Karnataka Weather Report: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ – Kannada News | Karnataka Weather Update: Shimoga’s Honnethalu and Kodagu’s Birunani Record Highest Rainfall of 178.5 mm on July 6

ಬೆಂಗಳೂರು, ಜುಲೈ 07: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿನ ನದಿ ಮತ್ತು ಜಲಪಾತಗಳಿಗೆ ಜೀವಕಳೆ ಮರಳಿ ಬಂದಿದ್ದು, ಗಾಳಿ ಮಳೆ ಹಲವೆಡೆ ಸಾಲು ಸಾಲು ಅನಾಹುತಗಳನ್ನೂ ಸೃಷ್ಟಿಸಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಸುರಿದ ವರ್ಷಧಾರೆಯ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಮತ್ತು ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ ಅತಿ ಹೆಚ್ಚು, ಅಂದರೆ ತಲಾ 178.5 ಮಿ.ಮೀ. ಮಳೆಯಾಗಿದೆ.

ಕರ್ನಾಟಕದಲ್ಲಿ ಜುಲೈ 6ರಂದು ಅಧಿಕ ಮಳೆಯಾದ ಸ್ಥಳಗಳು

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೋವಿನಕೊಪ್ಪದಲ್ಲಿ 177 ಮಿ.ಮೀ, ಬೆಳಗಾವಿಯ ಖಾನಾಪುರದಲ್ಲಿ 141 ಮಿ.ಮೀ, ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 130 ಮಿ.ಮೀ, ಉಡುಪಿಯ ಕುಂದಾಪುದ ಮಡಾಮಕ್ಕಿಯಲ್ಲಿ 102.5 ಮಿ.ಮೀ, ಧಾರವಾಡದ ಅಳ್ತಾವರ 1ರಲ್ಲಿ 38 ಮಿ.ಮೀ, ಹಾವೇರಿಯ ಹಾನಗಲ್​​ನ ಬೈಚವಳ್ಳಿಯಲ್ಲಿ 37 ಮಿ.ಮೀ, ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 160.5 ಮಿ.ಮೀ, ಹಾಸನದ ಸಕಲೇಶಪುರದ ಕ್ಯಾಮನಹಳ್ಳಿಯಲ್ಲಿ 139 ಮಿ.ಮೀ, ದಾವಣಗೆರೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ 23 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ವರುಣಾರ್ಭಟ! ಉಡುಪಿ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್​, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಹಾಗೆಯೇ ವಿಜನಗರ ಜಿಲ್ಲೆಯ ಹರಪ್ಪನಹಳ್ಳಿ ಪುಣಬಘಟ್ಟದಲ್ಲಿ 22 ಮಿ.ಮೀ, ಗದಗದ ನರಗುಂದ ತಾಲೂಕಿನ ರಡ್ಡೆರ​​ನಾಗನೂರಲ್ಲಿ 12.5 ಮಿ.ಮೀ, ಕೊಪ್ಪಳದ ಕಿನ್ನಾಳದಲ್ಲಿ 24 ಮಿ.ಮೀ, ಚಾಮರಾಜನಗರದ ಉಮ್ಮತ್ತೂರಲ್ಲಿ 15.5 ಮಿ.ಮೀ, ಬಳ್ಳಾರಿಯ ಸಂಡೂರಿನಲ್ಲಿ 13 ಮಿ.ಮೀ, ವಿಜಯಪುರದ ಚಡಚಣದ ಬರಡೊಲದಲ್ಲಿ 13 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *