Karnataka Dam Water Level: ಕಬಿನಿ, ಹೇಮಾವತಿ ಜಲಾಶಯಗಳು ಕಳೆದ ವರ್ಷಕ್ಕಿಂತ ಖಾಲಿ ಖಾಲಿ! – Kannada News | Karnataka Dam Water Level Today: Kabini and KRS Levels Drop Compared to Last Year

ಬೆಂಗಳೂರು, ಜುಲೈ 18: ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆ ಎದುರಾಗಿದ್ದು, ಕಬಿನಿ, ಹೇಮಾವತಿ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷದಷ್ಟು ಏರಿಕೆ ಕಾಣುತ್ತಿಲ್ಲ. ಬೆಂಗಳೂರಿಗೆ ನೀರು ಪೂರೈಸುವ ಪ್ರಮುಖ ಡ್ಯಾಂ ಕೆಆರ್​​ಎಸ್​ಗೂ ಸಹ ಒಳಹರಿವು ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

1. ಕಬಿನಿ ಜಲಾಶಯ (ಮೈಸೂರು)

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಜಲಾಶಯದ ಕಾವಲು ಪ್ರದೇಶದಲ್ಲಿ 10 ಮಿ.ಮೀ. ಮಳೆ ದಾಖಲಾಗಿದೆ.

  • ಇಂದಿನ ನೀರಿನ ಮಟ್ಟ: 71.16 ಅಡಿ (ಕಳೆದ ವರ್ಷ ಇದೇ ದಿನ: 81.51 ಅಡಿ)
  • ಇಂದಿನ ನೀರಿನ ಸಂಗ್ರಹ: 12.25 ಟಿಎಂಸಿ (ಕಳೆದ ವರ್ಷ: 18.55 ಟಿಎಂಸಿ)
  • ಒಳಹರಿವು: 1,354 ಕ್ಯೂಸೆಕ್ (ಕಳೆದ ವರ್ಷ: 24,180 ಕ್ಯೂಸೆಕ್)
  • ಹೊರಹರಿವು: 500 ಕ್ಯೂಸೆಕ್ (ಕಳೆದ ವರ್ಷ: 17,292 ಕ್ಯೂಸೆಕ್)

2. ಹೇಮಾವತಿ ಜಲಾಶಯ (ಹಾಸನ)

ಹಾಸನ ತಾಲ್ಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ಕಳೆದ ವರ್ಷಕ್ಕಿಂತ ಕಡಿಮೆ ನೀರಿದೆ.

  • ಗರಿಷ್ಠ ಮಟ್ಟ: 2922 ಅಡಿ (ಸಾಮರ್ಥ್ಯ: 37 ಟಿಎಂಸಿ)
  • ಇಂದಿನ ನೀರಿನ ಮಟ್ಟ: 2904.04 ಅಡಿ
  • ಇಂದಿನ ನೀರಿನ ಸಂಗ್ರಹ: 22.402 ಟಿಎಂಸಿ (ಕಳೆದ ವರ್ಷ ಇದೇ ದಿನ: 2920.97 ಅಡಿ, 36.108 ಟಿಎಂಸಿ)
  • ಒಳಹರಿವು: 1,387 ಕ್ಯೂಸೆಕ್ (ಕಳೆದ ವರ್ಷ: 9,491 ಕ್ಯೂಸೆಕ್)
  • ಹೊರಹರಿವು: 300 ಕ್ಯೂಸೆಕ್ (ಕಳೆದ ವರ್ಷ: 6,200 ಕ್ಯೂಸೆಕ್)

3. ಕೆ.ಆರ್.ಎಸ್ ಜಲಾಶಯ (ಮಂಡ್ಯ)

ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೃಷ್ಣರಾಜಸಾಗರ (KRS) ಜಲಾಶಯದ ಇಂದಿನ ಮಟ್ಟ ಹೀಗಿದೆ:

  • ಗರಿಷ್ಠ ಮಟ್ಟ: 124.80 ಅಡಿ (ಸಾಮರ್ಥ್ಯ: 49.452 ಟಿಎಂಸಿ)
  • ಇಂದಿನ ನೀರಿನ ಮಟ್ಟ: 92.88 ಅಡಿ
  • ಇಂದಿನ ನೀರಿನ ಸಂಗ್ರಹ: 17.727 ಟಿಎಂಸಿ
  • ಒಳಹರಿವು: 1,144 ಕ್ಯೂಸೆಕ್
  • ಹೊರಹರಿವು: 1,344 ಕ್ಯೂಸೆಕ್

4. ಆಲಮಟ್ಟಿ ಜಲಾಶಯ (ವಿಜಯಪುರ)

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಲ್ಲಿ ಒಳಹರಿವು ಸಾಧಾರಣವಾಗಿದೆ.

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 517.42 ಮೀಟರ್
  • ಒಳಹರಿವು: 6,091 ಕ್ಯೂಸೆಕ್
  • ಹೊರಹರಿವು: 3,012 ಕ್ಯೂಸೆಕ್

5. ತುಂಗಭದ್ರಾ ಜಲಾಶಯ (ಹೊಸಪೇಟೆ)

ಹೊಸಪೇಟೆಯ ತುಂಗಭದ್ರಾ ಜಲಾಶಯದ ಇಂದಿನ ನಿಖರ ಮಾಹಿತಿ ಇಲ್ಲಿದೆ:

  • ಗರಿಷ್ಠ ಮಟ್ಟ (F.R.L): 1633.00 ಅಡಿ (ಸಾಮರ್ಥ್ಯ: 105.788 ಟಿಎಂಸಿ)
  • ಇಂದಿನ ನೀರಿನ ಮಟ್ಟ: 1603.37 ಅಡಿ
  • ಇಂದಿನ ನೀರಿನ ಸಂಗ್ರಹ: 26.199 ಟಿಎಂಸಿ
  • ಲೈವ್ ಒಳಹರಿವು: 2,850 ಕ್ಯೂಸೆಕ್ (ಕಳೆದ 24 ಗಂಟೆಗಳ ಸರಾಸರಿ ಒಳಹರಿವು: 3,212 ಕ್ಯೂಸೆಕ್)
  • ಹೊರಹರಿವು: ಕಾಲುವೆಗಳಿಗೆ 2,166 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ನದಿಗೆ ಸದ್ಯ ಶೂನ್ಯ (0) ಹೊರಹರಿವು ಇದೆ.

ಪ್ರಮುಖ ಜಲಾಶಯಗಳಾದ ಕಬಿನಿ ಮತ್ತು ಹೇಮಾವತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ತೀವ್ರವಾಗಿ ಕುಸಿದಿರುವುದು ಆತಂಕ ಮೂಡಿಸಿದೆ. ಮುಂಗಾರು ಮಳೆ ಚುರುಕುಗೊಂಡರೆ ಮಾತ್ರ ಜಲಾಶಯಗಳಿಗೆ ಹೆಚ್ಚಿನ ನೀರು ಹರಿದುಬರಲಿದ್ದು, ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *