ಮೋದಿಯನ್ನು ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್ – Kannada News | Election Commission issues notice to Mallikarjun Kharge over terrorist remarks against PM Modi

ನವದೆಹಲಿ, ಏಪ್ರಿಲ್ 22: ತಮಿಳುನಾಡಿನ ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು “ಭಯೋತ್ಪಾದಕ” ಎಂದು ಕರೆದಿದ್ದರು. ಈ ಹೇಳಿಕೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಇಂದು ನೋಟಿಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ನಿಮ್ಮ ನಿಲುವೇನೆಂದು ತಿಳಿಸಿ ಎಂದು ಸೂಚಿಸಿದೆ.

ಪ್ರಧಾನಿ ಮೋದಿಯನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ನಿನ್ನೆ ದೂರು ನೀಡಿತ್ತು. ಅದರ ಬೆನ್ನಲ್ಲೇ ಇಂದು ಆಯೋಗ ಖರ್ಗೆಗೆ ನೋಟಿಸ್ ನೀಡಿದೆ. ಇಂದು ಚುನಾವಣಾ ಆಯೋಗ ಖರ್ಗೆ ಅವರಿಗೆ ಕಠಿಣ ಎಚ್ಚರಿಕೆ ನೀಡಿದ್ದು, 24 ಗಂಟೆಗಳ ಒಳಗೆ ಅವರ ನಿಲುವನ್ನು ವಿವರಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ಮೋದಿಗೆ ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಕೇಂದ್ರ ಸಚಿವರನ್ನು ಒಳಗೊಂಡ ಬಿಜೆಪಿ ನಿಯೋಗವು ಚುನಾವಣಾ ಆಯೋಗವನ್ನು ಸಂಪರ್ಕಿಸಿ, ಪ್ರಧಾನಿ ಮೋದಿ ಅವರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.

ಮಂಗಳವಾರ ಚುನಾವಣೆ ನಡೆಯಲಿರುವ ತಮಿಳುನಾಡಿನ ಚೆನ್ನೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಯನ್ನು “ಭಯೋತ್ಪಾದಕ” ಎಂದು ಕರೆದ ನಂತರ ಈ ವಿವಾದ ಭುಗಿಲೆದ್ದಿತು. ಅವರ ಹೇಳಿಕೆಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಸಚಿವರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದ ಮಲ್ಲಿಕಾರ್ಜುನ ಖರ್ಗೆ; ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

“ಪೆರಿಯಾರ್, ಡಾ. ಅಂಬೇಡ್ಕರ್, ಅಣ್ಣಾದೊರೈ, ಕಮಲರಾಜ್ ಮತ್ತು ಕಲೈಗ್ನಾರ್ ಈ ಜನರು ಮಹಿಳಾ ಮೀಸಲಾತಿ, ನ್ಯಾಯ, ಸಮಾನತೆ ಮತ್ತು ಭ್ರಾತೃತ್ವಕ್ಕಾಗಿ ಹೋರಾಡಿದವರು. ಪ್ರಧಾನಿ ಮೋದಿ ಈ ತತ್ವಗಳಿಗೆ ಬದ್ಧರಲ್ಲ. ಪೆರಿಯಾರ್ ಅವರನ್ನು ಪೂಜಿಸಲು ಎಐಎಡಿಎಂಕೆ ಮೋದಿಯೊಂದಿಗೆ ಹೇಗೆ ಕೈ ಜೋಡಿಸಿದರು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಮೋದಿ ಒಬ್ಬ ಭಯೋತ್ಪಾದಕ. ಅವರು ಹಾಗೂ ಅವರ ಪಕ್ಷ ಸಮಾನತೆ ಮತ್ತು ನ್ಯಾಯವನ್ನು ನಂಬುವುದಿಲ್ಲ” ಎಂದು ಖರ್ಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:24 pm, Wed, 22 April 26

Source link

ಬೆಂಗಳೂರಿನಲ್ಲಿ ಜನಗಣತಿಗೆ 6 ಸಾವಿರ ಸರ್ಕಾರಿ ನೌಕಕರು ಗೈರು: ಕೋಲಾರದಲ್ಲೂ 6 ತಹಶೀಲ್ದಾರ್​​​ಗೆ ನೋಟಿಸ್​​ – Kannada News | 6,000 Government Employees Skip Census Duty in Bengaluru; Notices Issued to 6 Tehsildars in Kolar

ಜನಗಣತಿ (ಸಂಗ್ರಹ ಚಿತ್ರ) Image Credit source: newindianexpress.com

ಬೆಂಗಳೂರು, ಏಪ್ರಿಲ್​ 22: ರಾಷ್ಟ್ರೀಯ ಜನಗಣತಿ-2026 ಬೆಂಗಳೂರಿನಲ್ಲಿ (bangaluru) ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನ ಕಾಣದೇ ಕುಂಟುತ್ತಾ ಸಾಗಿದೆ. ಇನ್ನು ಗಣತಿ ಕಾರ್ಯಕ್ಕೆ 6 ಸಾವಿರ ಸರ್ಕಾರಿ ನೌಕರರು ಕೈಕೊಟ್ಟಿದ್ದಾರೆ. ಹೀಗಾಗಿ ಇಕ್ಕಟ್ಟಿಗೆ ಸಿಲುಕಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಖಾಸಗಿ ವ್ಯಕ್ತಿಗಳಿಂದ ಗಣತಿ ಮಾಡಿಸಲು ತಯಾರಿ ನಡೆಸಿದೆ.

ರಾಷ್ಟ್ರೀಯ ಜನಗಣತಿ 2026 ಮನೆ ಮನೆ ಗಣತಿ ಕಾರ್ಯ ಶುರುವಾಗಿ ಒಂದು ವಾರವೇ ಆದರೂ ಬೆಂಗಳೂರಿನಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ. ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದ ಸರ್ಕಾರಿ ಸಿಬ್ಬಂದಿ ಪೈಕಿ 6 ಸಾವಿರ ಮಂದಿಗೆ ಗೈರು ಹಾಜರಾಗಿರುವುದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳಿಗೆ ತಲೆನೋವಾಗಿದೆ.

ಖಾಸಗಿ ವ್ಯಕ್ತಿಗಳಿಂದ ಮನೆ ಗಣತಿ

ಇನ್ನು ಒಂದಷ್ಟು ಸರ್ಕಾರಿ ನೌಕರರು ಗಣತಿ ಕಾರ್ಯದಿಂದ ದೂರ ಉಳಿದ ಹಿನ್ನಲೆ ಉಂಟಾಗಿರುವ ಸಿಬ್ಬಂದಿ ಕೊರತೆಯನ್ನ ನೀಗಿಸಲು ಜಿಬಿಎ ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಖಾಸಗಿಯವರಿಂದ ಮನೆ ಮನೆ ಗಣತಿ ಕಾರ್ಯ ನಡೆಸಲು ಮುಂದಾಗಿದೆ. 5 ನಗರ ಪಾಲಿಕೆಗಳಿಗೆ ಸುಮಾರು ತಲಾ 1 ಸಾವಿರ ಗಣತಿದಾರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಇದನ್ನೂ ಓದಿ: ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಪಿಯುಸಿ ತೇರ್ಗಡೆ ಹೊಂದಿದ ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ ಗಣತಿ ಮಾಡಿಸಲು ಜಿಬಿಎ ಸಜ್ಜಾಗಿದೆ. ಇನ್ನು ವಿದ್ಯಾರ್ಥಿಗಳು ಗಣತಿ ಕಾರ್ಯ ಮಾಡಲು ಹೆಚ್ಚಿನ ಆಸಕ್ತಿ ತೋರಿದ್ದಾರೆ.

ಜನಗಣತಿ ಪ್ರಗತಿ ಶೇಕಡವಾರು ಮಾಹಿತಿ

  • ದಕ್ಷಿಣ ನಗರಪಾಲಿಕೆ – ಶೇಕಡ 22.5%
  • ಉತ್ತರ ನಗರಪಾಲಿಕೆ – ಶೇಕಡ 29.0%
  • ಪೂರ್ವ ನಗರಪಾಲಿಕೆ – ಶೇಕಡ 7.3%
  • ಪಶ್ಚಿಮ ನಗರಪಾಲಿಕೆ – ಶೇಕಡ 25%
  • ಕೇಂದ್ರ ನಗರಪಾಲಿಕೆ – ಶೇಕಡ 16%

ಸರ್ಕಾರಿ ನೌಕರರು ಮಾಡಬೇಕಿದ್ದ ಜನಗಣತಿಯಂತಹ ಸೂಕ್ಷ್ಮ ಕಾರ್ಯವನ್ನ ಖಾಸಗಿಯವರಿಂದ ಮಾಡಿಸುವುದು ಎಷ್ಟು ಸರಿ ಎಂಬ ಆಕ್ಷೇಪವು ಕೇಳಿಬರುತ್ತಿದೆ. ಆದರೆ ಸಿಬ್ಬಂದಿ ಕೊರತೆ ನೀಗಿಸಲು ಜಿಬಿಎಗೆ ಇರುವ ಮಾರ್ಗ ಇದೇ ಆಗಿದ್ದು, ಈ ನಡೆ ಮುಂದೆ ವಿವಾದಾತ್ಮಕ ತಿರುವು ಪಡೆದುಕೊಳ್ಳಲಿದೆಯೋ ಕಾದುನೋಡಬೇಕಿದೆ.

ಜನಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ: ಕೋಲಾರದ 6 ತಹಶೀಲ್ದಾರ್‌ಗಳಿಗೆ ಡಿಸಿ ಶಾಕ್

ರಾಷ್ಟ್ರೀಯ ಜನಗಣತಿ ಮತ್ತು ಮನೆ ಗಣತಿ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಜಿಲ್ಲೆಯ ಆರು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಕೋಲಾರ ತಾಲ್ಲೂಕಿನ ತಹಶೀಲ್ದಾರ್ ನಯನ, ಮುಳಬಾಗಿಲು ತಹಶೀಲ್ದಾರ್ ಗೀತಾ, ಕೆಜಿಎಫ್ ತಹಶೀಲ್ದಾರ್ ಭರತ್, ಬಂಗಾರಪೇಟೆ ತಹಶೀಲ್ದಾರ್ ಸುಜಾತ, ಮಾಲೂರು ತಹಶೀಲ್ದಾರ್ ರೂಪಾ ಹಾಗೂ ಶ್ರೀನಿವಾಸಪುರ ತಹಶೀಲ್ದಾರ್ ಸುದೀಂದ್ರ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: 2027ರ ಜನಗಣತಿ: ಏ 1ರಿಂದ ಕರ್ನಾಟಕದಲ್ಲಿ ಮೊದಲ ಹಂತ ಶುರು, ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಕರ್ನಾಟಕ ನಾಗರೀಕ ಸೇವಾ ನಿಯಮ 2012ರ ಕಾಲಂ 3 ಹಾಗೂ ಜನಗಣತಿ ಕಾಯ್ದೆ 1948ರ ಕಾಲಂ 6(2) ಉಲ್ಲಂಘನೆ ಆರೋಪದಡಿ 24ಗಂಟೆಯಲ್ಲಿ ನೋಟಿಸ್​ಗೆ ಸಮಜಾಯಿಷಿ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಸೂಕ್ತ ಸಮಯದಲ್ಲಿ ಉತ್ತರಿಸದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ ಕೂಡ ನೀಡಲಾಗಿದೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

LSG vs RR Playing XI: ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಿದ ಉಭಯ ತಂಡಗಳು – Kannada News | LSG vs RR Playing XI Lucknow Super Giants vs Rajasthan Royals Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ರಿಷಭ್ ಪಂತ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ.

ಇನ್ನು ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಐಪಿಎಲ್​ನಲ್ಲಿ 6 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ರಾಜಸ್ಥಾನ್ ರಾಯಲ್ಸ್. ಅಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್​ಆರ್ ಪಡೆ 4 ಬಾರಿ ಗೆದ್ದಿದ್ದರೆ, ಎಲ್​ಎಸ್​ಜಿ ಜಯ ಸಾಧಿಸಿದ್ದು ಕೇವಲ 2 ಬಾರಿ ಮಾತ್ರ.

ಇದಾಗ್ಯೂ ಕಳೆದ ಎರಡು ಪಂದ್ಯಗಳಲ್ಲೂ ಉಭಯ ತಂಡಗಳು ಸೋಲನುಭವಿಸಿದೆ. ಹೀಗಾಗಿ ಇಂದಿನ ಮ್ಯಾಚ್​ನಲ್ಲಿ ಗೆಲ್ಲಲು ಎರಡೂ ತಂಡಗಳು ಕಠಿಣ ಪ್ರಯತ್ನ ನಡೆಸಲಿದ್ದು, ಇದಕ್ಕಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿದೆ. ಅದರಂತೆ ಇಂದಿನ ಪಂದ್ಯದಲ್ಲಿ ಆಡಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಆಯುಷ್ ಬಡೋನಿ, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಮೊಹ್ಸಿನ್ ಖಾನ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಮಯಾಂಕ್ ಯಾದವ್.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಇದನ್ನೂ ಓದಿ: LSG vs RR IPL 2026 Live Score: ಸೂಪರ್ ಜೈಂಟ್ಸ್​​ಗೆ ರಾಯಲ್ಸ್ ಸವಾಲು

ಲಕ್ನೋ ಸೂಪರ್ ಜೈಂಟ್ಸ್ ತಂಡ: ರಿಷಭ್ ಪಂತ್ (ನಾಯಕ), ಅಬ್ದುಲ್ ಸಮದ್, ಆಯುಷ್ ಬದೋನಿ, ಐಡೆನ್ ಮರ್ಕ್ರಾಮ್, ಮ್ಯಾಥ್ಯೂ ಬ್ರೀಟ್ಝ್ಕ್​, ಹಿಮ್ಮತ್ ಸಿಂಗ್,  ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಝ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಯಾಂಕ್ ಯಾದವ್, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್, ಆಕಾಶ್ ಸಿಂಗ್, ಮೊಹಮ್ಮದ್ ಶಮಿ, ಅರ್ಜುನ್ ತೆಂಡೂಲ್ಕರ್, ಅನ್ರಿಕ್ ನೋಕಿಯ, ಮುಕುಲ್ ಚೌಧರಿ, ನಮನ್ ತಿವಾರಿ, ಅಕ್ಷತ್ ರಘುವಂಶಿ, ಜೋಶ್ ಇಂಗ್ಲಿಸ್.

