿಷಭ್ ಪಂತ್! – Kannada News | Rishabh pant post match interview after lsg vs kkr match

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸೋಲಿನ ಸರಮಾಲೆ ಮುಂದುವರೆದಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಲ್​ಎಸ್​ಜಿ ಪಡೆ ಸೂಪರ್ ಓವರ್​ನಲ್ಲಿ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 155 ರನ್​​ ಕಲೆಹಾಕಿದ್ದರು. ಈ ಸುಲಭ ಗುರಿಯನ್ನು ಬೆನ್ನತ್ತಿದ ಎಲ್​ಎಸ್​ಜಿ 20 ಓವರ್​ಗಳಲ್ಲಿ 155 ರನ್​ ಗಳಿಸಿ ಪಂದ್ಯವನ್ನು ಟೈ ಮಾಡಿ ಕೊಂಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೇವಲ 1 ರನ್​ಗಳಿಸಿದರೆ, ಈ ಗುರಿಯನ್ನು ಮೊದಲ ಎಸೆತದಲ್ಲೇ ಬೆನ್ನತ್ತಿ ಕೆಕೆಆರ್ ತಂಡ ಜಯ ಸಾಧಿಸಿತು.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ನಾವು ಸತತವಾಗಿ ಸೋಲುತ್ತಿದ್ದೇವೆ. ಹೀಗಾಗಿ ನಮಗೆ ವಿಶ್ರಾಂತಿಯ ಅಗತ್ಯವಿದೆ ಎಂದಿದ್ದಾರೆ. ಈ ಸೋಲುಗಳಿಗೆ ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳು ಕಾರಣರಲ್ಲ.  ಇದರ ಹೊಣೆಗಾರಿಕೆಯನ್ನು ಇಡೀ ತಂಡ ಹೊರಬೇಕು.

ಸತತ ಸೋಲುಗಳಿಂದ ಉಂಟಾದ ಮಾನಸಿಕ ಒತ್ತಡವನ್ನು ಹೋಗಲಾಡಿಸಲು ತಂಡಕ್ಕೆ ಒಂದು “ವಿರಾಮ” ಬೇಕು. ವಿಶ್ರಾಂತಿ ಪಡೆದ ಬಳಿಕ ಸೋಲಿಗೆ ಕಾರಣಗಳೇನು ಎಂಬುದನ್ನು ವಿಮರ್ಶಿಸಬೇಕಿದೆ ಎಂದಿದ್ದಾರೆ.

ಇದೇ ವೇಳೆ ಫಾರ್ಮ್‌ನಲ್ಲಿಲ್ಲದ ನಿಕೋಲಸ್ ಪೂರನ್ ಅವರನ್ನು ಸೂಪರ್ ಓವರ್‌ಗೆ ಕಳುಹಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಪಂತ್, ಕಷ್ಟದ ಸಮಯದಲ್ಲಿ ಆಟಗಾರನನ್ನು ಬೆಂಬಲಿಸುವುದು ಮುಖ್ಯ. ಅಂಕಿ ಅಂಶಗಳಿಗಿಂತ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆ ಇಡುವ ಮುಖ್ಯವಾಗುತ್ತದೆ. ಹೀಗಾಗಿ ಇಂತಹದೊಂದು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಕೊನೆಯ ಓವರ್​ ಅನ್ನು ದಿಗ್ವೇಶ್ ರಾಠಿಗೆ ನೀಡಿದ ಬಗ್ಗೆ ಮಾತನಾಡಿದ ರಿಷಭ್ ಪಂತ್, ತುಂಬಾ ಯೋಚಿಸುವುದು ಮೈದಾನದಲ್ಲಿನ ಕೆಲಸಗಳನ್ನು ಸುಲಭಗೊಳಿಸುವುದಿಲ್ಲ. ಮೈದಾನದ ಒಳಗೆ ಹೊರಗಿನ ಸಲಹೆಗಳಿಗಿಂತ ತನ್ನ ಆಲೋಚನೆಗಳು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಅಂತಿಮ ಓವರ್​ನಲ್ಲಿ ಯಶಸ್ಸು ಸಾಧಿಸಬಹುದು ಎಂದು ದಿಗ್ವೇಶ್​ಗೆ ಚೆಂಡು ನೀಡಿರುವುದಾಗಿ ತಿಳಿಸಿದ್ದಾರೆ.

ರಿಷಭ್ ಪಂತ್ ಅವರ ಪ್ರಸ್ತುತ ಹಾದಿಯು ಭಾವನಾತ್ಮಕವಾಗಿ ಮತ್ತು ನಾಯಕತ್ವದ ದೃಷ್ಟಿಯಿಂದ ಪ್ರಬಲವಾಗಿ ಕಂಡರೂ, ಐಪಿಎಲ್‌ನಂತಹ ವೇಗದ ಟೂರ್ನಿಯಲ್ಲಿ ಫಲಿತಾಂಶಗಳು ಶೀಘ್ರವಾಗಿ ಬಾರದಿದ್ದರೆ ಟೀಕೆಗಳು ಹೆಚ್ಚಾಗುವುದು ಸಹಜ. ಮುಂಬರುವ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ಈ ‘ವಿರಾಮ’ವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಪಂತ್ ಅವರ ಈ ತತ್ವಗಳ ಯಶಸ್ಸನ್ನು ನಿರ್ಧರಿಸಲಿದೆ.

ಇದನ್ನೂ ಓದಿ: ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ

ಅಲ್ಲದೆ ಈಗಾಗಲೇ 8 ಪಂದ್ಯಗಳಲ್ಲಿ 6 ಮ್ಯಾಚ್ ಸೋತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮುಂದಿನ ಆರು ಪಂದ್ಯಗಳೂ ಕೂಡ ನಿರ್ಣಾಯಕ. ಈ ಮ್ಯಾಚ್​ಗಳಲ್ಲಿ ಕೆಲ ಪಂದ್ಯಗಳಲ್ಲಿ ಸೋತರೂ ಟೂರ್ನಿಯಿಂದ ಹೊರಬೀಳುವುದು ಖಚಿತ ಎಂದೇ ಹೇಳಬಹುದು.

Source link

Abhishek Sharma: ಹೋಟೆಲ್​ನಲ್ಲಿ ಅಭಿಷೇಕ್ ಶರ್ಮಾ ಅವರ ಕೈ ಹಿಡಿದು ತನ್ನತ್ತ ಎಳೆದ ಅಪರಿಚಿತ ಹುಡುಗಿ: ವಿಡಿಯೋ ವೈರಲ್ – Kannada News | IPL 2026 Viral Video Unknown girl grabs Abhishek Sharma’s hand and pulls him towards her in hotel

ಬೆಂಗಳೂರು (ಏ. 27): ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ಐಪಿಎಲ್ 2026 ರಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅಭಿಷೇಕ್ ಬ್ಯಾಟಿಂಗ್​ಗೆ ಬಂದರೆ ಸಾಕು ಎದುರಾಳಿ ಬೌಲರ್​ಗೆ ನಡುಕ ಶುರುವಾಗುತ್ತದೆ. ಅವರ ಬ್ಯಾಟಿಂಗ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಏಪ್ರಿಲ್ 25 ರಂದು ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿತು, ಆ ಪಂದ್ಯವನ್ನು ಅವರು 5 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದರು. ಇದೀಗ ಈ ಪಂದ್ಯಕ್ಕೂ ಮುನ್ನ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎಸ್‌ಆರ್‌ಎಚ್ ತಂಡವು ತಮ್ಮ ಹೋಟೆಲ್‌ನಿಂದ ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣಕ್ಕೆ ಪ್ರಯಾಣಿಸುವ ಸಂದರ್ಭ, ಅಭಿಷೇಕ್ ಶರ್ಮಾ ಅವರಿಗೆ ಆಘಾತವೊಂದು ಕಾದಿತ್ತು.

ಅಭಿಷೇಕ್ ಶರ್ಮಾರ ಕೈ ಹಿಡಿದು ತನ್ನ ಕಡೆಗೆ ಎಳೆದುಕೊಂಡ ಹುಡುಗಿ

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಅಭಿಷೇಕ್ ಶರ್ಮಾ ತಮ್ಮ ತಂಡದೊಂದಿಗೆ ಜೈಪುರದಲ್ಲಿ ಹೋಟೆಲ್‌ನಿಂದ ಹೊರಡುತ್ತಿದ್ದಾಗ, ಅಭಿಮಾನಿಗಳಲ್ಲಿ ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಅವರ ಕೈ ಹಿಡಿದು ತನ್ನ ಕಡೆಗೆ ಎಳೆದಿದ್ದಾರೆ. ಕೈ ಹಿಡಿದು ಎಳೆದಾಗ ಅಭಿಷೇಕ್ ಶರ್ಮಾ ಆಶ್ಚರ್ಯಚಕಿತರಾದರು. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಅವರ ಕೈಯನ್ನು ಬಿಡಿಸಿದರು. ಘಟನೆಯ ನಂತರ ಅಭಿಷೇಕ್ ನಗುತ್ತಿರುವುದು ಕಂಡುಬಂದಿತು.

ಸ್ಫೋಟಕ ಫಾರ್ಮ್​ನಲ್ಲಿ ಅಭಿಷೇಕ್ ಶರ್ಮಾ

ಐಪಿಎಲ್ 19 ನೇ ಸೀಸನ್‌ನಲ್ಲಿ, ಅಭಿಷೇಕ್ ಶರ್ಮಾ ಅವರ ಮೊದಲ ಕೆಲವು ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರೀಕ್ಷೆಯಷ್ಟು ಇರಲಿಲ್ಲ, ಆದರೆ ಇದಾದ ನಂತರ, ಏಪ್ರಿಲ್ 21 ರಂದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಅವರ ಬ್ಯಾಟ್ 135 ರನ್‌ಗಳ ಅದ್ಭುತ ಅಜೇಯ ಶತಕ ಮೂಡಿಬಂತು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ 57 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಈ ಸೀಸನ್‌ನಲ್ಲಿ ಇಲ್ಲಿಯವರೆಗೆ, ಅಭಿಷೇಕ್ ಶರ್ಮಾ ಅವರ ಬ್ಯಾಟ್ ಮೂರು ಅರ್ಧಶತಕಗಳು ಮತ್ತು ಒಂದು ಶತಕವನ್ನು ಕಂಡಿದೆ, ಅವರು ಈ ಐಪಿಎಲ್ ಋತುವಿನಲ್ಲಿ 54.29 ಸರಾಸರಿಯಲ್ಲಿ 380 ರನ್ ಗಳಿಸಿದ್ದಾರೆ, ಇದರಲ್ಲಿ ಅವರು ಪ್ರಸ್ತುತ ಆರೆಂಜ್ ಕ್ಯಾಪ್ ಅನ್ನು ಸಹ ಹೊಂದಿದ್ದಾರೆ.

LSG vs KKR, IPL 2026: ಲಕ್ನೋವನ್ನು ಸೋಲಿಸಿದ ನಂತರ ರಿಂಕು ಸಿಂಗ್ ಆಡಿದ ಮಾತಿಗೆ ಇಡೀ ಸ್ಟೇಡಿಯಂ ಫಿದಾ

ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಡಿರುವ ಎಂಟು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್‌ನ 19 ನೇ ಸೀಸನ್‌ನಲ್ಲಿ ತನ್ನ ಮುಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲಿದ್ದು, ಈ ಋತುವಿನಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:31 am, Mon, 27 April 26

Source link

ಚೆಂಡು ವಿಕೆಟ್​ಗೆ ತಾಗದಿದ್ದರೂ ಔಟ್ ನೀಡಿದ್ದೇಕೆ? ಇಲ್ಲಿದೆ ಐಪಿಎಲ್ ನಿಯಮ – Kannada News | IPL 2026: Angkrish Raghuvanshi Run out explained

ಐಪಿಎಲ್ 2026ರ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯವು ಒಂದು ಅಪರೂಪದ ಮತ್ತು ವಿವಾದಾತ್ಮಕ ರನೌಟ್​​ಗೆ ಸಾಕ್ಷಿಯಾಯಿತು. ಕೆಕೆಆರ್ ತಂಡದ ಯುವ ಬ್ಯಾಟರ್ ಅಂಗ್​​ಕ್ರಿಶ್​ ರಘುವಂಶಿ ಅವರು ‘ಅಬ್‌ಸ್ಟ್ರಕ್ಟಿಂಗ್ ದ ಫೀಲ್ಡ್’ (ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು) ನಿಯಮದಡಿ ಔಟ್ ಆಗುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದಾರೆ.

ಪಂದ್ಯದ 5ನೇ ಓವರ್‌ನಲ್ಲಿ ಪ್ರಿನ್ಸ್ ಯಾದವ್ ಎಸೆದ ಚೆಂಡನ್ನು ಬಾರಿಸಿದ ರಘುವಂಶಿ, ಒಂದು ರನ್ ಪಡೆಯಲು ಓಡಿದರು. ಆದರೆ ಅತ್ತ ಕಡೆಯಿದ್ದ ಕ್ಯಾಮರೋನ್ ಗ್ರೀನ್ ರನ್ ಬೇಡವೆಂದು ನಿರಾಕರಿಸಿದರು. ತಕ್ಷಣ ಕ್ರೀಸ್‌ಗೆ ಮರಳಲು ಪ್ರಯತ್ನಿಸುತ್ತಿದ್ದಾಗ ಮೊಹಮ್ಮದ್ ಶಮಿ ವಿಕೆಟ್ ಕೀಪರ್​ನತ್ತ ಚೆಂಡೆಸೆದರು. ಆದರೆ ಚೆಂಡು ವಿಕೆಟ್‌ಗೆ ತಗುಲುವ ಬದಲು ರಘುವಂಶಿ ಅವರ ಪ್ಯಾಡ್‌ಗೆ ಬಡಿಯಿತು.

ಅಂಪೈರ್​ಗೆ ಮನವಿ:

ಲಕ್ನೋ ಸೂಪರ್ ಜೈಂಟ್ಸ್​​ ತಂಡದ ನಾಯಕ ರಿಷಭ್ ಪಂತ್, ಕೆಕೆಆರ್ ಆಟಗಾರ ಅಂಗ್​ಕ್ರಿಶ್​ ರಘುವಂಶಿ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡ ಬಂದಿದ್ದಾರೆ ಎಂದು ಔಟ್‌ಗಾಗಿ ಮನವಿ ಮಾಡಿದರು.

ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ವಿಡಿಯೋ ಮರುಪರಿಶೀಲಿಸಿದಾಗ, ರಘುವಂಶಿ ಅವರು ಕ್ರೀಸ್‌ಗೆ ಮರಳುವಾಗ ತಮ್ಮ ಓಡುವ ಹಾದಿಯನ್ನು (Running Line) ಬದಲಾಯಿಸಿರುವುದು ಕಂಡುಬಂದಿದೆ. ಐಪಿಎಲ್ ನಿಯಮ 37.1.4ರ ಪ್ರಕಾರ, ಒಬ್ಬ ಬ್ಯಾಟರ್ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ತನ್ನ ಹಾದಿಯನ್ನು ಬದಲಾಯಿಸಿದರೆ ಅದನ್ನು ‘ಅಡ್ಡಿ’ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ರಘುವಂಶಿ ಅವರನ್ನು ಔಟ್ ಎಂದು ಘೋಷಿಸಲಾಯಿತು.

