Optical Illusion: ನೀವು ಜಾಣರೇ, ಈ ಮೂವರಲ್ಲಿ ಬಾಸ್ ಯಾರೆಂದು ಗುರುತಿಸಿ – Kannada News | Optical illusion: Identify the boss among these three people within 10 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಮೆದುಳಿಗೆ ಕೆಲಸ ನೀಡುವ ದೃಷ್ಟಿ ಸಾಮರ್ಥ್ಯ ಪರೀಕ್ಷಿಸುವ ಆಟಗಳನ್ನು ಆಡುವುದೆಂದರೆ ಕೆಲವರಿಗೆ ತುಂಬಾನೇ ಇಷ್ಟ. ಇಂತಹ ಒಗಟಿನ ಚಿತ್ರಗಳು ಸರಳವಾಗಿ ಕಂಡರೂ ಅಷ್ಟೇ ಟ್ರಿಕ್ಕಿಯಾಗಿರುತ್ತವೆ. ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಮೂವರು ವ್ಯಕ್ತಿಗಳಿದ್ದು, ಬಾಸ್ ಯಾರೆಂದು ಗುರುತಿಸುವುದೇ ನಿಮ್ಮ ಮುಂದಿರುವ ಸವಾಲು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮಗೆ ಸಮಯಾವಕಾಶವಿದೆ.

ಈ ಚಿತ್ರವು ಏನು ಹೇಳುತ್ತದೆ?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ಅಂದುಕೊಂಡಕ್ಕಿಂತ ಭಿನ್ನವಾಗಿರುತ್ತದೆ. ನಮ್ಮ ಕಣ್ಣಿಗೆ ಕಾಣುವುದು ಒಂದಾದರೆ ಉತ್ತರವು ಮತ್ತೊಂದಾಗಿರುತ್ತದೆ. ಈ ಇಲ್ಯೂಷನ್ ಚಿತ್ರದಲ್ಲಿ ಮೂವರು ವ್ಯಕ್ತಿಗಳಿರುವುದನ್ನು ಕಾಣಬಹುದು. ಆಫೀಸಿನ ರೂಮ್ ಆಗಿದ್ದು, ಒಬ್ಬ ವ್ಯಕ್ತಿ ಬಾಸ್ ಕುಳಿತುಕೊಳ್ಳುವ ಮೇಜಿನ ಬಳಿ ನಿಂತಿದ್ದಾನೆ. ಇನ್ನೊಬ್ಬ ವ್ಯಕ್ತಿ ಟೇಬಲ್ ಬಳಿ ಕುಳಿತಿದ್ದಾನೆ. ಮೂರನೇ ವ್ಯಕ್ತಿ ನಿಂತಿದ್ದಾನೆ. ಬಾಸ್ ಮೇಜಿನ ಬಳಿ ಇರುವ ವ್ಯಕ್ತಿ ಏನನ್ನೋ ಹೇಳುತ್ತಿದ್ದು, ಉಳಿದ ಇಬ್ಬರು ಕೇಳಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಬಾಸ್ ಯಾರೆಂದು ಗುರುತಿಸುವುದೇ ಚಾಲೆಂಜ್. ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸುವತ್ತ ಗಮನ ಕೊಡಿ.

ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿ ಕುಳಿತಿರುವ ನಾಲ್ಕನೇ ಬೆಕ್ಕನ್ನು ಹುಡುಕಬಲ್ಲಿರಾ

ಉತ್ತರ ಕಂಡುಕೊಳ್ಳಲು ಸಾಧ್ಯವಾಯಿತೇ?

ಈ ಭ್ರಮೆ ಉಂಟು ಮಾಡುವ ಈ ಚಿತ್ರವು ಸರಳವಾಗಿ ಕಂಡರೂ ಇಲ್ಲಿ ಬಾಸ್ ಯಾರೆಂದು ಗುರುತಿಸುವುದು ಕಷ್ಟಕರ. ಬಾಸ್ ಯಾರೆಂದು ಹೇಳಿದರೆ ನಿಮ್ಮ ಐಕ್ಯೂ ಲೆವೆಲ್ ಅತ್ಯುತ್ತಮವಾಗಿದೆ ಎಂದರ್ಥ. ಎಷ್ಟೇ ತಲೆ ಉಪಯೋಗಿಸಿದ್ರು ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಬಿಳಿ ಶರ್ಟ್ ಧರಿಸಿ ನಿಂತಿರುವ ವ್ಯಕ್ತಿಯೇ ಬಾಸ್.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ನಟನಿಂದ ನನ್ನ ಮದುವೆ ನಿಂತಿತು, ಜೀವನ ಹಾಳಾಯ್ತು: ನಟಿ ಪೂನಂ ಕೌರ್ – Kannada News | Poonam Kaur said due to Posani Krishna Murali her life spoiled

ಚಿತ್ರರಂಗದ (Sandalwood) ಅದ್ವಾನಗಳು, ಅನ್ಯಾಯಗಳ ಬಗ್ಗೆ ಆಗಾಗ್ಗೆ ಸುದ್ದಿಗಳು ಹೊರ ಬೀಳುತ್ತಲೇ ಇರುತ್ತವೆ. ದೊಡ್ಡ ನಿರ್ಮಾಪಕರು, ನಟರುಗಳು ಮಾಡುವ ಅನ್ಯಾಯ, ತೋರುವ ದರ್ಪಗಳ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಪರ ಭಾಷೆಯಿಂದ ಬಂದು ಇನ್ನೊಂದು ಭಾಷೆಯಲ್ಲಿ ನೆಲೆಗೊಂಡ ನಟಿಯರಿಗಂತೂ ನರಕವನ್ನೇ ತೋರಿಸಲಾಗುತ್ತದೆ. ಇದೀಗ ಒಂದು ಸಮಯದಲ್ಲಿ ಬಲು ಖ್ಯಾತ ನಟಿಯಾಗಿದ್ದ ಪೂನಂ ಕೌರ್ ಅವರು, ಕೆಲ ಸಿನಿಮಾ ಮಂದಿ ಮತ್ತು ರಾಜಕಾರಣಿಗಳು ಸೇರಿಕೊಂಡು ಹೇಗೆ ತಮ್ಮ ಬದುಕು ಹಾಳು ಮಾಡಿದರು ಎಂದು ಹೇಳಿಕೊಂಡಿದ್ದಾರೆ.

ಪೂನಂ ಕೌರ್ ಮೂಲತಃ ಪಂಜಾಬಿನವರಾದರೂ ಜನಪ್ರಿಯತೆ ಗಳಿಸಿದ್ದು ತೆಲುಗು ಚಿತ್ರರಂಗದಲ್ಲಿ. ತೆಲುಗಿನ ಹಲವು ಸ್ಟಾರ್ ನಟರುಗಳೊಟ್ಟಿಗೆ ನಟಿಸಿದ್ದಾರೆ ಪೂನಂ ಕೌರ್. ಕನ್ನಡದ ‘ಬಂಧು-ಬಳಗ’ ಸಿನಿಮಾನಲ್ಲಿ ಶಿವರಾಜ್ ಕುಮಾರ್ ಅವರ ಜೊತೆಯಾಗಿಯೂ ಪೂನಂ ಕೌರ್ ನಟಿಸಿದ್ದಾರೆ. ಆದರೆ 2019 ರ ಬಳಿಕ ಪೂನಂ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ಅದೇ ಸಮಯದಲ್ಲಿ ಅವರ ಹೆಸರು ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡಲು ಆರಂಭವಾಯ್ತು. ಹಲವು ವರ್ಷಗಳ ಬಳಿಕ ಮಾಧ್ಯಮಗಳ ಮುಂದೆ ಬಂದಿರುವ ಪೂನಂ ಕೌರ್, ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದು, ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ನಟನೊಬ್ಬನಿಂದ ತಮ್ಮ ಜೀವನವೇ ಹಾಳಾಯ್ತು ಎಂದು ಹೇಳಿಕೊಂಡಿದ್ದಾರೆ.

‘”ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ನನ್ನನ್ನು ಬಳಸಿಕೊಳ್ಳಲು ಪ್ರಯತ್ನಿಸಿದವು. ಅದಕ್ಕಾಗಿ ಅವರು ನನಗೆ ಬೆದರಿಕೆ ಹಾಕಿದರು. ಅವರು ನನಗೆ ಹಣ ಮತ್ತು ಹುದ್ದೆಗಳನ್ನು ಸಹ ನೀಡಿದರು. ಅಂತಿಮವಾಗಿ, ನಾನು ಒಬ್ಬ ನಟನ ವಿರುದ್ಧ ಮಾತನಾಡದಿದ್ದರೆ, ಅವರು ನನ್ನ ಅಶ್ಲೀಲ ವೀಡಿಯೊಗಳು ಮತ್ತು ಫೋಟೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್

ಮುಂದುವರೆದು, ‘ನಾನು ನನ್ನ ಸ್ನೇಹಿತನನ್ನು ಮದುವೆಯಾಗಲು ಬಯಸಿದ್ದೆ. ಆದರೆ ಇದ್ದಕ್ಕಿದ್ದಂತೆ, ಪೊಸಾನಿ ಕೃಷ್ಣ ಮುರಳಿ ಅದೇ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ನನ್ನ ಬಗ್ಗೆ ಮಾತನಾಡಿದರು. ಅದರಿಂದ ನನ್ನ ಮದುವೆ ನಿಂತು ಹೋಯ್ತು. ಈ ವಿಷಯ ತಿಳಿದಾಗ ನನ್ನ ತಾಯಿಗೆ ಹೃದಯಾಘಾತವಾಯಿತು. ಪೊಸಾನಿ ಕೃಷ್ಣ ಮುರಳಿಯಿಂದಾಗಿ ನನ್ನ ವೈಯಕ್ತಿಕ ಜೀವನವೂ ಹಾಳಾಗಿತ್ತು’ ಎಂದಿರುವ ನಟಿ, ‘ರಾಜಕೀಯ ನಾಯಕರಗೆ ಹತ್ತಿರವಾಗಿರುವ ಯುವತಿಯರಿಗೆ ಏನೂ ಆಗುವುದಿಲ್ಲ, ಅವರು ಆರಾಮವಾಗಿರುತ್ತಾರೆ, ಆದರೆ ಅವರಿಂದ ದೂರವಿರುವವರ ಯುವತಿಯರ ಬಗ್ಗೆ ಕೆಟ್ಟದಾಗಿ ಮಾತನಾಡಲಾಗುತ್ತದೆ’ ಎಂದಿದ್ದಾರೆ ಪೂನಂ.

ನಟ ಹಾಗೂ ವೈಸಿಪಿ ಪಕ್ಷದ ಸದಸ್ಯರಾಗಿದ್ದ ಪೋಸಾನಿ ಕೃಷ್ಣ ಮುರಳಿ, ಪವನ್ ಕಲ್ಯಾಣ್ ವಿರುದ್ಧವಾಗಿ ಮಾಧ್ಯಮಗಳಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದೂ ಇದೆ. ಪೋಸಾನಿ, ಒಮ್ಮೆ ಸುದ್ದಿಗೋಷ್ಠಿಯಲ್ಲಿ, ಪವನ್ ಕಲ್ಯಾಣ್ ಮತ್ತು ಪೂನಂ ಕೌರ್ ನಡುವೆ ಸಂಬಂಧ ಇದೆ ಎಂದು ಹೇಳಿದ್ದರು. ಇದು ಆಗ ಭಾರಿ ವೈರಲ್ ಸುದ್ದಿಯಾಗಿತ್ತು. ಪವನ್ ಅವರಿಂದ ಆ ನಟಿ (ಪೂನಂ) ಗರ್ಭಿಣಿ ಆಗಿದ್ದಾರೆ ಎಂದು ಸಹ ಪೋಸಾನಿ ಕೃಷ್ಣ ಮುರಳಿ ಹೇಳಿದ್ದರು.

ಪೂನಂ ಕೌರ್, ರಾಹುಲ್ ಗಾಂಧಿ ಜೊತೆಗೆ ‘ಭಾರತ್ ಜೋಡೊ ಯಾತ್ರಾ’ನಲ್ಲಿಯೂ ಭಾಗಿ ಆಗಿದ್ದರು. ಆಗ ಪೂನಂ ಕೌರ್ ಮತ್ತು ರಾಹುಲ್ ಗಾಂಧಿ ಬಗ್ಗೆಯೂ ಕೆಲ ಸುದ್ದಿಗಳನ್ನು ಹರಿಬಿಡಲಾಗಿತ್ತು. ಬಳಿಕ ಸ್ವತಃ ಪೂನಂ ಅವರೇ ಹೇಳಿಕೆ ಬಿಡುಗಡೆ ಮಾಡಿ ಆ ಬಗ್ಗೆ ಸ್ಪಷ್ಟನೆ ನೀಡಬೇಕಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:42 am, Tue, 6 January 26

Source link

Magh Mela at Prayagraj: ಪ್ರಯಾಗ್‌ರಾಜ್​ಗೆ ಮಾಘ ಮೇಳಕ್ಕೆ ಹೋಗುತ್ತಿದ್ದೀರಾ? ಹಾಗಿದ್ರೆ ಈ ಸ್ಥಳ ಮಿಸ್​ ಮಾಡ್ಲೇ ಬೇಡಿ – Kannada News | Prayagraj Magh Mela 2026: Holy Dip at Triveni Sangam and Travel Tips

ಪ್ರಯಾಗ್‌ರಾಜ್‌ನಲ್ಲಿ 2026ರ ಮಾಘ ಮೇಳದ ಸಡಗರ ಆರಂಭವಾಗಿದೆ. ತಮ್ಮ ಕೋಟ್ಯಂತರ ಭಕ್ತರು ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಕುಂಭಮೇಳ, ಅರ್ಧ ಕುಂಭಮೇಳ ಮತ್ತು ವಾರ್ಷಿಕ ಮಾಘ ಮೇಳದ ಸಮಯದಲ್ಲಿ, ಈ ಸಂಗಮವು ಆಧ್ಯಾತ್ಮಿಕ ಸಾಗರವಾಗಿ ಬದಲಾಗುತ್ತದೆ. ಆದ್ದರಿಂದ ಮಾಘ ಮೇಳ ಎಂದರೇನು? ಅದರ ಮಹತ್ವ ಮತ್ತು ಪ್ರಯಾಗ್ರಾಜ್‌ನಲ್ಲಿ ನೋಡಲು ಯೋಗ್ಯವಾದ ಇತರ ಐತಿಹಾಸಿಕ ಸ್ಥಳಗಳ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮಾಘ ಮೇಳ ಎಂದರೇನು? ಅದರ ಮಹತ್ವವೇನು?

ಮಾಘ ಮೇಳವು ಕೇವಲ ಸ್ನಾನದ ಕಾರ್ಯಕ್ರಮವಲ್ಲ, ಇದು ಒಂದು ತಿಂಗಳ ಅವಧಿಯ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿ ವರ್ಷ ಮಾಘ ಮೇಳವನ್ನು ಜನವರಿ-ಫೆಬ್ರವರಿಯಲ್ಲಿ ನಡೆಸಲಾಗುತ್ತದೆ, ಇದನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಬಹಳ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ. ಪುರಾಣಗಳ ಪ್ರಕಾರ, ತ್ರಿವೇಣಿ ಸಂಗಮದಲ್ಲಿ ಮಾಘ ನದಿಯಲ್ಲಿ ಸ್ನಾನ ಮಾಡುವುದರಿಂದ ಪೂರ್ವ ಜನ್ಮಗಳ ಪಾಪಗಳಿಂದ ಮುಕ್ತಿ ಮತ್ತು ಮೋಕ್ಷವನ್ನು ಪಡೆಯಲು ಸಹಾಯಕ ಎಂದು ನಂಬಲಾಗಿದೆ. ಲಕ್ಷಾಂತರ ಭಕ್ತರು ಇಲ್ಲಿ ಒಂದು ತಿಂಗಳ ಮುಂಚೆಯೇ ಬಂದು ಕಲ್ಪವಾಸವನ್ನು ಮಾಡುತ್ತಾರೆ. ಅವರು ಇಡೀ ತಿಂಗಳು ಸಂಗಮದ ಬಳಿ ಇರುವ ಮೂಲಕ ಶಿಸ್ತುಬದ್ಧ, ಆಧ್ಯಾತ್ಮಿಕ ಜೀವನವನ್ನು ನಡೆಸುತ್ತಾರೆ.

ಮಾಘ ಮೇಳ 2026:

ಮಾಘ ಮೇಳವನ್ನು ಜನವರಿ-ಫೆಬ್ರವರಿಯಲ್ಲಿ ಪ್ರಯಾಗರಾಜ್​​ನ ಗಂಗಾ, ಯಮುನಾ, ಸರಸ್ವತಿಯ ಸಂಗಮದಲ್ಲಿ ನಡೆಸಲಾಗುತ್ತದೆ. ಪ್ರತಿ ವರ್ಷ ನದಿಯ ದಡದಲ್ಲಿ ತಾತ್ಕಾಲಿಕ ನಗರವನ್ನು ನಿರ್ಮಿಸಲಾಗುತ್ತದೆ. ಇದನ್ನು ವಲಯಗಳಾಗಿ ವಿಂಗಡಿಸಲಾಗುತ್ತದೆ. ಈ ನಗರಗಳು ತಾತ್ಕಾಲಿಕವಾಗಿದ್ದರೂ, ಅವು ಆಂತರಿಕ ರಸ್ತೆ, ದೀಪಗಳು, ನೈರ್ಮಲ್ಯ, ಕುಡಿಯುವ ನೀರು, ಪೊಲೀಸ್ ಠಾಣೆಗಳು, ವೈದ್ಯಕೀಯ ಶಿಬಿರಗಳು ಮತ್ತು ಪರಿಹಾರ ಕೇಂದ್ರಗಳಿಂದ ಸುಸಜ್ಜಿತವಾಗಿವೆ.

ಪ್ರಯಾಗ್‌ರಾಜ್ ತಲುಪುವುದು ಹೇಗೆ?

ತ್ರಿವೇಣಿ ಸಂಗಮವು ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ವಾರಣಾಸಿ, ಲಕ್ನೋ, ಕಾನ್ಪುರ ಮತ್ತು ದೆಹಲಿಯಿಂದ ರಸ್ತೆ ಅಥವಾ ರೈಲು ಮೂಲಕವೂ ಸುಲಭವಾಗಿ ತಲುಪಬಹುದು. ಕೊನೆಯ ಕ್ಷಣದ ದಟ್ಟಣೆಯನ್ನು ತಪ್ಪಿಸಲು ಮುಂಚಿತವಾಗಿ ಆಗಮಿಸಿ.

ಮಾಘ ಮೇಳದ ಪ್ರಮುಖ ದಿನಾಂಕಗಳು:

  • ಜನವರಿ 3, ಪೌಷ ಪೂರ್ಣಿಮೆ ಕಲ್ಪವಾಸ ಆರಂಭವಾಗುತ್ತದೆ, ಜನಸಂದಣಿ ಕಡಿಮೆ, ಮೊದಲ ಬಾರಿಗೆ ಭೇಟಿ ನೀಡುವವರಿಗೆ ಸೂಕ್ತವಾಗಿದೆ.
  • ಜನವರಿ 18 ಮೌನಿ ಅಮಾವಾಸ್ಯೆ ಅತ್ಯಂತ ಶುಭ ದಿನ, ಹೆಚ್ಚಿನ ಭಕ್ತರು ಬರುತ್ತಾರೆ.
  • ಜನವರಿ 23 ವಸಂತ ಪಂಚಮಿ ಪಂಚಮಿಯಂದು ಸ್ನಾನ ಮಾಡುವುದು ತುಂಬಾ ಶುಭ.
  • ಫೆಬ್ರವರಿ 1 ಮಾಘ ಪೂರ್ಣಿಮೆ ಕೊನೆಯ ಮಹಾ ಸ್ನಾನ, ಈ ದಿನ ಹೆಚ್ಚಿನ ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾರೆ.

ಪವಿತ್ರ ಸ್ನಾನದ ನಂತರ ಏನು ಮಾಡಬೇಕು?

ಮಾಘ ಮೇಳ ದಿನವಿಡೀ ನಡೆಯುತ್ತಿರುವುದರಿಂದ ಪವಿತ್ರ ಸ್ನಾನದ ನಂತರ, ನೀವು ಅಖಾಡ ಶಿಬಿರಗಳಿಗೆ ಭೇಟಿ ನೀಡಬಹುದು, ಅಲ್ಲಿ ಸಂತರು ದೈನಂದಿನ ಆಚರಣೆಗಳನ್ನು ಮಾಡುತ್ತಾರೆ. ವೇದ, ಪುರಾಣ ಮತ್ತು ಭಗವದ್ಗೀತೆಯನ್ನು ಆಧರಿಸಿದ ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸಿ. ಶಿಬಿರಗಳಲ್ಲಿ ನಡೆಯುವ ನಿರಂತರ ಭಜನೆಗಳು ಮತ್ತು ಕೀರ್ತನೆಗಳಲ್ಲಿ ಭಾಗವಹಿಸಿ. ಸಂಜೆ, ಗಂಗಾ ನದಿಯ ಆರತಿಯ ಸೌಂದರ್ಯವನ್ನು ನೀವು ಆನಂದಿಸಬಹುದು. ಯಾತ್ರಿಕರು ಉಚಿತ ಊಟದ ಸಭಾಂಗಣಗಳು ಮತ್ತು ದತ್ತಿ ಶಿಬಿರಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಪ್ರಯಾಗ್‌ರಾಜ್‌ನಲ್ಲಿ ಭೇಟಿ ನೀಡಬಹುದಾದ ಇತರ ಸ್ಥಳಗಳು:

  • ಅಲಹಾಬಾದ್ ಕೋಟೆ: 1583 ರಲ್ಲಿ ಚಕ್ರವರ್ತಿ ಅಕ್ಬರ್ ನಿರ್ಮಿಸಿದ ಈ ಕೋಟೆಯು ಯಮುನಾ ಮತ್ತು ಗಂಗಾ ನದಿಗಳ ಸಂಗಮದ ದಡದಲ್ಲಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಐತಿಹಾಸಿಕ ಸ್ಮಾರಕವಾಗಿದೆ.
  • ಆನಂದ ಭವನ: ನೆಹರು ಕುಟುಂಬಕ್ಕೆ ಸೇರಿದ ಈ ಐತಿಹಾಸಿಕ ಕಟ್ಟಡವನ್ನು ಈಗ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಇತಿಹಾಸ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ.
  • ಖುಸ್ರೋ ಬಾಗ್: ಮೊಘಲ್ ವಾಸ್ತುಶಿಲ್ಪದ ಸಂಕೇತವಾಗಿರುವ ಸುಂದರವಾದ ಉದ್ಯಾನ. ಇದು ಮರಳುಗಲ್ಲಿನಿಂದ ನಿರ್ಮಿಸಲಾದ ನಾಲ್ಕು ಭವ್ಯವಾದ ಸಮಾಧಿಗಳನ್ನು ಹೊಂದಿದೆ.
  • ಶ್ರೀ ಲಲಿತಾ ದೇವಿ ದೇವಾಲಯ: ಲಲಿತಾ ದೇವಿಗೆ ಸಮರ್ಪಿತವಾದ ಈ ದೇವಾಲಯವು ಭಕ್ತರಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.

ಮಾಘ ಮೇಳಕ್ಕೆ ಹೋಗುವ ಮುನ್ನ ಸಿದ್ಧತೆಗಳು?

ಪ್ರಯಾಗ್‌ರಾಜ್‌ನಲ್ಲಿ ಜನವರಿ ತಿಂಗಳು ತಂಪಾಗಿರುತ್ತದೆ ಮತ್ತು ಶುಷ್ಕವಾಗಿರುತ್ತದೆ. ಆದ್ದರಿಂದ ಬೆಚ್ಚಗಿನ ಬಟ್ಟೆಗಳನ್ನೇ ತೆಗೆದುಕೊಂಡು ಹೋಗಿ. ಆರಾಮದಾಯಕವಾದ ವಾಕಿಂಗ್ ಶೂಗಳು, ಹಗುರವಾದ ಲಗೇಜ್, ಐಡಿ ಪ್ರೂಫ್ ತುರ್ತು ಸಂಪರ್ಕ ಸ್ಲಿಪ್ ಮತ್ತು ಔಷಧಗಳು, ಮರುಬಳಕೆ ಮಾಡಬಹುದಾದ ನೀರಿನ ಬಾಟಲ್ ನಿಮ್ಮ ಜೊತೆಗಿರಲಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:36 am, Tue, 6 January 26

Source link

Vastu for Windows: ವಾಸ್ತು ಶಾಸ್ತ್ರದ ಪ್ರಕಾರ ಒಂದು ಮನೆಯಲ್ಲಿ ಎಷ್ಟು ಕಿಟಕಿಗಳಿರಬೇಕು? ತಜ್ಞರ ಸಲಹೆ ಇಲ್ಲಿದೆ – Kannada News | Vastu for Windows: Avoid These Mistakes for Home Positivity and Health

ಮನೆ ಎಂದರೆ ಕೇವಲ ನಾಲ್ಕು ಗೋಡೆಗಳ ನಡುವಿನ ಸ್ಥಳವಲ್ಲ. ಅದು ನಮಗೆ ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುವ ದೇವಾಲಯ. ಮನೆಯ ಅಲಂಕಾರದಲ್ಲಿ ಬಾಗಿಲುಗಳು ಎಷ್ಟು ಮುಖ್ಯವೋ, ಕಿಟಕಿಗಳು ಅಷ್ಟೇ ಮುಖ್ಯ. ಕಿಟಕಿಗಳು ಗಾಳಿ ಮತ್ತು ಬೆಳಕಿಗೆ ಮಾತ್ರವಲ್ಲ, ಮನೆಯ ವಾಸ್ತುವನ್ನು ನಿರ್ಧರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಈಗ ವಾಸ್ತು ಶಾಸ್ತ್ರದ ಪ್ರಕಾರ ಕಿಟಕಿಗಳ ವಿಷಯದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕಿಟಕಿಗಳ ಸಂಖ್ಯೆ ಎಷ್ಟಿರಬೇಕು?

ಮನೆ ಕಟ್ಟುವಾಗ ಅನೇಕರು ಕಿಟಕಿಗಳ ಸಂಖ್ಯೆಯ ಬಗ್ಗೆ ಗಮನ ಹರಿಸುವುದಿಲ್ಲ. ಆದರೆ ವಾಸ್ತು ಪ್ರಕಾರ, ಮನೆಯಲ್ಲಿ ಕಿಟಕಿಗಳ ಸಂಖ್ಯೆ ಯಾವಾಗಲೂ ಸಮ ಸಂಖ್ಯೆಯಾಗಿರಬೇಕು. 2, 4, 6, 8, 10 ನಂತಹ ಸಮ ಸಂಖ್ಯೆಯ ಕಿಟಕಿಗಳನ್ನು ಹೊಂದಿರುವುದು ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. 3, 5, 7, 9 ನಂತಹ ಬೆಸ ಸಂಖ್ಯೆಯ ಕಿಟಕಿಗಳಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಬೇಗನೆ ಸಂಗ್ರಹವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಯಾವ ದಿಕ್ಕು ಉತ್ತಮ?

ಕಿಟಕಿಗಳ ದಿಕ್ಕು ನಿಮ್ಮ ಮನೆಯ ಸದಸ್ಯರ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕುಗಳಲ್ಲಿ ಕಿಟಕಿಗಳನ್ನು ಇಡುವುದರಿಂದ ಬೆಳಿಗ್ಗೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯು ಮನೆಗೆ ಪ್ರವೇಶಿಸುತ್ತದೆ. ಇದು ಕುಟುಂಬ ಸದಸ್ಯರ ಆರೋಗ್ಯವನ್ನು ರಕ್ಷಿಸುವುದಲ್ಲದೆ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಸೃಷ್ಟಿಸುತ್ತದೆ. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಕಿಟಕಿಗಳಿದ್ದರೆ, ಅವುಗಳನ್ನು ಗಾತ್ರದಲ್ಲಿ ಚಿಕ್ಕದಾಗಿ ಇಡುವುದು ಉತ್ತಮ.

ಕಿಟಕಿಗಳ ಜೋಡಣೆಯಲ್ಲಿ ಇನ್ನೂ ಕೆಲವು ಪ್ರಮುಖ ನಿಯಮಗಳು:

  • ಸಮಾನ ಎತ್ತರ: ಮನೆಯಲ್ಲಿರುವ ಎಲ್ಲಾ ಕಿಟಕಿಗಳು ಸರಿಸುಮಾರು ಒಂದೇ ಎತ್ತರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಒಂದು ತುಂಬಾ ದೊಡ್ಡದಾಗಿರಬಾರದು ಮತ್ತು ಇನ್ನೊಂದು ತುಂಬಾ ಚಿಕ್ಕದಾಗಿರಬಾರದು.
  • ಸ್ವಚ್ಛತೆ: ಕಿಟಕಿಗಳನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಧೂಳಿನಿಂದ ಮುಕ್ತವಾಗಿಡಬೇಕು. ಕಿಟಕಿಗಳು ಮುರಿದಿದ್ದರೆ ಅಥವಾ ಶಬ್ದ ಮಾಡುತ್ತಿದ್ದರೆ, ಅವುಗಳನ್ನು ತಕ್ಷಣವೇ ದುರಸ್ತಿ ಮಾಡಬೇಕು.
  • ಸಮಯ: ಹಗಲಿನಲ್ಲಿ ಸ್ವಲ್ಪ ಸಮಯದವರೆಗೆ ಕಿಟಕಿಗಳನ್ನು ತೆರೆದಿಡಿ. ಇದು ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಆದರೆ, ಸಂಜೆ ಕತ್ತಲಾದಾಗ ಕಿಟಕಿಗಳನ್ನು ಮುಚ್ಚುವುದು ಉತ್ತಮ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆಗಿ ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ! ಅಭಿಮಾನಿಗಳಿಂದ 6000 ಜನರಿಗೆ ನಾಟಿಕೋಳಿ ಬಾಡೂಟ – Kannada News | CM Siddaramaiah breaks Devaraj Aras Record: Fans Host Grand Naati Koli Feast for Thousands

ನೆಲಮಂಗಲ, ಜನವರಿ 06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೊದಲ ಅವಧಿಯಲ್ಲಿ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ನಂತರ 1978ರ ಫೆಬ್ರುವರಿ 28ರಿಂದ 1980ರ ಜುಲೈ 7ರವರೆಗೆ 2ನೇ ಅವಧಿಯಲ್ಲಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.

2013ರಲ್ಲಿ ಮೊದಲ ಅವಧಿಯಲ್ಲಿ ಮೇ 13ರಿಂದ 2018ರ ಮೇ 17ರವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ, 2023ರ ಮೇ 20ರಿಂದ 2ನೇ ಅವಧಿಯಲ್ಲಿ ಅಧಿಕಾರದಲ್ಲಿದ್ದು, ಒಟ್ಟು 7 ವರ್ಷ 7 ತಿಂಗಳು 20 ದಿನಗಳ ಸೇವೆ ಪೂರೈಸಿ ದೇವರಾಜ ಅರಸು ದಾಖಲೆಯನ್ನು ಮುರಿದಿದ್ದಾರೆ. ಇದೇ ಸಂಭ್ರಮದಲ್ಲಿ ನೆಲಮಂಗಲದ ಭಕ್ತನಪಾಳ್ಯದಲ್ಲಿ ಅಹಿಂದ ಯುವ ಸಂಘಟನೆ ವತಿಯಿಂದ ನಾಟಿಕೋಳಿ ಬಾಡೂಟ ಆಯೋಜಿಸಲಾಗಿದೆ. 2000 ಕೆಜಿ ನಾಟಿಕೋಳಿ ಬಳಸಿ 6,000ಕ್ಕೂ ಹೆಚ್ಚು ಜನರಿಗೆ ಮುದ್ದೆ, ಸಾರು, ಅನ್ನ, ರಸಂ ಭೋಜನ ಸಿದ್ಧಪಡಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಗ್ ಬಾಸ್​​ನಲ್ಲಿ ಇಬ್ಬರಿಗೆ ರೆಡ್ ಕಾರ್ಡ್; ಮೂರು ತಿಂಗಳ ಸಂಬಳ ಕಟ್, ಫಿನಾಲೆಗೂ ಇಲ್ಲ ಅವಕಾಶ – Kannada News | VJ Parvathy And Kamarudheen Gets Red Card In Bigg Boss these Are the rules for Red Card

ರೆಡ್ ಕಾರ್ಡ್ ತೋರಿಸಿದ ಬಳಿಕ ಅದನ್ನು ಪಡೆದ ಸ್ಪರ್ಧಿಗಳು ತಕ್ಷಣ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನದ ಸಂಬಳ ಅವರಿಗೆ ಸಿಗೋದಿಲ್ಲ. ಇನ್ನು, ಬಿಗ್ ಬಾಸ್ ಫಿನಾಲೆಗೆ ಬರುವಂತೆ ಇಲ್ಲ. ಇದರ ಜೊತೆಗೆ ಅವರು ಮುಂದೆ ಯಾವ ಸೀಸನ್​ಗೂ ಬರಲು ಅರ್ಹರಲ್ಲ ಎನ್ನಲಾಗಿದೆ.

Source link

ಕೇಂದ್ರ ಸಚಿವ ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು: ಕಾರಣ ಏನು? – Kannada News | MLA Ravikumar Ganiga Challenges HD Kumaraswamy on Mandya Industrial Development

ಮಂಡ್ಯ, ಜನವರಿ 06: ಜಿಲ್ಲೆಗೆ ಕೈಗಾರಿಕೆ ತರುವ ವಿಚಾರವಾಗಿ ಕೇಂದ್ರ ಸಚಿವ ಹೆಚ್​​. ಡಿ. ಕುಮಾರಸ್ವಾಮಿಗೆ ಶಾಸಕ ಗಣಿಗ ರವಿಕುಮಾರ್ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ 100 ಎಕರೆ ಜಾಗ ಇದೆ, ನೀವು ಇಂಡಸ್ಟ್ರಿ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ರಾಜ್ಯ ಸರ್ಕಾರ ಇಂಡಸ್ಟ್ರಿ ತರಲು ಸಹಕಾರ ಕೊಡ್ತಿಲ್ಲ, ಮಂಡ್ಯದಲ್ಲಿ ಇಂಡಸ್ಟ್ರಿ ಸ್ಥಾಪನೆಗೆ ಜಾಗ ಇಲ್ಲ ಎಂದು ಹೆಚ್​ಡಿಕೆ ಹೇಳಿದ್ದರು. ಹೀಗಾಗಿ ಡಿಸಿ ಜೊತೆಗೆ ತೆರಳಿ ಇಂಡಸ್ಟ್ರಿ ಜಾಗ ಗುರುತಿಸಿದ ಗಣಿಗ ರವಿಕುಮಾರ್, ಇಂಡಸ್ಟ್ರಿ ಸ್ಥಾಪನೆಗೆ ಸೂಕ್ತ ಸ್ಥಳ, ಎಲ್ಲದಕ್ಕೂ ಸಹಕಾರ‌ ಕೊಡುತ್ತೇವೆ. ಮಂಡ್ಯಕ್ಕೆ ಕೈಗಾರಿಕೆ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ಆ ಮೂಲಕ ಜೆಡಿಎಸ್​​ ಮತ್ತು ಕಾಂಗ್ರೆಸ್​ ನಾಯಕರ ನಡುವಿನ ಕದನ ಮತ್ತೊಂದು ಹಂತಕ್ಕೆ ತಲುಪಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’: ಹಿಂದೆಂದೂ ಕಾಣಿಸದ ಅವತಾರದಲ್ಲಿ ರುಕ್ಮಿಣಿ ವಸಂತ್ – Kannada News | Toxic movie team introduced Rukmini Vasanth’s character

ಯಶ್ (Yash) ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿಮಾ ಬಿಡುಡಗೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಿಧಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರ ಭಾಗವಾಗಿ ಸಿನಿಮಾದಲ್ಲಿ ನಟಿಸಿರುವ ನಟಿಯರ ಪೋಸ್ಟರ್​ಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರುಗಳ ಪೋಸ್ಟರ್​​ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಇದೀಗ ನಟಿ ರುಕ್ಮಿಣಿ ವಸಂತ್ ಅವರ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

ಇಂದು (ಜನವರಿ 06) ರುಕ್ಮಿಣಿ ವಸಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಅನ್ನು ನಟ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರುಕ್ಮಿಣಿ ಎಂದಿನಂತೆ ಅದ್ಭುತವಾಗಿ ಕಾಣುತ್ತಿದ್ದಾರೆ. ಪೋಸ್ಟರ್​​ನಲ್ಲಿ ತುಸು ಗ್ಲಾಮರಸ್ ಧಿರಿಸು ತೊಟ್ಟಿರುವ ರುಕ್ಮಿಣಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ರುಕ್ಮಿಣಿ ಅವರದ್ದು ನೆಗೆಟಿವ್ ಶೇಡ್ ಇರಬಹುದಾದ ಪಾತ್ರವೇ ಎಂಬ ಅನುಮಾನವೂ ಸಹ ಮೂಡುತ್ತಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರದ ಹೆಸರು ಮೆಲಿಸಾ ಎಂದಾಗಿದೆ. ಯಾವುದೋ ಪಾರ್ಟಿಯೊಂದರ ಮಧ್ಯೆ ಬಲು ಗಂಭೀರವಾಗಿ ನಡೆದು ಬರುತ್ತಿದ್ದಾರೆ ರುಕ್ಮಿಣಿ ವಸಂತ್. ತಾರಾ ಸುತಾರಿಯಾ ಅವರ ಪಾತ್ರ ಕೈಯಲ್ಲಿ ಬಂದೂಕು ಹಿಡಿದಿದ್ದರೆ ರುಕ್ಮಿಣಿ ವಸಂತ್ ಕೈಯಲ್ಲಿ ಪರ್ಸ್ ಒಂದನ್ನು ಹಿಡಿದಿದ್ದಾರೆ. ರುಕ್ಮಿಣಿ ಅವರ ಪಾತ್ರ ರಫ್ ಆಂಡ್ ಟಫ್ ಅಲ್ಲದೇ ಇದ್ದರು ಬಲು ಗಂಭೀರವಾದ ಪಾತ್ರ ಎಂದು ಪೋಸ್ಟರ್​​ನಿಂದ ಊಹಿಸಬಹುದಾಗಿದೆ.

ಇದನ್ನೂ ಓದಿ:ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡಿದೆ. ಯಶ್ ಅವರು ತಮ್ಮ ಮಾನ್​​ಸ್ಟರ್ ಮೈಂಡ್​ ನಿರ್ಮಾಣ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕೆಲ ವಿದೇಶಿ ತಂತ್ರಜ್ಞರು ಸಹ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾರ್ಚ್ 19 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 2,750 ರೂ ಏರಿಕೆ – Kannada News | Gold Price Today on 6th January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 6: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಂಗಳವಾರೂ ಭರ್ಜರಿ ಏರಿಕೆ ಕಂಡಿವೆ. ನಿನ್ನೆ ಗ್ರಾಮ್​ಗೆ 145 ರೂ ಏರಿದ್ದ ಚಿನ್ನದ ಬೆಲೆ (Gold Rate) ಇವತ್ತು 130 ರೂ ಹೆಚ್ಚಿದೆ. ಎರಡು ದಿನದಲ್ಲಿ 275 ರೂ ಬೆಲೆ ಏರಿಕೆ ಆಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಭರ್ಜರಿ ಹೆಚ್ಚಳ ಕಂಡಿದೆ. ನಿನ್ನೆ ಆರು ರೂ ಹೆಚ್ಚಿದ್ದ ಅದರ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,820 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,100 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 6ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,412 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,882 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,725 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 253 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,725 ರೂ
  • ಚೆನ್ನೈ: 12,830 ರೂ
  • ಮುಂಬೈ: 12,725 ರೂ
  • ದೆಹಲಿ: 12,740 ರೂ
  • ಕೋಲ್ಕತಾ: 12,725 ರೂ
  • ಕೇರಳ: 12,725 ರೂ
  • ಅಹ್ಮದಾಬಾದ್: 12,730 ರೂ
  • ಜೈಪುರ್: 12,740 ರೂ
  • ಲಕ್ನೋ: 12,740 ರೂ
  • ಭುವನೇಶ್ವರ್: 12,725 ರೂ

ಇದನ್ನೂ ಓದಿ: ಇಪಿಎಫ್ ಅಕೌಂಟ್​ನಿಂದ ಎಲ್​​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 565 ರಿಂಗಿಟ್ (12,557 ರುಪಾಯಿ)
  • ದುಬೈ: 496.50 ಡಿರಾಮ್ (12,184 ರುಪಾಯಿ)
  • ಅಮೆರಿಕ: 138 ಡಾಲರ್ (12,439 ರುಪಾಯಿ)
  • ಸಿಂಗಾಪುರ: 176.80 ಸಿಂಗಾಪುರ್ ಡಾಲರ್ (12,445 ರುಪಾಯಿ)
  • ಕತಾರ್: 495 ಕತಾರಿ ರಿಯಾಲ್ (12,240 ರೂ)
  • ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,088 ರುಪಾಯಿ)
  • ಓಮನ್: 52.65 ಒಮಾನಿ ರಿಯಾಲ್ (12,326 ರುಪಾಯಿ)
  • ಕುವೇತ್: 40.50 ಕುವೇತಿ ದಿನಾರ್ (11,886 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 253 ರೂ
  • ಚೆನ್ನೈ: 271 ರೂ
  • ಮುಂಬೈ: 253 ರೂ
  • ದೆಹಲಿ: 253 ರೂ
  • ಕೋಲ್ಕತಾ: 253 ರೂ
  • ಕೇರಳ: 271 ರೂ
  • ಅಹ್ಮದಾಬಾದ್: 253 ರೂ
  • ಜೈಪುರ್: 253 ರೂ
  • ಲಕ್ನೋ: 253 ರೂ
  • ಭುವನೇಶ್ವರ್: 271 ರೂ
  • ಪುಣೆ: 253

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಿನಕ್ಕೆ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ? – Kannada News | What are the benefits of jumping rope for 15 minutes every day?

ಇಂದಿನ ಈ ವೇಗದ ಯುಗದಲ್ಲಿ ನಮ್ಮ ಜೀವನಶೈಲಿ (Lifestyle) ತುಂಬಾ ಹದಗೆಟ್ಟಿದೆ ಹೌದು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ, ಸಾಕಷ್ಟು ನಿದ್ರೆ ಪಡೆಯುವುದಿಲ್ಲ, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದಿಲ್ಲ, ಇನ್ನೂ ಟೈಮ್‌ ಸಾಕಾಗುವುದಿಲ್ಲವೆಂದು ದಿನನಿತ್ಯ ವ್ಯಾಯಾಮವನ್ನೇ ಮಾಡುವುದಿಲ್ಲ. ಈ ಎಲ್ಲಾ ಅಂಶಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ದೈಹಿಕ ಚಟುವಟಿಕೆಯನ್ನು ಮಾಡುವುದು ಅತ್ಯಗತ್ಯ. ಇದಕ್ಕಾಗಿ ಸಾಕಷ್ಟು ಸಮಯ ಇಲ್ಲ ಎಂದಾದ್ರೆ ನೀವು ಪ್ರತಿನಿತ್ಯ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಆಡಬಹುದು. ಸ್ಕಿಪ್ಪಿಂಗ್‌ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅನ್ನೋದನ್ನು ನೋಡೋಣ ಬನ್ನಿ.

ಪ್ರತಿದಿನ 15 ನಿಮಿಷಗಳ ಸ್ಕಿಪ್ಪಿಂಗ್‌ ಮಾಡುವುದರಿಂದಾಗುವ ಪ್ರಯೋಜನಗಳು:

ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ನೀವು ತೂಕ ಹೆಚ್ಚಾಗುವ ಬಗ್ಗೆ ಚಿಂತಿತರಾಗಿದ್ದರೆ ಮತ್ತು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿ. ಇದು ಕಾರ್ಡಿಯೋ ವ್ಯಾಯಾಮವಾಗಿದ್ದು, ಇದು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನೀವು ವೇಗವಾಗಿ ತೂಕ ಇಳಿಸಿಕೊಳ್ಳಬಹುದು.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಇದು ಹೃದಯವನ್ನು ಬಲಪಡಿಸುವ ಮತ್ತು ರಕ್ತ ಪರಿಚಲನೆ ಸುಧಾರಿಸುವ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದ್ದು, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ: ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡುವುದರಿಂದ ಕಾಲುಗಳು, ತೊಡೆಗಳು, ತೋಳುಗಳು ಮತ್ತು ಭುಜಗಳ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ದುರ್ಬಲ ಸ್ನಾಯುಗಳನ್ನು ಹೊಂದಿರುವ ಜನರಿಗೆ ಸ್ಕಿಪ್ಪಿಂಗ್‌ ತುಂಬಾನೇ ಪ್ರಯೋಜನಕಾರಿ.

ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ: ನೀವು ಸಣ್ಣ ವಿಷಯಗಳಿಗೂ ಒತ್ತಡಕ್ಕೊಳಗಾಗುತ್ತಿದ್ದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಿ. ಈ ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಅಹಾರಗಳನ್ನು ಸೇವನೆ ಮಾಡಿ

ಶಕ್ತಿ ಮತ್ತು ಸಹಿಷ್ಣುತೆ ಹೆಚ್ಚಳ: ಈ ವ್ಯಾಯಾಮವು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ, ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.

ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ: ಸ್ಕಿಪ್ಪಿಂಗ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಟೈಪ್‌ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.

ಉತ್ತಮ ನಿದ್ರೆ ಪಡೆಯಲು ಸಹಕಾರಿ: ನಿದ್ರಾಹೀನತೆ ಅಥವಾ ಕಳಪೆ ನಿದ್ರೆಯಿಂದ ಬಳಲುತ್ತಿರುವವರು ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡಬೇಕು. ಇದು ದೇಹವನ್ನು ದಣಿಸಿ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ, ರಾತ್ರಿಯಲ್ಲಿ ಆಳವಾದ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version