Source link

ಪಾಕಿಸ್ತಾನ್ ಅಭಿಮಾನಿಗಳ ಕ್ಷಮೆಯಾಚಿಸಿದ ಐಪಿಎಲ್ ಆಟಗಾರ..! – Kannada News | Dasun Shanaka Banned from PSL; Apologizes to Fans

PSL 2026: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ಶ್ರೀಲಂಕಾ ಆಟಗಾರ ದುಸನ್ ಶಾನಕ (Dasun Shanaka) ಇದೀಗ ಪಾಕ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪಿಎಸ್​ಎಲ್​ ಟೂರ್ನಿಯ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶಾನಕ ಅವರ ಮೇಲೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಒಂದು ವರ್ಷದ ನಿಷೇಧ ಹೇರಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಲಂಕಾ ಆಟಗಾರ ಇದೀಗ ತಮ್ಮ ನಿರ್ಧಾರಕ್ಕಾಗಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.

ಹಿನ್ನಲೆಯೇನು?

ಪಿಎಸ್‌ಎಲ್ 2026ರಲ್ಲಿ ಲಾಹೋರ್ ಖಲಂದರ್ಸ್ ತಂಡವನ್ನು ಪ್ರತಿನಿಧಿಸಬೇಕಿದ್ದ ದಸುನ್ ಶಾನಕ, ಮಾರ್ಚ್ 21ರಂದು ವೈಯಕ್ತಿಕ ಕಾರಣ ನೀಡಿ ಲೀಗ್‌ನಿಂದ ಹೊರನಡೆದಿದ್ದರು. ಆದರೆ, ಇದರ ಬೆನ್ನಲ್ಲೇ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸ್ಯಾಮ್ ಕರನ್ ಅವರ ಬದಲಿ ಆಟಗಾರನಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು.

ಇದು ತ್ರಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆ ಎಂದು ಪರಿಗಣಿಸಿರುವ ಪಿಸಿಬಿ, ಅವರನ್ನು 2027ರ ಪಾಕಿಸ್ತಾನ್ ಸೂಪರ್ ಲೀಗ್​ ಆವೃತ್ತಿಯಿಂದಲೂ ಹೊರಗಿಟ್ಟಿದೆ.

ಶಾನಕ ಕ್ಷಮೆಯಾಚನೆ:

ತಮ್ಮ ಮೇಲಿನ ನಿಷೇಧದ ನಂತರ ಪ್ರತಿಕ್ರಿಯಿಸಿರುವ ದಸುನ್ನ ಶಾನಕ, “ನನ್ನ ನಿರ್ಧಾರದಿಂದ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ಲಾಹೋರ್ ಖಲಂದರ್ಸ್ ಮ್ಯಾನೇಜ್‌ಮೆಂಟ್‌ಗೆ ಆಗಿರುವ ನೋವಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಆ ಸಮಯದಲ್ಲಿ ಬೇರೆ ಯಾವುದೇ ಟೂರ್ನಿ ಆಡುವ ಉದ್ದೇಶ ನನಗಿರಲಿಲ್ಲ. ಪಾಕಿಸ್ತಾನದ ಬಗ್ಗೆ ನನಗೆ ಅಪಾರ ಗೌರವವಿದ್ದು, ಭವಿಷ್ಯದಲ್ಲಿ ಮತ್ತೆ ಈ ಲೀಗ್‌ನಲ್ಲಿ ಆಡುವ ಆಶಯ ಹೊಂದಿದ್ದೇನೆ” ಎಂದು ತಿಳಿಸಿದ್ದಾರೆ.

ಇದೀಗ ದಸುನ್ ಶಾನಕ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ತ ಲಾಹೋರ್ ಖಲಂದರ್ಸ್ ತಂಡವು ಶಾನಕ ಅವರ ಬದಲಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಒಂದು ವರ್ಷ ಬ್ಯಾನ್!

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿಧಿಸಿರುವ ನಿಷೇಧದಿಂದಾಗಿ ದುಸನ್ ಶಾನಕ ಮುಂದಿನ ವರ್ಷದ ಪಿಎಸ್‌ಎಲ್ ಹರಾಜಿನಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಶಾನಕಗೆ ಚಾನ್ಸ್ ಸಿ್ಗುವ ಸಾಧ್ಯತೆಯಿಲ್ಲ.

ಇದನ್ನೂ ಓದಿ: ದಾಖಲೆ… ವಿಶ್ವ ದಾಖಲೆ… ಅಭಿಷೇಕ್ ಶರ್ಮಾ ಹೆಸರಿಗೆ ಭರ್ಜರಿ ದಾಖಲೆ

ಏಕೆಂದರೆ ಶ್ರೀಲಂಕಾದ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಶಾನಕ ಕಳೆದ 6 ಮ್ಯಾಚ್​ಗಳಲ್ಲೂ ಬೆಂಚ್ ಕಾದಿದ್ದಾರೆ. ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು ವಿದೇಶಿ ಆಟಗಾರರನ್ನಾಗಿ ಶಿಮ್ರಾನ್ ಹೆಟ್ಮೆಯರ್, ಡೊನಾವನ್ ಫೆರೇರಾ, ಜೋಫ್ರಾ ಆರ್ಚರ್ ಹಾಗೂ ನಾಂಡ್ರೆ ಬರ್ಗರ್ ಅವರನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ದಸುನ್ ಶಾನಕಗೆ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯಲು ಅವಕಾಶ ಸಿಗುವುದು ಡೌಟ್ ಎಂದೇ ಹೇಳಬಹುದು.

Source link

‘ಸಿಟಾಡೆಲ್’ ಮೂಲಕ ಮತ್ತೆ ಬಂದ ಪ್ರಿಯಾಂಕಾ ಚೋಪ್ರಾ: ಹೇಗಿದೆ ಟ್ರೈಲರ್? – Kannada News | Priyanka Chopra starrer Citadel season 2 trailer released

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್​​ನಲ್ಲಿ ಮಿಂಚುತ್ತಿರುವ ಭಾರತದ ನಟಿ. ಹಲವು ವರ್ಷಗಳ ಬಳಿಕ ರಾಜಮೌಳಿಯವರ ‘ವಾರಣಾಸಿ’ ಸಿನಿಮಾಕ್ಕಾಗಿ ಭಾರತ ಚಿತ್ರರಂಗಕ್ಕೆ ಮರಳಿದ್ದಾರಾದರೂ ಈಗಲೂ ಅವರು ಹಾಲಿವುಡ್​ನ ಕೆಲವಾರು ಪ್ರಾಜೆಕ್ಟ್​​ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಲಿವುಡ್​ನ ಸಿನಿಮಾಗಳು ಮಾತ್ರವಲ್ಲದೆ ಟಿವಿ ಸರಣಿ ಅಥವಾ ವೆಬ್ ಸರಣಿಗಳಲ್ಲಿಯೂ ಸಹ ಪ್ರಿಯಾಂಕಾ ಚೋಪ್ರಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2023ರಲ್ಲಿ ‘ಸಿಟಾಡೆಲ್’ ಹೆಸರಿನ ಆಕ್ಷನ್ ಭರಿತ ವೆಬ್ ಸರಣಿಯಲ್ಲಿ ಪ್ರಿಯಾಂಕಾ ನಟಿಸಿದ್ದರು. ಇದೀಗ ಅದೇ ಸರಣಿಯ ಎರಡನೇ ಸೀಸನ್ ಬರುತ್ತಿದ್ದು, ಹೊಸ ಸೀಸನ್​​ನ ಟ್ರೈಲರ್ ಬಿಡುಗಡೆ ಆಗಿದೆ.

