ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ – Kannada News | Mithuna Rashi Monthly Forecast: Career, Finance and Health Insights for Gemini Natives

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆಯಿಂದ ಮಿಶ್ರ ಫಲಗಳಿಂದ ಕೂಡಿದೆ. ಬುಧನ ಚಲನೆ ಮತ್ತು ಗಾಳಿಯ ತತ್ವದ ಈ ರಾಶಿಯವರು ಈ ತಿಂಗಳು ಹೆಚ್ಚು ಜಾಗರೂಕರಾಗಿ ಮತ್ತು ಸೃಜನಶೀಲವಾಗಿ ಇರಬೇಕಾದ ಅನಿವಾರ್ಯತೆ ಇದೆ. ಶುಭ ಗ್ರಹದ ದೃಷ್ಟಿ ಮತ್ತು ಸಂಯೋಗದಿಂದ ಶುಭಾಶುಭ ಫಲಗಳು ನಿಮ್ಮ ಪಾಲಿಗೆ ಇರಲಿದೆ.

ಯಾವ ದಶೆ ಉತ್ತಮ?

ಹತ್ತನೇ ಮನೆಯ ಮೇಲಿರುವ ಶುಭ ಗ್ರಹಗಳ ದೃಷ್ಟಿಯಿಂದಾಗಿ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ನೀವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಈ ತಿಂಗಳು ನಿಮ್ಮ ಕೈಸೇರಬಹುದು.

​ಆರ್ಥಿಕ ಲಾಭ :

ಹನ್ನೊಂದನೇ ಮನೆಯಲ್ಲಿರುವ ಲಾಭಾಧಿಪತಿಯ ಬಲದಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಹಠಾತ್ ಧನಲಾಭ ಅಥವಾ ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಯೋಗವಿದೆ.

​ಸಾಮಾಜಿಕ ಗೌರವ:

ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮನ್ನಣೆ ಸಿಗಲಿದೆ. ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡವರಿಗೆ ಇದು ಸುವರ್ಣ ಕಾಲ.

​ಯಾವ ದಶೆ ಅಧಮ?

​ಆರನೇ ಮನೆಯ ಅಧಿಪತಿಯ ಸಂಚಾರದಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಜೀರ್ಣಕ್ರಿಯೆ ಅಥವಾ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ಎಚ್ಚರವಿರಲಿ.

​ಸಂವಹನದಲ್ಲಿ ಅಡೆತಡೆ :

ರಾಶ್ಯಾಧಿಪತಿ ಬುಧನು ವಕ್ರಿಯಾಗಿದ್ದಲ್ಲಿ ಅಥವಾ ನೀಚ ಸ್ಥಿತಿಯಲ್ಲಿದ್ದಲ್ಲಿ ಮಾತು ಕೆಡುವ ಸಾಧ್ಯತೆ ಇರುತ್ತದೆ. ಪ್ರೀತಿಪಾತ್ರರ ಜೊತೆ ಅನಗತ್ಯ ವಾಗ್ವಾದಗಳು ಮಾನಸಿಕ ಶಾಂತಿ ಕದಡಬಹುದು.

​ಪ್ರವಾಸದಲ್ಲಿ ಜಾಗ್ರತೆ:

ಈ ತಿಂಗಳು ದೂರದ ಪ್ರಯಾಣ ಮಾಡುವಾಗ ನಿಮ್ಮ ವಸ್ತುಗಳ ಬಗ್ಗೆ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

​ಬುಧವಾರ ಗಣಪತಿಗೆ ಅರಿಶಿನ ಅಥವಾ ಗರಿಕೆ ಸಮರ್ಪಿಸಿ. ​ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ಅಥವಾ ಹಸಿರು ಬೇಳೆಯನ್ನು ದಾನ ಮಾಡುವುದು ಉತ್ತಮ. ಗ್ರಹಗತಿಗಳು ದಾರಿಯನ್ನು ತೋರಿಸುತ್ತವೆ, ಆದರೆ ನಿಮ್ಮ ಪರಿಶ್ರಮ ಮತ್ತು ಸಕಾರಾತ್ಮಕ ಆಲೋಚನೆಗಳು ಮಾತ್ರ ಯಶಸ್ಸನ್ನು ತಂದುಕೊಡುತ್ತವೆ.

– ಲೋಹಿತ ಹೆಬ್ಬಾರ್

Published On – 10:55 pm, Tue, 21 April 26

Source link

ಅಡುಗೆಮನೆಯ ಮಸಾಲೆಯಲ್ಲಿ ವಿಷ; ಮಾಜಿ ಪತ್ನಿಯ ಇಡೀ ಕುಟುಂಬವನ್ನೇ ಕೊಲ್ಲಲು ನಡೆದಿತ್ತು ಸಂಚು!

ಹೈದರಾಬಾದ್, ಏಪ್ರಿಲ್ 21: ಸಿರಿಷಾ ಎಂಬ ಯುವತಿ ಇಂಗ್ಲೆಂಡ್​​ನಲ್ಲಿ ನೆಲೆಸಿದ್ದ ಫಾರ್ಮಾಸಿಸ್ಟ್​ ಒಬ್ಬನನ್ನು ಮದುವೆಯಾಗಿದ್ದಳು. ಆದರೆ, ಆಕೆಗೆ ಆತನೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ವಿಚ್ಛೇದನ ಪಡೆದು ಇನ್ನೊಬ್ಬನನ್ನು ಮದುವೆಯಾಗಿದ್ದಳು. 2ನೇ ವಿವಾಹವಾಗಿದ್ದ ಆಕೆ ಖುಷಿಯಾಗಿರುವುದನ್ನು ಮೊದಲ ಗಂಡನಿಗೆ ನೋಡಲು ಕಷ್ಟವಾಗುತ್ತಿತ್ತು. ಹೀಗಾಗಿ, ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಇಡೀ ಕುಟುಂಬವನ್ನೇ ನಾಶ ಮಾಡುವ ಸಂಚು ಮಾಡಿದ್ದ. ಇದು ಹೈದರಾಬಾದ್​ನ ಕತೆ.

2023ರಲ್ಲಿ ನಡೆದ ಘಟನೆ ಇದು. ಶಶಿರೇಖಾ ಎಂಬ ಯುವತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿತ್ತು. ಆಕೆಯ ಉಗುರುಗಳ ಮೇಲೆ ಮಸುಕಾದ ಬಿಳಿ ಗೆರೆಗಳನ್ನು ಗಮನಿಸಿದ ವೈದ್ಯರು ಆಕೆಯ ದೇಹಕ್ಕೆ ವಿಷ ಸೇರಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ಕುಟುಂಬದವರ ಆರೋಗ್ಯದಲ್ಲಿಯೂ ಭಾರೀ ಬದಲಾವಣೆಯಾಗಿತ್ತು. ಆಗಾಗ ವಾಂತಿ, ಸುಸ್ತು, ಜ್ವರ ಮುಂತಾದ ಸಮಸ್ಯೆಗಳು ಪದೇಪದೆ ಕಾಣಿಸಿಕೊಳ್ಳತೊಡಗಿತ್ತು.

ಇದನ್ನೂ ಓದಿ: ಉದ್ಯಮಿಯ ಮನೆಯಿಂದ 220 ಗ್ರಾಂ ಚಿನ್ನ ಕದ್ದ ಐವರು ಪೊಲೀಸ್ ಅಧಿಕಾರಿಗಳು!

ಜುಲೈ 26, 2023ರಂದು ಶಶಿರೇಖಾ ಅವರನ್ನು ಆಂಧ್ರಪ್ರದೇಶದ ಗುಂಟೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ತೀವ್ರ ಅತಿಸಾರ, ವಾಂತಿ ಮತ್ತು ಕೈಕಾಲುಗಳಲ್ಲಿ ಊತವಿತ್ತು. ಅವರ ಕುಟುಂಬಸ್ಥರು ಆಕೆಯನ್ನು ಹಲವಾರು ವೈದ್ಯರ ಬಳಿಗೆ ಕರೆದೊಯ್ದರೂ ಅನಾರೋಗ್ಯಕ್ಕೆ ಕಾರಣ ಸ್ಪಷ್ಟವಾಗಿರಲಿಲ್ಲ. ಕೊನೆಗೆ ವೈದ್ಯರೊಬ್ಬರು ಆಕೆಯ ಉಗುರಿನ ಮೇಲಿದ್ದ ಬಿಳಿ ಗೆರೆಗಳನ್ನು ಗಮನಿಸಿ ಆಕೆಯ ಮೇಲೆ ವಿಷಪ್ರಾಶನವಾಗಿದೆ ಎಂದು ತಿಳಿಸಿದ್ದರು. ಆದರೆ, ಅಷ್ಟು ಪ್ರಮಾಣದ ವಿಷ ಆಕೆಯ ದೇಹಕ್ಕೆ ಸೇರಿದ್ದು ಹೇಗೆಂಬುದು ಕಗ್ಗಂಟಾಗಿತ್ತು.

ಶಶಿರೇಖಾ ಅವರ ಕುಟುಂಬದ ಸದಸ್ಯರು ಹಲವಾರು ವೈದ್ಯರನ್ನು ಭೇಟಿ ಮಾಡಿದ ನಂತರ ನರವಿಜ್ಞಾನಿ ಡಾ. ವೇಮುರಿ ರಾಮ ತಾರಕನಾಥ್ ಅವರ ಬಳಿ ಹೋದಾಗ ಈ ವಿಷದ ವಿಷಯ ಬೆಳಕಿಗೆ ಬಂದಿತ್ತು. ತಾರಕನಾಥ್ ಅವರು ಆಕೆಯ ಉಗುರುಗಳ ಮೇಲೆ “ಮೀಸ್” ಎಂದು ಕರೆಯಲ್ಪಡುವ ಬಿಳಿ ಗೆರೆಗಳನ್ನು ನೋಡಿದರು. ಇದು ಆರ್ಸೆನಿಕ್ ವಿಷವನ್ನು ಸೂಚಿಸುತ್ತದೆ. ಪರೀಕ್ಷೆಗಳನ್ನು ನಡೆಸಿದಾಗ ಆಕೆಯ ದೇಹದಲ್ಲಿ ಆ ವಿಷ ಇರುವುದು ಪತ್ತೆಯಾಯಿತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ತನಿಖೆ ನಡೆಸಲಾರಂಭಿಸಿದರು.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

ಶಶಿರೇಖಾ ಅವರ ಅತ್ತೆ ಎಂ. ಉಮಾ ಮಹೇಶ್ವರಿ ಕೆಲವು ವಾರಗಳ ಹಿಂದೆ ನಿಧನರಾಗಿದ್ದರು. ಇದನ್ನು ಆರಂಭದಲ್ಲಿ ಸಹಜ ಸಾವು ಎಂದು ನಂಬಲಾಗಿತ್ತು. ಆದರೆ, ಮನೆಯ ಬೇರೆ ಸದಸ್ಯರಿಗೂ ಶಶಿರೇಖಾ ಅವರಂತೆಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿತ್ತು. ಇದು ಅವರ ಕುಟುಂಬದಲ್ಲಿ ಅನುಮಾನವನ್ನು ಹುಟ್ಟುಹಾಕಿತು. ಇದು ಶಶಿರೇಖಾ ಅವರ ಪತಿಯ ತಂಗಿ ಮತ್ತು ಉಮಾ ಅವರ ಮಗಳಾದ ಎಂ. ಸಿರಿಷಾ ಅವರನ್ನು ಆತಂಕಗೊಳಿಸಿತು. ಅವರು ಇಂಗ್ಲೆಂಡ್​​ನಲ್ಲಿ ವಾಸಿಸುತ್ತಿದ್ದಾರೆ. ಆಗ ಸಿರೀಶಾಗೆ ತನ್ನ ಮೊದಲ ಗಂಡನ ಮೇಲೆ ಅನುಮಾನ ಉಂಟಾಯಿತು.

