Category Archives: Blog

Your blog category

ಪಂಚಮಸಾಲಿ ಪೀಠ ಸಂಘರ್ಷ: ಮೂವರು ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ – Kannada News | Harihara Panchamasali Gurupeeth conflict: three Trustees Expelled

ದಾವಣಗೆರೆ, ಏಪ್ರಿಲ್​ 26: ಪಂಚಮಸಾಲಿ ಗುರುಪೀಠ ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಮತ್ತು ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಅವರನ್ನು ಟ್ರಸ್ಟ್‌ನಿಂದ ಉಚ್ಚಾಟನೆ ಮಾಡಲಾಗಿದೆ. ಲೆಕ್ಕಪತ್ರ ನೀಡುವಂತೆ ಸಾರ್ವಜನಿಕ ಮತ್ತು ಸಂಘದ ವತಿಯಿಂದ ನಿರಂತರವಾಗಿ ಕೇಳಲಾಗಿದ್ದರೂ ಸಹ, ಅವರು ಸ್ಪಂದಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 13ರಿಂದ ಈ ಮೂವರು ಟ್ರಸ್ಟಿಗಳಿಗೆ ಯಾವುದೇ ಹಣಕಾಸು ವ್ಯವಹಾರ ಅಥವಾ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದಿಲ್ಲ ಎಂದು ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿ ಪಾಟೀಲ್ ಹೇಳಿದ್ದಾರೆ.

ಸಂಘವು ಸುಪ್ರೀಂ ಆಗಿದ್ದು, ಸುಮಾರು 13,600 ಸದಸ್ಯರನ್ನು ಹೊಂದಿದೆ. ಟ್ರಸ್ಟ್‌ನಲ್ಲಿನ ಅವ್ಯವಹಾರ ತಡೆಯುವ ಮತ್ತು ಸಮಾಜದ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜೂನ್ ತಿಂಗಳಲ್ಲಿ ಲೆಕ್ಕ ಕೊಡಿ ಅಭಿಯಾನ ಸಮಿತಿ ಅಧ್ಯಕ್ಷರೊಂದಿಗೆ ರಾಜ್ಯ ಪ್ರವಾಸ ಕೈಗೊಂಡು 2008ರಿಂದ ಮಠಕ್ಕೆ ದಾನ ನೀಡಿದವರ ಕುರಿತು ಮಾಹಿತಿ ಸಂಗ್ರಹಿಸಿ, ಜೂನ್‌ನಲ್ಲಿ ಪೂರ್ಣ ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ: ಹಾಡಿ ಹೊಗಳಿದ ಚನ್ನರಾಜ್ ಹತ್ತಿಹೊಳಿ – Kannada News | Ayra Films Anna From Mexico: Social Message and Kannada Cinema Vision

ಬೆಳಗಾವಿ, ಏ.26: ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಐರಾ ಫಿಲ್ಮ್ಸ್‌ನ ನಿರ್ಮಾಪಕ ಚನ್ನರಾಜ್ ಹತ್ತಿಹೊಳಿ ಅವರು ಚಿತ್ರ ನಿರ್ಮಾಣದ ಸವಾಲುಗಳು ಮತ್ತು ಚಿತ್ರದ ಕುರಿತು ವಿವರವಾಗಿ ಮಾತನಾಡಿದರು. ಐರಾ ಫಿಲ್ಮ್ಸ್ ಸಂಸ್ಥೆಗೆ ಅಣ್ಣ ಫ್ರಮ್ ಮೆಕ್ಸಿಕೋ ಒಂದು ವಿಶೇಷ ಚಿತ್ರವಾಗಿದೆ. ಇದು ಸಂಸ್ಥೆಯ ಮೊದಲ ನಿರ್ಮಾಣವಾಗಿದ್ದು, ನೂರಾರು ಸಿನಿಮಾಗಳನ್ನು ಮಾಡಿದರೂ ಮೊದಲ ಚಿತ್ರ ಯಾವಾಗಲೂ ಸ್ಮರಣೀಯವಾಗಿರುತ್ತದೆ ಎಂದು ಅವರು ಹೇಳಿದರು. ಈ ಸಂಸ್ಥೆಯು ಕರ್ನಾಟಕದ ಐರನ್ ಲೇಡಿ ಹಾಗೂ ಮಿನಿಸ್ಟರ್ ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಶೀರ್ವಾದದಿಂದ ಪ್ರಾರಂಭವಾಯಿತು. ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಉತ್ತಮ ಕಥೆಗಳನ್ನು ಹಾಗೂ ಗುಣಮಟ್ಟದ ಸಿನಿಮಾಗಳನ್ನು ನೀಡಬೇಕೆಂಬ ದೊಡ್ಡ ಆಸೆಯನ್ನು ಐರಾ ಫಿಲ್ಮ್ಸ್ ಹೊಂದಿದೆ ಎಂದು ಚನ್ನರಾಜ್ ಹತ್ತಿಹೊಳಿ ತಿಳಿಸಿದರು. ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಟೀಸರ್‌ನಲ್ಲಿ ದೊಡ್ಡದಾದ ಮಾಸ್ ಹೀರೋಯಿಸಂ ಮತ್ತು ಫೈಟ್ ದೃಶ್ಯಗಳು ಕಂಡುಬಂದರೂ, ಈ ಕಥೆಯನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವೆಂದರೆ ಅದರಲ್ಲಿರುವ ಸಾಮಾಜಿಕ ಕಳಕಳಿ ಮತ್ತು ಯುವ ಜನತೆಗೆ ನೀಡುವ ಒಳ್ಳೆಯ ಸಂದೇಶ. ಕಥೆಯ ಆಳವಾದ ಅಂಶಗಳನ್ನು ಪರಿಗಣಿಸಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಲು ನಿರ್ಧರಿಸಲಾಯಿತು ಎಂದು ಹತ್ತಿಹೊಳಿ ವಿವರಿಸಿದರು.

ಈ ಚಿತ್ರಕ್ಕೆ ಅನೇಕರು ಬೆಂಬಲ ನೀಡಿದ್ದಾರೆ. ಶಂಕರ್ ಗುರು ಅವರು ಕಥೆಯನ್ನು ಪರಿಚಯಿಸಿದರು. ನಟ ಧನಂಜಯ್ ಹಾಗೂ ಇನ್ನೊಬ್ಬ ಮಿತ್ರರಾದ ಸತ್ಯ ಅವರ ಸಹಕಾರವೂ ಇದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಜೀ ಸ್ಟುಡಿಯೋಸ್ ಕೂಡ ಈ ಯೋಜನೆಯಲ್ಲಿ ಕುಟುಂಬದ ಸದಸ್ಯರಂತೆ ಕೈಜೋಡಿಸಿದೆ ಎಂದು ಚನ್ನರಾಜ್ ಹತ್ತಿಹೊಳಿ ಜಿ ಸ್ಟುಡಿಯೋಸ್‌ಗೆ ಧನ್ಯವಾದ ಅರ್ಪಿಸಿದರು. ಚಿತ್ರದ ಸಂಗೀತ ನಿರ್ದೇಶಕರು, ನಾಯಕಿ ಹಾಗೂ ಆನಂದ್ ಆಡಿಯೋ ಕೂಡ ಮಹತ್ವದ ಪಾತ್ರ ವಹಿಸಿದ್ದಾರೆ. ಆನಂದ್ ಆಡಿಯೋದಿಂದ ಶ್ಯಾಮ್ ಅವರು ಈ ಚಿತ್ರವನ್ನು ನಿರ್ಮಿಸಲು ಸಾಕಷ್ಟು ಪ್ರೇರಣೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಒಟ್ಟಾರೆಯಾಗಿ, ಒಂದು ಉತ್ತಮ ಸಿನಿಮಾ ಮಾಡುವಲ್ಲಿ ಎಲ್ಲರ ಬೆಂಬಲ ಮತ್ತು ಆಶೀರ್ವಾದ ಅಗತ್ಯ ಎಂದು ಚನ್ನರಾಜ್ ಹತ್ತಿಹೊಳಿ ಹೇಳಿದರು. ಕನ್ನಡ ಚಿತ್ರರಂಗವು ಈಗ ಬಹಳ ದೊಡ್ಡದಾಗಿ ಬೆಳೆದಿದ್ದು, ಮತ್ತಷ್ಟು ಉತ್ತಮ ಸಿನಿಮಾಗಳನ್ನು ನೀಡಲು ಐರಾ ಫಿಲ್ಮ್ಸ್ ಬದ್ಧವಾಗಿದೆ. ಇದಕ್ಕೆ ಪ್ರೇಕ್ಷಕರ ಪ್ರೀತಿ, ಪ್ರೋತ್ಸಾಹ ಮತ್ತು ಆಶೀರ್ವಾದ ಬೇಕು ಎಂದು ಅವರು ಮನವಿ ಮಾಡಿದರು. ಉತ್ತಮ ಗುಣಮಟ್ಟದ ಸಿನಿಮಾವನ್ನು ನೀಡಿರುವುದಾಗಿ ಹೇಳಿದ ಅವರು, ಮುಂಬರುವ ದಿನಗಳಲ್ಲಿ ಪ್ರೇಕ್ಷಕರು ಚಿತ್ರವನ್ನು ಹೇಗೆ ಆಶೀರ್ವದಿಸುತ್ತಾರೆ ಎಂದು ಕಾದು ನೋಡಬೇಕು ಎಂದು ಮಾತು ಮುಗಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RBI Recruitment 2026: RBIನಲ್ಲಿ ನೇಮಕಾತಿ; ದೇಶದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಪಡೆಯಲು ಇಲ್ಲಿದೆ ಸುವರ್ಣವಕಾಶ – Kannada News | RBI Junior Engineer Recruitment 2026: Civil/Electrical Engineer Vacancies

ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 11 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇದರಲ್ಲಿ 7 ಜೂನಿಯರ್ ಎಂಜಿನಿಯರ್ (ಸಿವಿಲ್) ಮತ್ತು 4 ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್) ಹುದ್ದೆಗಳು ಸೇರಿವೆ. ಎಂಜಿನಿಯರಿಂಗ್ ಪದವೀಧರರಿಗೆ ಕೇಂದ್ರ ಬ್ಯಾಂಕ್‌ನಲ್ಲಿ ವೃತ್ತಿಜೀವನ ಆರಂಭಿಸಲು ಇದೊಂದು ಉತ್ತಮ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ (ಸಿವಿಲ್ ಅಥವಾ ಎಲೆಕ್ಟ್ರಿಕಲ್) ಕನಿಷ್ಠ ಶೇ.65 ಅಂಕಗಳೊಂದಿಗೆ ಡಿಪ್ಲೊಮಾ ಅಥವಾ ಪದವಿಯನ್ನು ಪೂರ್ಣಗೊಳಿಸಿರಬೇಕು. ಅರ್ಜಿದಾರರ ವಯಸ್ಸು ಏಪ್ರಿಲ್ 1, 2026ಕ್ಕೆ ಅನ್ವಯವಾಗುವಂತೆ 20 ರಿಂದ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಿನಾಯಿತಿ ಇರುತ್ತದೆ. ವಿಕಲಚೇತನ ಅಭ್ಯರ್ಥಿಗಳಿಗೆ (PwBD) ಅವರ ವರ್ಗಕ್ಕೆ ಅನುಗುಣವಾಗಿ 10 ರಿಂದ 15 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಲಭ್ಯವಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ದಿನಾಂಕ:

ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ. ಆನ್‌ಲೈನ್ ಲಿಖಿತ ಪರೀಕ್ಷೆ, ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (LPT) ಮತ್ತು ಮೂಲ ದಾಖಲೆಗಳ ಪರಿಶೀಲನೆ. ನಿಗದಿತ ವೇಳಾಪಟ್ಟಿಯಂತೆ ಆನ್‌ಲೈನ್ ಲಿಖಿತ ಪರೀಕ್ಷೆಯು ಜೂನ್ ನಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಮೇ 6ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಲಿಖಿತ ಪರೀಕ್ಷೆಯ ವಿಧಾನ:

ಲಿಖಿತ ಪರೀಕ್ಷೆಯನ್ನು ಒಟ್ಟು 300 ಅಂಕಗಳಿಗಾಗಿ ನಡೆಸಲಾಗುತ್ತಿದ್ದು, ಇದರಲ್ಲಿ 180 ಪ್ರಶ್ನೆಗಳಿರುತ್ತವೆ. ಪರೀಕ್ಷೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ:

  • ಇಂಗ್ಲಿಷ್ ಭಾಷೆ: 50 ಪ್ರಶ್ನೆಗಳು (50 ಅಂಕಗಳು).
  • ಎಂಜಿನಿಯರಿಂಗ್ ಪೇಪರ್ – 1 : 40 ಪ್ರಶ್ನೆಗಳು (100 ಅಂಕಗಳು).
  • ಎಂಜಿನಿಯರಿಂಗ್ ಪೇಪರ್ – 2 : 40 ಪ್ರಶ್ನೆಗಳು (100 ಅಂಕಗಳು).
  • ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕ ಸಾಮರ್ಥ್ಯ : 50 ಪ್ರಶ್ನೆಗಳು (50 ಅಂಕಗಳು).

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿ, ದೇಶದ ಅತ್ಯುನ್ನತ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:36 pm, Sun, 26 April 26

Source link

CSK vs GT: 8 ಎಸೆತಗಳಲ್ಲಿ 3 ವಿಕೆಟ್‌; ಪರಿಣಾಮ ಬೀರದ ಇಂಪ್ಯಾಕ್ಟ್ ಪ್ಲೇಯರ್ – Kannada News | IPL 2026: CSK’s Batting Collapse vs GT Triggers Early Impact Player Use in Match 37

ಐಪಿಎಲ್ 2026 (IPL 2026) ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ತವರಿನಲ್ಲಿ ಟಾಸ್ ಸೋತ ಸಿಎಸ್​​ಕೆ ಮೊದಲು ಬ್ಯಾಟಿಂಗ್‌ ಮಾಡಬೇಕಾಯಿತು. ತವರು ಮೈದಾನವಾಗಿದ್ದರಿಂದ ಸಿಎಸ್​ಕೆ ಉತ್ತಮ ಆರಂಭ ಪಡೆಯುವ ನಿರೀಕ್ಷೆ ಇತ್ತು. ಆದರೆ ಗುಜರಾತ್​​ನ ಸಾಂಘಿಕ ದಾಳಿಗೆ ತತ್ತರಿಸಿದ ಸಿಎಸ್​​ಕೆ ಬ್ಯಾಟಿಂಗ್‌ ವಿಭಾಗ ಪವರ್‌ಪ್ಲೇನಲ್ಲಿಯೇ ಪವರ್ ಕಳೆದುಕೊಂಡಿತು. ಪರಿಣಾಮವಾಗಿ, ತಂಡವು ಪಂದ್ಯದ ಆರಂಭದಲ್ಲಿಯೇ ಅಂದರೆ 4 ಓವರ್​ಗಳ ಒಳಗೆಯೇ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಬೇಕಾಯಿತು.

8 ಎಸೆತಗಳಲ್ಲಿ 3 ವಿಕೆಟ್‌

ಎಂದಿನಂತೆ ಸಿಎಸ್​ಕೆ ತಂಡ ಉತ್ತಮ ಆರಂಭ ಪಡೆಯುವಲ್ಲಿ ಮತ್ತೊಮ್ಮೆ ಎಡವಿತು. ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್ ಕೇವಲ 15 ಎಸೆತಗಳಲ್ಲಿ 11 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಓವರ್‌ನಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಉರ್ವಿಲ್ ಪಟೇಲ್ ಕೂಡ ರಬಾಡಗೆ ಬಲಿಯಾದರು. ಹೀಗಾಗಿ ಸಿಎಸ್​ಕೆ ಒಂದೇ ಓವರ್​​ನಲ್ಲಿ ಎರಡು ವಿಕೆಟ್ ಕಳೆದುಕೊಂಡಿತು. ಹೀಗಾಗಿ ಸಿಎಸ್​​ಕೆ ಐದನೇ ಓವರ್​ನಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉರ್ವಿಲ್ ಪಟೇಲ್ ಅವರನ್ನು ಕಣಕ್ಕಿಳಿಸಬೇಕಾಯಿತು.

ಪರಿಣಾಮಕಾರಿಯಾಗದ ಇಂಪ್ಯಾಕ್ಟ್ ಪ್ಲೇಯರ್

ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಉರ್ವಿಲ್ ಪಟೇಲ್ ಕೂಡ ತಂಡಕ್ಕೆ ನೆರವಾಗಲಿಲ್ಲ. ಸಿರಾಜ್ ಬೌಲ್ ಮಾಡಿದ ಐದನೇ ಓವರ್​ನಲ್ಲಿ ಸರ್ಫರಾಜ್ ಖಾನ್ ಶೂನ್ಯಕ್ಕೆ ಔಟಾದರು. ಹೀಗಾಗಿ, ಸಿಎಸ್‌ಕೆ ಕೇವಲ 8 ಎಸೆತಗಳಲ್ಲಿ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಶೂನ್ಯಕ್ಕೆ ಔಟಾದ ಸರ್ಫರಾಜ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಉರ್ವಿಲ್ ಪಟೇಲ್ ಅವರನ್ನು ಸಿಎಸ್​​ಕೆ ಬ್ಯಾಟಿಂಗ್​ಗೆ ಇಳಿಸಿತು. ಗಮನಿಸಬೇಕಾದ ಸಂಗತಿಯೆಂದರೆ, ಸಿಎಸ್​ಕೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಇಷ್ಟು ಬೇಗ ಕಣಕ್ಕಿಳಿಸಿದ್ದು, ಈ ಆವೃತ್ತಿಯಲ್ಲಿ ಇದು ಎರಡನೇ ಬಾರಿ.

CSK vs GT IPL 2026 Live Score: ಗುಜರಾತ್​ಗೆ 159 ರನ್ ಗುರಿ

ಇದಕ್ಕೂ ಮೊದಲು, ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಲಾಗಿತ್ತು. ಆಗಲೂ ತಂಡವು ನಾಲ್ಕನೇ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಕಣಕ್ಕಿಳಿಸಿತ್ತು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಆ ಪಂದ್ಯವನ್ನು ಸೋತಿತ್ತು. ಇನ್ನು ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ಉರ್ವಿಲ್ ಪಟೇಲ್ ಕೂಡ ಯಾವುದೇ ಪರಿಣಾಮ ಬೀರದೆ ಪೆವಿಲಿಯನ್ ಸೇರಿಕೊಂಡರು. ಉರ್ವಿಲ್ ಪಟೇಲ್ 3 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 4 ರನ್ ಗಳಿಸಲಷ್ಟೇ ಶಕ್ತರಾಗಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕಬಳ್ಳಾಪುರ ಜನಿವಾರ ಜಟಾಪಟಿ: ಪೊಲೀಸರು ಮನವಿ ಮಾಡಿದ್ರೂ ದೂರು ನೀಡಲು ಪರೀಕ್ಷಾರ್ಥಿ ಹಿಂದೇಟು – Kannada News | Chikkaballapur Janivara Row: Examinee Yet to File Complaint

ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್Image Credit source: tv9 kannada

ಚಿಕ್ಕಬಳ್ಳಾಪುರ, ಏಪ್ರಿಲ್​ 26: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ (janivara) ಕತ್ತರಿಸಿದ ವಿಚಾರ ಜಿಲ್ಲೆಯಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂಬಂಧ ದೂರು ನೀಡಲು ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್ ಮತ್ತು ಆತನ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದರೂ, ಸುಪ್ರೀತ್ ಮತ್ತು ಆತನ ಪೋಷಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಪರೀಕ್ಷೆ ನಡೆದ ನಾಗಾರ್ಜುನ ಪಿ.ಯು ಕಾಲೇಜಿನ ಆಡಳಿತ ಮಂಡಳಿಯು ಸುಪ್ರೀತ್ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ನಂದಿಗಿರಿಧಾಮ ಪೊಲೀಸರಿಗೆ ಪ್ರಕರಣ ಗೊಂದಲ ಸೃಷ್ಟಿಸಿದೆ.

ವೈಯಕ್ತಿಕವಾಗಿ ದೂರು ನೀಡಿದರೆ ದಾಖಲು ಮಾಡಬಹುದು. ಆದರೆ ಬ್ರಾಹ್ಮಣ ಮಹಾಸಭಾದಿಂದ ಮನವಿ ನೀಡಿದ್ದಾರೆ ಮನವಿಯನ್ನು ದೂರು ಎಂದು ಪರಿಗಣಿಸಲು ಆಗಲ್ಲ. ಮನವಿ ಪತ್ರದಲ್ಲಿ ಹತ್ತಾರು ಜನ ಸಹಿ ಮಾಡಿದ್ದಾರೆ, ಯಾರನ್ನು ದೂರುದಾರರೆಂದು ಪರಿಗಣಿಸುವುದು ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಜನಿವಾರ ತಾನೇ ಮರಕ್ಕೆ ನೇತು ಹಾಕಿದ ಪರೀಕ್ಷಾರ್ಥಿ: ಸಿಸಿಟಿವಿಯಲ್ಲಿ ಸತ್ಯ ಬಯಲು

ಆರಂಭದಲ್ಲಿ ಸುಪ್ರೀತ್, “ತನ್ನ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯಲಾಗಿತ್ತು, ಅದನ್ನು ತಾನು ಹುಡುಕಿ ತಂದೆ” ಎಂದು ಹೇಳಿಕೆ ನೀಡಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೇರೆಯೇ ಇದೆ. ಜನಿವಾರವನ್ನು ಕತ್ತರಿಸಿದ ನಂತರ ಸುಪ್ರೀತ್ ಅದನ್ನು ತಾನೇ ಮರಕ್ಕೆ ನೇತು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ

ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀತ್ ಕಡೆಯಿಂದ ವಿಡಿಯೋ ಮತ್ತು ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಯಾರಾದರೂ ಪ್ರಶ್ನಿಸಿದರೆ ಉತ್ತರಿಸಲು ಈ ದಾಖಲೆಯನ್ನು ಸಂಗ್ರಹಿಸಲಾಗಿದೆ.

ಇಡೀ ಘಟನೆ ಮರುಸೃಷ್ಟಿ

ಇನ್ನು ನಂದಿಗಿರಿಧಾಮ ಪೊಲೀಸರು ಪರೀಕ್ಷಾರ್ಥಿ ಸುಪ್ರೀತ್​​ನನ್ನು ನಾಗಾರ್ಜುನ ಪಿ.ಯು. ಕಾಲೇಜ್​​ಗೆ ಕರೆಸಿ ಇಡೀ ಘಟನೆಯನ್ನು ಮರುಸೃಷ್ಟಿ ಮಾಡಿದ್ದಾರೆ. ಹೇಗೆ ಬಂದೆ, ಎಲ್ಲಿಗೆ ಬಂದೆ, ಯಾರು ಇದ್ದರು, ಹೇಗೆ ಜನಿವಾರ ತೆಗೆದೆ, ಯಾರು ಕತ್ತರಿಸಿದರು, ಹೇಗೆ ಮರದ ಮೇಲೆ ಹಾಕಿದೆ ಎಂದು ಮರು ಸೃಷ್ಟಿ ಮಾಡಿದ್ದಾರೆ.

ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ: ಸಚಿವ ಡಾ.ಎಂ.ಸಿ.ಸುಧಾಕರ್

ಇನ್ನು ಈ ವಿಚಾರವಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಜನಿವಾರದಲ್ಲಿ ಏನು ಇರುತ್ತೆ, ಸಿಬ್ಬಂದಿ ಯಾಕೆ ಅದನ್ನು ತೆಗೆಸಬೇಕಿತ್ತು. ಇದೇ ಕಾರಣಕ್ಕೆ ಸಮವಸ್ತ್ರ ಸಂಹಿತಾಧಿಕಾರಿ ನೇಮಕ ಮಾಡಲಾಗಿತ್ತು. ಮನಸ್ಥಿತಿ ಸರಿಯಿಲ್ಲದಿರುವವರು ಈ ರೀತಿ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ ಪರೀಕ್ಷಾರ್ಥಿ ಪೊಲೀಸರಿಗೆ ದೂರು ನೀಡಿಲ್ಲವೆನ್ನುವ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ

ಚಿಕ್ಕಬಳ್ಳಾಪುರ ಚಿಂತಾಮಣಿ ನಿವಾಸಿ ಸುಪ್ರೀತ್​ ಮೊನ್ನೆ ಪ್ರತಿಷ್ಠಿತ ನಾಗಾರ್ಜುನ ಪಿ.ಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಹೋಗಿದ್ದ. ಆ ವೇಳೆ ಕಾಲೇಜಿನ ಸಿಬ್ಬಂದಿ, ಪರಿಶೀಲನೆ ವೇಳೆ ವಿದ್ಯಾರ್ಥಿ ಧರಿಸಿದ್ದ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರಂತೆ. ಹೀಗಂತ ವಿದ್ಯಾರ್ಥಿಯೇ ಆರೋಪ ಮಾಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ.

Source link

ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ – Kannada News | Sa Ra Govindu lashes out on Chetan Ahimsa for his duel personality

ನಟ ಚೇತನ್ ಅಹಿಂಸ, ಡಾ ರಾಜ್​ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಮಾಡಿದ್ದ ಟೀಕೆಗೆ ಭಾರಿ ಆಕ್ರೋಶ ಎದುರಾಗಿತ್ತು. ನಿನ್ನೆ ಹಲವು ಕನ್ನಡಪರ ಸಂಘಟನೆಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ನಟ ಚೇತನ್ ಅಹಿಂಸ ಅವರು, ಕರವೇ ಅಧ್ಯಕ್ಷ ಶಿವರಾಮೇಗೌಡ ಎದುರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೆ ಇಂದು (ಏಪ್ರಿಲ್ 26) ಮತ್ತೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್​ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ ತಮ್ಮಿಂದ ಒತ್ತಾಯಪೂರ್ವಕ ಕ್ಷಮಾಪಣೆ ಕೇಳಿಸಲಾಗಿದೆ’ ಎಂದಿದ್ದಾರೆ. ಚೇತನ್ ಅವರ ಈ ಇಬ್ಬಂದಿತನವನ್ನು ಕಟು ಪದಗಳಲ್ಲಿ ಸಾರಾ ಗೋವಿಂದು ಟೀಕೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ನಿಮ್ಮ ಸಿನಿಮಾನಲ್ಲಿ ಹೀರೋ ಯಾರು?’ ಎಂದವರಿಗೆ ಸಮಂತಾ ಖಡಕ್ ಉತ್ತರ – Kannada News | Samantha Ruth Prabhu says she is hero in her movie Maa Inti Bangaram

ಸಮಂತಾ ಋತ್ ಪ್ರಭು (Samantha Ruth Prabhu), ದಕ್ಷಿಣದ ಸ್ಟಾರ್ ನಟಿ ಆಗಿ ಮೆರೆದವರು. ಕೆಲ ವರ್ಷಗಳ ಹಿಂದಿನ ವರೆಗೂ ಸಮಂತಾ ಕೈಯಲ್ಲಿ ಹಲವು ಸಿನಿಮಾ ಅವಕಾಶಗಳಿದ್ದವು. ಒಂದರ ಹಿಂದೊಂದು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದರು. ಆದರೆ ವಿಚ್ಛೇದನ, ಅದಾದ ಬಳಿಕ ತೀವ್ರ ಅನೋರಾಗ್ಯ, ಅದರ ಬಳಿಕ ಸಮಂತಾರ ವ್ಯಕ್ತಿತ್ವದಲ್ಲಾದ ಭಾರಿ ಬದಲಾವಣೆ ಇವುಗಳೆಲ್ಲದರ ನಂತರ ಹಠಾತ್ತನೆ ಸಮಂತಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ. ಇದೀಗ ಸಮಂತಾಗೆ ಅವರ ಹಾಲಿ ಪತಿ ಮಾತ್ರವೇ ಗತಿ ಎಂಬಂತಾಗಿದೆ. ಇದೀಗ ಸಮಂತಾ ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಪ್ರಚಾರವನ್ನು ಸಮಂತಾ ಈಗಾಗಲೇ ಆರಂಭಿಸಿದ್ದು, ಇದೀಗ ಸಮಂತಾ ಸಂದರ್ಶನವೊಂದರಲ್ಲಿ ‘ಮಾ ಇಂಟಿ ಬಂಗಾರಂ’ ಬಗ್ಗೆ ಮಾತನಾಡಿದ್ದಾರೆ. ವಿಶೇಷವೆಂದರೆ ಈ ಸಂದರ್ಶನದಲ್ಲಿ ‘ನಿಮ್ಮ ಸಿನಿಮಾದ ‘ಹೀರೋ’ ಯಾರು?’ ಎಂಬ ಸಂದರ್ಶಕರ ಪ್ರಶ್ನೆಗೆ ಖಡಕ್ ಆದ ಉತ್ತರವನ್ನು ನೀಡುತ್ತಾ, ‘ನನ್ನ ಸಿನಿಮಾಕ್ಕೆ ನಾನೇ ಹೀರೋ’ ಎಂದು ಹೇಳಿದ್ದಾರೆ ನಟಿ ಸಮಂತಾ. ಮಾತ್ರವಲ್ಲದೆ ಸಿನಿಮಾದ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿರುವ ಸಮಂತಾ, ಸಾಕಷ್ಟು ವಿಷಯಗಳನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ವಿವಿಧ ಅವತಾರಗಳಲ್ಲಿ ಸಮಂತಾ: ‘ಮಾ ಇಂಟಿ ಬಂಗಾರಂ’ ವಿಡಿಯೋ

ಸಮಂತಾರನ್ನು ತೆಲುಗಿನ ಖ್ಯಾತ ಹಾಸ್ಯನಟ ಮತ್ತು ಸಮಂತಾರ ಆತ್ಮೀಯ ಗೆಳೆಯರೂ ಆಗಿರುವ ವೆನ್ನೆಲ ಕಿಶೋರ್ ಸಂದರ್ಶನ ಮಾಡಿದ್ದು, ಸಂದರ್ಶನದ ವೇಳೆ ನಿಮ್ಮೆ ಸಿನಿಮಾಕ್ಕೆ ಹೀರೋ ಯಾರು? ಎಂದು ಕೇಳಿದ್ದಾರೆ ಅದಕ್ಕೆ ಸಮಂತಾ, ವೆನ್ನೆಲ ಕಿಶೋರ್​ಗೆ ‘ಹೀರೋ’ ಪದದ ಅರ್ಥ ಏನೆಂದು ಹೇಳಿದ್ದಾರೆ. ಚಾಟ್ ಜಿಪಿಟಿಯಿಂದ ಉತ್ತರ ಹೇಳಿಸಿದ ಸಮಂತಾ, ‘ಹೀರೋ’ ಎಂದರೆ ಪುರುಷನೇ ಆಗಬೇಕಿಲ್ಲ, ಅದು ಯಾವ ಲಿಂಗಕ್ಕೂ ಸೇರದ ಪದ’, ನನ್ನ ಸಿನಿಮಾನಲ್ಲಿ ನಾನೇ ‘ಹೀರೋ’ ಎಂದಿದ್ದಾರೆ ನಟಿ. ಹಾಗಿದ್ದರೆ ‘ಹೀರೋಯಿನ್’ ಯಾರು? ಎಂಬ ಪ್ರಶ್ನೆಗೂ ಸಹ ಸಮಂತಾ ಅದೇ ರೀತಿಯ ಉತ್ತರವನ್ನು ನೀಡಿದ್ದಾರೆ. ತಮ್ಮ ಸಿನಿಮಾನಲ್ಲಿ ಹೀರೋ, ಹೀರೋಯಿನ್ ಎರಡೂ ನಾನೇ ಎಂದಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾ, ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಸಮಂತಾ ಕುಟುಂಬವೊಂದರ ಸೊಸೆಯಾಗಿ ನಟಿಸಿದ್ದಾರೆ. ಆದರೆ ಸಮಂತಾ, ಸೊಸೆಯಾಗಿದ್ದುಕೊಂಡೆ ಸಖತ್ ಆಕ್ಷನ್ ದೃಶ್ಯಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ. ಸಖತ್ ಫೈಟ್ ದೃಶ್ಯಗಳಲ್ಲಿ ಸಹ ಭಾಗಿ ಆಗಿದ್ದಾರೆ. ಆದರೆ ಆ ಕುಟುಂಬದವರು ಸಮಂತಾರನ್ನು ಮುಗ್ಧ ಸೊಸೆ ಎಂದೇ ನೋಡುತ್ತಿದ್ದಾರೆ. ಸಿನಿಮಾವನ್ನು ಸಮಂತಾರ ಪತಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ನಂದಿನಿ ರೆಡ್ಡಿ. ಸಿನಿಮಾದ ಚಿತ್ರೀಕರಣ ಶಿವಮೊಗ್ಗನ ತೀರ್ಥಹಳ್ಳಿಯಲ್ಲಿ ಮಾಡಲಾಗಿದೆ. ಸಿನಿಮಾ ಮೇ 15 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ‘ಅಂಬಾರಿ’ ದರ್ಬಾರ್: ಬಿಸಿಲಲ್ಲೂ ಡಬಲ್ ಡೆಕ್ಕರ್ ಬಸ್ ಏರಿ ಸಿಟಿ ಬ್ಯೂಟಿ ನೋಡಲು ಜನವೋ ಜನ! – Kannada News | Ambari Double Decker Bus: Bangalore’s Hottest City Tour Experience by KSTDC

ಸಿಲಿಕಾನ್ ಸಿಟಿಯಲ್ಲಿ ಸೂರ್ಯನ ಪ್ರತಾಪ ಜೋರಾಗಿದ್ದರೂ, ಬೆಂಗಳೂರಿಗರ ಉತ್ಸಾಹ ಮಾತ್ರ ಕುಗ್ಗಿಲ್ಲ. ಬಿಸಿಲ ಬೇಗೆಯ ನಡುವೆಯೂ ಪ್ರವಾಸೋದ್ಯಮ ಇಲಾಖೆ ಪರಿಚಯಿಸಿರುವ ‘ಅಂಬಾರಿ’ (Ambari) ಡಬಲ್ ಡೆಕ್ಕರ್ ಬಸ್ ಏರಿ ನಗರದ ಸೌಂದರ್ಯ ಸವಿಯಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

Source link

ಭಾರತದ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕದ ಶೇ. 123ರಷ್ಟು ಆ್ಯಂಟಿ ಡಂಪಿಂಗ್ ಡ್ಯೂಟಿ; ಯಾಕೆ ಈ ಕ್ರಮ? – Kannada News | India US Solar Trade War: US Anti Dumping Duty Challenges Indian Exporters

ನವದೆಹಲಿ, ಏಪ್ರಿಲ್ 26: ಭಾರತದಿಂದ ರಫ್ತಾಗುವ ಸೋಲಾರ್ ಉತ್ಪನ್ನಗಳ ಮೇಲೆ ಅಮೆರಿಕ ಸರ್ಕಾರವು ಶೇಕಡಾ 123.5 ರಷ್ಟು ‘ಆಂಟಿ-ಡಂಪಿಂಗ್ ಸುಂಕ’ (Anti-Dumping Duty) ವಿಧಿಸಿದೆ. ಈ ನಿರ್ಧಾರವು ಭಾರತೀಯ ಸೌರಶಕ್ತಿ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಮುಂದ್ರಾ ಸೋಲಾರ್ ಪಿವಿ, ಮುಂದ್ರಾ ಸೋಲಾರ್ ಎನರ್ಜಿ, ಕೋವಾ ಕಂಪನಿ ಮತ್ತು ಪ್ರೀಮಿಯರ್ ಎನರ್ಜಿ ಫೋಟೋವೊಲ್ಟಾಯಿಕ್ ಕಂಪನಿಗಳ ಉತ್ಪನ್ನಗಳು ನ್ಯಾಯಯುತ ಬೆಲೆಗಿಂತ ಕಡಿಮೆಗೆ ಅಮೆರಿಕದಲ್ಲಿ ಮಾರಲಾಗುತ್ತಿದ್ದುದು ಅಲ್ಲಿಯ ಸರ್ಕಾರದ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಇದರಿಂದಾಗಿ ಡಂಪಿಂಗ್ ವಿರೋಧಿ ಸುಂಕವನ್ನು ಹೇರಲಾಗಿದೆ. ಭಾರತ ಮಾತ್ರವಲ್ಲ, ಇನ್ನೂ ಬೇರೆ ಬೇರೆ ದೇಶಗಳ ಸೋಲಾರ್ ಉತ್ಪನ್ನಗಳಿಗೂ ಇದೇ ಕ್ರಮ ತೆಗೆದುಕೊಳ್ಳಲಾಗಿದೆ.

ಏನಿದು ಆಂಟಿ-ಡಂಪಿಂಗ್ ಸುಂಕ?

ಯಾವುದಾದರೂ ಒಂದು ದೇಶವು ತನ್ನಲ್ಲಿ ಉತ್ಪತ್ತಿಯಾಗುವ ವಸ್ತುವನ್ನು ಅದರ ಮೂಲ ಬೆಲೆಗಿಂತ ಅಥವಾ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ವಿದೇಶಗಳಿಗೆ ರಫ್ತು ಮಾಡಿದಾಗ ಅದನ್ನು ‘ಡಂಪಿಂಗ್’ ಎಂದು ಕರೆಯಲಾಗುತ್ತದೆ. ಹೀಗೆ ಅಗ್ಗದ ಬೆಲೆಗೆ ವಸ್ತುಗಳು ಬರುವುದರಿಂದ ಆ ದೇಶದ ಸ್ಥಳೀಯ ಕಂಪನಿಗಳಿಗೆ ನಷ್ಟವಾಗುತ್ತದೆ. ಇದನ್ನು ತಡೆಗಟ್ಟಲು ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಸಮಾನ ಸ್ಪರ್ಧೆ ಏರ್ಪಡಿಸಲು ಆಮದು ಮಾಡಿಕೊಳ್ಳುವ ದೇಶವು ವಿಧಿಸುವ ವಿಶೇಷ ತೆರಿಗೆಯೇ ‘ಆಂಟಿ-ಡಂಪಿಂಗ್ ಸುಂಕ’.