ಪ್ರಿಯಾಂಕಾ ಚೋಪ್ರಾ ಜೊನಾಸ್ ಮತ್ತು ರಿಚರ್ಡ್ ಮ್ಯಾಡೆನ್ ನಟನೆಯ ‘ಸಿಟಾಡೆಲ್’ ಸೀಸನ್ 2 ರ ಟ್ರೈಲರ್ ಮೊದಲ ಸೀಸನ್‌ಗಿಂತಲೂ ಹೆಚ್ಚು ಸ್ಫೋಟಕವಾಗಿ ಮತ್ತು ರೋಚಕವಾಗಿ ಮೂಡಿಬಂದಿದೆ. ಮೊದಲ ಸೀಸನ್‌ನಲ್ಲಿ ಮರವಿನ ಖಾಯಿಲೆಗೆ ಒಳಗಾಗಿದ್ದ ಸ್ಪೈ ನಾಡಿಯಾ ಸಿನ್ಹ್ (ಪ್ರಿಯಾಂಕಾ ಚೋಪ್ರಾ) ಮತ್ತು ಮೇಸನ್ ಕೇನ್ (ರಿಚರ್ಡ್ ಮ್ಯಾಡೆನ್) ಈಗ ತಮ್ಮ ಹಳೆಯ ಮತ್ತೆ ಒಂದಾಗಿದ್ದು, ಅವರಿಗೆ ಹಳೆಯ ನೆನಪುಗಳೆಲ್ಲ ಮರಳಿ ಬಂದಿದೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಹೈ-ಸ್ಪೀಡ್ ಚೇಸಿಂಗ್, ಅತ್ಯಾಧುನಿಕ ಆಯುಧಗಳ ಯುದ್ಧ ಮತ್ತು ಅಂತರಾಷ್ಟ್ರೀಯ ಮಟ್ಟದ ಪಿತೂರಿಗಳನ್ನು ಕಾಣಬಹುದಾಗಿದೆ.

‘ಸಿಟಾಡೆಲ್ ಸೀಸನ್ 2’ ಇದೇ ಮೇ 2 ರಿಂದ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದು, ಇವರೊಂದಿಗೆ ಖ್ಯಾತ ಹಾಲಿವುಡ್ ನಟಿ ಎಮಿಲಿ ಬ್ಲಂಟ್ ಮತ್ತು ಇನ್ನಿತರೆ ಅಂತರಾಷ್ಟ್ರೀಯ ತಾರೆಯರು ಈ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಗತಿಕ ಗೂಢಚಾರಿ ಸಂಸ್ಥೆಯಾದ ‘ಸಿಟಾಡೆಲ್’ ಅನ್ನು ನಾಶಪಡಿಸಲು ಸಂಚು ಹೂಡಿರುವ ‘ಮ್ಯಾಂಟಿಕೋರ್’ ಸಂಘಟನೆಯ ವಿರುದ್ಧದ ಹೋರಾಟದ ಕತೆಯನ್ನು ಎರಡನೇ ಸೀಸನ್ ಹೊಂದಿರಲಿದೆ. ಕೇವಲ ಆಕ್ಷನ್ ಮಾತ್ರವೇ ಅಲ್ಲದೆ, ರೊಮ್ಯಾನ್ಸ್, ಡ್ರಾಮಾ, ಹಾಸ್ಯವನ್ನೂ ಸಹ ಈ ಸರಣಿ ಒಳಗೊಂಡಿರಲಿದೆ.

‘ಕ್ಯಾಪ್ಟನ್ ಅಮೆರಿಕ’, ‘ಅವೇಂಜರ್ಸ್’ ಇನ್ನಿತರೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ರುಸ್ಸೋ ಬ್ರದರ್ಸ್ ಈ ಸರಣಿಯನ್ನು ನಿರ್ಮಾಣ ಮಾಡಿದ್ದಾರೆ. ‘ಸಿಟಾಡೆಲ್’ ಮೊದಲ ಸರಣಿ ಬಿಡುಗಡೆ ಆದ ಬಳಿಕ ಅದನ್ನು ಭಾರತದಲ್ಲಿ ರೀಮೇಕ್ ಮಾಡಲಾಗಿತ್ತು. ಭಾರತದಲ್ಲಿ ನಟಿ ಸಮಂತಾ ಮತ್ತು ವರುಣ್ ಧವನ್ ಅವರುಗಳು ಒಟ್ಟಿಗೆ ನಟಿಸಿದ್ದರು. ಈಗ ಸೀಸನ್ 2 ಬರುತ್ತಿದ್ದು, ಅದನ್ನೂ ಸಹ ಸಮಂತಾ ರೀಮೇಕ್ ಮಾಡುತ್ತಾರೆಯೇ ಕಾದು ನೋಡಬೇಕಿದೆ. ಮೇ 2 ರಂದು ‘ಸಿಟಾಡೆಲ್ 2’ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ: ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ – Kannada News | Tumakuru Murder: Drunk Man Killed by Relatives in Huliyurdurga, 3 Arrested

ಕೊಲೆಯಾದ ವ್ಯಕ್ತಿ ಮತ್ತು ಆರೋಪಿಗಳುImage Credit source: Tv9 Kannada

ತುಮಕೂರು, ಏಪ್ರಿಲ್​​ 22: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಸಂತೆಮಾವತ್ತೂರಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಏ.17ರಂದು ಸಂತೆಮಾವತ್ತೂರಿನಲ್ಲಿ ಹೈಡ್ರಾಮಾವೊಂದು ನಡೆದಿತ್ತು. ಕುಡಿದ ಮತ್ತಿನಲ್ಲಿ ಬಂದ ಮಂಜುನಾಥ ಎಂಬಾತ ಗ್ರಾಮದ ಜನರಿಗೆ ಕಿರಿಕಿರಿ ಮಾಡಿದ್ದ. ಜೊತೆಗೆ ಗ್ರಾಮದ ಮಹಿಳೆ ಕಾಳಮ್ಮ ಎಂಬಾಕೆ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಕೋಪಗೊಂಡ ಜನ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ನಾಪತ್ತೆಯಾಗಿದ್ದ ಆತ, ಮರುದಿನ ಹೆಣವಾಗಿ ಸಿಕ್ಕಿದ್ದ. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಸಾವಿನ ಹಿಂದಿನ ಸತ್ಯ ರಿವೀಲ್​​ ಮಾಡಿದ್ದು, ಸಂಬಂಧಿಕರಿಂದಲೇ ಮಂಜುನಾಥನ ಹತ್ಯೆಯಾಗಿರೋದು ಬಯಲಾಗಿದೆ.