ಸಿರೀಶಾ ಮತ್ತು ಅಜಿತ್ 2018ರಲ್ಲಿ ವಿವಾಹವಾಗಿದ್ದರು. 2022ರಲ್ಲಿ ಸಿರೀಶಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ತನಿಖೆಯ ಪ್ರಕಾರ, ಅಂದಿನಿಂದಲೇ ಅಜಿತ್ ಸಿರೀಶಾ ಮತ್ತು ಅವರ ಕುಟುಂಬವನ್ನು ಕೊಲ್ಲಲು ಯೋಜಿಸಿದ್ದ. ಅಜಿತ್ ಔಷಧೀಯ ಜ್ಞಾನವನ್ನು ಹೊಂದಿದ್ದ. ಆತ ತನ್ನ ಸಹೋದರಿಯ ಮೂಲಕ ಆರ್ಸೆನಿಕ್ ಅನ್ನು ಸಂಗ್ರಹಿಸಿದ್ದ. ಉಪ್ಪು ಮತ್ತು ಮೆಣಸಿನ ಪುಡಿಯಂತಹ ಮಸಾಲೆಗಳಿಗೆ ಮಿಕ್ಸ್ ಮಾಡಿ ಫುಡ್ ಡೆಲಿವರಿ ಬಾಯ್​ ಮೂಲಕ ಅವರ ಮನೆಗೆ ಕಳುಹಿಸಿದ್ದ. ಅದನ್ನು ಹೈದರಾಬಾದ್‌ನಲ್ಲಿರುವ ಸಿರೀಶಾ ಅವರ ಪೋಷಕರ ಮನೆಗೆ ತಲುಪಿಸಲಾಗಿತ್ತು.

ಈ ವಿಷಯ ತಿಳಿಯದೆ ಸಿರೀಶಾಳ ಫ್ಯಾಮಿಲಿ ವಾರಗಟ್ಟಲೆ ಈ ಮಸಾಲೆಗಳನ್ನು ಅಡುಗೆಯಲ್ಲಿ ಸೇವಿಸಿತ್ತು. ಇದರಿಂದ ಉಮಾ ಅವರು ಸಾವನ್ನಪ್ಪಿದರು. ಅಜಿತ್ ಈ ರೀತಿ ಹಲವಾರು ಬಾರಿ ಕೊಲೆ ಪ್ರಯತ್ನಗಳನ್ನು ಮಾಡಿದ್ದ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ನಟ ಹೌದು, ಆದ್ರೆ ರಾಜಕೀಯದಲ್ಲಿ ನಾಟಕ ಮಾಡಲ್ಲ: ಟೀಕಾಕಾರರಿಗೆ ವಿಜಯ್ ಖಡಕ್ ತಿರುಗೇಟು – Kannada News | Actor Thalapathy Vijay TVK speech in Chennai on Tamil Nadu Elections Karur Stampede

ತಮಿಳುನಾಡು ವಿಧಾನಸಭೆ ಚುನಾವಣೆಗೆ (Tamil Nadu Elections) ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಚೆನ್ನೈನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ತಮ್ಮನ್ನು ಟೀಕಿಸುವವರ ವಿರುದ್ಧ ಕೆಂಡಕಾರಿದ್ದಾರೆ. ತಮ್ಮನ್ನು ಕೇವಲ ನಟ ಎಂದು ಹೀಯಾಳಿಸುತ್ತಿರುವವರಿಗೆ ವಿಜಯ್ (Thalapathy Vijay) ತಿರುಗೇಟು ನೀಡಿದ್ದಾರೆ. ಚೆನ್ನೈನಲ್ಲಿ ಮಂಗಳವಾರ (ಏಪ್ರಿಲ್ 21) ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ವಿಜಯ್, ಆಡಳಿತ ಪಕ್ಷ ಮತ್ತು ತಮ್ಮನ್ನು ಟೀಕಿಸುವ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮನ್ನು ಸದಾ ನಟ ಎಂದು ಕರೆಯುವ ಸಚಿವರೊಬ್ಬರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ ವಿಜಯ್, ‘ಇಲ್ಲಿ ಒಬ್ಬ ಸಚಿವರಿದ್ದಾರೆ, ಅವರು ಯಾವಾಗಲೂ ವಿಜಯ್ ಒಬ್ಬ ನಟ, ವಿಜಯ್ ಒಬ್ಬ ನಟ ಎಂದು ಹೇಳುತ್ತಲೇ ಇರುತ್ತಾರೆ. ಹೌದು, ನಾನು ನಟ. ಅವರೇನೋ ಹೊಸ ವಿಷಯ ಕಂಡುಹಿಡಿದವರಂತೆ ಆಡುತ್ತಿದ್ದಾರೆ. ಆದರೆ ನೆನಪಿಡಿ, ನಾನು ರಾಜಕೀಯಕ್ಕೆ ಬಂದ ಮೇಲೆ ಎಲ್ಲೂ ನಟಿಸಿಲ್ಲ. ನೀವು ಮಾಡುತ್ತಿರುವುದು ನಾಟಕದ ಮೇಲೆ ನಾಟಕ. ಹಾಗಿದ್ದಲ್ಲಿ ನಿಮ್ಮನ್ನು ನಾವು ನಟ-ನಟಿಯರು ಎಂದು ಕರೆಯಬೇಕೇ’ ಎಂದು ಪ್ರಶ್ನಿಸಿದರು.

ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ವಿರುದ್ಧ ವಿಜಯ್ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷ ಟಿವಿಕೆ ರ್‍ಯಾಲಿ ವೇಳೆ ನಡೆದ ಕರೂರ್ ಕಾಲು ತುಳಿತ ಪ್ರಕರಣದಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಗೆ ವಿಜಯ್ ಅವರೇ ಕಾರಣ ಎಂದು ಆರೋಪಿಸುತ್ತಿರುವ ಸರ್ಕಾರಕ್ಕೆ ಅವರು ತಿರುಗೇಟು ನೀಡಿದರು.

‘ನನ್ನನ್ನು ಯಾಕೆ ದೂರುತ್ತಿದ್ದೀರಿ? ಈ ಬಗ್ಗೆ ನಾವು ಮಾತನಾಡುವುದೇ ಇಲ್ಲ ಎಂದು ಈ ಹಿಂದೆ ವಿಡಿಯೋ ಮಾಡಿದ್ದ ನೀವು, ಈಗ ನನ್ನ ಮೇಲೆ ಗೂಬೆ ಕೂರಿಸುತ್ತಿದ್ದೀರಿ. ಪೊಲೀಸರ ಅನುಮತಿ ಪಡೆದೇ ನಾನು ಅಲ್ಲಿಗೆ ಹೋಗಿದ್ದೆ. ಎಲ್ಲವೂ ಲೈವ್ ಇತ್ತು, ನಿಮಗೆ ಕಿಂಚಿತ್ತಾದರೂ ವಿವೇಚನೆ ಇಲ್ಲವೇ’ ಎಂದು ವಿಜಯ್ ಆಕ್ರೋಶ ಹೊರಹಾಕಿದರು. ಈ ದುರಂತವು ಆಡಳಿತಾರೂಢ ಡಿಎಂಕೆ ಸರ್ಕಾರದ ವೈಫಲ್ಯ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು.

