ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ – Kannada News | A Son Kills His Father And Mother In Bengaluru

ಬೆಂಗಳೂರು, (ಫೆಬ್ರವರಿ 11): ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು (Father And Mother) ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60), ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ರೋಹನ್ ಭಟ್(33) ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದ್ದು, ಸದ್ಯ ಹಂತಕ ರೋಹನ್ ಭಟ್ ನನ್ನು ಹೆಚ್‌ಎಎಲ್‌ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ತಂದೆ ಚಂದ್ರ ಭಟ್(60) ಹಾಗೂ ತಾಯಿ ಡಾ.ಶ್ಯಾಮಲಾ ಭಟ್(55) ಜೊತೆ ಪುತ್ರ ರೋಹನ್ ಭಟ್ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಆದ್ರೆ, ಕೌಟುಂಬಿಕ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕೋಪದಲ್ಲಿ ತಂದೆ ತಾಯಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಬಳಿಕ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಮೃತ ದಂಪತಿಯ ಪುತ್ರಿ ಅಮೆರಿಕಾದಲ್ಲಿದ್ದು, ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಇಬ್ಬರ ಶವ ಬೌರಿಂಗ್ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಆದ್ರೆ, ಕೊಲೆ ಮಾಡುವಷ್ಟು ಏನಾಗಿತ್ತು ಎನ್ನುವುದೇ ಇನ್ನೂ ತಿಳಿದುಬಂದಿಲ್ಲ.  ಈ ಬಗ್ಗೆ  ಹೆಚ್‌ಎಎಲ್‌ ಪೊಲೀಸರು ಹಂತಕ ಮಗ ರೋಹನ್ ಭಟ್ ನನ್ನು ಬಂಧಿಸಿದ್ದು,  ತನಿಖೆ ನಡೆಸಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:53 pm, Wed, 11 February 26

Source link

ENG vs WI: ನೇಪಾಳ ವಿರುದ್ಧ ತಿಣುಕಾಡಿ ಗೆದಿದ್ದ ಇಂಗ್ಲೆಂಡ್​ಗೆ ವಿಂಡೀಸ್ ವಿರುದ್ಧ ಸೋಲು – Kannada News | West Indies Unbeaten Run Continues: Beat England in T20 World Cup 2026

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 2026 ರ ಟಿ20 ವಿಶ್ವಕಪ್​ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ 15 ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್ ಶೆರ್ಫೇನ್ ರುದರ್ಫೋರ್ಡ್ ಅವರ ಸ್ಫೋಟಕ ಇನ್ನಿಂಗ್ಸ್ ಬಲದಿಂದ ಇಂಗ್ಲೆಂಡ್‌ಗೆ 197 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ವಿಂಡೀಸ್ ಸ್ಪಿನ್ನರ್‌ಗಳ ಬಲೆಗೆ ಸಿಲುಕಿ ಪೂರ್ಣ 20 ಓವರ್​ಗಳನ್ನು ಆಡಲಾಗದೆ ಆಲೌಟ್ ಆಯಿತು. ಅಂತಿಮವಾಗಿ ಇಂಗ್ಲೆಂಡ್‌ನ ಇನ್ನಿಂಗ್ಸ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಕೊನೆಗೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ 10 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸಾಧನೆ ಮಾಡಿತು.

Source link

ಮುಸ್ಲಿಂರಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ: ಏನಿದು ದುರ್ಗಮ್ಮನ ಜಾತ್ರೆಯಲ್ಲಿ ಶುರುವಾದ ವಿವಾದ? – Kannada News | Davanagere Durgamma Jatre: Shri Rama Sene Calls for Halal Free Sacrifice and Protest

ದಾವಣಗೆರೆ, ಫೆಬ್ರವರಿ 11: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ದಾವಣಗೆರೆಯ (Davanagere) ದುರ್ಗಮ್ಮನ ಜಾತ್ರೆ ಕೂಡ ಒಂದು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಜಾತ್ರೆ (Jatre) ನಡೆಯುತ್ತದೆ. ನಾಟಕ, ಕುಸ್ತಿ, ಟಗರ ಕಾಳಗ ಹೀಗೆ ಹತ್ತು ಹಲವು ಕ್ಷಣಗಳು ಜಾತ್ರೆಯ ವಿಶೇಷ. ಇದೆಲ್ಲಕ್ಕಿಂತ ಹೆಚ್ಚು ಆಕರ್ಷಣೆ ಅಂದರೆ ಕುರಿ ಊಟ. ಪ್ರತಿ ಮನೆಗಳಿಂದ ಮೂರು ನಾಲ್ಕು ಕುರಿಗಳನ್ನ ದೇವಿಗೆ ಬಲಿ ಕೊಡುತ್ತಾರೆ. ಸದ್ಯ ಇದೇ ವಿಚಾರವಾಗಿ ಇದೀಗ ಹೊಸ ಹೋರಾಟ ಶುರುವಾಗಿದೆ.

ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆಗೆ ಶ್ರೀರಾಮ ಸೇನೆ ಕರೆ

ಶ್ರೀರಾಮ ಸೇನೆ ಹೊಸ ಹೋರಾಟಕ್ಕೆ ಮುಂದಾಗಿದೆ. ಹೇಳಿದಂತೆ ನಡೆದುಕೊಳ್ಳದಿದ್ದರೆ ದೇವಿ ಶಾಪ ಹಾಕುತ್ತಾಳೆ ಎಂಬ ಭಯ ಕೂಡ ಶ್ರೀರಾಮ ಸೇನೆ ಹಾಕುತ್ತಿದೆ. ಈ ಸಲ ಶ್ರೀರಾಮ ಸೇನೆ ಕರೆ ನೀಡಿದ್ದು, ಹಲಾಲ್ ಮುಕ್ತ ದುರ್ಗಮ್ಮನ ಜಾತ್ರೆ ಆಗಬೇಕು ಎಂದು. ಮುಸ್ಲಿಂ‌ ಕಡೆಯಿಂದ ಹಲಾಲ್ ಮಾಡಿಸಿದರೆ ದೇವಿಯ ಶಾಪ ತಟ್ಟುತ್ತದೆ ಎಂಬ ಪ್ರಚಾರ ಶುರುವಾಗಿದೆ.

ಇದನ್ನೂ ಓದಿ: ಸಂಸಾರದ ಜಂಜಾಟಕ್ಕಿಂತ ಸನ್ಯಾಸತ್ವ ಉತ್ತಮ: ದಾವಣಗೆರೆ ಸಿವಿಲ್ ಇಂಜಿನಿಯರಿಂಗ್ ಟಾಪರ್ ಈಗ ಜೈನ ಸನ್ಯಾಸಿ

ಫೆಬ್ರವರಿ 24 ಮತ್ತು 25ರಂದು ದಾವಣಗೆರೆ ದುಗ್ಗಮ್ಮನ ಜಾತ್ರೆ ನಡೆಯಲಿದೆ. ದೇವಿಗೆ ಸಾವಿರಾರು ಕುರಿಗಳ ಬಲಿ ಕೊಡಲಾಗುತ್ತದೆ. ಬಲಿ ಕೊಡುವಾಗ ಮುಸ್ಲಿಂ ಕಡೆಯಿಂದ ಹಲಾಲ್ ಮಾಡಿಸಬಾರದು. ಈ ಹಲಾಲ್ ಮಾಡುವುದು ಮುಸ್ಲಿಮರ ಪದ್ದತಿ. ದೇವಿ ಆರಾಧಕರು ಯಾರು ಕೂಡ ಮುಸ್ಲಿಮರಿಂದ ಹಲಾಲ್ ಮಾಡಿಸಬೇಡಿ. ನಮ್ಮ ಹಿಂದೂ ಸಂಪ್ರದಾಯದಂತೆ ಹಿಂದೂಗಳಲ್ಲಿರುವ ಕಲಾಲ್ ಅಥವಾ ಕಾಟೀಕ್ ಸಮಾಜದವರಿಂದ ಕುರಿ ಬಲಿ ಕೊಡಿ. ಹಿಂದೂಗಳು ಹಲಾಲ್ ಮಾಡಿಸುವುದು ಅವೈಜ್ಞಾನಿಕ, ಅದರಲ್ಲೂ ಮುಸ್ಲಿಮರಿಂದ ಹಲಾಲ್ ಮಾಡಿಸಿದರೆ ಶಾಪ ತಟ್ಟುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ.

ಈಗಾಗಲೇ ಜಾತ್ರೆ ಸಂಭ್ರಮ ಶುರು

ಈಗಾಗಲೇ ದಾವಣಗೆರೆ ನಗರದಲ್ಲಿ ದೇವತೆ ಜಾತ್ರೆಯ ಸಂಭ್ರಮ ಶುರುವಾಗಿದೆ. ಆಕಾಶದತ್ತೆರಕ್ಕೆ ದೇವಿಯ ಹಂದರ ಗಂಬ, ಕೇಸರಿ ಧ್ವಜದ ಹಾರಾಟ, ಐತಿಹಾಸಿಕ ಜಾತ್ರೆಗೆ ಚಾಲನೆ ಸಿಕ್ಕಿದ್ದು ವಿಶೇಷ. ಇತ್ತೀಚಿಗೆ ಸಾವಿರಾರು ಜನರ ಸಮ್ಮುಖದಲ್ಲಿ ದೇವಸ್ಥಾನದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಎಸ್ ಮಲ್ಲಿಕಾರ್ಜುನ್ ಹಂದರ ಗಂಬಕ್ಕೆ ಪೂಜೆ ಸಲ್ಲಿಸಿದ್ದರು. ಇಡಿ ದೇವಸ್ಥಾನದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಹಂದರ ಗಂಬ ಪೂಜೆಯಾದ ಬಳಿಕ ನಿಜವಾದ ಜಾತ್ರೆಗೆ ಚಾಲನೆ ಸಿಕ್ಕಿದೆ. ಫೆಬ್ರವರಿ 24 ಮತ್ತು 25ರಂದು ಜಾತ್ರೆಯ ಮಹತ್ವದ ದಿನಗಳು. ಅಂದರೆ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಇಡಿ ನಗರವೇ ಈ ಎರಡು ದಿನ ಮಾತ್ರ ಗಮ್ಮ ಎನ್ನುತ್ತಿರುತ್ತದೆ. ಒಂದು ದಿನ ಸಸ್ಯಹಾರಿಗಳಿಗೆ, ಇನ್ನೊಂದು ದಿನ ಮಾಂಸಾಹಾರಿಗಳಿಗೆ. ಇನ್ನು ದೇವಿ ಜಾತ್ರೆಯಲ್ಲಿ ಬೇವಿನ ಉಡಿಗೆ ಹಾಗೂ ಬೆತ್ತಲೆ ಸೇವೆ ನಡೆದರೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಫೆ. 22ರಂದು ದುರ್ಗಾಂಭಿಕಾ ದೇವಿಗೆ ವಿಶೇಷ ಪೂಜೆ ನಡೆಯಲಿದ್ದು, ಫೆ 23 ಮತ್ತು 24 ರಂದು ಉಡಿ ತುಂಬುವ ಕಾರ್ಯವಿದೆ. ಫೆ. 24 ರಂದು ರಾತ್ರಿ 11ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಫೆ 25 ರಂದು ಚರಗ ಚಲ್ಲುವ ಮೂಲಕ ದೇವಿಯ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ಗಿಡಮೂಲಿಕೆ ಮಾರಾಟಕ್ಕೆ ಆಫ್ರಿಕಾಗೆ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿ ಸಂಕಷ್ಟದಲ್ಲಿ: ಬಂಧನ ಭೀತಿ

ಹೀಗೆ ಒಂದು ಕಡೆ ಜಾತ್ರೆಗೆ ಸಂಭ್ರಮದ ಸಿದ್ದತೆ ನಡೆಯುತ್ತಿದೆ. ಇನ್ನೊದು ಕಡೆ ಶ್ರೀರಾಮ ಸೇನೆ ಹಲಾಲ್ ಕಟ್ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದೆ. ಮೇಲಾಗಿ ದೇವಸ್ಥಾನದ ಮುಂದೆ ಕುರಿ ಬಲಿ ನಿಷೇಧವಿದೆ.  ಹೀಗಾಗಿ ಕುರಿಗಳ ಬಲಿ ಕೊಡುವು ನಾಲ್ಕು ಗೋಡೆಗಳ ನಡುವೆ. ಅದು ಒಂದು ರೀತಿಯಲ್ಲಿ ಖಾಸಗಿ ವಿಚಾರ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಶ್ರೀರಾಮ ಸೇನೆ ಈ ವರ್ಷ ಹಲಾಲ್ ಕಟ್ ಮುನ್ನೆಲೆಗೆ ತಂದಿದ್ದು ಹತ್ತಾರು ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ? – Kannada News | Digestive Issues: Symptoms of Poor Digestion

ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ರೋಗಗಳು ಬೇಡ ಎಂದರೂ ಬರುತ್ತದೆ. ಆದರೆ ಜನರು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಬದಲಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ದೇಹದಲ್ಲಿ ಅಜೀರ್ಣವಾದಾಗ (Digestive Issues) ಕೆಲವು ಲಕ್ಷಣಗಳು ಕಂಡುಬರುತ್ತದೆ ಆದರೆ ಇವು ಸಾಮಾನ್ಯ ಸಮಸ್ಯೆಗಳೆಂದು ಜನ ತಳ್ಳಿಹಾಕುತ್ತಾರೆ. ನಿಮಗೆ ತಿಳಿದಿರಲಿ, ಉತ್ತಮ ಆರೋಗ್ಯಕ್ಕಾಗಿ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಗುರುತಿಸುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವ್ಯಕ್ತಿ ತಿಂದ ಆಹಾರ ಹೊಟ್ಟೆಯಲ್ಲಿ ಭಾರ ಅಥವಾ ಉರಿಯ ಅನುಭವವಾದರೆ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಏಮ್ಸ್ ದೆಹಲಿಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮಾಜಿ ವೈದ್ಯೆ ಡಾ. ಅನನ್ಯ ಗುಪ್ತಾ ಹೇಳಿದ್ದಾರೆ. ಇದು ವಾರಕ್ಕೆ ಒಂದು ಅಥವಾ ಎರಡು ಬಾರಿ ಅಥವಾ ಹದಿನೈದು ದಿನಗಳಿಗೊಮ್ಮೆ ಕಂಡುಬಂದರೆ, ಕಳವಳ ಪಡಬೇಕಾಗಿಲ್ಲ. ಆದರೆ ಪ್ರತಿನಿತ್ಯವೂ ಈ ಸಮಸ್ಯೆ ಕಂಡುಬಂದರೆ ಆಹಾರವು ಜೀರ್ಣವಾಗುತ್ತಿಲ್ಲ ಎಂದರ್ಥ.

ಆಹಾರ ಸರಿಯಾಗಿ ಜೀರ್ಣವಾಗದಿರಲು ಕಾರಣಗಳೇನು?

ಸಾಮಾನ್ಯವಾಗಿ ಆಹಾರ ಸರಿಯಾಗಿ ಜೀರ್ಣವಾಗದಿರಲು ಹಲವಾರು ಕಾರಣಗಳಿವೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಮೊದಲನೆಯದು ಯಕೃತ್ತಿನಲ್ಲಿ ಸಮಸ್ಯೆ. ತಡರಾತ್ರಿ ಆಹಾರ ಸೇವಿಸುವುದು, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು, ಚಹಾ ಅಥವಾ ಕಾಫಿಯ ಅತಿಯಾದ ಸೇವನೆ ಮತ್ತು ಫಾಸ್ಟ್ ಫುಡ್ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಕಂಡುಬರಬಹುದು. ಕೆಲವರಲ್ಲಿ, ಪಿತ್ತಕೋಶವು ಅಗತ್ಯಕ್ಕಿಂತ ಹೆಚ್ಚು ಪಿತ್ತರಸವನ್ನು ಉತ್ಪಾದಿಸುತ್ತದೆ. ಇದರಿಂದಲೂ ಕೂಡ ಅಜೀರ್ಣ ಸಮಸ್ಯೆ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳ ಕೊರತೆ ಅಥವಾ ಕರುಳಿನಲ್ಲಿ ಸೋಂಕು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ, ಅಜೀರ್ಣ ಸಂಬಂಧಿತ ಸಮಸ್ಯೆಗಳ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿದ್ದು. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ಜೀವನಶೈಲಿ. ಈಗ, ಈ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದ್ದು, ದೀರ್ಘಕಾಲದಿಂದ ಕಂಡುಬರುವ ಅಜೀರ್ಣ ಸಮಸ್ಯೆ ಅನೇಕ ಸಂದರ್ಭಗಳಲ್ಲಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ

ಜೀರ್ಣಕ್ರಿಯೆಯನ್ನು ಸುಧಾರಿಸಲು ಏನು ಮಾಡಬೇಕು?

  • ತಡರಾತ್ರಿ ಊಟ ಮಾಡುವುದನ್ನು ತಪ್ಪಿಸಿ.
  • ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ.
  • ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ದಿನನಿತ್ಯ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಕು ನಾಯಿಗಳಿಗೆ ಹೊಸ ರೂಲ್ಸ್ : ಇದನ್ನು ಮೀರಿದ್ರೆ ಮಾಲೀಕರಿಗೆ ಬೀಳುತ್ತೆ ಕೇಸ್ – Kannada News | GBA orders New Rules For Pet Dogs, here Is Details

ಬೆಂಗಳೂರು, (ಫೆಬ್ರವರಿ 11): ಈಗಾಗಲೇ ಬೆಂಗಳೂರಿನಲ್ಲಿ (Bengaluru) ಬೀದಿ ನಾಯಿಗಳ (street dog) ಹಾವಳಿಗೆ ಹೆಚ್ಚಾಗಿದ್ದು,  ಬ್ರೇಕ್ ಹಾಕಲು ಸುಪ್ರೀಂಕೋರ್ಟ್ (Supreme Court)  ಕೂಡ ಕೆಲ ಮಾನದಂಡಗಳನ್ನು ಅನುಸರಿಸಲು ಸೂಚನೆ ನೀಡಿದೆ. ಹೀಗಾಗಿ ಸಾಕು ನಾಯಿಗಳಿಗೆ ಹೊಸ ರೊಲ್ಸ್ ಜಾರಿಮಾಡಿದ್ದು, ಜಿಬಿಎ ಮುಖ್ಯ ಅಯುಕ್ತರು 5 ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿದ್ದಾರೆ. ಇನ್ನೂ ಸಾಕು ನಾಯಿಗಳ (Pet Dogs) ಸಾಕುವುದಕ್ಕೆ ಅಂತ ಪ್ರಾಣಿ ಹಿಂಸೆ 1960 ರ ಕಾಯ್ದೆ ಪ್ರಕಾರ ಕೆಲ ಷರತ್ತುಗಳನ್ನು ವಿಧಿಸಿ ಸಾರ್ವಜನಿಕರು ಮನೆಯಲ್ಲಿ ನಾಯಿ ಸಾಕುವುದಕ್ಕೆ ನಿಯಮ ಜಾರಿಗೆ ತರಲು ಜಿಬಿಎ ಮುಂದಾಗಿದೆ.

ಏನೇನು ಹೊಸ ರೂಲ್ಸ್

ಇನ್ನೂ ಹೊಸ ಕಾಯ್ದೆಯಲ್ಲಿ ಸಾಕು ಶ್ವಾನಗಳ ಸಾಕುವುದಕ್ಕೆ ಜಿಬಿಎ ಪಶುಪಾಲನೆ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು ಹಾಗೂ ವಾರ್ಷಿಕವಾಗಿ ಜಿಬಿಎಗೆ ಇಂತ್ತಿಷ್ಟು ಅಂತ ಹಣ ಪಾವತಿ ಮಾಡಿ ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳಬೇಕು. ಹಾಗೆ ಕ್ರೂರ ಸ್ವಭಾವದ ನಾಯಿಗಳ ಸಾಕುವಿಕೆಗೆ ನಿಷೇಧ ಹೇರಲಾಗಿದೆ. ಇನ್ನು ಪ್ರತಿ ಸಾಕು ನಾಯಿ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ ಮೈಕ್ರೋ ಚಿಪ್ ಅಳವಡಿಕೆ ಮಾಡಿಸಿರಬೇಕು. ನಾಯಿಗೆ ರೆಬೀಸ್ ಲಸಿಕೆ ಮತ್ತು ಲಸಿಕೆ ಹಾಕಿದ ಬಗ್ಗೆ ನೊಂದಾಯಿತ ಪಶು ವೈಧ್ಯರಿಂದ ದೃಢೀಕರಣ ಹೊಂದಿರಬೇಕು.

ಇದನ್ನೂ ಓದಿ: GBA ಗುರುತಿಸಿದ ಕೇಂದ್ರಗಳಲ್ಲಿ ಮಾತ್ರ ಬೀದಿ ನಾಯಿಗಳಿಗೆ ಆಹಾರ ಹಾಕಬೇಕು: ಉಲ್ಲಂಘಿಸಿದರೆ ದಂಡ

ಮತ್ತೋಂದು ಕಡೆ ಜಿವಿಎ ಅದೇಶದ ಬೆನ್ನಲೇ ಶ್ವಾನ ಪ್ರಿಯರರು ಅಕ್ರೋಶವನ್ನ ಹೊರಹಾಕುತ್ತಿದ್ದಾರೆ.ಏಕೆಂದ್ರೆ ಮನೆಯಲ್ಲಿ ಮಕ್ಕಳ ರೀತಿಯಲ್ಲಿ ಶ್ವಾನಗಳನ್ನು ಪಾಲನೆ,ಪೋಷಣೆ ಮಾಡುತ್ತಿದ್ದೇವೆ. ಕೆಲವೊಂದು ಮನೆಯಲ್ಲಿ 7-8 ನಾಯಿಗಳಿರುತ್ತೆ. ಅವುಗಳನ್ನ ಮಕ್ಕಳಂತೆ ಪ್ರೀತಿಸುತ್ತೇವೆ. ಕೂಡಲೇ ಈ ರೀತಿಯ ಅದೇಶ ಹಿಂಪಡೆಯಬೇಕು ಇಲ್ಲವದರೇ ಜಿಬಿಎಯ ಆಯುಕ್ತರ ವಿರುದ್ದ ಪ್ರತಿಭಟನೆ ಮಾಡುತ್ತವೆ ಎಂದು ಅಕ್ರೋಶವನ್ನ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ನಾಯಿಗಳ ನಿಷೇಧ ಮಾಡಬೇಕು ಎಂದು ಕಾಯ್ದೆಯಲ್ಲಿ ನಮೂದಿಸಲು ಮುಂದಾಗಿದೆ. ಮತ್ತೊಂದು ಕಡೆ ಜಿಬಿಎ ಹೊಸ ನಿಯಮವನ್ನು ನಿರಾಕರಿಸಲು ಪಾಣಿ ಪ್ರಿಯರ ಕೋರ್ಟ್ ಮೇಟ್ಟಿಲೇರಲು ಸಜ್ಜಾಗುತ್ತಿದ್ದಾರೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

Source link

IND vs NAM Live Streaming: ಭಾರತಕ್ಕೆ ನಮೀಬಿಯಾ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | India vs Namibia Live Streaming When and Where to Watch India vs Namibia T20 World Cup Today Cricket Match Score in Kannada

2026 ರ ಟಿ20 ವಿಶ್ವಕಪ್ (T20 World Cup 2026)​ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ ಇದೀಗ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿರುವ ಭಾರತ ತಂಡ ಇದೀಗ ತನ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ (India vs Namibia) ತಂಡವನ್ನು ಎದುರಿಸುತ್ತಿದೆ. ಈ ಪಂದ್ಯಾವಳಿಯಲ್ಲಿ ನಮೀಬಿಯಾಕ್ಕೂ ಇದು ಎರಡನೇ ಪಂದ್ಯವಾಗಿದ್ದು, ತನ್ನ ಮೊದಲ ಗೆಲುವಿಗಾಗಿ ಎದುರು ನೋಡುತ್ತಿದೆ. ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಿದ್ದ ನಮೀಬಿಯಾ 7 ವಿಕೆಟ್​ಗಳ ಸೋಲು ಕಂಡಿತ್ತು. ಹೀಗಾಗಿ ಭಾರತದ ವಿರುದ್ಧ ನಮೀಬಿಯಾ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ಲಭ್ಯವಿರುತ್ತವೆ. ನೀವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್/ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು.

T20 World Cup: ಇಶಾನ್ ಕಿಶನ್ ಕಾಲಿಗೆ ಗಾಯ; ಸಂಕಷ್ಟದಲ್ಲಿ ಟೀಂ ಇಂಡಿಯಾ

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, WP ಮೈಬರ್ಗ್, ಮ್ಯಾಕ್ಸ್ ಹೀಂಗೊ.

ಮೀಸಲು ಆಟಗಾರ: ಅಲೆಕ್ಸಾಂಡರ್ ವೋಲ್ಶೆಂಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಬಾಂಗ್ಲಾದೇಶದಲ್ಲಿ ಚುನಾವಣೆ; ಯಾರು ರಚಿಸಲಿದ್ದಾರೆ ಮುಂದಿನ ಸರ್ಕಾರ? – Kannada News | Bangladesh Election 2026 Polls on February 12 BNPs Tarique Rahman in Race

ನವದೆಹಲಿ, ಫೆಬ್ರವರಿ 11:ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಾಟಕೀಯ ಪದಚ್ಯುತಿಯ ನಂತರ ಬಾಂಗ್ಲಾದೇಶದಲ್ಲಿ (Bangladesh) ಮೊದಲ ಬಾರಿಗೆ ನಾಳೆ (ಫೆಬ್ರವರಿ 12) ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. 2025ರಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ದೇಶದ ಮೊದಲ ರಾಷ್ಟ್ರೀಯ ಮತದಾನ ಇದಾಗಿದೆ. ಮುಂಬರುವ ಚುನಾವಣೆಗಳು ತೀವ್ರ ರಾಜಕೀಯ ಸ್ಪರ್ಧೆ, ಹೊಸ ಸಾರ್ವಜನಿಕ ಉತ್ಸಾಹ ಮತ್ತು ಜಾಗತಿಕ ವೀಕ್ಷಕರಿಂದ ತೀವ್ರ ಪರಿಶೀಲನೆಯನ್ನು ಕಾಣುವ ನಿರೀಕ್ಷೆಯಿದೆ.

ಶೇಖ್ ಹಸೀನಾ ಅವರನ್ನು ಅಧಿಕಾರದಿಂದ ತೆಗೆದುಹಾಕಿದ್ದು ಬಾಂಗ್ಲಾದೇಶದಾದ್ಯಂತ ರಾಜಕೀಯ ನಿರೂಪಣೆಯನ್ನು ಮರುರೂಪಿಸಿತು. ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪಲಾಯನಗೊಂಡು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು. ಇಂದಿಗೂ ಅವರು ದೆಹಲಿಯಲ್ಲಿಯೇ ವಾಸವಾಗಿದ್ದಾರೆ. ಅವಾಮಿ ಲೀಗ್ ಮಧ್ಯಂತರ ನಾಯಕರ ಅಡಿಯಲ್ಲಿ ಮರುಸಂಘಟಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: 3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್

ಒಂದು ದಶಕಕ್ಕೂ ಹೆಚ್ಚು ಕಾಲ ಲಂಡನ್‌ನಿಂದ ಬಿಎನ್‌ಪಿಯ ರಾಜಕೀಯ ಯಂತ್ರೋಪಕರಣವನ್ನು ನಿರ್ವಹಿಸುತ್ತಿರುವ ತಾರಿಕ್ ರೆಹಮಾನ್ ಈ ಬಾರಿಯ ಚುನಾವಣೆಯಲ್ಲಿ ಕೇಂದ್ರ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾರೆ. ಅವರ ಕಾರ್ಯತಂತ್ರ, ಡಿಜಿಟಲ್ ಅಭಿಯಾನಗಳು ಮತ್ತು ಸಾಂಸ್ಥಿಕ ಪುನರ್ ರಚನೆಯು ಯುವ ಮತದಾರರಲ್ಲಿ ಮತ್ತು ಚುನಾವಣೆಯಲ್ಲಿ ಮೊದಲ ಬಾರಿಗೆ ಭಾಗವಹಿಸುವವರಲ್ಲಿ ಬಿಎನ್‌ಪಿಗೆ ಹೊಸ ಆಕರ್ಷಣೆಯನ್ನು ನೀಡಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್ – Kannada News | BMTC Gets 1750 New Electric Buses Under PM E DRIVE: Relief for Bangaluru Commuters

ಬೆಂಗಳೂರು, ಫೆಬ್ರವರಿ 11: ಶಕ್ತಿ ಯೋಜನೆ (Shakti Yojana) ಆರಂಭವಾದ ಮೇಲೆ ಬಿಎಂಟಿಸಿ ಬಸ್ (BMTC bus) ​​ಗಳಲ್ಲಿ ಪುರುಷರಿಗೆ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿಲ್ಲ ಎನ್ನುವ ಅಸಮಾಧಾನವಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಹೊಸ ಬಸ್​​ಗಳು ಬರುತ್ತಿದ್ದು, ಇದಕ್ಕೆ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ.

ಶಕ್ತಿ ಯೋಜನೆ ಆರಂಭವಾದ ಮೇಲೆ ಬಿಎಂಟಿಸಿ ಬಸ್​ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಿದ್ದಾರೆ. ಸದ್ಯ ಬಿಎಂಟಿಸಿಯಲ್ಲಿರುವ 6800ಕ್ಕೂ ಹೆಚ್ಚು ಬಸ್​​ಗಳು ಸಾಲುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ PM- E-DRIVE ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಮೊದಲ ಹಂತದಲ್ಲಿ 1750 ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳು ಬರಲಿವೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!

ಮೊದಲ ಹಂತದಲ್ಲಿ ಸಿಇಎಸ್ಎಲ್ ಸಂಸ್ಥೆ ಟೆಂಡರ್ ಪ್ರಕ್ರಿಯೆ ಮೂಲಕ, ಏಕಾ ಮೊಬಿಲಿಟಿ ಗೆ 1750 ಬಸ್​ಗಳು ಹಂಚಿಕೆ ಮಾಡಲು ಮುಂದಾಗಿದೆ. ಏಕಾ ಮೊಬಿಲಿಟಿಗೆ ಸಿಇಎಸ್ಎಲ್ ಕಂಪನಿ ಲೆಟರ್ ಆಫ್ ಇನ್ಫರ್ಮೇಷನ್ ಆಫ್ ಕ್ವಾಂಟಿಟಿ ಕೂಡ ನೀಡಿದ್ದಾರೆ.

ಇನ್ನು 1750 ಹೊಸ ಬಸ್​​ಗಳಿಂದ ಬಿಎಂಟಿಸಿಯ ಹಳೆಯ ಬಸ್​​ಗಳಿಗೆ ಮುಕ್ತಿ ಸಿಗಲಿದೆ. ಸಾಮಾನ್ಯವಾಗಿ ಈ ಬಸ್​ಗಳಲ್ಲಿ ಡ್ರೈವರ್ ಕಂಪನಿ ಕಡೆಯಿಂದ, ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಬರುತ್ತಾರೆ. ಒಂದು ಕಿಮೀ 45 ರಿಂದ 50 ರೂ ವೆಚ್ಚದಲ್ಲಿ ಬಿಎಂಟಿಸಿ ಗುತ್ತಿಗೆದಾರ ಕಂಪನಿಗೆ ಹಣ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್​ಗಳು 12 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ.

ಪಿಎಂ-ಈ-ಡ್ರೈವ್ ಯೋಜನೆ ಅಡಿಯಲ್ಲಿ ದೇಶಕ್ಕೆ 14 ಸಾವಿರ ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಲ್ಲಿ ಬೆಂಗಳೂರಿಗೆ 4500 ಬಸ್​ಗಳು (ಎಸಿ ಮತ್ತು ನಾನ್ ಎಸಿ ಎಲೆಕ್ಟ್ರಿಕ್) ಘೋಷಣೆ ಮಾಡಲಾಗಿದೆ.

ಪ್ರಯಾಣಿಕರು ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಮಾತನಾಡಿದ ಬಿಎಂಟಿಸಿ ಪ್ರಯಾಣಿಕ ವಸಂತ, ಹೊಸ ಬಸ್​ಗಳು ಬರುವುದರಿಂದ ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ. ಅದೇ ರೀತಿಯಾಗಿ ಮಹಿಳಾ ಪ್ರಯಾಣಿಕರಾದ ಸೌಮ್ಯ ಎನ್ನುವವರು ಕೂಡ    ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮತ್ತೆ ಕುಖ್ಯಾತಿಗೆ ಒಳಗಾದ ಬಿಎಂಟಿಸಿ ಸಂಸ್ಥೆ; ಬಸ್ ಹರಿದು ಬಾಲಕಿ ದಾರುಣ ಸಾವು

ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಬರುತ್ತಿರುವ 1750 ಬಸ್​ಗಳಿಂದ ಸಿಲಿಕಾನ್ ಸಿಟಿಯ ಪ್ರಯಾಣಿಕರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಮನ್ನಾರ ಹಾಟ್ ಅವತಾರ ನೋಡುವ ಕಾತರದಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ – Kannada News | Tamannah Bhatia starrer Ragini MMS 3 movie shelved

ತಮನ್ನಾ ಭಾಟಿಯಾ (Tamannah Bhatia) ಚಿತ್ರರಂಗಕ್ಕೆ ಬಂದು 20 ವರ್ಷಗಳಾದವು ಈಗಲೂ ಸಹ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ಭಾರತ ಚಿತ್ರರಂಗದ ಫಿಟ್, ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ತಮನ್ನಾ ಭಾಟಿಯಾ ಹಾಟ್ ಆದ ಐಟಂ ಹಾಡುಗಳು, ಹಾಟ್ ಆದ ಪಾತ್ರಗಳಲ್ಲಿ ಹೆಚ್ಚಿಗೆ ನಟಿಸುತ್ತಿದ್ದಾರೆ. ಅಂಥಹಾ ಪಾತ್ರಗಳು ಅವರಿಗೆ ಸೂಟ್ ಸಹ ಆಗುತ್ತವೆ. ಅತಿಯಾದ ಗ್ಲಾಮರ್​​ ಅಂಶಗಳಿಂದಾಗಿಯೇ ಜನಪ್ರಿಯತೆ ಗಳಿಸಿರುವ ಸಿನಿಮಾ ‘ರಾಗಿಣಿ ಎಂಎಂಎಸ್’ ಸರಣಿಯ ಹೊಸ ಸಿನಿಮಾನಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದರು. ಇದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಆದರೆ ಸಿನಿಮಾ ಇದೀಗ ಅರ್ಧಕ್ಕೆ ನಿಂತು ಹೋಗಿದೆ.

‘ರಾಗಿಣಿ ಎಂಎಂಎಸ್’ ಸಿನಿಮಾ ಒಂದು ರೀತಿಯ ಶೃಂಗಾರಭರಿತ ಸಿನಿಮಾ ಆಗಿದ್ದು, ಈ ಹಿಂದೆ ಸನ್ನಿ ಲಿಯೋನಿ ಇನ್ನೂ ಕೆಲವು ಬಲು ಹಾಟ್ ನಟಿಯರು ಆ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗಷ್ಟೆ ‘ರಾಗಿಣಿ ಎಂಎಂಎಸ್ 3’ ಸಿನಿಮಾವನ್ನು ಘೋಷಿಸಲಾಗಿತ್ತು. ಸಿನಿಮಾದ ನಾಯಕಿ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಬೇಕಿತ್ತು. ಸಹಜವಾಗಿಯೇ ಅಭಿಮಾನಿಗಳು, ತಮನ್ನಾರನ್ನು ಹಾಟ್​ ಅವತಾರದಲ್ಲಿ ಕಾಣಲು ಉತ್ಸುಕರಾಗಿದ್ದರು ಆದರೆ ಇದೀಗ ಅವರಿಗೆ ನಿರಾಸೆ ಎದುರಾಗಿದೆ.

‘ರಾಗಿಣಿ ಎಂಎಂಎಸ್ 3’ ಸಿನಿಮಾ ನಿರ್ದೇಶಿಸಬೇಕಿದ್ದ ಸಾಹಿರ್ ರಜಾ ಸಿನಿಮಾದಿಂದ ಹೊರನಡೆದಿರುವುದು ಚಿತ್ರ ಸ್ಥಗಿತಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ. ಸಾಹಿರ್ ರಜಾ ಅವರು ಪ್ರಸ್ತುತ ನೆಟ್‌ಫ್ಲಿಕ್ಸ್‌ನ ದೊಡ್ಡ ಸರಣಿಯೊಂದರಲ್ಲಿ ಶೋ-ರನ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನ ಹೊಸ ನಿಯಮದಂತೆ ಶೋ-ರನ್ನರ್‌ಗಳು ಪ್ರತಿದಿನ ಸೆಟ್‌ನಲ್ಲಿ ಇರಲೇಬೇಕು. ಈ ಕಾರಣದಿಂದಾಗಿ ಅವರಿಗೆ ‘ರಾಗಿಣಿ ಎಂಎಂಎಸ್ 3’ ಚಿತ್ರಕ್ಕೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಕಾಲ್‌ಶೀಟ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ ಸದ್ಯಕ್ಕೆ ಚಿತ್ರೀಕರಣವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:ಶೂಟಿಂಗ್ ಮಾಡುವಾಗ ಸಿಟ್ಟಾದ ತಮನ್ನಾ ಭಾಟಿಯಾ: ವಿಡಿಯೋ ನೋಡಿ

ಈ ಮೊದಲು ಸನ್ನಿ ಲಿಯೋನ್ ನಟಿಸಿದ್ದ ‘ರಾಗಿಣಿ ಎಂಎಂಎಸ್ 2’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸನ್ನಿ ಲಿಯೋನಿ ಸಖತ್ ಹಾಟ್ ಆಗಿ ‘ರಾಗಿಣಿ ಎಂಎಂಎಸ್ 2’ ಸಿನಿಮಾನಲ್ಲಿ ನಟಿಸಿದ್ದರು. ಈಗ ತಮನ್ನಾ ಭಾಟಿಯಾ ಈ ಸರಣಿಯಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳು ಕಾತರರಾಗಿದ್ದರು. ಅಲ್ಲದೆ, ಈ ಬಾರಿ ಚಿತ್ರವನ್ನು ಕೇವಲ ಶೃಂಗಾರಕ್ಕೆ ಸೀಮಿತಗೊಳಿಸದೆ ‘ಹಾರರ್-ಕಾಮಿಡಿ’ ಶೈಲಿಯಲ್ಲಿ ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕಿ ಏಕ್ತಾ ಕಪೂರ್ ನಿರ್ಧರಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಿನಿಮಾಕ್ಕೆ ಬ್ರೇಕ್ ಬಿದ್ದಿದೆ.

ಇದೀಗ ಚಿತ್ರತಂಡ ಹೊಸ ನಿರ್ದೇಶಕರಿಗಾಗಿ ಹುಡುಕಾಟ ನಡೆಸುತ್ತಿದೆಯಾದರೂ, ಸದ್ಯಕ್ಕಂತೂ ಸಿನಿಮಾ ಆರಂಭವಾಗುವ ಲಕ್ಷಣಗಳಿಲ್ಲ. ಇನ್ನು ತಮನ್ನಾ ಭಾಟಿಯಾ ಅವರು ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ವ್ಯಾನ್’, ‘ಪುರುಷನ್’, ‘ವಿ ಶಾಂತಾರಾಮ್’, ‘ಮರಿಯಾ ಐಪಿಎಸ್’, ‘ರೇಂಜರ್’, ತಮಿಳಿನ ‘ಪುರುಷನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಇಶಾನ್ ಕಿಶನ್ ಕಾಲಿಗೆ ಗಾಯ; ಸಂಕಷ್ಟದಲ್ಲಿ ಟೀಂ ಇಂಡಿಯಾ – Kannada News | Ishan Kishan Injury Scare: Team India Opener Injured by Bumrah Ahead of T20 World Cup Namibia Match

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ವಿಶ್ವಕಪ್ ಅಖಾಡಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಒಂದರ ಹಿಂದೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ತಂಡದಲ್ಲಿ ಗಾಯದ ಸರಣಿ ಮುಂದುವರೆದಿದ್ದು, ಇದೀಗ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಇಶಾನ್ ಕಿಶನ್ ಅಭ್ಯಾಸ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ ವಿರುದ್ಧ ಆಡಲಿದೆ. ಈ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ಇಶಾನ್ ಕಿಶನ್ ಗಾಯದ ರೂಪದಲ್ಲಿ ಈ ಆಘಾತ ಎದುರಾಗಿದೆ. ವರದಿಗಳ ಪ್ರಕಾರ, ಟೀಂ ಇಂಡಿಯಾದ ಅಭ್ಯಾಸ ಅವಧಿಯಲ್ಲಿ ಇಶಾನ್ ಗಾಯಗೊಂಡಿದ್ದಾರೆ. ಅದು ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಎಂದು ತಿಳಿದುಬಂದಿದೆ.

ನಮೀಬಿಯಾ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿತ್ತು. ಈ ವೇಳೆ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಬುಮ್ರಾ ಯಾರ್ಕರ್ ಬೌಲ್ ಮಾಡಿದ್ದಾರೆ. ಆದರೆ ಕಿಶನ್​ಗೆ ಈ ಯಾರ್ಕರ್​​ನ ಕ್ಲೀಯರ್ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಟ್​ನಿಂದ ತಪ್ಪಿಸಿಕೊಂಡು ಬಂದ ಚೆಂಡು ಕಿಶನ್ ಅವರ ಎಡಗಾಲಿನ ಬೆರಳಿಗೆ ತಗುಲಿದೆ.

ಚೆಂಡು ಬಿದ್ದ ರಬಸಕ್ಕೆ ಕಿಶನ್ ನೋವಿನಿಂದ ಜೋರಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಅಭ್ಯಾಸವನ್ನು ನಿಲ್ಲಿಸಿ ನೆಟ್ಸ್‌ನಿಂದ ಹೊರನಡೆದಿದ್ದಾರೆ. ಇದನ್ನು ನೋಡಿದ ತಂಡದ ಫಿಸಿಯೋ ತಕ್ಷಣವೇ ಕಿಶನ್ ಅವರ ಬಳಿ ಬಂದು ಅವರನ್ನು ಪರೀಕ್ಷಿಸಿದ್ದಾರೆ. ಚಿಕಿತ್ಸೆಯ ನಂತರ ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಕಿಶನ್ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಮುಂದುವರೆಸಿದ್ದಾರೆ. ಆದಾಗ್ಯೂ ಕಿಶನ್ ನೋವಿನಿಂದ ಬಳಲುತ್ತಿದ್ದದ್ದು ಸ್ಪಷ್ಟವಾಗಿ ಕಂಡುಬಂತು.

ಕಿಶನ್​ ಅವರ ಗಾಯದ ತೀವ್ರತೆ ಎಷ್ಟು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಒಂದು ವೇಳೆ ಕಿಶನ್​ಗೆ ಗಾಯ ಗಂಭೀರವಾಗಿದ್ದರೆ ಅದು ತಂಡಕ್ಕೆ ದೊಡ್ಡ ಹೊಡೆತವಾಗಲಿದೆ. ಏಕೆಂದರೆ ಈಗಾಗಲೇ ಅಭಿಷೇಕ್ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಕಿಶನ್ ಗಾಯಗೊಂಡಿರುವುದು ತಂಡಕ್ಕೆ ಆರಂಭಿಕರಿಲ್ಲದಂತೆ ಮಾಡಿದೆ. ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ಇದ್ದಾರೆಯಾದರೂ, ಕಿಶನ್ ಬದಲಿಗೆ ಯಾರು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

Published On – 9:15 pm, Wed, 11 February 26

Source link

Exit mobile version