ಶವವಾಗಿ ಪತ್ತೆಯಾಗಿದ್ದ ಮಂಜುನಾಥನ ತಲೆಗೆ ಗಂಭೀರ ಗಾಯವಾಗಿರೋದು ಕಂಡುಬಂದ ಹಿನ್ನೆಲೆ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ ಇದು ಕೊಲೆಯಾಗಿರಬಹುದು ಎಂಬ ಸಂಶಯದಲ್ಲಿ ತನಿಖೆ ಕೈಗೊಂಡಿದ್ದ ಹುಲಿಯೂರುದುರ್ಗ ಪೊಲೀಸರು ಮಂಜುನಾಥನ ಸಹೋದರ ಉಮೇಶ ಮತ್ತು ಸೋದರ ಸಂಬಂಧಿಗಳಾದ ಕುಮಾರ ಮತ್ತು ರಂಗಸ್ವಾಮಿಯೇ ಬರ್ಬರವಾಗಿ ಹತ್ಯೆ ನಡೆಸಿರೋದನ್ನು ಬೆಳಕಿಗೆ ತಂದಿದ್ದಾರೆ. ಅಸಲಿಗೆ ಅಂದು ಕುಡಿದ ಮತ್ತಿನಲ್ಲಿ ಮಂಜುನಾಥ ಕಾಳಮ್ಮ ಎಂಬಾಕೆಗೆ ಹಲ್ಲೆ ಮಾಡಿದ್ದ ಕಾರಣಕ ಆಕೆಯ ಮಕ್ಕಳಾದ ರಂಗಸ್ವಾಮಿ ಹಾಗೂ ಕುಮಾರ ಕೋಪಗೊಂಡಿದ್ದರು.. ಮಂಜುನಾಥನಿಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಮಧ್ಯರಾತ್ರಿ ಮನೆ ಬಳಿ ಬಂದಿದ್ದ ಮಂಜುನಾಥನ ಮೇಲೆ ಇಬ್ಬರೂ ದಾಳಿ ಮಾಡಿದ್ದರು. ಇವರ ಜೊತೆಗೆ ಮಂಜುನಾಥ್ ಸಹೋದರ ಉಮೇಶ ಕೂಡ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆಲಿ ನೈಟಿ ಹಾಕಿಕೊಳ್ತಿದ್ಲು ಎಂದು ಹೆಂಡತಿಯನ್ನೇ ಸುಟ್ಟ ಪತಿ! ಪತ್ನಿಯ ಸ್ಥಿತಿ ಗಂಭೀರ

ಆರೋಪಿ ಉಮೇಶ ಕೆಲ ದಿನಗಳ ಹಿಂದೆಯಷ್ಟೇ ಅನಾರೋಗ್ಯ ಹಿನ್ನಲೆ ಮಗಳನ್ನು ಕಳೆದುಕೊಂಡಿದ್ದ. ಆಕೆಯ ಸಾವಿಗೆ ಮಂಜುನಾಥನೇ ಕಾರಣ ಎಂಬ ಆರೋಪ ಇತ್ತು. ಹೀಗಾಗಿ ಇವರೆಲ್ಲ ಸೇರಿಕೊಂಡು ಮಾಡಿರುವ ಹಲ್ಲೆಗೆ ಮದ್ಯದ ಅಮಲಿನಲ್ಲಿದ್ದ ಮಂಜುನಾಥ ಉಸಿರು ಚೆಲ್ಲಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕ್ಷುಲ್ಲಕ ವಿಚಾರ ಎಂದು ಹೇಳಲಾಗುತ್ತಿದೆಯಾದರೂ, ಮತ್ತೇನಾದರೂ ಬಲವಾದ ವಿಷಯ ಮರ್ಡರ್​​ ಹಿಂದೆ ಇತ್ತಾ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:19 pm, Wed, 22 April 26

Source link

ಕಂಡೋರ ಕಾಸಲ್ಲಿ ಶೋಕಿ ಮಾಡ್ತಿದ್ದ ಶ್ರೀಕಿ: ಬೇನಾಮಿಯಾಗಿ ಶ್ರೀಕೃಷ್ಣ ಸಂಪಾದಿಸಿದ್ದ ಕೋಟಿ ಕೋಟಿ ಆಸ್ತಿ – Kannada News | Bitcoin Scam Kingpin Sriki’s Benami Empire: ED Uncovers Lavish Life

ಬೆಂಗಳೂರು, ಏಪ್ರಿಲ್​​ 22: ಬಿಟ್ ಕಾಯಿನ್ ಕಿಂಗ್ ಶ್ರೀಕಿ (Sriki) ಲೈಫ್ ಸ್ಟೈಲ್ ಯಾವ ಕುಬೇರನಿಗೂ ಕಡಿಮೆ ಇರಲಿಲ್ಲ. ಸ್ವಂತ ಅಂತ ಏನಿಲ್ಲ ಅಂದರೂ ಬೇರೆಯವರ ದುಡ್ಡಲ್ಲಿ ಈತ ಶೋಕಿ ಮಾಡುತ್ತಿದ್ದ. ಇಡಿ ದಾಳಿ ಬೆನ್ನಲ್ಲೆ ಶ್ರೀಕಿಯ ಒಂದೊಂದೆ ಲೀಲೆಗಳು ಹೊರಬರುತ್ತಿವೆ. ಬೇನಾಮಿಯಾಗಿ ಶ್ರೀಕಿ ಕೋಟಿ ಕೋಟಿ ಆಸ್ತಿ (Property) ಸಂಪಾದಿಸಿದ್ದ.

ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ

ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್. ನಿನ್ನೆಯಷ್ಟೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಈತನ‌ ಮನೆಯಿಂದ ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಜಯನಗರದಲ್ಲಿ ಅಪ್ಪ ಮಾಡಿಟ್ಟ ಮನೆಯಲ್ಲಿ ಶ್ರೀಕಿ ಶೋಕಿ ಜೀವನ ನಡೆಸುತ್ತಿದ್ದ. ಇದೇ ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ ತಂದೊಡ್ಡಿದೆ. ಮೊಹಮ್ಮದ್ ನಲಪಾಡ್ ಸೋದರ ಉಮರ್ ಮೂಲಕ ಶ್ರೀಕಿ ಪರಿಚಯವಾಗುತ್ತದೆ. ಆ ಬಳಿಕ ಮೊಹಮ್ಮದ್ ನಲಾಪಾಡ್ ಮತ್ತು ಸೋದರ ಉಮರ್​ಗೆ ಶ್ರೀಕಿ ಕಾಮನ್ ಫ್ರೆಂಡ್ ಆಗಿದ್ದರು. ಉಮರ್ ಸಹಪಾಠಿಯಾಗಿದ್ದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ನಂಟಿನಿಂದಲೇ ಇಡಿ ದಾಳಿಗೆ ಮಹಮ್ಮದ್ ನಲಪಾಡ್ ಮತ್ತು ಹಕೀಬ್ ಒಳಗಾಗಿದ್ದರು.