ಇದನ್ನೂ ಓದಿ: ಪತ್ನಿ ಫೋಟೋ ನೋಡಿ ಮೌನ ತಾಳಿದ ದಳಪತಿ ವಿಜಯ್; ವಿಡಿಯೋ ವೈರಲ್

2024ರಲ್ಲಿ ರಾಜಕೀಯ ಪಕ್ಷ ಘೋಷಿಸಿದ ನಂತರ ವಿಜಯ್ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ತಮಿಳುನಾಡು ಚುನಾವಣೆ ಏಪ್ರಿಲ್ 23ರಂದು ನಡೆಯಲಿದ್ದು, ಯಾವುದೇ ಮೈತ್ರಿ ಇಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲು ವಿಜಯ್ ನಿರ್ಧರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತದ ಸುಧಾರಣೆ ತರುವುದು ತಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫಾರಿನ್ ಸ್ಟೈಲಲ್ಲಿ ಪ್ರಪೋಸ್‌ ಮಾಡ್ತೀನಿ ಅಂತ ಕರೆದು ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ – Kannada News | Bengaluru Northwest DCP Talks about Young Woman Sets Fire to Her Lover In Byadarahalli

ಬೆಂಗಳೂರು, (ಏಪ್ರಿಲ್ 21): ಪ್ರೇಯಸಿಯೊಬ್ಬರು, ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಕರೆಯಿಸಿಕೊಂಡು ಪ್ರಿಯಕರನಿಗೆ (Lover) ಬೆಂಕಿ ಹಚ್ಚಿಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಅಂಜನಾನಗರದಲ್ಲಿ ನಡೆದಿದೆ. ವೆಸ್ಟರ್ನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುತ್ತೆಂದು ಪ್ರಿಯಕರನನ್ನು ಮನೆಗೆ ಕರೆಯಿಸಿ ಬಳಿಕ ಕೈಕಾಲು ಕಟ್ಟಿ, ಬಟ್ಟೆ ಬಿಚ್ಚಿದ್ದಾಳೆ. ಪ್ರಪೋಸ್ ಮಾಡ್ತಾಳೆ ಅಂತಾ ಅಂದ್ಕೊಂಡಿದ್ದ ಯುವಕನ ಮೇಲೆ ಪ್ರೇಯಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ.

ಈ ಪ್ರಕರಣ ಸಂಬಂಧ ಬೆಂಗಳೂರು ವಾಯವ್ಯ ವಿಭಾಗದ ಡಿಸಿಪಿ ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಈ ಘಟನೆ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣುತಿತ್ತು. ಆದರೆ, ಯುವತಿಯೇ ಯುವಕನನ್ನು ಕೊಲೆ ಮಾಡಿದ್ದಾಳೆ. ಕರೆ ಮಾಡಿ ಪ್ರಿಯಕರನನ್ನ ಯುವತಿ ಮನೆಗೆ ಕರೆಸಿದ್ದಳು. ಬಳಿಕ ಪೆಟ್ರೋಲ್ ಹಾಗೂ ಸೀಮೆಎಣ್ಣೆ ಬಳಸಿ ಹತ್ಯೆ ಮಾಡಿದ್ದಾಳೆ. ಇನ್ನು ಈ ಕೃತ್ಯದಲ್ಲಿ ಒಬ್ಬಳೇ ಭಾಗಿಯಾಗಿದ್ದಾಳೋ ಅಥವಾ ಇನ್ನಾರಾದರೂ ಇದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ‘ಫಾರಿನ್ ಸ್ಟೈಲ್’ ಪ್ರಪೋಸ್ ಮಾಡ್ತೀನಿ ಅಂತ ಕೈ-ಕಾಲು ಕಟ್ಟಿ ಪ್ರಿಯಕರನಿಗೆ ಬೆಂಕಿ ಹಚ್ಚಿದ ಪ್ರಿಯತಮೆ! ಕಣ್ಣೆದುರೇ ಸುಟ್ಟು ಕರಕಲಾದ ಯುವಕ

Source link

ಮಾಸಿಕ 20,500 ರೂ ಆದಾಯ ತರಬಲ್ಲ ಪೋಸ್ಟ್ ಆಫೀಸ್​ನ ಎಸ್​ಸಿಎಸ್​ಎಸ್ ಸ್ಕೀಮ್ – Kannada News | SCSS, Senior Citizen Saving Scheme, gives over Rs 60k as quarterly interest payout

ಪೋಸ್ಟ್ ಆಫೀಸ್​ನ ಸಣ್ಣ ಉಳಿತಾಯ ಯೋಜನೆಗಳಲ್ಲೇ (Small Savings Scheme) ಗರಿಷ್ಠ ಬಡ್ಡಿ ತರುವ ಯೋಜನೆಗಳ ಪೈಕಿ ಎಸ್​ಸಿಎಸ್​ಎಸ್ ಒಂದು. ಇದು ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS- Senior Citizen Saving Scheme). ಸುಕನ್ಯಾ ಸಮೃದ್ಧಿ ಯೋಜನೆ ರೀತಿ ಎಸ್​ಸಿಎಸ್​ಎಸ್ ಶೇ. 8.2 ವಾರ್ಷಿಕ ಬಡ್ಡಿ ಆಫರ್ ಮಾಡುತ್ತದೆ. ಈ ಯೋಜನೆಯಲ್ಲಿ ತಿಂಗಳಿಗೆ 20,500 ರೂವರೆಗೂ ಮಾಸಿಕ ಆದಾಯ ಸೃಷ್ಟಿಸುವ ಅವಕಾಶ ಇರುತ್ತದೆ. ಇದು ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ಸ್ಕೀಮ್.

ಎಸ್​ಸಿಎಸ್​ಎಸ್ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?

  • 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರು ಈ ಯೋಜನೆ ಹೊಂದಬಹುದು.
  • ವಿಆರ್​ಎಸ್ ಪಡೆದು ಬೇಗ ನಿವೃತ್ತರಾಗಿರುವ 55-60 ವರ್ಷ ವಯಸ್ಸಿನ ನಾಗರಿಕರು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು.
  • ರಕ್ಷಣಾ ಪಡೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರು 50 ವರ್ಷ ವಯಸ್ಸು ಮುಟ್ಟಿದರೆ ಈ ಯೋಜನೆಗೆ ನೊಂದಾಯಿಸಬಹುದು.

ಇದನ್ನೂ ಓದಿ: ಹತ್ತು ಕೋಟಿ ರೂ ಹಣ ಸೇರಿಸಲು ಎಷ್ಟು ಸಮಯ ಮತ್ತು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಎಸ್​ಸಿಎಸ್​ಎಸ್ ಅಕೌಂಟ್​ನಲ್ಲಿ ಹೇಗೆ ಹೂಡಿಕೆ?

ಆಧಾರ್, ಪ್ಯಾನ್ ಇತ್ಯಾದಿ ದಾಖಲೆಗಳೊಂದಿಗೆ ಪೋಸ್ಟ್ ಆಫೀಸ್​ನಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಅಡಿಯಲ್ಲಿ ಅಕೌಂಟ್ ತೆರೆಯಬಹುದು. ಇದರಲ್ಲಿ ಲಂಪ್ಸಮ್ ಆಗಿ 1,000 ರೂನಿಂದ 30,00,000 ರೂವರೆಗೆ ಹೂಡಿಕೆಗೆ ಅವಕಾಶ ಇರುತ್ತದೆ.

ಹೂಡಿಕೆ ಅವಧಿ 5 ವರ್ಷ ಇರುತ್ತದೆ. ಅಕೌಂಟ್ ತೆರೆದ ನಂತರ ಪ್ರತೀ ಕ್ವಾರ್ಟರ್​ಗೆ ಬಡ್ಡಿ ಹಣ ನಿಮ್ಮ ಅಕೌಂಟ್​ಗೆ ಜಮೆಯಾಗುತ್ತಾ ಹೋಗುತ್ತದೆ. ಹೀಗೆ ಐದು ವರ್ಷ ಬಡ್ಡಿ ಸಿಗುತ್ತಿರುತ್ತದೆ. ನಂತರ ಅಕೌಂಟ್ ಮೆಚ್ಯೂರ್ ಆಗಿ, ನಿಮ್ಮ ಅಸಲಿ ಹಣವನ್ನು ಹಿಂಪಡೆಯಬಹುದು. ಅಗತ್ಯ ಇದ್ದರೆ ಸ್ಕೀಮ್ ಅನ್ನು ಇನ್ನೂ ಮೂರು ವರ್ಷ ವಿಸ್ತರಿಸಬಹುದು.

ಇದನ್ನೂ ಓದಿ: ಹೂಡಿಕೆದಾರರನ್ನು ಸೆಳೆಯುತ್ತಿವೆ ವ್ಯಾಲ್ಯೂ ಮ್ಯೂಚುವಲ್ ಫಂಡ್​ಗಳು; ಏನಿವುಗಳ ವಿಶೇಷತೆ?

20,500 ರೂ ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ?

ಈ ಸ್ಕೀಮ್ ಅಡಿಯಲ್ಲಿ 30 ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ನೀವು ಗರಿಷ್ಠ ಮೊತ್ತ ಹೂಡಿಕೆ ಮಾಡಿದರೆ ಪ್ರತೀ ಕ್ವಾರ್ಟರ್​ನಲ್ಲಿ ನಿಮಗೆ 61,500 ರೂ ಬಡ್ಡಿ ಹಣ ಅಕೌಂಟ್​ಗೆ ಬಂದು ಬೀಳುತ್ತದೆ. ಅಂದರೆ, ತಿಂಗಳಿಗೆ 20,500 ರೂ ಆಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಇದು “ತೆರಿಗೆ ಅಥವಾ ಸುಲಿಗೆ?”: ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ

ಬೆಂಗಳೂರು, ಏ.21: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶವಿರುವುದು ಸಾಮಾನ್ಯ. ಆದರೆ, ಬೆಂಗಳೂರಿನ ಈ ನಿರ್ದಿಷ್ಟ ಕಾರಿಡಾರ್‌ನಲ್ಲಿ ಸೈಕಲ್ ಸವಾರನೊಬ್ಬನಿಂದ 25 ರೂ. ಟೋಲ್ ವಸೂಲಿ ಮಾಡಿರುವ ವಿಡಿಯೋ ಈಗ “ತೆರಿಗೆ ಅಥವಾ ಸುಲಿಗೆ?” ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೈಕಲ್ ಸವಾರ ಟೋಲ್ ಬೂತ್‌ನಲ್ಲಿ ನಿಂತು ನಗದು ಹಣ ನೀಡುತ್ತಿರುವುದು ಮತ್ತು ಸಿಬ್ಬಂದಿ ಅದನ್ನು ಸ್ವೀಕರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ರಸ್ತೆಗಳಲ್ಲಿ ಸೈಕಲ್‌ಗಳಿಗೆ ಶುಲ್ಕವಿಲ್ಲದಿದ್ದರೂ, ಈ ಖಾಸಗಿ ಮೂಲಸೌಕರ್ಯದ ಹಾದಿಯಲ್ಲಿ ಸಾಮಾನ್ಯ ಜನರಿಗೂ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಅಥವಾ ಸಾಮಾನ್ಯ ನಾಗರಿಕರು ಇಂಧನ ಉಳಿತಾಯ ಮತ್ತು ಪರಿಸರ ಕಾಳಜಿಯಿಂದ ಸೈಕಲ್ ಬಳಸುತ್ತಾರೆ. ಅವರಿಂದಲೂ ಶುಲ್ಕ ಪಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ. ಭಾರತದ ಬಹುತೇಕ ಹೆದ್ದಾರಿಗಳಲ್ಲಿ ಸಣ್ಣ ವಾಹನಗಳಿಗೆ ರಿಯಾಯಿತಿ ಇದೆ. ಆದರೆ ಖಾಸಗಿ ಕಂಪನಿಗಳ ನಿರ್ವಹಣೆಯಲ್ಲಿರುವ ಇಂತಹ ರಸ್ತೆಗಳಲ್ಲಿನ ನಿಯಮಗಳು ಬಡವರ ಜೇಬಿಗೆ ಕತ್ತರಿ ಹಾಕುತ್ತಿವೆ. ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸೈಕಲ್ ಬಳಕೆಯನ್ನು ಉತ್ತೇಜಿಸಬೇಕಿದೆ. ಆದರೆ ಇಂತಹ ಶುಲ್ಕಗಳು ಸವಾರರ ಉತ್ಸಾಹ ಕುಗ್ಗಿಸುತ್ತಿವೆ.