ಅಮೆರಿಕ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ಭಾರತೀಯ ಕಂಪನಿಗಳು ಅತ್ಯಂತ ಕಡಿಮೆ ಬೆಲೆಗೆ ಸೋಲಾರ್ ಪ್ಯಾನಲ್ ಮತ್ತು ಸೆಲ್‌ಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತಿವೆ. ಇದರಿಂದ ಅಮೆರಿಕದ ಸ್ಥಳೀಯ ಸೋಲಾರ್ ಕಂಪನಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ವಾಣಿಜ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರು; ಅಶೋಕ್ ಕುಮಾರ್ ಲಾಹಿರಿ ಯಾರು?

ಭಾರತ ಸರ್ಕಾರವು ತನ್ನ ಸೋಲಾರ್ ಉತ್ಪಾದಕರಿಗೆ ನೀಡುತ್ತಿರುವ ಸಬ್ಸಿಡಿಗಳಿಂದಾಗಿ ಅವರು ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಲು ಸಾಧ್ಯವಾಗುತ್ತಿದೆ ಎಂಬುದು ಅಮೆರಿಕದ ವಾದ.

ಭಾರತ ಸೇರಿದಂತೆ ಕಾಂಬೋಡಿಯಾ, ಮಲೇಷಿಯಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ದೇಶಗಳಿಂದ ಬರುವ ಸೋಲಾರ್ ಉತ್ಪನ್ನಗಳ ಮೇಲೆಯೂ ಇಂತಹ ನಿರ್ಬಂಧಗಳನ್ನು ಹೇರಲು ಅಮೆರಿಕ ಮುಂದಾಗಿದೆ.

ಭಾರತದ ಮೇಲಾಗುವ ಪರಿಣಾಮಗಳು:

ಅಮೆರಿಕವು ಭಾರತೀಯ ಸೋಲಾರ್ ಉತ್ಪನ್ನಗಳಿಗೆ ದೊಡ್ಡ ಮಾರುಕಟ್ಟೆಯಾಗಿದೆ. ಈಗ ಶೇ. 123 ರಷ್ಟು ಭಾರಿ ಸುಂಕ ವಿಧಿಸಿರುವುದರಿಂದ ಭಾರತದ ಸೋಲಾರ್ ಉತ್ಪನ್ನಗಳ ಬೆಲೆ ಅಮೆರಿಕದಲ್ಲಿ ದುಪ್ಪಟ್ಟಾಗಲಿದೆ. ಇದು ಭಾರತದ ರಫ್ತು ಪ್ರಮಾಣವನ್ನು ಕುಗ್ಗಿಸಬಹುದು. ಭಾರತದ ಪ್ರಮುಖ ಸೋಲಾರ್ ಕಂಪನಿಗಳ ಲಾಭಾಂಶದ ಮೇಲೆ ಇದು ನೇರ ಪರಿಣಾಮ ಬೀರಲಿದೆ.

ಇದನ್ನೂ ಓದಿ: ರುಪಾಯಿ ಮೌಲ್ಯ ಕುಸಿತ; ಆತಂಕ ಪಡಬೇಕಿಲ್ಲ; ದೀರ್ಘಾವಧಿ ಹೂಡಿಕೆಗೆ ಒಳ್ಳೆಯ ಅವಕಾಶ: ಸಿಇಎ ಅನಂತನಾಗೇಶ್ವರನ್

ಭಾರತೀಯ ರಫ್ತುದಾರರು ಈ ನಿರ್ಧಾರದ ವಿರುದ್ಧ ಅಂತರರಾಷ್ಟ್ರೀಯ ವ್ಯಾಪಾರ ಸಂಸ್ಥೆಗಳಲ್ಲಿ ಅಥವಾ ಅಮೆರಿಕದ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಭಾರತ ಸರ್ಕಾರವು ಈ ವಿಚಾರವಾಗಿ ಅಮೆರಿಕದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸುಂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವ ಸಾಧ್ಯತೆಯಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಚೀನಾ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ತನ್ನ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸಲು ಅಮೆರಿಕ ಇಂತಹ ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು – Kannada News | Chikkamagaluru: daughter Ends Life After Scolding From Father About Sambar

ಚಿಕ್ಕಮಗಳೂರು, ಏಪ್ರಿಲ್​ 26: ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಪುತ್ರಿ ನೇಣಿಗೆ ಶರಣಾಗಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೌಜನ್ಯ ತಂದೆ ನಟೇಶ್, ತರಕಾರಿ ತಂದು ಸಾಂಬಾರ್ ಮಾಡಲು ಹೇಳಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಂದಾಗ ಸಾಂಬಾರ್ ಮಾಡಿಲ್ಲವೆಂದು ಬೈದಿದ್ದಾರೆ. ಅತ್ತ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ ಇತ್ತ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link