ಇದನ್ನೂ ಓದಿ: ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ತನಿಖಾ ಏಜೆನ್ಸಿಗಳಿಗೂ ಈ ಶ್ರೀಕಿ ಸವಾಲಾಗಿದ್ದ. ಸ್ವಂತ ಮೊಬೈಲ್ ಬಳಸಲ್ಲ, ತನ್ನದೇ ಲ್ಯಾಪ್ ಟಾಪ್ ಕೂಡ ಹೊಂದಿಲ್ಲ. ಸ್ವಂತಕ್ಕೆ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ಕೂಡ ಇಲ್ಲದೇ ಬಿಂದಾಸ್ ಜೀವನ ನಡೆಸುತ್ತಿದ್ದ. ಕೋಟಿ ಕೋಟಿ ಬಿಟ್ ಕಾಯಿನ್ ಡೀಲ್ ಮಾಡುವ ಶ್ರೀಕಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಚಾರ್ಟರ್ಡ್ ಫ್ಲೈಟ್, ಹೈಫೈ ಫ್ಲಾಟ್, ರೆಸಾರ್ಟ್​ಗಳಲ್ಲಿ ಸ್ಟೇ ಮಾಡುವ ಶ್ರೀಕಿ ಡ್ರಗ್ ಅಡಿಕ್ಟ್ ಆಗಿದ್ದ. ಇನ್ನು ಸುತ್ತಾಡುವುದಕ್ಕೆ ಆತನ ಬಳಗ ಐಶಾರಾಮಿ ಕಾರುಗಳ ವ್ಯವಸ್ಥೆ ಮಾಡುತ್ತಿತ್ತು.

ಶ್ರೀಕಿಗಾಗಿ ಪೈಪೋಟಿ 

ಹ್ಯಾಕರ್ಸ್ ಶ್ರೀಕೃಷ್ಣನನ್ನ ಬಳಸಿಕೊಂಡು, ಸರ್ಕಾರದ ವೆಬ್ ಸೈಟ್ ಹ್ಯಾಕ್ ಮಾಡುವುದು, ಪೋಕರ್ ಗೇಮ್ ಹ್ಯಾಕ್ ಮಾಡಿ ಕೋಟಿ ಕೋಟಿ ಮೌಲ್ಯದ ಬಿಟ್ ಕಾಯಿನ್ ಖದೀಸಲಾಗುತ್ತಿತ್ತು. ಬಿಟ್ ಕಾಯಿನ್ ವರ್ಗಾವಣೆ, ಕಂಪನಿಗಳ ಡಾಟಾಗೆ ಖನ್ನಾ ಹಾಕುವ ಹ್ಯಾಕರ್ ಶ್ರೀಕಿ ಜೊತೆಗಿದ್ದರೆ ಹ್ಯಾಕಿಂಗ್ ಕೆಲಸಕ್ಕೂ ಸಹಕಾರಿ ಅಂತಾ ಜೊತೆಗಿಟ್ಟುಕೊಳ್ಳಲು ಪೈಪೋಟಿ ಕೂಡ ಶುರುವಾಗಿತ್ತು. ಅಲ್ಲದೇ ಹ್ಯಾಕರ್ ಶ್ರೀಕಿಗೆ ಪೊಲೀಸ್ ಕೇಸ್, ಅರೆಸ್ಟ್ ಕಾಮನ್ ಆಗಿತ್ತು.

ತನ್ನ ಅಕೌಂಟ್​ನಲ್ಲಿ ಹಣದ ವ್ಯವಹಾರ ನಡೆಸದೇ, ತನ್ನ ಡಿವೈಸ್​ಗಳನ್ನ ಬಳಸದ ಶ್ರೀಕಿ, ಯೂರೋಪ್​ನಲ್ಲಿ ವಿದ್ಯಾಭ್ಯಾಸದ ವೇಳೆ ಇಂಟರ್ ನ್ಯಾಷನಲ್ ಹ್ಯಾಕರ್ಸ್ ಪರಿಚಯ ಮಾಡಿಕೊಂಡಿದ್ದ. ಇದೇ ಪರಿಚಯದಿಂದ ಹ್ಯಾಕರ್ಸ್ ಸಖ್ಯ ಬೆಳೆಸಿ ಹ್ಯಾಕರ್ಸ್ ಆದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಪೊಲೀಸರ ತನಿಖೆ ವೇಳೆ ಹಲವು ವಿಚಾರ ಹಂಚಿಕೊಂಡಿದ್ದಾನೆ.

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ಶ್ರೀಕಿ, ಕನಕಪುರ ರಸ್ತೆಯ ಕೋಲಗೊಂಡನಹಳ್ಳಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾನೆ. ಶ್ರೀಧರ್ ಮತ್ತು ಮನೋಹರ್ ಎಂಬ ಇಬ್ಬರ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!

ಒಟ್ಟಾರೆ ಹ್ಯಾಕರ್ ಶ್ರೀಕಿಯನ್ನ ಬಳಸಿಕೊಂಡು ಕೋಟಿ ಕೋಟಿ ಹಣ ಬಾಚಿಕೊಂಡಿರುವವರ ಸಂಖ್ಯೆ ಜಾಸ್ತಿನೇ ಇದೆ. ಕಂಡೋರ ಅಕೌಂಟ್​ಗೆ ಖನ್ನಾ ಹಾಕುವ ಶ್ರೀಕಿ ಮಾತ್ರ ಹೈಫೈ ಲೈಫ್ ಲೀಡ್ ಮಾಡುತ್ತಾ ತನಿಖಾ ಸಂಸ್ಥೆಗಳ‌ ತಲೆ ನೋವಿಗೆ ಕಾರಣವಾಗಿದ್ದಾನೆ.

ವರದಿ: ವಿಕಾಸ್ Tv9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚುನಾವಣಾ ಆಯೋಗದಿಂದ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿಗೂ ಹೆಚ್ಚು ಹಣ ವಶಕ್ಕೆ – Kannada News | Election Commission reports over 1000 crore Rs Poll seizures in Tamil Nadu and West Bengal

ನವದೆಹಲಿ, ಏಪ್ರಿಲ್ 22: ಪಶ್ಚಿಮ ಬಂಗಾಳ (West Bengal Assembly Elections) ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ (Tamil Nadu Assembly Elections) ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾರರನ್ನು ಆಕರ್ಷಿಸಲು ಉದ್ದೇಶಿಸಲಾದ ನಗದು, ಮಾದಕ ದ್ರವ್ಯಗಳು ಮತ್ತು ಮದ್ಯ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಶಪಡಿಸಿಕೊಳ್ಳುವಿಕೆಗಳು 1000 ಕೋಟಿ ರೂ.ಗಳನ್ನು ದಾಟಿವೆ ಎಂದು ಚುನಾವಣಾ ಆಯೋಗ (Election Commission) ಇಂದು ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಣ, ಆಲ್ಕೋಹಾಲ್, ಡ್ರಗ್ಸ್, ಅಮೂಲ್ಯವಾದ ಲೋಹಗಳು ಮತ್ತು ಉಚಿತ ವಸ್ತುಗಳು ಸೇರಿದಂತೆ 472 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗೇ, ತಮಿಳುನಾಡಿನಲ್ಲಿ 599 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಉದ್ದೇಶದಿಂದ 5 ಸಾವಿರಕ್ಕೂ ಹೆಚ್ಚು ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಮತ್ತು 5 ಸಾವಿರಕ್ಕೂ ಹೆಚ್ಚು ಸ್ಟ್ಯಾಟಿಕ್ ಸರ್ವೈಲೆನ್ಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ನಿರ್ದಿಷ್ಟ ಸಮುದಾಯದಲ್ಲಿ 4 ಮದುವೆ ನಿಷೇಧಿಸುತ್ತೇವೆ; ಅಮಿತ್ ಶಾ ಪ್ರತಿಜ್ಞೆ