ಕೆಕೆಆರ್ ಅಸಮಾಧಾನ:

ಮೂರನೇ ಅಂಪೈರ್​​​ನ ಈ ತೀರ್ಪಿಗೆ ಕೆಕೆಆರ್ ಕೋಚ್ ಅಭಿಷೇಕ್ ನಾಯರ್ ಅಸಮಾಧಾನ ವ್ಯಕ್ತಪಡಿಸಿ ಲೈನ್​ ಅಂಪೈರ್‌ಗಳೊಂದಿಗೆ ಚರ್ಚೆ ನಡೆಸಿದರು. ಇತ್ತ ಕೆಕೆಆರ್​ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ತೀರ್ಪಿಗೆ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ನಿಯಮ ಏನು ಹೇಳುತ್ತೆ?

ಕ್ರಿಕೆಟ್‌ನಲ್ಲಿ ಬ್ಯಾಟರ್ ಒಬ್ಬರು ಉದ್ದೇಶಪೂರ್ವಕವಾಗಿ ಎದುರಾಳಿ ತಂಡದ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದರೆ, ಅವರನ್ನು ಈ ನಿಯಮದಡಿ ಔಟ್ ಎಂದು ಘೋಷಿಸಲಾಗುತ್ತದೆ. ಇದು ಕ್ರಿಕೆಟ್‌ನ 37ನೇ ನಿಯಮವಾಗಿದೆ. ಈ ನಿಯಮದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ…

ಉದ್ದೇಶಪೂರ್ವಕ ಅಡ್ಡಿ: ರನ್ ಓಡುವಾಗ ಫೀಲ್ಡರ್ ಎಸೆದ ಚೆಂಡು ಸ್ಟಂಪ್‌ಗೆ ತಗುಲದಂತೆ ಬ್ಯಾಟರ್ ಬೇಕೆಂದೇ ಅಡ್ಡ ಬಂದಲ್ಲಿ ಅಥವಾ ತನ್ನ ಹಾದಿಯನ್ನು ಬದಲಿಸಿದರೆ ಈ ನಿಯಮ ಅನ್ವಯವಾಗುತ್ತದೆ.

ಕೈಯಿಂದ ಚೆಂಡನ್ನು ಮುಟ್ಟುವುದು: ಈ ಹಿಂದೆ ‘ಹ್ಯಾಂಡ್ಲ್ಡ್ ದ ಬಾಲ್’ (Handled the ball) ಎಂಬ ಪ್ರತ್ಯೇಕ ನಿಯಮವಿತ್ತು. ಆದರೆ 2017ರಲ್ಲಿ ಇದನ್ನು ‘ಫೀಲ್ಡಿಂಗ್‌ಗೆ ಅಡ್ಡಿಪಡಿಸುವಿಕೆ’ ನಿಯಮದ ಅಡಿಯಲ್ಲಿ ತರಲಾಯಿತು. ಬ್ಯಾಟರ್ ಚೆಂಡನ್ನು ಉದ್ದೇಶಪೂರ್ವಕವಾಗಿ ಕೈಯಿಂದ ಮುಟ್ಟಿದರೆ ಔಟ್ ನೀಡಲಾಗುತ್ತದೆ. ಅಂದರೆ ಚೆಂಡು ವಿಕೆಟ್​ನತ್ತ ಸಾಗುತ್ತಿರುವಾಗ ಮುಟ್ಟಿದರೆ ಅಥವಾ ಗಾಳಿಯಲ್ಲಿರುವಾಗ ಮುಟ್ಟಿದರೆ ಔಟ್ ಎಂದು ಎಂದು ಪರಿಗಣಿಸಲಾಗುತ್ತದೆ.

ಹಾದಿ ಬದಲಿಸುವುದು: ಬ್ಯಾಟರ್ ರನ್ ಓಡುವಾಗ ಫೀಲ್ಡರ್ ಎಸೆಯುವ ಚೆಂಡು ವಿಕೆಟ್‌ಗೆ ತಗುಲದಂತೆ ತಡೆಯಲು ಉದ್ದೇಶಪೂರ್ವಕವಾಗಿ ತಮ್ಮ ಓಡುವ ಹಾದಿಯನ್ನು ಬದಲಿಸಿ (ಚೆಂಡಿಗೆ ಅಡ್ಡವಾಗಿ ಬರುವುದು) ಚೆಂಡು ತಮ್ಮ ದೇಹಕ್ಕೆ ತಗುಲುವಂತೆ ಮಾಡಿದರೆ ಅದು ಔಟ್ ಎಂದು ಪರಿಗಣಿಸಲ್ಪಡುತ್ತದೆ.

ಕ್ಯಾಚ್‌ಗೆ ಅಡ್ಡಿ: ಫೀಲ್ಡರ್ ಕ್ಯಾಚ್ ಹಿಡಿಯುವಾಗ ಬ್ಯಾಟರ್ ಅಡ್ಡ ಬಂದರೆ ಅಥವಾ ಫೀಲ್ಡರ್ ಗಮನ ಸೆಳೆಯಲು ಪ್ರಯತ್ನಿಸಿದರೆ ಔಟ್ ನೀಡಬಹುದು.

ವಿನಾಯಿತಿಗಳು:

  • ತಮಗೆ ಏಟು ಬೀಳದಂತೆ ರಕ್ಷಿಸಿಕೊಳ್ಳಲು ಬ್ಯಾಟರ್ ಪ್ರಯತ್ನಿಸಿದಾಗ ಅದು ಅಡ್ಡಿ ಎಂದು ಪರಿಗಣಿಸಲ್ಪಡುವುದಿಲ್ಲ.
  •  ಅಚಾತುರ್ಯದಿಂದ ಅಥವಾ ಆಕಸ್ಮಿಕವಾಗಿ ಫೀಲ್ಡರ್‌ಗೆ ಅಡ್ಡಿಯಾದರೆ ಅದನ್ನು ಔಟ್ ಎಂದು ಪರಿಗಣಿಸುವುದಿಲ್ಲ.

ಅಂಗ್​​ಕ್ರಿಶ್ ರಘುವಂಶಿದು ಔಟ್ ನೀಡಿದ್ದೇಕೆ?

ರಘುವಂಶಿ ಅವರು ಸಿಂಗಲ್ ರನ್ ಓಡಲು ಹೋಗಿ, ತಮ್ಮ ಪಾರ್ಟ್‌ನರ್ ಕ್ಯಾಮರೋನ್ ಗ್ರೀನ್ ನಿರಾಕರಿಸಿದಾಗ ವಾಪಸ್ ಕ್ರೀಸ್‌ಗೆ ಬಂದರು. ಈ ವೇಳೆ ಅವರು ನೇರವಾದ ಹಾದಿಯಲ್ಲಿ ಬರುವ ಬದಲು, ಉದ್ದೇಶಪೂರ್ವಕವಾಗಿ ತಮ್ಮ ಹಾದಿಯನ್ನು ಬದಲಿಸಿ ಫೀಲ್ಡರ್ ಮೊಹಮ್ಮದ್ ಶಮಿ ಎಸೆದ ಚೆಂಡಿಗೆ ಅಡ್ಡ ಬಂದಿದ್ದರು.

ಅಂಪೈರ್ ಅವರು ರೀಪ್ಲೇಗಳನ್ನು ಪರಿಶೀಲಿಸಿದಾಗ, ರಘುವಂಶಿ ಅವರು ಶಮಿ ಚೆಂಡನ್ನು ಎಸೆಯುವುದನ್ನು ಗಮನಿಸುತ್ತಿದ್ದರು ಮತ್ತು ಅದರ ಪಥವನ್ನು ಅರಿತೇ ಅಡ್ಡ ಬಂದರು ಎಂದು ನಿರ್ಧರಿಸಿದ್ದಾರೆ. ಅಂದರೆ ಇಲ್ಲಿ ರಘುವಂಶಿ ಬೇಕೆಂದೇ ಹಾದಿ ಬದಲಿಸಿರುವುದು ಸ್ಪಷ್ಟವಾಗಿ ಕಾಣಿಸಿದೆ.

ಇದನ್ನೂ ಓದಿ: RCB vs DC ಪಂದ್ಯಕ್ಕೆ 6 ಆಟಗಾರರು ಅಲಭ್ಯ..!

IPL ನಿಯಮ​ 37.1.4 ಪ್ರಕಾರ, ರನ್ ಓಡುವಾಗ ಬ್ಯಾಟರ್ ಯಾವುದೇ ಸರಿಯಾದ ಕಾರಣವಿಲ್ಲದೆ ಫೀಲ್ಡರ್‌ನ ರನ್-ಔಟ್ ಪ್ರಯತ್ನಕ್ಕೆ ಅಡ್ಡಿಯಾಗುವಂತೆ ತನ್ನ ಹಾದಿಯನ್ನು ಬದಲಿಸಿದರೆ, ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಅಂಗ್​ಕ್ರೀಶ್ ರಘುವಂಶಿಯನ್ನು ಔಟ್ ಎಂದು ತೀರ್ಪು ನೀಡಿದ್ದಾರೆ.

Published On – 8:52 am, Mon, 27 April 26

Source link

ಬಂಗಾಳ ಚುನಾವಣೆ ಎಫೆಕ್ಟ್: ಗುರುಗ್ರಾಮದಲ್ಲಿ ಕಾರ್ಮಿಕರ ಕೊರತೆ, ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಭಾರಿ ಬೇಡಿಕೆ – Kannada News | Gurugram Poster Sparks Talk on Workforce Gaps During Bengal Polls

ಗುರುಗ್ರಾಮ, ಏಪ್ರಿಲ್ 27: ಪಶ್ಚಿಮ ಬಂಗಾಳ(West Bengal)ದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದೆ. ಈ ಅಬ್ಬರದ ಮತದಾನದ ಹಿಂದೆ ಒಂದು ಕುತೂಹಲಕಾರಿ ಸಂಗತಿಯಿದೆ, ಗುರುಗ್ರಾಮದಂತಹ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿಯಿಂದ ಮತ ಚಲಾಯಿಸಲು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ.

ಸುಮಾರು 2.5 ರಿಂದ 3 ಲಕ್ಷ ಬಂಗಾಳಿ ಕಾರ್ಮಿಕರಿಗೆ ನೆಲೆಯಾಗಿರುವ ಗುರುಗ್ರಾಮ್‌ನಲ್ಲಿ ಈಗ ಕೆಲಸಗಾರರ ತೀವ್ರ ಅಭಾವ ಕಂಡುಬಂದಿದೆ. ಮನೆಗೆಲಸದವರು, ಅಡುಗೆಯವರು ಮತ್ತು ವಾಹನ ಚಾಲಕರ ಕೊರತೆಯಿಂದಾಗಿ ನಿವಾಸಿಗಳು ಪರದಾಡುತ್ತಿದ್ದಾರೆ. ಯಾವುದೇ ಪರ್ಯಾಯ ವ್ಯವಸ್ಥೆ ಅಥವಾ ಹೊಸ ಕೆಲಸಗಾರರನ್ನು ಪಡೆಯಲು ಈಗ ಕನಿಷ್ಠ 48 ರಿಂದ 72 ಗಂಟೆಗಳ ಕಾಲ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಲಸಗಾರರು ಸಿಗದ ಹಿನ್ನೆಲೆಯಲ್ಲಿ ಗುರುಗ್ರಾಮ್ ನಿವಾಸಿಗಳು ಈಗ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ರೋಬೋಟ್ ವ್ಯಾಕ್ಯೂಮ್ ಕ್ಲೀನರ್ಗಳ ಮಾರಾಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಮನುಷ್ಯರ ಸಹಾಯ ಸಿಗದಿದ್ದಾಗ ಯಂತ್ರಗಳೇ ಗತಿಯಾಗಿವೆ ಎಂಬ ಮಾತುಗಳು ಅಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಕೇಳಿಬರುತ್ತಿವೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳ, ತಮಿಳುನಾಡು ವಿಧಾನಸಭಾ ಚುನಾವಣೆ, ಮತದಾನ ಶುರು, ಯಾರ್ಯಾರ ನಡುವೆ ಪೈಪೋಟಿ

ಈ ಬೆಳವಣಿಗೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಖ್ಯಾತ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಅವರು ಬಂಗಾಳದ ಈ ಸ್ಥಿತಿಯನ್ನು ‘ಅಸಹ್ಯಕರ’ ಎಂದು ಬಣ್ಣಿಸಿದ್ದಾರೆ. 1960ರಲ್ಲಿ ಉನ್ನತ ಆರ್ಥಿಕತೆಯಾಗಿದ್ದ ಬಂಗಾಳವು ಇಂದು 21ನೇ ಸ್ಥಾನಕ್ಕೆ ಕುಸಿದಿರುವುದು ದುರಂತ. ರಾಜಕೀಯ ಅನಿವಾರ್ಯತೆಗಾಗಿ ಜನರು ಇಷ್ಟು ದೂರದಿಂದ ವಲಸೆ ಬರಬೇಕಾಗಿರುವುದು ಮತ್ತು ಸೌಲಭ್ಯಗಳಿಗಾಗಿ ಹೆದರುವುದು ಬೇಸರದ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಗುರುಗ್ರಾಮ ಒಂದರಲ್ಲೇ 3 ಲಕ್ಷಕ್ಕೂ ಅಧಿಕ ಬಂಗಾಳಿ ಕಾರ್ಮಿಕರಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 9:06 am, Mon, 27 April 26

Source link

ಪ್ರದಾನಿ ಮೋದಿಗೆ ಮದುವೆ ಆಹ್ವಾನ ನೀಡಿದ ರಾಯಚೂರಿನ ಯುವಕನಿಗೆ ಸಿಕ್ತು ಗುಡ್ ನ್ಯೂಸ್! – Kannada News | PM Narendra Modi Sends Heartfelt Wedding Wishes to Rajesh Nayak from Raichur; Letter Goes Viral

ರಾಯಚೂರಿನ ನವ ವಿವಾಹಿತರಿಗೆ ಪ್ರಧಾನಿ ಮೋದಿ ಶುಭಾಶಯImage Credit source: tv9

ರಾಯಚೂರು, ಏಪ್ರಿಲ್ 27: ದೇಶದ ಪ್ರಧಾನ ಮಂತ್ರಿಯೆಂದರೆ (Prime Minister) ಬಿಡುವಿಲ್ಲದ ಚಟುವಟಿಕೆಗಳಿಂದ ಕೂಡಿರುವ ವ್ಯಕ್ತಿ. ಆದರೆ, ರಾಯಚೂರಿನ ಸಾಮಾನ್ಯ ಯುವಕನೊಬ್ಬ ಪ್ರೀತಿಯಿಂದ ಕಳುಹಿಸಿದ ಮದುವೆ ಆಹ್ವಾನ ಪತ್ರಿಕೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷವಾಗಿ ಸ್ಪಂದಿಸಿದ್ದಾರೆ. ನವಜೋಡಿಗೆ ಶುಭಾಶಯ ಪತ್ರ ಕಳುಹಿಸುವ ಮೂಲಕ ಮೋದಿ ಅವರು ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ದಂಪತಿಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ನಿವಾಸಿ ರಾಜೇಶ್ ನಾಯಕ್ ಎಂಬ ಯುವಕನ ಮದುವೆ ಇದೇ ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ನಿಶ್ಚಯವಾಗಿತ್ತು. ಈ ಸಂಭ್ರಮಕ್ಕೆ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಬೇಕೆಂದು ಬಯಸಿದ ರಾಜೇಶ್, ದೆಹಲಿಯ ಪ್ರಧಾನಿ ಕಚೇರಿಗೆ ಮದುವೆಯ ಆಹ್ವಾನ ಪತ್ರಿಕೆಯನ್ನು ರವಾನಿಸಿದ್ದರು. ಸಾಮಾನ್ಯ ಪ್ರಜೆಯ ಈ ಆಹ್ವಾನವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಪತ್ರದ ಮೂಲಕ ನವಜೋಡಿಗೆ ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿಯವರ ಪತ್ರದಲ್ಲೇನಿದೆ?

ರಾಜೇಶ್ ನಾಯಕ್ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ‘ನಿಮ್ಮ ವಿವಾಹ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಜೀವನದ ಈ ಶುಭ ಸಂದರ್ಭಕ್ಕೆ ಕಾಲಿಡುತ್ತಿರುವ ನಿಮಗೆ ಮತ್ತು ಸವಿತಾ ಅವರಿಗೆ ಸುಂದರ ಭವಿಷ್ಯಕ್ಕಾಗಿ ಶುಭಾಶೀರ್ವಾದಗಳು. ನಿಮ್ಮಿಬ್ಬರ ಹೃದಯ, ಮನಸ್ಸು ಮತ್ತು ಕ್ರಿಯೆಗಳು ಒಂದಾಗಿರಲಿ. ಜೀವನದ ಏರಿಳಿತಗಳಲ್ಲಿ ಪರಸ್ಪರ ಕೈಹಿಡಿದು, ಕನಸುಗಳನ್ನು ಸಾಕಾರಗೊಳಿಸುತ್ತಾ, ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸಿ. ಪರಸ್ಪರರ ದೋಷಗಳನ್ನು ಒಪ್ಪಿಕೊಂಡು, ಗುಣಗಳನ್ನು ಗೌರವಿಸುತ್ತಾ ಆದರ್ಶ ದಂಪತಿಗಳಾಗಿ ಬಾಳಿ. ನಿಮ್ಮ ದಾಂಪತ್ಯ ಜೀವನ ಸುದೀರ್ಘ, ಸುಖಮಯ ಮತ್ತು ಸುಂದರವಾಗಿರಲಿ’ ಎಂದು ಹಾರೈಸಿದ್ದಾರೆ.

ರಾಜೇಶ್ ನಾಯಕ್ ಹೇಳಿದ್ದೇನು?


‘ಇದೇ ತಿಂಗಳು (ಏಪ್ರಿಲ್ 13) ನಮ್ಮ ಮದುವೆ ನಡೆದಿತ್ತು. ಅದಕ್ಕೂ ಕೆಲವೇ ವಾರಗಳ ಮೊಡಲು ಪ್ರಧಾನಿ ಮೋದಿಯವರಿಗೆ ಮದುವೆಯ ಆಹ್ವಾನ ಪತ್ರಿಕೆ ಕಳುಹಿಸಿದ್ದೆ. ಅವರ ಕಡೆಯಿಂದ ಕನಿಷ್ಠ ಉತ್ತರವಾದರೂ ಬರಬಹುದು ಎಂದು ನಿರೀಕ್ಷಿಸಿ ಅವನ ಪತ್ರಿಕೆ ಕಳುಹಿಸಿದ್ದೆ. ಆದರೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ಇದೀಗ ಪ್ರಧಾನಿಯವರಿಂದ ಶುಭಾಶಯ ಪತ್ರ ಬಂದಿದೆ. ಅಷ್ಟೊಂದು ದೊಡ್ಡ ಹುದ್ದೆಯಲ್ಲಿದ್ದು, ದೇಶದ ಸಾಮಾನ್ಯ ಪ್ರಜೆಯೊಬ್ಬನ ಪತ್ರವನ್ನೂ ಅವರು ಪರಿಗಣಿಸುತ್ತಾರೆ ಎಂಬುದು ನಿಜಕ್ಕೂ ಅದ್ಭುತ. ಅವರಿಗೆ ನಮ್ಮ ಕಡೆಯಿಂದ ಕೃತಜ್ಞತೆಗಳು’ ಎಂದು ರಾಜೇಶ್ ನಾಯಕ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ರೂಂ ಕ್ಲೀನ್ ಮಾಡಬೇಕು ಎಂಬುದನ್ನು ನೆನಪಿಸುತ್ತದೆ’; ಇನ್​ಸ್ಟಾ ಬಯೋ ಅರ್ಥ ಹೇಳಿದ ರುಕ್ಮಿಣಿ ವಸಂತ್ – Kannada News | Rukmini Vasanth Reveals Instagram Bio’s True Meaning: It’s Not What You Think

ಎಲ್ಲಾ ಭಾಷೆಗಳಲ್ಲೂ ನಟಿಸಿ ಫೇಮಸ್ ಆದವರು ರುಕ್ಮಿಣಿ ವಸಂತ್. ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶಮಟ್ಟದಲ್ಲಿ ಜನಪ್ರಿಯರನ್ನಾಗಿ ಮಾಡಿತು. ಈಗ ರುಕ್ಮಿಣಿ ವಸಂತ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ತಮ್ಮ ಇನ್​​ಸಟಾ ಬಯೋದ ಅರ್ಥವೇನು ಎಂಬುದನ್ನು ಹೇಳಿದ್ದಾರೆ. ಇದಕ್ಕೆ ಹೆಚ್ಚು ಆಳ ಅರ್ಥ ಇಲ್ಲ ಎಂಬುದನ್ನು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅಲ್ಲದೆ ಒಂದು ಅಚ್ಚರಿಯ ಮಾಹಿತಿಯನ್ನು ಕೂಡ ರಿವೀಲ್ ಮಾಡಿದ್ದಾರೆ.

ರುಕ್ಮಿಣಿ ವಸಂತ್ ಅವರು ಇನ್​​ಸಟಾಗ್ರಾಮ್​​ನಲ್ಲಿ ‘ರುಕ್ಮಿಣಿ, ನೀನು ಈ ಲೌಕಿಕ ಅಥವಾ ಸಾಮಾನ್ಯ ಜೀವನಕ್ಕಾಗಿ ಹುಟ್ಟಿದವಳಲ್ಲ’ ಎಂದು ಬರೆದಿದೆ. ಇದಕ್ಕೆ ನಾನಾ ಅರ್ಥವನ್ನು ಜನರು ಕಲ್ಪಿಸಿದ್ದರು. ಈಗ ರುಕ್ಮಿಣಿ ವಸಂತ್ ಅವರು ಇದರ ಅರ್ಥವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು?

‘ನನ್ನ ಬಯೋದಲ್ಲಿ ಬರೆದಿರುವ ವಿಷಯ ಹೆಚ್ಚು ನಾಟಿಕೀಯವಾಗಿಯೇನು ಇಲ್ಲ. ಅದೇ ರೀತಿ ಆಳ ಅರ್ಥ ಕೂಡ ಇಲ್ಲ. ಒಮ್ಮೆ ನಾನು ನಮ್ಮ ರೂಂ ಕ್ಲೀನ್ ಮಾಡಿಲ್ಲ ಎಂದು ನನ್ನ ತಂಗಿ ಕೂಗಾಡಿದಳು. ಅದಕ್ಕೆ ಹಾಗೆ ಬರೆದುಕೊಂಡಿದ್ದೇನೆ. ನನ್ನ ರೂಂ ಅನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂಬುದನ್ನು ಆ ಸಾಲು ನೆನಪಿಸುತ್ತದೆ’ ಎಂದಿದ್ದಾರೆ ರುಕ್ಮಿಣಿ ವಸಂತ್.