ವಿಡಿಯೋ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ವಿರುದ್ಧ ಹೀನಾಯವಾಗಿ ಸೋತು ಬೆಂಗಳೂರಿಗೆ ಬಂದ ಗುಜರಾತ್ – Kannada News | IPL 2026: RCB vs GT Match Preview Date, Venue, Time, Squads and Live Stream Info

ಸತತ ನಾಲ್ಕು ಪಂದ್ಯಗಳಲ್ಲಿ ಸೋತ ನಂತರ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅಂತಿಮವಾಗಿ ಗೆಲುವಿನ ರುಚಿ ನೋಡಿತು. ಐಪಿಎಲ್ 2026 (IPL 2026) ರ ಮೊದಲ ಪಂದ್ಯವನ್ನು ಗೆದ್ದ ನಂತರ ಸತತ ಸೋಲುಗಳನ್ನು ಎದುರಿಸುತ್ತಿದ್ದ ಮುಂಬೈ, ಏಕಪಕ್ಷೀಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು 99 ರನ್‌ಗಳಿಂದ ಸೋಲಿಸಿತು. ಇತ್ತ ಮೊದಲ ಎರಡು ಪಂದ್ಯಗಳನ್ನು ಸೋತು, ಆ ನಂತರ ಹ್ಯಾಟ್ರಿಕ್ ಜಯ ಸಾಧಿಸಿದ್ದ ಗುಜರಾತ್, ತನ್ನ ಆರನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ತನ್ನ ತವರು ಮೈದಾನದಲ್ಲಿ ಭಾರಿ ಅಂತರದ ಸೋಲು ಕಂಡಿರುವ ಗುಜರಾತ್ ಇದೀಗ ತನ್ನ 7ನೇ ಪಂದ್ಯವನ್ನಾಡಲು ತವರನ್ನು ತೊರೆಯುತ್ತಿದೆ. ಹಾಗಿದ್ದರೆ ಗುಜರಾತ್ ತನ್ನ 7ನೇ ಪಂದ್ಯವನ್ನು ಯಾವಾಗ, ಎಲ್ಲಿ, ಯಾರ ವಿರುದ್ಧ ಆಡಲಿದೆ ಎಂಬುದನ್ನು ನೋಡುವುದಾದರೆ..

ಗುಜರಾತ್ ಟೈಟಾನ್ಸ್ ತಂಡದ 7ನೇ ಪಂದ್ಯ ಯಾವ ತಂಡದ ವಿರುದ್ಧ ನಡೆಯಲಿದೆ?

ಗುಜರಾತ್ ಟೈಟಾನ್ಸ್ ತಂಡದ 7ನೇ ಪಂದ್ಯ ಆರ್​ಸಿಬಿ ವಿರುದ್ಧ ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಏಪ್ರಿಲ್ 24 ರಂದು ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಎಲ್ಲಿ ನಡೆಯಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯ ಸಂಜೆ 7:30 ಕ್ಕೆ ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಹಾಟ್ ಸ್ಟಾರ್​​ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

SRH vs DC IPL 2026 Live Score: ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ,

ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.’

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾವು ತಿಂದರೆ ಶುಗರ್ ಹೆಚ್ಚಾಗುತ್ತಾ? ಮಧುಮೇಹಿಗಳು ಈ ಹಣ್ಣನ್ನು ಯಾವಾಗ ಸೇವನೆ ಮಾಡಬೇಕು? – Kannada News | Diabetes and Mango: Tips to Prevent Sugar Spikes

ಬೇಸಿಗೆ ಆರಂಭವಾದ ಕೂಡಲೇ ಮಾವಿನ ಹಣ್ಣುಗಳ (Mango) ಸೀಸನ್ ಶುರುವಾಗುತ್ತದೆ. ಮಾವು ಬಹುತೇಕ ಎಲ್ಲರಿಗೂ ಇಷ್ಟವಾದ ಹಣ್ಣು. ಆದರೆ, ವಿಶೇಷವಾಗಿ ಮಧುಮೇಹ (Diabetes) ಇರುವವರು ಮಾವು ತಿನ್ನುವುದಕ್ಕೆ ಹಿಂದೇಟು ಹಾಕುತ್ತಾರೆ. ಎಲ್ಲಿ ಮಾವಿನಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತದೆಯೋ ಎಂಬ ಭಯ ಇದ್ದೆ ಇರುತ್ತದೆ. ಈ ಗೊಂದಲದಲ್ಲಿ ಮಾವಿನಹಣ್ಣು ಇಷ್ಟವಾದರೂ ತಿನ್ನುವ ಗೋಜಿಗೆ ಹೋಗುವುದಿಲ್ಲ. ಹಾಗಾದರೆ ನಿಜವಾಗಿಯೂ ಮಾವು ತಿಂದರೆ ಶುಗರ್ ಹೆಚ್ಚಾಗುತ್ತದೆಯೇ, ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ ಏನು ಹೇಳುತ್ತದೆ?

ಮಾವಿನ ಗ್ಲೈಸೆಮಿಕ್ ಇಂಡೆಕ್ಸ್ (GI) ಸಾಮಾನ್ಯವಾಗಿ 51 ರಿಂದ 60 ರ ನಡುವೆ ಇರುತ್ತದೆ. ಇದು ಮಧ್ಯಮ ಮಟ್ಟವಾಗಿದ್ದು, ಮಾವು ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುವುದಿಲ್ಲ. ಆದರೆ, ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಶುಗರ್ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ತಜ್ಞರ ಪ್ರಕಾರ, ಮಾವನ್ನು ಸರಿಯಾದ ರೀತಿಯಲ್ಲಿ ಮತ್ತು ಮಿತವಾಗಿ ತಿಂದರೆ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ.

ಮಾವು ತಿಂದರೆ ಶುಗರ್ ಹೆಚ್ಚುತ್ತದೆಯೇ?

ತಜ್ಞರ ಪ್ರಕಾರ, ಮಾವಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಹೆಚ್ಚು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಮುಖ್ಯ. ಸಾಮಾನ್ಯವಾಗಿ ದಿನಕ್ಕೆ ಒಂದು ಮಾವು ಸೇವಿಸುವುದು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜೊತೆಗೆ ಮಾವನ್ನು ತಿನ್ನುವ ಮೊದಲು ವೈದ್ಯರು ಅಥವಾ ಡೈಟಿಷಿಯನ್ ಸಲಹೆ ಪಡೆಯುವುದು ಉತ್ತಮ. ಪ್ರತಿಯೊಬ್ಬರ ದೇಹದ ಸ್ಥಿತಿ ವಿಭಿನ್ನವಾಗಿರುವುದರಿಂದ, ವೈಯಕ್ತಿಕ ಆಹಾರ ಕ್ರಮ ಬಹಳ ಮುಖ್ಯ.

ಇದನ್ನೂ ಓದಿ: ಪದೇ ಪದೇ ಹಸಿವಾಗುವುದು ಮಧುಮೇಹದ ಆರಂಭಿಕ ಲಕ್ಷಣವೇ? ಇಲ್ಲಿದೆ ತಜ್ಞರ ಉತ್ತರ

ಮಧುಮೇಹ ಇರುವವರು ಯಾವ ರೀತಿ ಸೇವನೆ ಮಾಡಬೇಕು?

ಮಧುಮೇಹ ಇರುವವರು ಮಾವನ್ನು ಸಂಪೂರ್ಣವಾಗಿ ಬಿಟ್ಟು ಬಿಡುವ ಅಗತ್ಯವಿಲ್ಲ. ಆದರೆ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ:

  • ಒಂದೇ ಬಾರಿ 100 ಗ್ರಾಂ ಗಿಂತ ಹೆಚ್ಚು ಮಾವು ತಿನ್ನಬಾರದು
  • ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಬೇಕು
  • ಮಾವಿನ ಜ್ಯೂಸ್ ಅಥವಾ ಶೇಕ್ ಮಾಡದೆ ಹಣ್ಣನ್ನೇ ಸೇವಿಸಬೇಕು
  • ನಟ್‌ಗಳು ಅಥವಾ ಫೈಬರ್ ಇರುವ ಆಹಾರಗಳ ಜೊತೆ ಸೇವಿಸುವುದು ಉತ್ತಮ
  • ಇವು ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

110 ಕೆಜಿ ತೂಕವಿದ್ದರೂ ನೀರಿನಲ್ಲಿ ಮುಳುಗಲ್ಲ ಈ ವ್ಯಕ್ತಿ! ಬಲರಾಮ್ ಅವರ ‘ತೇಲುವ ವಿದ್ಯೆ’ ಕಂಡು ಮಲೆನಾಡಿಗರು ಫಿದಾ – Kannada News | Shivamogga’s Balaram Floats Effortlessly for 30 Mins: A Swimming Miracle

ಶಿವಮೊಗ್ಗ, ಏ.21 : ಸಾಮಾನ್ಯವಾಗಿ ಅತಿ ಹೆಚ್ಚು ದೇಹದ ತೂಕ ಇರುವವರಿಗೆ ನಡೆಯುವುದೇ ಕಷ್ಟ, ಇನ್ನು ನೀರಿನಲ್ಲಿ ಈಜುವುದು ಅಸಾಧ್ಯದ ಮಾತು. ಜತೆಗೆ ಮುಳುಗುವುದು ಗ್ಯಾರಂಟಿ. ಆದರೆ ಮಲೆನಾಡಿನ ಈ ವ್ಯಕ್ತಿ ಮಾತ್ರ ಇದಕ್ಕೆ ವಿರೋಧವಾಗಿದ್ದಾರೆ. ಬರೋಬ್ಬರಿ 110 ಕೆಜಿ ತೂಕವಿದ್ದರೂ ನೀರಿನಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಲೀಸಾಗಿ ತೇಲುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.ಶಿವಮೊಗ್ಗದ ಬಲರಾಮ್ (55) ಕಳೆದ ಐದಾರು ವರ್ಷಗಳಿಂದ ವಿದ್ಯಾನಗರದ ಕಂಟ್ರಿ ಕ್ಲಬ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಿಯಮಿತವಾಗಿ ಈಜು ಅಭ್ಯಾಸ ಮಾಡುತ್ತಿದ್ದಾರೆ. ದಢೂತಿ ದೇಹವಿರುವ ಕಾರಣ ಸತತವಾಗಿ ಈಜುವುದು ಇವರಿಗೆ ಕಷ್ಟವಾಗುತ್ತಿತ್ತು. ಈ ಸವಾಲನ್ನು ಮೆಟ್ಟಿ ನಿಲ್ಲಲು ಬಲರಾಮ್ ಕಂಡುಕೊಂಡ ದಾರಿಯೇ ‘ನೀರಿನಲ್ಲಿ ತೇಲುವ ಕಲೆ’.