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಏಪ್ರಿಲ್ 29ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ನಾಳೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿದಿನ ಕಿತ್ತಳೆ ತಿಂದರೆ ಫ್ಯಾಟಿ ಲಿವರ್ ಕಡಿಮೆಯಾಗುತ್ತದೆಯೇ? ಅಧ್ಯಯನ ಏನು ಹೇಳುತ್ತದೆ? – Kannada News | Can Oranges Reduce Fatty Liver? Research and Diet Tips

ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ವಸ್ಥ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಈ ದೊಡ್ಡ ಸಮಸ್ಯೆಯನ್ನು ಕೇವಲ ಒಂದು ಹಣ್ಣನ್ನು ಸೇವನೆ ಮಾಡುವುದರಿಂದ ತಡೆಗಟ್ಟಬಹುದು ಎಂದರೆ ನಮಬುತ್ತೀರಾ… ಹೌದು, ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ಫ್ಯಾಟಿ ಲಿವರ್ ನಿಯಂತ್ರಣ ಸಾಧ್ಯವೆಂಬ ಹೊಸ ಅಧ್ಯಯನ ಎಲ್ಲರ ಗಮನ ಸೆಳೆದಿದೆ. ಹಾಗಾದರೆ ಅಧ್ಯಯನದಲ್ಲಿ ಹೇಳಿರುವುದೇನು, ಕಿತ್ತಳೆ ನಿಜವಾಗಿಯೂ ಲಿವರ್‌ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಅಧ್ಯಯನದಲ್ಲಿ ಹೇಳಿರುವುದೇನು?

‘ನ್ಯೂಟ್ರಿಯಂಟ್ಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 30ರಿಂದ 65 ವರ್ಷದ 60 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು. ಇವರಲ್ಲಿ ಅರ್ಧ ಮಂದಿಗೆ ನಾಲ್ಕು ವಾರಗಳ ಕಾಲ ಪ್ರತಿದಿನ ಸುಮಾರು 400 ಗ್ರಾಂ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನೀಡಲಾಗಿದೆ. ಈ ಗುಂಪಿನಲ್ಲಿ ಲಿವರ್‌ಗೆ ಸಂಬಂಧಿಸಿದ ಹಲವಾರು ಆರೋಗ್ಯ ಸೂಚಕಗಳಲ್ಲಿ ಸುಧಾರಣೆ ಕಂಡುಬಂದಿದ್ದು, ಲಿವರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುವುದು ಗಮನಿಸಲಾಗಿದೆ.

ಬೀಜವಿಲ್ಲದ ಕಿತ್ತಳೆ ಎಂದರೇನು?

ಸಾಮಾನ್ಯವಾಗಿ ಬೀಜವಿಲ್ಲದ ಕಿತ್ತಳೆ ಹಣ್ಣುಗಳನ್ನು ನವೇಳಿನಾ ಕಿತ್ತಳೆ ಎಂದು ಕರೆಯಲಾಗುತ್ತದೆ. ಇದು ಬೀಜರಹಿತ ತಳಿಯ ಕಿತ್ತಳೆ. ಇದರ ಮೂಲ ಉತ್ಪಾದನೆ ಸ್ಪೇನ್ ದೇಶದಲ್ಲಿ ನಡೆಯುತ್ತದೆ. ಇದು ಸಿಹಿ ರುಚಿಯುಳ್ಳದಾಗಿದ್ದು, ವಿಟಮಿನ್ C ಮತ್ತು ಪಾಲಿಫೀನಾಲ್‌ಗಳ ಸಮೃದ್ಧ ಮೂಲವಾಗಿದೆ. ಈ ಪೋಷಕಾಂಶಗಳು ಮೆಟಾಬಾಲಿಸಂ ಸುಧಾರಿಸಲು ಮತ್ತು ಲಿವರ್ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಕಿತ್ತಳೆಯಲ್ಲಿರುವ ಆಂಟಿಆಕ್ಸಿಡೆಂಟ್ಸ್ ಮತ್ತು ಫೈಬರ್ ದೇಹದ ಡಿಟಾಕ್ಸಿಫಿಕೇಶನ್ ಪ್ರಕ್ರಿಯೆಗೆ ನೆರವಾಗುತ್ತವೆ. ಇದು ಲಿವರ್ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಆದರೆ, ಕಿತ್ತಳೆ ಮಾತ್ರದಿಂದಲೇ ಫ್ಯಾಟಿ ಲಿವರ್ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಈ ಆಹಾರಗಳನ್ನು ಸೇವನೆ ಮಾಡ್ತೀರಾ? ಹಾಗಿದ್ರೆ ಫ್ಯಾಟಿ ಲಿವರ್ ಸಮಸ್ಯೆ ಬರುತ್ತೆ ಹುಷಾರ್!

ಈ ಕಿತ್ತಳೆ ಭಾರತದಲ್ಲಿಯೂ ಲಭ್ಯವಿದೆ. ಆದ್ದರಿಂದ, ವೈದ್ಯರ ಸಲಹೆಯೊಂದಿಗೆ ಇದನ್ನು ಆಹಾರದಲ್ಲಿ ಸೇರಿಸಬಹುದು. ವಿಶೇಷವಾಗಿ ಫ್ಯಾಟಿ ಲಿವರ್ ಇರುವವರಿಗೆ ಇದು ಸಹಾಯಕವಾಗಬಹುದು. ಆದರೆ ಜ್ಯೂಸ್ ರೂಪದಲ್ಲಿ ಅಲ್ಲ, ಹಣ್ಣನ್ನೇ ತಿನ್ನುವುದು ಉತ್ತಮ. ಇನ್ನು, ಮಧುಮೇಹ ಇರುವವರು ಕಿತ್ತಳೆ ಸೇವನೆಯನ್ನು ಮಿತವಾಗಿ ಮಾಡಬೇಕು. ಯಾವುದೇ ಹೊಸ ಆಹಾರ ಪದ್ಧತಿ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಕಿತ್ತಳೆ ಸೇವನೆ ಮಾಡಿದರೆ ಲಿವರ್ ಆರೋಗ್ಯವನ್ನು ಸುಧಾರಿಸಲು ಸಹಕಾರಿ ಆಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಷ ರೂ ಹೂಡಿಕೆಯಿಂದ 5,000 ರೂ ಪಿಂಚಣಿ; ಜನಪ್ರಿಯವಾಗುತ್ತಿದೆ ಎಪಿವೈ ಪೆನ್ಷನ್ ಸ್ಕೀಮ್ – Kannada News | Atal Pension Yojana, investment amount, period, pension and other details