r

‘Rukmini you weren’t born for real life’ ಎಂಬುದು ಅವರ ಬಯೋದಲ್ಲಿದೆ. ಇದರ ಅರ್ಥವನ್ನು ವಿವರವಾಗಿ ನೋಡೋದಾದರೆ ‘ನಿನ್ನ ವ್ಯಕ್ತಿತ್ವ, ನಿನ್ನ ಆಲೋಚನೆಗಳು ಅಥವಾ ನಿನ್ನ ಗುಣಗಳು ಈ ಸಾಮಾನ್ಯ ಪ್ರಪಂಚದ ಹದಕ್ಕೆ ಹೊಂದಿಕೆಯಾಗುತ್ತಿಲ್ಲ. ಬಹುಶಃ ನೀನು ಅದಕ್ಕಿಂತಲೂ ಮಿಗಿಲಾದ, ಅದ್ಭುತವಾದ ಅಥವಾ ಯಾವುದೋ ಒಂದು ಬೇರೆ ಲೋಕಕ್ಕೆ ಸೇರಿದವಳು. ಇಲ್ಲಿನ ಸಣ್ಣತನಗಳು ಅಥವಾ ಕಷ್ಟ-ಸುಖದ ಸಾಮಾನ್ಯ ಬದುಕು ನಿನಗಲ್ಲ’ ಎಂದು ಹೇಳುವ ವ್ಯಂಗ್ಯದ ಮಾತಾಗಿದೆ. ಸರಳವಾಗಿ ಹೇಳಬೇಕೆಂದರೆ, ‘ನೀನು ಈ ಸಾಧಾರಣ ಬದುಕಿಗಿಂತ ದೊಡ್ಡವಳು’ ಎಂಬ ಅರ್ಥ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

LSG vs KKR, IPL 2026: ಲಕ್ನೋವನ್ನು ಸೋಲಿಸಿದ ನಂತರ ರಿಂಕು ಸಿಂಗ್ ಆಡಿದ ಮಾತಿಗೆ ಇಡೀ ಸ್ಟೇಡಿಯಂ ಫಿದಾ – Kannada News | Rinku Singh post match presentation talk after defeating LSG had the entire stadium in a frenzy

ಬೆಂಗಳೂರು (ಏ. 27): ಐಪಿಎಲ್ 2026 ರಲ್ಲಿ ಭಾನುವಾರ ನಡೆದ 38ನೇ ಪಂದ್ಯ ರಣರೋಚಕವಾಗಿತ್ತು. ಏಕಾನಾ ಕ್ರೀಡಾಂಗಣ ಈ ಸೀಸನ್​ನ ಮೊದಲ ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಯಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು ರಿಂಕು ಸಿಂಗ್ (Rinku Singh). ಬ್ಯಾಟಿಂಗ್‌ನಲ್ಲಿ ಅದ್ಭುತ ಆಟವಾಡಿ ಮೈದಾನದಲ್ಲಿ ಸೂಪರ್‌ಮ್ಯಾನ್​ನಂತೆ ಕಾಣಿಸಿಕೊಂಡ ರಿಂಕು ಪಂದ್ಯಶ್ರೇಷ್ಠ ಕೂಡ ತಮ್ಮದಾಗಿಸಿದರು. ಪಂದ್ಯದ ನಂತರ, ಕೆಕೆಆರ್ ತಂಡವನ್ನು ಸೋಲಿನಿಂದ ರಕ್ಷಿಸಿ ಗೆಲುವಿನತ್ತ ಕೊಂಡೊಯ್ದ ರಿಂಕು, ತಮ್ಮ ತಂತ್ರ ಮತ್ತು ಬೌಂಡರಿಯಲ್ಲಿ ತೆಗೆದುಕೊಂಡ ಅದ್ಭುತ ಕ್ಯಾಚ್ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಪಂದ್ಯದ ನಂತರ, ರಿಂಕು ಸಿಂಗ್ ಅವರನ್ನು “ರಿಂಕು ದಿ ಟ್ರಬಲ್‌ಶೂಟರ್” ಎಂದು ಅಡ್ಡಹೆಸರಾಗಿ ಬದಲಾಯಿಸಬೇಕೇ ಎಂದು ಕೇಳಿದಾಗ, ಅವರು ನಯವಾಗಿ ನಗುತ್ತಾ, “ಇಲ್ಲ, ರಿಂಕು ಎಂಬ ಹೆಸರು ಸರಿ ಇದೆ, ಅದೇ ಇರಲಿ” ಎಂದು ಹೇಳಿದರು. ರಿಂಕುವಿನ ಈ ಮಾತು ಕೇಳಿ ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ನಕ್ಕರು. ನಾನು ಬ್ಯಾಟಿಂಗ್ ಮಾಡಲು ಬಂದಾಗ ತಂಡ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಮತ್ತು ಪರಿಸ್ಥಿತಿ ಗಂಭೀರವಾಗಿತ್ತು ಎಂದು ರಿಂಕು ವಿವರಿಸಿದರು.

ಪಂದ್ಯವನ್ನು ಕೊನೆಯವರೆಗೂ ಹೇಗೆ ಕೊಂಡೊಯ್ಯಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು ಎಂದು ರಿಂಕು ಹೇಳಿದ್ದಾರೆ. ತಮ್ಮ ತಂತ್ರವನ್ನು ಹಂಚಿಕೊಂಡ ಅವರು, ವಿಕೆಟ್‌ಗಳು ಪತನದ ನಂತರ, ಸ್ಕೋರ್‌ಬೋರ್ಡ್ ಅನ್ನು ಚಲಿಸುವಂತೆ ಮಾಡುವುದು ಮತ್ತು ಕೆಟ್ಟ ಚೆಂಡುಗಳನ್ನು ಮಿತಿಯಿಂದ ಹೊರಗೆ ಹೊಡೆಯುವುದರ ಮೇಲೆ ತಮ್ಮ ಗಮನವಿತ್ತು ಎಂದು ಹೇಳಿದರು.

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ

ಬ್ಯಾಟಿಂಗ್ ಜೊತೆಗೆ, ಕ್ಷೇತ್ರರಕ್ಷಣೆಯಲ್ಲೂ ರಿಂಕು ಮಿಂಚು

ಈ ಪಂದ್ಯದಲ್ಲಿ ರಿಂಕು ಸಿಂಗ್ 83 ರನ್ ಗಳಿಸಿದ್ದಲ್ಲದೆ, ನಾಲ್ಕು ಅದ್ಭುತ ಕ್ಯಾಚ್‌ಗಳನ್ನು ಸಹ ಪಡೆದರು. ಅವರ ಚುರುಕಾದ ಫೀಲ್ಡಿಂಗ್ ಬಗ್ಗೆ ಮಾತನಾಡುತ್ತಾ, “ನನಗೆ ಬಾಲ್ಯದಿಂದಲೂ ಫೀಲ್ಡಿಂಗ್ ತುಂಬಾ ಇಷ್ಟ. ನಾನು ಫಿಟ್ ಆಗಿದ್ದೇನೆ ಮತ್ತು ಫೀಲ್ಡಿಂಗ್ ಅನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ” ಎಂದು ಹೇಳಿದರು. ರಿಂಕು ಅವರ ಫಿಟ್ನೆಸ್ ಪಂದ್ಯದುದ್ದಕ್ಕೂ ಎದ್ದುಕಂಡಿತು, ಇದು ಕೋಲ್ಕತ್ತಾಗೆ ನಿರ್ಣಾಯಕ ಕ್ಷಣಗಳಲ್ಲಿ ಪ್ರಯೋಜನವನ್ನು ನೀಡಿತು.

