
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 8, ಭಾನು ವರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷದ ಪಂಚಮಿ, ಸ್ವಾತಿ ನಕ್ಷತ್ರ, ಧ್ರುವ ಯೋಗ ಮತ್ತು ಕೌಲವ ಕರಣ ಇರುತ್ತದೆ. ರಾಹುಕಾಲ ಸಂಜೆ 4 ಗಂಟೆ 59 ನಿಮಿಷದಿಂದ 6 ಗಂಟೆ 29 ನಿಮಿಷದವರೆಗೆ ಇರಲಿದೆ. ಬೆಳಗಿನ ಜಾವ 11 ಗಂಟೆ 1 ನಿಮಿಷದಿಂದ 12 ಗಂಟೆ 30 ನಿಮಿಷದವರೆಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಹಾಗೂ ಶುಭಕಾಲ ಇರಲಿದೆ.
ಮಾರ್ಚ್ 8 ಭಾನುವಾರವು ಸೂರ್ಯನ ದಿನವಾಗಿದ್ದು, ಸರ್ಕಾರಿ ರಜೆಯ ದಿನವೂ ಆಗಿದೆ. ಈ ದಿನ ರಂಗ ಪಂಚಮಿ ಇರುವುದರಿಂದ ಕಾರ್ಯಸಿದ್ಧಿಗೆ ಶುಭ ಎಂದು ತಿಳಿಸಲಾಗಿದೆ. ಪಂಚಮಿ ತಿಥಿಯು ಎಲ್ಲ ರಾಶಿಗಳವರಿಗೂ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.