ಕೇಂದ್ರ ಸರ್ಕಾರದಿಂದ ನಡೆಸಲಾಗುವ ಅಟಲ್ ಪೆನ್ಷನ್ ಯೋಜನೆಗೆ (APY- Atal Pension Yojana) ನೊಂದಾಯಿತರಾದವರ ಸಂಖ್ಯೆ ಏಪ್ರಿಲ್ 21ಕ್ಕೆ 9 ಕೋಟಿ ಗಡಿ ದಾಟಿದೆ. ಅದರಲ್ಲೂ ಒಂದೇ ವರ್ಷದಲ್ಲಿ ಒಂದು ಕೋಟಿಗೂ ಅಧಿಕ ಸಬ್​ಸ್ಕ್ರೈಬರ್​ಗಳು ಬಂದಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಎಪಿವೈ ಸ್ಕೀಮ್​ಗೆ ನೊಂದಾಯಿಸಿಕೊಂಡವರ ಸಂಖ್ಯೆ ಬರೋಬ್ಬರಿ 1.35 ಕೋಟಿ. 2015ರಲ್ಲಿ ಆರಂಭಗೊಂಡ ಈ ಸ್ಕೀಮ್​ನಲ್ಲಿ ಯಾವುದೇ ವರ್ಷದಲ್ಲಿ ಅತಿಹೆಚ್ಚು ಸಬ್​ಸ್ಕ್ರೈಬರ್​ಗಳು ಸಿಕ್ಕಿದ್ದು ಇದೇ ಮೊದಲು.

ಏನಿದು ಅಟಲ್ ಪೆನ್ಷನ್ ಯೋಜನಾ?

ಅಟಲ್ ಪೆನ್ಷನ್ ಯೋಜನೆಯು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಬಡವರು ಮೊದಲಾದ ದುರ್ಬಲ ಮಂದಿಯನ್ನು ಗುರಿಯಾಗಿಸಿ ರೂಪಿಸಲಾಗಿರುವ ಪಿಂಚಣಿ ಸ್ಕೀಮ್. ಇದರಲ್ಲಿ ವೃದ್ಧಾಪ್ಯದಲ್ಲಿ 5,000 ರೂವರೆಗೆ ಪಿಂಚಣಿ ದೊರಕುವ ಅವಕಾಶ ಇದೆ. ಬಹಳ ಕಡಿಮೆ ಪ್ರೀಮಿಯಮ್ ಹಣ ಕಟ್ಟಿದರೆ ಸಾಕು.

18 ವರ್ಷದಿಂದ 40 ವರ್ಷದವರೆಗಿನ ವಯೋಮಾನದವರು ಎಪಿಐ ಪೆನ್ಷನ್ ಸ್ಕೀಮ್​ಗೆ ಸಬ್​ಸ್ಕ್ರೈಬ್ ಆಗಬಹುದು. ಆದರೆ, ಫಲಾನುಭವಿಗಳು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ.

ಇದನ್ನೂ ಓದಿ: ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್

5,000 ರೂ ಪಿಂಚಣಿ ಪಡೆಯಲು ಎಷ್ಟು ಹೂಡಿಕೆ ಬೇಕು?

ಈ ಯೋಜನೆಯಲ್ಲಿ 60 ವರ್ಷ ವಯಸ್ಸಿನವರೆಗೂ ಹೂಡಿಕೆ ಮಾಡಬಹುದು. ಕನಿಷ್ಠ ಖಾತ್ರಿ ಪಿಂಚಣಿ 1,000 ರೂನಿಂದ 5,000 ರೂವರೆಗೆ ಇದೆ. ಅದಕ್ಕೆ ಅನುಗುಣವಾಗಿ ಪ್ರೀಮಿಯಮ್ ಇರುತ್ತದೆ.

18ನೇ ವಯಸ್ಸಿನಲ್ಲಿ ಸಬ್​ಸ್ಕ್ರೈಬ್ ಆದರೆ 42 ವರ್ಷ ಕಾಲ ಹೂಡಿಕೆ ಮಾಡಬಹುದು. ತಿಂಗಳಿಗೆ 42 ರೂನಂತೆ 42 ವರ್ಷ ಹೂಡಿಕೆ ಮಾಡಬಹುದು. 60ರ ವಯಸ್ಸಿನ ನಂತರ 1,000 ರೂಗಳ ಮಾಸಿಕ ಪಿಂಚಣಿ ಸಿಗುತ್ತದೆ. ಈ ಅವಧಿಯಲ್ಲಿ ನೀವು ಕಟ್ಟುವ ಪ್ರೀಮಿಯಮ್ ಹಣದ ಒಟ್ಟು ಮೊತ್ತ ಕೇವಲ 21,000 ರೂಗಿಂತ ತುಸು ಹೆಚ್ಚು.

5,000 ರೂ ಪಿಂಚಣಿ ಬೇಕೆಂದರೆ ತಿಂಗಳಿಗೆ 210 ರೂ ಅನ್ನು 42 ವರ್ಷ ಹೂಡಿಕೆ ಮಾಡಬೇಕು. ಈ 42 ವರ್ಷದಲ್ಲಿ ನೀವು ಕಟ್ಟುವ ಪ್ರೀಮಿಯಮ್ 1,05,840 ರೂ ಮಾತ್ರ.

ನೀವು ಹೆಚ್ಚು ವಯಸ್ಸಿನಲ್ಲಿ ಸಬ್​ಸ್ಕ್ರೈಬ್ ಆದರೆ, ಉದಾಹರಣೆಗೆ, 40ನೇ ವಯಸ್ಸಿನಲ್ಲಿ ಎಪಿವೈ ಸ್ಕೀಮ್ ಪಡೆದರೆ ಹೂಡಿಕೆ ಅವಧಿ 20 ವರ್ಷ ಮಾತ್ರವೇ ಇರುತ್ತದೆ. ನಿಮಗೆ 5,000 ರೂ ಪಿಂಚಣಿ ಗುರಿ ಇದ್ದರೆ ನೀವು ತಿಂಗಳಿಗೆ 1,454 ರೂ ಹಣ ಕಟ್ಟುತ್ತಾ ಹೋಗಬೇಕಾಗುತ್ತದೆ.

ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಹೂಡಿಕೆ ಅವಧಿಯಲ್ಲಿ ಮೃತಪಟ್ಟರೆ?

ಎಪಿವೈ ಚಂದಾದಾರರು 60ರ ವಯಸ್ಸು ತಲುಪುವ ಮುನ್ನವೇ ಅಕಸ್ಮಾತ್ ಆಗಿ ಮೃತಪಟ್ಟರೆ, ಆ ಸ್ಕೀಮ್​ನ ಹಕ್ಕು ಅವರ ಸಂಗಾತಿಗೆ ಹೋಗುತ್ತದೆ. ಅವರು ಹೂಡಿಕೆ ಮುಂದುವರಿಸಬಹುದು. ಮೃತರ ವಯಸ್ಸು 60 ವರ್ಷ ದಾಟುವವರೆಗೂ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಲಂಪ್ಸಮ್ ಹಣ ಹಿಂಪಡೆಯಬಹುದು. ಹೂಡಿಕೆ ಮುಂದುವರಿಸಿ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version