ಸೂಪರ್ ಓವರ್‌ನಲ್ಲಿ ರಿಂಕು ಕ್ಯಾಚ್

ಸೂಪರ್ ಓವರ್‌ನಲ್ಲಿ ರೋವ್‌ಮನ್ ಪೊವೆಲ್ ಎಸೆದ ಕ್ಯಾಚ್ ಬಗ್ಗೆ ರಿಂಕು ಆಸಕ್ತಿದಾಯಕ ವಿಚಾರ ಬಹಿರಂಗಪಡಿಸಿದರು. “ನಿಜ ಹೇಳಬೇಕೆಂದರೆ, ನಾನು ಆ ಕ್ಯಾಚ್‌ಗೆ ಸಿದ್ಧನಾಗಿರಲಿಲ್ಲ. ಪೊವೆಲ್ ಅದನ್ನು ಹಿಡಿಯುತ್ತಾರೆ ಎಂದು ನಾನು ಭಾವಿಸಿದ್ದೆ, ಆದರೆ ಅವನು ಚೆಂಡನ್ನು ಬೌಂಡರಿಯ ಬಳಿಯಿಂದ ನನ್ನ ಕಡೆಗೆ ಬಲವಾಗಿ ಎಸೆದಾಗ, ನಾನು ಚುರುಕುಗೊಂಡು ಅದನ್ನು ಹಿಡಿಯುವಲ್ಲಿ ಯಶಸ್ವಿಯಾದೆ” ಎಂದು ರಿಂಕು ಹೇಳಿದರು. ರಿಂಕು ಹಿಡಿದ ಈ ಕ್ಯಾಚ್ ಸೂಪರ್ ಓವರ್‌ನಲ್ಲಿ ಲಕ್ನೋದ ಇನ್ನಿಂಗ್ಸ್ ಅನ್ನು ಕೇವಲ 1 ರನ್‌ಗೆ ಮುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಸಿಬಿ vs ಜಿಟಿ ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ: ಕಂಗೆಟ್ಟು ಕುಳಿತಿದ್ದ ಪೊಲೀಸರು! – Kannada News | Bengaluru: Major Security Breach During RCB vs GT IPL Match; 240 CCTV Feeds Cut, 2 Arrested

ಬೆಂಗಳೂರಿನ RCB ಮತ್ತು GT ಪಂದ್ಯದ ವೇಳೆ ನಡೆದಿತ್ತು ಆಘಾತಕಾರಿ ಘಟನೆ!

ಬೆಂಗಳೂರು, ಏಪ್ರಿಲ್ 27: ಶುಕ್ರವಾರ (ಏ.24) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ದಿನವೇ ಭಾರೀ ಭದ್ರತಾ ಲೋಪ ಉಂಟಾಗಿದ್ದು, ಆತಂಕ ಮೂಡಿಸಿದೆ. ಆರ್​ಸಿಬಿ (Royal Challengers Bengaluru) ಮತ್ತು ಜಿಟಿ (Gujarat Titans) ನಡುವಿನ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದ ಸುತ್ತಮುತ್ತ ಅಳವಡಿಸಲಾಗಿದ್ದ ಸುಮಾರು 240 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವನ್ನು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಆ ದಿನ ಸ್ಟೇಡಿಯಂ ಸುತ್ತಮುತ್ತ ಹಾಗೂ ಪ್ರವೇಶ ದ್ವಾರಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳು ಕಾರ್ಯನಿರ್ವಹಿಸದೇ ಇದ್ದುದರಿಂದ ಪೊಲೀಸರು ಗೊಂದಲಕ್ಕೀಡಾದರು. IPL ಪಂದ್ಯದ ದಿನ ಒಮ್ಮೆಲೇ 240 ಸಿಸಿಟಿವಿ ಕ್ಯಾಮೆರಾಗಳು ಆಪ್ ಆಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂದು ತನಿಖೆ ನಡೆಸಿದಾಗ ಕೇಳಿ ಬಂದಿದ್ದು ಎರಡು ಹೆಸರುಗಳು. ಐವಿಎಸ್​ ಡಿಜಿಟಲ್ ಸಲ್ಯೂಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಮತ್ತು ಅಬ್ದುಲ್ ಕಲಾಂ. ಪಾಸ್ ಇಲ್ಲದೇ ನಿಷ್ಕ್ರಿಯಗೊಂಡ ಕಾರ್ಡ್ ಬಳಸಿ ಸರ್ವರ್ ರೂಂಗೆ ಅನಧಿಕೃತವಾಗಿ ಪ್ರವೇಶಿಸಿದ ಆರೋಪಿಗಳು ಎನ್‌ವಿಆರ್ ಮತ್ತು ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದರೆಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಪೊಲೀಸರ ಸಮಯಪ್ರಜ್ಞೆ

ಪಂದ್ಯದ ದಿನ ಬೆಳಗ್ಗೆ ಸಿಸಿಟಿವಿಗಳು ಆಫ್ ಆಗಿದ್ದರಿಂದ ಭದ್ರತಾ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಬದಲಿ ತಾಂತ್ರಿಕ ವ್ಯವಸ್ಥೆ ನಿರ್ಮಿಸಿದರು. ಭದ್ರತಾ ನ್ಯೂನತೆಗಳ ನಡುವೆಯೂ ಪೊಲೀಸರು ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ.ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಕ್ರೀಡಾಂಗಣದಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟ, 10 ಮಂದಿ ಬಂಧನ!

ಆರ್‌ಸಿಬಿ ಮತ್ತು ಜಿಟಿ ನಡುವಿನ ಐಪಿಎಲ್ ಪಂದ್ಯದ ವೇಳೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಎಫ್‌ಐಆರ್ (FIR) ದಾಖಲಾಗಿದ್ದು, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ P3 ಸ್ಟ್ಯಾಂಡ್‌ನ 6 ಮತ್ತು ರೋಜರ್ ಬಿನ್ನಿ ಸ್ಟ್ಯಾಂಡ್‌ನ 6 ಟಿಕೆಟ್ ಸೇರಿದಂತೆ ಒಟ್ಟು 19 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಕೆಎಸ್‌ಸಿಎ (KSCA) ಸದಸ್ಯರಿಗೆ ನೀಡಲಾಗಿದ್ದ ಕಾಂಪ್ಲಿಮೆಂಟರಿ ಟಿಕೆಟ್‌ಗಳೇ ಅತಿ ಹೆಚ್ಚು ಬ್ಲಾಕ್‌ನಲ್ಲಿ ಮಾರಾಟವಾಗಿವೆ. ಈ ಟಿಕೆಟ್‌ಗಳ ಮೇಲೆ ಬೆಲೆ ನಮೂದಾಗಿರುವುದಿಲ್ಲ. ಅಥವಾ ‘ಸೊನ್ನೆ’ ಎಂದು ಬರೆದಿರುತ್ತದೆ. ಇದರ ಮೌಲ್ಯದ ಅರಿವಿಲ್ಲದ ಆರೋಪಿಗಳು, 30-40 ಸಾವಿರ ರೂಪಾಯಿ ಬೆಲೆ ಬಾಳುವ P3 ಸ್ಟ್ಯಾಂಡ್ ಟಿಕೆಟ್‌ಗಳನ್ನು ಕೇವಲ 8-10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇನ್ನು ಕೆಲವು ಸಾಮಾನ್ಯ ಟಿಕೆಟ್‌ಗಳನ್ನು ಎರಡು-ಮೂರು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ ಐಪಿಎಲ್ ಬ್ಲ್ಯಾಕ್ ಟಿಕೆಟ್ ಮಾರಾಟ ದಂಧೆ, ಡಿಎನ್‌ಎ ಸಂಸ್ಥೆಗೆ ಸಿಸಿಬಿ ಶಾಕ್!

ಪೊಲೀಸರ ಮಫ್ತಿ ಕಾರ್ಯಾಚರಣೆ

ಟಿಕೆಟ್ ಕೊಳ್ಳುವವರ ಸೋಗಿನಲ್ಲಿ ಮಫ್ತಿಯಲ್ಲಿ ತೆರಳಿದ್ದ ಪೊಲೀಸರು ಚಾಣಾಕ್ಷತನದಿಂದ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ್ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಈ ಆರೋಪಿಗಳಿಗೆ ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ನೀಡಿದ ಮೂಲ ವ್ಯಕ್ತಿಗಳು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆನ್‌ಲೈನ್ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿ ಸ್ಥಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ತಂಡಗಳ ಮೇಲೂ ನಿಗಾ ಇಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ರೈಲಿನಿಂದ ಮಗು ಬಿದ್ದೇಬಿಡ್ತು, ಚೈನ್ ಎಳೆದರೂ ನಿಲ್ಲದ ರೈಲು, ಅಸಹಾಯಕಳಾಗಿ ಕಣ್ಣೀರಿಟ್ಟ ತಾಯಿ – Kannada News | Child Falls from Train, Emergency Chain Fails to Halt Service on Jalpaiguri Route

ಕೋಲ್ಕತ್ತಾ, ಏಪ್ರಿಲ್ 27: ಕೈಜಾರಿ ಮಗು ರೈಲಿನಿಂದ ಬಿದ್ದೇ ಬಿಟ್ಟಿತ್ತು, ರೈಲಿನ ತುರ್ತು ಸರಪಳಿಯನ್ನು ಎಳೆದರೂ ಕೂಡ ರೈಲು ನಿಲ್ಲದೆ ಚಲಿಸುತ್ತಲೇ ಇದ್ದ ಘಟನೆ ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಸಂಭವಿಸಿದೆ.

ರೈಲಿನಿಂದ ಮಗು ಕೆಳಕ್ಕೆ ಬಿದ್ದ ತಕ್ಷಣವೇ ಗಾಬರಿಗೊಂಡ ತಾಯಿ, ಮಗುವನ್ನು ರಕ್ಷಿಸಲು ರೈಲನ್ನು ನಿಲ್ಲಿಸಲು ತುರ್ತು ಸರಪಳಿಯನ್ನು ಎಳೆದಿದ್ದಾರೆ. ಆದರೆ, ರೈಲು ನಿಲ್ಲಲೇ ಇಲ್ಲ. ಆಕೆಯ ಆಕ್ರಂದನ ಕಂಡು ಬೋಗಿಯಲ್ಲಿದ್ದ ಇತರ ಪ್ರಯಾಣಿಕರೂ ಸಹಕರಿಸಿ ಪದೇ ಪದೇ ಸರಪಳಿಯನ್ನು ಎಳೆದರೂ ರೈಲ್ವೆ ಬ್ರೇಕ್ ವ್ಯವಸ್ಥೆ ಸ್ಪಂದಿಸಲಿಲ್ಲ. ಇದು ರೈಲ್ವೆ ಬೋಗಿಗಳ ನಿರ್ವಹಣೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ.

ಘಟನೆಯ ವೇಳೆ ಬೋಗಿಯಲ್ಲಿದ್ದ ಯುವಕನೊಬ್ಬ ತಕ್ಷಣವೇ ಆರ್‌ಪಿಎಫ್ (RPF) ಮತ್ತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಈ ಇಡೀ ಘಟನೆಯನ್ನು ಆತ ವೀಡಿಯೊದಲ್ಲಿ ಸೆರೆಹಿಡಿದಿದ್ದು, ನಾವು ಎಲ್ಲರಿಗೂ ಕರೆ ಮಾಡಿದ್ದೇವೆ, ಸರಪಳಿ ಎಳೆಯುತ್ತಿದ್ದೇವೆ, ಆದರೂ ರೈಲು ನಿಲ್ಲುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ರೈಲು ನಿಲ್ಲದ ಕಾರಣ ತಾಯಿ ಮಗುವಿನ ಹತ್ತಿರ ತಲುಪಲು ಸಾಧ್ಯವಾಗದೆ ರೈಲಿನಲ್ಲೇ ಕಣ್ಣೀರಿಡುತ್ತಾ ಕುಳಿತುಕೊಳ್ಳುವಂತಾಯಿತು.

ಮಗು ಬಿದ್ದ ನಂತರ ರೈಲು ಮುಂದಿನ ನಿಲ್ದಾಣ ತಲುಪುವವರೆಗೆ ತಾಯಿಗೆ ಯಾವುದೇ ಅಧಿಕೃತ ಸಹಾಯ ಸಿಗಲಿಲ್ಲ ಎಂದು ವರದಿಯಾಗಿದೆ. ನಂತರ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಮಗುವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

60ನೇ ವಯಸ್ಸಿನಲ್ಲೂ ಎಷ್ಟು ಯಂಗ್ ಆಗಿ ಕಾಣ್ತಾರೆ ನೋಡಿ ವಿಕ್ರಮ್ – Kannada News | Vikram’s Youthful Look at 60: Is it Cosmetic Surgery or Natural Diet?

ತಮಿಳಿನ ಸ್ಟಾರ್ ಹೀರೋ ವಿಕ್ರಮ್ ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ಅವರು ತಮ್ಮ ಚಿತ್ರಗಳ ಮೂಲಕ ಅನೇಕ ಅಭಿಮಾನಿಗಳನ್ನು ಗೆದ್ದಿದ್ದಾರೆ. ತಮಿಳಿನಲ್ಲಿ ಸ್ಟಾರ್ ಹೀರೋ ಆಗಿರುವ ವಿಕ್ರಮ್, ದಕ್ಷಿಣ ಭಾರತದಲ್ಲಿ ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ವಿಕ್ರಮ್ ಪ್ರಸ್ತುತ 60 ವರ್ಷ ವಯಸ್ಸಿನವರಾಗಿದ್ದರೂ, ಅವರು ತಮ್ಮ ಲುಕ್ನಲ್ಲಿ 20-25 ವರ್ಷದ ಹುಡುಗನಂತೆ ಕಾಣುತ್ತಾರೆ. ಇತ್ತೀಚೆಗೆ, ವಿಕ್ರಮ್‌ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಕ್ರಮ್ ಅವರ ಲುಕ್ ನೆಟ್ಟಿಗರು ಮತ್ತು ಅವರ ಅಭಿಮಾನಿಗಳನ್ನು ಅಪಾರವಾಗಿ ಮೆಚ್ಚಿಸಿದೆ. ವಿಕ್ರಮ್ ಅವರ ಮಗ ಈಗ ನಾಯಕನಾಗಿಯೂ ನಟಿಸುತ್ತಿದ್ದಾರೆ. ವಿಕ್ರಮ್ ಅವರ ಮಗ ಧ್ರುವ ಸತತವಾಗಿ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಬೈಸನ್ ಚಿತ್ರದ ಮೂಲಕ ಅವರು ಹಿಟ್ ಗಳಿಸಿದರು. ಧ್ರುವ್ ಪ್ರಸ್ತುತ 30 ವರ್ಷ ವಯಸ್ಸಿನವರಾಗಿದ್ದರೂ ವಿಕ್ರಮ್ ಧ್ರುವ್ ಗಿಂತ ಚಿಕ್ಕವರಾಗಿ ಕಾಣುತ್ತಿದ್ದಾರೆ. ಆದಾಗ್ಯೂ, ವಿಕ್ರಮ್ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ ಎಂಬ ಬಗ್ಗೆ ವಿವಿಧ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಇನ್ನೂ ಸಖತ್ ಯಂಗ್ ಆಗಿದ್ದಾರೆ ಚಿಯಾನ್ ವಿಕ್ರಮ್

ಅದರಲ್ಲೂ ಕಾಲಿವುಡ್ ನಲ್ಲಿ ಹೆಚ್ಚು ಕೇಳಿಬರುತ್ತಿರುವ ಸುದ್ದಿಗಳಲ್ಲಿ, ವಿಕ್ರಮ್ ಸುಂದರವಾಗಿ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿಕ್ರಮ್ ಯುವಕನಂತೆ ಕಾಣಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ವರದಿಗಳೂ ಇವೆ. ವಿದೇಶಗಳಲ್ಲಿ ಕಾಸ್ಮೆಟಿಕ್ ಚಿಕಿತ್ಸೆಯಿಂದಾಗಿ ವಿಕ್ರಮ್ ಯುವಕನಂತೆ ಕಾಣುತ್ತಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ವಿಕ್ರಮ್ ಅವರ ಆಹಾರ ಪದ್ಧತಿ ಮತ್ತು ನೈಸರ್ಗಿಕ ಆಹಾರ ಕ್ರಮದಿಂದ ವಿಕ್ರಮ್ ಈ ರೀತಿ ಕಾಣುತ್ತಿದ್ದಾರೆ ಎಂದು ಹೇಳುತ್ತಾರೆ. ವಿಕ್ರಮ್ ಅವರ ಶಸ್ತ್ರಚಿಕಿತ್ಸೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ. ಆದರೆ ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದಕ್ಕೆ ವಿಕ್ರಮ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link