ಬಲರಾಮ್ ಅವರ ಈ ಅಚ್ಚರಿಯ ಕಲೆಯ ಹಿಂದೆ ಈಜು ಗುರು ಬಾಬು ಅವರ ಶ್ರಮವಿದೆ. ಉಸಿರಾಟವನ್ನು ಬಿಗಿಹಿಡಿದು, ದೇಹವನ್ನು ಹಗುರವಾಗಿ ಇಟ್ಟುಕೊಂಡು ನೀರಿನ ಮೇಲೆ ಮಲಗುವ ವಿದ್ಯೆಯನ್ನು ಬಲರಾಮ್ ಕರಗತ ಮಾಡಿಕೊಂಡಿದ್ದಾರೆ. ಒಮ್ಮೆ ನೀರಿನಲ್ಲಿ ಮಲಗಿದರೆ ಸಾಕು, ಯಾವುದೇ ಕೈ-ಕಾಲು ಆಡಿಸದೆ ಅರ್ಧ ಗಂಟೆ ಕಾಲ ಬಲರಾಮ್ ತೇಲಬಲ್ಲರು. ಪ್ರತಿನಿತ್ಯ ಇವರೊಂದಿಗೆ ಈಜಲು ಬರುವ ರಮೇಶ್ ಮತ್ತು ಮುತ್ತಪ್ಪ ಅವರು ಬಲರಾಮ್ ಸಾಧನೆ ಕಂಡು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಸಂಕಷ್ಟದ ಸಮಯದಲ್ಲಿ ಅಥವಾ ದೋಣಿ ಅಪಘಾತಗಳಂತಹ ತುರ್ತು ಪರಿಸ್ಥಿತಿಯಲ್ಲಿ ಈ ‘ತೇಲುವ ವಿದ್ಯೆ’ ಜೀವ ಉಳಿಸಲು ಸಹಕಾರಿ ಎಂಬುದು ಇವರ ಅಭಿಪ್ರಾಯ.

ಇದನ್ನೂ ಓದಿ: ಬಿಸಿಲಿನಿಂದ ಪಾರಾಗಲು ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಯುವತಿ

ಬಲರಾಮ್ ಅವರ ಈ ವಿಶಿಷ್ಟ ಕಲೆ ಈಗ ಮಲೆನಾಡಿನ ಜನರ ಗಮನ ಸೆಳೆಯುತ್ತಿದೆ. ಪೂಲ್‌ಗೆ ಬರುವ ಇತರ ಈಜುಗಾರರು ಬಲರಾಮ್ ಅವರನ್ನು ಕಂಡು ತಾವೂ ಇಂತಹ ವಿದ್ಯೆ ಕಲಿಯಬೇಕು ಎಂದು ಉತ್ಸುಕರಾಗುತ್ತಿದ್ದಾರೆ. 110 ಕೆಜಿ ದೇಹವಿದ್ದರೂ ಆತ್ಮವಿಶ್ವಾಸವಿದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಬಲರಾಮ್ ಈಗ ಸಾಕ್ಷಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಸಿನಿಮಾ – Kannada News | Sanjay Dutt Aakhri Sawal first Hindi movie in Indian Sign Language ISL

ಬಾಲಿವುಡ್‌ ನಟ ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ಆಖ್ರಿ ಸವಾಲ್’ (Aakhri Sawal) ಸಿನಿಮಾ ಈಗ ಭಾರತೀಯ ಚಿತ್ರರಂಗದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಚಿತ್ರತಂಡ, ಇದೀಗ ಮತ್ತೊಂದು ವಿಶೇಷ ಸುದ್ದಿಯೊಂದಿಗೆ ಬಂದಿದೆ. ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ (Indian Sign Language) ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ. ಸಾಮಾನ್ಯವಾಗಿ ಸಿನಿಮಾಗಳು ಎಲ್ಲರಿಗೂ ಲಭ್ಯವಿರುತ್ತವೆ. ಆದರೆ ಶ್ರವಣ ದೋಷವಿರುವವರಿಗೆ ಸಿನಿಮಾ ಅನುಭವ ಅಷ್ಟು ಸುಲಭವಲ್ಲ. ಈ ಕೊರತೆಯನ್ನು ನೀಗಿಸಲು ‘ಆಖ್ರಿ ಸವಾಲ್’ ತಂಡ ಮುಂದಾಗಿದೆ. ಭಾರತದಲ್ಲಿ ಸುಮಾರು 4ರಿಂದ 5 ಕೋಟಿ ಜನರು ದೃಷ್ಟಿ ಮತ್ತು ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಚಿತ್ರವು ಅವರಿಗೂ ಲಭ್ಯವಾಗಲಿ ಎಂಬ ಉದ್ದೇಶದಿಂದ ದೊಡ್ಡ ಹೆಜ್ಜೆ ಇಟ್ಟಿದೆ.

ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಭಾರತೀಯ ಸಂಕೇತ ಭಾಷೆಯ ಆವೃತ್ತಿಯು ಚಿತ್ರಮಂದಿರಗಳಲ್ಲಿ ಲಭ್ಯವಿರಲಿದೆ. ‘ಸಿನಿಮಾ ಎಂಬುದು ಕೇವಲ ಮನರಂಜನೆಯಲ್ಲ. ಅದು ಎಲ್ಲರಿಗೂ ತಲುಪುವ ಮಾಧ್ಯಮವಾಗಬೇಕು. ಈ ಚಿತ್ರದ ಮೂಲಕ ನಾವು ಕೋಟ್ಯಂತರ ವಿಶೇಷ ಚೇತನ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದೇವೆ’ ಎಂದು ಚಿತ್ರತಂಡ ತಿಳಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸ ಮತ್ತು ಕಾರ್ಯವೈಖರಿಯನ್ನು ಆಧರಿಸಿದ ‘ಆಖ್ರಿ ಸವಾಲ್’ ಚಿತ್ರವು ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್ ಮೋಹನ್ ವಾರಂಗ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನಿಖಿಲ್ ನಂದಾ ಮತ್ತು ಸಂಜಯ್ ದತ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಅವರು ಸಹ-ನಿರ್ಮಾಪಕರು.

ಇದನ್ನೂ ಓದಿ: ಗಾಂಧಿ ಹತ್ಯೆ ಹಿಂದೆ ಆರ್​​​ಎಸ್​​ಎಸ್ ಕೈವಾಡ​ ಇತ್ತಾ? ಇದು ‘ಆಖ್ರಿ ಸವಾಲ್’

ಉತ್ಕರ್ಷ್ ನೈತಾನಿ ಅವರು ಈ ಸಿನಿಮಾಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮೇ 8ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಸಂಕೇತ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವ ಚಿತ್ರತಂಡದ ಪ್ರಯತ್ನಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು. ಈಗಾಗಲೇ ಚಿತ್ರದ ಟೀಸರ್ ಕೂಡ ಶ್ರವಣ ಭಾಷೆಯಲ್ಲಿ ಬಿಡುಗಡೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version